Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಗರದಲ್ಲಿ ನೀರಿನ ಆಹಾಕಾರ ಎದ್ದಿದೆ. ನೀರಿನ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆಯಿಂದಾಗಿ ಪೋಲು ಮಾಡೋದಕ್ಕೆ ತಡೆಯೋ ಸಲುವಾಗಿ ದಂಡದ ಕಠಿಣ ಕಾನೂನು ಜಾರಿಗೊಳಿಸಲಾಗಿತ್ತು. ಇದನ್ನು ಮೀರಿ, ಪೋಲು ಮಾಡಿದಂತ ಸಿಲಿಕಾನ್ ಸಿಟಿ ಜನತೆಗೆ 1.10 ಲಕ್ಷ ದಂಡವನ್ನು ವಿಧಿಸಿದೆ. ಬೆಂಗಳೂರಲ್ಲಿ ನೀರು ಪೋಲು ಮಾಡುವುದನ್ನು ತಡೆಗಟ್ಟೋದಕ್ಕಾಗಿ ಕುಡಿಯುವ ನೀರು ಹೊರತಾಗಿ ಬೇರೆ ಯಾವುದೇ ಕೆಲಸಕ್ಕೆ ನೀರು ಬಳಸದಂತೆ ಜಲಮಂಡಳಿ ಎಚ್ಚರಿಕೆ ನೀಡಿತ್ತು. ವಾಹನ ತೊಳೆಯೋದಕ್ಕೆ, ಗಿಡಗಳಿಗೆ ನೀರು ಹಾಕೋದು ಸೇರಿದಂತೆ ವಿವಿಧ ಕಾರಣಗಳಿಗೆ ಅನಗತ್ಯವಾಗಿ ನೀರು ಪೋಲು ಮಾಡದಂತೆ ಖಡಕ್ ಸೂಚನೆ ನೀಡಿತ್ತು. ಜಲ ಮಂಡಳಿಯ ಎಚ್ಚರಿಕೆಯನ್ನು ಮೀರಿದಂತ ಬೆಂಗಳೂರು ಮಂದಿಯಲ್ಲಿ ಕೆಲವರು ಗಿಡಗಳಿಗೆ ನೀರು ಹಾಕಿದವರು, ರಸ್ತೆಗೆ ಸುರಿದವರು, ವಾಹನ ತೊಳೆಯೋದಕ್ಕೆ ಬಳಸಿದವರಿಗೆ ದಂಡದ ಬಿಸಿಯನ್ನು ಮುಟ್ಟಿಸಿದೆ. ನೀರು ಪೋಲು ಮಾಡಿದವರಿಗೆ 5000 ದಂಡ ಹಾಕೋದಾಗಿ ಆದೇಶಿಸಿದಂತ ಜಲಮಂಡಳಿಯು, ಅದರಂತೆ ಬೆಂಗಳೂರಲ್ಲಿ ವಿವಿಧ ವಲಯಗಳಲ್ಲಿ ದಂಡದ ರೂಪದಲ್ಲಿ ರೂ.1.10 ಲಕ್ಷವನ್ನು ವಸೂಲಿ ಮಾಡಿದೆ. https://kannadanewsnow.com/kannada/this-is-the-job-of-a-traffic-policeman-read-this-news-you-are-guaranteed-to-say-hats-off/…
ಮುಂಬೈ : ಭಾರತೀಯ ನೌಕಾಪಡೆಯಿಂದ ಬಂಧಿಸಲ್ಪಟ್ಟ 35 ಸೊಮಾಲಿಯಾ ಕಡಲ್ಗಳ್ಳರನ್ನು ಮುಂಬೈ ನ್ಯಾಯಾಲಯವು ಭಾನುವಾರ 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಕೋಲ್ಕತಾ ಮಾರ್ಚ್ 15 ರಂದು ಪ್ರಾರಂಭವಾದ 40 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಕಡಲ್ಗಳ್ಳರನ್ನು ಬಂಧಿಸಿತ್ತು. ಭಾರತೀಯ ಯುದ್ಧನೌಕೆ ಐಎನ್ಎಸ್ ಕೋಲ್ಕತಾ ಮಾರ್ಚ್ 16 ರಂದು ಎಲ್ಲಾ 35 ಕಡಲ್ಗಳ್ಳರನ್ನು ಯಶಸ್ವಿಯಾಗಿ ಮೂಲೆಗುಂಪು ಮಾಡಿ ಶರಣಾಗುವಂತೆ ಒತ್ತಾಯಿಸಿತು. ಕಡಲ್ಗಳ್ಳರ ಹಡಗಿನಿಂದ 17 ಸಿಬ್ಬಂದಿಯನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿದೆ ಎಂದು ಭಾರತೀಯ ನೌಕಾಪಡೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ 40 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ, ಐಎನ್ಎಸ್ ಕೋಲ್ಕತ್ತಾ ಭಾರತೀಯ ಕರಾವಳಿಯ ತೀರದಿಂದ ಸುಮಾರು 2600 ಕಿ.ಮೀ ದೂರದಲ್ಲಿ ಚಲಿಸುತ್ತಿದ್ದ ದಾಳಿಗೊಳಗಾದ ಕಡಲ್ಗಳ್ಳರ ಹಡಗು ರುಯೆನ್ ಅನ್ನು ತಡೆದಿದೆ. ಮಾಪನಾಂಕಿತ ಕ್ರಮಗಳ ಮೂಲಕ ಕಡಲ್ಗಳ್ಳರ ಹಡಗನ್ನು ನಿಲ್ಲಿಸುವಂತೆ ಒತ್ತಾಯಿಸಿದೆ. ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸುವ ಮತ್ತು ತೊಂದರೆಗೀಡಾದ ಹಡಗಿನ ಸಂಪೂರ್ಣ ನಿಯಂತ್ರಣವನ್ನು…
ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ 111 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಕರ್ನಾಟಕದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಈ ಬಾರಿ ಉತ್ತರ ಕನ್ನಡ ಜಿಲ್ಲೆಯಿಂದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಮಿಸ್ ಆಗಿದ್ದು, ವಿಶ್ವೇಶ್ವರ ಹೆಗೆಡೆ ಕಾಗೇರಿಗೆ ಟಿಕೆಟ್ ನೀಡಲಾಗಿದೆ. ಉಜಿಯಾರ್ಪುರದಿಂದ ನಿತ್ಯಾನಂದ ರೈ, ಬೇಗುಸರಾಯ್ನಿಂದ ಗಿರಿರಾಜ್ ಸಿಂಗ್, ಪಾಟ್ನಾ ಸಾಹಿಬ್ನಿಂದ ರವಿಶಂಕರ್ ಪ್ರಸಾದ್, ಮಂಡಿಯಿಂದ ಕಂಗನಾ ರನೌತ್, ಕುರುಕ್ಷೇತ್ರದಿಂದ ನವೀನ್ ಜಿಂದಾಲ್, ದುಮ್ಕಾದಿಂದ ಸೀತಾ ಸೊರೆನ್, ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಚಿಕ್ಕಬಳ್ಳಾಪುರದಿಂದ ಕೆ ಸುಧಾಕರನ್, ಸಂಬಲ್ಪುರದಿಂದ ಧರ್ಮೇಂದ್ರ ಪ್ರಧಾನ್, ಬಾಲಸೋರ್ನಿಂದ ಪ್ರತಾಪ್ ಸಾರಂಗಿ, ಪುರಿಯಿಂದ ಸಂಬಿತ್ ಪಾತ್ರಾ, ಭುವನೇಶ್ವರದಿಂದ ಅರುಣ್ ಸಾರಂಗಿ, ಭುವನೇಶ್ವರದಿಂದ ಅರುಣ್ ಸಾರಂಗಿ ಕಣದಲ್ಲಿದ್ದಾರೆ. ಜುನಾಗಢದಿಂದ ರಾಜೇಶ್ ಚುಡಾಸಮಾ, ಮೆಹ್ಸಾನಾದಿಂದ ಹರಿ ಪಟೇಲ್, ಸಬರ್ಕಾಂತದಿಂದ ಶಭನಾ ಬೆನ್ ಬರಿಯಾ, ವಡೋದರಾದಿಂದ ಡಾ.ಹೇಮಂಗ್ ಜಿಶಿ, ಅಮ್ರೇಲಿಯಿಂದ ಭರತ್ ಭಾಯ್ ಸುತಾರಿಯಾ, ಸುರೇಂದ್ರನಗರದಿಂದ ಚಂದುಭಾಯ್…
ನವದೆಹಲಿ: ಬಿಜೆಪಿಯಿಂದ ಲೋಕಸಭಾ ಚುನಾವಣೆ ಐದನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಐದನೇ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮಾಜಿ ಸಚಿವ ಕೆ ಸುಧಾಕರ್ ಅವರಿಗೆ ಟಿಕೆಟ್ ನೀಡಲಾಗಿದೆ. ಆದ್ರೇ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಗೆ ಲೋಕಸಭಾ ಚುನಾವಣೆಗೆ ಈ ಬಾರಿ ಟಿಕೆಟ್ ಮಿಸ್ ಆಗಿದೆ. ಈ ಕುರಿತಂತೆ ಇಂದು ಬಿಜೆಪಿ ಹೈಕಮಾಂಡ್ 5ನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ರಾಜಾ ಅಮರೇಶ್ವರ ನಾಯಕಗೆ ಟಿಕೆಟ್ ನೀಡಲಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಡಾ.ಕೆ ಸುಧಾಕರ್ ಅವರಿಗೆ ಟಿಕೆಟ್ ನೀಡಿದ್ರೇ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿಗೆ, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡಲಾಗಿದೆ. https://kannadanewsnow.com/kannada/this-is-the-job-of-a-traffic-policeman-read-this-news-you-are-guaranteed-to-say-hats-off/ https://kannadanewsnow.com/kannada/former-congress-mp-naveen-jindal-announces-resignation-joins-bjp/
ನವದೆಹಲಿ: ಮಾಜಿ ಸಂಸದ ನವೀನ್ ಜಿಂದಾಲ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಬಿಜೆಪಿ ಪಕ್ಷ ಸೇರಿದ್ದಾರೆ. ವರ್ಷಗಳ ಕಾಲ ಕುರುಕ್ಷೇತ್ರದ ಸಂಸದನಾಗಿ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದೇನೆ. ನಾನು ಕಾಂಗ್ರೆಸ್ ನಾಯಕತ್ವ ಮತ್ತು ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇಂದು ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. https://twitter.com/ANI/status/1771911297153572880 ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಂಸದ ನವೀನ್ ಜಿಂದಾಲ್ ಭಾನುವಾರ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿಗೆ ಸೇರಿದರು. ನವೀನ್ ಜಿಂದಾಲ್ ಅವರು ಬಿಜೆಪಿಗೆ ಸೇರಲು ಹೆಮ್ಮೆಪಡುತ್ತಾರೆ ಮತ್ತು ಪ್ರಧಾನಿ ಮೋದಿಯವರ ‘ವಿಕ್ಷಿತ್ ಭಾರತ್’ ಕನಸಿಗೆ ಕೊಡುಗೆ ನೀಡಲು ಬಯಸುತ್ತಾರೆ ಎಂದು ಹೇಳಿದರು. https://twitter.com/ANI/status/1771913704235303287 https://kannadanewsnow.com/kannada/union-mos-vk-singh-says-he-wont-contest-lok-sabha-election-2024/ https://kannadanewsnow.com/kannada/this-is-the-job-of-a-traffic-policeman-read-this-news-you-are-guaranteed-to-say-hats-off/
ನವದೆಹಲಿ: ಕೇಂದ್ರ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್ (ನಿವೃತ್ತ) ಅವರು ಮುಂಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅವರು ಲೋಕಸಭೆಯಲ್ಲಿ ಗಾಜಿಯಾಬಾದ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. “ನಾನು ಸೈನಿಕನಾಗಿ ನನ್ನ ಇಡೀ ಜೀವನವನ್ನು ಈ ರಾಷ್ಟ್ರದ ಸೇವೆಗೆ ಮುಡಿಪಾಗಿಟ್ಟಿದ್ದೇನೆ. ಕಳೆದ 10 ವರ್ಷಗಳಿಂದ, ಗಾಜಿಯಾಬಾದ್ ಅನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡಲು ನಾನು ದಣಿವರಿಯದೆ ಕೆಲಸ ಮಾಡಿದ್ದೇನೆ. ಈ ಪ್ರಯಾಣದುದ್ದಕ್ಕೂ, ಈ ದೇಶದ ಜನರು ಮತ್ತು ಬಿಜೆಪಿಯ ಸದಸ್ಯರು ನನ್ನ ಮೇಲೆ ನೀಡಿದ ನಂಬಿಕೆ ಮತ್ತು ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಈ ಭಾವನಾತ್ಮಕ ಬಂಧವು ನನಗೆ ಅಮೂಲ್ಯವಾಗಿದೆ ಎಂದು ತಿಳಿಸಿದ್ದಾರೆ. 2024ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಈ ನಿರ್ಧಾರ ನನಗೆ ಸುಲಭವಾಗಿರಲಿಲ್ಲ, ಆದರೆ ನಾನು ಅದನ್ನು ನನ್ನ ಹೃದಯದ ಆಳದಿಂದ ತೆಗೆದುಕೊಂಡಿದ್ದೇನೆ. ನನ್ನ ಶಕ್ತಿ ಮತ್ತು ಸಮಯವನ್ನು ಹೊಸ ದಿಕ್ಕುಗಳಿಗೆ ತಿರುಗಿಸಲು ನಾನು ಬಯಸುತ್ತೇನೆ, ಅಲ್ಲಿ ನಾನು ನನ್ನ ದೇಶಕ್ಕೆ ವಿಭಿನ್ನ ರೀತಿಯಲ್ಲಿ ಸೇವೆ ಸಲ್ಲಿಸಬಹುದು ಎಂದಿದ್ದಾರೆ. https://twitter.com/Gen_VKSingh/status/1771907296563523741…
ನವದೆಹಲಿ: ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಭಾನುವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು. ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಜಿಂದಾಲ್ ಅವರನ್ನು ಕಣಕ್ಕಿಳಿಸಬಹುದು ಎಂಬುದಾಗಿ ವರದಿಯಿಂದ ತಿಳಇದು ಬಂದಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದಕ್ಕೂ ಮುನ್ನ ಅವರು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಹಿಂದೆ 2004ರಲ್ಲಿ ಕುರುಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದರು. ಅವರು ಚುನಾವಣೆಯಲ್ಲಿ ಗೆದ್ದರು. 2009ರಲ್ಲಿ ಜಿಂದಾಲ್ ಮತ್ತೆ ಆಯ್ಕೆಯಾದರು. ಆದರೆ, 2014ರಲ್ಲಿ ಕುರುಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. https://kannadanewsnow.com/kannada/krpp-party-to-merge-with-bjp-tomorrow-morning-mla-janardhana-reddy-to-join-bjp/ https://kannadanewsnow.com/kannada/this-is-the-job-of-a-traffic-policeman-read-this-news-you-are-guaranteed-to-say-hats-off/
ಮಡಿಕೇರಿ: ಸಂಚಾರಿ ಪೊಲೀಸರ ಕೆಲಸ ಅಂತ್ರೆ ಕೇವಲ ಟ್ರಾಫಿಕ್ ನಿಯಂತ್ರಣ ಮಾಡೋದಲ್ಲ. ಬದಲಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡೋರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಆಗಿರುತ್ತದೆ. ಇದಲ್ಲದೇ ಅನೇಕ ಕಡೆ ರಸ್ತೆಯಲ್ಲಿ ಗುಂಡಿ ಬಿದ್ದಾಗ ಅವುಗಳನ್ನು ತಾವೇ ಸ್ವತಹ ಮುಚ್ಚಿದ್ದು ನಡೆದಿದೆ. ಇದರ ನಡುವೆ ಈ ಸಂಚಾರಿ ಮಹಿಳಾ ಹೆಡ್ ಕಾನ್ಸ್ ಸ್ಟೇಬಲ್ ಕೆಲಸ ಮಾತ್ರ ಎಲ್ಲರೂ ಮೆಚ್ಚುವಂತದ್ದು. ಜೊತೆಗೆ ಮೇಡಂ ಹ್ಯಾಟ್ಸ್ ಆಫ್ ಅನ್ನದೇ ಇರೋಕಾಗಲ್ಲ. ಅನೇನು ಅಂತ ಮುಂದೆ ಓದಿ. ಕಾನೂನು ಪಾಲನೆ ಒಂದೆಡೆಯಾದ್ರೇ, ಮಾತೃ ಮಮತೆ ಇನ್ನೊಂದು ಕಡೆ ಎಂಬುದಕ್ಕೆ ಕುಶಾಲನಗರದ ಸಂಚಾರಿ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಆಶಾ ಸಾಕ್ಷಿಯಾಗಿದ್ದಾರೆ. ಶಾಲಾ ಮಕ್ಕಳ ಬಗ್ಗೆ ಇವರು ತೋರಿದಂತ ಕಾಳಜಿ, ಕಾನೂನು ಪಾಲನೆಯ ಜೊತೆಗೆ ಮಕ್ಕಳ ಜೀವ ರಕ್ಷಣೆಯ ಮಹತ್ವದ ಕೆಲಸವನ್ನೇ ಮಾಡಿದ್ದಾರೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಅವರು ಮಾಡಿದಂತ ಕೆಲಸದ ವೀಡಿಯೋ ನೋಡಿದಂತ ಪ್ರತಿಯೊಬ್ಬರು ಹೇಳೋ ಮಾತಾಗಿದೆ. ಈ ಬಗ್ಗೆ Coorg the kashmir of…
ಬೆಂಗಳೂರು: ಲೋಕಸಭಾ ಚುನಾವಣೆಯನ್ನು ಪಾರದರ್ಶಕ, ಅಕ್ರಮ ರಹಿತವಾಗಿ ನಡೆಸೋದಕ್ಕೆ ಚುನಾವಣಾ ಆಯೋಗ ನಿರ್ಧರಿಸಿದೆ. ಅಕ್ರಮ ತಗೆಡೆ ವಿವಿಧ ಕ್ರಮ ಕೈಗೊಂಡಿದ್ದರೇ, ಮತದಾರರಿಗೆ ತಮ್ಮ ಕ್ಷೇತ್ರದ ಅಭ್ಯರ್ಥಿ ಮಾಹಿತಿ ಒಂದೇ ಕ್ಲಿಕ್ ನಲ್ಲಿ ಲಭ್ಯವಾಗುವಂತೆಯೂ ಮಾಡಿದೆ. ಅದು ಹೇಗೆ ಅಂತ ಮುಂದೆ ಓದಿ. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಚುನಾವಣಾ ಆಯೋಗವು ಅಭ್ಯರ್ಥಿಗಳ ಮಾಹಿತಿ ಮತದಾರರಿಗೆ ಕುಳಿತಲ್ಲೇ ಸಿಗುವಂತೆ ಮಾಡಿದೆ. ಆಯ್ಕೆಗಳು ಹಲವಾರಿದ್ದರೂ, ನೀವು ಆಯ್ಕೆ ಮಾಡೋಕೆ ಆಗೋದು ಒಂದೇ ಅಭ್ಯರ್ಥಿ ಮಾತ್ರ. ಅವರು ಯಾರಾಗಿರಬೇಕು ಎನ್ನುವ ಮಾಹಿತಿಯನ್ನು ನೀವು ಅವರ ಬಗ್ಗೆ ತಿಳಿದುಕೊಂಡು ಮಾಡೋದು ಒಳಿತು ಅಂತ ಹೇಳಿದೆ. ಈ ಹಿನ್ನಲೆಯಲ್ಲಿ ಮತದಾರರ ಎಲ್ಲರೂ KYC-ECI ಬಳಸಿ, ಅಭ್ಯರ್ಥಿಗಳ ಅಫೀಡೆವಿಟ್ ನಲ್ಲಿ ತುಂಬಿರುವಂತ ಮಾಹಿತಿಯನ್ನು ತಿಳಿದುಕೊಳ್ಳಿ. ಈ ಮೂಲಕ ಲೋಕಸಭಾ ಕಣದಲ್ಲಿರುವಂತ ಅಭ್ಯರ್ಥಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳ್ಕೊಳ್ಳೋದು ಮರೆಯಬೇಡಿ ಅಂತ ತಿಳಿಸಿದೆ. ಸೋ ನೀವು ನಿಮ್ಮ ಕ್ಷೇತ್ರದ ಅಭ್ಯರ್ಥಿಗಳ ಕುರಿತು ಸಕಲ ಮಾಹಿತಿಯನ್ನು ಈಗ ಒಂದೇ ಕ್ಲಿಕ್ಕಿನಲ್ಲಿ ಪಡೆಯೋದಕ್ಕಾಗಿ, ಈ ಕೂಡಲೇ…
ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಜೂನ್.4ರಂದು ಫಲಿತಾಂಶ ಘೋಷಣೆಯಾಗಲಿದೆ. ಈ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಕಾರಣಗಳಿಗೆ ಪ್ರಕರಣಗಳು ದಾಖಲಾಗಿದ್ದಾವೆ. ಹಾಗಾದ್ರೇ ಎಷ್ಟು ಪ್ರಕರಣ ದಾಖಲಾಗಿದ್ದಾವೆ ಅಂತ ಮುಂದೆ ಓದಿ. ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದಿಂದ ಮಾಹಿತಿ ನೀಡಿದ್ದು, a. ಕ್ಷಿಪಪಡೆಗಳು (FS), ಸ್ಥಿರ ಕಣಾವಲು ತಂಡಗಳು (SST) ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ (Freebies) ವಶಪಡಿಸಿಕೊಂಡ ಪಕರಣಗಳಿಗೆ ಸಂಬಂಧಿಸಿದಂತೆ 600 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.b. 79,349 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಲಾಗಿದೆ, 838 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ, 8 ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ, CRPCಯ ತಡೆಗಟ್ಟುವ ವಿಭಾಗಗಳ ಅಡಿಯಲ್ಲಿ 4,629 ಪ್ರಕರಣಗಳನ್ನು ದಾಖಲಿಸಿದೆ, ಅದರಲ್ಲಿ 5,156 ವ್ಯಕ್ತಿ / ವ್ಯಕ್ತಿಗಳನ್ನು ಒಳಪಟ್ಟ ಪಕರಣಗಳನ್ನು ದಾಖಲಿಸಿದೆ ಎಂದಿದೆ. C. ಅಬಕಾರಿ ಇಲಾಖೆ ಘೋರ ಅಪರಾಧ ಅಡಿಯಲ್ಲಿ 624 ಪ್ರಕರಣಗಳನ್ನು ದಾಖಲಿಸಿದೆ,…