Subscribe to Updates
Get the latest creative news from FooBar about art, design and business.
Author: kannadanewsnow09
ಮೈಸೂರು: ಮೈಸೂರು ಮತ್ತು ಮೈಸೂರು ಹೊಸ ಗೂಡ್ಸ್ ಟರ್ಮಿನಲ್ ನಡುವಿನ ರಾಷ್ಟ್ರೀಯ ಹೆದ್ದಾರಿ 275ರ ರಿಂಗ್ ರಸ್ತೆಯಲ್ಲಿ ಆರು ಪಥದ ರಸ್ತೆ ಕೆಳಸೇತುವೆ (RUB ಸಂಖ್ಯೆ 293) ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಚಲಿಸುವ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕಾಮಗಾರಿಯ ಅಂಗವಾಗಿ ಗರ್ಡರ್ಗಳನ್ನು ಅಳವಡಿಸಲು ‘ಲೈನ್ ಬ್ಲಾಕ್’ ಮತ್ತು ‘ಪವರ್ ಬ್ಲಾಕ್’ ಇರುವುದರಿಂದ, ಈ ಕೆಳಗಿನ ರೈಲುಗಳು ಭಾಗಶಃ ರದ್ದಾಗಲಿವೆ: 1. ಏಪ್ರಿಲ್ 18, ಮೇ 06 ಮತ್ತು ಮೇ 09, 2026 ರಂದು ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಅರಸೀಕೆರೆಯಿಂದ ಮೈಸೂರಿನವರೆಗೆ ಬರುವ ಬದಲಿಗೆ ಬೆಳಗುಳ ನಿಲ್ದಾಣಕ್ಕೆ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ಬೆಳಗುಳ ಮತ್ತು ಮೈಸೂರು ನಿಲ್ದಾಣಗಳ ನಡುವೆ ಈ ರೈಲಿನ ಸಂಚಾರ ಇರುವುದಿಲ್ಲ. 2. ಏಪ್ರಿಲ್ 18, ಮೇ 06 ಮತ್ತು ಮೇ 09, 2026 ರಂದು ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ಮೈಸೂರಿನಿಂದ ಹೊರಡುವ ಬದಲಿಗೆ ಬೆಳಗುಳ…
ಮಂಡ್ಯ : ಇತ್ತಿಚಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಸೊಗಡು ಕಣ್ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಶಾಸಕ ಎಂ.ಶ್ರೀನಿವಾಸ್ ಗುರುವಾರ ಹೇಳಿದರು. ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆ ಆರ್.ಕೆ. ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಂಡ್ಯ ಕರ್ನಾಟಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಬಿ.ರಾಮಕೃಷ್ಣ ಪ್ರಶಸ್ತಿ – 2026 ಪ್ರಧಾನ ಮಾಡಿ ಅವರು ಮಾತನಾಡಿದರು. ದೇಶಿಯ ಸಂಸ್ಕೃತಿಯಾದ ನಾಡಿನ ಕಲೆ, ಸಾಹಿತ್ಯ, ಜಾನಪದ ಸೊಗಡಿನ ಬಗ್ಗೆ ಗ್ರಾಮೀಣ ಪ್ರದೇಶಗಳ ಯುವಕರಲ್ಲಿ ಕಣ್ಮರೆಯಾಗುತ್ತಿದ್ದು, ಹೀಗಾಗಿ ಮಕ್ಕಳಿಗೆ ಹೆಚ್ಚು ಹೆಚ್ಚು ಅಧ್ಯಯನ ನಡೆಸುವ ಮೂಲಕ ದೇಶಿಯ ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಬೇಕೆಂದು ಹೇಳಿದರು. ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ನೈತಿಕ ದಾರಿದ್ರ್ಯ ಶಿಕ್ಷಣ ಕ್ಷೇತ್ರದಲ್ಲಿ ಇರಬಾರದು. ಎಲ್ಲರಲ್ಲೂ ನಿರೀಕ್ಷೆಗಳು ಹೆಚ್ಚಿವೆ. ಬಂಧುತ್ವ ಎನ್ನುವುದು ಮರೆಯಾಗುತ್ತಿದೆ. ತಂದೆ, ತಾಯಿ, ಅಣ್ಣ ತಮ್ಮಂದಿರ ನಡುವೆ ಸಂಘರ್ಷಗಳು ಹೆಚ್ಚುತ್ತಿವೆ. ಎಲ್ಲರಲ್ಲೂ ಸಾಮರಸ್ಯ ಹಾಳಾಗಿದೆ ಎಂದು ವಿಷಾದಿಸಿದರು. ಜನಪದ ವಿದ್ವಾಂಸ ಡಾ.ಚಿಕ್ಕಣ್ಣ ಮಾತನಾಡಿ, ವಿದ್ಯಾರ್ಥಿಗಳು ಕೇವಲ…
ಈ ಐದು ವಿಷಯಗಳನ್ನು ಪಾಲಿಸಿದರೆ ನಿಮ್ಮ ಆದಾಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೋಟಿಗಟ್ಟಲೆ ಆದಾಯ ಹೆಚ್ಚಿಸಲು ಅನುಸರಿಸಬೇಕಾದ ಅಂಶಗಳು ಯಾವುವು? ಮುಂದೆ ಓದಿ.. ನಮ್ಮಲ್ಲಿ ಹಲವರಿಗೆ ಒಂದು ಸಂದೇಹವಿದೆ, ನಾವು ಬೇಗನೆ ಹಣವನ್ನು ಗಳಿಸಲು ನಾವು ಏನು ಮಾಡಬಹುದು, ಶಾಶ್ವತ ಆದಾಯದ ಮಾರ್ಗ ಯಾವುದು ಮತ್ತು ಅವರು ಹೆಚ್ಚು ಹಣವನ್ನು ಹೇಗೆ ಗಳಿಸುತ್ತಾರೆ? ಹಣ ಗಳಿಸುವುದು ಅಷ್ಟು ಕಷ್ಟವಲ್ಲ. ಹಣವನ್ನು ಹೆಚ್ಚು ಪ್ರೀತಿಸುವವರು ಹಣವನ್ನು ತಮ್ಮ ಕೈಯಲ್ಲಿ ಇಟ್ಟುಕೊಳ್ಳುತ್ತಾರೆ. ‘ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ಈ ಹಣ ಸಂಪಾದಿಸುವ ಮೊದಲು ಸಾಕು’ ಎಂದು ಬೇಸರ ಪಡುವವರೂ ಅಷ್ಟೆ. ಈ ಪೋಸ್ಟ್ ಮೂಲಕ, ಆದಾಯವನ್ನು ಶಾಶ್ವತವಾಗಿಸಲು ಆದಾಯವನ್ನು ಹಲವು ಬಾರಿ ಹೆಚ್ಚಿಸಲು ಏನು ಮಾಡಬೇಕು ಎಂಬ ಮಾಹಿತಿಯನ್ನು ನಾವು ತಿಳಿಯಲಿದ್ದೇವೆ. ಇದರಲ್ಲಿ ಹೇಳಿದ ಉಪಾಯಗಳನ್ನು ಮಾಡಿದರೂ ಹಣ ಉಳಿಯುತ್ತದೆ. ಪರಿಹಾರವನ್ನು ಹೊರತುಪಡಿಸಿ, ಅನುಸರಿಸಬೇಕಾದ ಕೆಲವು ವಿಷಯಗಳನ್ನು ಸಹ…
ಬೆಂಗಳೂರು : ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) 2025-26ನೇ ಸಾಲಿನಲ್ಲಿ 15,509 ದಶಲಕ್ಷ ಯೂನಿಟ್ ಜಲ ವಿದ್ಯುತ್ ಉತ್ಪಾದಿಸುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಕರ್ನಾಟಕವು 3.63 ಗಿಗಾವ್ಯಾಟ್ ವಿದ್ಯುತ್ ನೊಂದಿಗೆ ಜಲ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಇತ್ತೀಚೆಗೆ ಕೇಂದ್ರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ವರದಿ ನೀಡಿರುವ ಮಧ್ಯೆಯೇ 2025-26ನೇ ಸಾಲಿನಲ್ಲಿ ಕೆಪಿಸಿಎಲ್ ಈ ದಾಖಲೆ ನಿರ್ಮಿಸಿರುವುದು ಹೆಚ್ಚು ಮಹತ್ವ ಪಡೆದಿದೆ. ಶರಾವತಿ ಕಣಿವೆಯಲ್ಲಿ ನಾಲ್ಕು, ಕಾಳಿ ಕಣಿವೆಯ ನಾಲ್ಕು, ವಾರಾಹಿ ಕಣಿವೆ ಮತ್ತು ಕಾವೇರಿ ಕಣಿವೆಯ ತಲಾ ಎರಡು, ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ತಲಾ ಒಂದು ವಿದ್ಯುತ್ ಉತ್ಪಾದನಾ ಸ್ಥಾವರಗಳಲ್ಲಿ 15,509 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. 2024-25ನೇ ಸಾಲಿನಲ್ಲಿ 13,853 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿರುವುದು ಇದುವರೆಗಿನ ದಾಖಲೆಯಾಗಿತ್ತು. “ಕೆಪಿಸಿಎಲ್ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಶ್ರಮಿಸಿದೆ. ಶಿವನಸಮುದ್ರ, ಶಿಂಷಾ,…
ಬೆಂಗಳೂರು: ನಗರದಲ್ಲಿ ವ್ಯಕ್ತಿಯೊಬ್ಬ ‘ಝಾಂಬಿ ಡ್ರಗ್ಸ್’ (ಝೈಲಾಜಿನ್) ಸೇವಿಸಿದ್ದಾನೆ ಎಂದು ಸುಳ್ಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ಸೃಷ್ಟಿಸಿದ್ದ ಹೇಮಂತ್ (29) ಎಂಬ ಯುವಕನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನಡೆದಿದ್ದೇನು? ಬಾಗಲೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಅನಾರೋಗ್ಯದ ಕಾರಣದಿಂದ ವಿಚಿತ್ರವಾಗಿ ಕೈ ಕಾಲು ಆಡಿಸುತ್ತಾ ನಿಂತಿದ್ದನ್ನು ಗಮನಿಸಿದ ಹೇಮಂತ್, ಅದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದ. ವಿದೇಶಗಳಲ್ಲಿ ಸುದ್ದಿಯಾಗುತ್ತಿರುವ ಝಾಂಬಿ ಡ್ರಗ್ಸ್ ನಶೆಯಲ್ಲಿ ಈ ವ್ಯಕ್ತಿ ಹೀಗೆ ವರ್ತಿಸುತ್ತಿದ್ದಾನೆ ಎಂದು ಶೀರ್ಷಿಕೆ ನೀಡಿ ವಿಡಿಯೋವನ್ನು ವೈರಲ್ ಮಾಡಿದ್ದ. ಪೊಲೀಸ್ ತನಿಖೆಯಲ್ಲಿ ಬಯಲಾದ ಸತ್ಯ: ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಾಗಲೂರು ಪೊಲೀಸರು, ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜು ಬಳಿ ಪತ್ತೆಹಚ್ಚಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ತನಿಖೆಯಲ್ಲಿ ಈ ಕೆಳಗಿನ ಸತ್ಯಾಂಶಗಳು ಹೊರಬಂದಿವೆ: ಡ್ರಗ್ಸ್ ಸೇವಿಸಿಲ್ಲ: ವೈದ್ಯಕೀಯ ವರದಿಯ ಪ್ರಕಾರ ಆ ವ್ಯಕ್ತಿ ಯಾವುದೇ ಮಾದಕವಸ್ತು ಸೇವಿಸಿರಲಿಲ್ಲ. ಅನಾರೋಗ್ಯವೇ ಕಾರಣ: ಆ ವ್ಯಕ್ತಿಗೆ ತೀವ್ರವಾದ ಸಂಧಿವಾತ (ಆರ್ಥೈಟಿಸ್) ಇರುವುದು ದೃಢಪಟ್ಟಿದೆ. ಮಿಶ್ರ…
ಚಿಕ್ಕಮಗಳೂರು: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ (17) ಅವರ ಮೃತದೇಹ ಇಂದು ಪತ್ತೆಯಾಗಿದೆ. ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ತಂದೆ ಬೈದಿದ್ದಕ್ಕೆ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಹಿನ್ನೆಲೆ: ಕೇರಳ ಮೂಲದ ರಮೇಶ್ ಎಂಬುವವರು ತಮ್ಮ ಮಗಳು ಶ್ರೀನಂದಾ ಮತ್ತು ಕುಟುಂಬದೊಂದಿಗೆ ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಬಂದಿದ್ದರು. ಮಾಣಿಕ್ಯಧಾರಾ ಬಳಿ ಪ್ರವಾಸದಲ್ಲಿದ್ದಾಗ ಮಗಳು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನಳಾಗಿದ್ದಳು. ಈ ವೇಳೆ ತಂದೆ ರಮೇಶ್ ಅವರು ಮಗಳಿಗೆ ಬೈದಿದ್ದಾರೆ ಎನ್ನಲಾಗಿದೆ. ತಂದೆಯ ಎಚ್ಚರಿಕೆ: “ಸೆಲ್ಫಿ ತೆಗೆದುಕೊಳ್ಳುವುದು ಸಾಕು, ಮೊಬೈಲ್ ಫೋನ್ ಇಲ್ಲಿ ಕೊಡು” ಎಂದು ತಂದೆ ರಮೇಶ್ ಮಗಳಿಗೆ ಖಾರವಾಗಿ ವಾರ್ನ್ ಮಾಡಿದ್ದರು. ಅಸಮಾಧಾನ: ತಂದೆ ಬೈದಿದ್ದರಿಂದ ಬೇಸರಗೊಂಡ ಬಾಲಕಿ ಶ್ರೀನಂದಾ, ಕುಟುಂಬದವರ ಜೊತೆ ಮಾಣಿಕ್ಯಧಾರಾ ಫಾಲ್ಸ್ಗೆ ತೆರಳದೆ ಅರ್ಧ ಹಾದಿಯಲ್ಲೇ ವಾಪಸ್ ಬಂದಿದ್ದಳು. ನಾಪತ್ತೆ ಮತ್ತು ಸಾವು: ಪಾರ್ಕಿಂಗ್ ಸ್ಥಳಕ್ಕೆ ಹಿಂದಿರುಗಿದ ಬಾಲಕಿ ಅಲ್ಲಿಂದ…
ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ವಯೋಮಿತಿಯಲ್ಲಿ 60 ದಿನಗಳ ರಿಯಾಯಿತಿ ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಏನಿದು ಹೊಸ ಆದೇಶ? ರಾಜ್ಯ ಶಿಕ್ಷಣ ನೀತಿಯನ್ವಯ, ಒಂದನೇ ತರಗತಿ ದಾಖಲಾತಿಗೆ ಜೂನ್ 1ನೇ ತಾರೀಖಿಗೆ ಮಗುವಿಗೆ ಕನಿಷ್ಠ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮವಿದೆ. ಆದರೆ, ಈ ನಿಯಮದಿಂದ ಅನೇಕ ಮಕ್ಕಳಿಗೆ ಶೈಕ್ಷಣಿಕ ವರ್ಷ ನಷ್ಟವಾಗುತ್ತಿರುವುದನ್ನು ಗಮನಿಸಿದ ಪೋಷಕರು ವಯೋಮಿತಿ ಸಡಿಲಿಕೆಗೆ ರಾಜ್ಯಾದ್ಯಂತ ಸತತವಾಗಿ ಮನವಿ ಸಲ್ಲಿಸಿದ್ದರು. ಪೋಷಕರ ಈ ಕೋರಿಕೆಯನ್ನು ಪುರಸ್ಕರಿಸಿರುವ ಸರ್ಕಾರ, ಕೇವಲ 2026-27ನೇ ಸಾಲಿಗೆ ಸೀಮಿತವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಿದೆ. ಯಾವ ಮಕ್ಕಳಿಗೆ ಅನ್ವಯವಾಗುತ್ತದೆ? 60 ದಿನಗಳ ಸಡಿಲಿಕೆ: ಶೈಕ್ಷಣಿಕ ವರ್ಷದ ಪ್ರಾರಂಭದ ದಿನಾಂಕವಾದ ಜೂನ್ 1ಕ್ಕೆ 6 ವರ್ಷ ಪೂರ್ಣಗೊಳ್ಳಲು ಗರಿಷ್ಠ 60 ದಿನಗಳು ಬಾಕಿ ಇರುವ ಮಕ್ಕಳನ್ನು ಕೂಡ ಈ ಬಾರಿ ಒಂದನೇ ತರಗತಿಗೆ…
ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ವಯೋಮಿತಿಯಲ್ಲಿ 60 ದಿನಗಳ ರಿಯಾಯಿತಿ ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಏನಿದು ಹೊಸ ಆದೇಶ? ರಾಜ್ಯ ಶಿಕ್ಷಣ ನೀತಿಯನ್ವಯ, ಒಂದನೇ ತರಗತಿ ದಾಖಲಾತಿಗೆ ಜೂನ್ 1ನೇ ತಾರೀಖಿಗೆ ಮಗುವಿಗೆ ಕನಿಷ್ಠ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮವಿದೆ. ಆದರೆ, ಈ ನಿಯಮದಿಂದ ಅನೇಕ ಮಕ್ಕಳಿಗೆ ಶೈಕ್ಷಣಿಕ ವರ್ಷ ನಷ್ಟವಾಗುತ್ತಿರುವುದನ್ನು ಗಮನಿಸಿದ ಪೋಷಕರು ವಯೋಮಿತಿ ಸಡಿಲಿಕೆಗೆ ರಾಜ್ಯಾದ್ಯಂತ ಸತತವಾಗಿ ಮನವಿ ಸಲ್ಲಿಸಿದ್ದರು. ಪೋಷಕರ ಈ ಕೋರಿಕೆಯನ್ನು ಪುರಸ್ಕರಿಸಿರುವ ಸರ್ಕಾರ, ಕೇವಲ 2026-27ನೇ ಸಾಲಿಗೆ ಸೀಮಿತವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಿದೆ. ಯಾವ ಮಕ್ಕಳಿಗೆ ಅನ್ವಯವಾಗುತ್ತದೆ? 60 ದಿನಗಳ ಸಡಿಲಿಕೆ: ಶೈಕ್ಷಣಿಕ ವರ್ಷದ ಪ್ರಾರಂಭದ ದಿನಾಂಕವಾದ ಜೂನ್ 1ಕ್ಕೆ 6 ವರ್ಷ ಪೂರ್ಣಗೊಳ್ಳಲು ಗರಿಷ್ಠ 60 ದಿನಗಳು ಬಾಕಿ ಇರುವ ಮಕ್ಕಳನ್ನು ಕೂಡ ಈ ಬಾರಿ ಒಂದನೇ ತರಗತಿಗೆ…
ಕ್ಯಾಲಿಫೋರ್ನಿಯಾ: ವಿಶ್ವದ ಪ್ರಮುಖ ಮೆಸೇಜಿಂಗ್ ಆ್ಯಪ್ ಆದ ‘ವಾಟ್ಸಾಪ್’ (WhatsApp) ನ ಪ್ರೈವೆಸಿ ವಿಚಾರವಾಗಿ ಟೆಕ್ ದೈತ್ಯ ಎಲೋನ್ ಮಸ್ಕ್ ಮತ್ತು ಮೆಟಾ ನಡುವೆ ಮತ್ತೆ ವಾಕ್ಸಮರ ಶುರುವಾಗಿದೆ. ವಾಟ್ಸಾಪ್ನ ಖಾಸಗಿತನವನ್ನು ನಂಬಲು ಸಾಧ್ಯವಿಲ್ಲ ಎಂದು ಮಸ್ಕ್ ಹೇಳಿಕೆ ನೀಡಿದ್ದಾರೆ. ವಿವಾದಕ್ಕೆ ಕಾರಣವೇನು? ಅಮೆರಿಕಾದಲ್ಲಿ ಮೆಟಾ ಕಂಪನಿಯ ವಿರುದ್ಧ ದಾಖಲಾಗಿರುವ ಹೊಸದೊಂದು ಕ್ಲಾಸ್ ಆಕ್ಷನ್ ಮೊಕದ್ದಮೆಯ (Class Action Lawsuit) ಹಿನ್ನೆಲೆಯಲ್ಲಿ ಈ ವಿವಾದ ಎದ್ದಿದೆ. ವಾಟ್ಸಾಪ್ ತನ್ನ ಬಳಕೆದಾರರ ಸಂದೇಶಗಳು ‘ಎಂಡ್-ಟು-ಎಂಡ್ ಎನ್ಕ್ರಿಪ್ಟ್’ ಆಗಿವೆ ಎಂದು ಹೇಳಿಕೊಂಡರೂ, ವಾಸ್ತವವಾಗಿ ಅವುಗಳನ್ನು ಮೂರನೇ ವ್ಯಕ್ತಿಗಳು ಅಥವಾ ಕಂಪನಿಗಳು (ಉದಾಹರಣೆಗೆ ಅಕ್ಸೆಂಚರ್) ಪ್ರವೇಶಿಸಲು ಅವಕಾಶ ನೀಡುತ್ತಿದೆ ಎಂದು ಈ ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ. ಎಲೋನ್ ಮಸ್ಕ್ ಮತ್ತು ಪಾವೆಲ್ ಡುರೊವ್ ಹೇಳಿದ್ದೇನು? ಎಲೋನ್ ಮಸ್ಕ್: ಈ ಕುರಿತಾದ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಮಸ್ಕ್, “ವಾಟ್ಸಾಪ್ ಅನ್ನು ನಂಬಲು ಸಾಧ್ಯವಿಲ್ಲ” (Can’t trust WhatsApp) ಎಂದು ಬರೆದಿದ್ದಾರೆ. ಅಲ್ಲದೆ, ಬಳಕೆದಾರರು ಸುರಕ್ಷಿತ ಸಂವಹನಕ್ಕಾಗಿ ತಮ್ಮದೇ ವೇದಿಕೆಯಾದ ‘X’…
ಮುಂಬೈ: ವಾರದ ಕೊನೆಯ ವಹಿವಾಟಿನ ದಿನವಾದ ಇಂದು ಭಾರತೀಯ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದೆ. ಹೂಡಿಕೆದಾರರ ಉತ್ಸಾಹದಿಂದಾಗಿ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಎರಡೂ ಸೂಚ್ಯಂಕಗಳು ಗಣನೀಯ ಲಾಭದೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿವೆ. ಮಾರುಕಟ್ಟೆಯ ಪ್ರಮುಖ ಮುಖ್ಯಾಂಶಗಳು: ಸೆನ್ಸೆಕ್ಸ್ ಜಿಗಿತ: ಬಿಎಸ್ಇ ಸೆನ್ಸೆಕ್ಸ್ 919 ಅಂಕಗಳ ಏರಿಕೆ ಕಂಡು ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ. ನಿಫ್ಟಿ ಸಾಧನೆ: ಎನ್ಎಸ್ಇ ನಿಫ್ಟಿ 24,000 ಎಂಬ ಮಹತ್ವದ ಮೈಲಿಗಲ್ಲನ್ನು ದಾಟಿ ವಹಿವಾಟು ಮುಕ್ತಾಯಗೊಳಿಸಿದೆ. ರೂಪಾಯಿ ಮೌಲ್ಯ: ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು 22 ಪೈಸೆ ಕುಸಿದು 92.7275 ಕ್ಕೆ ತಲುಪಿದೆ. ಲಾಭ ಮತ್ತು ನಷ್ಟದ ಲೆಕ್ಕಾಚಾರ: ಹೆಚ್ಚು ಲಾಭ ಗಳಿಸಿದವರು: ಐಸಿಐಸಿಐ ಬ್ಯಾಂಕ್ (ICICI Bank) ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ (M&M) ತಲಾ 3% ಕ್ಕಿಂತ ಹೆಚ್ಚು ಏರಿಕೆ ಕಾಣುವ ಮೂಲಕ ಮಾರುಕಟ್ಟೆಯ ಮುಂಚೂಣಿಯಲ್ಲಿದ್ದವು. ಐಟಿ ವಲಯದಲ್ಲಿ ಹಿನ್ನಡೆ: ಮಾರುಕಟ್ಟೆ ಒಟ್ಟಾರೆಯಾಗಿ ಏರಿಕೆ ಕಂಡಿದ್ದರೂ, ಐಟಿ ವಲಯದ ಷೇರುಗಳು…














