Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರು ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಹೊರಬಂದಿದ್ದು, ನಂತರ ಅವರು ದಕ್ಷಿಣ ದೆಹಲಿಯ ಚತ್ತರ್ಪುರ ಎನ್ಕ್ಲೇವ್ನಲ್ಲಿರುವ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್ಡಿ) ಮುಖ್ಯಸ್ಥ ಅಭಯ್ ಸಿಂಗ್ ಚೌತಾಲ ಅವರ ತೋಟದ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. https://twitter.com/ANI/status/1962491546726797603 https://kannadanewsnow.com/kannada/ramanagara-district-hospital-radiologist-dr-shashi-suspended-for-conducting-gender-identification-test-in-government-hospital/ https://kannadanewsnow.com/kannada/india-provides-aid-to-earthquake-affected-afghan-refugees-1000-family-tents-dispatched-to-afghanistan/
ಬೆಂಗಳೂರು: ಗರ್ಭಿಣಿ ಮಹಿಳೆಯರಿಗೆ ಲಿಂಗ ಪತ್ತೆ ಪರೀಕ್ಷೆ ಎಲ್ಲೆಡೆ ನಿಷೇಧವಿದೆ. ಹೀಗಿದ್ದರೂ ರಾಮನಗರ ಜಿಲ್ಲಾಸ್ಪತ್ರೆಯಲ್ಲೇ ಗರ್ಭಿಣಿ ಮಹಿಳೆಯೊಬ್ಬರಿಗೆ ಲಿಂಗಪತ್ತೆ ಪರೀಕ್ಷೆ ನಡೆಸಿ, ಆಕೆ ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾದಂತ ರೇಡಿಯಾಲಜಿಸ್ಟ್ ಡಾ.ಶಶಿ ಎಸ್.ಎಲ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ. ಇಂದು ಈ ಕುರಿತು ಆರೋಗ್ಯ ಮತ್ತು ಕುಟುಂಬ ಸೇವೆಗಳ ಶಿಸ್ತು ಪ್ರಾಧಿಕಾರ ಹಾಗೂ ಆಯುಕ್ತರಾದಂತ ಶಿವಕುಮಾರ್.ಕೆಪಿ ಅವರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಹರ್ಷಿತಾ w/o ಚನ್ನಕೇಶವ, ವಯಸ್ಸು 26 ವರ್ಷಗಳು ತೀವ್ರವಾದ ರಕ್ತಸ್ರಾವದಿಂದ ವಾಣಿ ವಿಲಾಸ ಆಸ್ಪತ್ರೆಯಲ್ಲಿ OBG unit D ನಲ್ಲಿ ದಾಖಲಾಗಿರುತ್ತಾರೆ. ಸದರಿ ಪ್ರಕರಣದ ಕುರಿತು ಅನುಮಾನ ಉಂಟಾಗಿ, ಗುಪ್ತ ಮಾಹಿತಿಯೊಂದಿಗೆ ವಿಚಾರಣೆಯ ಸಲುವಾಗಿ ದಿನಾಂಕ: 23-08-2025 ರಂದು ಮಧ್ಯಾಹ್ನ 3.00 ಗಂಟೆಗೆ ಉಪನಿರ್ದೇಶಕರು, ಪಿ.ಸಿ & ಪಿ.ಎನ್.ಡಿ.ಟಿ. ಹಾಗೂ ತಂಡ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಸಕ್ಷಮ ಪ್ರಾಧಿಕಾರದ ಪರವಾಗಿ ಡಾ. ರವೀಂದ್ರನಾಥ ಮೇಟಿ, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾದ ಡಾ. ಸಿರಾಜುವುದ್ದೀನ್ ಮದನಿ,…
ನವದೆಹಲಿ: ಇಂದು 6.3ರ ತೀವ್ರತೆಯಲ್ಲಿ ಪ್ರಬಲ ಭೂಕಂಪನ ಅಫ್ಘಾನಿಸ್ತಾನದಲ್ಲಿ ಉಂಟಾಗಿತ್ತು. ಈ ಭೂಕಂಪದಿಂದಾಗಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇಂತಹ ಅಫ್ಘಾನ್ ಜನತೆಯ ನೆರವಿಗೆ ಭಾರತ ದಾವಿಸಿದ್ದು, 1000 ಫ್ಯಾಮಿಲಿ ಟೆಂಟ್ ಗಳನ್ನು ರವಾನಿಸಿದೆ. ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ರವಿಶಂಕರ್ ಮಾಹಿತಿ ಹಂಚಿಕೊಂಡಿದ್ದು, ಅಫ್ಘಾನಿಸ್ತಾನ ವಿದೇಶಾಂಗ ಸಚಿವರ ಜೊತೆಗೆ ಚರ್ಚೆ ನಡೆಸಲಾಗಿದೆ. ಪ್ರಧಾನಿ ಮೋದಿಯವರ ಸೂಚನೆಯಂತೆ ಅಫ್ಘಾನಿಸ್ತಾನಕ್ಕೆ ಭಾರತ ಎಲ್ಲಾ ರೀತಿಯ ನೆರವಾಗುವುದಾಗಿ ಹೇಳಿದರು. ಇಂದು ಭಾರತದಿಂದ 1000 ಫ್ಯಾಮಿಲಿ ಟೆಂಟ್ ಗಳನ್ನು ಅಫ್ಘಾನಿಸ್ತಾನಕ್ಕೆ ರವಾನಿಸಲಾಗಿದೆ. 15 ಟನ್ ಆಹಾರ ಸಾಮಗ್ರಿ ಕೂಡ ಕಳುಹಿಸುತ್ತಿದ್ದೇವೆ. ನಾಳೆ ಕೂಡ ಎಲ್ಲಾ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡುತ್ತೇವೆ. ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ತಿಳಿಸಿದರು. https://kannadanewsnow.com/kannada/clash-during-ganesh-idol-immersion-procession-in-shivamogga/ https://kannadanewsnow.com/kannada/in-the-speech-at-the-dharmasthala-bjp-meeting-the-state-president-prahlad-joshi-said-according-to-ashok-edavatt/
ಶಿವಮೊಗ್ಗ: ಜಿಲ್ಲೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ವೇಳೆಯಲ್ಲಿ ಗಲಾಟೆಯಾಗಿದೆ. ಶಿವಮೊಗ್ಗದ ಆಶ್ರಯ ಬಡಾವಣೆಯಲ್ಲಿ ಗಣೇಶ ವಿಸರ್ಜನೆ ವೇಳೆಯಲ್ಲಿ ಗಲಾಟೆಯಾಗಿರುವುದಾಗಿ ತಿಳಿದು ಬಂದಿದೆ. ಶಿವಮೊಗ್ಗದ ಆಶ್ರಯ ಬಡಾವಣೆಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಹಿಂದೂಗಳ ಗುಂಪುಗಳ ನಡುವೆ ಗಲಾಟೆಯಾಗಿದೆ. ಇದನ್ನು ಬಿಜೆಪಿ ಕಾರ್ಯಕರ್ತ ಶಂಕರ್ ಹಿಂದೂ-ಮುಸ್ಲಿಂ ಗಲಾಟೆ ಎಂಬುದಾಗಿ ಬಿಂಬಿಸಲು ಯತ್ನಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗೋವಿಂದಪುರ ಬಡಾವಣೆಯ ನಿವಾಸಿಗಳು ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ. https://kannadanewsnow.com/kannada/in-the-speech-at-the-dharmasthala-bjp-meeting-the-state-president-prahlad-joshi-said-according-to-ashok-edavatt/ https://kannadanewsnow.com/kannada/rs-3105-78-crore-released-for-guarantee-schemes-in-hassan-district-state-vice-president-dinesh-gooligauda/
ಮಂಗಳೂರು: ಬಿಜೆಪಿಯಿಂದ ನಡೆಸಲಾಗುತ್ತಿರುವಂತ ಧರ್ಮಸ್ಥಳದಲ್ಲಿನ ಸಮಾವೇಶದ ಭಾಷಣದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಮಹಾ ಎಡವಟ್ಟು ಮಾಡಿದದಾರೆ. ಬಿವೈ ವಿಜಯೇಂದ್ರ ಬದಲು ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರೇ ಎಂಬುದಾಗಿ ಉಲ್ಲೇಖಿಸಿದ್ದು ಎಲ್ಲರನ್ನು ಗೊಂದಲಕ್ಕೆ ದೂಡಿತ್ತು. ರಾಜ್ಯ ಬಿಜೆಪಿ ನಾಯಕರಿಂದ ಧರ್ಮಸ್ಥಳ ಚಲೋ ಬಳಿಕ, ಇಂದು ಧರ್ಮಸ್ಥಳದಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಎಸ್ ಡಿ ಎಂ ಕಾಲೇಜು ಆವರಣದಲ್ಲಿ ನಡೆಯುತ್ತಿರುವಂತ ಧರ್ಮಸ್ಥಳ ಚಲೋ ಯಾತ್ರೆಯ ಸಮಾವೇಶದಲ್ಲಿ ಇಂದು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದರು. ತಮ್ಮ ಭಾಷಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರೇ ಎಂಬುದಾಗಿ ಕರೆದು ಗೊಂದಲಕ್ಕೆ ದೂಡಿದರು. ಬಳಿಕ ಎಚ್ಚೆತ್ತುಕೊಂಡಂತ ಅವರು, ಕ್ಷಮಿಸಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೇ ಎಂಬುದಾಗಿ ತಮ್ಮ ತಪ್ಪು ತಿದ್ದಿಕೊಂಡು ಭಾಷಣ ಮುಂದುವರೆಸಿದರು. https://kannadanewsnow.com/kannada/shocking-news-for-jewelry-lovers-gold-and-silver-prices-have-skyrocketed-to-record-levels/ https://kannadanewsnow.com/kannada/rs-3105-78-crore-released-for-guarantee-schemes-in-hassan-district-state-vice-president-dinesh-gooligauda/
ಹುಬ್ಬಳ್ಳಿ: ಹುಬ್ಬಳ್ಳಿ ವಿಭಾಗದ ಕ್ಯಾಸಲ್ ರಾಕ್-ಲೋಂಡಾ ಭಾಗದ ನಡುವೆ ನಡೆಯುತ್ತಿರುವ ಡಬ್ಲಿಂಗ್ ಕಾಮಗಾರಿಗಳ ಹಿನ್ನೆಲೆಯಲ್ಲಿ, ಲೋಂಡಾ ಮತ್ತು ಕ್ಯಾಸಲ್ ರಾಕ್ ನಡುವೆ ಈ ಕೆಳಗಿನ ರೈಲುಗಳ ಭಾಗಶಃ ರದ್ದತಿಯನ್ನು ವಿಸ್ತರಿಸಲಾಗಿದೆ. 1. ರೈಲು ಸಂಖ್ಯೆ 17333 ಮೀರಜ್ – ಕ್ಯಾಸಲ್ ರಾಕ್ ಡೈಲಿ ಎಕ್ಸ್ ಪ್ರೆಸ್ ಲೋಂಡಾ ಮತ್ತು ಕ್ಯಾಸಲ್ ರಾಕ್ ನಡುವೆ 31.10.2025 ರವರೆಗೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಲೋಂಡಾದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. 2. ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ – ಮೀರಜ್ ಡೈಲಿ ಎಕ್ಸ್ ಪ್ರೆಸ್ ಕ್ಯಾಸಲ್ ರಾಕ್ ಮತ್ತು ಲೋಂಡಾ ನಡುವೆ 31.10.2025 ರವರೆಗೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಲೋಂಡಾದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. https://kannadanewsnow.com/kannada/shocking-news-for-jewelry-lovers-gold-and-silver-prices-have-skyrocketed-to-record-levels/ https://kannadanewsnow.com/kannada/rs-3105-78-crore-released-for-guarantee-schemes-in-hassan-district-state-vice-president-dinesh-gooligauda/
ಹಾಸನ: ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಹಾಸನ ಜಿಲ್ಲೆಗೆ 3105.78 ಕೋಟಿ ರೂ. ಹಣ ಬಿಡುಗಡೆ ಆಗಿದ್ದು ಶೇ.99.5ರಷ್ಟು ಅನುಷ್ಠಾನಗೊಂಡಿರುವುದು ಶ್ಲಾಘನೀಯ ಎಂದು ಶಾಸಕರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಹೇಳಿದರು. ಜಿಲ್ಲಾ ಪಂಚಾಯತ್ ನಲ್ಲಿ ಹಮ್ಮಿಕೊಂಡಿದ್ದ ಹಾಸನ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲಾ ಕುಟುಂಬಗಳಿಗೆ ಆರ್ಥಿಕ ಚೈತನ್ಯ ತುಂಬುವುದರ ಜೊತೆಗೆ ರಾಜ್ಯದ ಆರ್ಥಿಕ ಪುನಶ್ಚೇತನಕ್ಕೂ ಸಹಕಾರಿಯಾಗಿದೆ ಎಂದರು. ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರುಗಳು ಮತ್ತು ಸದಸ್ಯರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಅವರನ್ನು ಅಭಿನಂದಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ನೋಟು ಅಮಾನ್ಯ, ಅವೈಜ್ಞಾನಿಕ ಜಿಎಸ್ ಟಿ ನೀತಿ, ಕೋರೋನಾ ಸಮಯದಲ್ಲಿನ ಲಾಕ್ ಡೌನ್ ನಿಂದ ಜನರು ಆರ್ಥಿಕವಾಗಿ ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿದ್ದರು. ಜನರಲ್ಲಿ…
ನವದೆಹಲಿ: ಸೆಪ್ಟೆಂಬರ್ ಮೊದಲ ದಿನದಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರವಾಗಿ ಏರಿಕೆಯಾಗಿ ಆಗಸ್ಟ್ನಲ್ಲಿ ಕಂಡುಬಂದ ಬಲವಾದ ಆವೇಗವನ್ನು ವಿಸ್ತರಿಸಿದವು. ಬೆಳ್ಳಿ ಬೆಲೆಗಳು ಹೊಸ ಗರಿಷ್ಠ ಮಟ್ಟವನ್ನು ತಲುಪಿ, ಪ್ರತಿ ಕಿಲೋಗ್ರಾಂಗೆ ₹1,000 ರಷ್ಟು ಏರಿಕೆಯಾಗಿ ₹1,26,000 ಕ್ಕೆ ತಲುಪಿದವು, 100 ಗ್ರಾಂ ಚಿಲ್ಲರೆ ಮಾರಾಟ ₹12,600 ಕ್ಕೆ ತಲುಪಿತು. ಆಗಸ್ಟ್ನ ಕೊನೆಯ 10 ದಿನಗಳಲ್ಲಿ ಚಿನ್ನದ ಬೆಲೆ 100 ಗ್ರಾಂಗೆ ₹30,000 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಇತ್ತೀಚಿನ ತಿಂಗಳುಗಳಲ್ಲಿ ಅತ್ಯಂತ ಕಡಿದಾದ ರ್ಯಾಲಿಗಳಲ್ಲಿ ಒಂದಾಗಿದೆ. ಜಾಗತಿಕ ಬೆಲೆ ಏರಿಕೆಯೊಂದಿಗೆ ಬೇಡಿಕೆ ಹೆಚ್ಚಾದ ಕಾರಣ ಬೆಳ್ಳಿ ಕೂಡ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ಸೋಮವಾರ ಮಧ್ಯಾಹ್ನದ ವಹಿವಾಟಿನಲ್ಲಿ ಬೆಳ್ಳಿ ಗಣಿಗಾರ ಹಿಂದೂಸ್ತಾನ್ ಜಿಂಕ್ ಷೇರುಗಳು ಶೇ. 3.6 ರಷ್ಟು ಏರಿಕೆಯಾಗಿ ₹434.65 ಕ್ಕೆ ತಲುಪಿವೆ. ದಸರಾ ಮತ್ತು ದೀಪಾವಳಿಯೊಂದಿಗೆ ಮುಂಬರುವ ಹಬ್ಬದ ಋತುವಿನಲ್ಲಿ ಗ್ರಾಹಕರ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಬೆಲೆಗಳನ್ನು ತೇಲುವಂತೆ ಮಾಡುವ ನಿರೀಕ್ಷೆಯಿದೆ. ಸೆಪ್ಟೆಂಬರ್ 1 ರಂದು,…
ಬೆಂಗಳೂರು: ನಗರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಪೂಜಾಶ್ರೀ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ವರ್ಷದ ಹಿಂದೆ ನಂದೀಶ್ ಎಂಬಾತನ ಜೊತೆಗೆ ಪೂಜಾಶ್ರೀ ವಿವಾಹವಾಗಿದ್ದರು. ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ವರದಕ್ಷಿಣೆ ಕಿರುಕುಳ ನೀಡಿ ಟಾರ್ಚನ್ ಕೊಡುತ್ತಿದ್ದರಿಂದ ಗೃಹಿಣಿ ಪೂಜಾಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. https://kannadanewsnow.com/kannada/rohit-sharma-passes-yo-yo-and-bronco-fitness-tests/ https://kannadanewsnow.com/kannada/do-you-sleep-a-lot-this-danger-is-guaranteed/
ನವದೆಹಲಿ: ಆಗಸ್ಟ್ 31 ರಂದು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಯೋ-ಯೋ ಮತ್ತು ಬ್ರಾಂಕೊ ಫಿಟ್ನೆಸ್ ಪರೀಕ್ಷೆಗಳನ್ನು ನಡೆಸಲಾಯಿತು. ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಅರ್ಶ್ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರು 2025 ರ ಏಷ್ಯಾ ಕಪ್ನಲ್ಲಿ ಭಾಗವಹಿಸುವ ಕೆಲವು ಹೆಸರುಗಳಾಗಿದ್ದವು. ಆದರೆ ನಿರ್ಣಾಯಕ ನಿಯೋಜನೆಗೆ ಮೊದಲು ಫಿಟ್ನೆಸ್ ಪರೀಕ್ಷೆಗೆ ತಮ್ಮ ಉಪಸ್ಥಿತಿಯನ್ನು ದಾಖಲಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಏಕದಿನ ಅಂತರರಾಷ್ಟ್ರೀಯ (ODI) ಸರಣಿಯನ್ನು ಆಡಲಿರುವ ಐಕಾನಿಕ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಫಿಟ್ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಾರ, ಮುಂಬರುವ ನಿಯೋಜನೆಗಳಿಗೆ ತಂಡದ ಭಾಗವಾಗಲು ಪ್ರತಿಯೊಬ್ಬ ಒಪ್ಪಂದದ ಆಟಗಾರನು ಯೋ-ಯೋ, ಬ್ರಾಂಕೊ, DEXA ಸ್ಕ್ಯಾನ್ಗಳು ಮತ್ತು ರಕ್ತ ಪರೀಕ್ಷೆಗಳಲ್ಲಿ ಉತ್ತೀರ್ಣನಾಗುವುದು ಶಾಸನಬದ್ಧವಾಗಿದೆ. https://twitter.com/rohitjuglan/status/1962165700652605504 ಖ್ಯಾತ ಪತ್ರಕರ್ತ ರೋಹಿತ್ ಜುಗ್ಲಾನ್ ಪ್ರಕಾರ, ಎಲ್ಲಾ ಟೀಮ್ ಇಂಡಿಯಾ ಆಟಗಾರರು ಹೆಚ್ಚಿನ ಅಂಕಗಳೊಂದಿಗೆ ಫಿಟ್ನೆಸ್ ಪರೀಕ್ಷೆಗಳಲ್ಲಿ…













