Subscribe to Updates
Get the latest creative news from FooBar about art, design and business.
Author: kannadanewsnow09
ತುಳಸಿ ವಿವಾಹ ಮತ್ತು ತುಳಸಿ ಪೂಜೆ. ಪುರಾಣ ಕಥೆಗಳ ಪ್ರಕಾರ. ಬೃಂದಾ ಎಂಬ ಹೆಣ್ಣು ಮಗಳು ಕಾಲ ನೇಮಿ ಎಂಬ ರಾಕ್ಷಸನ ಮಗಳು ಆದರೂ ಈಕೆಯೂ ಮಹಾ ವಿಷ್ಣುವಿನ ಪರಮ ಭಕ್ತ ಹಾಗೂ ರಾಕ್ಷಸನಾದ ಜಲಂಧರನನ್ನು ವಿವಾಹವಾಗುತ್ತಾಳೆ ಹಾಗೂ ಈಕೆ ಪರಮ ಪವಿತ್ರ ಮತ್ತು ಮಹಾವಿಷ್ಣುವಿನ ಆರಾಧಕ ಳಾಗಿರುವುದರಿಂದ ಈಕೆಯ ಪತಿಯಾದ ಜಲಂಧರ ಎಂಬ ರಾಕ್ಷಸನು ದೇವತೆಗಳನ್ನು ಪೀಡಿಸಲು ಶುರುಮಾಡುತ್ತಾನೆ. ಹಾಗೂ ಶಿವನೋಡನೆ ಯುದ್ಧ ಮಾಡುತ್ತಾನೆ. ಆದರೂ ಇವನು ಸೋಲುವುದಿಲ್ಲ. ಆದ್ದರಿಂದ ಮಹಾವಿಷ್ಣುವೂ ಒಂದು ತಂತ್ರವನ್ನು ಹೂಡಿ ಜಲಂಧರನ ರೂಪದಲ್ಲಿ ಬೃಂದಾಳ ಬಳಿ ಬರುತ್ತಾನೆ. ಬೃಂದಾಳು ಈತ ತನ್ನ ಪತಿ ಜಲಂಧರನೆಂದು ತಿಳಿದು ಜಲಂಧರನ ರೂಪದಲ್ಲಿರುವ ಮಹಾವಿಷ್ಣುವನ್ನು ಸ್ಪರ್ಶಿಸುತ್ತಾಳೆ. ಈಕೆ ಸ್ಪರ್ಶಿಸುತ್ತಲೇ ಅವಳಿಗೆ ತಿಳಿಯುತ್ತದೆ ಈತ ನನ್ನ ಪತಿಯಲ್ಲ. ಬೇರೆ ಯಾರೋ ಎಂದು. ತಿಳಿದು ಜಲಂದನ ರೂಪದಲ್ಲಿರುವ ಮಹಾವಿಷ್ಣುವಿಗೆ ನೀನು ಕಲ್ಲಾಗಿ ಹೋಗು ಎಂದು ಶಪಿಸುತ್ತಾಳೆ. ಆ ಶಾಪವನ್ನು ಮಹಾವಿಷ್ಣುವೂ ಒಪ್ಪಿಕೊಳ್ಳುವುದರಿಂದ ಬೃಂದಾಳು ತನ್ನ ಪತಿವ್ರತ ಧರ್ಮಕ್ಕೆ ಕುಂದು ಬಂದಿತೆಂದುಕೊಂಡು ತನ್ನ…
ಪುರುಷರು ಮತ್ತು ಮಹಿಳೆಯರು ಇಬ್ಬರೂ ಕಾಲಿಗೆ ಕಪ್ಪು ದಾರವನ್ನು ಧರಿಸುವುದು ಬಹಳ ಹಿಂದಿನಿಂದಲೂ ಇರುವ ಪ್ರವೃತ್ತಿಯಾಗಿದೆ. ಇದನ್ನು ಫ್ಯಾಶನ್ ಎಂದು ಪರಿಗಣಿಸಲಾಗಿದೆ. ನವಜಾತ ಶಿಶುವಿನ ಕಾಲುಗಳ ಸುತ್ತ ಕಪ್ಪು ದಾರವನ್ನು ಕಟ್ಟುವ ತಾಯಂದಿರು ಮತ್ತು ಅಜ್ಜಿಯರನ್ನು ನೀವು ನೋಡಿರಬಹುದು. ಆದರೆ ಅವರು ಅದನ್ನು ಫ್ಯಾಷನ್ಗಾಗಿ ಮಾಡುವುದಿಲ್ಲ. ಕಾಲಿನ ಮೇಲಿನ ಕಪ್ಪು ದಾರವು ಮಗುವನ್ನು ನಕಾರಾತ್ಮಕತೆ ಮತ್ತು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ ಎಂದು ಅವರು ನಂಬುತ್ತಾರೆ. ಕಪ್ಪು ದಾರವು ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಂಬುವವರು ಮಾತ್ರವಲ್ಲ. ಜ್ಯೋತಿಷ್ಯಶಾಸ್ತ್ರವು ಕಪ್ಪು ದಾರವನ್ನು ಪಾದದ ಮೇಲೆ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ನಂಬುತ್ತದೆ. ಇದಲ್ಲದೆ, ಪ್ರಾಚೀನ ಕಾಲದಿಂದಲೂ ಜನರು ತಮ್ಮ ಕಣಕಾಲುಗಳ ಮೇಲೆ ಕಪ್ಪು ದಾರಗಳನ್ನು ಧರಿಸುತ್ತಾರೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಕಪ್ಪು ದಾರವು ಒಂದು ಪ್ರಮುಖ ಅರ್ಥವನ್ನು ಹೊಂದಿದೆ. ಕಪ್ಪು ಬಣ್ಣವು ಶನಿ ಗ್ರಹವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್…
ಬೆಂಗಳೂರು: ಇಸ್ರೋದ ಬಾಹುಬಲಿ ಸಿಎಂಎಸ್-03 ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. SDSC/ISRO ಶ್ರೀಹರಿಕೋಟಾದಿಂದ CMS-03 ಸಂವಹನ ಉಪಗ್ರಹವನ್ನು ಹೊತ್ತ ISROದ LVM3-M5 ಉಡಾವಣೆ ಮಾಡಲಾಯಿತು. ಭಾರತೀಯ ನೌಕಾಪಡೆಯ GSAT 7R (CMS-03) ಸಂವಹನ ಉಪಗ್ರಹವು ಇಂದು ಭಾರತೀಯ ನೌಕಾಪಡೆಗೆ ಇದುವರೆಗಿನ ಅತ್ಯಂತ ಮುಂದುವರಿದ ಸಂವಹನ ಉಪಗ್ರಹವಾಗಿದೆ. ಈ ಉಪಗ್ರಹವು ನೌಕಾಪಡೆಯ ಬಾಹ್ಯಾಕಾಶ ಆಧಾರಿತ ಸಂವಹನ ಮತ್ತು ಕಡಲ ಕ್ಷೇತ್ರದ ಜಾಗೃತಿ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ. ಈ ಉಪಗ್ರಹವು ಇಲ್ಲಿಯವರೆಗಿನ ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿದ್ದು, ಸುಮಾರು 4,400 ಕೆಜಿ ತೂಕವಿದ್ದು, ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸಲು ವಿಶೇಷವಾಗಿ ಅಭಿವೃದ್ಧಿಪಡಿಸಲಾದ ಅನೇಕ ಸ್ಥಳೀಯ ಅತ್ಯಾಧುನಿಕ ಘಟಕಗಳನ್ನು ಒಳಗೊಂಡಿದೆ. ಇಸ್ರೋದಿಂದ ಎಲ್ ವಿ ಎಂ 3 ರಾಕೆಟ್ ಮೂಲಕ ಬಾಹುಬಲಿ ಸಿಎಂಎಸ್ 03 ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಸುಮಾರು 4,410 ಕೆಜಿ ತೂಕದ ಸಂವಹನ ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಭಾರತದ ಭೂಪ್ರದೇಶದ ಮೇಲೆ ನಿಗಾವನ್ನು ಸಿಎಂಎಸ್-03 ಉಪಗ್ರಹವು ವಹಿಸಲಿದೆ. ಭಾರತೀಯ…
ಬೆಂಗಳೂರು: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್-25 ಭಾನುವಾರ ರಾಜ್ಯದ 11 ಜಿಲ್ಲೆಗಳಲ್ಲಿ ಸುಗಮವಾಗಿ ನಡೆಯಿತು. ಪರೀಕ್ಷಾ ಅಕ್ರಮಗಳನ್ನು ತಡೆಯಲು ಬಿಗಿ ಕ್ರಮಗಳನ್ನು ಕೈಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಟ್ಟು 34 ವಿಷಯಗಳಿಗೆ ನಡೆದ ಕೆ-ಸೆಟ್ ಪರೀಕ್ಷೆಗೆ 1.34 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ 1.21 ಲಕ್ಷ (ಶೇ 90) ಮಂದಿ ಹಾಜರಾಗಿದ್ದರು ಎಂದು ಅವರು ವಿವರಿಸಿದ್ದಾರೆ. ಬೆಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಜಿಲ್ಲೆಗಳ 316 ಕೇಂದ್ರಗಳಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಪರೀಕ್ಷಾ ಕೇಂದ್ರಗಳಿಂದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳು ಕೆಇಎ ಕಚೇರಿಗೆ ಬಂದ ತಕ್ಷಣವೇ ಅವುಗಳನ್ನು ಸ್ಕ್ಯಾನ್ ಮಾಡಿ, ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡುವ ಕೆಲಸ ಕೂಡ ಸಂಜೆ ವೇಳೆಗೆ ಆರಂಭವಾಯಿತು. ಎಲ್ಲ ವಿಷಯಗಳ ಕೀ ಉತ್ತರಗಳನ್ನು ಕೂಡ ಈ…
ಶಿವಮೊಗ್ಗ: ಮಹಿಳೆಯರು ಮನೆ ಕೆಲಸದ ಜೊತೆ ಸಮಾಜದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾದರಿ ಬದುಕು ನಡೆಸುತ್ತಿರುವುದು ಲಾಗಾಯ್ತಿನಿಂದ ನಡೆದುಕೊಂಡು ಬಂದಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸಾಗರ ಹೋಟೆಲ್ ವೃತ್ತದಲ್ಲಿ ಸ್ನೇಹ ಸಾಗರ ಸ್ವಸಹಾಯ ಮಂಡಳಿ ವತಿಯಿಂದ ಸಂಸ್ಥೆಯ 25ನೇ ವರ್ಷದ ಅಂಗವಾಗಿ ಹಮ್ಮಿಕೊಳ್ಳಳಾಗಿದ್ದ ಮ್ಯಾರಥಾನ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಮಹಿಳೆಯರು ಸಮಾಜದ ಸ್ಪೂರ್ತಿಯಾಗಿರುತ್ತಾರೆ. ಕುಟುಂಬ ನಿರ್ವಹಣೆ ಸಮರ್ಥವಾಗಿ ನಿಭಾಯಿಸುವ ಜೊತೆಗೆ ಸಮಾಜಮುಖಿಯಾಗಿ ಯೋಚಿಸುವ ಶಕ್ತಿ ಮಹಿಳೆಯಲ್ಲಿ ಇರುತ್ತದೆ ಎಂದರು. ಸ್ನೇಹಸಾಗರ ಮಹಿಳಾ ಡೊಳ್ಳು ತಂಡವನ್ನು ಕಟ್ಟಿ ಸುಮಾರು 25 ದೇಶಗಳಲ್ಲಿ ಡೊಳ್ಳು ಪ್ರದರ್ಶನ ನೀಡಿದ ಚೂಡಾಮಣಿ ರಾಮಚಂದ್ರ ಅವರ ಸಾಧನೆ ಅನುಕರಣೀಯವಾದದ್ದು. ಸಾಗರದಲ್ಲಿ ಸುಸಜ್ಜಿತವಾದ ಈಜುಕೊಳ ನಿರ್ಮಿಸಲಾಗಿದ್ದು ಮಹಿಳೆಯರು ಈಜು ಕಲಿಯುವುದಾದರೆ ನುರಿತ ಮಹಿಳಾ ಕೋಚ್ ನೇಮಿಸಲಾಗುತ್ತದೆ. ಸಾಗರದಲ್ಲಿ ಜಿಲ್ಲಾಮಟ್ಟದ ಮಹಿಳೆಯರ ಈಜು ಸ್ಪರ್ಧೆ ನಡೆಸಲು ಅಗತ್ಯ ಸಹಕಾರ ನೀಡುವುದಾಗಿ ಎಂದರು. ಈ…
ಶಿವಮೊಗ್ಗ : ಕರ್ನಾಟಕದಲ್ಲಿ ಕನ್ನಡಿಗರಿಗೆ ಐಟಿ ಬಿಟಿ ಕಂಪನಿಗಳಲ್ಲಿ ಶೇ. 90ರಷ್ಟು ಉದ್ಯೋಗ ಕಡ್ಡಾಯಗೊಳಿಸಬೇಕು. ಕನ್ನಡಿಗರಿಗೆ ಉದ್ಯೋಗ ಕಲ್ಪಿಸದ ಐಟಿಬಿಟಿ ಕಂಪನಿಗಳಿಗೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ. ಶನಿವಾರದಂದು ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆ ರಂಗಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಘಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಾಂಸ್ಕೃತಿಕ ವೈಭವವನ್ನು ಉದ್ಘಾಟಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಮಾತನಾಡಿದಂತ ಅವರು, ಕರ್ನಾಟಕದ ನೆಲಜಲ ಸಂಪನ್ಮೂಲ ಬಳಸಿಕೊಂಡು ಆದಾಯ ಗಳಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯವಾಗಿದೆ. ಶೇ. 90ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ಮೀಸಲಿಡುವ ಕಡ್ಡಾಯ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು. ಕನ್ನಡ ನೆಲದಲ್ಲಿರುವ ಕಂಪನಿಗಳಲ್ಲಿ ಕನ್ನಡಿಗರು ಪರಕೀಯರಾಗಿ ಕಳೆದು ಹೋಗಬಾರದು. ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸಿ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಎಂದರು. ಸಾಂಸ್ಕೃತಿಕವಾಗಿ ಮೈಸೂರಿನ ನಂತರ…
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಟೀಂಗೆ ಸ್ಪಷ್ಟ ಬಹುಮತವನ್ನು ಪಡೆದಿದೆ. ಬೆಳಗಾವಿಯ ಡಿಸಿಸಿ ಬ್ಯಾಂಕಿಗೆ ಅ.19ರಂದು ಮತದಾನ ನಡೆದಿತ್ತು. ಕೋರ್ಟ್ ನಲ್ಲಿ ವಿಚಾರಣೆ ಬಾಕಿ ಹಿನ್ನಲೆಯಲ್ಲಿ ಫಲಿತಾಂಶ ಘೋಷಣೆ ಮಾಡಿರಲಿಲ್ಲ. ಬೆಲಹೊಂಗಲ, ಕಿತ್ತೂರು, ನಿಪ್ಪಾಣಿ, ಹುಕ್ಕೇರಿ ತಾಲ್ಲೂಕಿನ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ. ಬೈಲಹೊಂಗಲ ತಾಲ್ಲೂಕಿನಿಂದ ಮಹಾಂತೇಶ ದೊಡ್ಡಗೌಡರ್ ಆಯ್ಕೆಯಾಗಿದ್ದಾರೆ. ಕಿತ್ತೂರು ತಾಲ್ಲೂಕಿನಿಂದ ನಾನಾಸಾಹೇಬ್ ಪಾಟೀಲ್ ಆಯ್ಕೆಯಾಗಿದ್ದರೇ, ನಿಪ್ಪಾಣಿ ತಾಲ್ಲೂಕಿನಿಂದ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆಯಾಗಿದ್ದಾರೆ. ಹುಕ್ಕೇರಿ ತಾಲ್ಲೂಕಿನಿಂದ ರಮೇಶ್ ಕತ್ತಿ ಆಯ್ಕೆಯಾಗಿದ್ದಾರೆ. https://kannadanewsnow.com/kannada/unable-to-bear-the-burden-of-debt-farmer-commits-suicide-by-jumping-into-a-well/ https://kannadanewsnow.com/kannada/another-good-news-for-the-women-of-the-state-akka-pade-to-be-launched-on-november-19th/
ಕಲಬುರ್ಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೇ ರೈತನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗೂಡುರು ಗ್ರಾಮದಲ್ಲಿ ಸಾಲದ ಬಾಧೆಯಿಂದಾಗಿ ರೈತ ಶಿವಾಜಿ ಜಾಗಿರದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಸೇರಿ ಹಲವೆಡೆ 15 ಲಕ್ಷ ಸಾಲವನ್ನು ರೈತ ಶಿವಾಜಿ ಮಾಡಿದ್ದರು. ಅತಿವೃಷ್ಟಿಯಿಂದ ಬೆಳೆ ಕೈಕೊಟ್ಟಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೂಡುರು ಗ್ರಾಮದ ಬಳಿಯಲ್ಲಿರುವಂತ ಜಮೀನಿನಲ್ಲಿ ರೈತನ ಶವ ಪತ್ತೆಯಾಗಿದೆ. ಈ ಸಂಬಂಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/kea-stumbles-again-during-k-set-exam-staff-removes-earrings-nose-rings-of-female-candidates/ https://kannadanewsnow.com/kannada/another-good-news-for-the-women-of-the-state-akka-pade-to-be-launched-on-november-19th/
ಶಿವಮೊಗ್ಗಛ ಜಿಲ್ಲೆಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾಗಿ ಹಾಗೂ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಗೌರವಾನ್ವಿತ ಮಂಜುನಾಥ ನಾಯಕ್ ಅವರನ್ನು ಬೆಳಗಾವಿ ಜಿಲ್ಲೆಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾಗಿ ಗೌರವಾನ್ವಿತ ಉಚ್ಚ ನ್ಯಾಯಾಲಯವು ವರ್ಗಾವಣೆ ಮಾಡಿ ದಿನಾಂಕ 30.10.2025 ರಂದು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ ಆದೇಶಿಸಿದೆ. ಮಂಜುನಾಥ್ ನಾಯಕ್ ರವರು 2023ರ ಜೂನ್ ತಿಂಗಳಿನಲ್ಲಿ ಬೆಂಗಳೂರಿನ ಗೌರವಾನ್ವಿತ ಉಚ್ಛ ನ್ಯಾಯಾಲಯದಲ್ಲಿ ನೇಮಕಾತಿ ನಿಭಂಧಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡು ಶಿವಮೊಗ್ಗದಲ್ಲಿ ಪದಗ್ರಹಣ ಮಾಡಿಕೊಂಡಿದ್ದರು. ಗೌರವಾನ್ವಿತ ನ್ಯಾಯಾಧೀಶರು ದಿನಾಂಕ 03.11.2025 ರಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ಪದದಿಂದ ಮುಕ್ತಗೊಂಡು ದಿನಾಂಕ 05.11.2025 ರಂದು ಬೆಳಗಾವಿಗೆ ತೆರಳಿ ಅಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ಪದಗ್ರಹಣವನ್ನು ಮಾಡಲಿದ್ದಾರೆ. ಗೌರವಾನ್ವಿತ ನ್ಯಾಯಾಧೀಶರು ತಮ್ಮ ಸೇವಾ ಅವಧಿಯಲ್ಲಿ ಒಟ್ಟು 10 ರಾಷ್ಟ್ರೀಯ ಲೋಕ ಅದಾಲತ್ಗಳನ್ನು ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಿ ಶಿವಮೊಗ್ಗ ಜಿಲ್ಲೆಯ ನ್ಯಾಯಾಲಯಗಳಲ್ಲಿ…
ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣದಲ್ಲಿ ತಾಯಿಯಿಂದ ಬೇರ್ಪಟ್ಟು, ತಪ್ಪಿಸಿಕೊಂಡಿದ್ದ ಪರದಾಡುತ್ತಿದ್ದಂತ ಮಗುವನ್ನು ಮರಳಿ ಅಮ್ಮನ ಮಡಿಲಿಗೆ ಸೇರಿಸುವಲ್ಲಿ BMTCL ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಆರ್ ಸಿ ಎಲ್ ನೀಡಿದ್ದು, 1 ನವೆಂಬರ್ 2025ರಂದು ಮಧ್ಯಾಹ್ನ ಸುಮಾರು 12:30 ಗಂಟೆ ಸುಮಾರಿಗೆ, 6 ವರ್ಷದ ಬಾಲಕಿ ಮೆಟ್ರೋ ರೈಲು ಪ್ರಯಾಣದ ಸಂದರ್ಭದಲ್ಲಿ ನಾದಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮಜೆಸ್ಟಿಕ್)ದಲ್ಲಿ ತನ್ನ ತಾಯಿಯಿಂದ ಬೇರ್ಪಟ್ಟಿದ್ದಳು ಎಂದಿದೆ. ಬಾಲಕಿಯನ್ನು ಒಬ್ಬ ಪ್ರಯಾಣಿಕರು ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು ಮತ್ತು ಆಕೆ ಮಜೆಸ್ಟಿಕ್ ನಿಲ್ದಾಣದಲ್ಲೇ ಇದ್ದಳು. ಆಕೆಯ ತಾಯಿಯನ್ನು ಪತ್ತೆ ಹಚ್ಚಲು ಬಿಎಂಆರ್ ಸಿ ಎಲ್ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾದರು ಎಂದು ಹೇಳಿದೆ. ಎಲ್ಲಾ ನಿಲ್ದಾಣ ನಿಯಂತ್ರಕರಿಗೂ ಎಚ್ಚರಿಕೆ ನೀಡಲಾಯಿತು ಮತ್ತು ಕೆಂಪೇಗೌಡ ಮಜೆಸ್ಟಿಕ್ ನಿಲ್ದಾಣದ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನದ ಫಲವಾಗಿ ಬಾಲಕಿಯ ತಾಯಿಯನ್ನು ಪತ್ತೆ ಹಚ್ಚಿ, ಬಾಲಕಿಯನ್ನು ತಾಯಿಯವರ ಕೈಗೆ ಒಪ್ಪಿಸಲಾಯಿತು. ಎಂಬುದಾಗಿ ಬಿಎಂಆರ್ ಸಿ ಎಲ್ ತಿಳಿಸಿದೆ. https://kannadanewsnow.com/kannada/minister-ishwar-khandres-big-shock-to-illegal-homestay-and-resort-owners-in-the-state/ https://kannadanewsnow.com/kannada/another-good-news-for-the-women-of-the-state-akka-pade-to-be-launched-on-november-19th/














