Author: kannadanewsnow09

ಬೆಂಗಳೂರು: ಕೇವಲ ಬಿಬಿಎಂಪಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು ಕಳೆದ 10 ವರ್ಷಗಳಲ್ಲಿ ಬಿಡುಗಡೆಯಾಗಿರುವ 46,300 ಕೋಟಿ ರೂಪಾಯಿಗಳಷ್ಟು ಬೃಹತ್ ಪ್ರಮಾಣದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬೃಹತ್ ಹಗರಣ ಬಯಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷರು ಹಾಗೂ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕರಾದಂತ ಎನ್ ಆರ್ ರಮೇಶ್ ಲೋಕಾಯುಕ್ತ ಎಡಿಜಿಪಿಗೆ ದಾಖಲೆ ಸಹಿತ ದೂರು ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್ ಗಳ ವ್ಯಾಪ್ತಿಯಲ್ಲಿರುವ ಮುಖ್ಯರಸ್ತೆಗಳು ಮತ್ತು ವಾರ್ಡ್ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು 2013-14 ರಿಂದ 2023-24 ರವರೆಗಿನ 10 ವರ್ಷಗಳ ಅವಧಿಯಲ್ಲಿ ವಿವಿಧ ಅನುದಾನಗಳ ಮೂಲಕ ಒಟ್ಟು ₹ 46,292.23 ಕೋಟಿ (ನಲವತ್ತಾರು ಸಾವಿರದ ಇನ್ನೂರಾ ತೊಂಬತ್ತೆರಡು ಕೋಟಿ ಇಪ್ಪತ್ತ ಮೂರು ಲಕ್ಷ) ರೂಪಾಯಿಗಳಷ್ಟು ಬೃಹತ್ ಮೊತ್ತ ಬಿಡುಗಡೆಯಾಗಿರುತ್ತದೆ !!! ಮೇಲ್ಸೇತುವೆಗಳು, ಕೆಳ ಸೇತುವೆಗಳು ಮತ್ತು White Topping ರಸ್ತೆಗಳನ್ನು ಹೊರತುಪಡಿಸಿ ಕೇವಲ ರಸ್ತೆಗಳ…

Read More

ಬೆಂಗಳೂರು: ಮುಡಾ ಪರ್ಯಾಯ ನಿವೇಶನ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ನಾಗಪ್ರಸನ್ನ ಅವರು ಸಿಬಿಐ, ಕೇಂದ್ರ ಸರ್ಕಾರ ಮತ್ತು ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದಾರೆ. 25-11-2024 ರವರೆಗೆ ನಡೆಸಿದ ತನಿಖೆಯನ್ನು ದಾಖಲಿಸುವಂತೆ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದೆ. ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಲಾಗಿದೆ. ಮುಡಾ ಹಗರಣದ ಮೂವರು ದೂರುದಾರರಲ್ಲಿ ಒಬ್ಬರಾದ ಸ್ನೇಹಮಯಿ ಕೃಷ್ಣ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕೆ.ಜಿ.ರಾಘವನ್, ತನಿಖೆಯು ಸಾರ್ವಜನಿಕ ವಿಶ್ವಾಸವನ್ನು ಮೂಡಿಸಬೇಕಾಗಿರುವುದರಿಂದ ಸಿಬಿಐ ತನಿಖೆಯನ್ನು ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದರು. ಇದು ಕೇಂದ್ರ ಸಂಸ್ಥೆಯಿಂದ ತನಿಖೆ ನಡೆಸಲು ಸೂಕ್ತವಾದ ಪ್ರಕರಣವಾಗಿದ್ದು, ಇದರಿಂದ ಅಧಿಕಾರ ದುರುಪಯೋಗ ಮತ್ತು ಕ್ರಮಕ್ಕೆ ಕಾರಣರಾದ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಬಹುದು ಮತ್ತು ಹಗರಣದ ಪ್ರಮಾಣವನ್ನು ನಿರ್ಧರಿಸಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿಯಮಗಳನ್ನು…

Read More

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌: ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್.‌ ಅದು ಇಲ್ಲದೆ ಒಂದು ದಿನ ಕೂಡ ಇರೋಕೆ ಆಗೊಲ್ಲ. ಹಾಗೆ ಅದನ್ನ ಮೂರು ಹೊತ್ತು ನೋಡ್ತಾ ಇದ್ದರೆ, ಪ್ರಪಂಚದಲ್ಲಿ ಏನು ಆದ್ರೂ ಗೊತ್ತಾಗುವುದಿಲ್ಲ. ಕೆಲವರು ಶೌಚಾಲಯದಲ್ಲೂ ಕೂಡ ಬಳಸುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಕುತ್ತು ಬರುತ್ತದೆ. ಹಾಗಾದ್ರೆ ಫೋನ್‌ ಬಳಸುವುದರಿಂದ ಏನು ಆಗುತ್ತೆ ತಿಳಿದುಕೊಳ್ಳೋಣ. ಮಲಬದ್ದತೆ ಮತ್ತು ಫೈಲ್ಸ್‌ : ಜೀರ್ಣಾಂಗ ವ್ಯವಸ್ಥೆ ಸರಿಯಾಗದಿದ್ದಾಗ ಮಲಬದ್ಧತೆ ಮತ್ತು ಪೈಲ್ಸ್‌ನಂತಹ ಸಮಸ್ಯೆಗಳನ್ನು ಎದುರಿಸಬಹುದು. ಹೆಚ್ಚು ಕಾಲ ವಾಶ್ ರೂಂನಲ್ಲಿ ಕುಳಿತುಕೊಳ್ಳುವುದು ನಿಮ್ಮ ವಿಸರ್ಜನಾ ಅಂಗಗಳ ಮೇಲೆ ಅನಗತ್ಯ ಒತ್ತಡ ಉಂಟುಮಾಡಬಹುದು.ಹೀಗಾಗಿ ಅನಾರೋಗ ಕಾಡುತ್ತದೆ. ಸೋಂಕಿನ ಅಪಾಯ: ಪ್ರತಿಯೊಂದು ಶೌಚಾಲಯಗಳಲ್ಲೂ ಬ್ಯಾಕ್ಟೀರಿಯಾಗಳ ಇರುತ್ತದೆ. ನೀವು ಮೊಬೈಲ್ ಫೋನ್ ಬಳಸುವಾಗ, ನಿಮ್ಮ ಸ್ಮಾರ್ಟ್‌ಫೋನ್‌ಗೆ ಅಂಟಿಕೊಳ್ಳುವ ಬ್ಯಾಕ್ಟೀರಿಯಾಗಳಿಂದ ಅಂತಿಮ ಪರಿಣಾಮ ನಿಮ್ಮ ಮೇಲೆ ಆಗುತ್ತದೆ. ಇದರಿಂದ ಹೊಟ್ಟೆ ನೋವು ಮತ್ತು ಮೂತ್ರದ ಸೋಂಕು ಉಂಟಾಗುತ್ತದೆ. ಅತಿಸಾರ ಸಂಬಂಧಿತ ಸಮಸ್ಯೆಗಳು: ಕೆಲವರು ವಾಶ್‌ರೂಮ್‌ನಲ್ಲಿ ನೈರ್ಮಲ್ಯ ಪಾಲಿಸುವ ಬಗ್ಗೆ…

Read More

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಕೊರೊನಾ ಸಮಯದಲ್ಲೂ ಅಂತೂ ವಿಟಮಿನ್‌ ಸಿ ಇರುವಂತಹ ಅಂಶಗಳು ಬೇಕಿತ್ತು. ಇದಕ್ಕೆ ಎಲ್ಲರೂ ಮನೆಯಲ್ಲಿ ನಿಂಬೆ ಹಣ್ಣುಗಳೇ ಜಾಸ್ತಿ ಇರುತ್ತಿತ್ತು. ಇದರಿಂದ ಆರೋಗ್ಯಕ್ಕೆ ಭಾರಿ ಪ್ರಯೋಜನೆಗಳಿವೆ. ಆಯಾಸ ಅಥವಾ ವಾಂತಿ ಆದಾಗ ಮೊದಲು ನೆನಪಿಗೆ ಬರೋದೆ ನಿಂಬೆ ಹಣ್ಣಿನ ಜ್ಯೂಸ್‌ . ಇದರಲ್ಲಿ ವಿಟಮಿನ್‌ ಜೀವಸತ್ವ ಇರುತ್ತದೆ. ಹೀಗಾಗಿ ಜನರು ಜಾಸ್ತಿ ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲ ನಾನಾ ರೋಗಗಳಿಗೂ ಮನೆ ಮದ್ದು ಆಗಿದೆ. ನಿಂಗೆ ಜ್ಯೂಸ್‌ ಕುಡಿಯುವುದರಿಂದ ಏನೆಲ್ಲ ಲಾಭ ಇದೆ ನೋಡೋಣ ಬನ್ನಿ. ಜೀರ್ಣಕ್ರಿಯೆ ವೃದ್ಧಿ ನಿಂಬೆ ರಸವು ಜೀರ್ಣಾಂಗದಲ್ಲಿರುವ ವಿಷವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಒತ್ತಡದಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಣಿಸಿಕೊಳ್ಳತ್ತದೆ. ಇದರಿಂದ ಪ್ರತಿನಿತ್ಯ ನಿಂಬೆ ರಸ ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗತ್ತದೆ. ಪೊಟ್ಯಾಸಿಯಮ್‌ ಹೆಚ್ಚಿಸುತ್ತದೆ ನಿಂಬೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಮತ್ತು ನರಗಳ ಕಾರ್ಯಗಳಿಗೆ ಸಹಾಯ ಮಾಡುತ್ತದೆ. ಕಿಡ್ನಿ ಸ್ಟೋನ್‌ ತಡೆಯಬಹುದು ಪ್ರತಿದಿನ…

Read More

ರಾಮನಗರ: ಐಪಿಎಸ್ ಅಧಿಕಾರಿಯೊಬ್ಬರ ದೂರಿನ ಮೇರೆಗೆ ನನ್ನ ವಿರುದ್ಧ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ಹಾಸ್ಯಾಸ್ಪದ, ದುರುದ್ದೇಶಪೂರಿತ ಎಂದು ಕೇಂದ್ರ ಸಚಿವರ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಉಪ ಚುನಾವಣೆಯ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಅಕ್ಕೂರು ಹೊಸಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಉಪ ಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಭಾರೀ ಉಮೇದಿನಿಂದ ನಮ್ಮ ವಿರುದ್ಧ ದ್ವೇಷ ಸಾಧನೆ ಮಾಡುತ್ತಿದೆ. ಇದಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ಕೊಡುತ್ತೇನೆ ಎಂದರು. ಎಫ್ ಐಆರ್ ಪ್ರತಿಯನ್ನು ಓದಿದೆ. ಅದರಲ್ಲಿರುವ ದೂರಿನ ಸಾರಾಂಶವನ್ನೂ ಓದಿದೆ. ಅದು ಸಂಪೂರ್ಣ ಹಾಸ್ಯಾಸ್ಪದ ಹಾಗೂ ದುರದ್ದೇಶಪೂರಿತ ಎನ್ನುವುದು ನನಗೆ ಅರ್ಥವಾಯಿತು. ಅಲ್ಲಿ ದೂರುದಾರರೇ ಹೇಳಿಕೊಂಡಿದ್ದಾರೆ, ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿ ಮಾಡಿ ನನ್ನ ವಿರುದ್ಧ ಆರೋಪ ಮಾಡಿದರು. ಅದಕ್ಕೆ ಕ್ರಮ ಕೈಗೊಳ್ಳಿ ಎಂದು ಕೇಳಿದ್ದಾರೆ. ನಾನು ಅವರ ಬಗ್ಗೆ ತಪ್ಪು ಮಾಹಿತಿ ನೀಡಿದೇನೆ ಎಂದು ಹೇಳಿಕೊಂಡಿದ್ದಾರೆ? ಬೇಕಾದರೆ ನನ್ನ ಮಾಧ್ಯಮಗೋಷ್ಠಿಯ ವಿಡಿಯೋ…

Read More

ಶಿವಮೊಗ್ಗ: ನವೆಂಬರ್.7ರಂದು ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಮೆಸ್ಕಾಂ ತಿಳಿಸಿದೆ. ಈ ಕುರಿತು ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಗರದ ಗಾಂಧಿಬಜಾರ್, ಬರಮಪ್ಪನಗರ, ಎಂ.ಕೆ.ಕೆ. ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಗಾಂಧೀಬಜಾರ್, ಸೊಪ್ಪಿನ ಮಾರ್ಕೇಟ್, ಕೆ.ಆರ್.ಪುರಂ, ಭರಮಪ್ಪನಗರ, ಎಂ.ಕೆ.ಕೆ.ರಸ್ತೆ, ಬಿ.ಹೆಚ್.ರಸ್ತೆ, ನಾಗಪ್ಪಕೇರಿ, ತಿರುಪಳಯ್ಯನಕೇರಿ, ಸಾವರ್ಕರ್ ನಗರ ಕರೆಂಟ್ ಇರೋದಿಲ್ಲ. ಅಶೋಕ ರಸ್ತೆ, ಕೋಟೆರಸ್ತೆ, ಎಸ್.ಪಿ.ಎಂ.ರಸ್ತೆ, ರಾಮಣ್ಣಶ್ರೇಷ್ಠಿ ಪಾರ್ಕ್, ಮಹಾರಾಜ ರಸ್ತೆ, ಲಷ್ಕರ್ ಮೊಹಲ್ಲಾ, ಓ.ಬಿ.ಎಲ್.ರಸ್ತೆ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ದಿ:07.11.2024 ರಂದು 09.00 ಘಂಟೆಯಿಂದ ಸಂಜೆ 6.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. https://kannadanewsnow.com/kannada/breaking-lineman-dies-due-to-electrocution-in-tumkur/

Read More

ಕೆಎನ್‌ಎನ್‌ ಸ್ಪೆಷಲ್ ಡೆಸ್ಕ್‌ : ಹೆಣ್ಣು ಮಕ್ಕಳಿಗೆ ಪಿರಿಯಡ್ಸ್‌ ಪ್ರಕೃತಿ ನಿಯಮವಾಗಿದೆ. ತಿಂಗಳು ಸರಿಯಾದ ಟೈಮ್‌ ಗೆ ಆದ್ರೆ, ಇಡೀ ಅಂಗಾಗಳು ಸರಿಯಾಗಿ ಇರುತ್ತದೆ. ಇಂದು ಮಿಸ್‌ ಆದ್ರೆ ನಾನಾ ರೋಗಗಳಿಗೆ ತುತ್ತಾಗಬೇಕಿದೆ. ಆದರೆ ಮನೆಯಲ್ಲಿ ಕೆಲ ಶುಭ ಸಮಾರಂಭಗಳಿದ್ದರೆ, ಪಿರಿಯೆಡ್ಸ್‌ನ್ನು ಮುಂದೂಡಲು ಬಯಸುತ್ತಾರೆ. ಅದಕ್ಕಾಗಿ ಮೆಡಿಕಲ್‌ನಲ್ಲಿ ಸಿಗುವ ಕೆಲವೊಂದು ಮಾತ್ರೆಗಳನ್ನು ನುಂಗುತ್ತಾರೆ. ಹೀಗೆ ತಮಗೆ ಅವಶ್ಯಕವಿದ್ದಾಗ ಮಾತ್ರೆಗಳ ಸಹಾಯದಿಂದ ಪಿರಿಯೆಡ್ಸ್ ಮುಂದೂಡಲು ಮಾತ್ರೆಗಳನ್ನು ಸೇವಿಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಹೀಗಿರುವಾ ನೈಸರ್ಗಿಕವಾಗಿಯೇ ಹೇಗೆ ನಾವು ಪಿರಿಯೆಡ್ಸ್‌ ಮುಂದೂಡಬಹುದು ಎಂದು ಕಾಣಬಹುದಾಗಿದೆ. ಹೆಚ್ಚು ದಾಲ್ಚಿನ್ನಿ ಚಹಾ ಕುಡಿಯಿರಿ: ಇದನ್ನ ಕುಡಿಯವುದರಿಂದ ನಾನಾ ರೋಗಗಳಿಗೆ ಮದ್ದು. ಊರಿಯುವನ್ನ ಕಡಿಮೆ ಮಾಡುವುದರ ಜೊತೆಗೆ ಪಿರಿಯೆಡ್ಸ್‌ ಸಮಯದಲ್ಲಿ ಬರುವ ಮುಟ್ಟಿನ ಸೆಳತವನ್ನು ಕಡಿಮೆ ಮಾಡುತ್ತದೆ. ನಿಂಬೆ ರಸ ಕುಡಿಯಿರಿ: ಪಿರಿಯೆಡ್ಸ್‌ ಮುಂದೂಡಿಕೆಗಾಗಿ ನಿಂಬೆ ರಸವನ್ನು ಸೇವಿಸಿಬೇಕು. ಇದರಲ್ಲಿ ಸಿಟ್ರಸ್ ಆಹಾರಗಳು ರಕ್ತಸ್ರಾವವನ್ನು ಮುಂದೂಡಲು ಸಹಾಯ ಮಾಡುತ್ತದೆ ಕಲ್ಲಂಗಡಿ ಹಣ್ಣು ಬೇಸಿಗೆ ಸಮಯದಲ್ಲಿ ಎಲ್ಲರೂ ಇಷ್ಟ ಪಡವಂತಹ…

Read More

ನವದೆಹಲಿ: ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧಿಸಲು ವೀಡಿಯೊ ಕರೆಗಳು ಹೆಚ್ಚು ಆದ್ಯತೆಯ ಮಾರ್ಗಗಳಲ್ಲಿ ಒಂದಾಗಿದೆ. ಭೌಗೋಳಿಕ ಅಡೆತಡೆಗಳನ್ನು ತೆಗೆದುಹಾಕುವ ಮೂಲಕ ಬಳಕೆದಾರರಿಗೆ ಜನರೊಂದಿಗೆ ಮಾತನಾಡಲು ಅನುವು ಮಾಡಿಕೊಡುತ್ತದೆ ಶ್ರೀಮಂತ ಮತ್ತು ಸ್ಪಷ್ಟ ಸಂವಹನಕ್ಕೆ ಕಾರಣವಾಗುತ್ತದೆ. ಆದಾಗ್ಯೂ, ಸ್ಕ್ಯಾಮರ್ಗಳು ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಂಚಿಸಲು ವೀಡಿಯೊ ಕರೆಗಳನ್ನು ಸಹ ಬಳಸುತ್ತಿದ್ದಾರೆ. ಬಳಕೆದಾರರನ್ನು ಸುರಕ್ಷಿತವಾಗಿಡಲು, ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಅಥವಾ ಸಿಇಆರ್ಟಿ-ಇನ್) ಸಲಹೆ ನೀಡಿದೆ.   ವೀಡಿಯೊ ಕರೆ ಹಗರಣಗಳು ಎಂದರೇನು:  ವೀಡಿಯೊ ಕರೆಗಳ ಹಗರಣಗಳು ಕೆಲವು ಸಮಯದಿಂದ ಅಸ್ತಿತ್ವದಲ್ಲಿವೆ. ಈ ರೀತಿಯ ಹಗರಣಗಳಲ್ಲಿ, ಈ ಕಾರ್ಯವನ್ನು ಬೆಂಬಲಿಸುವ ವಾಟ್ಸಾಪ್ನಂತಹ ಅಪ್ಲಿಕೇಶನ್ನಲ್ಲಿ ವೀಡಿಯೊ ಕರೆ ಮೂಲಕ ಜನರನ್ನು ಸ್ಕ್ಯಾಮರ್ಗಳು ಗುರಿಯಾಗಿಸುತ್ತಾರೆ. ಮುಖ್ಯವಾಗಿ ನಾಲ್ಕು ರೀತಿಯ ವೀಡಿಯೊ ಕರೆಗಳಿವೆ: ಬ್ಲ್ಯಾಕ್ಮೇಲ್ ಹಗರಣಗಳು: ಈ ರೀತಿಯ ಹಗರಣಗಳಲ್ಲಿ, ಸ್ಕ್ಯಾಮರ್ಗಳು ನಿಮಗೆ ತಿಳಿಯದೆ ನಿಮ್ಮ ವೀಡಿಯೊ ಕರೆಯನ್ನು ರೆಕಾರ್ಡ್ ಮಾಡಬಹುದು ಮತ್ತು ನೀವು ಅವರಿಗೆ ಹಣವನ್ನು ಪಾವತಿಸದಿದ್ದರೆ ಅದನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಬಹುದು. ಹೂಡಿಕೆ…

Read More

ಯಾದಗಿರಿ: ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಮಹಾಯಡವಟ್ಟು ಮಾಡಲಾಗಿದೆ. ರೌಡಿ ಶೀಟರ್ ಪಟ್ಟಿಯಲ್ಲಿದ್ದಂತವನನ್ನೇ ಸರ್ಕಾರಿ ಶಾಲೆಗೆ ಅತಿಥಿ ಶಿಕ್ಷಕನನ್ನಾಗಿನ ನೇಮಕ ಮಾಡಲಾಗಿದೆ. ಇಂತಹ ರೌಡಿ ಶೀಟರ್ ಉಪಟಳಕ್ಕೆ ಬೇಸತ್ತು ಆ ಶಾಲೆಯಿಂದ ಅನೇಕ ಶಿಕ್ಷಕರು ಬೇರೆಡೆಗೆ ವರ್ಗಾವಣೆ ಮಾಡಿಕೊಂಡು ಹೋಗಿರೋದಾಗಿ ಹೇಳಲಾಗುತ್ತಿದೆ. ಯಾದಗರಿ ಜಿಲ್ಲೆಯ ಶಹಾಪುರ ತಾಲ್ಲೂಕು ರಸ್ತಾಪುರದಲ್ಲಿನ ಸರ್ಕಾರಿ ಶಾಲೆಗೆ ರೌಡಿ ಶೀಟರ್ ಭಾಗಪ್ಪ ಎಂಬುವರನ್ನೇ ಅತಿಥಿ ಶಿಕ್ಷಕರನ್ನಾಗಿ ನೇಮಿಸಲಾಗಿದೆ. ಕಳೆದ ಐದು ವರ್ಷಗಳಿಂದ ಹಿಂದಿ ಭಾಷಾ ಅತಿಥಿ ಶಿಕ್ಷಕನಾಗಿ ರೌಡಿ ಶೀಟರ್ ಭಾಗಪ್ಪ ಕೆಲಸ ಮಾಡುತ್ತಿದ್ದಾರೆ. 2017ರಲ್ಲಿ ಭಾಗಪ್ಪ ಅವರ ವಿರುದ್ಧ ರೌಡಿ ಶೀಟರ್ ಓಪನ್ ಮಾಡಲಾಗಿತ್ತು. ಈ ವಿಷಯ ಗೊತ್ತಿದ್ದರೂ, ಶಾಲಾ ಶಿಕ್ಷಣ ಇಲಾಖೆ ಮಾತ್ರ ಹಿಂದಿ ಭಾಷಾ ಅತಿಥಿ ಶಿಕ್ಷಕರನ್ನಾಗಿ ಭಾಗಪ್ಪ ಅವರನ್ನು ನೇಮಕ ಮಾಡಿ ಮಹಾ ಎಡವಟ್ಟು ಮಾಡಿದೆ. ಕುಡಿದು ಬಂದು ಶಿಕ್ಷಕರಿಗೆ, ವಿದ್ಯಾರ್ಥಿಗಳ ಜೊತೆಗೆ ರೌಡಿ ಶೀಟರ್ ಭಾಗಪ್ಪ ಅಸಭ್ಯ ವರ್ತನೆ ಕೂಡ ತೋರುತ್ತಿದ್ದಾರಂತೆ ಅಂತೆ. ಇದೇ ಕಾರಣಕ್ಕಾಗಿ ಅವರನ್ನು ಅತಿಥಿ ಶಿಕ್ಷಕರ…

Read More

ಬೆಂಗಳೂರು: ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯಗೆ ಇದಿಗ ಸಿಬಿಐ ತನಿಖೆ ಭೀತಿ ಎದುರಾಗಿತ್ತು. ದೂರುದಾರ ಸ್ನೇಹಮಯಿ ಕೃಷ್ಣ ಅವರು ಈ ಒಂದು ಪ್ರಕರಣ ಸಿಬಿಐ ತನಿಖೆಗೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡ ವೇಳೆಯಲ್ಲಿ ಕಾಲಾವಕಾಶ ಕೋರಿದ ಹಿನ್ನಲೆಯಲ್ಲಿ ನವೆಂಬರ್.26ಕ್ಕೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿಕೆ ಮಾಡಿದೆ. ಇಂದು ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ತನಿಖೆಯಲ್ಲಿ ನಂಬಿಕೆಯಿಲ್ಲ. ಸಿಬಿಐ ತನಿಖೆಗೆ ಆದೇಶಿಸುವಂತೆ ಕೇರಿ ಸಲ್ಲಿಸಿದ್ದಂತ ರಿಟ್ ಅರ್ಜಿಯನ್ನು ಹೈ ಕೋರ್ಟ್ ನಲ್ಲಿ ನ್ಯಾ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆಯಲ್ಲಿ ಹೈಕೋರ್ಟ್ ಗೆ ಈ ಪ್ರಕರಣ ಸಂಬಂಧ ವಾದಿಸಲು ಕಾಲಾವಕಾಶ ನೀಡುವಂತೆ ಸಿಎಂ ಸಿದ್ಧರಾಮಯ್ಯ ಪರ ವಕೀಲರು ಕೋರಿದರು. ಈ ಹಿನ್ನಲೆಯಲ್ಲಿ ಹೈಕೋರ್ಟ್ ವಿಚಾರಣೆಯನ್ನು ನ.26ಕ್ಕೆ ಮುಂದೂಡಿದೆ. ಅಂದಹಾಗೇ ಕಳೆದ ಸಪ್ಟೆಂಬರ್ 27ರಂದು ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ತನಿಖೆಯ ಮೇಲೆ ನಂಬಿಕೆ ಇಲ್ಲ ಎಂದು ಅವರು ಹೈಕೋರ್ಟಿಗೆ ಸಿಬಿಐ ತನಿಖೆಗೆ ಆದೇಶ ಕೋರಿ ರಿಟ್…

Read More