Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ಜೆಂಡರ್) ಹಕ್ಕುಗಳ ರಕ್ಷಣೆ ಮತ್ತು ಅವರ ವಿರುದ್ಧದ ತಾರತಮ್ಯ ತಡೆಗೆ ಸಂಬಂಧಿಸಿದ ಮಹತ್ವದ ತಿದ್ದುಪಡಿ ವಿಧೇಯಕಕ್ಕೆ ಬುಧವಾರ ರಾಜ್ಯಸಭೆಯು ಅನುಮೋದನೆ ನೀಡಿದೆ. ಈ ಮೂಲಕ ಮಂಗಳವಾರವಷ್ಟೇ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ವಿಧೇಯಕವು ಈಗ ಸಂಸತ್ತಿನ ಉಭಯ ಸದನಗಳ ಮೊಹರು ಪಡೆದಂತಾಗಿದೆ. ವಿಧೇಯಕದ ಪ್ರಮುಖ ಅಂಶಗಳು: 2019ರ ಮೂಲ ಕಾಯ್ದೆಗೆ ತಿದ್ದುಪಡಿ ತರುವ ಈ ಹೊಸ ವಿಧೇಯಕವು ‘ಲಿಂಗತ್ವ ಅಲ್ಪಸಂಖ್ಯಾತ’ ಎಂಬ ಪದಕ್ಕೆ ನಿಖರವಾದ ವ್ಯಾಖ್ಯಾನವನ್ನು ನೀಡಲು ಬಯಸಿದೆ. ಮುಖ್ಯವಾಗಿ, ಕೇವಲ ಜೈವಿಕ ಕಾರಣಗಳಿಂದ ತಾರತಮ್ಯ ಎದುರಿಸುತ್ತಿರುವವರಿಗೆ ಮಾತ್ರ ಕಾನೂನು ರಕ್ಷಣೆ ನೀಡುವುದು ಮತ್ತು ಈ ವ್ಯಾಪ್ತಿಯಿಂದ ‘ವಿವಿಧ ಲೈಂಗಿಕ ದೃಷ್ಟಿಕೋನ ಹಾಗೂ ಸ್ವಯಂ-ಕಲ್ಪಿತ ಲೈಂಗಿಕ ಗುರುತುಗಳನ್ನು’ (Social Orientations) ಹೊರಗಿಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ, ಈ ಸಮುದಾಯದ ಮೇಲೆ ನಡೆಯುವ ದೌರ್ಜನ್ಯದ ತೀವ್ರತೆಗೆ ಅನುಗುಣವಾಗಿ ಶ್ರೇಣೀಕೃತ ಶಿಕ್ಷೆಯನ್ನು ವಿಧಿಸಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಸಮರ್ಥನೆ: ರಾಜ್ಯಸಭೆಯಲ್ಲಿ ಚರ್ಚೆಗೆ ಉತ್ತರಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ…
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಭಗವಾನ್ ಶ್ರೀ ಮಹಾವೀರ ಜಯಂತಿಯ ಸಾರ್ವತ್ರಿಕ ರಜೆಯನ್ನು ನಿಗದಿಪಡಿಸಿದ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಘೋಷಿಸುವ ಸಾಧ್ಯತೆ ದಟ್ಟವಾಗಿದೆ. ಕ್ಯಾಲೆಂಡರ್ ಪ್ರಕಾರ ಮಾರ್ಚ್ 31, 2026 ರಂದು ನಿಗದಿಯಾಗಿದ್ದ ರಜೆಯನ್ನು ಮಾರ್ಚ್ 30, 2026 ಕ್ಕೆ ಬದಲಾಯಿಸುವಂತೆ ಧಾರ್ಮಿಕ ದತ್ತಿ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬದಲಾವಣೆಗೆ ಕಾರಣವೇನು? ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಬರೆದಿರುವ ಪತ್ರದ ಪ್ರಕಾರ, ಈ ಕೆಳಗಿನ ಕಾರಣಗಳಿಂದಾಗಿ ದಿನಾಂಕ ಬದಲಾವಣೆಗೆ ಶಿಫಾರಸು ಮಾಡಲಾಗಿದೆ: ಜ್ಯೋತಿಷ್ಯ ಶಾಸ್ತ್ರದ ಅನ್ವಯ: ಜ್ಯೋತಿಷ್ಯ ಶಾಸ್ತ್ರ ಹಾಗೂ ಆಗಮ ಪಂಡಿತರ ಅಭಿಪ್ರಾಯದಂತೆ, ಜೈನ ಸಂಪ್ರದಾಯದಲ್ಲಿ ಸೂರ್ಯೋದಯ ಕಾಲದ ತಿಥಿಯನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ. ತಿಥಿಯ ಲೆಕ್ಕಾಚಾರ: ಚೈತ್ರ ಶುಕ್ಲ ತ್ರಯೋದಶಿ ತಿಥಿಯು ಮಾರ್ಚ್ 30ರ ಬೆಳಿಗ್ಗೆಯೇ ಪ್ರಾರಂಭವಾಗುತ್ತದೆ. ಜೈನ ಧರ್ಮದ ಪದ್ಧತಿಯಂತೆ ಅಂದು ಮಹಾವೀರ ಜಯಂತಿಯನ್ನು ಆಚರಿಸುವುದು ಹೆಚ್ಚು ಸೂಕ್ತ ಎಂದು ಪಂಡಿತರು ತಿಳಿಸಿದ್ದಾರೆ. ಸಮುದಾಯದ ಮನವಿ: ಜೈನ ಸಮುದಾಯದ ಮುಖಂಡರು ಹಾಗೂ ಜ್ಯೋತಿಷಿಗಳು ತಮ್ಮ…
ನವದೆಹಲಿ: ನೀವು ಹೋಟೆಲ್ಗೆ ಹೋದಾಗ ಆಹಾರದ ಬೆಲೆಯ ಜೊತೆಗೆ ‘ಗ್ಯಾಸ್ ಸರ್ಚಾರ್ಜ್’ (Gas Surcharge) ಅಥವಾ ‘ಇಂಧನ ರಿಕವರಿ ಶುಲ್ಕ’ (Fuel Recovery Charge) ಎಂಬ ಹೆಸರಿನಲ್ಲಿ ಹೆಚ್ಚುವರಿ ಹಣವನ್ನು ಬಿಲ್ನಲ್ಲಿ ಸೇರಿಸಲಾಗುತ್ತಿದೆಯೇ? ಹಾಗಿದ್ದರೆ ಎಚ್ಚರ! ಇಂತಹ ಯಾವುದೇ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುವುದು ಈಗ ಶಿಕ್ಷಾರ್ಹ ಅಪರಾಧವಾಗಿದೆ. ಸಿಸಿಪಿಎ (CCPA) ಸ್ಪಷ್ಟನೆ ಏನು? ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಟನೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದೆ: ಆಹಾರದ ಬೆಲೆಯಲ್ಲೇ ಇಂಧನ ವೆಚ್ಚ: ಹೋಟೆಲ್ ಮಾಲೀಕರು ತಾವು ನೀಡುವ ಆಹಾರದ ಬೆಲೆಯಲ್ಲೇ ಇಂಧನ (LPG) ಮತ್ತು ಸೇವೆಯ ವೆಚ್ಚವನ್ನು ಸೇರಿಸಿರಬೇಕು. ಮೆನು ಕಾರ್ಡ್ನಲ್ಲಿರುವ ಬೆಲೆ ಮತ್ತು ಅನ್ವಯವಾಗುವ ಸರ್ಕಾರಿ ತೆರಿಗೆಗಳನ್ನು (GST) ಹೊರತುಪಡಿಸಿ ಬೇರೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಹೊಸ ಹೆಸರಿನಲ್ಲಿ ವಸೂಲಿ ತಪ್ಪು: ಈ ಹಿಂದೆ ಜಾರಿಯಲ್ಲಿದ್ದ ‘ಸೇವಾ ಶುಲ್ಕ’ (Service Charge) ನಿಯಮವನ್ನು ತಪ್ಪಿಸಲು ಈಗ ಹೋಟೆಲ್ಗಳು ‘ಗ್ಯಾಸ್ ಚಾರ್ಜ್’ ಎಂಬ ಹೊಸ ಹೆಸರಿನಲ್ಲಿ ಹಣ…
ಬೆಂಗಳೂರು: ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾದ ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಅತ್ಯಂತ ನಿಷ್ಪಕ್ಷಪಾತವಾಗಿ ಮತ್ತು ಎಚ್ಚರಿಕೆಯಿಂದ ನಿರ್ವಹಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸನ್ನದ್ಧವಾಗಿದೆ. ಏಪ್ರಿಲ್ 5, 2026 ರಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದ್ದು, ಈ ಸಂಬಂಧ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಪಾಲಿಸಬೇಕಾದ ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಮೌಲ್ಯಮಾಪನ ವೇಳಾಪಟ್ಟಿ ಮೌಲ್ಯಮಾಪನ ಕಾರ್ಯವು ವ್ಯವಸ್ಥಿತವಾಗಿ ನಡೆಯಲು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕೆಳಗಿನ ದಿನಾಂಕಗಳಂದು ಹಾಜರಿರಲು ಸೂಚಿಸಲಾಗಿದೆ: ಏಪ್ರಿಲ್ 3: ಕೇಂದ್ರದ ವ್ಯವಸ್ಥಾಪಕರು ಹಾಜರಾಗುವುದು. ಏಪ್ರಿಲ್ 4: ಜಂಟಿ ಮುಖ್ಯ ಮೌಲ್ಯಮಾಪಕರು ವೀಡಿಯೋ ಸಂವಾದದಲ್ಲಿ ಪಾಲ್ಗೊಳ್ಳುವುದು. ಏಪ್ರಿಲ್ 5: ಜಂಟಿ ಮುಖ್ಯ ಮತ್ತು ಉಪ ಮುಖ್ಯ ಮೌಲ್ಯಮಾಪಕರು ಹಾಜರಾಗುವುದು. ಏಪ್ರಿಲ್ 6: ಸಹಾಯಕ ಮೌಲ್ಯಮಾಪಕರು ಕೇಂದ್ರಕ್ಕೆ ಹಾಜರಾಗಿ ಕಾರ್ಯ ಆರಂಭಿಸುವುದು. ಕೇಂದ್ರದ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಮೌಲ್ಯಮಾಪನ ಕೇಂದ್ರಗಳ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕೇಂದ್ರದ ಸುತ್ತಲಿನ…
ಬೆಂಗಳೂರು: ಗಣಕೀಕೃತ ಪಹಣಿಗಳಲ್ಲಿ ಕಂಡುಬರುವ ತಾಂತ್ರಿಕ ಹಾಗೂ ದಾಖಲಾತಿ ಲೋಪದೋಷಗಳನ್ನು ಸರಿಪಡಿಸಲು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಕಂದಾಯ ಅದಾಲತ್’ ಆಂದೋಲನವು ಈಗ ಹೊಸ ಚೈತನ್ಯ ಪಡೆದಿದೆ. ಈ ಹಿಂದೆ ಸಹಾಯಕ ಆಯುಕ್ತರಿಗೆ (AC) ಮಾತ್ರ ಇದ್ದ ಪಹಣಿ ತಿದ್ದುಪಡಿ ಅಧಿಕಾರವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಈಗ ತಹಶೀಲ್ದಾರರಿಗೆ ಪ್ರತ್ಯಾಯೋಜಿಸಲಾಗಿದೆ. ಅಧಿಕಾರ ವಿಸ್ತರಣೆಯ ಅವಧಿ ಸರ್ಕಾರದ ಇತ್ತೀಚಿನ ಆದೇಶದಂತೆ (ಸಂಖ್ಯೆ: ಕಂಇ 45 ಎಂಆರ್ ಆರ್ 2025), ಈ ವಿಶೇಷ ಅಧಿಕಾರವನ್ನು ದಿನಾಂಕ: 20-03-2026 ರಿಂದ 31-12-2026 ರವರೆಗೆ ವಿಸ್ತರಿಸಲಾಗಿದೆ. ಯಾವ ಜಿಲ್ಲೆಗಳಿಗೆ ಅನ್ವಯಿಸುವುದಿಲ್ಲ? ಆಡಳಿತಾತ್ಮಕ ಕಾರಣಗಳಿಂದಾಗಿ ಈ ಕೆಳಗಿನ ಮೂರು ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ ಈ ಸೇವೆ ಲಭ್ಯವಿರುತ್ತದೆ: ದಕ್ಷಿಣ ಕನ್ನಡ ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ ಯಾವೆಲ್ಲಾ ತಿದ್ದುಪಡಿಗಳನ್ನು ತಹಶೀಲ್ದಾರರು ಮಾಡಬಹುದು? ಕಂದಾಯ ಅದಾಲತ್ ಅಡಿಯಲ್ಲಿ ಈ ಕೆಳಗಿನ ಪ್ರಮುಖ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಅವಕಾಶ ನೀಡಲಾಗಿದೆ: ವಿಸ್ತೀರ್ಣ ಹೊಂದಾಣಿಕೆ: ಆಕಾರ್ಬಂದ್ ಮತ್ತು ಪಹಣಿ ಕಲಂ-3 ರಲ್ಲಿರುವ ವಿಸ್ತೀರ್ಣ ವ್ಯತ್ಯಾಸಗಳ ತಿದ್ದುಪಡಿ.…
ಬೆಂಗಳೂರು: ನಗರದಲ್ಲಿ ನಡೆಯುವಂತ ಐಪಿಎಲ್ ಪಂದ್ಯಾವಳಿ ವೀಕ್ಷಣೆಗೆ ತೆರಳುವಂತ ಅಭಿಮಾನಿಗಳಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ನೀಡಿದೆ. ಅದೇ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ಐಪಿಎಲ್ ಪಂದ್ಯಾವಳಿಗಳಂದು ವಿಸ್ತರಣೆ ಮಾಡಲಾಗಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ದಿನಾಂಕ 28ನೇ ಮಾರ್ಚ್ 2026ರಂದು ಬೆಂಗಳೂರಿನಲ್ಲಿ ನಡೆಯಲಿರುವ ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯದ ಪ್ರಯುಕ್ತ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್ಸಿಎಲ್) ಪ್ರಯಾಣಿಕರಿಗೆ ಸುಲಭ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಮೆಟ್ರೋ ರೈಲು ಸೇವಾಅವದಿಯನ್ನು ವಿಸ್ತರಿಸಿದೆ ಎಂದಿದೆ. ಪಂದ್ಯದ ದಿನದಂದು, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11:00 ಗಂಟೆಯಿಂದ ಮುಂದಿನ ದಿನದ ಮುಂಜಾನೆ 2:00 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ. ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು ಕೆಳಗಿನ ವೇಳಾಪಟ್ಟಿಯಂತೆ ಹೊರಡಲಿವೆ: ವೈಟ್ಫೀಲ್ಡ್ (ಕಾಡುಗೋಡಿ) ಯಿಂದ ರಾತ್ರಿ 12.30ಕ್ಕೆ ಮತ್ತು ಚೆಲ್ಲಘಟ್ಟ ದಿಂದ ರಾತ್ರಿ 12.45ಕ್ಕೆ. ರೇಷ್ಮೆ ಸಂಸ್ಥೆ ಹಾಗೂ ಮಾದಾವರ ದಿಂದ ರಾತ್ರಿ…
ನವದೆಹಲಿ: ರಾಜ್ಯದ ಪ್ರಾದೇಶಿಕ ರೈಲು ಸಂಪರ್ಕಕ್ಕೆ ಮಹತ್ವದ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿದ್ದು, ಮೈಸೂರು-ಕೆಎಸ್ಆರ್ ಬೆಂಗಳೂರು ನಡುವೆ ನಿತ್ಯವು ಸಂಚರಿಸಲಿರುವ ಒಡೆಯರ್ ಎಕ್ಸ್ಪ್ರೆಸ್ ರೇಲು ರಾಮನಗರದಲ್ಲಿ ನಿಲುಗಡೆಗೆ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಕೇಂದ್ರದ ರೇಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರಿಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಮನವಿ ಫಲಪ್ರಧವಾಗಿದೆ. ಮಾರ್ಚ್ 24, 2026 (ಮಂಗಳವಾರ) ರಂದು ರೈಲ್ವೆ ಸಚಿವಲಾಯ ಈ ಬಗ್ಗೆ ಆದೇಶ ಹೊರಡಿಸಿದೆ. ಈ ಮೂಲಕ ರಾಮನಗರದಿಂದ ನಿತ್ಯವೂ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಆಗಲಿದೆ. ಈ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 4, 2026ರಂದು ಹೆಚ್.ಡಿ. ಕುಮಾರಸ್ವಾಮಿ ಅವರು ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಪ್ರತಿನಿತ್ಯವೂ ರಾಮನಗರದಿಂದ ಸಾವಿರಾರು ಪ್ರಯಾಣಿಕರು ಬೆಂಗಳೂರಿಗೆ ಉದ್ಯೋಗ, ಶಿಕ್ಷಣ, ವ್ಯಾಪರ ಇತ್ಯಾದಿ ಉದ್ದೇಶಗಳಿಗೆ ಹೋಗಿ ಬರುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಗಾರ್ಮೆಟ್ ಉದ್ಯಮದಲ್ಲಿ ಸಾವಿರಾರು…
ಶಿವಮೊಗ್ಗ: ಐಪಿಎಲ್ ಹಬ್ಬದ ಅಬ್ಬರ ಶುರುವಾಗುತ್ತಿದ್ದಂತೆ ಕ್ರಿಕೆಟ್ ಲೋಕದ ಕ್ರೇಜಿ ಅಭಿಮಾನಿಗಳಾದ ಆರ್ಸಿಬಿ (RCB) ಫ್ಯಾನ್ಸ್ಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಭರ್ಜರಿ ‘ಗುಡ್ ನ್ಯೂಸ್’ ನೀಡಿದ್ದಾರೆ. ಮೈದಾನಕ್ಕೆ ಹೋಗಿ ಪಂದ್ಯ ನೋಡಲಾಗದ ಅಭಿಮಾನಿಗಳಿಗಾಗಿ ಸಾಗರದಲ್ಲೇ ಸ್ಟೇಡಿಯಂ ಫೀಲ್ ತರಲು ಶಾಸಕರು ಸಜ್ಜಾಗಿದ್ದಾರೆ. ಮಾರ್ಚ್ 28ರಿಂದ ಆರಂಭವಾಗಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರತಿ ಪಂದ್ಯವನ್ನು ವೀಕ್ಷಿಸಲು ಸಾಗರದ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಬೃಹತ್ ಎಲ್ಇಡಿ (LED) ಪರದೆಯ ವ್ಯವಸ್ಥೆ ಮಾಡಲಾಗುತ್ತಿದೆ. ಗಾಂಧಿ ಮೈದಾನವೇ ಈಗ ‘ಚಿನ್ನಸ್ವಾಮಿ ಸ್ಟೇಡಿಯಂ’! ಆರ್ಸಿಬಿ ಪಂದ್ಯವೆಂದರೆ ಸಾಕು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಈ ಬಾರಿ ಸಾಗರದ ಅಭಿಮಾನಿಗಳು ಮನೆಯ ಟಿವಿ ಪರದೆಗೆ ಅಂಟಿಕೊಳ್ಳುವ ಬದಲು, ನೂರಾರು ಜನರ ಜೊತೆಗೂಡಿ ಸಂಭ್ರಮಿಸಲು ಶಾಸಕರು ವೇದಿಕೆ ಸಜ್ಜುಗೊಳಿಸಿದ್ದಾರೆ. ಮಾರ್ಚ್ 28ರ ಮೊದಲ ಪಂದ್ಯದಿಂದಲೇ ಈ ಬೃಹತ್ ಪರದೆಯ ಸೌಲಭ್ಯ ಲಭ್ಯವಿರಲಿದ್ದು, ಅಭಿಮಾನಿಗಳು ಸಾಮೂಹಿಕವಾಗಿ ಪಂದ್ಯ ವೀಕ್ಷಿಸಿ ‘ಈ ಸಲ ಕಪ್ ನಮ್ದೇ’ ಎಂದು ಜೈಕಾರ…
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಸಾಗರ ನಗರದ ಜೀವನಾಡಿ ಬಿ.ಎಚ್. ರಸ್ತೆ ಇಂದು ಅಭಿವೃದ್ಧಿಯ ಹೆಸರಿನಲ್ಲಿ ಅಧ್ವಾನದ ಹಾದಿಯಾಗಿದೆ. ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿಯು, ಅವೈಜ್ಞಾನಿಕ ಮತ್ತು ವಿಳಂಬ ಧೋರಣೆಯಿಂದಾಗಿ ಸಾರ್ವಜನಿಕರ ಪಾಲಿಗೆ ನರಕದರ್ಶನ ಮಾಡಿಸುತ್ತಿದೆ. ಐದು ವರ್ಷಗಳ ದೀರ್ಘ ಕಾಯುವಿಕೆಯ ನಂತರವೂ ರಸ್ತೆ ಸುಗಮವಾಗುವ ಬದಲು ಸರಣಿ ಅಪಘಾತಗಳ ತಾಣವಾಗಿ ಮಾರ್ಪಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಸ್ಥಳ ಪರಿಶೀಲನೆಗೆ ಬಂದಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕಂಡ ಸಾರ್ವಜನಿಕರು ಮತ್ತು ರೈತ ಮುಖಂಡರು ತಮ್ಮ ಐದು ವರ್ಷಗಳ ನೋವನ್ನು ಪ್ರತಿಭಟನೆಯ ರೂಪದಲ್ಲಿ ಹೊರಹಾಕಿದರು. ಒಂದು ವರ್ಷದ ಕೆಲಸಕ್ಕೆ ಐದು ವರ್ಷ! – ಸಾರ್ವಜನಿಕರ ಆಕ್ರೋಶ “ಒಂದು ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿಯನ್ನು ಐದು ವರ್ಷಗಳ ಕಾಲ ಎಳೆಯಲಾಗಿದೆ. ಇದು ಅಭಿವೃದ್ಧಿಯೋ ಅಥವಾ ಸಾರ್ವಜನಿಕರಿಗೆ ನೀಡುತ್ತಿರುವ ಶಿಕ್ಷೆಯೋ?” ಎಂದು ಮಲೆನಾಡು ರೈತ ಹೋರಾಟ ವೇದಿಕೆಯ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿದರು. ರಸ್ತೆ ಅಗಲೀಕರಣದಲ್ಲಿ ಅನುಸರಿಸಲಾಗಿರುವ ‘ದಂಧೆ’ ಮತ್ತು ‘ತಾರತಮ್ಯ’ದ ಬಗ್ಗೆ…
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಚುನಾವಣಾ ಅಧಿಕಾರಿಗಳು, ಜಿಲ್ಲೆಯ ವಿವಿಧ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆಸಿ ದಾಖಲೆಯಿಲ್ಲದ ಒಟ್ಟು 6.17 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ. ಮೂರು ಪ್ರತ್ಯೇಕ ಕಡೆಗಳಲ್ಲಿ ನಡೆದ ಈ ಕಾರ್ಯಾಚರಣೆಯ ವಿವರಗಳು ಹೀಗಿವೆ: ಭೂಮಿಕಾ ನಗರ ಚೆಕ್ಪೋಸ್ಟ್: ದಾವಣಗೆರೆ ನಗರದ ಭೂಮಿಕಾ ನಗರದ ಬಳಿ ಇರುವ ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ, ಜಯನಗರದ ನಿವಾಸಿ ಪವನಕುಮಾರ್ ಎಂಬುವವರ ಬಳಿ ದಾಖಲೆಯಿಲ್ಲದ 4 ಲಕ್ಷ ರೂಪಾಯಿ ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ಕಾರಿಗನೂರು ಕ್ರಾಸ್: ಕಾರಿಗನೂರು ಕ್ರಾಸ್ ಚೆಕ್ಪೋಸ್ಟ್ನಲ್ಲಿ ಪ್ರಕಾಶ್ ಮರುಳಸಿದ್ದ ಎಂಬುವವರು ಸಾಗಿಸುತ್ತಿದ್ದ 1.15 ಲಕ್ಷ ರೂಪಾಯಿ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಾಗನಹಳ್ಳಿ ಚೆಕ್ಪೋಸ್ಟ್: ಮಾಗನಹಳ್ಳಿ ಚೆಕ್ಪೋಸ್ಟ್ನಲ್ಲಿ ತಪಾಸಣೆ ವೇಳೆ ಚಿತ್ತನಹಳ್ಳಿ ಮೂಲದ ವ್ಯಕ್ತಿಯೊಬ್ಬರಿಂದ 1.12 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚುನಾವಣಾ ಅಕ್ರಮಗಳನ್ನು ತಡೆಯಲು ಸ್ಥಾಪಿಸಲಾಗಿರುವ ಈ ಚೆಕ್ಪೋಸ್ಟ್ಗಳಲ್ಲಿ…














