Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ : ಟೆಲಿಕಾಂ ವಲಯದ ಕುರಿತು ಐಸಿಐಸಿಐ ಸೆಕ್ಯೂರಿಟೀಸ್ ಮತ್ತು ಸಿಎಲ್ಎಸ್ಎ (CLSA) ಇತ್ತೀಚಿನ ವರದಿಯು ರಿಲಯನ್ಸ್ ಜಿಯೋದ ಪ್ರಗತಿಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಮೂರನೇ ತ್ರೈಮಾಸಿಕದಲ್ಲಿ (Q3FY26) ಜಿಯೋ ಉದ್ಯಮದ ಹೊಂದಾಣಿಕೆಯ ಒಟ್ಟು ಆದಾಯ (AGR – Adjusted Gross Revenue) ಮತ್ತು ಆದಾಯದ ಪಾಲು(Revenue share) ಎರಡರಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸಿದೆ. ಐಸಿಐಸಿಐ ಸೆಕ್ಯೂರಿಟೀಸ್ ಪ್ರಕಾರ, ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ – ಮೂರು ಖಾಸಗಿ ಸಂಸ್ಥೆಯೂ ಸೇರಿ ಸಂಯೋಜಿತ ಎಜಿಆರ್ (AGR) – Q3FY26ರಲ್ಲಿ ಶೇ 2.9ರಷ್ಟು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ (QoQ) ಮತ್ತು ಶೇಕಡಾ 8.9ರಷ್ಟು ವರ್ಷದಿಂದ ವರ್ಷಕ್ಕೆ (YoY) 72,000 ಕೋಟಿ ರೂಪಾಯಿಗೆ ಏರಿದೆ. ಈ ಅವಧಿಯಲ್ಲಿ, ರಿಲಯನ್ಸ್ ಜಿಯೋದ ಎಜಿಆರ್ 32,000 ಕೋಟಿ ರೂಪಾಯಿ ಆಗಿದ್ದು, ಇದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ (QoQ) ಶೇ 3.9ರಷ್ಟು ಮತ್ತು ವರ್ಷಕ್ಕೆ ಶೇ 11.2ರಷ್ಟು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಇದು ಜಿಯೋದ ಎಜಿಆರ್ ಮಾರುಕಟ್ಟೆ ಪಾಲನ್ನು ಶೇ 43ಕ್ಕೆ…
ಬೆಂಗಳೂರು: ಭಾರತೀಯ ಅಡುಗೆ ಮನೆಯಲ್ಲಿ ಶುಂಠಿಗೆ ವಿಶೇಷ ಸ್ಥಾನವಿದೆ. ಚಹಾದ ರುಚಿ ಹೆಚ್ಚಿಸುವುದರಿಂದ ಹಿಡಿದು ಬಿರಿಯಾನಿಯ ಪರಿಮಳದವರೆಗೆ ಶುಂಠಿ ಬೇಕೇ ಬೇಕು. ಆದರೆ, ಈ ಪುಟ್ಟ ಶುಂಠಿಯಲ್ಲಿ ಅಡಗಿರುವ ಔಷಧೀಯ ಗುಣಗಳು ಬೆಟ್ಟದಷ್ಟಿವೆ. ಆಯುರ್ವೇದದಲ್ಲಿ “ಮಹೌಷಧಿ” ಎಂದು ಕರೆಯಲ್ಪಡುವ ಶುಂಠಿಯ ಅದ್ಭುತ ಪ್ರಯೋಜನಗಳ ಮಾಹಿತಿ ಇಲ್ಲಿದೆ. 1. ಜೀರ್ಣಕ್ರಿಯೆಗೆ ರಾಮಬಾಣ ಶುಂಠಿಯು ಜೀರ್ಣರಸಗಳ ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಊಟದ ನಂತರ ಸಣ್ಣ ಶುಂಠಿ ಚೂರನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳು ದೂರವಾಗುತ್ತವೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಕಾರಿ. 2. ರೋಗನಿರೋಧಕ ಶಕ್ತಿಯ ಹೆಚ್ಚಳ ಶುಂಠಿಯಲ್ಲಿ ‘ಜಿಂಜೆರಾಲ್’ (Gingerol) ಎಂಬ ಪ್ರಬಲ ಅಂಶವಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ, ಕೆಮ್ಮು ಮತ್ತು ಗಂಟಲು ನೋವಿನ ಸಂದರ್ಭದಲ್ಲಿ ಶುಂಠಿ ಕಷಾಯ ಅಥವಾ ಶುಂಠಿ ಚಹಾ ಸೇವಿಸುವುದು ತಕ್ಷಣದ ಉಪಶಮನ ನೀಡುತ್ತದೆ. 3. ಉರಿಯೂತ ಮತ್ತು ಕೀಲು ನೋವು ನಿವಾರಣೆ ಶುಂಠಿಯಲ್ಲಿ ಉರಿಯೂತ ವಿರೋಧಿ (Anti-inflammatory) ಗುಣಗಳಿವೆ. ಇದು…
ನವದೆಹಲಿ: ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS), ನರ್ಸಿಂಗ್ ಅಧಿಕಾರಿ ನೇಮಕಾತಿ ಸಾಮಾನ್ಯ ಅರ್ಹತಾ ಪರೀಕ್ಷೆ (NORCET-10) ಅಡಿಯಲ್ಲಿ ಒಟ್ಟು 2,551 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ನರ್ಸಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 16, 2026. ಪ್ರಾಥಮಿಕ ಪರೀಕ್ಷೆ (Stage 1): ಏಪ್ರಿಲ್ 11, 2026. ಮುಖ್ಯ ಪರೀಕ್ಷೆ (Stage 2): ಏಪ್ರಿಲ್ 30, 2026. ವೆಬ್ಸೈಟ್: aiimsexams.ac.in ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ: ವಿದ್ಯಾರ್ಹತೆ: ಮಾನ್ಯತೆ ಪಡೆದ ಸಂಸ್ಥೆಯಿಂದ ಬಿಎಸ್ಸಿ ನರ್ಸಿಂಗ್ / ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಅಥವಾ ಜಿಎನ್ಎಂ (GNM) ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ವಯೋಮಿತಿ: ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷಗಳ ಒಳಗಿರಬೇಕು (ಸರ್ಕಾರಿ ನಿಯಮದಂತೆ ವಯೋಮಿತಿ ಸಡಿಲಿಕೆ ಇರುತ್ತದೆ). ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:…
ಮಹಾರಾಷ್ಟ್ರ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಪ್ರಾಪ್ತ ಬಾಲಕಿಯ ಪೋಷಕರು ಉಲ್ಟಾ ಹೊಡೆದಿದ್ದು, ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ಅಪ್ರಾಪ್ತ ಬಾಲಕಿ ಪೋಷಕರಿಂದ ವೀಡಿಯೋ ಹೇಳಿಕೆ ರಿಲೀಸ್ ಮಾಡಲಾಗಿದ್ದು, ನಮ್ಮ ಮಗಳ ಜನ್ಮದಿನ ಹಿನ್ನಲೆ ನಾವು ಮಠಕ್ಕೆ ಹೋಗಿದ್ವಿ. ಮಲ್ಲಿಕಾರ್ಜುನ ಮುತ್ಯಾ ಅಶೀರ್ವಾದ ಪಡೆಯಲು ಹೋಗಿದ್ವಿ. ನಾವು ಮಲ್ಲಿಕಾರ್ಜುನ ಮುತ್ಯಾ ಅವರ ಭಕ್ತರು ಇದ್ದೇವೆ ಎಂದಿದ್ದಾರೆ. ಕಳೆದ 3-4 ವರ್ಷಗಳಿಂದ ನಾವು ಮಠಕ್ಕೆ ಹೋಗುತ್ತಿದ್ದೆವು. ಮಲ್ಲಿಕಾರ್ಜುನ ಮುತ್ಯಾ ನಮಗೆ ಆಶೀರ್ವಾದ ಮಾಡಿದರು. ನಮ್ಮ ಮಗಳಿಗೂ ಕೂಡ ಮುತ್ಯಾ ಅಶೀರ್ವಾದ ಮಾಡಿದರು. ಅದನ್ನು ನಾವು ವೀಡಿಯೋ ಮಾಡಿ ಸ್ಟೇಟಸ್ ಗೆ ಹಾಕಿದ್ದೆವು ಎಂದು ಹೇಳಿದ್ದಾರ. ನಾವು ಸ್ಟೇಟಸ್ ಗೆ ಹಾಕಿದಂತ ವೀಡಿಯೋವನ್ನು ಕೆಲ ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ. ಇದರಲ್ಲಿ ಮಲ್ಲಿಕಾರ್ಜುನ ಮುತ್ಯಾ ಅವರದ್ದು ಏನೂ ತಪ್ಪಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ. https://kannadanewsnow.com/kannada/no-need-to-pay-extra-charges-for-changes-within-48-hours-of-booking-dgca/ https://kannadanewsnow.com/kannada/massive-protest-in-delhi-by-youth-congress-state-workers-led-by-manjunath-gowda-participate/
ನವದೆಹಲಿ: ವಿಮಾನ ಪ್ರಯಾಣಿಕರ ಹಿತದೃಷ್ಟಿಯಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಟಿಕೆಟ್ ಮರುಪಾವತಿ (Refund) ನಿಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಇನ್ಮುಂದೆ ಟಿಕೆಟ್ ಬುಕ್ ಮಾಡಿದ 48 ಗಂಟೆಗಳ ಒಳಗೆ ಪ್ರಯಾಣಿಕರು ಯಾವುದೇ ಹೆಚ್ಚುವರಿ ರದ್ದತಿ ಶುಲ್ಕವಿಲ್ಲದೆ ಟಿಕೆಟ್ ಬದಲಾಯಿಸಲು ಅಥವಾ ರದ್ದುಗೊಳಿಸಲು ಅವಕಾಶ ನೀಡಲಾಗಿದೆ. 1. 48 ಗಂಟೆಗಳ ‘ಲುಕ್-ಇನ್’ ಆಯ್ಕೆ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ ಮೊದಲ 48 ಗಂಟೆಗಳ ಕಾಲಾವಧಿಯನ್ನು ‘Look-in option’ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಟಿಕೆಟ್ ರದ್ದು ಮಾಡಿದರೆ ಯಾವುದೇ ಹೆಚ್ಚುವರಿ ದಂಡ ಇರುವುದಿಲ್ಲ. ಷರತ್ತು: ಈ ಸೌಲಭ್ಯವು ದೇಶೀಯ ವಿಮಾನಗಳಿಗೆ ಪ್ರಯಾಣದ 7 ದಿನ ಮುಂಚಿತವಾಗಿ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ 15 ದಿನಗಳ ಮುಂಚಿತವಾಗಿ ಬುಕ್ ಮಾಡಿದ ಟಿಕೆಟ್ಗಳಿಗೆ ಮಾತ್ರ ಅನ್ವಯಿಸುತ್ತದೆ. 2. ಹೆಸರು ತಿದ್ದುಪಡಿಗೆ ಹಣ ನೀಡಬೇಕಿಲ್ಲ ಒಂದೊಮ್ಮೆ ಟಿಕೆಟ್ ಬುಕ್ ಮಾಡುವಾಗ ಹೆಸರಿನಲ್ಲಿ ಅಕ್ಷರ ದೋಷಗಳಾಗಿದ್ದರೆ, ಅದನ್ನು 24 ಗಂಟೆಯೊಳಗೆ ಏರ್ಲೈನ್ ಗಮನಕ್ಕೆ ತಂದರೆ ಯಾವುದೇ ಶುಲ್ಕವಿಲ್ಲದೆ ಸರಿಪಡಿಸಿಕೊಡಬೇಕು.…
ನವದೆಹಲಿ: ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ಬಂಧನವನ್ನು ಖಂಡಿಸಿ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ರಾಜ್ಯದ ನೂರಾರು ಕಾರ್ಯಕರ್ತರು ದೆಹಲಿಗೆ ತೆರಳಿ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಫೆಬ್ರವರಿ 20 ರಂದು ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್’ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆನಗ್ನ ಪ್ರತಿಭಟನೆ ನಡೆಸಿದ್ದರು. ಈ ಘಟನೆಯ ಹಿಂದೆ ಉದಯ್ ಭಾನು ಚಿಬ್ ಅವರ ಕೈವಾಡವಿದೆ ಎಂದು ಆರೋಪಿಸಿ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಇದನ್ನು “ಕೇಂದ್ರ ಸರ್ಕಾರದ ರಾಜಕೀಯ ಸೇಡಿನ ನಡೆ” ಎಂದು ಟೀಕಿಸಿದ ಮಂಜುನಾಥ್ ಗೌಡ ಮತ್ತು ಕಾರ್ಯಕರ್ತರ ತಂಡ, ದೆಹಲಿಯ ಬೀದಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಫೆಬ್ರವರಿ 23 ಮತ್ತು 24 ರಂದು ನಡೆದ ಈ ಉಗ್ರರೂಪದ ಹೋರಾಟದಲ್ಲಿ ಕಾರ್ಯಕರ್ತರು ರೈಲು ಹಳಿಗಳ ಮೇಲೆ ನಿಂತು ‘ರೈಲು…
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ಗ್ಯಾಸ್ ಛೇಂಬರ್ ಆಗದಂತೆ ಕ್ರಮ ವಹಿಸಲು ಶೀಘ್ರವೇ ನಗರದ ಎಲ್ಲ 28 ಶಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರ ಕೋರಿಕೆಯ ಮೇರೆಗೆ ಅವರೊಂದಿಗೆ ಇಂದು ಉನ್ನತಾಧಿಕಾರಿಗಳ ಸಭೆ ನಡೆಸಿದ ಸಚಿವರು, ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳ ಸಹಕಾರದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಸುರೇಶ್ ಕುಮಾರ್ ವಿಷಯ ಪ್ರಸ್ತಾಪಿಸಿ ಬೆಂಗಳೂರು ನಗರದಲ್ಲಿ ರಸ್ತೆಯಲ್ಲಿನ ಧೂಳಿನಿಂದಾಗಿ ವಾಯು ಗುಣಮಟ್ಟ ಕ್ಷೀಣಿಸುತ್ತಿದ್ದು, ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವೈದ್ಯರು ಬೆಂಗಳೂರು ಹೊರ ವಲಯಕ್ಕೆ ಹೋಗುವಂತೆ ಸಲಹೆ ನೀಡುತ್ತಿದ್ದಾರೆ. ವಾಯು ಗುಣಮಟ್ಟ ಕಾಪಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದರು. ಸ್ಥಳೀಯ ಸಂಸ್ಥೆಗೆ ನೋಟಿಸ್ ನೀಡಲು ಸೂಚನೆ: ಇದಕ್ಕೆ ಸ್ಪಂದಿಸಿದ ಪರಿಸರ…
ಬೆಂಗಳೂರು: “ಪ್ರಕೃತಿಯ ಅದ್ಭುತ ಕೊಡುಗೆ” ಎಂದೇ ಕರೆಯಲ್ಪಡುವ ಪಪ್ಪಾಯಿ ಹಣ್ಣು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಮೂಲ್ಯವಾದುದು. ಸುಲಭವಾಗಿ ಸಿಗುವ ಮತ್ತು ಅಗ್ಗದ ಬೆಲೆಯ ಈ ಹಣ್ಣಿನಲ್ಲಿ ಅಡಗಿರುವ ಔಷಧೀಯ ಗುಣಗಳು ಹತ್ತಾರು. ಕೇವಲ ರುಚಿಗಷ್ಟೇ ಅಲ್ಲದೆ, ದೇಹದ ಒಟ್ಟಾರೆ ಆರೋಗ್ಯ ಸುಧಾರಿಸಲು ಪಪ್ಪಾಯಿ ಹೇಗೆ ಸಹಕಾರಿ ಎಂಬ ಮಾಹಿತಿ ಇಲ್ಲಿದೆ. 1. ಜೀರ್ಣಕ್ರಿಯೆಯ ಮಿತ್ರ ಪಪ್ಪಾಯಿಯಲ್ಲಿರುವ ‘ಪಪೈನ್’ ಎಂಬ ಕಿಣ್ವವು ಪ್ರೋಟೀನ್ಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುವವರಿಗೆ ಪಪ್ಪಾಯಿ ಹಣ್ಣು ಒಂದು ನೈಸರ್ಗಿಕ ಮದ್ದಾಗಿದೆ. ಇದು ಹೊಟ್ಟೆಯ ಉರಿಯನ್ನು ಕಡಿಮೆ ಮಾಡಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. 2. ರೋಗನಿರೋಧಕ ಶಕ್ತಿ ಹೆಚ್ಚಳ ಪಪ್ಪಾಯಿಯಲ್ಲಿ ವಿಟಮಿನ್ ಸಿ (Vitamin C) ಹೇರಳವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶೀತ, ಕೆಮ್ಮು ಮತ್ತು ಇತರ ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ. ದೈನಂದಿನ ಆಹಾರದಲ್ಲಿ ಪಪ್ಪಾಯಿ ಬಳಸುವುದರಿಂದ ದೇಹವು ಸದೃಢವಾಗುತ್ತದೆ. 3. ಕಣ್ಣಿನ ಆರೋಗ್ಯಕ್ಕೆ ಸಹಕಾರಿ ಪಪ್ಪಾಯಿಯಲ್ಲಿ ವಿಟಮಿನ್…
ಕೆಎನ್ಎನ್ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ನಾವು ಪಪ್ಪಾಯಿ ಹಣ್ಣನ್ನು ತಿಂದ ನಂತರ ಅದರ ಬೀಜಗಳನ್ನು ಕಸಕ್ಕೆ ಎಸೆಯುತ್ತೇವೆ. ಆದರೆ, ಆ ಕಪ್ಪು ಬೀಜಗಳಲ್ಲಿ ಅಡಗಿರುವ ಆರೋಗ್ಯದ ರಹಸ್ಯ ತಿಳಿದರೆ ನೀವು ಖಂಡಿತ ಆಶ್ಚರ್ಯಪಡುತ್ತೀರಿ. ಪಪ್ಪಾಯಿ ಬೀಜಗಳು ಕೇವಲ ತ್ಯಾಜ್ಯವಲ್ಲ, ಅವು ದೇಹದ ಅನೇಕ ಕಾಯಿಲೆಗಳಿಗೆ ಮದ್ದಾಗಬಲ್ಲ ಅದ್ಭುತ ಶಕ್ತಿಯನ್ನು ಹೊಂದಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪಪ್ಪಾಯಿ ಬೀಜಗಳಿಂದ ಸಿಗುವ ಪ್ರಮುಖ ಪ್ರಯೋಜನಗಳು ಇಲ್ಲಿವೆ: 1. ಜೀರ್ಣಕ್ರಿಯೆಗೆ ರಾಮಬಾಣ ಪಪ್ಪಾಯಿ ಬೀಜಗಳಲ್ಲಿ ‘ಪಪೈನ್’ ಎಂಬ ಕಿಣ್ವ ಸಮೃದ್ಧವಾಗಿದೆ. ಇದು ನಾವು ಸೇವಿಸುವ ಕಠಿಣ ಪ್ರೋಟೀನ್ಗಳನ್ನು ಸುಲಭವಾಗಿ ಒಡೆಯಲು ಸಹಾಯ ಮಾಡುತ್ತದೆ. ಅಜೀರ್ಣ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇರುವವರಿಗೆ ಈ ಬೀಜಗಳು ಅತ್ಯುತ್ತಮ ಪರಿಹಾರ ನೀಡುತ್ತವೆ. 2. ರೋಗನಿರೋಧಕ ಶಕ್ತಿ ಹೆಚ್ಚಳ (Antioxidants) ಈ ಬೀಜಗಳಲ್ಲಿ ಫ್ಲೇವನಾಯ್ಡ್ ಮತ್ತು ಫೀನಾಲಿಕ್ ಸಂಯುಕ್ತಗಳಂತಹ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿವೆ. ಇವು ದೇಹದಲ್ಲಿರುವ ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸಿ, ನಮ್ಮನ್ನು ರೋಗಗಳಿಂದ ಮುಕ್ತವಾಗಿಡಲು ಮತ್ತು ರೋಗನಿರೋಧಕ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡಿರುವ ಪಹಣಗಳಲ್ಲಿ ಖಾತಾ ಬದಲಾವಣೆಗೆ ಅವಕಾಶ ಕಲ್ಪಿಸಿ ಆದೇಶಿಸಿದೆ. ಆ ಮೂಲಕ ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಗೊಂಡು ಪಹಣಗಳಲ್ಲಿ ಖಾತೆ ಬದಲಾವಣೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕೃಷಿ ಜಮೀನಿನ ಪಹಣಿಗಳನ್ನು ಭೂಮಿ ತಂತ್ರಾಂಶದ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಒಂದು ಸರ್ವೆ ನಂಬರಿನಲ್ಲಿ ಕೃಷಿ ಉದ್ದೇಶದಿಂದ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಯಾದ ನಂತರ ಸದರಿ ಪಹಣಿಯಲ್ಲಿ NA. (ಕೃಷಿಯೇತರ) ಎಂದು ಭೂಮಿ ತಂತ್ರಾಂಶದ ಮೂಲಕ ಫ್ಲಾಗ್ ಮಾಡಲಾಗುತ್ತಿದೆ. ಸದರಿ ಕೃಷಿಯೇತರ ಪಹಣಿಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯದಂತೆ ಉಲ್ಲೇಖ(1) ರ ಪತ್ರದ ರೀತ್ಯಾ ನಿರ್ಬಂಧ ಅಳವಡಿಸಲಾಗಿರುವುದು ಗಮನಾರ್ಹ ಸಂಗತಿ ಎಂದಿದೆ. ಮುಂದುವರೆದು ಆಸ್ತಿ ಗುರುತಿನ ಸಂಖ್ಯೆ ಮತ್ತು ಭೂಮಿ ಪಹಣಿ ಆಧಾರದ ಮೇಲೆ ನಿಯಮಬಾಹಿರವಾಗಿ ಎರಡೂ ಕಡೆ ಕ್ರಯದ ವಹಿವಾಟು ನಡೆಯುತ್ತಿರುವುದರಿಂದ ಬಹುದಾವಾ ಪ್ರಕರಣಗಳು ಹೆಚ್ಚಾಗುವ ಸಂಭವವಿರುವುದನ್ನು ಮನಗಂಡು ಭೂಪರಿವರ್ತಿತ ಪಹಣಿ ಮತ್ತು ಇ-ಖಾತಾ ಎರಡೂ ದಾಖಲೆಗಳ ಆಧಾರದ…














