Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಅಕ್ರಮ ಬೆಟ್ಟಿಂಗ್ ವೇದಿಕೆ 1xBet ನ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಭಾರತದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರಿಗೆ ಸೇರಿದ ₹11.14 ಕೋಟಿ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಅಧಿಕೃತ ಮೂಲಗಳ ಪ್ರಕಾರ, ಧವನ್ ಒಡೆತನದ ₹4.5 ಕೋಟಿ ಮೌಲ್ಯದ ಸ್ಥಿರ ಆಸ್ತಿ ಮತ್ತು ರೈನಾ ಹೊಂದಿದ್ದ ₹6.64 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್ ಹೂಡಿಕೆಗಳು ಲಗ್ಗೆ ಇಟ್ಟಿವೆ. ಹಣ ವರ್ಗಾವಣೆ ತಡೆ ಕಾಯ್ದೆ (PMLA) ಯ ನಿಬಂಧನೆಗಳ ಅಡಿಯಲ್ಲಿ ಸಂಸ್ಥೆ ಲಗ್ಗೆ ಇಟ್ಟ ಆದೇಶವನ್ನು ಹೊರಡಿಸಿದೆ. 1xBet ಮತ್ತು ಅದರ ಸಂಯೋಜಿತ ಬ್ರ್ಯಾಂಡ್ಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧ ಹೊಂದಿರುವ ವಿದೇಶಿ ಸಂಸ್ಥೆಗಳೊಂದಿಗೆ ಇಬ್ಬರೂ ಆಟಗಾರರು ಉದ್ದೇಶಪೂರ್ವಕವಾಗಿ ಅನುಮೋದನೆ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಈ ಪ್ರಚಾರ ಒಪ್ಪಂದಗಳು ಭಾರತೀಯ ಬಳಕೆದಾರರಲ್ಲಿ ಅಕ್ರಮ ಬೆಟ್ಟಿಂಗ್ ವೇದಿಕೆಯ ವಿಸ್ತರಣೆಗೆ ಕಾರಣವಾಗಿರಬಹುದು ಎಂದು ED ಯ…
ಶಿವಮೊಗ್ಗ: ಬೆಳೆಗಾವಿ ಜಿಲ್ಲೆಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನಿಗದಿಗಾಗಿ ಹೋರಾಡುತ್ತಿದೆ. ಇಂದಿಗೆ 7ನೇ ದಿನಕ್ಕೆ ಹೋರಾಟ ಕಾಲಿಟ್ಟಿದೆ. ನಾಳೆ ಕಬ್ಬಿಗೆ ಬೆಲೆ ನಿಗದಿಗೆ ಆಗ್ರಹಿಸಿ ಕರ್ನಾಟಕ ರೈತ ಸಂಘವು ಎಲ್ಲಾ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದೆ. ರೈತರ ಹೋರಾಟಕ್ಕೆ ಪೂರಕವಾಗಿ ಸಾಗರ ಮತ್ತು ಶಿಕಾರಿಪುರದಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಲಾಗಿದೆ ಎಂಬುದಾಗಿ ರೈತ ಮುಖಂಡ ದಿನೇಶ್ ಶಿರವಾಳ ತಿಳಿಸಿದ್ದಾರೆ. ಇಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ನಾಳೆ ಬೆಳಗಾವಿಯಲ್ಲಿ ಕಬ್ಬಿಗೆ ಬೆಲೆ ನಿಗದಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಬೆಂಬಲಿಸಿ ನಾಳೆ ಸಾಗರದ ವರದಳ್ಳಿ ಕ್ರಾಸ್ ಬಳಿಯಲ್ಲಿ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ, ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವಂತ ಹೋರಾಟಕ್ಕೆ ಬೆಂಬಲ ಸೂಚಿಸಲಾಗುತ್ತಿದೆ. ಕಬ್ಬು ಬೆಳೆಗಾರರಿಗೆ ಬೆಲೆ ನಿಗದಿ ಪಡಿಸುವುದಕ್ಕೂ ಈ ಮೂಲಕ ಆಗ್ರಹಿಸಲಾಗುತ್ತದೆ ಎಂಬುದಾಗಿ ತಿಳಿಸಿದರು. ನಾಳೆ ರೈತರು, ರೈತ ಸಂಘಟನೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು. ಇದು ಕರ್ನಾಟಕದ ಎಲ್ಲಾ…
ಶಿವಮೊಗ್ಗ: ರಾಜ್ಯದಲ್ಲಿ ಆ ಗ್ಯಾಂಗ್ ತುಂಬಾನೇ ಆ್ಯಕ್ಟೀವ್ ಆಗಿದೆ ಎನ್ನಲಾಗುತ್ತಿದೆ. ಅಲ್ಲಲ್ಲಿ ಕ್ರೈ ಕೇಸ್ ದಾಖಲಾಗುತ್ತಿದ್ದಂತೇ ಪೊಲೀಸರು ಅಷ್ಟೇ ತ್ವರಿತವಾಗಿ ಆರೋಪಿಗಳ ಪತ್ತೆಯ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆಯೂ ಆ ಗ್ಯಾಂಗ್ ಕೃತ್ಯವೆಸಗುವುದು ನಿಂತಿಲ್ಲ. ಸೋ ಸಾರ್ವಜನಿಕರು ಆ ಗ್ಯಾಂಗ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮೈಮರೆತ್ರೆ ಆಭರಣಗಳನ್ನು ಕದ್ದೊಯ್ಯುತ್ತಾರೆ ಎಂಬುದಾಗಿ ಸಾರ್ವಜನಿಕರಿಗೆ ಎಎಸ್ಪಿ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದ್ರೇ ಆ ಗ್ಯಾಂಗ್ ಯಾವುದು? ಏನೆಲ್ಲಾ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರದ ಸಾಗರ ಪೇಟೆ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಮಾಹಿತಿಯನ್ನು ಸಹಾಯಕ ಪೊಲೀಸ್ ಅಧೀಕ್ಷಕರಾದಂತ ಡಾ.ಬೆನಕ ಪ್ರಸಾದ್ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವಂತ ಗ್ಯಾಂಗ್ ಅಂದ್ರೆ ಅದು ‘ಇರಾನಿ ಗ್ಯಾಂಗ್’ ಎಂಬುದಾಗಿ ಮಾಹಿತಿ ನೀಡಿದ್ದಾರೆ. ಈ ಇರಾನಿ ಗ್ಯಾಂಗ್ ಅಪರಾಧ ಕೃತ್ಯಗಳನ್ನು ಎಸಗುತ್ತಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದರು. ಇರಾನಿ ಗ್ಯಾಂಗ್ ಸಾರ್ವಜನಿಕರನ್ನು ಪೊಲೀಸರೆಂದು ನಂಬಿಸುತ್ತದೆ. ಮೈತುಂಬಾ ಒಡವೆ ಹಾಕಿಕೊಂಡು…
ತುಮಕೂರು: ರಾಜ್ಯದ ಕುರಿ ಹಾಗೂ ಮೇಕೆ ಸಾಕಾಣಿಕೆದಾರರಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಅದೇ ಕುರಿ, ಮೇಕೆ ಮಾಂಸ ಸಂಸ್ಕರಣೆ ಮಾಡುವ ಆಧುನಿಕ ವಧಾಗಾರವನ್ನು ಈ ತಿಂಗಳ ಅಂತ್ಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚೀಲನಹಳ್ಳಿಯಲ್ಲಿ 20 ಎಕರೆ ಜಮೀನಿನಲ್ಲಿ 45 ಕೋಟಿ ರೂ ವೆಚ್ಚದಲ್ಲಿ ಕುರಿ ಹಾಗೂ ಮೇಕೆ ಮಾಂಸ ಸಂಸ್ಕರಣೆ ಆಧುನಿಕ ವಧಾಗಾರವನ್ನು ನಿರ್ಮಾಣ ಮಾಡಲಾಗಿದೆ. ನವೆಂಬರ್ ತಿಂಗಳ ಅಂತ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಧುನಿಕ ವಧಾಗಾರ ಉದ್ಘಾಟನೆ ಮಾಡಲಿದ್ದಾರೆ. ಆಧುನಿಕ ವಧಾಗಾರ ಉದ್ಘಾಟನೆಗೆ ಸಂಬಂಧಿಸಿದಂತೆ ವಿಕಾಸ ಸೌಧದಲ್ಲಿ ಪಶುಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವ ವೆಂಕಟೇಶ್ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರ ನೇತ್ರತ್ವದಲ್ಲಿ ಸಭೆ ನಡೆಯಿತು. ಈ. ಸಭೆಯಲ್ಲಿಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಪಶು ಸಂಗೋಪನೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಸೇರಿದಂತೆ ಇದಕ್ಕೆ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ…
BIG NEWS: ಕುಡಿದು ಬರುತ್ತಿದ್ದ ಡ್ರೈವರ್ಗಳಿಗೆ ಲಂಚ ಪಡೆದು ಡ್ಯೂಟಿ: BMTC ಡಿಪೋ ಮ್ಯಾನೇಜರ್ ಸೇರಿ 9 ಮಂದಿ ಸಸ್ಪೆಂಡ್
ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವುದು ಅಪರಾಧವಾಗಿದೆ. ಹೀಗಿದ್ದರೂ ಬೆಂಗಳೂರಲ್ಲಿ ಡಿಪೋ ಮ್ಯಾನೇರಜ್ ಒಬ್ಬ ಚಾಲಕರು ಕುಡಿದು ಬಂದರೂ ಲಂಚ ಪಡೆದು ಡ್ಯೂಟಿ ನೀಡಿದಂತ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಬಿಎಂಟಿಸಿ ಡಿಪೋ ಮ್ಯಾನೇಜರ್ ಸಹಿತ 9 ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಹೌದು. ಕುಡಿದು ಬರುತ್ತಿದ್ದಂತ ಎಲೆಕ್ಟ್ರಿಕ್ ಬಸ್ ಡ್ರೈವರ್ ಗಳ ಬಳಿಯಲ್ಲಿ ಲಂಚ ಪಡೆದು ಡ್ಯೂಟಿ ನೀಡಿದ್ದ ಕಾರಣದಿಂದಾಗಿ ಬಿಎಂಟಿಸಿ ಘಟಕ ವ್ಯವಸ್ಥಾಪಕ ಎಂ.ಜಿ ಕೃಷ್ಣ, ಸಹಾಯಕ ಲೆಕ್ಕಿಗ ಅರುಣ್ ಕುಮಾರ್ ಇ.ಎಸ್, ಕಿರಿಯ ಸಹಾಯಕಿ ಪ್ರತಿಭಾ.ಕೆಎಸ್, ಕರ್ನಾಟಕ ರಾಜ್ಯ ಸಾರಿಗೆ ಹವಾಲ್ದಾರ್ ಮಂಜುನಾಥ.ಎಂ, ಪೇದೆ ಮಂಜುನಾಥ ಎಸ್.ಜಿ, ಚೇತನ್ ಕುಮಾರ್, ಪುನೀತ್ ಕುಮಾರ್, ಲಕ್ಷ್ಮೀ.ಕೆ ಸೇರಿದಂತೆ 9 ಮಂದಿಯನ್ನು ಅಮಾನತುಗೊಳಿಸಲಾಗಿದೆ. ಅಂದಹಾಗೇ ಬಿಎಂಟಿಸಿ ಚಾಲಕರು ಕುಡಿದು ಡ್ರೈವಿಂಗ್ ಮಾಡುತ್ತಿರುವಂತ ವೀಡಿಯೋ ವೈರಲ್ ಆಗಿತ್ತು. ಇಂತವರಿಗೆ ಲಂಚ ಪಡೆದು ಅಧಿಕಾರಿಗಳು ಡ್ಯೂಟಿ ನೀಡಿದ್ದಾಗಿ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಡಿಪೋ ಮ್ಯಾನೇಜರ್, ಚಾಲಕರು ಸೇರಿದಂತೆ 9…
ಬಿಹಾರ: ರಾಜ್ಯದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಇಂದು ಮತದಾನದ ದಿನದಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಅವರ ಬೆಂಗಾವಲು ಪಡೆಯ ಮೇಲೆ ದಾಳಿ ಮಾಡಲಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದಂತೆ, ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರ ಬೆಂಗಾವಲು ಪಡೆಯ ಮೇಲೆ ಲಖಿಸರೈನಲ್ಲಿ ದಾಳಿ ನಡೆಸಲಾಯಿತು. ಪ್ರತಿಭಟನಾಕಾರರು ಬಿಜೆಪಿ ನಾಯಕನ ಬೆಂಗಾವಲು ಪಡೆಯ ಮೇಲೆ ಕಲ್ಲು ತೂರಾಟ ನಡೆಸಿ “ಮುರ್ದಾಬಾದ್” ಘೋಷಣೆಗಳನ್ನು ಕೂಗಿರುವಂತ ಘಟನೆ ನಡೆದಿದೆ. https://kannadanewsnow.com/kannada/transport-minister-ramalinga-reddys-sudden-visit-to-kempegowda-bus-station-in-bengaluru/
ಕುಬೇರ ಮಂತ್ರ ಮಹಾಲಕ್ಷ್ಮೀ ಶುಕ್ರವಾರದಂದು ಮನೆಯಲ್ಲಿ ಹೇಗೆ ಪೂಜೆ ಮಾಡುತ್ತೇವೆಯೋ ಹಾಗೆಯೇ ಪೂಜಾ ಕೊಠಡಿಯನ್ನು ಅಲಂಕರಿಸಿ ದೀಪ ಬೆಳಗಿಸಿ, ಸಿಹಿ ಪಾಲಕಾರವನ್ನು ನೆಯ್ವೇದಿಯಾಗಿಟ್ಟುಕೊಂಡು ಮನೆಯವರೆಲ್ಲರೂ ಪೂಜಾ ಕೊಠಡಿಯ ಮುಂದೆ ಕುಳಿತು ಕುಬೇರ, ಮಹಾಲಕ್ಷ್ಮಿ, ಶಕ್ತಿ ದೇವಿಯನ್ನು ಪ್ರಾರ್ಥಿಸಬೇಕು. ಮತ್ತು ಭಗವಾನ್ ಶಿವ. ಯಾವುದೇ ಪೂಜೆಯಲ್ಲಿ ಕುಲದೇವತೆಯ ಹೆಸರನ್ನು ಹೇಳಲು ಮರೆಯಬೇಡಿ. ನಿಮ್ಮ ಪೂಜೆಯನ್ನು ಹೀಗೆ ಮಾಡಲು ಪ್ರಾರಂಭಿಸಿ. ಧೂಪದೀಪ, ಕರ್ಪೂರದ ಆರತಿ ಮುಂತಾದ ಎಲ್ಲಾ ವಿಧಿವಿಧಾನಗಳನ್ನು ಮುಗಿಸಿ, ಎಲ್ಲರೂ ಸ್ವಲ್ಪ ಹೊತ್ತು ಪೂಜಾ ಕೋಣೆಯಲ್ಲಿ ಕುಳಿತು ಕುಟುಂಬದ ಏಳಿಗೆಗಾಗಿ ಮೌನವಾಗಿ ಪ್ರಾರ್ಥಿಸುತ್ತಾರೆ. ಮನೆಯ ಯಜಮಾನ ಸಾಮಿಗೆ ನಮಸ್ಕರಿಸಿದರೆ ಹತ್ತಲ್ಲ. ಕುಟುಂಬದವರೆಲ್ಲರೂ ಪೂಜಾ ಕೋಣೆಯಲ್ಲಿ ಒಟ್ಟಿಗೆ ಕುಳಿತು ಕುಟುಂಬಕ್ಕಾಗಿ ಪ್ರಾರ್ಥಿಸುವುದು ತುಂಬಾ ಪ್ರಯೋಜನಕಾರಿ. ಒಮ್ಮೆ ಹೀಗೆ ಪೂಜೆ ಮಾಡಿ ನೋಡಿ. ಲಾಭ ದ್ವಿಗುಣವಾಗಲಿದೆ. ತೃಪ್ತಿ ತುಂಬಾ ಇರುತ್ತದೆ. ಪೂಜಾ ಕೋಣೆಯಲ್ಲಿ ಸ್ವಲ್ಪ ಕಾಣಿಕೆ ಇಡಲು ಮರೆಯಬೇಡಿ. ಪೂಜೆಯನ್ನು ಮುಗಿಸಿದ ನಂತರ ಸುಲಭವಾಗಿ ಹೇಳಬಹುದಾದ ಈ ಕುಬೇರ ಮಂತ್ರವನ್ನು ಪಠಿಸಿ. ವಿದ್ವಾನ್ ವಿದ್ಯಾಧರ್ ತಂತ್ರಿ 9686268564 ಶ್ರೀ ಧನಲಕ್ಷ್ಮೀ ಪೂಜೆಗೆ…
ಶಿವಮೊಗ್ಗ: ಸಾಗರ ನಗರಸಭೆ ಪೌರಾಯುಕ್ತರಾಗಿದ್ದಂತ ಹೆಚ್.ಕೆ ನಾಗಪ್ಪ ಅವರು ಅಶ್ಲೀಲ ಪದಗಳಿಂದ ನಿಂದನೆ ಮಾಡಲಾಗಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರ ಪೇಟೆ ಠಾಣೆಗೆ ಮಹದೇವಪ್ಪ.ಎಸ್ ಎಂಬುವರು ದೂರು ನೀಡಿದ್ದಾರೆ. ಈ ಸಂಬಂಧ ದಿನಾಂಕ 05-11-2025ರಂದು ಸಾಗರ ಪೇಟೆ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರಿಗೆ ಮಹಾದೇವಪ್ಪ.ಎಸ್ ಎಂಬುವರು ದೂರು ನೀಡಿದ್ದಾರೆ. ದೂರಿನಲ್ಲಿ ಹೆಚ್.ಕೆ ನಾಗಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಹಾದೇವಪ್ಪ ನೀಡಿದ ದೂರಿನಲ್ಲಿ ಏನಿದೆ? ದಿನಾಂಕ 31-10-2025ರ ಶುಕ್ರವಾರದಂದು ರಾತ್ರಿ 9 ಗಂಟೆಯ ಸುಮಾರಿಗೆ ಸಾಗರ ಪೇಟೆಯಿಂದ ನಾನು ಮನೆಯ ಕಡೆಗೆ ಹೋಗುತ್ತಿದ್ದೆ. ಆ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಜನಗಳ ಗುಂಪು ಕಂಡು ನಾನು ಅಲ್ಲಿಗೆ ಹೋದ ಸಂದರ್ಭದಲ್ಲಿ ಸಾಗರ ನಗರಸಭೆಯ ಆಯುಕ್ತ ಹೆಚ್.ಕೆ ನಾಗಪ್ಪ ತಮ್ಮ ಸರ್ಕಾರಿ ವಾಹನ ಸಮೇತ ಅಲ್ಲಿಗೆ ಬಂದಿದ್ದು, ಬೀದಿ ಬದಿ ವ್ಯಾಪಾರಿಗಳ ಜೊತೆಗೆ ವಾಗ್ವಾದ ಮಾಡುತ್ತಿದ್ದರು ಎಂದಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರನ್ನು…
ಶಿವಮೊಗ್ಗ: ಬೀದಿ ಬದಿಯ ವ್ಯಾಪಾರಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ನಿಂದಿಸಿದ ವೀಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಸಾಗರ ನಗರಸಭೆ ಪೌರಾಯುಕ್ತರ ಹುದ್ದೆಯಿಂದ ಮುಕ್ತಗೊಳಿಸುವಂತೆ ಡಿಸಿ ಅವರಿಗೆ ಪತ್ರದಲ್ಲಿ ಮನವಿ ಮಾಡಿರುವುದಾಗಿ ಹೇಳಲಾಗುತ್ತಿದೆ. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದಂತ ಹೆಚ್.ಕೆ ನಾಗಪ್ಪ ಅವರು, ನವೆಂಬರ್.31, 2025ರಂದು ಕನ್ನಡ ರಾಜ್ಯೋತ್ಸವದ ಹಿಂದಿನ ದಿನದಂದು ಕೆಳದಿ ರಸ್ತೆಯಲ್ಲಿನ ಕೆಳದಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ನಡೆಸಲು ತಯಾರಿ ನಡೆಸಲಾಗಿತ್ತು. ಈ ವೃತ್ತದಲ್ಲಿ ಸುಮಾರು 14 ಪೆಟ್ಟಿಗೆ ಅಂಗಡಿಗಳಿದ್ದವು. ನವೆಂಬರ್.1, 2025ರ ಕನ್ನಡ ರಾಜ್ಯೋತ್ಸವದಂದು ವಿದ್ಯಾರಣ್ಯ ಜೋತಿಯನ್ನು ಅದ್ಧೂರಿಯಾಗಿ ಸ್ವೀಕರಿಸುವಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದರು. ಸಾಗರದ ಕೆಳದಿ ಚೆನ್ನಮ್ಮ ವೃತ್ತದಲ್ಲಿ ನವೆಂಬರ್.1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದಂತ ಕಾರ್ಯಕ್ರಮಕ್ಕೆ ಅಲ್ಲಿದ್ದಂತ ಗೂಡಂಗಡಿಗಳು ಅಡ್ಡಿಯಾಗುತ್ತಿದ್ದವು. ಅವುಗಳನ್ನು ಒಂದು ದಿನದ ಮಟ್ಟಿಗೆ ತೆರವುಗೊಳಿಸಲು ಎರಡು ದಿನಗಳ ಹಿಂದೆಯೇ ಸೂಚಿಸಲಾಗಿತ್ತು. ಸುಮಾರು 13 ಅಂಗಡಿಗಳು ನಗರಸಭೆಯ ಸೂಚನೆಯ ಮೇರೆಗೆ ತೆರವುಗೊಳಿಸಿದ್ದರು. ಆದರೇ ಒಂದು…
ಶಿವಮೊಗ್ಗ: ಸಾಗರ ಪೇಟೆ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 2 ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ 44 ಗ್ರಾಂ ತೂಕದ ಅಂದಾಯು 4,48,000 ಮೌಲ್ಯದ ಬಂಗಾರದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಂತೂ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳ್ಳತನವಾದಂತ 24 ಗಂಟೆಯಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ ಜೈಲುಪಾಲು ಮಾಡಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸಾಗರ ಪೇಟೆ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಎಎಸ್ಪಿ ಡಾ.ಬೆನಕ ಪ್ರಸಾದ್ ಮಾಹಿತಿ ನೀಡಿದಂತ ಅವರು, ಮನೆಯಲ್ಲಿನ ಒಡವೆ ಕದ್ದ ಬಗ್ಗೆ ಸಾಗರ ಪೇಟೆ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದಂತ ಕಾರಿಯಪ್ಪ, ರಮೇಶ್ ಅವರ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಲಾಗಿತ್ತು ಎಂದರು. ನನ್ನ ಮೇಲ್ವಿಚಾರಣೆಯಲ್ಲಿ ಸಾಗರ ಪೇಟೆ ಠಾಣೆಯ ಪೊಲೀಸ್ ನಿರೀಕ್ಷಕರಾದಂತ ಪುಲ್ಲಯ್ಯ ರಾಥೋಡ್, ಎಎಸ್ಐ ಮೀರಾಬಾಯಿ, ಅಪರಾಧ ವಿಭಾಗದ ಸಿಬ್ಬಂದಿಗಳಾದಂತ ಹೆಚ್ ಸಿ ಸನಾವುಲ್ಲ, ಪಿಸಿ ಲೋಕೇಶ್, ವಿಶ್ವನಾಥ್, ಕೃಷ್ಣಮೂರ್ತಿ ಒಳಗೊಂಡ…














