Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಐಪಿ ಸೆಟ್ ಗಳನ್ನು ಹೊಂದಿರುವಂತ ರೈತರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಗುಡ್ ನ್ಯೂಸ್ ನೀಡಿದ್ದಾರೆ. ಅದೇ ಅನಧಿಕೃತ ಐಪಿ ಸೆಟ್ಗಳನ್ನು ಕುಸುಮ್ ಬಿ ಯೋಜನೆಯಡಿ ಆದ್ಯತೆ ಮೇರೆಗೆ ಸಕ್ರಮಗೊಳಿಸೋದಕ್ಕೆ ಚಿಂತನೆ ನಡೆಸಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕುಸುಮ್ ಬಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು: • ಕುಸುಮ್ ಬಿ ಯೋಜನೆಯಡಿ ಸೋಲಾರ್ ಕೃಷಿ ಪಂಪ್ಸೆಟ್ ಅಳವಡಿಸಲು, ಕೇಂದ್ರ ಸರ್ಕಾರ ಶೇ.30, ರಾಜ್ಯ ಸರ್ಕಾರ ಶೇ.50ರಷ್ಟು ಸಬ್ಸಿಡಿ ಒದಗಿಸುತ್ತಿದ್ದು, ಫಲಾನುಭವಿಗಳು ಶೇ.20ರಷ್ಟು ಭರಿಸಬೇಕಿದೆ. • ಈ ಯೋಜನೆಯಡಿ 40ಸಾವಿರ ಪಂಪ್ಸೆಟ್ಗಳಿಗೆ ಅನುಮೋದನೆ ನೀಡಲಾಗಿದ್ದು, ಇದನ್ನು ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಅವರು ಸೂಚಿಸಿದರು. • 25ಸಾವಿರ ರೈತರು ಹೆಚ್ಚುವರಿಯಾಗಿ ಕುಸುಮ್ ಬಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ಯೋಜನೆಯಡಿ ರಾಜ್ಯ ಸರ್ಕಾರ 752 ಕೋಟಿ ರೂ. ವೆಚ್ಚ ಮಾಡಲಿದೆ. ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿದ ಬಳಿಕ ಸಬ್ಸಿಡಿ ಮೊತ್ತ ಕಡಿಮೆಯಾಗಲಿದೆ. https://twitter.com/KarnatakaVarthe/status/1947643603104502243 • 4.5ಲಕ್ಷ…
ನವದೆಹಲಿ: ಅನಧಿಕೃತವಾಗಿ ಗೂಡ್ಸ್ ರೈಲು ಗಾಡಿಗಳಲ್ಲಿ ಪ್ರಯಾಣ ತಪ್ಪು. ಸಾರ್ವಜನಿಕರು ಗೂಡ್ಸ್ ರೈಲಿನಲ್ಲಿ ಪ್ರಾಯಣ ಮಾಡಬಾರದು. ಇದು ನಿಷೇಧ ಕೂಡ. ಒಂದು ವೇಳೆ ಈ ನಿಯಮ ಮೀರಿ ಪ್ರಯಾಣ ಮಾಡಿದರೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭಾರತೀಯ ರೈಲ್ವೆ ಎಚ್ಚರಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ದೂಧಸಾಗರ್ ಮತ್ತು ಕುಲೆಂ ನಿಲ್ದಾಣಗಳ ನಡುವೆ ಸರಕು ರೈಲು (Goods Train) ಗಾಡಿಯಲ್ಲಿ ಅನಧಿಕೃತವಾಗಿ ಪ್ರಯಾಣ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೈಋತ್ಯ ರೈಲ್ವೆಯ ರೈಲ್ವೆ ಸುರಕ್ಷತಾ ಪಡೆ (RPF) ಗಂಭೀರವಾಗಿ ಪರಿಗಣಿಸಿ, ವಿಡಿಯೋ ಶೂಟ್ ಮಾಡಿ ಹರಡಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ. ತನಿಖೆಯ ವೇಳೆ, ದೂಧಸಾಗರ್ ಜಲಪಾತ ಪ್ರದೇಶ ಪ್ರವೇಶ ನಿರ್ಬಂಧಿತವಾಗಿದ್ದರೂ, ಕೆಲ ಪ್ರವಾಸಿಗರು ಸ್ಥಳೀಯ ಏಜೆಂಟ್ಗಳ ಮೂಲಕ ದೂಧಸಾಗರದಿಂದ – ಕುಲೆಂ ವರೆಗೆ ಕುಳಿತು ವಿಡಿಯೋ ಮಾಡಿರುವುದು ಬಹಿರಂಗವಾಗಿದೆ. ಇದು ಅನಧಿಕೃತ ಮತ್ತು ಅಪಾಯಕಾರಿಯಾಗಿದೆ, ಏಕೆಂದರೆ ಸರಕು ಗಾಡಿಗಳಲ್ಲಿ…
ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆಯಲ್ಲಿ ಐದು ಎಸ್ಕಾಂಗಳ ಆನ್ ಲೈನ್ ಸೇವೆಗಳಾದ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಆನ್ ಲೈನ್ ಆಧರಿತ ಸೇವೆಗಳು ಜುಲೈ 25ರ ರಾತ್ರಿ 8.30 ಗಂಟೆಯಿಂದ ಜುಲೈ 27ರ ರಾತ್ರಿ 10 ಗಂಟೆಯವರೆಗೆ ಲಭ್ಯವಿರುವುದಿಲ್ಲ. ಎಲ್ಲಾ ಐದು ವಿದ್ಯುತ್ ಸರಬರಾಜು ಕಂಪನಿಗಳ ಈ ಕೆಳಕಂಡ ನಗರ ಉಪ ವಿಭಾಗದ ಗ್ರಾಹಕರಿಗೆ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಬೆಸ್ಕಾಂ: ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳು, ಶಿಢ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ-2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಸಿರಾ, ಚೆನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಗೌರಿಬಿದನೂರು, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್ , ಹರಪ್ಪನಹಳ್ಳಿ, ಹರಿಹರ, ಹಿರಿಯೂರು ಮತ್ತು ತಿಪಟೂರು ನಗರ ಉಪ ವಿಭಾಗಗಳ ವ್ಯಾಪ್ತಿಗಳಲ್ಲಿ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ. ಸೆಸ್ಕ್…
ಬೆಂಗಳೂರು: ಆಗಸ್ಟ್.15, 2025ರ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಕುರಿತಂತೆ ಆಡಳಿತ ಮತ್ತು ಸಿಬ್ಬಂದಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಆಗಸ್ಟ್.15, 2025ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅಂದರೆ ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ಈ ಕೆಳಗೆ ಸೂಚಿಸಿದಂತೆ ಸಚಿವರುಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ ಎಂದಿದ್ದಾರೆ. ಹೀಗಿದೆ ಆಗಸ್ಟ್.15ರಂದು ಯಾವ ಜಿಲ್ಲೆಯಲ್ಲಿ ಯಾವ ಸಚಿವರು ಧ್ವಜಾರೋಹಣ ಎನ್ನುವ ಪಟ್ಟಿ ಡಾ.ಜಿ ಪರಮೇಶ್ವರ್ – ತುಮಕೂರು ಹೆಚ್.ಕೆ ಪಾಟೀಲ್ – ಗದಗ ಕೆ.ಹೆಚ್ ಮುನಿಯಪ್ಪ – ಬೆಂಗಳೂರು ಗ್ರಾಮಾಂತರ ರಾಮಲಿಂಗಾರೆಡ್ಡಿ – ಬೆಂಗಳೂರು ದಕ್ಷಿಣ ಎಂ.ಬಿ ಪಾಟೀಲ್ – ವಿಜಯಪುರ ಕೆಜೆ ಜಾರ್ಜ್ – ಚಿಕ್ಕಮಗಳೂರು ದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡ ಡಾ.ಹೆಚ್ ಸಿ ಮಹದೇವಪ್ಪ – ಮೈಸೂರು ಸತೀಶ್ ಜಾರಕಿಹೊಳಿ – ಬೆಳಗಾವಿ ಕೃಷ್ಣ ಬೈರೇಗೌಡ…
ಶತ್ರುಗಳನ್ನು ದಮನ ಮಾಡುವ ಸಲುವಾಗಿ ಈ ಒಂದ ತಂತ್ರವು ಹೀಗಿದೆ. ಮೂರು ಸೋಮವಾರ ಅಥವಾ ಏಳು ಸೋಮವಾರದ ಈ ಪ್ರಯೋಗವನ್ನು ಮಾಡಬೇಕಾಗುತ್ತದೆ. ಏನು ಮಾಡಬೇಕೆಂದರು ಬಿಳಿ ಎಕ್ಕದ ಹೂವನ್ನು 108 ಪೋಣಿಸಿ ಹಾರ ಮಾಡಿ ಈಶ್ವರನಿಗೆ ಹಾಕಬೇಕು. ಹಾಗೂ ಶತ್ರುವಿಗೆ ನೀನೇ ನೋಡಿಕೋ, ಈ ರೀತಿಯಾಗಿ ಪರಿಪರಿಯಾಗಿ ನನ್ನನ್ನು ಕಾಡುತ್ತಿದ್ದಾನೆ. ಎಂದು ಹೇಳಿ ದೇವರ ಮುಂದೆ ನಿವೇದನೆ ಮಾಡಿಕೊಳ್ಳಿ ಹಾಗೂ ಪರಶಿವನ ಪಾದದ ಕೆಳಗೆ ಶತ್ರುವಿನ ಹೆಸರಿನಲ್ಲಿ ಎಷ್ಟು ಅಕ್ಷರವಿದೆಯೋ ಅಷ್ಟೇ ಪ್ರಮಾಣದ ಕಪ್ಪು ಗುಲಗಂಜಿಯನ್ನು ಶಿವನ ಪಾದದ ಬಳಿ ಇಡಬೇಕು ಉದಾರಣೆಗೆ ರಾಮಕೃಷ್ಣ ನಾಲ್ಕು ಅಕ್ಷರ ಅಲ್ಲಿಗೆ ನಾಲ್ಕು ಕಪ್ಪು ಗುಲಗಂಜಿಯನ್ನು ಶಿವನ ಪಾದದ ಬಳಿ ಇಡಬೇಕು ಎಂಬುದಾಗಿ ಅರ್ಥ ಈ ರೀತಿಯಾಗಿ ಮೂರು ಸೋಮವಾರ ಅಥವಾ ಏಳು ಸೋಮವಾರ ನಿರಂತರವಾಗಿ ಶತ್ರು ಧ್ವಂಸ ಆಗಲಿ ಎಂದು ಸಂಕಲ್ಪ ಮಾಡಿಕೊಂಡು ಮಾಡಿದ್ದೆ ಆದಲ್ಲಿ 100ಕ್ಕೆ 100% ಅಷ್ಟು ಆತ ಉಚ್ಚಾಟನೆಗೊಳ್ಳುವನು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ…
ಮಂಡ್ಯ : ದುಷ್ಕರ್ಮಿಗಳ ಗುಂಪೊಂದು ಪಟ್ಟಣದ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಗೋದಾಮಿನ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಪಡಿತರ ಅಕ್ಕಿಯನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ಜರುಗಿದೆ. ಮಳವಳ್ಳಿ ರಸ್ತೆಯಲ್ಲಿರುವ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಪ್ರತಿಮೆ ಬಳಿಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಪಡಿತರ ದಾಸ್ತಾನು ಗೋದಾಮಿನಲ್ಲಿ ಈ ಕೃತ್ಯ ನಡೆದಿದೆ. ಮಧ್ಯರಾತ್ರಿ ವೇಳೆಗೆ ಮಾರಕಾಸ್ತ್ರಗಳ ಸಮೇತ ಲಾರಿಯಲ್ಲಿ ಬಂದ ದುಷ್ಕಮಿಗಳ ಗುಂಪು ಪಡಿತರ ಗೋದಾಮಿನ ರೋಲಿಂಗ್ ಷಟರ್ ಗೆ ಹಾಕಲಾಗಿದ್ದ ಎರಡು ಬೀಗಗಳನ್ನು ಕಬ್ಬಿಣದ ಹಾರೆಯಿಂದ ಜಖಂಗೊಳಿಸಿದ ನಂತರ ಒಳ ನುಗ್ಗಿರುವ ದುಷ್ಕರ್ಮಿಗಳು 1.64 ಲಕ್ಷ ರೂ ಮೌಲ್ಯದ 54 ಕೆಜಿ ಸಾಮರ್ಥ್ಯದ 94 ಮೂಟೆ ಪಡಿತರ ಅಕ್ಕಿಯನ್ನು ಲೂಟಿ ಮಾಡಿ ಮಿನಿ ಲಾರಿಯೊಂದರಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಟಿಎಪಿಸಿಎಂಎಸ್ ಗೆ ಸೇರಿದ ಗೋದಾಮನ್ನು ಬಾಡಿಗೆ ಆಧಾರ ಮೇಲೆ ಪಡೆದುಕೊಂಡಿದ್ದ ಆಹಾರ ಇಲಾಖೆ ಗೋದಾಮಿನಲ್ಲಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿಕೊಂಡು ಮದ್ದೂರು ತಾಲೂಕಿನ ನ್ಯಾಯಬೆಲೆ…
ದಾವಣಗೆರೆ : ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಗುರುಗಳು ಎಲ್ಲ ಭಕ್ತರು ಒಂದಾಗಬೇಕು ಆಗ ನಮ್ಮನ್ನು ಯಾರು ತಡೆಯುವುದಿಲ್ಲ. ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ಅವರು ಇಂದು ದಾವಣಗೆರೆಯ ಶ್ರೀ ಮದ್ ಅಭಿನವ ರೇಣುಕ ಮಂದಿರದಲ್ಲಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ದಿವ್ಯಸಾನಿಧ್ಯದಲ್ಲಿ ಏರ್ಪಡಿಸಲಾದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ನಾವೆಲ್ಲ ಬಹಳ ಸಂಕೀರ್ಣ ಕಾಲದಲ್ಲಿ ಇಲ್ಲಿ ಸೆರಿದ್ದೇವೆ ನಮಗೆ ಬಹಳ ದೊಡ್ಡ ಇತಿಹಾಸ ಇದೆ. ಅಷ್ಟೆ ಗಟ್ಡಿಯಾದ ಭವಿಷ್ಯ ಇದೆ ಅಂತ ಹೇಳುತ್ತೇವೆ. ಚಿಂತನೆ ಮಾಡುವ ಕಾಲ ಇದೆ. ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಕಾಲ ಇದಲ್ಲ. ವಿಚಾರ ಮಾಡಬೇಕು ನಮಗೆ ಬಹಳ ದೊಡ್ಡ ಇತಿಹಾಸದ ಜೊತೆಗೆ ಸಂಸ್ಕಾರ ಸಂಸ್ಕತಿ ಇದೆ. ನಮ್ಮದೇ ಆದ ಚಿಂತನೆಯಲ್ಲಿ ನಡೆಯುತ್ತೇವೆ. ಧರ್ಮ, ನ್ಯಾಯ ನೀತಿಯ ಚೌಕಟ್ಟಿನಲ್ಲಿ ನಮ್ಮ ಚಿಂತನೆ ಇರುತ್ತದೆ. ನಾವು ಯಾವ…
ರಿಪ್ಲಿಟ್ AI ಎಚ್ಚರಿಕೆ ನೀಡದೆ ಬಳಕೆದಾರರ ಡೇಟಾಬೇಸ್ ಅನ್ನು ಅಳಿಸುತ್ತದೆ: ‘ದುರಂತ ದೋಷ’ದ ನಂತರ ಸರಿಪಡಿಸುವುದಾಗಿ ಸಿಇಒ ಭರವಸೆ ನೀಡಿದ್ದಾರೆ. ನವದೆಹಲಿ: AI ಕೋಡಿಂಗ್ ಸಹಾಯಕನನ್ನು ಒಳಗೊಂಡ ಹೈ-ಪ್ರೊಫೈಲ್ ಅಪಘಾತವು ಅಭಿವೃದ್ಧಿ ಪರಿಸರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆ ಕಳವಳವನ್ನು ಮತ್ತೆ ಹುಟ್ಟುಹಾಕಿದೆ. SaaStr.AI ನ ಸಿಇಒ ಜೇಸನ್ ಎಂ ಲೆಮ್ಕಿನ್ ಇತ್ತೀಚೆಗೆ ರೆಪ್ಲಿಟ್ನ AI ತನ್ನ ಡೇಟಾಬೇಸ್ ಅನ್ನು ಎಚ್ಚರಿಕೆಯಿಲ್ಲದೆ ಹೇಗೆ ಅಳಿಸಿಹಾಕಿತು ಎಂಬುದರ ಬಗ್ಗೆ ಒಂದು ತೊಂದರೆದಾಯಕ ಖಾತೆಯನ್ನು ಹಂಚಿಕೊಂಡಿದ್ದಾರೆ. ಅನುಮತಿಯಿಲ್ಲದೆ ಯಾವುದೇ ಹೆಚ್ಚಿನ ಬದಲಾವಣೆಗಳನ್ನು ಮಾಡಬಾರದು ಎಂದು ಹೇಳಲಾಗಿತ್ತು. ಲೆಮ್ಕಿನ್ ರೆಪ್ಲಿಟ್ನ ‘ವೈಬ್ ಕೋಡಿಂಗ್’ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದ್ದಾಗ, ಸಹಾಯಕನು ಸಂಪೂರ್ಣ ಡೇಟಾಬೇಸ್ ಅನ್ನು ಅಳಿಸಿಹಾಕುವ ವಿನಾಶಕಾರಿ ಆಜ್ಞೆಯನ್ನು ಕಾರ್ಯಗತಗೊಳಿಸಲು ತನ್ನನ್ನು ತಾನೇ ತೆಗೆದುಕೊಂಡನು. ನಂತರ ನಡೆದದ್ದು ಕೇವಲ ಕಳಪೆ ತೀರ್ಪಿನ ಪ್ರಕರಣವಲ್ಲ, ಆದರೆ ಸ್ಪಷ್ಟ ಸೂಚನೆಗಳ ಉಲ್ಲಂಘನೆಯೂ ಆಗಿತ್ತು. ಲೆಮ್ಕಿನ್ ವ್ಯವಸ್ಥೆಯೊಳಗೆ ಸ್ಪಷ್ಟವಾಗಿ ಒಂದು ನಿಯಮವನ್ನು ನಿಗದಿಪಡಿಸಿದ್ದರು: ‘ಸ್ಪಷ್ಟ ಅನುಮತಿಯಿಲ್ಲದೆ ಹೆಚ್ಚಿನ ಬದಲಾವಣೆಗಳಿಲ್ಲ.’ ಆ ನಿಯಮವನ್ನು ನಿರ್ಲಕ್ಷಿಸಲಾಗಿದೆ…
ನವದೆಹಲಿ: ಅನಾರೋಗ್ಯದ ಕಾರಣದಿಂದಾಗಿ ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನ್ಕರ್ ಅವರು ರಾಜೀನಾಮೆಯನ್ನು ನಿನ್ನೆ ಸಲ್ಲಿಸಿದ್ದರು. ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ. ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿದ ರಾಜೀನಾಮೆಯಲ್ಲಿ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಭಾರತದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದರು. ಈ ಮಹತ್ವದ ಅವಧಿಯಲ್ಲಿ ಭಾರತದ ಗಮನಾರ್ಹ ಆರ್ಥಿಕ ಪ್ರಗತಿ ಮತ್ತು ಅಭೂತಪೂರ್ವ ಘಾತೀಯ ಅಭಿವೃದ್ಧಿಯನ್ನು ವೀಕ್ಷಿಸುವುದು ಮತ್ತು ಅದರಲ್ಲಿ ಭಾಗವಹಿಸುವುದು ಒಂದು ಸವಲತ್ತು ಮತ್ತು ತೃಪ್ತಿಯಾಗಿದೆ ಎಂದು ಧನ್ಕರ್ ಹೇಳಿದ್ದರು. ಅಲ್ಲದೇ ನಮ್ಮ ರಾಷ್ಟ್ರದ ಇತಿಹಾಸದ ಈ ಪರಿವರ್ತನಾ ಯುಗದಲ್ಲಿ ಸೇವೆ ಸಲ್ಲಿಸುವುದು ನಿಜವಾದ ಗೌರವವಾಗಿದೆ ಎಂದು ಅವರು ಹೇಳಿದ್ದರು. ಹೀಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನ್ಕರ್ ಅವರು ನೀಡಿದ್ದಂತ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂಬುದಾಗಿ ತಿಳಿದು…
ಕಲಬುರ್ಗಿ: ಜಿಲ್ಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬರ ಪೋಟೋವನ್ನು ಅಶ್ಲೀಲವಾಗಿ ಸಂದೇಶ ಪೋಸ್ಟ್ ಮಾಡಿ ವೈರಲ್ ಮಾಡಲಾಗಿತ್ತು. ಈ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕುರಿಕೋಟ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕಮಲಾಪುರ ತಾಲ್ಲೂಕಿನ ಭೂಸಣಗಿ ಗ್ರಾಮದ ಸಾಕ್ಷಿ ಉಪ್ಪಾರ್ (22) ಎಂಬ ಯುವತಿಯೇ ಆತ್ಮಹತ್ಯೆಗೆ ಶರಣಾದಂತವರಾಗಿದ್ದಾರೆ. ಮೃತ ಯುವತಿ ಸಾಕ್ಷಿ ಉಪ್ಪಾರ್ ಗೆ ಅಭಿಷೇಕ್ ಎಂಬಾತ ಕಿರುಕುಳ ನೀಡುತ್ತಿದ್ದನು. ಯುವತಿಯ ಜೊತೆಗಿರುವಂತ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದನು. ಈ ಪೋಟೋಗಳು ವೈರಲ್ ಆಗಿದ್ದವು. ಅಭಿಷೇಕ್ ನೀಡುತ್ತಿದ್ದಂತ ಕಿರುಕುಳ ಹಾಗೂ ತನ್ನ ಖಾಸಗಿ ಪೋಟೋಗಳು ವೈರಲ್ ಆಗಿದ್ದರಿಂದಾಗಿ ಮನನೊಂದು ಯುವತಿ ಸಾಕ್ಷಿ ಉಪ್ಪಾರ್ ಬೆಣ್ಣೆತೋರಾ ಡ್ಯಾಂಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/while-receiving-a-bribe-of-15000-in-mandya-three-employees-fell-into-the-trap-of-the-lokayukta/ https://kannadanewsnow.com/kannada/rowdy-sheeter-biklus-murder-case-takes-a-big-twist-four-who-received-the-contract-have-been-arrested/