Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಭಾರತಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಐಆರ್ ಪೋರ್ಟ್ಫೋಲಿಯೊವನ್ನು ಮತ್ತಷ್ಟು ಸರಳ, ಹೆಚ್ಚು ಅಗ್ಗ ಮತ್ತು ಸಂಪೂರ್ಣವಾಗಿ ತಡೆ-ರಹಿತವನ್ನಾಗಿಸಲು ಹೊಸ ಪ್ಲಾನ್ಸ್ ಪ್ರಕಟಿಸಿದೆ. ಸಂಸ್ಥೆಯು 189 ದೇಶಗಳಾದ್ಯಂತ ಅನಿಯಮಿತ ಡೇಟಾ ಒದಗಿಸುವ ಭಾರತದ ಮೊಟ್ಟಮೊದಲ ಅನಿಯಮಿತ ಐಆರ್ ಪ್ಲಾನ್ಸ್ ಅನ್ನು ಅನಾವರಣಗೊಳಿಸಿದೆ. ಹೆಚ್ಚುವರಿಯಾಗಿ, ದೀರ್ಘಕಾಲದವರೆಗೆ ಅನಿವಾಸಿ ಸಮುದಾಯದವರಿಗಾಗಿ, ಏರ್ಟೆಲ್ ಒಂದು-ವರ್ಷದ ವ್ಯಾಲಿಡಿಟಿಯೊಂದಿಗೆ ರೂ. 4000 ಗಳಿಗಾಗಿ ವಿಶಿಷ್ಟ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಪ್ಲಾನ್ ಮೂಲಕ ಗ್ರಾಹಕರು ವಿದೇಶದಲ್ಲಿದ್ದಾಗ 5ಜಿಬಿ ಡೇಟಾ ಮತ್ತು 100 ವಾಯ್ಸ್ ನಿಮಿಷಗಳನ್ನು ಪಡೆಯುವುದರ ಜೊತೆಗೆ ಅವರು ಭಾರತದಲ್ಲಿದ್ದಾಗಲೂ ಸಹ ಅದೇ ಪ್ಲಾನ್ ಬಳಸಬಹುದು ಮತ್ತು ಪ್ರತಿದಿನ 1.5 ಜಿಬಿ ಡೇಟಾ ಮತ್ತು ಅನಿಯಮಿತ ಕರೆ ಲಾಭಗಳನ್ನು ಸಹ ಪಡೆಯಬಹುದಾಗಿದೆ. ಈ ಪ್ಲಾನ್ ಮೂಲಕ ಗ್ರಾಹಕರು 189 ದೇಶಗಳಾದ್ಯಂತ ಎಲ್ಲಿಯಾದರೂ ತಡೆ-ರಹಿತ ಸಂಪರ್ಕ ಅನುಭವವನ್ನು ಪಡೆಯಬಹುದು ಮತ್ತು ಭಾರತದಲ್ಲಿದ್ದಾಗ ಸಹ ಯಾವುದೇ ಪ್ರತ್ಯೇಕ ರಿಚಾರ್ಜ್ ಇಲ್ಲದೆ ಅದೇ ಸಂಖ್ಯೆಯನ್ನು ಬಳಸಬಹುದು. ಭಾರತಿ ಏರ್ಟೆಲ್ ಅವರ ಕನೆಕ್ಟೆಡ್ ಹೋಮ್ಸ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಳೆ ನಾಡಿದ್ದು ರಾಜ್ಯದ ಪ್ರಗತಿ ಪರಿಶೀಲನೆ ಸಭೆ ನಿಗದಿ ಪಡಿಸಲಾಗಿತ್ತು. ಈ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದ ಪ್ರಗತಿ ಪರಿಶೀಲನೆ ಕುರಿತಂತೆ ಸಿಎಂ ಸಿದ್ಧರಾಮಯ್ಯ ಅಧ್ಯಕ್ಷತೆ ಹಾಗೂ ಉಪ ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ದಿನಾಂಕ 21-05-2025 ಮತ್ತು 22-05-2025ರಂದು ಆಯೋಜಿಸಲಾಗಿತ್ತು ಎಂದಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ಈ ಸಭೆಯು ದಿನಾಂಕ 30-05-2025ರ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಹಾಗೂ ದಿನಾಂಕ 31-05-2025ರಂದು ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ ಎಂಬುದಾಗಿ ತಿಳಿಸಿದ್ದಾರೆ. ಇನ್ನೂ ಈ ಸಭೆಗೆ ಸಂಬಂಧಿಸಿದ ಕಾರ್ಯಸೂಚಿಯನ್ನು ನಂತ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಗತ್ಯ ಮಾಹಿತಿಯೊಂದಿಗೆ ಸದರಿ ಸಭೆಗೆ ಹಾಜರಾಗುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ. https://kannadanewsnow.com/kannada/a-pakistan-supported-khalistani-terrorist-module-detected-in-punjab/ https://kannadanewsnow.com/kannada/tomorrow-there-will-be-a-tiranga-yatra-in-maddiruru-man-mul-director-s-p-swamy/
ಚಂಡೀಗಢ: ಬಟಾಲಾ ಪೊಲೀಸರು ಹರ್ವಿಂದರ್ ಸಿಂಗ್ ರಿಂಡಾ ಅವರ ಸೂಚನೆಯ ಮೇರೆಗೆ, ಪಾಕಿಸ್ತಾನದ ಐಎಸ್ಐ ಬೆಂಬಲಿತ ಭಯೋತ್ಪಾದಕ ಜಾಲಗಳ ವಿರುದ್ಧ ಪ್ರಮುಖ ಪ್ರಗತಿ ಸಾಧಿಸುವ ಮೂಲಕ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಭಯೋತ್ಪಾದಕ ಮಾಡ್ಯೂಲ್ ಅನ್ನು ಪತ್ತೆ ಹಚ್ಚಿದ್ದಾರೆ. ಗುಂಡಿನ ಚಕಮಕಿಯ ನಂತರ ಪೊಲೀಸರು ಮಾಡ್ಯೂಲ್ನ ಆರು ಸದಸ್ಯರನ್ನು ಬಂಧಿಸಿದ್ದಾರೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಮಂಗಳವಾರ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. https://twitter.com/DGPPunjabPolice/status/1924674495522210214 ಬಂಧಿತರನ್ನು ಜತಿನ್ ಕುಮಾರ್ ಅಲಿಯಾಸ್ ರೋಹನ್, ಬರೀಂದರ್ ಸಿಂಗ್ ಅಲಿಯಾಸ್ ಸಜನ್, ರಾಹುಲ್ ಮಸಿಹ್, ಅಬ್ರಹಾಂ ಅಲಿಯಾಸ್ ರೋಹಿತ್, ಸೋಹಿತ್ ಮತ್ತು ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸುಹೇಲ್ ಖಾಸಿಂ ಮಿರ್ ತಿಳಿಸಿದ್ದಾರೆ. ಎಸ್ಎಸ್ಪಿ ಪ್ರಕಾರ, ಬಂಧಿತ ವ್ಯಕ್ತಿಗಳು ಗ್ರೆನೇಡ್ ಕಾರ್ಯಕರ್ತರು, ಲಾಜಿಸ್ಟಿಕ್ಸ್, ಹಣಕಾಸು ಮತ್ತು ಆಶ್ರಯ ನೀಡಿದವರು ಸೇರಿದಂತೆ ಭಯೋತ್ಪಾದಕ ಜಾಲದ ವಿವಿಧ ಉಪ-ಮಾಡ್ಯೂಲ್ಗಳ ಭಾಗವಾಗಿದ್ದರು. ಪ್ರಾಥಮಿಕ ತನಿಖೆಯಲ್ಲಿ ಈ ಮಾಡ್ಯೂಲ್ ನಿಷೇಧಿತ ಭಯೋತ್ಪಾದಕ ಸಂಘಟನೆ…
ಮಂಡ್ಯ :- ಭಯೋತ್ಪಾದಕರ ವಿರುದ್ಧ ನಡೆದ ಆಪರೇಷನ್ ಸಿಂಧೂರ್ನಲ್ಲಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸಿದ ಯೋಧರಿಗೆ ಆತ್ಮಸ್ತೈರ್ಯ ತುಂಬುವ ನಿಟ್ಟಿನಲ್ಲಿ ಮದ್ದೂರು ಪಟ್ಟಣದಲ್ಲಿ ಮೇ.21 ಬುಧವಾರ ಬೆಳಿಗ್ಗೆ 10 ಗಂಟೆಗೆ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನ್ ಮಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಟಿಯಲ್ಲಿ ಮಾಲತನಾಡಿ, ಪ್ರವಾಸಿ ಮಂದಿರದ ವೃತ್ತದಿಂದ ತಿರಂಗಾ ಯಾತ್ರೆ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ತಿರಂಗಾ ಯಾತ್ರೆ ತಲುಪಿ ಬಳಿಕ ಬಹಿರಂಗ ಸಭೆ ನಡೆಯಲಿದೆ ಎಂದು ಹೇಳಿದರು. ಅಮಾಯಕ ಪ್ರವಾಸಿಗರನ್ನು ಕೊಂದ ಉಗ್ರರಿಗೆ ದೇಶದ ಸೈನಿಕರು ತಕ್ಕ ಉತ್ತರವನ್ನು ನೀಡಿ ಇಡೀ ಪ್ರಪಂಚಕ್ಕೆ ದೇಶದ ಸೈನಿಕರು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ದೇಶದ ಅಖಂಡತೆ ಮತ್ತು ಭದ್ರತೆಗೆ ಧಕ್ಕೆ ಉಂಟಾದಾಗ ನಮ್ಮ ದೇಶ ಕಾಪಾಡುವ ಹೊಣೆ ಸೈನಿಕರದ್ದಾಗಿದೆ. ಅವರಿಗೆ ಗೌರವ ಸಲ್ಲಿಸಲಿಕ್ಕೆ ಈ ಯಾತ್ರೆ ಆಯೋಜಿಸಲಾಗಿದ್ದು, ಇದನ್ನು ಒಂದು…
ಮಂಗಳವಾರ ಮಂಗಳ ಗ್ರಹಕ್ಕೆ ಮೀಸಲಾದ ದಿನ ಎಂದು ನಮಗೆಲ್ಲರಿಗೂ ತಿಳಿದಿದೆ. ನಮ್ಮ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲು ಮತ್ತು ಮನೆ ಮತ್ತು ಭೂಮಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಮಂಗಳ ಗ್ರಹವು ನಮಗೆ ಯೋಗವನ್ನು ನೀಡಬಲ್ಲದು. ಮುರುಗ ದೇವರು ಮಂಗಳ ಗ್ರಹದ ಪರಮ ದೇವತೆ ಮತ್ತು ವೈಕಾಶಿ ಮಾಸವು ಮುರುಗನಿಗೆ ಅತ್ಯಂತ ಮಂಗಳಕರವಾದ ತಿಂಗಳು ಎಂದು ನಮಗೆಲ್ಲರಿಗೂ ತಿಳಿದಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ,…
ನವದೆಹಲಿ: ನ್ಯಾಯಾಂಗ ಸೇವೆಗೆ ಸೇರಲು ಅಭ್ಯರ್ಥಿಯು ಕನಿಷ್ಠ ಮೂರು ವರ್ಷಗಳ ವಕೀಲ ವೃತ್ತಿಯನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಎ.ಜಿ. ಮಸಿಹ್ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಈ ತೀರ್ಪನ್ನು ಪ್ರಕಟಿಸಿದೆ. ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ಪರೀಕ್ಷೆಗೆ ಹಾಜರಾಗಲು ಮೂರು ವರ್ಷಗಳ ಕನಿಷ್ಠ ಅಭ್ಯಾಸದ ಅವಶ್ಯಕತೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ. ಆದಾಗ್ಯೂ, ಈ ಅವಶ್ಯಕತೆಯು ನಡೆಯುತ್ತಿರುವ ನ್ಯಾಯಾಂಗ ನೇಮಕಾತಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಾಂಗದಲ್ಲಿ ಹೊಸ ಕಾನೂನು ಪದವೀಧರರ ನೇಮಕಾತಿಯು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಮತ್ತು ಎಲ್ಲಾ ಅಭ್ಯರ್ಥಿಗಳು ನ್ಯಾಯಾಂಗಕ್ಕೆ ಪ್ರವೇಶಿಸಲು ಕನಿಷ್ಠ ಮೂರು ವರ್ಷಗಳ ಅಭ್ಯಾಸದ ಅವಶ್ಯಕತೆಯಿದೆ ಎಂದು ಪೀಠವು ಗಮನಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ. ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9 ಮತ್ತು 11-ಎ ವಿತರಿಸಿದ ಒಂದು ವರ್ಷದಲ್ಲಿ ಗರಿಷ್ಠ ನಾಲ್ಕು ಕಂತುಗಳಲ್ಲಿ ಗ್ರಾಮ ಪಂಚಾಯ್ತಿ ಸಂಗ್ರಹಿಸಲು ಅವಕಾಶ ನೀಡಿ ಸರ್ಕಾರ ಆದೇಶಿಸಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 ರ ಪುಕರಣ 94-(ಸಿ), 94-(ಸಿಸಿ), 94-(ಡಿ) ರಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ನೀಡಲು ಕೈಗೊಳ್ಳಬೇಕಾದ ಪುಕ್ರಿಯೆಗಳ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿರುತ್ತದೆ ಎಂದಿದ್ದಾರೆ. ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 ರ ಪುಕರಣ 94-(ಡಿ) ರಡಿಯಲ್ಲಿ ಕಂದಾಯ ಇಲಾಖೆಯಿಂದ ವಿತರಣೆ ಮಾಡಲಾದ ಹಕ್ಕುಪತ್ರಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಉಂಟಾದ ಗೊಂದಲಗಳಿಗೆ ಸಂಬಂಧಿಸಿದಂತೆ…
ನವದೆಹಲಿ: ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮೇ 16 ರಿಂದ ಜಾರಿಗೆ ಬರುವಂತೆ ಎಲ್ಲಾ ಅವಧಿಗಳಿಗೆ 20 ಬೇಸಿಸ್ ಪಾಯಿಂಟ್ಗಳಷ್ಟು ಸ್ಥಿರ ಠೇವಣಿ ದರಗಳನ್ನು ಕಡಿತಗೊಳಿಸಿದೆ. ಬ್ಯಾಂಕಿನ ವೆಬ್ಸೈಟ್ ಪ್ರಕಾರ, 3 ಕೋಟಿ ರೂ.ಗಿಂತ ಕಡಿಮೆ ಚಿಲ್ಲರೆ ದೇಶೀಯ ಅವಧಿ ಠೇವಣಿಗಳ ಮೇಲಿನ ಬಡ್ಡಿದರಗಳಲ್ಲಿನ ಕಡಿತವು ಸಾರ್ವಜನಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಅನ್ವಯಿಸುತ್ತದೆ. 2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳು ಹೂಡಿಕೆದಾರರಿಗೆ ಗರಿಷ್ಠ 6.7% ಬಡ್ಡಿಯನ್ನು ನೀಡುತ್ತದೆ. ನಂತರ 3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳು ಮೇ 16 ರಿಂದ 6.55% ಬಡ್ಡಿಯನ್ನು ನೀಡುತ್ತದೆ. 5 ವರ್ಷದಿಂದ 10 ವರ್ಷಗಳವರೆಗಿನ ಸ್ಥಿರ ಠೇವಣಿಗಳು ಈಗ ಸಾರ್ವಜನಿಕರಿಗೆ 6.30% ಬಡ್ಡಿಯನ್ನು ಪಡೆಯುತ್ತವೆ. ಆದರೆ 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಇದು 6.5% ಬಡ್ಡಿಯನ್ನು ಪಡೆಯುತ್ತದೆ. ‘ಅಮೃತ್ ವೃಷ್ಟಿ’ (444 ದಿನಗಳು) ನಿರ್ದಿಷ್ಟ ಅವಧಿ ಯೋಜನೆಯ ಬಡ್ಡಿದರವನ್ನು ಮೇ 16,…
ನವದೆಹಲಿ: ಸೈಬರ್ ಅಪರಾಧದ ವಿರುದ್ಧ ಭಾರತದ ಹೋರಾಟವನ್ನು ಬಲಪಡಿಸುವ ಮಹತ್ವದ ಕ್ರಮವಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೃಹ ಸಚಿವಾಲಯದ (MHA) ಒಂದು ವಿಭಾಗವಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಅಡಿಯಲ್ಲಿ ಇ-ಝೀರೋ ಎಫ್ಐಆರ್ ಉಪಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಪ್ರಸ್ತುತ ದೆಹಲಿಯಲ್ಲಿ ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಲಾಗಿರುವ ಈ ಉಪಕ್ರಮವು, ಹೆಚ್ಚಿನ ಮೌಲ್ಯದ ಪ್ರಕರಣಗಳಿಗೆ ದೂರುಗಳನ್ನು ಸ್ವಯಂಚಾಲಿತವಾಗಿ ಎಫ್ಐಆರ್ಗಳಾಗಿ ಪರಿವರ್ತಿಸುವ ಮೂಲಕ ಆರ್ಥಿಕ ಸೈಬರ್ ವಂಚನೆಯನ್ನು ನಿಭಾಯಿಸುವಲ್ಲಿ ಪ್ರತಿಕ್ರಿಯೆ ಸಮಯವನ್ನು ತೀವ್ರವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಸೋಮವಾರ ಟ್ವೀಟ್ನಲ್ಲಿ ಶಾ ಅವರು, “ಯಾವುದೇ ಅಪರಾಧಿಯನ್ನು ಅಭೂತಪೂರ್ವ ವೇಗದಲ್ಲಿ ಬಂಧಿಸಲು ಗೃಹ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಹೊಸ ಇ-ಝೀರೋ ಎಫ್ಐಆರ್ ಉಪಕ್ರಮವನ್ನು ಪರಿಚಯಿಸಿದೆ. ದೆಹಲಿಗೆ ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಲಾದ ಹೊಸ ವ್ಯವಸ್ಥೆಯು ಎನ್ಸಿಆರ್ಪಿ ಅಥವಾ 1930 ರಲ್ಲಿ ದಾಖಲಾಗುವ ಸೈಬರ್ ಹಣಕಾಸು ಅಪರಾಧಗಳನ್ನು ಸ್ವಯಂಚಾಲಿತವಾಗಿ ಎಫ್ಐಆರ್ಗಳಾಗಿ ಪರಿವರ್ತಿಸುತ್ತದೆ. ಆರಂಭದಲ್ಲಿ ರೂ. 10…
ಬೆಂಗಳೂರು: ನಗರದಲ್ಲಿ ಮಹಾಮಳೆಯಾಗುತ್ತಿದೆ. ಈ ಮಳೆಯಿಂದಾಗಿ ಗೋಡೆಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಇದೀಗ ಮೋಟಾರ್ ನಿಂದ ಮಳೆ ನೀರು ತೆರವು ಮಾಡಲು ಹೋಗಿ ಕರೆಂಟ್ ಶಾಕ್ ನಿಂದ 12ರ ಬಾಲಕ ಸೇರಿದಂತೆ ಇಬ್ಬರು ಬಲಿಯಾಗಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ ಮಹಾಮಳೆಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಇಂದು ಮಹಾಮಳೆಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಅಪಾರ್ಟ್ ಮೆಂಟ್ ನ ಬೇಸ್ಮೆಂಟ್ ನಲ್ಲಿ ಮೋಟಾರ್ ನಿಂದ ಮಳೆಯ ನೀರು ಹೊರ ಹಾಕಲು ಹೋಗಿ ಕರೆಂಟ್ ಶಾಕ್ ನಿಂದ 12 ವರ್ಷದ ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಮನಮೋಹನ್ ಕಾಮತ್(63) ಹಾಗೂ ದಿನೇಶ್ (12) ಎಂಬುದಾಗಿ ಗುರುತಿಸಲಾಗಿದೆ. ಇವರು ಬಿಟಿಎಂ ಲೇಔಟ್ ನ 2ನೇ ಹಂತದಲ್ಲಿರುವಂತ ಎನ್ ಎಸ್ ಪಾಳ್ಯದಲ್ಲಿನ ಮಧುವನ ಅಪಾರ್ಮೆಂಟ್ ನ ನಿವಾಸಿಗಳು. ಇಂದು ಸಂಜೆ 6.15ರ ಸುಮಾರಿಗೆ ಅಪಾರ್ಮೆಂಟ್ ನಲ್ಲ ಬೇಸ್ಮೆಟ್ ನಲ್ಲಿ ತುಂಬಿದ್ದಂತ ನೀರನ್ನು ಮೋಟರ್ ಮೂಲಕ ಹೊರ ಹಾಕಲು ಪ್ರಯತ್ನಿಸಿದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್…












