Subscribe to Updates
Get the latest creative news from FooBar about art, design and business.
Author: kannadanewsnow09
ಬೆಳಗಾವಿ: ಶಾಲೆ ಬಿಟ್ಟ ಮೇಲೆ ಬ್ಯಾಗ್ ತಗೆದುಕೊಂಡು ಬರುವಂತೆ ಸಹಪಾಠಿಗಳು ಹೇಳಿದ ಮಾತನ್ನು ಕೇಳದಿದ್ದಕ್ಕೇ ಸಿಟ್ಟಾಗಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿರುವಂತ ಘಟನೆ ಗೋಕಾಕ್ ನಲ್ಲಿ ನಡೆದಿದೆ. ಬೆಳಗಾವಿಯ ಗೋಕಾಕ್ ವಾಲ್ಮೀಕಿ ಮೈದಾನದಲ್ಲಿ ಶಾಲೆ ಬಿಟ್ಟಾಗ ತನ್ನ ಬ್ಯಾಗ್ ತರುವಂತೆ 10ನೇ ಕ್ಲಾಸ್ ವಿದ್ಯಾರ್ಥಿಗೆ ಸಹಪಾಠಿಗಳು ತಿಳಿಸಿದ್ದರು. ಆದರೇ ಶಾಲೆ ಬಿಟ್ಟ ನಂತ್ರ ವಿದ್ಯಾರ್ಥಿ ಸಹಪಾಠಿಗಳು ಹೇಳಿದಂತೆ ಅವರ ಬ್ಯಾಗ್ ತರೋದಕ್ಕೆ ನಿರಾಕರಿಸಿ ತಂದಿರಲಿಲ್ಲ. ಇದೇ ಕಾರಣಕ್ಕೆ ಮೈದಾನದಲ್ಲಿ ಜಗಳಕ್ಕೆ ಇಳಿದಂತ ಅಪ್ರಾಪ್ತ ಬಾಲಕರು, ವಿದ್ಯಾರ್ಥಿಯ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಕುತ್ತಿಗೆ, ಮೈಮೇಲೆ ಚಾಕು ಇರಿದು ಸ್ಥಳದಿಂದ ಅಪ್ರಾಪ್ತ ಸಹಪಾಠಿಗಳು ಪರಾರಿಯಾಗಿದ್ದಾರೆ. ಚಾಕು ಇರಿತಕ್ಕೆ ಒಳಗಾಗಿದ್ದಂತ 10ನೇ ತರಗತಿ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಗೋಕಾಕ್ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. https://kannadanewsnow.com/kannada/isro-to-launch-us-satellite-to-enable-voice-calls-via-smartphones-from-space/ https://kannadanewsnow.com/kannada/in-yet-another-big-shock-to-the-people-of-the-state-cabinet-approves-15-hike-in-bus-ticket-prices/
ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರಿಗೆ ಬಸ್ಸುಗಳ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. ಶೇ.15ರಷ್ಟು ಟಿಕೆಟ್ ದರ ಹೆಚ್ಚಳದ ಬಿಸಿ ಜನವರಿ 15ರಿಂದಲೇ ಜಾರಿಗೊಳ್ಳಲಿದೆ ಅಂತ ಸಚಿವ ಹೆಚ್.ಕೆ ಪಾಟೀಲ್ ಘೋಷಿಸಿದ್ದಾರೆ. ಇಂದು ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾರಿಗೆ ಬಸ್ ದರ ಏರಿಕೆಗೆ ಸಂಪುಟ ಸಮ್ಮತಿ ನೀಡಲಾಗಿದೆ. ಶೇ.15% ದರ ಏರಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು. ಕೆಎಸ್ ಆರ್ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ, ವಾಯುವ್ಯ ಕರ್ನಾಟಕ ಸಂಸ್ಥೆಗಳ ಬಸ್ ಗಳ ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತಿದೆ. ಜನವರಿ 5ರಿಂದ ಹೊಸ ಟಿಕೆಟ್ ದರ ಜಾರಿಯಾಗಲಿದೆ ಎಂದು ತಿಳಿಸಿದರು. 2015ರಂದು ಟಿಕೆಟ್ ದರ ಏರಿಕೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಏರಿಕೆ ಇರಲಿಲ್ಲ. 2015ರಲ್ಲಿ ಡಿಸೇಲ್ ದರ 60.98 ಇತ್ತು. 9.16 ಕೋಟಿ ಡಿಸೇಲ್ ವೆಚ್ಚ ಇತ್ತು. ಸಿಬ್ಬಂದಿ ವೆಚ್ಷವೂ 12 ರಿಂದ 18.36ಕ್ಕೆ ಏರಿದೆ. ಹೆಚ್ಚುವರಿ ಹೊರೆ ಸಾರಿಗೆ ನಿಗಮಗಳ ಮೇಲಿತ್ತು. ಹಾಗಾಗಿ ಬಸ್ ದರ ಏರಿಕೆ ಅನಿವಾರ್ಯವಾಗಿದೆ ಎಂದರು. https://kannadanewsnow.com/kannada/do-you-know-what-minister-ramalinga-reddy-said-about-the-15-per-cent-hike-in-bus-ticket-prices/ https://kannadanewsnow.com/kannada/in-yet-another-big-shock-to-the-people-of-the-state-cabinet-approves-15-hike-in-bus-ticket-prices/
ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದಿಸಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಏನು ಹೇಳಿದ್ರು ಅಂತ ಮುಂದೆ ಓದಿ. ಈ ಕುರಿತಂತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ದರ ಏರಿಸೋದಕ್ಕೆ ಬಿಎಂಟಿಸಿಯಲ್ಲಿ 2014ರಲ್ಲಿ ದರ ಏರಿಸಿದ್ದು. ಅವತ್ತು ಕೇವಲ 30 ರೂಪಾಯಿ ಡಿಸೇಲ್ ಇತ್ತು. 2020ರಲ್ಲಿ ವಾಯವ್ಯ, ಕಲ್ಯಾಣ ಕರ್ನಾಟಕ ಕೆಎಸ್ ಆರ್ ಟಿಸಿ ದರ ಏರಿಸಲಾಗಿತ್ತು. 2020ರಲ್ಲಿ ಪ್ರತಿದಿನ ಡಿಸೇಲ್ 9.16 ಕೋಟಿ ಖರ್ಚು ಮಾಡ್ತಿದ್ವು. ಈಗ 13 ಕೋಟಿ 21 ಲಕ್ಷ ಖರ್ಚಾಗುತ್ತಿದೆ. ಈ ಮೂಲಕ ಒಂದು ದಿನಕ್ಕೆ 10 ಕೋಟಿ ನಮಗೆ ಖರ್ಚಾಗುತ್ತಿದೆ ಎಂದರು. ನಾಲ್ಕು ವಿಭಾಗಗಳಿಂದಲೂ ದರ ಹೆಚ್ಚಳದ ಬಗ್ಗೆ ಕಳೆದ ಐದಾರು ತಿಂಗಳಿಂದ ಪ್ರಸ್ತಾಪ ಬಂದಿತ್ತು. ಈಗ ಶೇ.15 ಒಪ್ಪಿಗೆ ಸಿಕ್ಕಿದೆ. ಒಂದು ಸಾವಿರ ಕೋಟಿ ಬರಬಹುದು. ಆದ್ರೆ ನಷ್ಟದ ಪ್ರಮಾಣ ಕಡಿಮೆ ಆಗುತ್ತೆ. ಬಿಜೆಪಿ ಸರ್ಕಾರ 5900 ಕೋಟಿ ಸಾಲ ಬಿಟ್ಟು ಹೋಗಿದ್ದಾರೆ. ಅಷ್ಟು ಸಾಲ…
ಕಲಬುರ್ಗಿ: ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದಂತವರನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲಾಗಿದೆ. ಈ ಖೆಡ್ಡಾಕ್ಕೆ ಬಿದ್ದಂತ ವಿಚಾರವನ್ನು ಪತ್ನಿಗೆ ತಿಳಿಸಿ ಬ್ಲಾಕ್ ಮೇಲ್ ಮಾಡಿ, ಲಕ್ಷ ಲಕ್ಷ ಹಣವನ್ನು ವಂಚಕರು ಪೀಕಿದ್ದಾರೆ. ಕಲಬುರ್ಗಿಯ ಸೆನ್ ಠಾಣೆಯ ಪೊಲೀಸ್ ಪೇದೆಯನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲಾಗಿದೆ. ಪೇದೆಯ ಪೋಟೋವನ್ನು ಪತ್ನಿಗೆ ತೋರಿಸಿ 8 ಲಕ್ಷ ಪೀಕಿದ್ದಾರೆ. ಪೂಜ ಹಾಗೂ ಅಮರ್ ಸಿಂಗ್ ಎಂಬಾತ ಸೇರಿ ಸೆನ್ ಠಾಣೆಯ ಪೇದೆ ಹಾಗೂ ಪತ್ನಿಗೆ ಮತ್ತಷ್ಟು ಹಣ ನೀಡದೇ ಇದ್ದರೇ ಹನಿಟ್ರ್ಯಾಪ್ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಸಿದ್ದಾರೆ. 15 ಲಕ್ಷ ಹಣವನ್ನು ಕೊಡುವಂತೆಯೂ ಬೆದರಿಸಿದ್ದಾರೆ. ಹೀಗಾಗಿ ಈ ಬೆದರಿಕೆಗೆ ಹೆದರಿದಂತ ಪೊಲೀಸ್ ಪೇದೆ ಪತ್ನಿ ಆತ್ಮಹತ್ಯೆಗೂ ಯತ್ನಿಸಿರೋದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಕಲಬುರ್ಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. https://kannadanewsnow.com/kannada/rohit-sharma-ruled-out-of-scg-test-against-australia/ https://kannadanewsnow.com/kannada/isro-to-launch-us-satellite-to-enable-voice-calls-via-smartphones-from-space/
ಸಿಡ್ನಿ: ನಾಳೆಯಿಂದ (ಶುಕ್ರವಾರ) ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಅವರನ್ನು ಭಾರತ ಪ್ಲೇಯಿಂಗ್ ಇಲೆವೆನ್ ನಿಂದ ಕೈಬಿಡಲಾಗಿದೆ. ಕಳೆದ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ನಾಯಕ ಶೋಚನೀಯವಾಗಿ ಫಾರ್ಮ್ನಲ್ಲಿಲ್ಲ ಮತ್ತು ಬ್ಯಾಟಿಂಗ್ ಕ್ರಮಾಂಕದಲ್ಲಿ ರೋಹಿತ್ ಅವರ ಚಲನೆಯೊಂದಿಗೆ ಇಡೀ ತಂಡದ ಸಂಯೋಜನೆಯು ಟಾಸ್ಗೆ ಹೋದ ಕಾರಣ ಈ ಕ್ರಮವು ನಿರೀಕ್ಷಿತ ರೀತಿಯಲ್ಲಿ ಬಂದಿದೆ. ಎರಡನೇ ಮಗುವಿನ ಜನನದಿಂದಾಗಿ ಮೊದಲ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡ ನಂತರ, ರೋಹಿತ್ ಅಡಿಲೇಡ್ನಲ್ಲಿ ನಾಯಕತ್ವಕ್ಕೆ ಮರಳಿದರು. ಆದರೆ ಅಂದಿನಿಂದ ವಿಷಯಗಳು ಆದರ್ಶದಿಂದ ದೂರವಾಗಿವೆ. https://twitter.com/Sahil_Malhotra1/status/1874677531649183987 ಅವರು ಅಡಿಲೇಡ್ ಮತ್ತು ಬ್ರಿಸ್ಬೇನ್ ಪಂದ್ಯಗಳಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿದರು. ಆದರೆ ಮೆಲ್ಬೋರ್ನ್ನಲ್ಲಿ ಓಪನರ್ ಮಾಡಲು ನಿರ್ಧರಿಸಿದರು. ಶುಬ್ಮನ್ ಗಿಲ್ ಅವರನ್ನು ಕೈಬಿಡಲು ಮ್ಯಾನೇಜ್ಮೆಂಟ್ಗೆ ಒತ್ತಡ ಹೇರಲಾಯಿತು. ಬ್ಯಾಟ್ನೊಂದಿಗೆ ರೋಹಿತ್ ಅವರ ಕಳಪೆ ರನ್ ಮುಂದುವರಿದಿದ್ದರಿಂದ ಅದು ಹಿನ್ನಡೆಯನ್ನುಂಟು ಮಾಡಿತು. ಇದು ಮಧ್ಯದಲ್ಲಿ ಅವರ ಕೆಳಮಟ್ಟದ ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಪರಿಣಾಮ…
ಪ್ರತಿಯೊಬ್ಬರ ಕೋರಿಕೆಯನ್ನು ಪೂರೈಸಲು ನಾವು ವಿವಿಧ ಪ್ರಾರ್ಥನೆಗಳು ಮತ್ತು ಪರಿಹಾರಗಳನ್ನು ನಿರ್ವಹಿಸುತ್ತೇವೆ. ಕೆಲವು ಪ್ರಾರ್ಥನೆಗಳು ಮತ್ತು ಪರಿಹಾರಗಳು ಒಂದೇ ಸಮಯದಲ್ಲಿ ಎರಡೂ ಪ್ರಯೋಜನಗಳನ್ನು ಹೊಂದಬಹುದು. ಈ ರೀತಿಯಾಗಿ, ಈ ಆಧ್ಯಾತ್ಮಿಕ ಪೋಸ್ಟ್ನಲ್ಲಿ, ಯಾವ ದೀಪವು ಮದುವೆಯ ಅಡೆತಡೆಗಳನ್ನು ತೆಗೆದುಹಾಕುತ್ತದೆ ಮತ್ತು ಅದೇ ಸಮಯದಲ್ಲಿ ಮಗುವನ್ನು ಆಶೀರ್ವದಿಸುತ್ತದೆ ಎಂಬುದನ್ನು ನಾವು ನೋಡಲಿದ್ದೇವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ…
ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಸಾರಿಗೆ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ ಅಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ. 2020ರಂದು ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಟಿಕೆಟ್ ದರ ಹೆಚ್ಚಳ ಮಾಡಿರಲಿಲ್ಲ ಎಂದರು. ಐದು ವರ್ಷಗಳ ನಂತ್ರ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತಿದೆ. ನೀವೇ ಊಹಿಸಿ ಐದು ವರ್ಷಗಳಿಂದ ಎಷ್ಟು ಡೀಸೆಲ್ ದರ ಹೆಚ್ಚಳವಾಗಿದೆ ಅಂತ ಎಂದ ಅವರು, ಖರ್ಚು ವೆಚ್ಚ ಕೂಡ ಹೆಚ್ಚಳ ಆಗಿದೆ ಅಂತ ತಿಳಿಸಿದರು. ಅಂದಹಾಗೇ ರಾಜ್ಯ ಸರ್ಕಾರಕ್ಕೆ ನಾಲ್ಕು ಸಾರಿಗೆ ನಿಗಮಗಳಿಂದ ಶೇ.42ರಷ್ಟು ಬಸ್ ಟಿಕೆಟ್ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಶೇ.15ರಷ್ಟು ಸಾರಿಗೆ…
ಬೆಂಗಳೂರು: ರಾಜ್ಯ ಸರ್ಕಾರದಿಂದ 2023, 2024ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. 2023ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅ.ಚ ಶಿವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. 2024ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು ಮಂಗಳೂರಿನ ವಾರ್ತಾಭಾರತಿಯ ಅಬ್ದುಸ್ಸಲಾಂ ಪುತ್ತಿಗೆ ಅವರಿಗೆ ನೀಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ ಅವರು ಮಾಹಿತಿ ಹಂಚಿಕೊಂಡಿದ್ದು, ಮಾಧ್ಯಮ ಅಕಾಡೆಮಿಯ 2023, 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ. ಹೀಗಿದೆ 2023, 2024ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ, ವಿವಿಧ ದತ್ತಿ ಪ್ರಶಸ್ತಿ ಪುರಸ್ಕೃತರ ಪಟ್ಟಿ https://kannadanewsnow.com/kannada/shivamogga-power-outages-in-these-areas-of-the-district-on-january-4/ https://kannadanewsnow.com/kannada/in-yet-another-big-shock-to-the-people-of-the-state-cabinet-approves-15-hike-in-bus-ticket-prices/ https://kannadanewsnow.com/kannada/isro-to-launch-us-satellite-to-enable-voice-calls-via-smartphones-from-space/
ಶಿವಮೊಗ್ಗ : ಜ.4 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಎಂಸಿಎಫ್-1, ಎಂಸಿಎಫ್-3 ಎಂಸಿಎಫ್-4, ಎಂಸಿಎಫ್-14 ಎಂಸಿಎಫ್-17, ಎಂಸಿಎಫ್-18, ಎಂಸಿಎಫ್-20 ಮತ್ತು ಎಂಸಿಎಫ್-27 ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು ಜಯಂತಿಗ್ರಾಮ, ಹೊನ್ನವಿಲೆಯಲ್ಲಿ ಕರೆಂಟ್ ಇರೋದಿಲ್ಲ. ಮೆ|| ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕೊಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆಎಸ್ಆರ್ಪಿ ಕಾಲೋನಿ, ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಕೆಎಂಎಫ್ ಡೈರಿ ಹಾಗೂ ಸುತ್ತಮುತ್ತನಲ್ಲಿ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪಾಲನೆ ಮತ್ತು ನಿರ್ವಹಣೆ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಈ ಮೂಲಕ ಕೋರಿದ್ದಾರೆ. https://kannadanewsnow.com/kannada/narayanasamy-writes-to-cm-kharge-rahul-gandhi-asks-him-to-sack-priyank-kharge-from-cabinet/ https://kannadanewsnow.com/kannada/isro-to-launch-us-satellite-to-enable-voice-calls-via-smartphones-from-space/
ಬೆಂಗಳೂರು: ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾ ಮಾಡಲು ಮುಖ್ಯಮಂತ್ರಿ, ಖರ್ಗೆಜೀ, ರಾಹುಲ್ ಗಾಂಧಿ ಅವರನ್ನು ಮನವಿ ಮಾಡುವುದಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿನ್ ಡೆತ್ ನೋಟ್ ಪ್ರದರ್ಶಿಸಿದರು. ಖರ್ಗೆಜೀ ಎಂದರೆ ಮಲ್ಲಿಕಾರ್ಜುನ ಖರ್ಗೆಯವರು. ಪ್ರಿಯಾಂಕ್ ಖರ್ಗೆ ಅಲ್ಲ ಎಂದು ಇದೇವೇಳೆ ಸ್ಪಷ್ಟಪಡಿಸಿದರು. ಸಚಿನ್ ಡೆತ್ ನೋಟಿನಲ್ಲಿ ಎಲ್ಲ ವಿವರ ಬಂದಿದೆ. ಇದಕ್ಕೆ ಸರಕಾರ ಉತ್ತರಿಸಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡದಿರಿ ಎಂದು ಎಚ್ಚರಿಸಿದರು. ಒಬ್ಬರು ಜೀವತ್ಯಾಗ ಮಾಡಿದ್ದು, ಅವರಿಗೆ ಬೆದರಿಕೆ ಹಾಕಿರುವಾಗ ಅವರಿಗೆ ನ್ಯಾಯ ಬೇಕೇ ಬೇಡವೇ? ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಲಿ ಎಂದು ಆಗ್ರಹಿಸಿದರು. ಸಿದ್ದರಾಮಯ್ಯನವರ ಸರಕಾರ ತಪ್ಪು ಮಾಡಿದವರನ್ನು ರಕ್ಷಿಸುತ್ತಿದೆ ಎಂದು ಅವರು ಆರೋಪಿಸಿದರು. ಪ್ರಿಯಾಂಕ್ ಖರ್ಗೆ ಪರವಾಗಿ ದೆಹಲಿಯಿಂದ ಫೋನ್ ಕರೆಗಳು ಬರುತ್ತಿವೆ. ಅವರ ಪರವಾಗಿ 3 ಜನರು ಮಾತನಾಡಿದ್ದಾರೆ. ಒಂದನೆಯದಾಗಿ…