Subscribe to Updates
Get the latest creative news from FooBar about art, design and business.
Author: kannadanewsnow09
ಬೆಳಗಾವಿ: ಕೆಎಲ್ಇ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಸುದೀರ್ಘ 40 ವರ್ಷಗಳ ಕಾಲ ಪ್ರಭಾಕರ ಕೋರೆ ನೊಗ ಹೊತ್ತಿದ್ದರು. ಇದೀಗ ಕೆ ಎಲ್ ಇ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಗೆ ಸಲ್ಲಿಸಿದ್ದಂತ ನಾಮಪತ್ರವನ್ನು ದಿಢೀರ್ ಹಿಂಪಡೆಯುವ ಮೂಲಕ, ಕಾರ್ಯಾಧ್ಯಕ್ಷ ಸ್ಥಾನದಿಂದ ಪ್ರಭಾಕರ ಕೋರೆ ನಿರ್ಗಮಿಸಿದ್ದಾರೆ. ಕೆ ಎಲ್ ಇ ಸಂಸ್ಥೆಯ ಆಡಳಿತ ಮಂಡಳಿ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಪ್ರಭಾಕರ ಕೋರೆ ನಾಮಪತ್ರವನ್ನು ಸಲ್ಲಿಸಿದ್ದರು. ಆದರೇ ದಿಢೀರ್ ಬೆಳವಣಿಗೆ ಎನ್ನುವಂತೆ ತಮ್ಮ ನಾಮಪತ್ರವನ್ನು ಹಿಂಪಡೆದು ಅಚ್ಚರಿಯನ್ನು ಮೂಡಿಸಿದ್ದಾರೆ. ಪ್ರಭಾಕರ ಕೋರೆ ಅವರು 1984ರಲ್ಲಿ ಕೆ ಎಲ್ ಇ ಸಂಸ್ಥೆಯ ನಿರ್ದೇಶಕರಾಗಿ ಗದ್ದುಗೆಗೆ ಏರಿದ್ದರು. ಆ ಬಳಿಕ ಸುದೀರ್ಘ 40 ವರ್ಷಗಳ ಕಾಲ ಕಾರ್ಯಾಧ್ಯಕ್ಷರ ಹುದ್ದೆಯನ್ನು ಪ್ರಭಾಕರ ಕೋರೆ ನಿರ್ವಹಿಸಿದ್ದರು. ಪ್ರಭಾಕರ ಕೋರೆ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕೆ ಎಲ್ ಇ ಸಂಸ್ಥೆಗಳ ಸಂಖ್ಯೆ ಕೇವಲ 40 ಆಗಿತ್ತು. ಇದೀಗ ಇದು 240 ಅಂಗ ಸಂಸ್ಥೆಗಳ ಬೃಹತ್ ಸಂಸ್ಥೆಯಾಗಿ…
ಉತ್ತರ ಪ್ರದೇಶ: ಇಲ್ಲಿನ ಜೌನ್ಪುರದಲ್ಲಿ ಅಂಗವಿಕಲರ ಕೋಟಾದ ಮೂಲಕ ಎಂಬಿಬಿಎಸ್ಗೆ ಪ್ರವೇಶ ಪಡೆಯಲು ಯುವಕನೊಬ್ಬ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡಿರುವ ಶಾಕಿಂಗ್ ಘಟನೆ ನಡೆದಿದೆ. ಆದರೇ ಆತ ಪೊಲೀಸರಿಗೆ ತನ್ನ ಕುಟುಂಬಕ್ಕೆ ಹಲ್ಲೆಯ ಸುಳ್ಳು ಕಥೆಯನ್ನು ಹೇಳಿದ್ದಾನೆ. ಆದಾಗ್ಯೂ, ಪೊಲೀಸ್ ತನಿಖೆಯಲ್ಲಿ ಯುವಕನ ಮೇಲೆ ಯಾವುದೇ ಹೊರಗಿನವರು ದಾಳಿ ಮಾಡಿಲ್ಲ. ಆತ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಯುವಕ ತನ್ನ ಎಡಗಾಲಿನ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ, ಹೆಬ್ಬೆರಳು ಮಾತ್ರ ಉಳಿದಿತ್ತು. ಇದನ್ನು ತನ್ನ ಗೆಳತಿಗೂ ತಿಳಿಸಿದ್ದಾನೆ. ಯುವಕ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಲೈನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೂರಜ್ ಭಾಸ್ಕರ್ (24) ಖಲೀಲ್ಪುರದ ನಿವಾಸಿ. ಅವರ ಕುಟುಂಬದಲ್ಲಿ ಅವರ ತಾಯಿ, ಅಣ್ಣ ಮತ್ತು ಅಕ್ಕ ಇದ್ದಾರೆ. ಅವರ ಸಹೋದರ ಉದ್ಯೋಗದಲ್ಲಿದ್ದಾರೆ. ಸೂರಜ್ ಡಿ-ಫಾರ್ಮಾ ಪದವಿ ಪಡೆದಿದ್ದು, ಮೂರು ವರ್ಷಗಳಿಂದ ಎಂಬಿಬಿಎಸ್ಗೆ ತಯಾರಿ ನಡೆಸುತ್ತಿದ್ದಾರೆ. ಜನವರಿ 18 ರ ರಾತ್ರಿ, ಅವರು ನಿರ್ಮಾಣ…
ಕೋಲಾರ: ಜಿಲ್ಲೆಯಿಂದ ಶಬರಿಮಲೆಗೆಂದು ಪ್ರವಾಸಕ್ಕೆ ತೆರಳಿದ್ದಂತ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವಂತ ಘಟನೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೇವಗಾನಹಳ್ಳಿಯ ರವಿ(40) ಎಂಬಾತನೇ ಶಬರಿಮಲೆಗೆಂದು ಹೋಗಿ ನಾಪತ್ತೆಯಾಗಿರುವಂತ ವ್ಯಕ್ತಿಯಾಗಿದ್ದಾರೆ. ಶಬರಿಮಲೆಗೆ ತೆರಳಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ಬಳಿಕ ತಮಿಳುನಾಡಿನ ತಿರುಚಂದೂರ್ ಗೆ ತೆರಳಿದ್ದರು. ಅಲ್ಲಿಂದ ಇದ್ದಕ್ಕಿಂದ್ದಂತೆ ರವಿ ನಾಪತ್ತೆಯಾಗಿದ್ದಾರೆ ಎಂಬುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಕಳೆದ ನಾಲ್ಕು ದಿನಗಳಿಂದ ತಿರುಚಂದೂರ್ ಗೆ ತೆರಳಿದ್ದಂತ ರವಿ ಕಾಣಿಸುತ್ತಿಲ್ಲ. ಹೀಗಾಗಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದು, ತಿರುಚಂದೂರ್ ಪೊಲೀಸ್ ಠಾಣೆಗೆ ತೆರಳಿ ರವಿ ನಾಪತ್ತೆಯ ಬಗ್ಗೆ ದೂರು ನೀಡಿದ್ದಾರೆ. ಇದೀಗ ದೂರು ದಾಖಲಿಸಿಕೊಂಡಿರುವಂತ ತಿರುಚಂದೂರ್ ಠಾಣೆಯ ಪೊಲೀಸರು ರವಿ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/metal-object-weighing-half-a-kilogram-found-during-excavation-in-lakkundi/ https://kannadanewsnow.com/kannada/minister-ishwar-khandre-gave-this-stern-instruction-to-control-forest-fires-before-the-onset-of-summer-in-the-state/
ಗದಗ: ಜಿಲ್ಲೆಯಲ್ಲಿ ಮನೆಯೊಂದರ ಪಾಯ ಅಗೆಯುವ ಸಂದರ್ಭದಲ್ಲಿ ಬಂಗಾರ ದೊರೆತಿತ್ತು. ಆ ಬಳಿಕ ಸುರಕ್ಷಿತ ಸ್ಥಳವೆಂದು ಉತ್ಖನನ ಕಾರ್ಯವನ್ನು ಪುರಾತತ್ವ ಇಲಾಖೆ ನಡೆಸುತ್ತಿದೆ. ಇಂದು ಉತ್ಖನನದ ವೇಳೆಯಲ್ಲಿ ಲಕ್ಕುಂಡಿಯಲ್ಲಿ ಲೋಹದ ವಸ್ತುವೊಂದು ಪತ್ತೆಯಾಗಿದೆ. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 8ನೇ ದಿನದ ಉತ್ಖನನ ಕಾರ್ಯ ಮುಂದುವರೆದಿದೆ. ಇಂದು ವೀರಭದ್ರೇಶ್ವರ ದೇವಸ್ಥಾನದ ಬಳಿಯಲ್ಲಿ ಉತ್ಖನನ ನಡೆಸುತ್ತಿದ್ದಂತ ಸಂದರ್ಭದಲ್ಲಿ ಅರ್ಧ ಕೆಜಿಯಷ್ಟು ತೂಕದ ಲೋಹದ ವಸ್ತುವೊಂದು ಪತ್ತೆಯಾಗಿದೆ. https://kannadanewsnow.com/kannada/rape-of-a-woman-murder-of-a-man-are-minor-incidents-mp-rajashekar-hitnals-controversial-statement/
ಕೊಪ್ಪಳ: ಮಹಿಳೆಯ ಮೇಲಿನ ಅತ್ಯಾಚಾರ, ವ್ಯಕ್ತಿಯೊಬ್ಬನ ಕೊಲೆಯಂತಹ ಘಟನೆಗಳು ಸಣ್ಣ ಘಟನೆಗಳಾಗಿದ್ದಾವೆ ಎಂಬುದಾಗಿ ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿದ್ದಾರೆ. ಆ ಮೂಲಕ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳ ಬಗ್ಗೆ ಲಘುವಾಗಿ ಮಾತನಾಡಿ, ಹೊಸ ವಿವಾದವನ್ನು ಸೃಷ್ಠಿಸಿದ್ದಾರೆ. ಕೊಪ್ಪಳದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಏರ್ಪಡಿಸಿದ್ದಂತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದಂತ ಅವರು, ಜಿಲ್ಲೆಯ ಸಾಣಾಪುರದಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ನಡೆದಿತ್ತು. ಈ ಸಣ್ಣ ಘಟನೆಯನ್ನು ಮಾಧ್ಯಮಗಳು ದೊಡ್ಡದಾಗಿ ವೈಭವೀಕರಿಸಿದ್ದವು. ಇದರಿಂದ ಕೊಪ್ಪಳದ ಪ್ರವಾಸೋದ್ಯಮಕ್ಕೆ ವ್ಯಾಪಕ ಪೆಟ್ಟು ಬಿದ್ದಿದೆ ಎಂಬುದಾಗಿ ಹೇಳಿದ್ದಾರೆ. ಕೊಪ್ಪಳದ ಸಾಣಾಪುರದಲ್ಲಿ ನಡೆದಿದ್ದಂತ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವನ್ನು ಮಾಧ್ಯಮಗಳು ವೈಭವೀಕರಿಸಿ, ಸುದ್ದಿ ಮಾಡಿದ್ದರಿಂದಾಗಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟೇ ಬಿದ್ದಿದೆ. ಶೇ.50ರಷ್ಟು ಪ್ರವಾಸಿಗರ ಸಂಖ್ಯೆಯೇ ಇಳಿಕೆಯಾಗಿದೆ ಎಂದಿದ್ದಾರೆ. ಕಳೆದ ಮಾರ್ಚ್ ನಲ್ಲಿ ಕೊಪ್ಪಳದ ಸಾಣಾಪುರದಲ್ಲಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ ನಡಿತ್ತು. ಒಡಿಶಾ ಪ್ರವಾಸಿಗ ಬಿಬಾಶ್ ಎಂಬಾತನ ಮೃತದೇಹವು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಎರಡು ಕೃತ್ಯವನ್ನು…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಂತ ಭಕ್ತರ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು. ಈ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಇನ್ಮುಂದೆ ಮಲೆಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ಪಾದಯಾತ್ರೆಗೆ ನಿಷೇಧ ಹೇರಲಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆಗೆ ಭಕ್ತ ಪ್ರವೀಣ್ ಬಲಿ ಪ್ರಕರಣದಿಂದಾಗಿ ಅರಣ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮವಹಿಸಿದೆ. ಇನ್ಮುಂದೆ ಬೆಟ್ಟಕ್ಕೆ ತೆರಳುವ ಪಾದಯಾತ್ರಿಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ. ಅದರಂತೆ ಮಲೆ ಮಹದೇಶ್ವರ ಬೆಟ್ಟಕ್ಕೆ ಇನ್ಮುಂದೆ ರಾತ್ರಿ ವೇಳೆ ಪಾದಯಾತ್ರೆ ಬಂದ್ ಮಾಡಲಾಗಿದೆ. ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪಾದಯಾತ್ರೆ ಮಾಡೋದಕ್ಕೆ ನಿರ್ಬಂಧ ಹೇರಲಾಗಿದೆ. ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ಪಾದಯಾತ್ರೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ನಡೆದಂತ ಮಹತ್ವದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ರಾತ್ರಿ ವೇಳೆ ಪಾದಯಾತ್ರೆಗಿ ನಿರ್ಬಂಧ ಹೇರಿ ಜಿಲ್ಲಾಡಳಿತ…
ಬೆಂಗಳೂರು : ರಥಸಪ್ತಮಿಯ ನಂತರ ಬಿಸಿಲು ಹೆಚ್ಚಾಗಿ ಕಾಡ್ಗಿಚ್ಚಿನ ಅಪಾಯವೂ ಹೆಚ್ಚುವ ಕಾರಣ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಅರಣ್ಯಾಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಅರಣ್ಯ ಮತ್ತು ವನ್ಯಜೀವಿ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾಡಿನ ಬೆಂಕಿಗೆ ಅರಣ್ಯ ಸಂಪತ್ತು ನಾಶವಾಗದ ರೀತಿಯಲ್ಲಿ ಕಟ್ಟೆಚ್ಚರ ವಹಿಸಬೇಕು, ಡ್ರೋನ್ ಸೌಲಭ್ಯ ಇರುವ ಕಡೆ ಕ್ಯಾಮರಾ ಮೂಲಕ ನಿಗಾ ಇಡಬೇಕು, ಗಸ್ತು ಹೆಚ್ಚಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು. ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಕಾಡಿನಲ್ಲಿ ಮೇವು ಮತ್ತು ಕುಡಿಯುವ ನೀರಿನ ಕೊರತೆ ಆಗದಂತೆಯೂ ಎಚ್ಚರ ವಹಿಸಲು, ಜಲಗುಂಡಿಗಳಿಗೆ ಸೌರ ಪಂಪ್ ಗಳ ಮೂಲಕ ಕೊಳವೆ ಬಾವಿಯಿಂದ ನೀರು ಹರಿಸಲೂ ಸೂಚಿಸಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ಡ್ರೋನ್ ಕ್ಯಾಮರಾ ನಿಗಾಕ್ಕೆ ಸೂಚನೆ: ಪ್ರತಿ ವರ್ಷ ಶಿವರಾತ್ರಿ, ಯುಗಾದಿ ಮತ್ತು ದೀಪಾವಳಿಯ ಸಂದರ್ಭದಲ್ಲಿ ಮಾದಪ್ಪನ ಭಕ್ತರು…
ಬೆಂಗಳೂರು: ನಿನ್ನೆ ಕುಸಿತಗೊಂಡಿದ್ದಂತ ಬಂಗಾರವು ಇಂದು ಮತ್ತೆ ಏರಿಕೆ ಕಂಡಿದೆ. ಆ ಮೂಲಕ ಬಂಗಾರದ ಬೆಲೆಯೇ ಸ್ಪೋಟಗೊಂಡಿದೆ. ಇಂದು 10 ಗ್ರಾಂ ಚಿನ್ನದ ಬೆಲೆಯು 1 ಲಕ್ಷದ 60 ಸಾವಿರ ರೂಪಾಯಿಗೆ ತಲುಪಿದೆ. ಇಂದು ಎಂಸಿಎಕ್ಸ್ ಚಿನ್ನದ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆಯೊಂದಿಗೆ ಚಿನ್ನದ ವಹಿವಾಟು ಆರಂಭಗೊಂಡಿದೆ. ಬಂಗಾರದ ಬೆಲೆ ದಿಢೀರ್ ಸ್ಪೋಟಗೊಂಡಿದ್ದು, ನಿನ್ನೆ ಕುಸಿತಗೊಂಡಿದ್ದ ಚಿನ್ನ, ಇಂದು ಏರಿಕೆ ಕಂಡು, ಆಭರಣ ಪ್ರಿಯರಿಗೆ ಶಾಕ್ ನೀಡಲಾಗಿದೆ. ಬೆಂಗಳೂರಲ್ಲಿ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯು ರೂ.15,917ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಪ್ರತಿ ಗ್ರಾಂ ಚಿನ್ನದ ಬೆಲೆಯು ರೂ.540 ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು ರೂ.1,59,300 ತಲುಪಿದೆ. 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ರೂ.495 ಏರಿಕೆಯಾದ ಪರಿಣಾಮ, ಗ್ರಾಂಗೆ ರೂ.14,640 ತಲುಪಿದೆ. ಇನ್ನೂ 18 ಕ್ಯಾರೆಟ್ ಚಿನ್ನವು 1 ಗ್ರಾಂ ಬೆಲೆ ರೂ.405 ಏರಿಕೆಯಾದ ಪರಿಣಾಮ ಪ್ರತಿ ಗ್ರಾಂ ಚಿನ್ನದ ಬೆಲೆಯು ರೂ.11,978ಕ್ಕೆ…
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಿದ್ದಂತ ಪೊಲೀಸರು, ಅವರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇಂತಹ ಪೊಲೀಸ್ ತನಿಖಾ ತಂಡಕ್ಕೆ ಸರ್ಕಾರವು ಭರ್ಜರಿ ಬಹುಮಾನ ಘೋಷಿಸಿದೆ. ಅದೆಷ್ಟೆಂದರೇ ಬರೋಬ್ಬರಿ 25 ಲಕ್ಷವಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡುವ ಕುರಿತು ವಿವಿಧ ದರ್ಜೆಯ ಅಧಿಕಾರಿಗಳಿಗೆ ಈ ಹಿಂದೆ ನಿಗದಿಪಡಿಸಿದ ಆರ್ಥಿಕ ವಿತ್ತಾಧಿಕಾರವನ್ನು ಭಾಗಶ: ಮಾರ್ಪಡಿಸಿ ಆರ್ಥಿಕ ವಿತ್ತಾಧಿಕಾರವನ್ನು ಹೆಚ್ಚಿಸಿ ಆದೇಶಿಸಲಾಗಿದೆ ಎಂದಿದೆ. ಹಾಸನ ಜಿಲ್ಲಾ ಮಾಜಿ ಸಂಸದ ಪುಜ್ವಲ್ ರೇವಣ್ಣ ಮತ್ತು ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಪುಕರಣಗಳ ತನಿಖೆ ಕುರಿತು ರಚಿಸಿರುವ ವಿಶೇಷ ತನಿಖಾ ತಂಡವು ಸದರಿರವರುಗಳ ವಿರುದ್ಧ ಒಟ್ಟು 04 ಪಕರಣ ಮತ್ತು ಹೆಚ್.ಡಿ ರೇವಣ್ಣ ರವರ ವಿರುದ್ಧ ದಾಖಲಾಗಿರುವ ಒಟ್ಟು 01 ಪುಕರಣಗಳ ತನಿಖಾ ಕಾಲದಲ್ಲಿ ಸಮರ್ಪಕವಾಗಿ ತನಿಖೆ ಕೈಗೊಂಡು ಸಾಕ್ಷಾಧಾರಗಳನ್ನು ಸಂಗ್ರಹಿಸಿ,…
ಶ್ವಾಸಕೋಶದ ಕ್ಯಾನ್ಸರ್ ವಿಶೇಷವಾಗಿ ಅಪಾಯಕಾರಿ. ಏಕೆಂದರೆ ಹಾನಿಕಾರಕ ಕೋಶಗಳು ದೇಹದಾದ್ಯಂತ ಹರಡುವವರೆಗೆ ಅದರ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದಾಗ್ಯೂ, ನೀವು ಗುರುತಿಸಬಹುದಾದ ಕೆಲವು ಮುಂಚಿನ ಎಚ್ಚರಿಕೆ ಚಿಹ್ನೆಗಳು ಇವೆ. ಅದು ನಿಮ್ಮ ಬೆರಳುಗಳ ಮೇಲೆ ಚಿಹ್ನೆಗಳು ಕಾಣಿಸುತ್ತವೆಯಂತೆ. ಆ ಬಗ್ಗೆ ಮುಂದೆ ಓದಿ.. ಸಾಮಾನ್ಯ ಸೂಚಕಗಳಲ್ಲಿ ಉಸಿರಾಟದ ತೊಂದರೆ, ಉಬ್ಬಸ ಮತ್ತು ರಕ್ತ ಅಥವಾ ಲೋಳೆಯನ್ನು ಉಂಟುಮಾಡುವ ನಿರಂತರ ಕೆಮ್ಮು ಸೇರಿವೆ. ಶ್ವಾಸಕೋಶದ ಕ್ಯಾನ್ಸರ್ ಸಾಮಾನ್ಯವಾಗಿ ದೀರ್ಘಕಾಲದ ಕೆಮ್ಮು, ಉಸಿರಾಟದ ತೊಂದರೆ ಅಥವಾ ಎದೆಯ ಅಸ್ವಸ್ಥತೆಯಂತಹ ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದೆ. ಆದರೆ ನಿಮ್ಮ ಬೆರಳ ತುದಿ ಮತ್ತು ಉಗುರುಗಳಲ್ಲಿನ ಗಮನಾರ್ಹ ಬದಲಾವಣೆಗಳು ಕೆಲವೊಮ್ಮೆ ಈ ಗಂಭೀರ ಕಾಯಿಲೆಗೆ ಆರಂಭಿಕ ಎಚ್ಚರಿಕೆಗಳಾಗಿವೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ಎಂದರೇನು? ಶ್ವಾಸಕೋಶದ ಕ್ಯಾನ್ಸರ್ ಎಂಬುದು ಶ್ವಾಸಕೋಶದ ಅಂಗಾಂಶಗಳಲ್ಲಿ ಪ್ರಾರಂಭವಾಗುವ ಮಾರಕ ಬೆಳವಣಿಗೆಯಾಗಿದ್ದು, ಸಾಮಾನ್ಯವಾಗಿ ವಾಯುಮಾರ್ಗಗಳನ್ನು ಒಳಗೊಳ್ಳುವ ಜೀವಕೋಶಗಳಲ್ಲಿನ ಡಿಎನ್ಎ ಹಾನಿಯಿಂದ ಉಂಟಾಗುತ್ತದೆ, ನಂತರ ಅದು ಅನಿಯಂತ್ರಿತವಾಗಿ ಬೆಳೆದು ಗೆಡ್ಡೆಗಳನ್ನು ರೂಪಿಸುತ್ತದೆ. ಧೂಮಪಾನವು ಪ್ರಮುಖ…














