Author: kannadanewsnow09

ಮಂಗಳೂರು: ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟ್ ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಂಗಳೂರಿನ ಬಜ್ಪೆ ಬಳಿಯಲ್ಲಿ ಜುಲೈ 22, 2022ರಂದು ಸುರತ್ಕಲ್ ಫಾಜಿಲ್ ಕೊಲೆಯಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಸುಹಾನ್ ಶೆಟ್ಟಿ ಆಗಿದ್ದರು. ಪ್ರವೀಣ್ ನೆಟ್ಟಾರು ಕೊಲೆಯ ಪ್ರತೀಕಾರವಾಗಿ ನಡೆದಿದ್ದಂತ ಕೊಲೆ ಫಾಜಿಲ್ ಆಗಿತ್ತು. ಇಂದು ಈ ಪ್ರಕರಣ ಪ್ರಮುಖ ಆರೋಪಿ, ರೌಡಿ ಶೀಟರ್ ಸುಹಾನ್ ಶೆಟ್ಟಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹಲವು, ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಸುಹಾನ್ ಶೆಟ್ಟಿ ಭಾಗಿಯಾಗಿದ್ದನು. ಜೊತೆಗೆ ಈ ಹಿಂದೆ ಭಜರಂಗದಳದಲ್ಲೂ ಸುಹಾನ್ ಶೆಟ್ಟಿ ಇದ್ದನು. ಈ ಸಂಬಂಧ ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಉದಯಪುರ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಗಿರಿಜಾ ವ್ಯಾಸ್ ಗುರುವಾರ (ಮೇ 1) ರಾಜಸ್ಥಾನದ ಉದಯಪುರದಲ್ಲಿ ನಿಧನರಾದರು. ಮಾರ್ಚ್ 31, 2025 ರಂದು ಉದಯಪುರದ ತನ್ನ ಮನೆಯಲ್ಲಿ ‘ಆರತಿ’ ಮಾಡುವಾಗ ಅವರಿಗೆ ಸುಟ್ಟ ಗಾಯಗಳಾಗಿವೆ. ವ್ಯಾಸ್ (79) ಅವರನ್ನು ಉದಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಪ್ರಾಥಮಿಕ ಚಿಕಿತ್ಸೆ ಪಡೆದರು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್ಗೆ ಕಳುಹಿಸಲಾಯಿತು. ವ್ಯಾಸ್ ‘ಆರತಿ’ ಮಾಡುತ್ತಿದ್ದಾಗ ಕೆಳಗೆ ಉರಿಯುತ್ತಿದ್ದ ದೀಪದಿಂದ ಅವರ ‘ದುಪಟ್ಟಾ’ ಬೆಂಕಿ ಹೊತ್ತಿಕೊಂಡು, ಅವರಿಗೂ ವ್ಯಾಪಿಸಿತ್ತು ಎಂದು ಆಕೆಯ ಸಹೋದರ ಗೋಪಾಲ್ ಶರ್ಮಾ ಹೇಳಿದ್ದಾರೆ. ಕುಟುಂಬ ಸದಸ್ಯರು ಅವಳನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೇ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿರುವುದಾಗಿ ತಿಳಿಸಿದ್ದಾರೆ. ವ್ಯಾಸ್ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯೂ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Read More

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ಇದೇ ಸಂದರ್ಭದಲ್ಲಿ ನಗರದಲ್ಲಿ ಇಂದು ಒಂದೇ ದಿನ ಭಾರೀ ಮಳೆಯಿಂದಾಗಿ 10 ಮರಗಳು ಮುರಿದು ಬಿದ್ದಿದ್ದರೇ, 23 ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದಾವೆ. ಬೆಂಗಳೂರಿನ ವಿಧಾನಸೌಧ, ದಾಸರಹಳ್ಳಿ ಶಿವಾಜಿನಗರ, ಮಲ್ಲೇಶ್ವರಂ, ಫ್ರೇಜರ್ ಟೌನ್, ಕಾರ್ಪೊರೋಷನ್ ಸೇರಿದಂತೆ ವಿವಿಧೆಡೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿದ್ದು, ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರಿನ ಭಾರೀ ಮಳೆಯ ಅವಾಂತರದಿಂದಾಗಿ ಕತ್ರಿಗುಪ್ಪೆ ಸಮೀಪದಲ್ಲಿ ಮರವೊಂದು ಆಟೋ ಮೇಲೆ ಬಿದ್ದ ಪರಿಣಾಮ, ಅದರಲ್ಲಿದ್ದಂತ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರ ನಡುವೆ ಮುಂದಿನ 3 ಗಂಟೆಗಳಲ್ಲಿ ಬೆಂಗಳೂರಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಮುಂಜಾಗ್ರತಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಸುರಿದಂತ ಭಾರೀ ಮಳೆಯಿಂದಾಗಿ ಬೆಂಗಳೂರಲ್ಲಿ 10 ಮರಗಳು ಮುರಿದು ಬಿದ್ದಿದ್ದಾವೆ. ಇದಲ್ಲದೇ 23 ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದಾವೆ.…

Read More

ಬೆಂಗಳೂರು: ನಮ್ಮ ಭಾರತದ ಅಖಂಡತೆ, ಸಾರ್ವಭೌಮತೆಯ ಪ್ರಶ್ನೆ ಬಂದಾಗೆಲ್ಲ ನಮ್ಮ ಕಾಂಗ್ರೆಸ್ ಪಕ್ಷ ಎಂದಿಗೂ ದೇಶವನ್ನು ಬಿಟ್ಟುಕೊಟ್ಟ ಉದಾಹರಣೆಯೇ ಇಲ್ಲ ಎಂಬುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಸೈದ್ಧಾಂತಿಕ ವಿಚಾರ ವ್ಯತ್ಯಾಸಗಳು ಎಷ್ಟೇ ಇರಲಿ, ದೇಶದ ವಿಷಯದಲ್ಲಿ ಯಾವ ರಾಜಿಯೂ ಇಲ್ಲ. ದೇಶಕ್ಕೆ ವೈರಿಯಾದರೆ ನಮಗೂ ವೈರಿಯೇ. ನಮ್ಮ ಭಾರತದ ಅಖಂಡತೆ, ಸಾರ್ವಭೌಮತೆಯ ಪ್ರಶ್ನೆ ಬಂದಾಗೆಲ್ಲ ನಮ್ಮ ಕಾಂಗ್ರೆಸ್ ಪಕ್ಷ ಎಂದಿಗೂ ದೇಶವನ್ನು ಬಿಟ್ಟುಕೊಟ್ಟ ಉದಾಹರಣೆಯೇ ಇಲ್ಲ ಎಂದು ತಿಳಿಸಿದ್ದಾರೆ. ಉಗ್ರ ಕೃತ್ಯಗಳಿಂದ ಭಾರತದ ತಾಳ್ಮೆ ಪರೀಕ್ಷಿಸುತ್ತಿರುವ ಪಾಪಿ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಸಹ ನಾವು ಅವರ ಜೊತೆ ನಿಲ್ಲಲಿದ್ದೇವೆ. ದೇಶದ ವೀರ ಯೋಧರಿಗೆ ನೈತಿಕ ಸ್ಥೈರ್ಯವಾಗಿ ನಾವೆಲ್ಲ ಇರಲಿದ್ದೇವೆ ಎಂಬುದಾಗಿ ಹೇಳಿದ್ದಾರೆ. https://twitter.com/SantoshSLadINC/status/1917951877037326783 https://kannadanewsnow.com/kannada/heavy-rain-accompanied-by-hailstorm-in-bengaluru-motorists-stranded/ https://kannadanewsnow.com/kannada/pahalgam-terror-attack-sc-refuses-to-entertain-plea-seeking-judicial-probe/

Read More

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ಬೆಂಗಳೂರಿನ ವಿಧಾನಸೌಧ, ದಾಸರಹಳ್ಳಿ ಶಿವಾಜಿನಗರ, ಮಲ್ಲೇಶ್ವರಂ, ಫ್ರೇಜರ್ ಟೌನ್, ಕಾರ್ಪೊರೋಷನ್ ಸೇರಿದಂತೆ ವಿವಿಧೆಡೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿದ್ದು, ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರಿನ ಭಾರೀ ಮಳೆಯ ಅವಾಂತರದಿಂದಾಗಿ ಕತ್ರಿಗುಪ್ಪೆ ಸಮೀಪದಲ್ಲಿ ಮರವೊಂದು ಆಟೋ ಮೇಲೆ ಬಿದ್ದ ಪರಿಣಾಮ, ಅದರಲ್ಲಿದ್ದಂತ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರ ನಡುವೆ ಮುಂದಿನ 3 ಗಂಟೆಗಳಲ್ಲಿ ಬೆಂಗಳೂರಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಮುಂಜಾಗ್ರತಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://kannadanewsnow.com/kannada/mike-waltz-resigns-as-us-president-donald-trumps-national-security-adviser-report/ https://kannadanewsnow.com/kannada/pahalgam-terror-attack-sc-refuses-to-entertain-plea-seeking-judicial-probe/

Read More

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಮತ್ತು ಅವರ ಉಪಾಧ್ಯಕ್ಷ ಅಲೆಕ್ಸ್ ವಾಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಶ್ವೇತಭವನದ ಕೆಲಸದಿಂದ ಕೆಳಗಿಳಿಯಲಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಮಾರ್ಚ್ನಲ್ಲಿ, ವಾಲ್ಟ್ಜ್ ಸಿಗ್ನಲ್ ಗ್ರೂಪ್ ಚಾಟ್ ಅನ್ನು ರಚಿಸಿದ ನಂತರ ಮತ್ತು ಆಕಸ್ಮಿಕವಾಗಿ ದಿ ಅಟ್ಲಾಂಟಿಕ್ ಪತ್ರಕರ್ತ ಜೆಫ್ರಿ ಗೋಲ್ಡ್ಬರ್ಗ್ ಅವರನ್ನು ಸೇರಿಸಿದ ನಂತರ ತೀವ್ರ ಟೀಕೆಗೆ ಗುರಿಯಾದರು. ಯೆಮೆನ್ನಲ್ಲಿ ಹೌತಿ ಗುರಿಗಳ ವಿರುದ್ಧ ಸಂಭಾವ್ಯ ಮಿಲಿಟರಿ ಕ್ರಮದ ಬಗ್ಗೆ ಹಿರಿಯ ರಾಷ್ಟ್ರೀಯ ಭದ್ರತಾ ಅಧಿಕಾರಿಗಳೊಂದಿಗಿನ ಸಂಭಾಷಣೆಗಳನ್ನು ಅಜಾಗರೂಕತೆಯಿಂದ ಬಹಿರಂಗಪಡಿಸಿದರು. ಫ್ಲೋರಿಡಾದ ಮಾಜಿ ಕಾಂಗ್ರೆಸ್ಸಿಗ ವಾಲ್ಟ್ಜ್, ಸಿಗ್ನಲ್ ಚಾಟ್ ಸೋರಿಕೆ ಪ್ರಕರಣ ಸ್ಫೋಟಗೊಂಡ ನಂತರ ಮಾರ್ಚ್ನಿಂದ ಡೆಮಾಕ್ರಟಿಕ್ ಮತ್ತು ಇತರರಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವಾಲ್ಟ್ಜ್, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಸಿಐಎ ನಿರ್ದೇಶಕ ಜಾನ್ ರಾಟ್ಕ್ಲಿಫ್ ಸೇರಿದಂತೆ ಉನ್ನತ ರಾಷ್ಟ್ರೀಯ ಭದ್ರತಾ ಅಧಿಕಾರಿಗಳೊಂದಿಗೆ ಸಿಗ್ನಲ್ ಗ್ರೂಪ್…

Read More

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಪ್ರತಿಮನೆಗೆ ದಿನದ 24 ಗಂಟೆ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದ್ದು, ಇದಕ್ಕಾಗಿ 250 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಮಂಜೂರಾತಿಯಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಇಲ್ಲಿನ ವಿಜಯನಗರ ಬಡಾವಣೆಯಲ್ಲಿ ಗುರುವಾರ ಯುವ ಸಬಲೀಕರಣ ಇಲಾಖೆಯಿಂದ ನವೀಕೃತಗೊಂಡ ಈಜುಕೊಳದ ಲೋಕಾರ್ಪಣೆ ಹಾಗೂ ಈಜು ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಜನರಿಗೆ ಶುದ್ದ ಕುಡಿಯುವ ನೀರನ್ನು ಶರಾವತಿ ಹಿನ್ನೀರಿನಿಂದ ತರುವ ಯೋಜನೆ ಇನ್ನಷ್ಟು ಸಶಕ್ತಗೊಳಿಸಲಾಗುತ್ತಿದೆ ಎಂದು ಹೇಳಿದರು. ವಿಜಯನಗರ ಬಡಾವಣೆ ಈಜುಕೊಳ 2008ರಲ್ಲಿ ನನ್ನ ಅವಧಿಯಲ್ಲಿ 2 ಕೋಟಿ ರೂ. ಅನುದಾನ ಮಂಜೂರು ಮಾಡಿಸಿತ್ತು. ನಂತರ ಕಾಗೋಡು ತಿಮ್ಮಪ್ಪ ಅವರು 50 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದರು. ನಂತರ ಬಂದವರು ತರಾತುರಿಯಲ್ಲಿ ಈಜುಕೋಳ ಉದ್ಘಾಟಿಸಿದ್ದರು. ಆದರೆ ಇಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಿರಲಿಲ್ಲ. ಈಜುಕೊಳ ಸಂಪೂರ್ಣ ಹಾಳಾಗಿದ್ದರಿಂದ ಮೂರು ವರ್ಷಗಳ ಕಾಲ…

Read More

ಬೆಂಗಳೂರು: ನಗರದಲ್ಲಿ ಈಗಾಗಲೇ ಮಳೆ ಆರಂಭಗೊಂಡಿದೆ. ಇದಲ್ಲದೇ ಮುಂದಿನ ಮೂರು ಗಂಟೆಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರದಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈಗಾಗಲೇ ಬೆಂಗಳೂರಿನ ವಿವಿಧೆಡೆ ಮಳೆಯಾಗುತ್ತಿದೆ. ಕತ್ರಿಗುಪ್ಪೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ಮರವೊಂದು ಆಟೋದ ಮೇಲೆ ಉರುಳಿ ಬಿದ್ದಿದೆ. ಈ ಪರಿಣಾಮ ಆಟೋ ಚಾಲಕನೊಬ್ಬ ದುರ್ಮರಣ ಹೊಂದಿರುವುದಾಗಿ ತಿಳಿದು ಬಂದಿದೆ. https://kannadanewsnow.com/kannada/auto-driver-killed-in-heavy-rain-in-bengaluru/ https://kannadanewsnow.com/kannada/pahalgam-terror-attack-sc-refuses-to-entertain-plea-seeking-judicial-probe/

Read More

ಶಿವಮೊಗ್ಗ: ಜಿಲ್ಲೆಯ ಸಾಗರ ಸಮೀಪದ ಕುಗ್ವೆ ಗ್ರಾಮದ ಇತಿಹಾಸ ಪ್ರಸಿದ್ದ ಈಶ್ವರ, ನಂದೀಶ್ವರ ಹಾಗೂ ಸಪರಿವಾರ ದೇವರ ಪ್ರಾಣ ಪ್ರತಿಷ್ಟಾಪನೆ, ಪುರಾತನ ಧಾರ್ಮಿಕ ಶ್ರದ್ಧಾಕೇಂದ್ರದ ನೂತನ ಶಿಲಾಮಯ ದೇವಾಲಯದ ಪ್ರತಿಷ್ಟಾಪನೆ ಮೇ 3, 4 ಮತ್ತು 5ರಂದು ನಡೆಯಲಿದೆ ಎಂದು ಶ್ರೀ ಈಶ್ವರ ಸೇವಾ ಪ್ರತಿಷ್ಟಾನ ಮತ್ತು ಗ್ರಾಮ ಸುಧಾರಣಾ ಸಮಿತಿ ಮುಖಂಡರು ತಿಳಿಸಿದ್ದಾರೆ. ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಮುಖರು, ಈಶ್ವರ ಸೇವಾ ಪ್ರತಿಷ್ಟಾನ ಮತ್ತು ಗ್ರಾಮ ಅಭಿವೃದ್ದಿ ಸಮಿತಿ ಜಂಟೀಯಾಗಿ ಈ ಧಾರ್ಮಿಕ ಕಾರ್ಯಕ್ರಮದ ಮುಂದಾಳತ್ವ ವಹಿಸಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ, ಸುಂದರವಾದ ಶಿಲಾಮಯ ದೇವಸ್ಥಾನ ನಿರ್ಮಿಸಿದೆ ಎಂದರು. ಮೇ 3ರಂದು ಬೆಳಿಗ್ಗೆ 8ರಿಂದ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಸಂಜೆ ಗೋಧೂಳಿ ಮುಹೂರ್ತದಲ್ಲಿ ನೂತನ ದೇವಾಲಯ ಪ್ರವೇಶ ಇನ್ನಿತರೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಸೇಡಿನ ಜ್ವಾಲೆ ಸಾಮಾಜಿಕ ನಾಟಕ ಇರುತ್ತದೆ. ಮೇ 4ರಂದು ಬೆಳಿಗ್ಗೆ…

Read More

ಬೆಂಗಳೂರು: ನಗರದಲ್ಲಿ ದಿಢೀರ್ ಸುರಿಯುತ್ತಿರುವಂತ ಗಾಳಿ ಮಳೆಯಿಂದಾಗಿ ಆಟೋ ಮೇಲೆ ಮರಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ. ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಬಿರುಗಾಳಿ ಕೂಡ ಬೀಸುತ್ತಿದೆ. ಬೆಂಗಳೂರಿನ ಕತ್ರಿಗುಪ್ಪೆಯ ಎಂ.ಎಂ ಬಾರ್ ಬಳಿಯಲ್ಲಿ ಭಾರೀ ಮಳೆಯೊಂದಿಗೆ ಮರವೊಂದು ಆಟೋ ಮೇಲೆ ಉರುಳಿ ಬಿದ್ದಿದೆ. ಈ ಪರಿಣಾಮ ಚಾಲಕನೊಬ್ಬ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ, ಕೆ ಆರ್ ಮಾರ್ಕೆಟ್, ಕತ್ರಿಗುಪ್ಪೆ, ಜಯನಗರ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡ ಪರಿಣಾಮ ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. https://kannadanewsnow.com/kannada/pahalgam-terror-attack-sc-refuses-to-entertain-plea-seeking-judicial-probe/ https://kannadanewsnow.com/kannada/pakistan-orders-suspension-of-indian-song-broadcast-on-pakistani-fm-radio-stations/

Read More