Author: kannadanewsnow09

ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ಸಂಪುಟ ಪುನಾರಚನೆ ಆಗಲಿದೆ ಎನ್ನುವ ಮಾತು ಸತ್ಯವಾಗುವಂತಿದೆ. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಂಪುಟ ಪುನಾರಚನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸಂಪುಟ ಪುನಾರಚನೆ ವೇಳೆ ಯಾರು ಇನ್? ಯಾರು ಔಟ್ ಎನ್ನುವ ಸಂಭಾವ್ಯ ಪಟ್ಟಿಯ ಬಗ್ಗೆ ಮುಂದೆ ಓದಿ. ರಾಜ್ಯ ಸಂಪುಟ ಪುನಾರಚನೆ ಖಚಿತವೆನ್ನಲಾಗುತ್ತಿದೆ. ಹಾಲಿ ಸಚಿವ ಸಂಪುಟದ 12 ಮಂದಿಯನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಖಾಲಿ ಇದ್ದಂತ 2 ಸ್ಥಾನಗಳನ್ನು ಭರ್ತಿ ಮಾಡಲು ಸಿಎಂ ಸಿದ್ಧರಾಮಯ್ಯ ಪ್ಲಾನ್ ಮಾಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಕಾಂಗ್ರೆಸ್ ಉನ್ನತ ಮೂಲಗಳಂತೆ ಹಾಲಿ 12 ಸಚಿವರಿಗೆ ಕೋಕ್ ಕೊಟ್ಟು, ಹೊಸಬರಿಗೆ ಅವಕಾಶವನ್ನು ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ ಒಂದು ವೇಳೆ ಇನ್ನೂ ಹೆಚ್ಚಿನ ಸಚಿವರಿಗೆ ಗೇಟ್ ಪಾಸ್ ನೀಡಿ ಅಂದ್ರೆ ಅದಕ್ಕೂ ಸಿಎಂ ಸಿದ್ಧರಾಮಯ್ಯ ಪ್ಲಾನ್ 2 ರೆಡಿ ಮಾಡಿಟ್ಟುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಾಗಾದ್ರೇ ಯಾರು ಔಟ್..? ಯಾರು…

Read More

ಬೆಂಗಳೂರು: ಕೇವಲ ಬೆಂಗಳೂರು ಮಾತ್ರವಲ್ಲದೆ ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲೇ ನಾಯಿ, ಹಾವು ಹಾಗೂ ಇತರೆ ಪ್ರಾಣಿಗಳ ಕಡಿತದಿಂದ ಸಾವಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಈ ಕುರಿತು ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿತ್ತು. ಆದರೆ ಕೆಲವು ರಾಜ್ಯಗಳು ಮಾತ್ರ ಸುಪ್ರೀಂ ಕೋರ್ಟ್ ಗೆ ವರದಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ವರದಿ ಸಲ್ಲಿಸದ ರಾಜ್ಯಗಳಿಗೆ ಇತ್ತೀಚಿಗೆ ಚೀಮಾರಿ ಹಾಕಿತ್ತು. ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ರಾಜ್ಯದ ಆಸ್ಪತ್ರೆಗಳಲ್ಲಿ ಪ್ರಾಣಿ ಕಡಿತಕ್ಕೆ ಮುಂಗಡ ಹಣ ಕೇಳದೇ ತಕ್ಷಣ ಪ್ರಥಮ ಚಿಕಿತ್ಸೆ ನೀಡುವುದು ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ. ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲೇ ಎಚ್ಚೆತ್ತು ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಗಳಿಗೆ ಸುತ್ತೋಲೆ ಹೊರಡಿಸಿದೆ. ಹೌದು ಸುಪ್ರೀಂ ಕೋರ್ಟ್ ಎಚ್ಚರಿಕೆಯ ನಂತರ ಸರ್ಕಾರವು ನಾಯಿ, ಹಾವು ಕಡಿತಕ್ಕೆ ಉಚಿತ ತುರ್ತು ಚಿಕಿತ್ಸೆ, ಆ್ಯಂಟಿ-ರೇಬೀಸ್ ಲಸಿಕೆ ಮತ್ತು ಪ್ರಥಮ…

Read More

ಬೆಂಗಳೂರು: ಸರ್ಕಾರಿ ಉದ್ಯೋಗಿಯೊಬ್ಬ ವೃತ್ತಿಯಲ್ಲಿದ್ದಾಗಲೇ ಅಕಾಲಿಕ ಮರಣ ಹೊಂದಿದಂತ ಸಂದರ್ಭದಲ್ಲಿ ಅವರ ಅವಲಂಬಿತರಿಗೆ ಅನುಕಂಪದ ಆಧಾರದ ಉದ್ಯೋಗವನ್ನು ನೀಡಲು ಅವಕಾಶವಿದೆ. ಈ ರೀತಿಯ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೆಲ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ. ಹಾಗಾದ್ರೇ ಚೆಕ್ ಲೀಸ್ಟ್ ಏನು ಅಂತ ಮುಂದಿದೆ ಓದಿ. ಅನುಂಕಪದ ಆಧಾರದ ಮೇಲೆ ನೇಮಕಾತಿ ಪ್ರಸ್ತಾವನೆ ಸಲ್ಲಿಸಲು ನಮೂನೆ-1ರಲ್ಲಿ ನಿಯಮ-5ರ ಅನ್ವಯದಂತೆ ಅರ್ಜಿಯನ್ನು ಸಲ್ಲಿಸಬೇಕು. ಆ ಬಳಿಕ ನಮೂನೆ-2ರಂತೆ ವರದಿಯನ್ನು ಕೂಡ ನೀಡಬೇಕಾಗಿದೆ. ಸರ್ಕಾರಿ ನೌಕರನು ಮರಣ ಹೊಂದಿದ ದಿನಾಂಕ, ಅಭ್ಯರ್ಥಿಯ ಜನ್ಮ ದಿನಾಂಕ ಸೇರಿದಂತೆ ಇತರೆ ಮಾಹಿತಿಯನ್ನು ನೀಡಬೇಕಿದೆ. ಹೀಗಿದೆ ಅನುಕಂಪದ ಆಧಾರದ ನೇಮಕಾತಿಗೆ ಸಲ್ಲಿಸಬೇಕಾದ ದಾಖಲೆಯ ಚೆಕ್ ಲೀಸ್ಟ್ ಅಭ್ಯರ್ಥಿಯು ಸರ್ಕಾರಿ ನೌಕರನು ಮರಣ ಹೊಂದಿದ ಒಂದು ವರ್ಷದಲ್ಲಿ ನಿಯಮ 5ರಡಿ ಅರ್ಜಿ ಸಲ್ಲಿಸುವುದು ಎಸ್ ಎಸ್ ಎಲ್ ಸಿ ಅಂಕ ಪಟ್ಟಿ ಪಿಯುಸಿ ಅಂಕಪಟ್ಟಿ ಪದವಿ ತೇರ್ಗಡೆ ಅಂಕಪಟ್ಟಿ ನಿಯಮ 4(3)ರಡಿ ಅಭ್ಯರ್ಥಿಯ ವಿದ್ಯಾರ್ಹತೆ ಮಾಹಿತಿ ಸಲ್ಲಿಸುವುದು ದಿವಂಗತ…

Read More

ಬೆಂಗಳೂರು: ದಿನಾಂಕ 18.11.2025 ಮಂಗಳವಾರದ ನಾಳೆ ಬೆಳಿಗ್ಗೆ 11:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ “66/11 ಕೆ.ವಿ ಶೋಭಾ ಸಿಟಿ ಉಪ-ಕೇಂದ್ರ” ದಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದಾಗಿ ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: “ಶೊಭಾ ಸಿಟಿ, ಚೊಕ್ಕನಹಳ್ಳಿ, ಡೋಮಿನೊ ಪಿಜ್ಜಾ ಇನ್ ಪ್ಯಾರಡೈಸ್ ನೂರ್ ನಗರ, ಎಕ್ಸ್ ಸರ್ವಿಸ್‌ಮೆನ್ ಲೇಔಟ್, ಪೋಲೀಸ್ ಕ್ವಾಟ್‌ರ್ಸ್, ಆರ್ ಕೆ ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಯು, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪರ‍್ಕ್, ಎಸ್ತರ್ ಹರ‍್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್, ಸ್ಲಂ ಬರ‍್ಡ್ ಮತ್ತು ಬೆಂಚ್ ರಾಯಲ್ ವುಡ್, ರ‍್ಕಾವತಿ ಲೇಔಟ್ ಥಣಿಸಂದ್ರ, ಆರ್ ಕೆ ಹೆಗಡೆ ನಗರ, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನಸೌಧ ಲೇಔಟ್, ರ‍್ನಾಟಕ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ.…

Read More

ನವದೆಹಲಿ: ಪ್ರತಿಯೊಬ್ಬ ಉದ್ಯೋಗಿ ತಿಂಗಳ ಕೊನೆಯಲ್ಲಿ ತಮ್ಮ ಸಂಬಳಕ್ಕಾಗಿ ಕಾಯುತ್ತಾರೆ. ಆದರೆ ಅನೇಕ ಕಂಪನಿಗಳು ಸಾಮಾನ್ಯವಾಗಿ ಸಂಬಳ ಪಾವತಿಗಳನ್ನು ಮುಂದೂಡುತ್ತವೆ. ಉದ್ಯೋಗಿಗಳು ಸಹ ಮೌನವಾಗಿರುತ್ತಾರೆ. ಆದರೆ ಸಂಬಳವನ್ನು ತಡೆಹಿಡಿಯುವುದು ಕಾನೂನಿನ ಪ್ರಕಾರ ಅಪರಾಧ. ಹಾಗಾದ್ರೆ ನೌಕರರು ತಮ್ಮ ಸಂಬಳ ವಿಳಂಬವಾದರೇ ಯಾವ ಕಾನೂನು ಕ್ರಮ ಕೈಗೊಳ್ಳಬಹುದು ಎನ್ನುವ ಬಗ್ಗೆ ಮುಂದೆ ಓದಿ. ಸಂಬಳವು ಒಂದು ತಿಂಗಳ ಕಠಿಣ ಪರಿಶ್ರಮಕ್ಕೆ ಗೌರವವಾಗಿದೆ. ಉದ್ಯೋಗದಾತರು ಸಾಮಾನ್ಯವಾಗಿ ನೆಪಗಳನ್ನು ನೀಡಿ ವೇತನವನ್ನು ನೀಡುವುದು ವಿಳಂಬ ಮಾಡುತ್ತಾರೆ ಮತ್ತು ಉದ್ಯೋಗಿಗಳು ಮೌನವಾಗಿರುತ್ತಾರೆ. ಆದರೆ ಸಂಬಳವನ್ನು ವಿಳಂಬ ಮಾಡುವುದು ಕಾನೂನುಬಾಹಿರ ಅಪರಾಧ. 1936 ರ ಭಾರತೀಯ ಕಾರ್ಮಿಕ ಕಾಯ್ದೆಯು ಪ್ರತಿಯೊಬ್ಬ ಉದ್ಯೋಗಿಯು ತಿಂಗಳ ಅಂತ್ಯದ 7 ದಿನಗಳ ಒಳಗೆ ತಮ್ಮ ಸಂಬಳವನ್ನು ಪಡೆಯಬೇಕು ಎಂದು ಹೇಳುತ್ತದೆ. ಸಣ್ಣ ಸಂಸ್ಥೆಗಳಿಗೆ (<1000 ಸಿಬ್ಬಂದಿ), ಇದು 7 ದಿನಗಳು. ಇದಕ್ಕಿಂತ ಹೆಚ್ಚಿನ ವಿಳಂಬಗಳು ಕಾನೂನುಬಾಹಿರ. ಸಂಬಳವನ್ನು ವಿಳಂಬ ಮಾಡುವ ಉದ್ಯೋಗದಾತರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬಹುದು. ವೇತನ ಪಾವತಿ ಕಾಯ್ದೆಯಡಿಯಲ್ಲಿ, ಉದ್ದೇಶಪೂರ್ವಕ ವಿಳಂಬವು ದಂಡ ಮತ್ತು…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ಅಣಬೆ ಕೃಷಿಯನ್ನು ಮಾಡುವುದು ಈಗ ಮತ್ತಷ್ಟು ಸುಲಭವಾಗಿದೆ. ಅದಕ್ಕಾಗಿ ಜಮೀನು ಇರಬೇಕು ಎಂದೇನೂ ಇಲ್ಲ. ನಿಮ್ಮ ಮನೆಯಲ್ಲೇ ಒಂದು ಬಕೆಟ್ ನಲ್ಲಿ ಅಣಬೆಯನ್ನು ಬೆಳೆಯಬಹುದಾಗಿದೆ. ಹಾಗಾದ್ರೇ ಬಕೆಟ್‌ಗಳಲ್ಲಿ ಮನೆಯಲ್ಲಿ ಅಣಬೆಗಳನ್ನು ಬೆಳೆಯೋದಕ್ಕೆ ಮುಂದಿನ ಹಂತಗಳನ್ನು ಅನುಸರಿಸಿ, ಬೆಳೆಯಿರಿ. ಹಂತ 1: ಹುಲ್ಲು ತಯಾರಿಸುವುದು ಸೂಕ್ತವಾದ ಒಣಹುಲ್ಲಿನ ಪ್ರಮಾಣವನ್ನು ಸಂಗ್ರಹಿಸುವ ಮೂಲಕ ಪ್ರಾರಂಭಿಸಿ. ಗೋಧಿ ಅಥವಾ ಓಟ್ ಸ್ಟ್ರಾ ಮಶ್ರೂಮ್ ಕೃಷಿಗೆ ಸೂಕ್ತವಾಗಿದೆ. ಒಣಹುಲ್ಲಿನ ತುಂಡುಗಳನ್ನು ಸುಮಾರು 2-4 ಇಂಚುಗಳಷ್ಟು ಉದ್ದದಲ್ಲಿ ಕತ್ತರಿಸಿ. ಹಂತ 2: ಒಣಹುಲ್ಲಿನ ಕುದಿಸುವುದು ಕತ್ತರಿಸಿದ ಒಣಹುಲ್ಲಿನ ದೊಡ್ಡ ಪಾತ್ರೆಯಲ್ಲಿ ಇರಿಸಿ ಮತ್ತು ಅದನ್ನು ನೀರಿನಿಂದ ಮುಚ್ಚಿ. ನೀರನ್ನು ಕುದಿಸಿ ಮತ್ತು ಒಣಹುಲ್ಲಿನ ಕ್ರಿಮಿನಾಶಕಕ್ಕೆ ಕುದಿಯಲು ಬಿಡಿ. ಕುದಿಸಿದ ನಂತರ, ಒಣಹುಲ್ಲಿನ ಕೋಣೆಯ ಉಷ್ಣಾಂಶಕ್ಕೆ ತಣ್ಣಗಾಗಲು ಬಿಡಿ. ಹಂತ 3: ಮಶ್ರೂಮ್ ಬೀಜಗಳನ್ನು ಪಡೆದುಕೊಳ್ಳುವುದು IIHR KVK ಹಿರೇಹಳ್ಳಿ ಇಂದ ಬೀಜ ಪಡೆಯಿರಿ. ವಿಶ್ವಾಸಾರ್ಹ ಪೂರೈಕೆದಾರರಿಂದ ಮಶ್ರೂಮ್ ಸ್ಪಾನ್ ಎಂದು ಕರೆಯಲ್ಪಡುವ ಅಣಬೆ ಬೀಜಗಳನ್ನು…

Read More

ಏಲಕ್ಕಿಯು ನೆರಳು-ಪ್ರೀತಿಯ ಸಸ್ಯವಾಗಿದೆ (ಸಿಯೋಫೈಟ್) ಮತ್ತು ಎತ್ತರದ, ನಿತ್ಯಹರಿದ್ವರ್ಣ ಅರಣ್ಯ ಮರಗಳ ಮೇಲಾವರಣದ ಅಡಿಯಲ್ಲಿ ಇಳಿಜಾರುಗಳಲ್ಲಿ ಆರ್ದ್ರ, ಉಪೋಷ್ಣವಲಯದ ನೈಸರ್ಗಿಕ ಆವಾಸಸ್ಥಾನದಲ್ಲಿ ಸಮುದ್ರ ಮಟ್ಟದಿಂದ 600 ರಿಂದ 2300 ಮೀ ವರೆಗೆ ಐಷಾರಾಮಿಯಾಗಿ ಬೆಳೆಯುತ್ತದೆ. ಮಧ್ಯಮ ನೆರಳು, ಹೆಚ್ಚಿನ ಆರ್ದ್ರತೆ ಮತ್ತು ತಂಪಾದ ಪರಿಸರವು ಅದರ ತೃಪ್ತಿಕರ ಬೆಳವಣಿಗೆ ಮತ್ತು ಉತ್ಪಾದನೆಗೆ ಅವಶ್ಯಕವಾಗಿದೆ. ಬೆಳೆಯುತ್ತಿರುವ ಪ್ರದೇಶಗಳಲ್ಲಿ ತಾಪಮಾನವು 10-30 ° C ನಿಂದ ಬದಲಾಗುತ್ತದೆ. ಸರಾಸರಿ ವಾರ್ಷಿಕ ಮಳೆಯು 200 ರಿಂದ 350 ಸೆಂ.ಮೀ ವರೆಗೆ 200 ದಿನಗಳವರೆಗೆ ಹರಡುತ್ತದೆ. ಇದು ಗಾಳಿ ಮತ್ತು ಬರಕ್ಕೆ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಸಾಕಷ್ಟು ಹ್ಯೂಮಸ್ ಮತ್ತು ಎಲೆಗಳ ಅಚ್ಚು ಹೊಂದಿರುವ ಚೆನ್ನಾಗಿ ಬರಿದುಹೋದ, ಸಮೃದ್ಧ ಅರಣ್ಯ ಮಣ್ಣಿನಲ್ಲಿ ಬೆಳೆ ಉತ್ತಮವಾಗಿ ಬೆಳೆಯುತ್ತದೆ. ಸಸ್ಯವು ಸಾಕಷ್ಟು ಮೇಲ್ಮೈ ಆಹಾರ ಬೇರುಗಳನ್ನು ಹೊಂದಿರುವುದರಿಂದ, ಮಣ್ಣು ಮೂಲಭೂತವಾಗಿ ಚೆನ್ನಾಗಿ ಬರಿದಾಗಬೇಕು. ಸಮೃದ್ಧ ಮತ್ತು ಚೆನ್ನಾಗಿ ಬರಿದುಹೋದ ಮಣ್ಣಿನಲ್ಲಿ ಸ್ಥಾಪಿಸಲಾದ ಏಲಕ್ಕಿ ತೋಟಗಳು ಹೆಚ್ಚಿನ ಇಳುವರಿಯನ್ನು ನೀಡುವುದರ ಜೊತೆಗೆ, ಗಣನೀಯವಾಗಿ…

Read More

ಬೆಂಗಳೂರು : “ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನಲ್ಲ. ನಾನು ಹಗಲು ರಾತ್ರಿ ದುಡಿದು ಪಕ್ಷ ಕಟ್ಟಿದ್ದೇನೆ. ಮುಂದೆಯೂ ಕಟ್ಟುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೀರಿ ಎಂಬ ಸುದ್ದಿ ಹರಿದಾಡುತ್ತಿರುವ ಬಗ್ಗೆ ಕೇಳಿದಾಗ, “ನನ್ನ ಮಾನಸಿಕ, ದೈಹಿಕ ಹಾಗೂ ರಾಜಕೀಯ ಆರೋಗ್ಯ ಸರಿಯಾಗಿದೆ. ನಾನು ಖರ್ಗೆ ಸಾಹೇಬರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ಡಿಸೆಂಬರ್ ತಿಂಗಳ ಒಳಗಾಗಿ ನೂರು ಕಾಂಗ್ರೆಸ್ ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲೇಬೇಕಾಗಿದೆ. ಗಾಂಧಿ ಭಾರತ ಎಂಬ ಪುಸ್ತಕ ರಚಿಸಿದ್ದೇನೆ. ಇದರ ಬಿಡುಗಡೆಗೆ ದಿನಾಂಕ ನಿಗದಿ ಮಾಡಬೇಕಾಗಿದೆ. ಸದ್ಯದಲ್ಲೇ ಸಂಸತ್ ಅಧಿವೇಶನ ಆರಂಭವಾಗಲಿದೆ. ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಣೆ ಮಾಡಬೇಕು. ಇದೆಲ್ಲವನ್ನು ಯಾರು ಮಾಡಬೇಕು? ನಾನೇ ಮಾಡಬೇಕು. ನಾನೇಕೆ ರಾಜಿನಾಮೆ ನೀಡಲಿ. ಈಗ ಅಂತಹ ಸಂದರ್ಭವಿಲ್ಲ” ಎಂದು ತಿಳಿಸಿದರು. “ಕಾಂಗ್ರೆಸ್ ಪಕ್ಷ ಎಲ್ಲಿಯವರೆಗೂ ಈ…

Read More

ಶಿವಮೊಗ್ಗ: ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಲಗೋಡು ರತ್ನಾಕರ್ ರವರಿಗೆ ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಹೊಸನಗರ ತಾಲೂಕು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಅವರಲ್ಲಿ ನಿಯೋಗ ಮನವಿ ಮಾಡಿದೆ. ನಿಯೋಗದ ಪರವಾಗಿ ಮಾತನಾಡಿದ ಹೊಸನಗರ ತಾಲೂಕ್ ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರಂ ಕಲಗೋಡು ರತ್ನಾಕರ್ ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನಿಂದ ನಿಂದ ಜಿಪಂ ಅಧ್ಯಕ್ಷ ಗಾದಿಗೆ ಏರುವ ಮೂಲಕ ಹೊಸನಗರ ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ. ಅವರ ಪಕ್ಷ ನಿಷ್ಠೆ ಹಾಗೂ ಕ್ರೀಯಾಶೀಲತೆಯನ್ನು ಪಕ್ಷದ ಹೈಕಮಾಂಡ್ ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ನಮ್ಮೆಲ್ಲರ ಹೆಬ್ಬಯಕೆಯಾಗಿದೆ. ಈ ನಿಟ್ಟಿನಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ನೀಡಲಿ ಎಂದು…

Read More

ಮಂಡ್ಯ : ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಕೆ.ಎಂ.ಉದಯ್ ಹೇಳಿದರು. ಮದ್ದೂರು ನಗರದ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತಿಚಿನ ದಿನಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಜನರ ಪಾಲಿಗೆ ಸಂಜೀವಿನಿಯಂತಾಗಿದೆ. ದಿನದಿಂದ ದಿನಕ್ಕೆ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿಯಂತಹ ಹಲವು ಸಮಸ್ಯೆಗಳಿಗೆ ತುತ್ತಾಗುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ. ಇವು ಶ್ರೀಮಂತ ಖಾಯಿಲೆಗಳಾಗಿದ್ದು, ಬಡ ಜನರು ಆರ್ಥಿಕವಾಗಿ ಭರಿಸಲು ಅಸಾಧ್ಯವಾಗಿದೆ‌. ಹೀಗಾಗಿ ನಗರ ಹಾಗೂ ಗ್ರಾಮೀಣ ಭಾಗದ ಬಡ ಜನರಿಗೆ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಚಿಕಿತ್ಸೆಗೆ ಒಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಗಲಿದೆ ಎಂದರು. ಈಗಾಗಲೇ…

Read More