Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಮಂಡ್ಯ : ಯಾವುದಾದರೂ ಸಭೆ, ಸಮಾರಂಭ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಗಣ್ಯ, ವ್ಯಕ್ತಿಗಳು, ಅಧಿಕಾರಿಗಳು ಹಾಗೂ ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಸನ್ಮಾನ ಮಾಡುವುದು ಸಾಮಾನ್ಯ ಆದರೆ, ತಮ್ಮ ಸಂಸ್ಥೆಯ ಶೌಚಗೃಹ, ಕಾವಲುಗಾರರು, ಚಾಲಕರು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸುವ ಮೂಲಕ ವಿಶಿಷ್ಟ ಕಾರ್ಯಕ್ರಮಕ್ಕೆ ಆರ್.ಕೆ.ವಿದ್ಯಾಸಂಸ್ಥೆ ಸಾಕ್ಷಿಯಾಯಿತು. ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆಯ ಆರ್‌.ಕೆ.ವಿದ್ಯಾಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ಸಾಕ್ಷಿಯಾದರು. ಸಂಸ್ಥೆಯ ಅಧ್ಯಕ್ಷ ಬಿ.ರಾಮಕೃಷ್ಣ ಮಾತನಾಡಿ, ಆರ್.ಕೆ.ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸುಮಾರು 100 ಕ್ಕೂ ಹೆಚ್ಚು ಬೋಧಕೆತರ ವರ್ಗದವರನ್ನು ಸನ್ಮಾನಿಸುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರಲ್ಲೂ ಒಂದೇ ಭಾವನೇ ಮೂಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು, ಆಡಳಿತ ಮಂಡಳಿ, ಜೊತೆಗೆ ಬೋಧಕೇತರ ವರ್ಗದವರ ಪಾತ್ರ ಅನನ್ಯವಾಗಿದ್ದು, ಹೀಗಾಗಿ ಅವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ ಎಂದರು. ಸಂಸ್ಥೆಯು ಈಗಾಗಲೇ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ…

Read More

ಮಳೆಗಾಲ ಅಥವಾ ಬೇಸಿಗೆಯ ಸಮಯದಲ್ಲಿ ಮನೆಗಳ ಸುತ್ತಮುತ್ತ ಹಾವುಗಳ ಕಾಟ ಹೆಚ್ಚಾಗುವುದು ಸಾಮಾನ್ಯ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಗಿಡ-ಗಂಟೆಗಳು ಹೆಚ್ಚಾಗಿರುವ ಜಾಗಗಳಲ್ಲಿ ಹಾವುಗಳು ಯಾವಾಗ ಮನೆಯೊಳಗೆ ನುಗ್ಗುತ್ತವೆಯೋ ಎಂಬ ಭಯ ಎಲ್ಲರನ್ನೂ ಕಾಡುತ್ತಿರುತ್ತದೆ. ಹಾವುಗಳನ್ನು ಮನೆಯಿಂದ ದೂರವಿಡಲು ಮಾರುಕಟ್ಟೆಯಲ್ಲಿ ಹತ್ತಾರು ರಾಸಾಯನಿಕಗಳು ಸಿಗುತ್ತವೆಯಾದರೂ, ಅವುಗಳಿಗಿಂತ ನೈಸರ್ಗಿಕ ಹಾಗೂ ಸುಲಭವಾದ ಉಪಾಯವೊಂದು ಇಲ್ಲಿದೆ. ನಿಮ್ಮ ಮನೆಯ ಮುಖ್ಯ ದ್ವಾರ ಅಥವಾ ಬಾಗಿಲ ಬಳಿ ‘ಸ್ನೇಕ್ ಪ್ಲಾಂಟ್’ (Snake Plant) ಎಂಬ ವಿಶಿಷ್ಟ ಗಿಡವನ್ನು ಬೆಳೆಸುವುದರಿಂದ ಹಾವುಗಳು ನಿಮ್ಮ ಮನೆಯೊಳಗೆ ಪ್ರವೇಶಿಸಲು ಧೈರ್ಯ ಮಾಡುವುದಿಲ್ಲ ಎಂದು ತೋಟಗಾರಿಕಾ ತಜ್ಞರು ಮತ್ತು ಪರಿಸರ ಪ್ರಿಯರು ಹೇಳುತ್ತಾರೆ. ಹಾವುಗಳನ್ನು ದೂರವಿಡಲು ಸ್ನೇಕ್ ಪ್ಲಾಂಟ್ ಹೇಗೆ ಸಹಾಯ ಮಾಡುತ್ತದೆ? ಸ್ನೇಕ್ ಪ್ಲಾಂಟ್ (ಶಾಸ್ತ್ರೀಯ ಹೆಸರು: Sansevieria trifasciata) ಎಲೆಗಳು ಹಾವಿನ ಚರ್ಮದ ವಿನ್ಯಾಸವನ್ನು ಹೋಲುತ್ತವೆ ಮತ್ತು ಅವುಗಳ ಮೇಲ್ಭಾಗವು ಅತ್ಯಂತ ಚೂಪಾಗಿರುತ್ತದೆ. ಹಾವುಗಳು ಅತ್ಯಂತ ಸೂಕ್ಷ್ಮವಾದ ಚರ್ಮವನ್ನು ಹೊಂದಿರುವುದರಿಂದ, ಈ ಚೂಪಾದ ಎಲೆಗಳ ಸ್ಪರ್ಶಕ್ಕೆ ಅವು ಹೆದರುತ್ತವೆ.…

Read More

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ ಎಂಟು ದಿನಗಳ ಕಾಲ ಕರ್ನಾಟಕದಾದ್ಯಂತ ಭಾರೀ ಮಳೆ, ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ತೀವ್ರವಾಗಿರುವುದರಿಂದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಕರಾವಳಿ ಜಿಲ್ಲೆಗಳಿಗೆ ‘ಆರೆಂಜ್’ ಮತ್ತು ‘ಯೆಲ್ಲೋ’ ಅಲರ್ಟ್! ಮುಂದಿನ ಕೆಲವು ದಿನಗಳ ಕಾಲ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ಮಳೆಯ ತೀವ್ರತೆ ಕರಾವಳಿ ಮಾತ್ರವಲ್ಲದೆ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ,…

Read More

ನವದೆಹಲಿ: ಸಾಮಾನ್ಯವಾಗಿ ನಮಗೆ ದೃಷ್ಟಿ ದೋಷ ಅಥವಾ ಕಣ್ಣಿನ ತೊಂದರೆ ತೀವ್ರವಾಗುವವರೆಗೂ ನಾವು ಕಣ್ಣುಗಳ ಆರೋಗ್ಯದ ಕಡೆಗೆ ಗಮನ ಕೊಡುವುದಿಲ್ಲ. ಕಣ್ಣುಗಳು ಸುಸ್ತಾಗಿವೆ, ವಯಸ್ಸಾಗುತ್ತಿದೆ ಅಥವಾ ಮೊಬೈಲ್-ಲ್ಯಾಪ್‌ಟಾಪ್ ಸ್ಕ್ರೀನ್ ಹೆಚ್ಚು ನೋಡುತ್ತಿರುವುದರಿಂದ ಹೀಗಾಗುತ್ತಿದೆ ಎಂದು ನಾವೇ ಸಮರ್ಥನೆ ಮಾಡಿಕೊಳ್ಳುತ್ತೇವೆ. ಆದರೆ, ಕಣ್ಣುಗಳಲ್ಲಿ ದೃಷ್ಟಿ ಮಂಜಾಗುವ ಮುನ್ನವೇ ಅವು ನಮ್ಮ ದೇಹದ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಕೆಲವು ‘ಮೌನ’ ಸೂಚನೆಗಳನ್ನು ನೀಡುತ್ತಿರುತ್ತವೆ. ವಿಶ್ವದಾದ್ಯಂತ ಸುಮಾರು 4.3 ಕೋಟಿಗೂ ಹೆಚ್ಚು ಜನರು ದೃಷ್ಟಿಹೀನತೆಯಿಂದ ಬಳಲುತ್ತಿದ್ದಾರೆ. ಆದರೆ ಶೇ. 90 ಕ್ಕಿಂತ ಹೆಚ್ಚು ಕಣ್ಣಿನ ಸಮಸ್ಯೆಗಳನ್ನು ಮೊದಲೇ ಗುರುತಿಸಿದರೆ ತಡೆಯಬಹುದು ಎನ್ನುತ್ತಾರೆ ತಜ್ಞರು. ಆರ್ಬಿಸ್ (ಇಂಡಿಯಾ) ಸಂಸ್ಥೆಯ ಕಂಟ್ರಿ ಡೈರೆಕ್ಟರ್ ಆದ ಡಾ. ರಿಷಿ ರಾಜ್ ಬೋರಾ ಅವರ ಪ್ರಕಾರ, ಕಣ್ಣುಗಳು ನೀಡುವ ಈ 5 ಲಕ್ಷಣಗಳನ್ನು ನಾವು ಎಂದಿಗೂ ನಿರ್ಲಕ್ಷಿಸಬಾರದು: 1. ನಿರಂತರವಾಗಿ ದೃಷ್ಟಿ ಮಂಜಾಗುವುದು (Persistent Blurred Vision) ದೀರ್ಘಕಾಲ ಸ್ಕ್ರೀನ್ ನೋಡಿದಾಗ ಕಣ್ಣು ಮಂಜಾಗುವುದು ಸಹಜ. ಆದರೆ, ನಿಮ್ಮ ದೃಷ್ಟಿ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಮೇಜರ್ ಸರ್ಜರಿಯನ್ನು ಮಾಡಲಾಗಿದೆ. ಆರು ಐಎಎಸ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ರಾಜ್ಯ ಸರ್ಕಾರವು ಭಾನುವಾರ ಮಹತ್ವದ ಆಡಳಿತಾತ್ಮಕ ನಿರ್ಧಾರ ಕೈಗೊಂಡಿದ್ದು, ಆರು ಹಿರಿಯ ಐಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಯಾರಿಗೆ ಯಾವ ಜವಾಬ್ದಾರಿ? (ವರ್ಗಾವಣೆ ವಿವರಗಳು): ಆಂಜುಮ್ ಪರ್ವೇಜ್, IAS (1994 ಬ್ಯಾಚ್): ನಿಯೋಜನೆಗಾಗಿ ಕಾಯುತ್ತಿದ್ದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿನ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ (Additional Chief Secretary) ನೇಮಿಸಲಾಗಿದೆ. ಮುನೀಶ್ ಮೌದ್ಗಿಲ್, IAS (1998 ಬ್ಯಾಚ್): ಬೃಹತ್ ಬೆಂಗಳೂರು ಪ್ರಾಧಿಕಾರದ ವಿಶೇಷ ಕಮಿಷನರ್ (ಆಡಳಿತ, ಕಂದಾಯ ಮತ್ತು ಐಟಿ) ಆಗಿರುವ ಇವರಿಗೆ ನೂತನವಾಗಿ ಸೃಷ್ಟಿಸಲಾದ ‘ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ (ಕಾರ್ಯಕ್ರಮ ಮತ್ತು ಯೋಜನೆ ಅನುಷ್ಠಾನ)’ ಹುದ್ದೆಯ ಹೆಚ್ಚುವರಿ ಪ್ರಭಾರ ಜವಾಬ್ದಾರಿಯನ್ನು ನೀಡಲಾಗಿದೆ. ದೀಪಾ ಚೋಲನ್, IAS…

Read More

ಬೆಂಗಳೂರು : ರಾಜ್ಯ ಸರ್ಕಾರವು ಭಾನುವಾರ ಮಹತ್ವದ ಆಡಳಿತಾತ್ಮಕ ನಿರ್ಧಾರ ಕೈಗೊಂಡಿದ್ದು, ಆರು ಹಿರಿಯ ಐಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (DPAR) ಅಧಿಕೃತ ಅಧಿಸೂಚನೆ (ಸಂಖ್ಯೆ: e-DPAR 169 SAS 2026) ಹೊರಡಿಸಿದ್ದು, ಹಲವು ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ಮರುಹಂಚಿಕೆ ಮಾಡಲಾಗಿದೆ. ಯಾರಿಗೆ ಯಾವ ಜವಾಬ್ದಾರಿ? (ವರ್ಗಾವಣೆ ವಿವರಗಳು): ಆಂಜುಮ್ ಪರ್ವೇಜ್, IAS (1994 ಬ್ಯಾಚ್): ನಿಯೋಜನೆಗಾಗಿ ಕಾಯುತ್ತಿದ್ದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿನ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ (Additional Chief Secretary) ನೇಮಿಸಲಾಗಿದೆ. ಮುನೀಶ್ ಮೌದ್ಗಿಲ್, IAS (1998 ಬ್ಯಾಚ್): ಬೃಹತ್ ಬೆಂಗಳೂರು ಪ್ರಾಧಿಕಾರದ ವಿಶೇಷ ಕಮಿಷನರ್ (ಆಡಳಿತ, ಕಂದಾಯ ಮತ್ತು ಐಟಿ) ಆಗಿರುವ ಇವರಿಗೆ ನೂತನವಾಗಿ ಸೃಷ್ಟಿಸಲಾದ ‘ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ (ಕಾರ್ಯಕ್ರಮ ಮತ್ತು ಯೋಜನೆ ಅನುಷ್ಠಾನ)’ ಹುದ್ದೆಯ ಹೆಚ್ಚುವರಿ ಪ್ರಭಾರ ಜವಾಬ್ದಾರಿಯನ್ನು ನೀಡಲಾಗಿದೆ. ದೀಪಾ…

Read More

ಬೇಸಿಗೆ ಬಂತೆಂದರೆ ಸಾಕು ಹಣ್ಣುಗಳ ರಾಜ ಮಾವಿನ ಹಣ್ಣಿನದ್ದೇ ಜಗತ್ತು. ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣನ್ನು ನಾವೆಲ್ಲರೂ ಅತ್ಯಂತ ಆಸೆಯಿಂದ ತಿನ್ನುತ್ತೇವೆ. ಆದರೆ, ಹಣ್ಣನ್ನು ತಿಂದ ನಂತರ ಅದರ ಒಳಗಿರುವ ಗಟ್ಟಿಯಾದ ಬೀಜ ಅಥವಾ ವೋಟೆಯನ್ನು (Mango Seeds / Gutli) ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ನಿಮಗೆ ಗೊತ್ತಾ? ನಾವು ವ್ಯರ್ಥವೆಂದು ಭಾವಿಸುವ ಈ ಮಾವಿನ ವೋಟೆಯಲ್ಲಿ ಗೃಹ ತೋಟಗಾರಿಕೆಗೆ (Home Gardening) ಬೇಕಾಗುವ ಅದ್ಭುತ ಪೋಷಕಾಂಶಗಳು ಹಾಗೂ ಹತ್ತಾರು ಆರೋಗ್ಯ ಪ್ರಯೋಜನಗಳು ಅಡಗಿವೆ! ಮಾವಿನ ವೋಟೆಯನ್ನು ಮನೆಯ ಕೈತೋಟದಲ್ಲಿ ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಮತ್ತು ಅದರ ಇತರ ಪ್ರಯೋಜನಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. 1. ಗೃಹ ತೋಟಕ್ಕೆ ಅತ್ಯುತ್ತಮ ನೈಸರ್ಗಿಕ ಗೊಬ್ಬರ (Organic Fertilizer) ಮಾವಿನ ಬೀಜಗಳಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಗಿಡಗಳ ಬೆಳವಣಿಗೆಗೆ ಅಗತ್ಯವಾದ ಅನೇಕ ಮೈಕ್ರೋನ್ಯೂಟ್ರಿಯೆಂಟ್ಸ್ (ಸೂಕ್ಷ್ಮ ಪೋಷಕಾಂಶಗಳು) ಸಮೃದ್ಧವಾಗಿವೆ. ಬಳಸುವ ವಿಧಾನ: ಮಾವಿನ ಗೊರಟೆಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ. ನಂತರ ಅವುಗಳನ್ನು…

Read More

ಬೆಂಗಳೂರು: ರಾಜ್ಯ ಸರ್ಕಾರವು ಭಾನುವಾರ ತುರ್ತು ಆದೇಶ ಒಂದನ್ನು ಹೊರಡಿಸಿದ್ದು, ರಾಜ್ಯದ ಇಬ್ಬರು ಅತ್ಯಂತ ಹಿರಿಯ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (DPAR) ಈ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಡಾ. ಪ್ರಣಬ್ ಮೊಹಂತಿ, IPS (1994 ಬ್ಯಾಚ್): ಇವರನ್ನು ಆಂತರಿಕ ಭದ್ರತಾ ವಿಭಾಗದ DGP ಹುದ್ದೆಯಿಂದ ಅಪರಾಧ ತನಿಖಾ ಇಲಾಖೆ (CID), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಇದರ ಜೊತೆಗೆ ಇವರಿಗೆ ಸೈಬರ್ ಕ್ರೈಮ್ ವಿಭಾಗದ ಡಿಜಿಪಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಲಾಗಿದೆ. ಡಾ. ಚಂದ್ರಗುಪ್ತ, IPS (2006 ಬ್ಯಾಚ್): ಇವರನ್ನು ಭದ್ರತಾ ವಿಭಾಗದ (ಗುಪ್ತಚರ) ಐಜಿಪಿ ಹುದ್ದೆಯಿಂದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (IGP), ಗುಪ್ತಚರ ವಿಭಾಗ, ಬೆಂಗಳೂರು ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಲಭೂ ರಾಮ್, IPS ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಇವರನ್ನು ನೇಮಕ ಮಾಡಲಾಗಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು,…

Read More

ರಾಮನಗರ: “ನಿಮ್ಮ ಆಶೀರ್ವಾದದಿಂದ ಇಂದು ಕನಕಪುರ ಎಂದರೆ ಸಿಎಂ ಕ್ಷೇತ್ರ ಎಂಬ ಅಧಿಕಾರ ಸಿಕ್ಕಿದೆ. ಆದರೆ, ಬರೀ ಎರಡು ವರ್ಷದ ಮುಖ್ಯಮಂತ್ರಿಯನ್ನು ನೋಡಲು ನೀವು ಬಯಸುತ್ತೀರಾ? 2028ರ ಮುಂದಿನ ವಿಧಾನಸಭೆ ಚುನಾವಣೆಯ ನಂತರವೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ, ಕ್ಷೇತ್ರದ ಜನರೇ ನನಗೆ ಬಿಡುವು ಮಾಡಿಕೊಡಬೇಕು” ಎಂದು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ದೂರದೃಷ್ಟಿಯ ರಾಜಕೀಯ ಆಶಯವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗಷ್ಟೇ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಸ್ವಕ್ಷೇತ್ರ ಕನಕಪುರ ತಾಲೂಕಿನ ಬೇಕುಪ್ಪೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕೃತಜ್ಞತಾ ಸಮರ್ಪಣಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಇಡೀ ರಾಜ್ಯ ಸುತ್ತಬೇಕಿದೆ, ಸಮಯ ಕೊಡುವುದು ಕಷ್ಟ” ಮುಖ್ಯಮಂತ್ರಿಯಾದ ಬಳಿಕ ಕ್ಷೇತ್ರದ ಕಡೆಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, “ನಾನು ಈಗ ಇಡೀ ರಾಜ್ಯ ಪ್ರವಾಸ ಮಾಡಬೇಕಿದೆ. ಹೀಗಾಗಿ ನಿಮಗೆ (ಕ್ಷೇತ್ರದ ಜನರಿಗೆ) ಮುಂಚಿನಂತೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ, 2028ರಲ್ಲೂ ನಾನೇ ಮತ್ತೆ…

Read More

ನವದೆಹಲಿ: ಭಾರತೀಯರಿಗೆ ಚಿನ್ನ ಎಂದರೆ ಕೇವಲ ಆಭರಣವಲ್ಲ, ಅದೊಂದು ಭಾವನೆ ಮತ್ತು ಸಂಕಷ್ಟದ ಸಮಯಕ್ಕೆ ನೆರವಾಗುವ ಅತ್ಯುತ್ತಮ ಹೂಡಿಕೆ. ಆದರೆ, ನೀವು ಎಂದಾದರೂ ಯೋಚಿಸಿದ್ದೀರಾ? ಪ್ರತಿದಿನ ಬೆಳಿಗ್ಗೆ ಚಿನ್ನದ ಬೆಲೆ ಇಷ್ಟೇ ಇರಬೇಕು ಎಂದು ಯಾರು ನಿರ್ಧರಿಸುತ್ತಾರೆ? ಇವತ್ತು ಒಂದು ಗ್ರಾಂ ಚಿನ್ನಕ್ಕೆ ಇಷ್ಟು ಬೆಲೆ ಎಂದು ದೇಶಾದ್ಯಂತ ಹೇಗೆ ಪ್ರಕಟವಾಗುತ್ತದೆ? ಷೇರು ಮಾರುಕಟ್ಟೆಯಂತೆ ಚಿನ್ನದ ಬೆಲೆಯೂ ಪ್ರತಿದಿನ ಏರಿಳಿತ ಕಾಣುತ್ತದೆ. ಭಾರತದಲ್ಲಿ ಚಿನ್ನದ ದರ ನಿರ್ಧಾರವಾಗುವ ಪ್ರಕ್ರಿಯೆ, ಅದರ ಹಿಂದಿರುವ ಪ್ರಮುಖ ಸಂಸ್ಥೆಗಳು ಮತ್ತು ನಿಮ್ಮ ಊರಿನಲ್ಲಿ ಚಿನ್ನದ ಬೆಲೆ ಹೇಗೆ ಬದಲಾಗುತ್ತದೆ ಎಂಬ ಸಂಪೂರ್ಣ ಲೆಕ್ಕಾಚಾರದ ವಿವರ ಇಲ್ಲಿದೆ: ಜಾಗತಿಕ ಮಟ್ಟದಲ್ಲಿ ಬೆಲೆ ನಿರ್ಧಾರ: ಲಂಡನ್ ಬುಲಿಯನ್ ಮಾರ್ಕೆಟ್ (LBMA) ಭಾರತದಲ್ಲಿ ಚಿನ್ನದ ಬೆಲೆ ನಿರ್ಧಾರವಾಗುವ ಮೊದಲು, ಅದರ ಅಡಿಪಾಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿದ್ಧವಾಗುತ್ತದೆ. ಜಗತ್ತಿನಾದ್ಯಂತ ಚಿನ್ನದ ದರವನ್ನು ನಿಯಂತ್ರಿಸುವಲ್ಲಿ ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಷನ್ (LBMA) ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವದ ಪ್ರಮುಖ ಹೂಡಿಕೆ ಬ್ಯಾಂಕುಗಳು ಮತ್ತು…

Read More