Author: kannadanewsnow09

ಬೆಂಗಳೂರು: ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೂ ಅಶ್ಲೀಲ ಕಾಮೆಂಟ್ ಕಾಟ ಕೊಡಲಾಗಿದೆ. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಲಾಗಿದೆ. ವೈಯಕ್ತಿಕ ಇನ್ಟಾ ಗ್ರಾಮ್ ಖಾತೆಯಲ್ಲಿನ ಪೋಸ್ಟ್ ಗೆ ಅಶ್ಲೀಲ ಕಾಮೆಂಟ್ ಮಾಡಲಾಗಿದೆ. ವೇಶ್ಯ ಎಂದು ಕಾಮೆಂಟ್ ಮಾಡಿದ್ದಾರೆಂದು ನಯನಾ ಮೋಟಮ್ಮ ಆರೋಪಿಸಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಎರಡು ಅಧಿಕೃತ ಖಾತೆ ಹೊಂದಿರುವ ನಯನಾ ಮೋಟಮ್ಮಗೆ ಈ ರೀತಿಯಾಗಿ ಅಶ್ಲೀಲ ಕಾಮೆಂಟ್ ಮಾಡಿ ಕಾಟ ಕೊಡಲಾಗಿದೆ. ರಾಜಕೀಯ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಪ್ರತ್ಯೇಕ ಖಾತೆ, ವೈಯಕ್ತಿಕ ವಿಚಾರ ಹಂಚಿಕೊಳ್ಳಲು ಮತ್ತೊಂದು ಖಾತೆಯನ್ನು ನಯನಾ ಹೊಂದಿದ್ದಾರೆ. ಪ್ರವಾಸ, ವೈಯಕ್ತಿಕ ವಿಚಾರ ಹಂಚಿಕೊಳ್ಳುವ ಖಾತೆಯಲ್ಲಿ ಅಶ್ಲೀಲ ಕಾಮೆಂಟ್ ಮಾಡಲಾಗಿದೆ. ಈ ಬಗ್ಗೆ ಬೇಸರ ವ್ಯಕ್ತ ಪಡಿಸಿರುವಂತ ನಯನಾ ಮೋಟಮ್ಮ ಅವರು ಮಹಿಳಾ ವಿರೋಧಿ ಮನೋಭಾವವನ್ನು ನಾನು ವಿರೋಧಿಸುತ್ತಿದ್ದೇನೆ ಎಂದಿದ್ದಾರೆ. ಸ್ಲೀವ್ ಲೆಸ್ ಬಟ್ಟೆ ಹಾಕಿದ್ರೆ ಕೆಲಸ ಮಾಡದ ರಾಜಕಾರಣಿ ಎನ್ನುತ್ತಾರೆ. ವೇಶ್ಯೆ ಎನ್ನುವ ಮಟ್ಟಕ್ಕೂ ಇಳಿಯುತ್ತಾರೆ ಎಂಬುದಾಗಿ ಶಾಸಕಿ…

Read More

ಬೆಂಗಳೂರು; ನಗರದಲ್ಲಿ ತಾಯಿ ಮೇಲಿನ ಸಿಟ್ಟಿಗೆ 6 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವಂತ ಆಘಾತಕಾರಿ ಘಟನೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ತಾಯಿಯ ಮೇಲಿನ ಸಿಟ್ಟಿಗೆ ಆಕೆಯ 6 ವರ್ಷದ ಬಾಲಕಿಯನ್ನು ಚಾಕೋಲೇಟ್ ಕೊಡಿಸ್ತೀನಿ ಎಂಬುದಾಗಿ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಮೋರಿಗೆ ಎಸೆದಿದ್ದು ಆರೋಪಿ ಯೂಸೂಫ್ ಪರಾರಿಯಾಗಿದ್ದನು. ಆರೋಪಿ ಯೂಸೂಫ್ ಹತ್ಯೆ ಬಳಿಕ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದನು. ಆತನನ್ನು ಬಂಧಿಸಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಂತ ಸಂದರ್ಭದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಬಳಿಕ ಹತ್ಯೆಗೈದು ಶವವನ್ನು ಮೋರಿಗೆ ಎಸೆದಿದ್ದಾಗಿ ಬಾಯಿ ಬಿಟ್ಟಿದ್ದಾನೆ. ಇನ್ನೂ ತಾಯಿ ಜೊತೆಗಿನ ಜಗಳಕ್ಕೆ ಮಗಳನ್ನು ಕೊಲೆ ಮಾಡಿರೋದಾಗಿ ಹೇಳಲಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಅತ್ಯಾಚಾರ ನಡೆಸಿರುವುದಾಗಿ ತಿಳಿದು ಬಂದಿದೆ. ವಿಚಾರಣೆ ವೇಳೆಯಲ್ಲಿ ಅತ್ಯಾಚಾರ ಮಾಡೋದಕ್ಕೆ ಚಾಕೋಲೇಟ್ ಕೊಡಿಸೋದಾಗಿ ಕರೆದೊಯ್ಯಿದ್ದೆ. ಆ ಬಳಿಕ ಹತ್ಯೆ ಮಾಡೋದಾಗಿ…

Read More

ಬೆಂಗಳೂರು: ಕಾಸರಗೋಡು ಕೂಡಲೇ ಕರ್ನಾಟಕಕ್ಕೆ ಸೇರಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂಬುದಾಗಿ ಆಗ್ರಹಿಸಿ ನಾಳೆ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದಂತ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ರಾಜಭವನ ಮುತ್ತಿಗೆ ಹಾಕಲಾಗುತ್ತಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಕಾಸರಗೋಡು ಕೂಡಲೇ ಕರ್ನಾಟಕಕ್ಕೆ ಸೇರಬೇಕು. ಕೇಂದ್ರ ಸರ್ಕಾರ ಗಮನಹರಿಸಬೇಕು. ಕಾಸರಗೋಡಿನಲ್ಲಿ ಕನ್ನಡ ಶಾಲಾ ಮಕ್ಕಳ ಮೇಲೆ ಮಲೆಯಾಳಿ ದಬ್ಬಾಳಿಕೆ ಸರಿಯಲ್ಲ ಎಂದಿದ್ದಾರೆ. ಕರ್ನಾಟಕದಲ್ಲಿ ಪರಭಾಷೆಯವರ ದಬ್ಬಾಳಿಕೆ ಅತಿಯಾಗಿದೆ. ಹೊರನಾಡು ಕನ್ನಡಿಗರ ಬಗ್ಗೆ ಸರ್ಕಾರ ತೀವ್ರ ಗಮನ ಹರಿಸಬೇಕಾಗಿದೆ. ಹೊರನಾಡ ಕನ್ನಡಿಗರು ಕಣ್ಣೀರಿನಲ್ಲಿ ಬದುಕುತ್ತಿದ್ದಾರೆ. ಮಹಾಜನ್ ವರದಿ ಜಾರಿಯಾಗಬೇಕು. ಕಾಸರಗೋಡು, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕೆಂದು ಸ್ಪಷ್ಟವಾಗಿ ನೇರವಾಗಿ ಹೇಳಿದ್ದಾರೆ. ಸರ್ಕಾರ ಈ ಬಗ್ಗೆ ತೀವ್ರ ಗಮನಹರಿಸಬೇಕು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಕಾಸರಗೋಡಿನಲ್ಲಿ ಕನ್ನಡ ಶಾಲಾ ಮಕ್ಕಳಿಗೆ ಮಲೆಯಾಳಿ ಭಾಷೆಯನ್ನು ಹೇರುತ್ತಿರುವುದನ್ನು ಖಂಡಿಸಿ ದಿನಾಂಕ 12-01-2026ರ ಸೋಮವಾರದಂದು ಮಧ್ಯಾಹ್ನ 12.30 ಗಂಟೆಗೆ ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ…

Read More

ಬಾಗಲಕೋಟೆ: ಜಿಲ್ಲೆಯಲ್ಲಿ ರಾಜ್ಯದಲ್ಲೊಂದು ಮನಕಲಕುವ ಕೀಚಕ ಕೃತ್ಯವೊಂದು ನಡೆದಿದೆ. ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರವೆಸಗಿ ಹೆದ್ದಾರಿಯಲ್ಲೇ ಕೀಚಕರು ಬಿಟ್ಟು ಹೋಗಿರುವಂತ ಘಟನೆ ನಡೆದಿದೆ. ಜನವರಿ.5ರಂದು ನಡೆದಿರುವಂತ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆಯಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಎಸಗಿರುವಂತ ಘಟನೆ ನಡೆದಿದೆ. 40 ವರ್ಷದ ವಿಚ್ಚೇದಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎನ್ನಲಾಗುತ್ತಿದೆ. ಬಾಗಲಕೋಟೆಯ ಹುನಗುಂದದಲ್ಲಿ ಈ ಕೃತ್ಯ ನಡೆಸಲಾಗಿದೆ. ಅತ್ಯಾಚಾರವೆಸಗಿ ಹೆದ್ದಾರಿ ಬಳಿ ದುಷ್ಟರು ಬಿಟ್ಟು ಹೋಗಿದ್ದಾರೆ. ಸಾರ್ವಜನಿಕರ ಸಹಾಯದಿಂದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದವೆರೆದಿದೆ. ಈ ಸಂಬಂಧ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/attention-state-ration-card-holders-name-addition-and-correction-allowed-again-on-ration-card/ https://kannadanewsnow.com/kannada/now-these-land-records-including-11e-map-will-be-available-at-the-gram-panchayat-itself-this-is-the-fee-fixed/

Read More

ಗುಜರಾತ್ : ಸ್ವಾತಂತ್ರ್ಯದ ನಂತರ ಸೋಮನಾಥ ದೇವಾಲಯದ ಪುನರ್ನಿರ್ಮಾಣವನ್ನು ವಿರೋಧಿಸಿದ ಶಕ್ತಿಗಳು “ನಮ್ಮಲ್ಲಿ ಇನ್ನೂ ಸಕ್ರಿಯವಾಗಿವೆ” ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಅವರನ್ನು ಸೋಲಿಸಲು ಭಾರತವು ಜಾಗರೂಕರಾಗಿರಬೇಕು, ಒಗ್ಗಟ್ಟಾಗಿರಬೇಕು ಮತ್ತು ಬಲವಾಗಿರಬೇಕು ಎಂದಿದ್ದಾರೆ. ಗುಜರಾತ್‌ನ ಗಿರ್ ಸೋಮನಾಥ ಜಿಲ್ಲೆಯಲ್ಲಿರುವ ಐತಿಹಾಸಿಕ ದೇವಾಲಯವು ಹಿಂದೆ ಅನುಭವಿಸಿದ ದಾಳಿಗಳನ್ನು ಮತ್ತು ಪ್ರತಿ ಬಾರಿಯೂ ಅದನ್ನು ಹೇಗೆ ಪುನರ್ನಿರ್ಮಿಸಲಾಯಿತು ಎಂಬುದನ್ನು ಉಲ್ಲೇಖಿಸಿದ ಮೋದಿ, ಕತ್ತಿಯ ಮೊನಚಿನಿಂದ ಜನರ ಹೃದಯಗಳನ್ನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು. ಸೋಮನಾಥದ 1,000 ವರ್ಷಗಳ ಇತಿಹಾಸವು ವಿನಾಶ ಮತ್ತು ಸೋಲಿನದ್ದಲ್ಲ, ಆದರೆ ಗೆಲುವು ಮತ್ತು ಪುನರ್ನಿರ್ಮಾಣದದ್ದಾಗಿದೆ ಎಂದು ಪ್ರಧಾನಿ ಗಮನಿಸಿದರು. 1026 ರಲ್ಲಿ ಘಜ್ನಿಯ ಮಹಮೂದ್ ದಾಳಿಯಿಂದ ಪ್ರಾರಂಭಿಸಿ ವಿದೇಶಿ ಆಕ್ರಮಣಕಾರರಿಂದ ಪದೇ ಪದೇ ನಾಶವಾದ ಸೋಮನಾಥ ದೇವಾಲಯದ ಪುನರ್ನಿರ್ಮಾಣದಿಂದ ಸಂಕೇತಿಸಲ್ಪಟ್ಟ ಭಾರತೀಯ ನಾಗರಿಕತೆಯ ಸ್ಥಿತಿಸ್ಥಾಪಕತ್ವವನ್ನು ಗುರುತಿಸಲು ಇಲ್ಲಿ ನಡೆದ ಸೋಮನಾಥ ಸ್ವಾಭಿಮಾನ ಪರ್ವ್‌ನಲ್ಲಿ ನಡೆದ ಬೃಹತ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಶತಮಾನಗಳಿಂದ ಅದರ ನಾಶಕ್ಕೆ…

Read More

ಬೆಂಗಳೂರು: ಮನೆಯಲ್ಲಿ ಬೆತ್ತಲಾಗಿ ಓಡಾಡ್ತಾರೆ. ವಿಚಿತ್ರವಾಗಿ ವರ್ತಿಸುತ್ತಾರೆ. ವೀಡಿಯೋ ತೋರಿಸಿ ಲೈಂಗಿಕ ಕ್ರಿಯೆ ಮಾಡೋದಕ್ಕೆ ಒತ್ತಾಯಿಸ್ತಾರೆ ಅಂತ ಆರೋಪಿಸಿ ಪತ್ನಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿಯೇ ವೀಡಿಯೋ ಮಾಡಿಕೊಂಡು ತನಗೆ 30 ಲಕ್ಷ ಹಣ, ಚಿನ್ನಕ್ಕೆ ಬೇಡಿಕೆ ಇಟ್ಟಿರೋದಾಗಿ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಮೇಘಶ್ರೀ ತನ್ನ ಪತಿ ಮಂಜುನಾಥ್ ವರ್ತನೆಯ ಬಗ್ಗೆ ದೂರು ನೀಡಿದ್ದರು. ಇದೀಗ ಈ ಕೇಸ್ ಗೆ ಬಿಗ್ ಟ್ವಿಸ್ಟ್ ಎನ್ನುವಂತೆ ಪತ್ನಿಯ ವಿರುದ್ಧ ಪತಿ ಕೂಡ ದೂರು ನೀಡಿದ್ದಾರೆ. ಪತಿ ಮಂಜುನಾಥ್ ನೀಡಿರುವಂತ ದೂರಿನಲ್ಲಿ ಮೇಘಶ್ರೀ ಮಾಡಿರೋ ಆರೋಪ ಸುಳ್ಳು. ಆಕೆ ನನ್ನ ವೀಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. 30 ಲಕ್ಷ ಹಣ, 50 ಗ್ರಾಂ ಚಿನ್ನ ನೀಡುವಂತೆ ಒತ್ತಾಯಿಸುತ್ತಿರುವುದಾಗಿ ಎಂದು ಹೇಳಿದ್ದಾರೆ. ಇದಷ್ಟೇ ಅಲ್ಲದೇ ಮೇಘಶ್ರೀ ಇಬ್ಬರಿಗೆ ವಿಚ್ಛೇದನ ನೀಡಿ ನನ್ನ ಮದುವೆಯಾಗಿದ್ದಳು. ನನ್ನ…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ಕರೆ ಮಾಡುವುದನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಅನುಕೂಲಕರವಾಗಿಸುವಂತಹ ಹೊಸ ವೈಶಿಷ್ಟ್ಯವನ್ನು WhatsApp ಪರಿಚಯಿಸಿದೆ. ನೀವು ತ್ವರಿತ ವ್ಯವಹಾರ ಕರೆ ಮಾಡಬೇಕಾಗಲಿ ಅಥವಾ ತಾತ್ಕಾಲಿಕವಾಗಿ ಯಾರನ್ನಾದರೂ ಸಂಪರ್ಕಿಸಬೇಕಾಗಲಿ, ಇನ್ನು ಮುಂದೆ ನಿಮ್ಮ ಸಂಪರ್ಕ ಪಟ್ಟಿಯಲ್ಲಿ ಅನಗತ್ಯ ಸಂಖ್ಯೆಗಳನ್ನು ಉಳಿಸಬೇಕಾಗಿಲ್ಲ. WhatsApp ನ ಹೊಸ ಕರೆ ವೈಶಿಷ್ಟ್ಯ ವ್ಯಾಪಕವಾಗಿ ಜನಪ್ರಿಯವಾಗಿರುವ ತ್ವರಿತ ಸಂದೇಶ ವೇದಿಕೆಯಾದ WhatsApp, ವಿಶ್ವಾದ್ಯಂತ 3.5 ಬಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ. ಇದನ್ನು ಸಂದೇಶ ಕಳುಹಿಸುವಿಕೆ, ಧ್ವನಿ ಕರೆಗಳು ಮತ್ತು ವೀಡಿಯೊ ಕರೆಗಳಿಗಾಗಿ ಬಳಸಲಾಗುತ್ತದೆ. ಹಿಂದೆ, ಅನೇಕ ಬಳಕೆದಾರರು WhatsApp ಕರೆಗಳನ್ನು ಉಳಿಸಿದ ಸಂಪರ್ಕಗಳಿಗೆ ಮಾತ್ರ ಮಾಡಬಹುದು ಎಂದು ನಂಬಿದ್ದರು. ಆದಾಗ್ಯೂ, ಈ ಹೊಸ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಈಗ ಯಾವುದೇ ಸಂಖ್ಯೆಯನ್ನು ಮೊದಲು ಉಳಿಸದೆ ನೇರವಾಗಿ ಕರೆ ಮಾಡಬಹುದು. ನೀವು WhatsApp ಕರೆ ಮಾಡಲು ಮಾತ್ರ ಆಗಾಗ್ಗೆ ಸಂಖ್ಯೆಗಳನ್ನು ಉಳಿಸುತ್ತಿದ್ದರೆ, ಈ ನವೀಕರಣವು ನೇರ ಡಯಲಿಂಗ್ ಅನ್ನು ಅನುಮತಿಸುವ ಮೂಲಕ ನಿಮ್ಮ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ.…

Read More

ಬೆಂಗಳೂರು: ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾದ ನೂತನ ಉಪಾಧ್ಯಕ್ಷೆಯಾಗಿ ಕೆ ಎಸ್ ಆರ್ ಟಿ ಸಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ.ಟಿಎಸ್ ಅವರು ಪದಗ್ರಹಣ ಮಾಡಿದರು. ಇಂದು ಪಿಆರ್‌ಸಿಐ (PRCI) ಪದಗ್ರಹಣ ಮತ್ತು ಹಸ್ತಾಂತರ ಸಮಾರಂಭ ನಡೆಯಿತು. ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ವತಿಯಿಂದ ಬೆಂಗಳೂರು ಜೆ.ಪಿ.ನಗರ ಸಾಂಸ್ಕೃತಿಕ ಸಂಘದಲ್ಲಿ ಪದಗ್ರಹಣ ಹಾಗೂ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಡಾ. ದೇವಾನಂದ ಗೋಪಾಲ್ (ಡಿಆರ್‌ಡಿಒ ಮಾಜಿ ವಿಜ್ಞಾನಿ) ಮುಖ್ಯ ಅತಿಥಿಯಾಗಿ ಎಂ.ಬಿ. ಜಯರಾಮ್ (ಚೇರ್ಮನ್ ಎಮೆರಿಟಸ್ ಮತ್ತು ಮುಖ್ಯ ಮಾರ್ಗದರ್ಶಕರು) ಹಾಗೂ ಗೀತಾ ಶಂಕರ್ (ರಾಷ್ಟ್ರೀಯ ಅಧ್ಯಕ್ಷರು) ಗೌರವಾನ್ವಿತ ಉಪಸ್ಥಿತರಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ಟಿ. ವಿನಯ ಕುಮಾರ್ ಅವರು ಆಡಳಿತ ಮಂಡಳಿಯ (ಗವರ್ನಿಂಗ್ ಕೌನ್ಸಿಲ್) ಅಧ್ಯಕ್ಷರಾಗಿ ಹಾಗೂ ಡಾ. ಲತಾ ಟಿ.ಎಸ್., ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಕೆಎಸ್‌ಆರ್‌ಟಿಸಿ ಅವರು ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಚಿನ್ಮಯೀ ಪ್ರವೀಣ್ ಅವರು ಕಾರ್ಯದರ್ಶಿಯಾಗಿ ಪದಗ್ರಹಣ ಮಾಡಿದರು. ಆಡಳಿತ…

Read More

ನವದೆಹಲಿ: ಭಾರತೀಯ ರಿಯಾಲಿಟಿ ಟೆಲಿವಿಷನ್ ಮತ್ತು ನೇಪಾಳಿ ಸಿನಿಮಾ ರಂಗದ ಪ್ರಸಿದ್ಧ ವ್ಯಕ್ತಿ ಪ್ರಶಾಂತ್ ತಮಾಂಗ್ ಅವರು 43 ನೇ ವಯಸ್ಸಿನಲ್ಲಿ ನಿಧನರಾದರು. ಇಂಡಿಯನ್ ಐಡಲ್ ಸೀಸನ್ 3 ವಿಜೇತರನ್ನು 11 ಜನವರಿ 2026 ರಂದು ನವದೆಹಲಿಯ ದ್ವಾರಕಾದಲ್ಲಿರುವ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಘೋಷಿಸಲಾಯಿತು.  ಪ್ರಶಾಂತ್ ತಮಾಂಗ್ ನಿಧನಕ್ಕೆ ಕಲಾವಿದರು, ಸಮುದಾಯದ ಮುಖಂಡರು ಮತ್ತು ಅಭಿಮಾನಿಗಳಿಂದ ಸಂತಾಪಗಳು ಹರಿದು ಬಂದಿವೆ. ಭಾರತೀಯ ಗೂರ್ಖಾ ಪರಿಷತ್ (ಅಸ್ಸಾಂ ರಾಜ್ಯ)ದ ಪ್ರಧಾನ ಕಾರ್ಯದರ್ಶಿ ನಂದಾ ಕಿರಾತಿ ದಿವಾನ್ ಅವರು ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳ ಮೂಲಕ ಈ ನಷ್ಟಕ್ಕೆ ಸಂತಾಪ ಸೂಚಿಸಿದ್ದಾರೆ. ದಿವಾನ್ ಈ ಸುದ್ದಿಯನ್ನು “ಭರಿಸಲಾಗದ ನಷ್ಟ” ಎಂದು ಕರೆದರು ಮತ್ತು ಪ್ರಶಾಂತ್ ತಮಾಂಗ್ ಗೂರ್ಖಾ ಪ್ರದರ್ಶಕರು ಭಾರತ ಮತ್ತು ವಿದೇಶಗಳಲ್ಲಿ ಮನ್ನಣೆ ಪಡೆಯಲು ಹೇಗೆ ಸಹಾಯ ಮಾಡಿದರು ಎಂಬುದನ್ನು ಒತ್ತಿ ಹೇಳಿದರು. ಪ್ರಶಾಂತ್ ತಮಾಂಗ್ ಸಾವು ಮತ್ತು ಇಂಡಿಯನ್ ಐಡಲ್ ಸೀಸನ್ 3 ವಿಜೇತರಾಗಿ ಪರಂಪರೆ ಪ್ರಶಾಂತ್ ತಮಾಂಗ್ 1983 ರ…

Read More

ಬೆಂಗಳೂರು:ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರಕ್ಕೆ ಪಾಠ ಹೇಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಪ್ರಾಮಾಣಿಕ ಪ್ರಯತ್ನ ಮಾಡಲಿ. ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಲಿ, ತಮ್ಮ ಧ್ವನಿಯನ್ನು ರಾಜ್ಯದ ಪರವಾಗಿ ಗಟ್ಟಿಗೊಳಿಸಲಿ ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಮನರೇಗಾ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕದ ಎನ್.ಡಿ.ಎ ನಾಯಕರು ಬಹಿರಂಗ ಚರ್ಚೆಗೆ ಸಿದ್ದ ಎಂದು ಹೇಳುವುದರ ಮೂಲಕ ತಮ್ಮ ಬೌದ್ಧಿಕ ದಿವಾಳಿತನವನ್ನು ಸಾಬೀತು ಪಡಿಸಿದ್ದಾರೆ. ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ವಿರೋಧ ಪಕ್ಷದ ನಾಯಕರಾದ R ಅಶೋಕ್ ಜಂಟಿ ಪತ್ರಿಕಾ ಗೋಷ್ಠಿ ಮುಖಾಂತರ ಬಹಿರಂಗ ಚರ್ಚೆಗೆ ಕರೆ ನೀಡಿದ್ದಾರೆ. ಬಹಿರಂಗ ಚರ್ಚೆಗೆ ವಿಶೇಷ ವಿಧಾನ ಸಭೆಯ ಅಧಿವೇಶನ ಮೂಲಕ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರ ಈಗಾಗಲೇ ಅವರಿಗೆ ಮುಕ್ತ ಅವಕಾಶವನ್ನು ನೀಡಿದೆ. ಮನರೇಗಾ ಯೋಜನೆಗೆ ಸಂಬಂಧಪಟ್ಟಂತೆ ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ…

Read More