Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ಜಿಲ್ಲೆಯ ಸೊರಬ ವಿಧಾನಸಭಾ ವ್ಯಾಪ್ತಿಯ ತಾಳಗುಪ್ಪದ ಗ್ರಾಮ ಪಂಚಾಯ್ತಿಯ ಮಳಿಗೆಗಳನ್ನು ಸದ್ದಿಲ್ಲದೇ ತರಾತುರಿಯಲ್ಲಿ ಹರಾಜು ಮುಕ್ತಾಯಗೊಳಿಸಲಾಗಿದೆ. ಯಾವುದೇ ಪ್ರಚಾರವಿಲ್ಲದೇ ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆಗಳ ಹರಾಜು ಪ್ರಕ್ರಿಯೆಗಳನ್ನು ಕೊನೆಗೊಳಿಸಿದ್ದರ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. ಹೌದು.. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ, ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಮಳಿಗೆಗಳನ್ನು ಪ್ರಚಾರವೇ ಇಲ್ಲದೇ ಟೆಂಡರ್ ಕರೆಯಲಾಗಿದೆ. ದಿನಾಂಕ 22-01-2026ರಂದು ಟೆಂಡರ್ ಆಹ್ವಾನಿಸಿದಂತೆ ತಾಳಗುಪ್ಪ ಸಂತೆ ಸುಂಕದ ಹರಾಜು, ಹಸಿ ಮೀನು ಮಾರಾಟದ ಮೂರು ಅಂಗಡಿಗಳ ಹಕ್ಕು, 2 ಒಣ ಮೀನಿನ ಅಂಗಡಿ, ಕಸಾಯಿ ಅಂಗಡಿ ನಡೆಸೋದಕ್ಕೆ ಲೈಸೆನ್ಸ್, ಕೋಳಿ ಅಂಗಡಿ ನಡೆಸೋದಕ್ಕೆ ಲೈಸೆನ್ಸ್ ಫೀ ಕುರಿತ ಮಾಹಿತಿ ನೀಡಲಾಗಿದೆ. ಆದರೇ ಈ ಮಳಿಗೆಗಳ ಅವಧಿ ದಿನಾಂಕ 01-04-2026ರವರೆಗೆ ಇದೆ. ಇನ್ನೂ ದಿನಾಂಕ 22-03-2026 ಬಾರದೇ ಇದ್ದರೂ ಆ ದಿನಾಂಕದಲ್ಲಿ ಪ್ರಕಟಿಸಿದಂತ ಪಾಪ್ಲೆಟ್ಸ್ ನಲ್ಲಿ ತಾಳಗುಪ್ಪದ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳ ಎರಡು ಅಂಗಡಿಗಳ ಟೆಂಡರ್ ಗೆ ಕರೆಯಲಾಗಿದೆ. ಈ…
ನವದೆಹಲಿ: ಬೈಕ್ ನಲ್ಲಿ ಬಂದು ರೋಡಲ್ಲಿ ಒಂಟಿಯಾಗಿ ಹೋಗುತ್ತಿದ್ದ ಮಹಿಳೆ, ವೃದ್ಧೆಯರ ಸರ ಕಳ್ಳತನ ಕೇಳಿದ್ದೀರಿ. ಇದಲ್ಲೂ ವಿಚಿತ್ರ ಎನ್ನುವಂತೆ ಲಿಫ್ಟ್ ನಲ್ಲಿದ್ದಂತ ಮಹಿಳೆಯ ಸರವನ್ನೇ ಕಿತ್ತುಕೊಂಡು ಕಳ್ಳನೊಬ್ಬ ಪರಾರಿಯಾಗಿರುವಂತ ಘಟನೆ ಭೂಪಾಲ್ ನಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಭಾರತದ ಪ್ರಮುಖ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಏಮ್ಸ್ ಭೋಪಾಲ್ನಲ್ಲಿ ನಡೆದ ಸರ ಕಳ್ಳತನ ಘಟನೆಯು ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ. ಮುಸುಕುಧಾರಿ ವ್ಯಕ್ತಿಯೊಬ್ಬ ಆಸ್ಪತ್ರೆಯ ಲಿಫ್ಟ್ನಲ್ಲಿದ್ದ ಮಹಿಳಾ ಉದ್ಯೋಗಿಯ ಸರವನ್ನು ಕಿತ್ತುಕೊಂಡು ಆವರಣದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ವರದಿಗಳ ಪ್ರಕಾರ, ಈ ಘಟನೆಯು ಏಮ್ಸ್ ಭೋಪಾಲ್ನಲ್ಲಿ ನಡೆದ ಮೊದಲ ಸರ ಕಳ್ಳತನ ಪ್ರಕರಣವಾಗಿದ್ದು, ಹೆಚ್ಚಿನ ಭದ್ರತೆಯ ಆಸ್ಪತ್ರೆ ಕ್ಯಾಂಪಸ್ನೊಳಗೆ ಕಣ್ಗಾವಲು ಮತ್ತು ಪ್ರವೇಶ ನಿಯಂತ್ರಣದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಂತ್ರಸ್ತೆ ಏಮ್ಸ್ ಭೋಪಾಲ್ನ ಸ್ತ್ರೀರೋಗ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿ. ನಿರ್ಬಂಧಿತ ಪ್ರವೇಶ ಮತ್ತು ಕ್ಯಾಂಪಸ್ನಾದ್ಯಂತ ಭದ್ರತಾ ಸಿಬ್ಬಂದಿಯ ಉಪಸ್ಥಿತಿಯಿಂದಾಗಿ ಆಸ್ಪತ್ರೆಯೊಳಗೆ ಸಾಮಾನ್ಯವಾಗಿ ಸುರಕ್ಷಿತ ಸ್ಥಳವೆಂದು ಪರಿಗಣಿಸಲಾದ ಲಿಫ್ಟ್ನೊಳಗೆ ಅವಳನ್ನು…
ಬೆಂಗಳೂರು: ಬಿಜೆಪಿಯ ಯೋಗೀಶ್ ಗೌಡ ಕೊಲೆ ಪ್ರಕರಮದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಕೋರ್ಟ್ ಬಿಗ್ ಶಾಕ್ ನೀಡಿದೆ. ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಶಾಕ್ ಮೇಲೆ ಶಾಕ್ ನೀಡಲಾಗಿದೆ. ಈ ಕುರಿತಂತೆ ಇಂದು ಕರ್ನಾಟಕ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಸಲಾಯಿತು. ವಾದ-ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರನ್ನೊಳಗೊಂಡಂತ ಏಕಸದಸ್ಯ ನ್ಯಾಯಪೀಠವು, ವಿನಯ್ ಕುಲಕರ್ಣಿಗೆ ಜಾಮೀನು ನೀಡಲು ನಿರಾಕರಿಸಿದೆ. ಆ ಮೂಲಕ ಅವರು ಸಲ್ಲಿಸಿದ್ದಂತ ಅರ್ಜಿಯನ್ನು ವಜಾಗೊಳಿಸಿದೆ. ಅಂದಹಾಗೇ ಕಳೆದ ಜೂನ್.15, 2016ರಂದು ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು 15ನೇ ಆರೋಪಿಯಾಗಿದ್ದಾರೆ. ಅವರು ಕಳೆದ ಜೂನ್.13, 2025ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.
ಶಿವಮೊಗ್ಗ: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ನೀಡಿದ್ದಂತ ಮಾತ್ರೆಯನ್ನು ಸೇವಿಸಿ 59 ಮಕ್ಕಳು ಅಸ್ವಸ್ಥಗೊಂಡಿರುವಂತ ಘಟನೆ ಅರಳಿಹಳ್ಳಿಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರಳಿಹಳ್ಳಿಯಲ್ಲಿ ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳಿಗೆ ಖನಿಜಾಂಶದ ಮಾತ್ರೆ ನೀಡಲಾಗಿತ್ತು. ಅನಿಮಿಯಾ ತಡೆಗಟ್ಟೋ ಸಂಬಂಧ ವಾರಕ್ಕೊಮ್ಮೆ ಖನಿಜಾಂಶದ ಮಾತ್ರೆಯನ್ನು ನೀಡಲಾಗುತ್ತಿತ್ತು. ಇಂದು ಕೂಡ ಖನಿಜಾಂಶ ಯುಕ್ತ ಮಾತ್ರೆಯನ್ನು ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗಿತ್ತು. ಈ ಮಾತ್ರೆಯನ್ನು ಸೇವಿಸಿದ್ದಂತಿಂದ 59 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. https://kannadanewsnow.com/kannada/gram-panchayat-offices-in-the-state-will-be-named-after-mahatma-gandhi-dcm-d-k-shivakumar-announces/
ನವದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ನಡುವಿನ ವ್ಯಾಪಾರ ಒಪ್ಪಂದದ ಕುರಿತಾದ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿ, ಮಂಗಳವಾರ ಬೆಂಚ್ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆಯಾಗಿ ಮುಕ್ತಾಯಗೊಂಡವು. ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ 319.78 ಪಾಯಿಂಟ್ಗಳ ಏರಿಕೆಯಾಗಿ 81,857.48 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 50 ಮಧ್ಯಾಹ್ನ 3:51 ರ ವೇಳೆಗೆ 127.50 ಪಾಯಿಂಟ್ಗಳನ್ನು ಹೆಚ್ಚಿಸಿ 25,175.40 ಕ್ಕೆ ತಲುಪಿದೆ. ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್, ದೇಶೀಯ ಮಾರುಕಟ್ಟೆಯು ಅಸ್ಥಿರ ವಹಿವಾಟನ್ನು ಪ್ರದರ್ಶಿಸಿತು ಮತ್ತು ಮಾಸಿಕ ಮುಕ್ತಾಯ ದಿನದಂದು ವಹಿವಾಟನ್ನು ಸಕಾರಾತ್ಮಕವಾಗಿ ಕೊನೆಗೊಳಿಸಿತು, ಮಿಶ್ರ ಸೂಚನೆಗಳು ಮತ್ತು ಭಾರತ-EU ವ್ಯಾಪಾರ ಒಪ್ಪಂದದ ಮುಕ್ತಾಯದ ಸುತ್ತಲಿನ ಆಶಾವಾದದಿಂದ ಸರಿದೂಗಿಸಲ್ಪಟ್ಟ ನವೀಕರಿಸಿದ ಸುಂಕದ ಕಾಳಜಿಗಳಿಂದ ಪ್ರಭಾವಿತವಾಗಿದೆ ಎಂದು ಹೇಳಿದರು. ಮುಕ್ತಾಯದ ಗಂಟೆಯ ನಂತರ, ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಜೋನ್ ಲಿಮಿಟೆಡ್ 4.47% ಏರಿಕೆಯೊಂದಿಗೆ ಸೆನ್ಸೆಕ್ಸ್ ಲಾಭ ಗಳಿಸಿದವರಲ್ಲಿ ಅಗ್ರಸ್ಥಾನದಲ್ಲಿದೆ. ನಂತರ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ 4.31% ಏರಿಕೆ ಕಂಡಿತು.…
ಶಿವಮೊಗ್ಗ : ಹವಾಮಾನ ಆಧಾರಿತ ಬೆಳೆ ವಿಮೆಯು ರೈತರಿಗೆ ಸಮರ್ಪಕವಾಗಿ ಲಭಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಕಳೆದ ಬಾರಿ ವಿಮೆ ಪಡೆಯುವಲ್ಲಿ ರೈತರಿಗೆ ಆದ ಅನ್ಯಾಯವನ್ನು ಸಹ ಸರಿಪಡಿಸಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದಂತ ಅವರು, ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಜಿಲ್ಲೆಯ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ. ಕಳೆದ ಸಾಲಿನಲ್ಲಿ ರೂ. 70-80 ಕೋಟಿಯಷ್ಟು ವಿಮಾ ಮೊತ್ತ ನಷ್ಟವಾಗಿದೆ. ಆದ್ದರಿಂದ ಬೆಳೆ ನಷ್ಟವನ್ನು ನಿರ್ಧರಿಸುವ ಮಳೆ ಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಒಟ್ಟು 280 ಮಳೆ ಮಾಪನ ಕೇಂದ್ರಗಳಿದ್ದು ಇದರಲ್ಲಿ 112 ಅಂದರೆ ಕೇವಲ ಶೇ.40 ರಷ್ಟು ಮಾತ್ರ ಕೆಲಸ ಮಾಡುತ್ತಿವೆ ಎಂದು ವರದಿ ನೀಡಲಾಗಿದೆ. ಈ ಕೇಂದ್ರಗಳ ಬ್ಯಾಕ್ ಅಪ್ ಸ್ಟೇಷನ್ಗಳು ಸಹ ಸರಿ ಇಲ್ಲ. ಈ ಬಗ್ಗೆ ಅಧಿಕಾರಿಗಳು ಅಧ್ಯಯನ…
ಬೆಂಗಳೂರು: ಯುಪಿಎ ಸರಕಾರವು ಗ್ರಾಮೀಣ ಜನರ ಹಿತದೃಷ್ಟಿಯಿಂದ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ಮನರೇಗಾ) ಹಿಂದಿನಂತೆಯೇ ಯಥಾವತ್ತಾಗಿ ಮುಂದುವರಿಸಬೇಕು. ಅಲ್ಲಿಯವರೆಗೂ ಕಾಂಗ್ರೆಸ್ ಪಕ್ಷವು ಇದಕ್ಕಾಗಿ ಸದನದ ಒಳಗೂ ಹೊರಗೂ ಹೋರಾಡಲಿದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಈ ಯೋಜನೆಯ ಹೆಸರನ್ನು ಕೇಂದ್ರ ಸರಕಾರವು ವಿಬಿ-ಜಿ ರಾಮ್ ಜಿ ಎಂದು ಬದಲಿಸಿರುವುದನ್ನು ವಿರೋಧಿಸಿ ಮತ್ತು ಯೋಜನೆಯ ಸ್ವರೂಪದಲ್ಲಿ ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಮತ್ತು ರಾಜಭಚನ ಚಲೋ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೆ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರ ಒತ್ತಾಸೆಯಿಂದ ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಆಶಯಕ್ಕೆ ತಕ್ಕಂತೆ ಮನರೇಗಾ ಯೋಜನೆಯನ್ನು ರೂಪಿಸಲಾಗಿತ್ತು. ಈಗ ಮೋದಿ ಸರಕಾರ ಇಂತಹ ಯೋಜನೆಯನ್ನೇ ಹಾಳು ಮಾಡಿದೆ ಎಂದು ಅವರು ಟೀಕಿಸಿದರು. ಇದು ಕೇಂದ್ರ ಸರಕಾರಿ ಪ್ರಾಯೋಜಿತ ಯೋಜನೆ ಎಂದು ಮೋದಿ ಹೇಳುತ್ತಿದ್ದಾರೆ.…
ಮುಂಬೈ: ಯಾಂತ್ರೀಕೃತ ಮತ್ತು ತ್ವರಿತ ಅಧಿಸೂಚನೆಗಳಿಂದ ಪ್ರಾಬಲ್ಯ ಹೊಂದಿರುವ ಸಮಾಜದಲ್ಲಿ, ಆಹಾರ ಆರ್ಡರ್ನೊಳಗೆ ಇರಿಸಲಾದ ಕೈಬರಹದ ಟಿಪ್ಪಣಿ ಎದ್ದು ಕಾಣುವ ಮತ್ತು ಗ್ರಾಹಕರ ಅನುಭವದ ಕುರಿತು ದೊಡ್ಡ ಸಂಭಾಷಣೆಯನ್ನು ಪ್ರಾರಂಭಿಸುವಲ್ಲಿ ಯಶಸ್ವಿಯಾಯಿತು. ಪುಡ್ ಆರ್ಡರ್ ಮಾಡಿದ್ದಂತ ಗ್ರಾಹಕರು ಆ ಕೈಬರಹದ ಟಿಪ್ಪಣಿ ಕಂಡು ಬೆರಗಾಗಿದ್ದು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ. ಮುಂಬೈ ಮೂಲದ ವೃತ್ತಿಪರ ನಿತಿನ್ ಚೌರಾಸಿಯಾ ಇತ್ತೀಚೆಗೆ ಸರಳ ಆಹಾರ ವಿತರಣೆಯು ಅನಿರೀಕ್ಷಿತವಾಗಿ ವ್ಯವಹಾರದಲ್ಲಿ ವೈಯಕ್ತೀಕರಣದ ಶಕ್ತಿಯನ್ನು ಹೇಗೆ ಪ್ರತಿಬಿಂಬಿಸುವಂತೆ ಮಾಡಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಲಿಂಕ್ಡ್ಇನ್ನಲ್ಲಿನ ಪೋಸ್ಟ್ನಲ್ಲಿ, ಚೌರಾಸಿಯಾ ತನ್ನ ಆಹಾರವನ್ನು ತೆರೆಯುವ ಮೊದಲು ಸಣ್ಣ ನೀಲಿ ಟಿಪ್ಪಣಿಯನ್ನು ಗಮನಿಸಿದ್ದನ್ನು ವಿವರಿಸಿದ್ದಾರೆ. ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಡುವ ಸಾಮಾನ್ಯ ಮುದ್ರಿತ ಫ್ಲೈಯರ್ಗಳು ಅಥವಾ QR ಕೋಡ್ಗಳಿಗಿಂತ ಭಿನ್ನವಾಗಿ, ಈ ಟಿಪ್ಪಣಿಯನ್ನು ಕೈಬರಹದಲ್ಲಿ ಬರೆಯಲಾಗಿತ್ತು, ಅಪ್ಲಿಕೇಶನ್-ಚಾಲಿತ ಅನುಕೂಲತೆಯ ಯುಗದಲ್ಲಿ ಅಸಾಮಾನ್ಯ ವಿವರ ಎಂದಿದ್ದಾರೆ. ಇಂದು ಹೆಚ್ಚಿನ ಆಹಾರ ಆರ್ಡರ್ಗಳನ್ನು ಸಂಪೂರ್ಣವಾಗಿ ತಂತ್ರಜ್ಞಾನದಿಂದ ಹೇಗೆ ಮಧ್ಯಸ್ಥಿಕೆ ವಹಿಸಲಾಗುತ್ತದೆ ಎಂಬುದನ್ನು ಚೌರಾಸಿಯಾ ಗಮನಸೆಳೆದರು. ಊಟವನ್ನು ಆಪ್…
ಜಬ್ಬಲ್ಪುರ: ಆ ಅಭ್ಯರ್ಥಿ ಉದ್ಯೋಗಕ್ಕಾಗಿ ಕಂಪನಿಯೊಂದಕ್ಕೆ ಸಂದರ್ಶನಕ್ಕೆ ತೆರಳಿದ್ದನು. ಆತನಿಗೆ ಉದ್ಯೋಗ ನೀಡುವ ಭರವಸೆಯೊಂದಿಗೆ ಒಂದು ವಾರಗಳ ಕಾಲ ನೀನು ಪ್ರಾಯೋಗಿಕವಾಗಿ ಕೆಲಸ ಮಾಡುವಂತೆ ಸೂಚಿಸಿತ್ತು. ಆಗ ಅಭ್ಯರ್ಥಿ ಕೊಟ್ಟ ಪ್ರತ್ಯುತ್ತರ ಏನು ಅಂದ ಮುಂದೆ ಓದಿ. ಜಬಲ್ಪುರದ ವೃತ್ತಿಪರರೊಬ್ಬರು ಉದ್ಯೋಗದ ಪ್ರಸ್ತಾಪವನ್ನು ತಿರಸ್ಕರಿಸಿದ ಅಭ್ಯರ್ಥಿಯ ಇಮೇಲ್ ಅನ್ನು ಹಂಚಿಕೊಳ್ಳುವ ಮೂಲಕ ನೇಮಕಾತಿ ಪದ್ಧತಿಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ತಮ್ಮ ಲಿಂಕ್ಡ್ಇನ್ ಪೋಸ್ಟ್ನಲ್ಲಿ, ಶುಭಂ ಶ್ರೀವಾಸ್ತವ ಅವರು ಕಚೇರಿಯಲ್ಲಿ ಒಂದು ವಾರದ ಪ್ರಾಯೋಗಿಕವಾಗಿ ಕೆಲಸ ಮಾಡುವಂತೆ ಕೇಳಿದ ನಂತರ ಆ ಉದ್ಯೋಗವನ್ನೇ ಅಭ್ಯರ್ಥಿಯು ನಿರಾಕರಿಸಿದ ಇಮೇಲ್ನ ಸ್ಕ್ರೀನ್ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ, ಇದು ಮೌಲ್ಯಮಾಪನದ ವೇಷದಲ್ಲಿರುವ ವೇತನವಿಲ್ಲದ ಕಾರ್ಮಿಕನಿದ್ದಂತೆ ಎಂಬುದಾಗಿ ವಿವರಿಸಿದ್ದಾರೆ. ಅಂತಹ ನಿಯಮಗಳ ಅಡಿಯಲ್ಲಿ ಮುಂದುವರಿಯಲು ಅವರು ಇಷ್ಟವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಿರಾಕರಿಸುತ್ತಿರುವ ಕೊಡುಗೆ ಎಂಬ ಶೀರ್ಷಿಕೆಯ ಇಮೇಲ್ನಲ್ಲಿ ಹೀಗೆ ಬರೆಯಲಾಗಿದೆ: ಹಾಯ್ ಶ್ರೇಯಾ, ನಮಗೆ ಇಂದು ಮಧ್ಯಾಹ್ನ ಸಂದರ್ಶನವಿತ್ತು. ನನಗೆ ಮೊದಲು ನೀಡಲಾದ ಹುದ್ದೆಯಲ್ಲಿ ನಾನು ಇನ್ನು…
ಬೆಂಗಳೂರು: ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಗಾಂಧಿ ಹೆಸರು ಇಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಡಾಿದ್ದಾರೆ. ಫ್ರೀಡಂಪಾರ್ಕ್ ನಲ್ಲಿ “ಮನರೇಗಾಬಚಾವೋ ಆಂದೋಲನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಅವರು, ಮಹಾತ್ಮಗಾಂಧಿ ಹೆಸರು ಕೇಳಿದರೆ ಇವರಿಗೆ ಆಗಲ್ಲ. ದುರುದ್ದೇಶದಿಂದ ಮನ್ ರೇಗಾ ಹೆಸರು ಬದಲಾವಣೆ ಮಾಡಿ ‘ವಿಬಿ ಜೀ ರಾಮ್ ಜೀ’ ಜಾರಿ ಮಾಡಿದ್ದಾರೆ ಎಂದರು. ಮನ್ ರೇಗಾ ಯೋಜನೆಯಲ್ಲಿ ರಾಮ ಅನ್ನೋ ಹೆಸರು ಬರುವ ರೀತಿ ಯೋಜನೆ ಮಾಡಿದ್ದಾರೆ. ದಶರಥ ರಾಮ ಇಲ್ಲ ಕೌಶಲ್ಯ ರಾಮ ಇಲ್ಲ ಸೀತಾ ರಾಮ ಸಹ ಇಲ್ಲ. ಈ ಕಾಯ್ದೆಯಲ್ಲಿ ರಾಮ ಇಲ್ಲ. ಬಡವರು ದಲಿತರು, ರೈತರ ಬಗ್ಗೆ ಚಿಂತಿಸುವುದು ಕಾಂಗ್ರೆಸ್ ಮಾತ್ರ. ಬಡವರ ಬಗ್ಗೆ ಮಾತಾಡುವುದು ಕಾಂಗ್ರೆಸ್ ಮಾತ್ರ ಎಂದು ಹೇಳಿದರು. RSS ಮಾರ್ಗದರ್ಶನದಂತೆ ಬಡವರ ಕಾರ್ಯಕ್ರಮಗಳನ್ನ ಬಿಜೆಪಿಯವರು ರದ್ದು ಮಾಡಿದ್ದಾರೆ. ಆರ್ ಎಸ್ ಎಸ್ ನವರಿಗೆ ಬಡವರು ಮುಖ್ಯವಾಹಿನಿಗೆ ಬರುವುದು ಬೇಕಾಗಿಲ್ಲ. ಬಡವರು ಬಡವರಾಗಿಯೇ ಉಳಿದು ಸದಾಕಾಲ ಸೇವಕರಾಗಿಯೇ ಇರಬೇಕು ಎನ್ನುವುದು…














