Author: kannadanewsnow09

ಬೆಂಗಳೂರು: ರಾಜ್ಯದಲ್ಲಿ‌ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಗಳಿಗೆ ಪೌಷ್ಠಿಕ ಆಹಾರ ಒದಗಿಸುವ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಚಾಲನೆ ನೀಡಿದರು.  ಒಂದೇ ರೀತಿಯ ಸಾಮಾನ್ಯ ಆಹಾರದ ಬದಲು ರೋಗಿಗಳಿಗೆ ಅಗತ್ಯ ಪೌಷ್ಠಿಕಾಂಶ ಒದಗಿಸುವ ಆಹಾರವನ್ನು ನೀಡುವ ಯೋಜನೆಯನ್ನು ಆರೋಗ್ಯ ಇಲಾಖೆ ಇಸ್ಕಾನ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಜಾರಿಗೆ ತಂದಿದೆ. ಬೆಂಗಳೂರಿನ ಸಿ.ವಿ ರಾಮನ್ ನಗರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಹಾರ ವಿತರಿಸುವ ಮೂಲಕ ‘ವಿಶೇಷ ಪೌಷ್ಟಿಕ ಆಹಾರ’ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವರು, ರೋಗಿಗಳ ಚೇತರಿಕೆಗೆ ಚಿಕಿತ್ಸೆಯ ಜೊತೆಗೆ ಪೌಷ್ಠಿಕ ಆಹಾರ ಸೇವನೆ ಕೂಡ ಮಹತ್ವದ ಪಾತ್ರ ವಹಿಸಲಿದೆ.. ಈ ಯೋಜನೆಯ ಮೂಲಕ ರೋಗಿಗಳ ನಿರ್ದಿಷ್ಟ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರವನ್ನ ಒದಗಿಸಲಾಗುವುದು. ರೋಗಿಗಳ ಆರೋಗ್ಯ ಸ್ಥಿತಿ ಮತ್ತು ವಯಸ್ಸಿಗೆ ಅನುಗುಣವಾಗಿ ಪೌಷ್ಟಿಕಾಂಶದ ಅಗತ್ಯಗಳು ಭಿನ್ನವಾಗಿರುವುದರಿಂದ, ಎಲ್ಲರಿಗೂ ಒಂದೇ ರೀತಿಯ ಆಹಾರ ಸೂಕ್ತವಲ್ಲ. ಆಹಾರ ಪದ್ಧತಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದ್ದು, ರೋಗಿಗಳ…

Read More

ಯಾದಗಿರಿ: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ, ಶಾಕಿಂಗ್ ಕೃತ್ಯ ಎನ್ನುವಂತೆ ಚಿಕ್ಕಮ್ಮನ ಮೇಲೆಯೇ ಪೊಲೀಸ್ ಕಾನ್ಸ್ ಸ್ಟೇಬಲ್ ಹಾಗೂ ಸಹೋದರ ಅತ್ಯಾಚಾರವೆಸಗಿರುವಂತ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಗಿರುಮಿಠಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಚಾರ ಠಾಣೆಯ ಕಾನ್ಸ್ ಸ್ಟೇಬಲ್ ರಮೇಶ್ ಹಾಗೂ ಆತನ ಸಹೋದರ ಜೆಸ್ಕಾಂ ನೌಕರನಾಗಿರುವಂತ ಲಕ್ಷ್ಮಣ್ ಸೇರಿಕೊಂಡು ಚಿಕ್ಕಪ್ಪನ ಪತ್ನಿ ಚಿಕ್ಕಮ್ಮನ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗಿರುವಂತ ಘಟನೆ ಬೆಳಕಿಗೆ ಬಂದಿದೆ. ನಿರಂತರ ಅತ್ಯಾಚಾರದಿಂದ ಬೇಸತ್ತು ಸಂತ್ರಸ್ತೆ ಯಾದಗಿರಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಯಾದಗಿರಿ ಸಂಚಾರ ಠಾಣೆಯ ಕಾನ್ ಸ್ಟೇಬಲ್ ರಮೇಶ್ ಹಾಗೂ ಆತನ ಸಹೋದರ ಜೆಸ್ಕಾಂ ನೌಕರ ಲಕ್ಷ್ಮಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಂದಹಾಗೇ ಸತತ 7 ವರ್ಷಗಳಿಂದ ಜೀವ ಬೆದರಿಕೆ ಹಾಕಿ ಪೇದೇ, ಜೆಸ್ಕಾಂ ನೌಕರ ನಿರಂತರವಾಗಿ ಚಿಕ್ಕಮ್ಮನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. https://kannadanewsnow.com/kannada/udays-counter-to-yatnals-statement-those-who-did-not-join-the-bjp-earlier-will-they-join-now/ https://kannadanewsnow.com/kannada/the-government-has-ordered-the-appointment-of-commissioners-to-the-five-municipalities-of-the-greater-bangalore-authority/

Read More

ಮಂಡ್ಯ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಹಿಂದೆಯೇ ಬಿಜೆಪಿಯಲ್ಲಿ ಸಾಕಷ್ಟು ಹುದ್ದೆಗಳ ಆಮೀಷಗಳು ಬಂದಿದ್ದವು. ಆದರೆ, ಆಗಲೇ ಬಿಜೆಪಿ ಸೇರದವರು ಈಗ ಸೇರ್ತಾರಾ ಎಂದು ಶಾಸಕ ಕೆ.ಎಂ.ಉದಯ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೋರಾಪುರ, ಕುದುರಗುಂಡಿ, ಅಜ್ಜಹಳ್ಳಿ, ಮಠದದೊಡ್ಡಿ, ಬೊಮ್ಮನದೊಡ್ಡಿ, ಕಳ್ಳಿಮೆಳೆದೊಡ್ಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ನಾಯಕರು ಪಕ್ಷ ಸೇರ್ಪಡೆಗೆ ಹಲವು ಬಾರಿ ಚರ್ಚೆ ನಡೆಸಿ ಮಹತ್ವದ ಹುದ್ದೆಗಳ ಆಮೀಷ ನೀಡಿದ್ದರು. ಅವರು ಸಹ ಬಿಜೆಪಿ ಸೇರಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದಿತ್ತು. ಆದರೆ, ಅವರು ಅಂತಹ ನಿರ್ಧಾರ ತೆಗೆದುಕೊಳ್ಳಲಿಲ್ಲ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದಾರೆ. ಪಕ್ಷ ನಿಷ್ಠೆ, ಪ್ರಾಮಾಣಿಕತೆ ಮತ್ತು ಪ್ರಬುದ್ದತೆಯಿಂದ ಕಾಂಗ್ರೆಸ್ ಪಕ್ಷವನ್ನು ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ರಾಜ್ಯಾದ್ಯಂತ ಹಗಲಿರುಳು ಪ್ರವಾಸ ಮತ್ತು ಸಂಘಟನೆ ಮಾಡಿ ರಾಜ್ಯದಲ್ಲಿ 136 ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಹೀಗಾಗಿ…

Read More

ಬೆಂಗಳೂರು: ನಗರದಲ್ಲಿ ಪ್ರಯಾಣಿಕರ ಸಮೇತ ಬಸ್ ಒಂದನ್ನು ಟ್ರಾಫಿಕ್ ಪೊಲೀಸರು ಸೀಜ್ ಮಾಡಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬಳಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಬೆಂಗಳೂರಿನ ಹೆಬ್ಬಾಳದ ಬಳಿಯಲ್ಲಿ ಹೊಸಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸನ್ನು ಚಾಲಕ ಎಸ್ಟೀಮ್ ಮಾಲ್ ಬಳಿಯಲ್ಲಿ ನಿಲ್ಲಿಸಿದ್ದನು. ಇಂತಹ ಬಸ್ಸನ್ನು ಸಂಜಯ ನಗರ ಸಂಚಾರ ಠಾಣೆಯ ಪೊಲೀಸರು ಸೀಜ್ ಮಾಡಿದ್ದರು. ರಸ್ತೆಯಲ್ಲಿ ಸ್ಟಾಪ್ ನೀಡದ್ದಕ್ಕೆ ಪ್ರಯಾಣಿಕರ ಸಮೇತ ಕೆ ಎಸ್ ಆರ್ ಟಿ ಸಿ ಬಸ್ಸನ್ನು ಸಂಚಾರ ಪೊಲೀಸರು ಸೀಜ್ ಮಾಡಿದ್ದಾರೆ. ಕೆ ಎಸ್ ಆರ್ ಟಿ ಸಿ ಬಸ್ಸನ್ನು ಸ್ಟೇಷನ್ನಿಗೆ ಸಂಚಾರ ಠಾಣೆಯ ಕಾನ್ಸ್ ಟೇಬಲ್ ಕೊಂಡೊಯ್ದಿದ್ದಾರೆ. ಪ್ರಯಾಣಿಕರು ತುರ್ತಾಗಿ ಹೋಗಬೇಕು ಎಂಬುದಾಗಿ ಮನವಿ ಮಾಡಿದರೂ, ಅದಕ್ಕೆ ಬಗ್ಗದೇ ಬಸ್ ಜಪ್ತಿಯನ್ನು ಪೊಲೀಸರು ಮಾಡಿದ್ದಾರೆ. https://kannadanewsnow.com/kannada/shock-to-those-who-tortured-the-kalinga-snake-for-a-photo-shoot-forest-minister-eshwar-khandre-orders-an-investigation/ https://kannadanewsnow.com/kannada/the-government-has-ordered-the-appointment-of-commissioners-to-the-five-municipalities-of-the-greater-bangalore-authority/

Read More

ಬೆಂಗಳೂರು: ಸಂಶೋಧನೆ, ಅಧ್ಯಯನದ ಹೆಸರಿನಲ್ಲಿ ವನ್ಯ ಜೀವಿ ಅಭಯಾರಣ್ಯದಲ್ಲಿ ಕಾಳಿಂಗ ಸರ್ಪಕ್ಕೆ ಪೋಟೋ ಶೂಟ್ ಹೆಸರಿನಲ್ಲಿ ಕಾಟ ಕೊಟ್ಟಿದ್ದು ವೈರಲ್ ಆಗಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆ ನಡೆಸಿ, ವರದಿಗೆ ಸೂಚಿಸಿದ್ದಾರೆ. ಈ ವರದಿಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ಇಂದು ಈ ಕುರಿತಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪತ್ರ ಬರೆದಿದ್ದಾರೆ. ಅದರಲ್ಲಿ ಜನ ಸಂಗ್ರಾಮ ಪರಿಷತ್ತು. ಶಿವಮೊಗ್ಗ ಜಿಲ್ಲಾಧ್ಯಕ್ಷ ಅಖಿಲೇಶ್ ಚಿಪ್ಸ್, ಪತ್ರಕರ್ತ ಉದಯ್ ಸಾಗರ್, ಕನಕಪುರ ತಾಲೂಕಿನ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಇ- ಮೇಲ್ ಮೂಲಕ ಈ ಕಚೇರಿಗೆ ಸಲ್ಲಿಸಿರುವ ಸ್ವಯಂವೇದ್ಯ ಮನವಿ/ದೂರಿನ ಪ್ರತಿಯನ್ನು ಲಗತ್ತಿಸಲಾಗಿದ್ದು, ಅದರಲ್ಲಿ ಅವರು, ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ (ARRS)ದ ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿ, ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ, ತಲ್ಲೂರು ಗ್ರಾಮ ಸ.ನಂ.11 ಸೋಮೇಶ್ವರ ಅಭಯಾರಣ್ಯದ…

Read More

ಶಿವಮೊಗ್ಗ: ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ನೂರಾರು, ಸಾವಿರಾರು ಜನರಿಗೆ ಕಾರ್ಯಕ್ರಮದಲ್ಲಿ ಮಾತನಾಡುವವ ಮಾತು ಕೇಳಬೇಕೆಂದ್ರೆ ಮೈಕ್ ಬಹುಮುಖ್ಯ. ಒಂದು ವೇಳೆ ಮೈಕ್ ಕೈಕೊಟ್ರೆ ಕಾರ್ಯಕ್ರಮದ ಆಯೋಜಕರ ವಿರುದ್ಧ ಗರಂ ಆಗುವವರೇ ಹೆಚ್ಚು. ಆದರೇ ಇಂದು ಸಾಗರದಲ್ಲಿ ನಡೆದಂತ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟದ ವೇಳೆಯಲ್ಲಿ ಮೈಕ್ ಕೈ ಕೊಟ್ಟರೂ ಸೌಜನ್ಯ ಮೆರೆದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಮೈಕ್ ಇಲ್ಲದೇ ಗಟ್ಟಿ ಧ್ವನಿಯಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆ ಗಳಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನೆಹರು ಮೈದಾನದಲ್ಲಿ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಈ ಉದ್ಘಾಟನೆಯ ಬಳಿಕ ಡಯಾಸ್ ಬಳಿಗೆ ತೆರಳಿ ಮಾತನಾಡೋದಕ್ಕೆ ಪ್ರಾರಂಭಿಸಿದ ವೇಳೆಯಲ್ಲಿ ಮೈಕ್ ಕೈಕೊಟ್ಟಿತು. ಸೌಂಡ್ ಸಿಸ್ಟಮ್ ಹಾಕಿದ್ದಂತವರು ಎಷ್ಟೇ ರಿಪೇರಿ ಮಾಡಿದರೂ ಮೈಕ್ ಸರಿ ಹೋಗಲೇ ಇಲ್ಲ. ಈ ವೇಳೆ ಸಿಟ್ಟಾಗದಂತ ಶಾಸಕ ಗೋಪಾಲಕೃಷ್ಣ ಬೇಳೂರು, ಮೈಕ್ ಇಲ್ಲದೆಯೂ ಬಹುದೊಡ್ಡ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದಂತ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನೆರೆದಿದ್ದಂತ ಮಕ್ಕಳನ್ನು…

Read More

ಬೆಳ್ತಂಗಡಿ: ಧರ್ಮಸ್ಥಳದ ಬುರುಡೆ ಷಡ್ಯಂತ್ರದಲ್ಲಿ ಯೂಟ್ಯೂಬರ್ ಗಳ ಕೈವಾಡವಿದೆ. ಈ ಕುರಿತಂತೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಹೋರಾಟಗಾರ ಪ್ರಶಾಂತ್ ಸಂಬರಗಿ ಎಸ್ಐಟಿಗೆ ದೂರು ನೀಡಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮತಿ ಇಲ್ಲದೆ ಯಾವುದೇ ಸುದ್ದಿ ಮತ್ತು ಪ್ರಸ್ತುತ ಘಟನೆಗಳ ಮಾಹಿತಿ ಮತ್ತು ಸುದ್ದಿಯನ್ನು ಬಿತ್ತರಿಸುವಂತಿಲ್ಲ. ರಾಷ್ಟ್ರದ ಹಿತಾಸಕ್ತಿಯಿಂದ ಸುದ್ದಿ ಪ್ರಸಾರಕ್ಕೆ ಸಚಿವಾಲಯದ ಅನುಮತಿ ಅಗತ್ಯ. ಆದರೆ ಯೂಟ್ಯೂಬ್ ಚಾನೆಲ್ ಗಳಾದ ಡಿ ಟಾಕ್ಸ್ , ಕುಡ್ಲ ರ್ಯಾಂಪೇಜ್, ಮಹಮ್ಮದ ಸಮೀರ್, ವಾರ್ತಾ ಭಾರತಿ, ಕನ್ನಡ ಪ್ಲಾನೆಟ್ ಇವರುಗಳು ಸುದ್ದಿಯನ್ನು ಮತ್ತು ಸುಳ್ಳು ಸುದ್ದಿಯನ್ನು ಬಿತ್ತರ ಮಾಡಿದಲ್ಲದೆ. ಪ್ರೊಟೆಕ್ಟೆಡ್ ವಿಟ್ನೆಸ್ ಸ್ಕೀಮ್ ಅಡಿಯಲ್ಲಿದ್ದ ಚಿನ್ನಯ್ಯನ ಕಾನೂನು ಬಾಹಿರವಾಗಿ ಸಂದರ್ಶನ ಮಾಡಿ ಎಂದಿದ್ದಾರೆ. ಭಾರತೀಯ ಕಾನೂನನ್ನು ನಗೆಪಾಟಲಿ ಮಾಡಿದ್ದಾರೆ. ಚಿನ್ನಯ್ಯನ್ನ ಸಂದರ್ಶನವನ್ನು ದೂರು ದಾಖಲಾತಿಗೂ ಮುನ್ನ ಅಥವಾ ದೂರು ದಾಖಲಾದ ನಂತರ…

Read More

ರಾಜಸ್ಥಾನದ ಬಿಕಾನೇರ್‌ನಲ್ಲಿ ಸಂಜಯ್ ಲೀಲಾ ಬನ್ಸಾಲಿ ಮತ್ತು ಇತರ ಇಬ್ಬರ ವಿರುದ್ಧ ವಂಚನೆ, ದುರುಪಯೋಗ ಮತ್ತು ನಂಬಿಕೆ ದ್ರೋಹದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಈ ಎಫ್‌ಐಆರ್ ಭನ್ಸಾಲಿ ಅವರ ಮುಂಬರುವ ಚಿತ್ರ ಲವ್ & ವಾರ್‌ಗೆ ಸಂಬಂಧಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಎಫ್‌ಐಆರ್ ವರದಿಯ ಪ್ರಕಾರ, ಪ್ರತೀಕ್ ರಾಜ್ ಮಾಥುರ್ ಅವರು ದೂರು ದಾಖಲಿಸಿದ್ದಾರೆ, ಅವರು ಬನ್ಸಾಲಿ ಅವರಿಂದ ಲೈನ್ ಪ್ರೊಡ್ಯೂಸರ್ ಆಗಿ ಒಪ್ಪಂದವನ್ನು ಪಡೆದಿದ್ದಾರೆ ಎಂದು ಹೇಳಿಕೊಂಡರು, ಆದರೆ ನಂತರ ಅದನ್ನು ರದ್ದುಗೊಳಿಸಲಾಯಿತು. ಸರ್ಕಲ್ ಆಫೀಸರ್ (ಬಿಕಾನೇರ್ ಸದರ್) ವಿಶಾಲ್ ಜಾಂಗಿಡ್ ಅವರು ಪಿಟಿಐಗೆ ಮಾಥುರ್ ಅವರು ಬನ್ಸಾಲಿ ಮತ್ತು ಅವರ ಇಬ್ಬರು ತಂಡದ ಸದಸ್ಯರು ಲೈನ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿಗಳನ್ನು ವಹಿಸಿದ ನಂತರ ಪಾವತಿ ಇಲ್ಲದೆ ಯೋಜನೆಯಿಂದ ತಮ್ಮನ್ನು ತೆಗೆದುಹಾಕಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಹೇಳಿದರು. ನ್ಯಾಯಾಲಯದ ಆದೇಶದ ಮೇರೆಗೆ ಸೋಮವಾರ ಬಿಚ್ವಾಲ್…

Read More

ನವದೆಹಲಿ: ಕೃತಕ ಬುದ್ಧಿಮತ್ತೆ ಮತ್ತೊಮ್ಮೆ ತಂತ್ರಜ್ಞಾನ ಜಗತ್ತನ್ನು ಅಲ್ಲಾಡಿಸುತ್ತಿದೆ. ಈ ಬಾರಿ ಸೇಲ್ಸ್‌ಫೋರ್ಸ್‌ನಲ್ಲಿ. ಅಮೇರಿಕನ್ ಕ್ಲೌಡ್ ಸಾಫ್ಟ್‌ವೇರ್ ದೈತ್ಯ 4,000 ಗ್ರಾಹಕ ಬೆಂಬಲ ಉದ್ಯೋಗಗಳನ್ನು ಕಡಿತಗೊಳಿಸಿದೆ. ಒಂದು ಕಾಲದಲ್ಲಿ ಜನರಿಂದ ನಿರ್ವಹಿಸಲ್ಪಡುತ್ತಿದ್ದ ಕಾರ್ಯಗಳನ್ನು ನಿರ್ವಹಿಸಲು AI ಮೇಲೆ ಹೆಚ್ಚು ಅವಲಂಬಿತವಾಗಿದೆ. ಸಿಇಒ ಮಾರ್ಕ್ ಬೆನಿಯೋಫ್ ಲೋಗನ್ ಬಾರ್ಟ್ಲೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಈ ಕ್ರಮವನ್ನು ದೃಢಪಡಿಸಿದರು, ಬೆಂಬಲ ತಂಡವನ್ನು 9,000 ರಿಂದ 5,000 ಉದ್ಯೋಗಿಗಳಿಗೆ ಇಳಿಸಲಾಗಿದೆ ಎಂದು ಬಹಿರಂಗಪಡಿಸಿದರು. “ನನ್ನ ಬೆಂಬಲದಲ್ಲಿ ನನ್ನ ಮುಖ್ಯಸ್ಥರ ಸಂಖ್ಯೆಯನ್ನು ಮರುಸಮತೋಲನಗೊಳಿಸಲು ನನಗೆ ಸಾಧ್ಯವಾಯಿತು. ನನಗೆ ಕಡಿಮೆ ಮುಖ್ಯಸ್ಥರ ಅಗತ್ಯವಿದ್ದ ಕಾರಣ ನಾನು ಅದನ್ನು 9,000 ಮುಖ್ಯಸ್ಥರಿಂದ ಸುಮಾರು 5,000 ಕ್ಕೆ ಇಳಿಸಿದೆ” ಎಂದು ಬೆನಿಯೋಫ್ ಹೇಳಿದರು. ವಾಸ್ತವವಾಗಿ, ಸೇಲ್ಸ್‌ಫೋರ್ಸ್‌ನ ಬೆಂಬಲ ವಿಭಾಗದ ಸುಮಾರು ಅರ್ಧದಷ್ಟು ಭಾಗವನ್ನು ಕಡಿಮೆ ಮಾಡಲಾಗಿದೆ. ಈ ನಿರ್ಧಾರವು ಕೇವಲ ಎರಡು ತಿಂಗಳ ಹಿಂದೆ ಬೆನಿಯೋಫ್ ಅವರ ಸ್ವಂತ ಕಾಮೆಂಟ್‌ಗಳಿಂದ ಸಂಪೂರ್ಣವಾಗಿ ಹಿಮ್ಮುಖವಾಗಿದೆ. ಜುಲೈನಲ್ಲಿ, ಅವರು ಫಾರ್ಚೂನ್‌ಗೆ AI ಕಾರ್ಮಿಕರನ್ನು ಬದಲಾಯಿಸುವ ಬದಲು ಅವರನ್ನು…

Read More

ಬೆಂಗಳೂರು: ಅಕ್ರಮ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಗೆ ಬಿಗ್ ಶಾಕ್ ನೀಡಲಾಗಿದೆ. ಡಿಆರ್ ಐನಿಂದ 127 ಕೆಜಿ ಚಿನ್ನ ಅಕ್ರಮ ಸಾಗಾಟ ಸಾಬೀತಾದ ಹಿನ್ನಲೆಯಲ್ಲಿ ನಟಿ ರನ್ಯಾ ರಾವ್ ಗೆ ಬರೋಬ್ಬರಿ 102 ಕೋಟಿ ರೂಪಾಯಿ ದಂಡವನ್ನು ಕಟ್ಟುವಂತೆ ಡಿ ಆರ್ ಐ ನೋಟಿಸ್ ನೀಡಿ, ಬಿಗ್ ಶಾಕ್ ನೀಡಿದೆ. ಸ್ಯಾಂಡಲ್ ವುಟ್ ನಟಿ ರನ್ಯಾ ರಾವ್ ಗೆ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಡಿ ಆರ್ ಐ ಬಿಗ್ ಶಾಕ್ ನೀಡಲಾಗಿದೆ. 127 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ್ದು ಸಾಬೀತಾದ ಹಿನ್ನಲೆಯಲ್ಲಿ 102 ಕೋಟಿ ರೂಪಾಯಿ ದಂಡ ಪಾವತಿ ಮಾಡುವಂತೆ ನಟಿ ರನ್ಯಾ ರಾವ್ ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಸೇರಿದಂತೆ ನಾಲ್ವರು ಆರೋಪಿಗಳಇಗೆ ಡಿ ಆರ್ ಐ ಶೋಕಾಸ್ ನೋಟಿಸ್ ನೀಡಿದೆ. ಈಗಾಗಲೇ ಇಡಿ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ…

Read More