Author: kannadanewsnow09

ಬೆಂಗಳೂರು: ಜನವರಿ.14, 2026ರಂದು ಬಿಎಂಟಿಸಿ ಬಸ್ ಮಾರ್ಗ 375D/18ರಲ್ಲಿ ಅಪರೂಪದ ಘಟನೆ ನಡೆದಿದೆ. ರಾತ್ರಿ ತಂಗುವ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಒಬ್ಬ ವಯಸ್ಕ ಪ್ರಯಾಣಿಕರು ಫೋನ್‌ ಪೇ ಮೂಲಕ ಟಿಕೆಟ್ ಶುಲ್ಕ ಪಾವತಿಸುವಾಗ ಅಚಾತುರ್ಯದಿಂದ ರೂ.6ರ ಬದಲಾಗಿ ರೂ.62,316 ಪಾವತಿಸಿದ್ದನು. ಆದರೇ ಕಂಡಕ್ಟರ್ ಮಾಡಿದಂತ ಆ ಕಾರ್ಯದಿಂದ ಭಾರೀ ಮೆಚ್ಚುಗೆಯೇ ವ್ಯಕ್ತವಾಗಿದೆ. ಆ ಬಗ್ಗೆ ಮುಂದೆ ಓದಿ..  ದಿನಾಂಕ 14-01-2026ರಂದು ಬಿಎಂಟಿಸಿ ಬಸ್ಸನ್ನು ರಾತ್ರಿ 8.30ರ ಸುಮಾರಿಗೆ ಪ್ರಯಾಣಿಕರೊಬ್ಬರು ಏರಿದ್ದರು. ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರ ಆಧಾರ್ ಪರಿಶೀಲಿಸಿ ಉಚಿತ ಪ್ರಯಾಣ ಚೀಟಿ ನೀಡಲಾಗುತ್ತಿತ್ತು. ಇದೇ ವೇಳೆ ಓರ್ವ ಪ್ರಯಾಣಿಕ ಫೋನ್‌ಪೇ ಮೂಲಕ 6 ರೂಪಾಯಿ ಟಿಕೆಟ್ ದರ ಪಾವತಿಸುವ ಬದಲು , ತಪ್ಪಾಗಿ ₹62,316 ಪಾವತಿಸಿದ್ದಾರೆ. ಪ್ರಯಾಣಿಕರು ವಿಷಯವನ್ನು ಗಮನಕ್ಕೆ ತಂದ ಕೂಡಲೇ ಕಂಡಕ್ಟರ್ ಪರಿಶೀಲನೆ ನಡೆಸಿದ್ದು, ಹಣ ತಪ್ಪಾಗಿ ವರ್ಗಾಯಿಸಿರುವುದು ದೃಢಪಟ್ಟಿತ್ತು. ಕಂಡಕ್ಟರ್ ಪ್ರಯಾಣಿಕರಿಗೆ ಆತಂಕಪಡಬೇಡಿ ಎಂದು ಭರವಸೆ ನೀಡಿ, ಹಣ ಮರುಪಾವತಿ ಪ್ರಕ್ರಿಯೆಯ ಕುರಿತು…

Read More

ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಹೈಕೋರ್ಟ್ ಬಿಗ್ ಶಾರ್ ನೀಡಿದೆ. ಪ್ರಕರಣ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದೆ. ಇಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರನ್ನ ಅವರನ್ನೊಳಗೊಂಡ ನ್ಯಾಯಪೀಠವು ಕೈ ಮುಖಂಡ ರಾಜೀವ್ ಗೌಡ ಅವರು ಬೆದರಿಕೆ ಪ್ರಕರಣದ ಎಫ್ಐಆರ್ ರದ್ದು ಕೋರಿದ್ದಂತ ಅರ್ಜಿಯ ವಿಚಾರಣೆ ನಡೆಸಿತು. ವಾದ ಪ್ರತಿವಾದವನ್ನು ಆಲಿಸಿದಂತ ನ್ಯಾಯಪೀಠವು ಕೇಸ್ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಇನ್ನೂ ಮಧ್ಯಂತರ ಜಾಮೀನು, ರಕ್ಷಣೆ ಕೋರಿದ್ದಂತ ಅರ್ಜಿಯ ಬಗ್ಗೆ ಯಾವುದೇ ಆದೇಶ ಮಾಡದೇ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ರಾಜೀವ್ ಗೌಡಗೆ ಬಿಗ್ ಶಾಕ್ ನೀಡಿದೆ.

Read More

ಬೆಂಗಳೂರು: ವಿಶೇಷ ಅಧಿವೇಶನದ ದಿನವನ್ನು ಕರಾಳ ದಿನವನ್ನಾಗಿಸಿದ ಕಾಂಗ್ರೆಸ್‌ ಸರ್ಕಾರ, ರಾಜ್ಯಪಾಲರಿಗೆ ಅಗೌರವ ತೋರಿ ಸಂವಿಧಾನಕ್ಕೆ ಅಪಮಾನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಅಧಿವೇಶನದ ದಿನವನ್ನು ಕರಾಳ ದಿನವನ್ನಾಗಿಸಿದೆ. ರಾಜ್ಯಪಾಲರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಾರೆ. ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಸಾಂಕೇತಿಕವಾಗಿ ಭಾಷಣ ಮಂಡಿಸಿ ಧನ್ಯವಾದ ಹೇಳಿ ಹೋಗಿದ್ದಾರೆ. ಹಿಂದೆ ಹಂಸರಾಜ್‌ ಭಾರಧ್ವಾಜ್‌ ಕೂಡ ಹಾಗೆಯೇ ಮಾಡಿದ್ದರು. ಇದರಲ್ಲಿ ತಪ್ಪೇನೂ ಇಲ್ಲ. ಸಂವಿಧಾನದ ಪ್ರಕಾರ ಸದನಕ್ಕೆ ಬಂದು ಸಾಂಕೇತಿಕ ಭಾಷಣ ಮಂಡಿಸಿ ಧನ್ಯವಾದ ಹೇಳುವ ಅವಕಾಶ ಇದ್ದೇ ಇದೆ. ಆದರೆ ಕಾಂಗ್ರೆಸ್‌ ಶಾಸಕರು ಗೂಂಡಾಗಿರಿ ಮಾಡಿ ರಾಜ್ಯಪಾಲರನ್ನು ತಳ್ಳಿದ್ದಾರೆ ಹಾಗೂ ದಾಳಿ ಮಾಡಿದ್ದಾರೆ. ಸದನದ ಹಿರಿಯ ಸದಸ್ಯರು ಹಾಗೂ ಕಾನೂನು ಸಚಿವರಾದ ಎಚ್‌.ಕೆ.ಪಾಟೀಲ್‌ ಅವರೇ ಸ್ವತಃ ಈ ಕೆಟ್ಟ ಸಂಪ್ರದಾಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವುದು ನಿಜಕ್ಕೂ ನಾಚಿಕೆಗೇಡು ಮತ್ತು ಖಂಡನೀಯ. ಕಾನೂನು ಸಚಿವ…

Read More

ಬೆಂಗಳೂರು: ಅತ್ಯುನ್ನತ ಗುಣಮಟ್ಟದ ರಿಯಲ್ ಎಸ್ಟೇಟ್ ಸಂಪತ್ತುಗಳ ಮುಂಚೂಣಿ ಜಾಗತಿಕ ಡೆವಲಪರ್ ಮತ್ತು ಆಪರೇಟರ್ ಆದ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್, ಭಾನುವಾರ 18 ಜನವರಿ2026ರಂದು ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್ ಅವರ ಮಾರ್ಕೀ ಮಿಶ್ರ-ಬಳಕೆ ಅಭಿವೃದ್ಧಿ ಯೋಜನೆಗಳ ಪೈಕಿ ಒಂದಾದ ಎಕೋವರ್ಲ್ಡ್‌ನಲ್ಲಿ ಗಿಫ್ಟೆಡ್‌ಮೈಂಡ್ಸ್ ಅವರ ಪ್ರಮುಖ ಕಾರ್ಯಕ್ರಮ ಮೆಗಾ ಫಿನಾಲೆ ಆಫ್ ಡೆಮೋ ಡೇ 2026 ನಡೆಸಿಕೊಡಲು ಅನುಭವೀ ಎಡ್‌ಟೆಕ್ ವೇದಿಕೆಯಾದ ಗಿಫ್ಟ್‌ಮೈಂಡ್ಸ್‌ನೊಂದಿಗೆ ಯಶಸ್ವೀ ಸಹಭಾಗಿತ್ವ ಏರ್ಪಡಿಸಿಕೊಂಡಿತು. ಎಕೋವರ್ಲ್ಡ್‌ನ ಆಂಫಿಥಿಯೇಟರ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮವು, ಭಾರತದ ಕೆಲವು ಅತ್ಯಂತ ಚುರುಕಿನ ಯುವ ಆವಿಷ್ಕಾರಕರು, —ಮುಂತಾದ(<NAMES>.) ಹಿರಿಯ ಉದ್ದಿಮೆ ನಾಯಕರುಗಳಿಗೆ ತಮ್ಮ ಅತ್ಯಂತ-ಪ್ರಭಾವೀ ಆವಿಷ್ಕಾರಗಳನ್ನು ಪ್ರದರ್ಶಿಸಲು ಅವರುಗಳನ್ನು ಒಂದುಗೂಡಿಸಿತ್ತು. ತನ್ನ ಎರಡನೇ ಆವೃತ್ತಿಯಲ್ಲಿರುವ ಡೆಮೋ ಡೇ 2026ದಲ್ಲಿ 9 ರಿಂದ 14 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಭಾಗವಹಿಸಿ, ವೇದಿಕೆಯೊಡನೆ ಒಂದು ವರ್ಷದಿಂದ, ವಾಸ್ತವ ಕಲಿಕಾ ಪಯಣದಲ್ಲಿ ವಿನ್ಯಾಸಗೊಳಿಸಿ ನಿರ್ಮಾಣ ಮಾಡಿದ ವಾಸ್ತವ-ಜಗತ್ತಿನ ಸಮಸ್ಯೆ ಪರಿಹರಿಸುವ ಉತ್ಪನ್ನಗಳನ್ನು ಪ್ರದರ್ಶಿಸಿ ಮಂಡಿಸಿದರು. ಕಾರ್ಯಕ್ರಮದ ತೀರ್ಪುಗಾರರ ತಂಡವು, —<ಹೆಸರುಗಳು>.…

Read More

ಬೆಂಗಳೂರು: ರಾಜ್ಯದಲ್ಲಿ ಬಸ್ ಅವಘಡವನ್ನು ತಪ್ಪಿಸುವ ನಿಟ್ಟಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಕ್ರಮ ವಹಿಸಿದ್ದಾರೆ. ಇನ್ಮುಂದೆ ಸ್ಲೀಪರ್ ಬಸ್ ಗಳಲ್ಲಿ 8 ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಖಾಸಗಿ ಬಸ್ ಮಾಲೀಕರ ಜೊತೆಗೆ ಸಾರಿಗೆ ಸಚಿವ ಸಭೆ ನಡೆಸಿದರು. ಈ ಸಭೆಯಲ್ಲಿ ಕೆಲ ಖಡಕ್ ಸೂಚನೆಗಳನ್ನು ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ. ಖಾಸಗಿ ಬಸ್ ಗಳಲ್ಲಿ ಇನ್ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಸೆಂಟ್ರಲ್ ಇನ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್ ಪೋರ್ಟ್ ನಿಯಮ ಜಾರಿಗೊಳಿಸಲಾಗುತ್ತಿದೆ. ಇನ್ಮುಂದೆ ಸ್ಲೀಪರ್ ಬಸ್ ಗಳಲ್ಲಿ 8 ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಸ್ಲೀಪರ್ ಬಸ್ ಗಳಲ್ಲಿ ಚಾಲಕರ ಹಿಂಬದಿ ಡೋರ್ ತೆಗೆಯಬೇಕು. ಸ್ಲೀಪರ್ ಬರ್ತ್ ಗಳಲ್ಲಿ ಸ್ಲೈಡರ್ ತೆಗೆಯಬೇಕು ಎಂಬುದಾಗಿ ಸೂಚಿಸಿದ್ದಾರೆ. ಫೈರ್ ಡಿಟೆಕ್ಷನ್ ಅನ್ನು ತಿಂಗಳೊಳಗೆ ಕಡ್ಡಾಯವಾಗಿ ಅಳವಡಿಸಬೇಕು. 10 ಕೆಜಿ ತೋಕದ ಅಗ್ನಿಶಾಮಕ ಸಾಧನ ಅಳವಡಿಸುವುದು ಕಡ್ಡಾಯವಾಗಿದೆ. ಚಾಸಿಸ್ ಅನಧಿಕೃತ ವಿಸ್ತರಣೆಗೆ ಬ್ರೇಕ್ ಹಾಕಲಾಗಿದೆ. ಅನುಮೋದಿತ ಟೆಸ್ಟಿಂಗ್…

Read More

ಬೆಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಅಭ್ಯರ್ಥಿಗಳ ಕಡ್ಡಾಯ ಸೇವಾ ಕಾಯ್ದೆ-2012 ರ ಅಡಿಯಲ್ಲಿನ ಗೊಂದಲಗಳಿಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖವಾದ ಸ್ಪಷ್ಟೀಕರಣವನ್ನು ನೀಡಿ ಆದೇಶ ಹೊರಡಿಸಲಾಗಿದೆ. ಅದೇನು ಅಂತ ಮುಂದೆ ಓದಿ. 1) ಪದವಿ ಪ್ರಮಾಣಪತ್ರಗಳ ವಿತರಣೆ (Final Degree Certificate): ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸಬೇಕಾದ ಬಾಧ್ಯತೆ ಇರುವ ಅಭ್ಯರ್ಥಿಗಳಿಗೆ ಅಂತಿಮ ಪದವಿ ಪ್ರಮಾಣಪತ್ರ ಅಥವಾ ಕೋರ್ಸ್ ಪೂರ್ಣಗೊಳಿಸಿದ ಪ್ರಮಾಣಪತ್ರಗಳನ್ನು ನೀಡಲು 2012 ರ ಕಡ್ಡಾಯ ಸೇವಾ ಕಾಯ್ದೆಯಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 2) ಮೂಲ ದಾಖಲೆಗಳ ವಾಪಸಾತಿ (Returning of Original Documents): ಪಿಜಿ (PG) ಪ್ರವೇಶದ ಸಮಯದಲ್ಲಿ ಕಾಲೇಜುಗಳಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ಮೂಲ ದಾಖಲೆಗಳನ್ನು ಹಿಂತಿರುಗಿಸುವುದಕ್ಕೂ ಮತ್ತು ಕಡ್ಡಾಯ ಸೇವೆಗೂ ಯಾವುದೇ ಸಂಬಂಧವಿರುವುದಿಲ್ಲ. ಅಭ್ಯರ್ಥಿಗಳ ದಾಖಲೆಗಳನ್ನು ಹಿಡಿದಿಟ್ಟುಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿಲ್ಲದ ಕಾರಣ, ಅವುಗಳನ್ನು ಹಿಂತಿರುಗಿಸತಕ್ಕದ್ದು. 3) ಷರತ್ತುಬದ್ಧ ಅಥವಾ ತಾತ್ಕಾಲಿಕ ನೋಂದಣಿ (Conditional Registration): * ಕಡ್ಡಾಯ ಸೇವೆ…

Read More

ಬೆಂಗಳೂರು: ನಾಳೆಯ ರಾಜ್ಯಪಾಲರ ವಿಧಾನಮಂಡಲದ ಜಂಟಿ ಅಧಿವೇಶನದ ಭಾಷಣದಲ್ಲಿನ 11 ಪ್ಯಾರಾದಲ್ಲಿ 7 ಅಂಶಗಳನ್ನು ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ. 11 ಪ್ಯಾರಾಗಳನ್ನು ಸಂಪೂರ್ಣವಾಗಿ ಕೈಬಿಡದೇ ಇರೋದಕ್ಕೆ ಸರ್ಕಾರ ನಿರ್ಧರಿಸಿದೆ ಎಂಬುದಾಗಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ. ಇಂದು ರಾಜ್ಯಪಾಲರನ್ನು ಭೇಟಿಯಾಗಿ ಸಿಎಂ ಜೊತೆಗೆ ಆ ವಿಚಾರಗಳನ್ನು ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 11 ಪ್ಯಾರಾ ಕೈಬಿಡಲು ಹೇಳಿದ್ದರು. ಶಬ್ದಗಳ ತಿದ್ದುಪಡಿ ಅಷ್ಟೇ ಬದಲಾವಣೆ ಮಾಡುತ್ತೇವೆ. ಆದರೇ ಎಲ್ಲವನ್ನೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು. ಬಡವರ ಪರವಾಗಿ ಇರುವ ಭಾಷಣ ಅದು. ಅದನ್ನು ರಾಜ್ಯಪಾಲರು ಓದಬೇಕು ಅಂತಾ ಕೇಳಿಕೊಳ್ಳುತ್ತೇವೆ. ರಾಜ್ಯದ ಹಿತ ಕಾಪಾಡುವ ಅಂಶವನ್ನ ನಾವು ಬಿಡುವ ಪ್ರಶ್ನೆಯೇ ಇಲ್ಲ. ಸಿಎಂ ಸಿದ್ಧರಾಮಯ್ಯ ಜೊತೆ ಮಾತುಕತೆ ಮಾಡಿದ್ದೇವೆ ಎಂದರು. ಕ್ಯಾಬಿನೆಟ್ ನಿರ್ಧಾರದಂತೆ ಆ ಭಾಷಣವನ್ನೇ ರಾಜ್ಯಪಾಲರು ಓದಬೇಕು. ಭಾಷಣದಲ್ಲಿ ಕೆಲ ಮಾರ್ಪಾಡು ಬಗ್ಗೆ ಅವರಿಗೆ ಮಾಹಿತಿ ನೀಡಲಿದ್ದಾರೆ. 11 ಪ್ಯಾರಾದಲ್ಲಿನ 7 ಅಂಶಗಳನ್ನು ತಿದ್ದುಪಡಿ ಮಾಡಲು…

Read More

ಬೆಂಗಳೂರು: ರಾಜ್ಯಪಾಲರು ಯಾವುದೇ ಪಕ್ಷದ ಸದಸ್ಯರಲ್ಲ, ಅವರು ರಾಜ್ಯದ ನಾಮಮಾತ್ರ ಕಾರ್ಯಾಂಗದ ಮುಖ್ಯಸ್ಥರು ಮತ್ತು ರಾಜ್ಯದ ಜನರ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರ ಬರೆದುಕೊಟ್ಟ ಭಾಷಣ ಮಾಡುವುದು ರಾಜ್ಯಪಾಲರ ಸಂವಿಧಾನಬದ್ಧವಾದ ಜವಾಬ್ದಾರಿ ಆಗಿದೆಯೇ ಹೊರತು, ಅದೇನು ಸರ್ಕಾರಕ್ಕೆ ಮಾಡುವ ಉಪಕಾರವಲ್ಲ ಎಂಬುದಾಗಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ. ವಿಧಾನಮಂಡಲದ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣವನ್ನು ‘ರಾಜ್ಯ ಸಚಿವ ಸಂಪುಟ’ ಒದಗಿಸುತ್ತದೆ. ಆ ಭಾ಼ಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ದ ದನಿ ಎತ್ತಲಾಗಿದೆ ಎಂಬ ಕಾರಣಕ್ಕಾಗಿ ರಾಜ್ಯಪಾಲರು ಆ ಭಾಷಣವನ್ನು ನಿರಾಕರಿಸುವಂತಿಲ್ಲ. ಕೇಂದ್ರದ ಜನವಿರೋಧಿ ಯೋಜನೆಗಳನ್ನು ಅಧಿವೇಶನದಲ್ಲಿ ಚರ್ಚಿಸುವುದು ಒಕ್ಕೂಟ ವ್ಯವಸ್ಥೆಯ ಭಾಗವಾಗಿ ಅದು ರಾಜ್ಯ ಸರ್ಕಾರಗಳ ಹಕ್ಕು ಮತ್ತು ಜವಾಬ್ದಾರಿ ಆಗಿದೆ. ಬಹುಕಾಲದಿಂದಲೂ ಇದು ಅಸ್ತಿತ್ವದಲ್ಲಿರುವ ವಿದ್ಯಮಾನ ಆಗಿದೆ ಎಂದಿದ್ದಾರೆ. ರಾಜ್ಯಪಾಲರು ಯಾವುದೇ ಪಕ್ಷದ ಸದಸ್ಯರಾಗಿ ವರ್ತಿಸದೇ ತಮ್ಮ ರಾಜ್ಯಪಾಲರ ಜವಾಬ್ದಾರಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವುದು ಜನ ಸಾಮಾನ್ಯರ ಬದುಕಿನ ದೃಷ್ಟಿಯಿಂದ ಹೆಚ್ಚು ಉತ್ತಮ ಎನಿಸಿಕೊಳ್ಳುತ್ತದೆ ಎಂಬುದಾಗಿ ತಿಳಿಸಿದ್ದಾರೆ. https://kannadanewsnow.com/kannada/important-information-about-the-compulsory-service-of-medical-candidates-act-2012-in-the-state/ https://kannadanewsnow.com/kannada/guidelines-issued-for-renewal-of-fc-non-marine-registration-of-vehicles-in-the-state-compliance-with-these-rules-is-mandatory/

Read More

ಬೆಂಗಳೂರು: ಅಭಿವೃದ್ಧಿ ಶೂನ್ಯ ಆಡಳಿತ, ಸಾಲು ಸಾಲು ಭ್ರಷ್ಟಾಚಾರ ಹಗರಣಗಳು ಹಾಗೂ ಆಡಳಿತಾತ್ಮಕ ವೈಫಲ್ಯವನ್ನು ಮರೆಮಾಚಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವ ರಾಜ್ಯಪಾಲರ ಭಾಷಣವನ್ನು ರಾಜಕೀಯ ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, “ರಾಜ್ಯಪಾಲರು ಕಾಂಗ್ರೆಸ್ ಸರ್ಕಾರದ ವಕ್ತಾರರಲ್ಲ; ಅವರು ಸಂವಿಧಾನದ ರಕ್ಷಕರು. ಅವರ ಘನತೆಗೆ ಧಕ್ಕೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನ ಮತ್ತು ಫೆಡರಲ್ ವ್ಯವಸ್ಥೆಯ ಮೇಲೆ ನೇರ ದಾಳಿ ನಡೆಸುತ್ತಿದೆ” ಎಂದು ಹೇಳಿದರು. ಸರ್ಕಾರದ ಪಠ್ಯಕ್ಕೆ ರಾಜ್ಯಪಾಲರು ಯಾಂತ್ರಿಕವಾಗಿ ಬದ್ಧರಾಗಬೇಕಿಲ್ಲ “ಭಾರತದ ಸಂವಿಧಾನದ ವಿಧಿ 175 ಮತ್ತು 176ರ ಅಡಿಯಲ್ಲಿ ರಾಜ್ಯಪಾಲರಿಗೆ ವಿಧಾನಸಭೆ ಮತ್ತು ವಿಧಾನಪರಿಷತ್ತನ್ನು ಉದ್ದೇಶಿಸಿ ಭಾಷಣ ಮಾಡುವ ಸ್ಪಷ್ಟ ಅಧಿಕಾರವಿದೆ. ಆದರೆ ಸರ್ಕಾರ ತಯಾರಿಸಿದ ಪಠ್ಯದಲ್ಲಿರುವ ಪ್ರತಿಯೊಂದು ಪದವನ್ನೂ ರಾಜ್ಯಪಾಲರು ಕಡ್ಡಾಯವಾಗಿ ಓದಲೇಬೇಕು ಎಂಬ ನಿಯಮ ಸಂವಿಧಾನದಲ್ಲಿಯೂ ಇಲ್ಲ, ವಿಧಾನಸಭೆ ಅಥವಾ ವಿಧಾನಪರಿಷತ್ತಿನ ನಿಯಮಗಳಲ್ಲಿಯೂ ಇಲ್ಲ”…

Read More

ಯಾವುದೇ ವಿಟಮಿನ್, ವಿಶೇಷವಾಗಿ ವಿಟಮಿನ್ ಬಿ 12 ಕೊರತೆಯು ಅಪಾಯಕಾರಿಯಾಗಬಹುದು. ಕೊಬಾಲಾಮಿನ್ ಎಂದೂ ಕರೆಯಲ್ಪಡುವ ಈ ನೀರಿನಲ್ಲಿ ಕರಗುವ ಪೋಷಕಾಂಶವು ಆರೋಗ್ಯಕರ ನರ ಕೋಶಗಳು, ಕೆಂಪು ರಕ್ತ ಕಣಗಳ ರಚನೆ ಮತ್ತು ಡಿಎನ್ಎ ಸಂಶ್ಲೇಷಣೆಗೆ ಅತ್ಯಗತ್ಯ. ಆದಾಗ್ಯೂ, ನಿಮ್ಮ ದೇಹದಲ್ಲಿ ಇದರ ಕೊರತೆಯಿದ್ದಾಗ, ಅನೇಕ ಎಚ್ಚರಿಕೆ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ – ಮತ್ತು ಇವುಗಳಲ್ಲಿ ಒಂದು ವ್ಯಕ್ತಿಯ ಪಾದಗಳಲ್ಲಿ ಕಾಣಿಸಿಕೊಳ್ಳಬಹುದು. ವಿಟಮಿನ್ ಬಿ 12 ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುವ ಮೂಲಕ ಗಾಯದ ಚೇತರಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ, ಅದರ ಕೊರತೆಯು ದೇಹದಾದ್ಯಂತ ಆಮ್ಲಜನಕದ ಕೊರತೆಯನ್ನು ಉಂಟುಮಾಡುತ್ತದೆ. ತಜ್ಞರ ಪ್ರಕಾರ, ವಿಟಮಿನ್ ಬಿ ಕೊರತೆಯು ಗಾಯದ ಗುಣಪಡಿಸುವಿಕೆಯ ಮೇಲೆ ಹಲವು ವಿಧಗಳಲ್ಲಿ ಪರಿಣಾಮ ಬೀರುತ್ತದೆ – ವಿಶೇಷವಾಗಿ ನಿಮ್ಮ ಪಾದಗಳು. ನಿಮ್ಮ ಪಾದಗಳಲ್ಲಿ ವಿಟಮಿನ್ ಬಿ 12 ಕೊರತೆಯ ಚಿಹ್ನೆಗಳು ಯಾವುವು? ನಿಮ್ಮ ಪಾದಗಳಲ್ಲಿ ಜುಮ್ಮೆನಿಸುವಿಕೆ ಸಂವೇದನೆಗಳು ಕಂಡುಬಂದರೆ, ನೀವು ತಕ್ಷಣ ನಿಮ್ಮ ವೈದ್ಯರನ್ನು ಭೇಟಿ ಮಾಡಬೇಕು ಏಕೆಂದರೆ ಅಂತಹ…

Read More