Author: kannadanewsnow09

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ 126 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅವರು ಸೆಮಿಫೈನಲ್‌ನಲ್ಲಿ ಸ್ಟಾರ್‌ಗಳಿಂದ ತುಂಬಿದ ಬಂಗಾಳ ತಂಡವನ್ನು ಸೋಲಿಸಿ ಆರು ವಿಕೆಟ್‌ಗಳನ್ನು ಹೊಂದಿದ್ದರು. ಆಖಿಬ್ ನಬಿ ಸೆಮಿಫೈನಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪರ ತಾರೆಯಾಗಿದ್ದರು, ಅವರು ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದರು, ಇದರಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳು ಸೇರಿವೆ ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು. ಅಬ್ದುಲ್ ಸಮದ್ ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್ ಗಳಿಸುವ ಮೂಲಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ ಪಾತ್ರ ವಹಿಸುವ ಮೂಲಕ ನಿರ್ಣಾಯಕ ಪಾತ್ರ ವಹಿಸಿದರು. ಪಂದ್ಯಕ್ಕೆ ಸಂಬಂಧಿಸಿದಂತೆ, ಸುದೀಪ್ ಕುಮಾರ್ ಘರಾಮಿ ಅವರ 146 ರನ್‌ಗಳ ಇನಿಂಗ್ಸ್ ಬಂಗಾಳವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 328 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಲು ಸಹಾಯ ಮಾಡಿತು. ನಂತರ ಮೊಹಮ್ಮದ್ ಶಮಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು, ಎಂಟು…

Read More

ಗದಗ: ಜಿಲ್ಲೆಯಲ್ಲಿ ಬಸ್ ನಿಲ್ದಾಣದಲ್ಲೇ ವಾಮಾಚಾರ ಮಾಡಲಾಗಿದೆ. ಬಸ್ ನಿಲ್ದಾಣದಲ್ಲಿ ಮಾಡಿದಂತ ವಾಮಾಚಾರ ಕಂಡು ಜನರು ಬೆಚ್ಚಿ ಬಿದ್ದಿರುವಂತ ಘಟನೆ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿಯ ಹುಡ್ರೋ ಕಾಲೋನಿಯಲ್ಲಿರೋ ಬಸ್ ನಿಲ್ದಾಣದಲ್ಲಿಯೇ ವಾಮಾಚಾರ ನಡೆಸಲಾಗಿದೆ. ಬಸ್ ನಿಲ್ದಾಣದಲ್ಲಿ ಕಲರ್ ಬಣ್ಣದ ರಂಗೋಲಿ ಹಿಟ್ಟಿನಿಂದ ರಂಗೋಲಿ ಹಾಕಿರುವಂತ ದುಷ್ಕರ್ಮಿಗಳು ಅದರಲ್ಲಿ ಕಪ್ಪು ಗೊಂಬೆ, ಮೊಟ್ಟೆ, ಎಲೆ ಅಡಿಕೆ, ನಿಂಬೆ ಹಣ್ಣು ಇರಿಸಿರೋದು ಪತ್ತೆಯಾಗಿದೆ. ಗದಗದ ಮುಂಡರಗಿಯ ಹುಡ್ರೋ ಕಾಲೋನಿಯ ಬಸ್ ನಿಲ್ದಾಣದಲ್ಲಿನ ವಾಮಾಚಾರ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಈ ದುಷ್ ಕೃತ್ಯ ಎಸಗಿದಂತ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿ, ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/state-government-orders-media-to-conduct-interviews-at-designated-location-in-vidhana-soudha/ https://kannadanewsnow.com/kannada/there-are-no-rules-for-marriage-hall-authorities-to-verify-the-age-records-of-the-bride-and-groom-high-court/

Read More

ಬೆಂಗಳೂರು: ಮಾಧ್ಯಮದವರು ವಿಧಾನಸೌಧ ಕಟ್ಟದಲ್ಲಿ ಅವರಿಗೆ ನಿಗದಿಪಡಿಸಲಾದ ಸ್ಥಳದಲ್ಲಿ ಮಾತ್ರ ಸಂದರ್ಶನ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆ ಮೂಲಕ ವಿಧಾನಸೌಧದ ಒಳಗಡೆ ಮಾಧ್ಯಮದವರಿಗೆ ನಿರ್ಬಂಧ ಹೇರಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.  ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು ಶಿಫಾರಸ್ಸು ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಸಿಆಸು ಇಲಾಖೆ(ಕಾರ್ಯಕಾರಿ)ಯಲ್ಲಿ ಗುರುತಿನ ಚೀಟಿ ವಿತರಿಸಲಾಗುತ್ತಿದೆ ಎಂದಿದ್ದಾರೆ. ಈ ರೀತಿರುತಿನ ಚೀಟಿ ಹೊಂದಿರುವ ಎಲ್ಲಾ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳಿಗೆ ಭದ್ರತಾ ಹಿತದೃಷ್ಟಿಯಿಂದ ವಿಧಾನಸೌಧ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ನಿಗದಿಪಡಿಸಲಾಗಿರುವ ಸ್ಥಳದಲ್ಲಿ ಮಾತ್ರ ಬೈಟ್ ಹೇಳಿಕೆಗಳನ್ನು ಪಡೆದುಕೊಳ್ಳುವಂತೆ ಹಾಗೂ ವಿಧಾನಸೌಧ ಒಳ ಪ್ರವೇಶಿಸುವ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು/ಮಾನ್ಯ ಉಪ ತೆಗೆದುಕೊಳ್ಳಲು/ಸಂದರ್ಶನಕ್ಕಾಗಿ ಮುಖ್ಯಮಂತ್ರಿಗಳು/ಮಾನ್ಯ ಸಚಿವರುಗಳು/ಗಣ್ಯ ವ್ಯಕ್ತಿಗಳಿಂದ ಬೈಟ್ ಹಿಂಬಾಲಿಸದಂತೆ ಸೂಕ್ತ ಸಲಹೆ/ಸೂಚನೆಗಳನ್ನು ನೀಡುವೆಂತೆ ತಮಗೆ ತಿಳಿಸಲು ನಿರ್ದೇಶಿಸಿದ್ದಾರೆ. ರಾಜ್ಯ ಸರ್ಕಾರದಿಂದ…

Read More

ಶಿವಮೊಗ್ಗ: ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ರೇಡಿಯಾಲಜಿಸ್ಟ್ ತಜ್ಞ ವೈದ್ಯರ ಕೊರತೆಯಿಂದಾಗಿ ರೋಗಿಗಳಿಗೆ ಚಿಕಿತ್ಸೆ ಸಮಸ್ಯೆಯಾಗಿತ್ತು. ಇದೀಗ ರಾಜ್ಯ ಸರ್ಕಾರವು ಕೌನ್ಸಿಲಿಂಗ್ ಮೂಲಕ ರೇಡಿಯಾಲಜಿಸ್ಟ್ ತಜ್ಞ ವೈದ್ಯರನ್ನು ನೇಮಿಸಿ ಆದೇಶಿಸಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, 2025ನೇ ಸಾಲಿನಲ್ಲಿ ವೈದ್ಯಕೀಯ ಸ್ನಾತಕೋತ್ತರ, ಡಿಎನ್ ಬಿ ವ್ಯಾಸಂಗ ಪೂರೈಸಿದ ಸೇವಾನಿರತ ವೈದ್ಯರುಗಳಿಗೆ TRIAD ಸಮಾಲೋಚನೆಯಲ್ಲಿ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಈ ಆದೇಶದಂತೆ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ ರೇಡಿಯಾಲಜಿಸ್ಟ್ ವ್ಯಾಸಂಗ ಮಾಡಿದಂತ ಡಾ.ಅಪೂರ್ವ.ಕೆ.ಎ ಅವರನ್ನು ನೇಮಕ ಮಾಡಲಾಗಿದೆ. https://kannadanewsnow.com/kannada/honeytrap-gang-arrested-for-extorting-money-by-threatening-people-in-hassan/ https://kannadanewsnow.com/kannada/there-are-no-rules-for-marriage-hall-authorities-to-verify-the-age-records-of-the-bride-and-groom-high-court/

Read More

ಹಾಸನ: ಜಿಲ್ಲೆಯಲ್ಲಿ ಅಮಾಯಕರನ್ನು ಟಾರ್ಗೆಟ್ ಮಾಡಿ, ಹನಿಟ್ರ್ಯಾಪ್ ಮಾಡಿ, ಆ ಬಳಿಕ ಬೆದರಿಸಿ, ಹಣ ವಸೂಲಿ ಮಾಡುತ್ತಿದ್ದಂತ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯ ಪೊಲೀಸರಿಂದ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಂತ ಹನಿಟ್ರ್ಯಾಪ್ ಗ್ಯಾಂಗ್ ಬಂಧಿಸಲಾಗಿದೆ. ಬಂಧಿತರನ್ನು ಅತಿಥಿ ಉಪನ್ಯಾಸಕಿ ನಾಗಲಕ್ಷ್ಮೀ ಹಾಗೂ ಪತಿ ಧರ್ಮರಾಜು ಆಲಿಯಾಸ್ ಫಣಿ ಸೇರಿದಂತೆ ನಾಲ್ವರಾಗಿದ್ದಾರೆ. ಅತಿಥಿ ಉಪನ್ಯಾಸಕಿ ನಾಗಲಕ್ಷ್ಮೀ ಅವರೇ ಈ ಹನಿಟ್ರ್ಯಾಪ್ ಜಾಲದ ಕಿಂಗ್ ಪಿನ್ ಎನ್ನಲಾಗಿದೆ. ಬಡ, ಅಸಾಹಯಕ ಮಹಿಳೆಯರನ್ನು ಮುಂದಿಟ್ಟುಕೊಂಡು, ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದಂತ ಆರೋಪ ಬಂಧಿತರ ಮೇಲಿದೆ. ಸಂತ್ರಸ್ತ ಮಹಿಳೆಯೊಬ್ಬರು ಮನೆಗೆ ಪರಿಚಯಸ್ಥ ವ್ಯಕ್ತಿಯೊಬ್ಬರು ತೆರಳಿದ್ದರು. ಇದೇ ಸಮಯದಲ್ಲಿ ಅವರಿಪ್ಪರ ಪೋಟೋ ತೆಗೆದು, ಆತನಿಗೆ ಕುಳುಹಿಸಿದ್ದರು. ಈ ವೇಳೆಗೆ ನಾಗಲಕ್ಷ್ಮಿ, ಆಕೆಯ ಗಂಡ ಮನೆಗೆ ತೆರಳಿ, ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಮಹಿಳೆಗೆ ಒತ್ತಾಯಿಸಿದ್ದರು. ಅತ್ಯಾಚಾರ ಪ್ರಕರಣ ದಾಖಲಿಸೋದಕ್ಕೆ ಹಿಂದೇಟು ಹಾಕಿದಂತ ಸಂತ್ರಸ್ತ ಮಹಿಳೆಯನ್ನು ಹೊಳೆನರಸೀಪುರದಲ್ಲೇ ಲ್ಯಾಬ್ ನಡೆಸುತ್ತಿರುವ…

Read More

ಬೆಂಗಳೂರು: ಆರ್ಸೆಲರ್‌ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (AM/NS ಇಂಡಿಯಾ) ಇಂದು ತನ್ನ ಮೌಲ್ಯವರ್ಧಿತ ಪೋರ್ಟ್‌ಫೋಲಿಯೊವನ್ನು AM/NS ವೈಬ್ರಾನ್ಸ್ ಮತ್ತು AM/NS ಆಪ್ಟಿಮಾದೊಂದಿಗೆ ಬಲಪಡಿಸುವುದಾಗಿ ಘೋಷಿಸಿದೆ. ಉಪಕರಣ ಮತ್ತು ಕೈಗಾರಿಕಾ ಉತ್ಪಾದನಾ ಪರಿಸರ ವ್ಯವಸ್ಥೆಗಳಲ್ಲಿ ಮೂಲ ಸಲಕರಣೆ ತಯಾರಕರ (OEM ಗಳು) ಹೆಚ್ಚುತ್ತಿರುವ ವಿನ್ಯಾಸ-ನೇತೃತ್ವದ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಎರಡು ವಿಶ್ವ ದರ್ಜೆಯ, ಪ್ರೀಮಿಯಂ ಬ್ರಾಂಡ್ ಸ್ಟೀಲ್ ಪರಿಹಾರಗಳು ಇವಾಗಿವೆ. ಈ ಕುರಿತು ಮಾತನಾಡಿದ ಎಎಂ/ಎನ್‌ಎಸ್‌ ಇಂಡಿಯಾ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಮತ್ತು ಉಪಾಧ್ಯಕ್ಷ ರಂಜನ್ ಧರ್, ಸ್ಥಿರವಾದ ಮೇಲ್ಮೈ ಗುಣಮಟ್ಟ, ಬಿಗಿಯಾದ ಸಹಿಷ್ಣುತೆ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಸಂಯೋಜಿಸುವ ಉಕ್ಕಿನ ಬೇಡಿಕೆ ಹೆಚ್ಚುತ್ತಿರುವುದರಿಂದ, AM/NS ಇಂಡಿಯಾ ತನ್ನ ಮೌಲ್ಯವರ್ಧಿತ ಪೋರ್ಟ್‌ಫೋಲಿಯೊವನ್ನು ಬ್ರಾಂಡ್ ಕೊಡುಗೆಗಳೊಂದಿಗೆ ವಿಸ್ತರಿಸುತ್ತಿದೆ, ಇದು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರೀಮಿಯಂ, ಅಂತರರಾಷ್ಟ್ರೀಯವಾಗಿ ಮಾನದಂಡದ ಗುಣಮಟ್ಟವನ್ನು ದೇಶೀಯವಾಗಿ ಲಭ್ಯವಾಗುವಂತೆ ಮಾಡುತ್ತದೆ. ಈ ಎರಡು ಬ್ರಾಂಡ್ ಲೇಪಿತ ಕೊಡುಗೆಗಳು ಈಗ ಮೌಲ್ಯವರ್ಧಿತ ಉತ್ಪನ್ನ ಪೋರ್ಟ್‌ಫೋಲಿಯೊದ ಭಾಗವಾಗಿದೆ, ಇದರಲ್ಲಿ…

Read More

ಬೆಂಗಳೂರು: ವೈಜ್ಞಾನಿಕ ಆಧಾರಿತ ಚಿಕಿತ್ಸೆ ಹಾಗೂ ವೆಲ್‌ನೆಸ್‌ ಕಾಪಾಡುವ “ಬಾಡಿ ಡೈನಾಮಿಕ್ಸ್‌ʼ ಎಂಬ ವಿಶೇಷ ವಿಭಾಗವನ್ನು ಹ್ಯಾಪಿಯೆಸ್ಟ್‌ ಹೆಲ್ತ್‌ ತೆರೆದಿದ್ದು, ಇದರ ವೈದ್ಯಕೀಯ ನಿರ್ದೇಶಕಿಯಾಗಿ ಭಾರತಿ ಜಜೂ ಅವರನ್ನು ನೇಮಕ ಮಾಡಿದೆ. 35 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಜಜೂ ಅವರು, ಆಕ್ಯುಪೇಷನಲ್ ಥೆರಪಿ ಕ್ಷೇತ್ರದಲ್ಲಿ ಅಪಾರ ಪರಿಣತಿ ಮತ್ತು ಅನುಭವ ಹೊಂದಿದ್ದಾರೆ. ಬಾಡಿ ಡೈನಾಮಿಕ್ಸ್ ವಿಭಾಗವು ಎರ್ಗೋನಾಮಿಕ್ಸ್ (Ergonomics), ಫಿಸಿಯೋಥೆರಪಿ ಮತ್ತು ಯೋಗದ ಮೂಲಕ ಸಮಗ್ರ ಪುನಶ್ಚೇತನ ಸೇವೆಯನ್ನು(rehabilitation) ನೀಡುತ್ತದೆ. ಸಾಮಾನ್ಯ ವೆಲ್‌ನೆಸ್ ಅಷ್ಟೆ ಅಲ್ಲದೆ, ವೈಜ್ಞಾನಿಕ ಆಧಾರಿತ ಚಿಕಿತ್ಸೆ ಮತ್ತು ಕೆಲಸದ ಸ್ಥಳದಲ್ಲಿ ಉನ್ನತ ಮಟ್ಟದ ಆರೋಗ್ಯವನ್ನು ಕಾಪಾಡುವ ಉದ್ದೇಶದೊಂದಿಗೆ ಈ ವಿಭಾಗವನ್ನು ತೆರೆಯಲಾಗಿದೆ. ಈ ಕುರಿತು ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯತಂತ್ರ ಅಧಿಕಾರಿ ಅಶೋಕ್ ಸೂಟಾ, “ಬಾಡಿ ಡೈನಾಮಿಕ್ಸ್ ವಿಭಾಗವನ್ನು ವಿಜ್ಞಾನ ಆಧಾರಿತ ಆರೋಗ್ಯ ವ್ಯವಸ್ಥೆಯನ್ನಾಗಿ ರೂಪಿಸಲಾಗಿದೆ. ಇಂದು ಕೇವಲ ಹೆಲ್ತ್‌ನೆಸ್‌ ಬಗ್ಗೆ ಜಾಗೃತಿ ಮೂಡಿಸಿದರೂ ಅದನ್ನು ಫಾಲೋ…

Read More

ಬೆಳಗಾವಿ: ಜಿಲ್ಲೆಯಲ್ಲಿ ಲಾರಿಯೊಂದು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಅದರಲ್ಲಿ ತೆರಳುತ್ತಿದ್ದಂತ ದಂಪತಿಗಳು, ಅವರ ಪುತ್ರಿ ಸ್ಥಳದಲ್ಲೇ ಸಾವನ್ನಪ್ಪಿರುವಂತ ಭೀಕರ ಅಪಘಾತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಆಲಖನೂರು ಬಳಿಯಲ್ಲಿ ಈ ಅಪಘಾತ ಸಂಭವಿಸಿದೆ. ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಅಪಘಾತದಲ್ಲಿ ಗೀರೆಪ್ಪಾ ಕುಂದ್ರಾಳಿ, ಪತ್ನಿ ಮಂಜುಳಾ, ಪುತ್ರಿ ಆರಾಧ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. https://kannadanewsnow.com/kannada/7-commission-should-be-given-for-garbage-tender-bill-sanction-special-loc-r-ashok-makes-serious-allegations/

Read More

ಬೆಂಗಳೂರು: ಕಸದ ಟೆಂಡರ್ ಪಡೆಯೋದಕ್ಕೆ ಶೇ.7ರಷ್ಟು, ಬಿಲ್ ಮಂಜೂರಾತಿಗೆ ಶೇ.7, ಎಲ್ಒಸಿಗೆ ಶೇ.7ರಷ್ಟು ಕಮೀಷನ್ ನೀಡಬೇಕು ಎಂಬುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಸದ ಟೆಂಡರ್ ಪಡೆಯಲು ಶೇ.7ರಷ್ಟು ಕಮಿಷನ್ ಕೊಡಬೇಕು. ಬಿಲ್ ಮಂಜೂರಾತಿಗೆ 7%, ಸ್ಪೆಷಲ್ ಎಲ್ಒಸಿಗೆ 7% ಕೊಡಬೇಕು ಎಂಬುದಾಗಿ ಆರೋಪಿಸಿದರು. ಒಟ್ಟಾರೆಯಾಗಿ ರಾಜ್ಯ ಸರ್ಕಾರಕ್ಕೆ ಶೇಕಡಾ 21ರಷ್ಟು ಕಮೀಷನ್ ಹೋಗುತ್ತೆ. ಇದಲ್ಲದೇ ಇಂಜಿನಿಯರ್ ಗಳಿಗೆ ಬೇರೆ ರೀತಿಯಲ್ಲಿ ಕೊಡಬೇಕು. ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಸರ್ಕಾರದ ಮಾಫಿಯಾವೇ ಕಾರಣವಾಗಿದೆ ಎಂದರು.

Read More

ಬೆಂಗಳೂರು: ತಾನು ಸಾವನ್ನಪ್ಪಿದರೇ ಪತ್ನಿಯನ್ನು ನೋಡಿಕೊಳ್ಳಲು ಸಂಬಂಧಿಕರೇ ಇಲ್ಲವೆಂದು, ಉಸಿರುಗಟ್ಟಿಸಿ ವೃದ್ದ ಪತಿಯೊಬ್ಬ ಕೊಂದಿರುವಂತ ಆಘಾತಕಾರಿ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ ಇಸ್ರೋ ನಿವೃತ್ತ ನೌಕರನಿಂದಲೇ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಲಾಗಿದೆ. ಬೆಂಗಳೂರಿನ ಅವಲಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಮಿರ್ಟುಸೋ ಅಪಾರ್ಮೆಂಟ್ ನಲ್ಲಿ ನೆಲೆಸಿದ್ದಂತ ವೃದ್ಧನೊಬ್ಬ ಈ ಕೃತ್ಯ ಎಸಗಿದ್ದಾನೆ. ಪತ್ನಿ ಸಂಧ್ಯಾ ಎಂಬುವರನ್ನು ಉಸಿರುಗಟ್ಟಿಸಿ ಪತಿ ನಾಗಲೇಶ್ವರ ರಾವ್ ಎಂಬುವರು ಹತ್ಯೆಗೈದಿದ್ದಾರೆ. ನಾನು ಸತ್ತರೆ ಪತ್ನಿಯನ್ನು ಯಾರು ನೋಡಿಕೊಳ್ಳುತ್ತಾರೆಂದು ಈ ಕೃತ್ಯ ಎಸಗಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಗೆ ತಿಳಿದು ಬಂದಿದೆ. ಮಾನಸಿಕ ಅಸ್ವಸ್ಥನಂತೆ ನಾಗಲೇಶ್ವರ ರಾವ್ ವರ್ತಿಸುತ್ತಿದ್ದಾರೆ. ನಾನು ಸತ್ತರೆ ನನ್ನ ಪತ್ನಿ ಯಾರು ನೋಡಿಕೊಳ್ಳುತ್ತಾರೆಂದು ಹೀಗೆ ಮಾಡಿದ್ದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದರೇ ಅವರ ಓರ್ವ ಮಗಳು ಅಮೇರಿಕಾದಲ್ಲಿ ಇದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. https://kannadanewsnow.com/kannada/transport-department-employees-brutally-murdered-over-property-dispute-fir-registered-against-10-people/

Read More