Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಮಾಸಿಕ ವೇತನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರು 65 ವರ್ಷ ವಯೋಮಾನವನ್ನು ಪೂರೈಸಿ ಕರ್ತವ್ಯದಿಂದ ಬಿಡುಗಡೆ ಹೊಂದಿದವರಿಗೆ/ಸೇವೆಯಲ್ಲಿರುವಾಗಲೇ ಮೃತರಾದಲ್ಲಿ, ಗರಿಷ್ಠ ರೂ.5.00 ಲಕ್ಷಗಳವರೆಗೆ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು ನಡವಳಿಯನ್ನು ಹೊರಡಿಸಿದ್ದು, ಕರ್ನಾಟಕ ಗ್ರಾಮ ಕಛೇರಿಗಳ ರದ್ದತಿ ಕಾಯ್ದೆ 1961 ದಿನಾಂಕ:01.02.1963ರಿಂದ ಜಾರಿಗೆ ಬಂದಿದ್ದು, ಸದರಿ ಅಧಿನಿಯದನ್ವಯ ಕಂದಾಯ ಇಲಾಖೆಯಲ್ಲಿ ವಂಶಪಾರಂಪರ್ಯವಾಗಿ ಮುಂದುವರೆಯುತ್ತಿದ್ದ ಶ್ಯಾನುಭೋಗರು, ಪಟೇಲರು ಹಾಗೂ ಇನ್ನು ಮುಂತಾದ ಎಲ್ಲಾ ಕೆಳಹಂತದ ಗ್ರಾಮ ಅಧಿಕಾರಿ ಹುದ್ದೆಗಳನ್ನು ರದ್ದುಪಡಿಸಿ, ಆಡಳಿತಾತ್ಮಕ ಅನುಕೂಲಕ್ಕಾಗಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಹಾಯ ಮಾಡಲು ಗ್ರಾಮಸಹಾಯಕರ ಹುದ್ದೆಗಳನ್ನು ತಾತ್ಕಾಲಿಕವಾಗಿ ಸೃಜಿಸಲಾಗಿರುತ್ತದೆ. ಕಂದಾಯ ಇಲಾಖೆಯಲ್ಲಿ 8,941 ಗ್ರಾಮ ಸಹಾಯಕರ ಹುದ್ದೆಗಳನ್ನು ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ ಪೆಂಡರಿ ಆಧಾರದ ಮೇಲೆ ತಾತ್ಕಾಲಿಕವಾಗಿ ಸೃಜಿಸಿ ಆದೇಶಸಲಾಗಿದೆ. ಮೇಲೆ (2)ರಲ್ಲಿ ಓದಲಾದ ಆದೇಶದಲ್ಲಿ 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ಖಾಯಂ…
ಬೆಂಗಳೂರು: ಕರ್ನಾಟಕ ರಾಜ್ಯದ ಮಹಿಳೆಯರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ದಿಗೋಳಿಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಉದ್ದಿಮೆದಾರರಿಗಾಗಿ ಗೃಹಲಕ್ಷ್ಮೀ ಡಿಜಿಟಲ್ ವೇದಿಕೆಯ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಜನವರಿ 9,2026ರಂದು ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೇಟಿಂಗ್ ಆ್ಯಪ್ಅನ್ನು ಲಾಂಚ್ ಮಾಡಲಾಗಿರುತ್ತದೆ. ಆ್ಯಪ್ನಲ್ಲಿ ಮಹಿಳಾ ಉದ್ದಿಮಿಗಳ ನೋಂದಣಿ ಕಾರ್ಯಕೈಗೊಳ್ಳಲು ಮಹಿಳಾ ಉದ್ದಿಮೆದಾರರು ತಾವು ತಯಾರಿಸುವ ಉತ್ಪನ್ನಗಳ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಸಲ್ಲಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/court-fines-insurance-company-rs-25000-for-not-transferring-car-insurance-money/ https://kannadanewsnow.com/kannada/krishna-river-water-for-kolar-chikkaballapur-districts-discussion-with-andhra-cm-soon-hdk/
ಶಿವಮೊಗ್ಗ: ಸಾಗರದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ನಿನ್ನೆಯಿಂದ ಆರಂಭಿಸಲಾಗಿತ್ತು. ಮೊದಲ ದಿನ ಕೊಂಚ ಇಳಿಕೆಯಲ್ಲಿದ್ದಂತ ಪ್ರವಾಸಿಗರ ಸಂಖ್ಯೆ, ಇಂದು ದಿಢೀರ್ ಏರಿಕೆಯಾಗಿ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಇಂದು ಸಾಗರದಲ್ಲಿ ಹೆಲಿ ಟೂರಿಸಂಗೆ ಜನರು ಮುಗಿ ಬಿದ್ದರು. ಹೌದು.. ಸಾಗರದಲ್ಲಿ ಮಾರಿ ಜಾತ್ರೆಯ ಪ್ರಯುಕ್ತ ಕಿರಣ್ ದೊಡ್ಮನಿ ಆಯೋಜಿಸಿರುವಂತ ಹೆಲಿ ಟೂರಿಸಂ ಪ್ರವಾಸಕ್ಕೆ ಸಾಗರೀಕರು ಮುಗಿ ಬಿದ್ದಿದ್ದಾರೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಆರಂಭಗೊಂಡ ಹೆಲಿಕಾಪ್ಟರ್ ಪ್ರವಾಸಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆಯಿತು. ಸಾಗರದ ನೂರಾರು ಸ್ನೇಹಿತರು, ಕುಟುಂಬಸ್ಥರು ನಾಮುಂದು, ತಾಮುಂದು ಎನ್ನುವಂತೆ ಹೆಲಿಕಾಪ್ಟರ್ ಪ್ರವಾಸ ಮಾಡಿ, ಸಾಗರವನ್ನು ಆಗಸದಿಂದ ನೋಡಿ ಬಂದರು. ಇಂದು ಯಾರೆಲ್ಲ ಹೆಲಿಕಾಪ್ಟರ್ ರೈಡಿಂಗ್ ಗೊತ್ತಾ? ಸಾಗರದ ಕಾರು ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಗಿರೀಶ್ ಕೋವಿ, ಉದ್ಯಮಿ ಪುರುಷೋತ್ತಮ್, ಶಾಸಕರ ಸಹಾಯಕ ಅವಿನಾಶ್, ಡ್ರೈವರ್ ಶಿವು ಹೊಡಹೊಸಳ್ಳಿ, ನಾರಾಯಣಪ್ಪ ಸೂರನಗದ್ದೆ, ಸಿಗಂದೂರು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಟ್ರಸ್ಟಿ ಭೀರಪ್ಪ, ಬಿಜೆಪಿ ತಾಲ್ಲೂಕು…
ಬಳ್ಳಾರಿ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಯ 110/11ಕೆ.ವಿ ಬಿಸಿಲಹಳ್ಳಿ ವಿದ್ಯುತ್ ಉಪ-ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಫ್-63 ಹಾಗು ಎಫ್-64 ಫೀಡರ್ ಗಳಲ್ಲಿ ಲಿಂಕ್-ಲೈನ್ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಫೆ.09 ರಂದು ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-63 ವ್ಯಾಪ್ತಿಯ ರೂಪನಗುಡಿ, ಗ್ರಾಂಡ್ ಫಂಕ್ಷನ್ ಹಾಲ್, ವೆಂಕಟರಮಣ ನಗರ, ನಬೀ ಕಾಲೋನಿ, ಅಂಜಿನಪ್ಪ ನಗರ, ಶ್ರೀರಾಂಪುರ ಕಾಲೋನಿ, ಗೋನಾಳ್, ವರಬಸಪ್ಪ ಗುಡಿ ಹಾಗೂ ಮುಂತಾದ ಏರಿಯಾಗಳು. ಎಫ್-64 ವ್ಯಾಪ್ತಿಯ ಎಸ್.ಆರ್.ಎಂ ಲೇ ಔಟ್, ಸಂಸ್ಕೃತಿ ಶಾಲೆ, ವಿಶಾಲ ನಗರ, ಹನುಮಾನ್ ನಗರ, ಬಿ.ಗೋನಾಳ್, ಹೌಸಿಂಗ್ ಬೋರ್ಡ್, ವೆಂಕಟಲಕ್ಷಿö್ಮ ನಗರ, ಅಂಜಿನಪ್ಪ ನಗರ, ಎಸ್.ಆರ್.ಪಿ ಕಾಲೋನಿ, ಎಮ್.ಜಿ ರಸ್ತೆ, ಅನಂತಪುರ ರಸ್ತೆ, ಅಗಡಿ ಮಾರೆಪ್ಪ ಕಾಂಪೌಂಡ್, ದತ್ತ ಸಾಯಿ ನಗರ, ಆಶ್ರಯ ಕಾಲೋನಿ. ಎಫ್-52 ವ್ಯಾಪ್ತಿಯ ತಿರುಮಲ ನಗರ ಕ್ಯಾಂಪ್, ಶಂಕರಬಂಡೆ, ಇಬ್ರಾಹಿಂಪುರ, ಬಬ್ಬುಕುಂಟೆ, ಬುರನಾಯಕಹಳ್ಳಿ ಐ.ಪಿ ಫೀಡರ್ ಏರಿಯಾಗಳು.…
ಧಾರವಾಡ : ಧಾರವಾಡದ ಹಿರಿಯ ವಕೀಲರಾದ ಪ್ರೀತಮ್ ರೇಗೆ ಅವರು ಹಳೆ ಕಾರನ್ನು ಜೂನ್-2025 ರಲ್ಲಿ ಖರೀಧಿಸಿದ್ದರು. ಆ ವಾಹನದ ಆರ್.ಸಿ. ಮತ್ತು ವಿಮಾ ಪಾಲಸಿ ಹಳೆಯ ಮಾಲೀಕರ ಹೆಸರಿನಲ್ಲಿದ್ದವು. ಅದು ರಿಲೈಯನ್ಸ್ ಜನರಲ್ ವಿಮೆ ಯಾಗಿತ್ತು. ಆ ವಿಮೆ ಮಾರ್ಚ- 2026ರವರೆಗೆ ಚಾಲ್ತಿಯಿತ್ತು. ವಾಹನ ಖರೀಧಿಸಿದ ನಂತರ ಅದರ ಆರ್.ಸಿ. ಯನ್ನು ರೇಗೆಯವರು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಅದರ ಆಧಾರದ ಮೇಲೆ ಕಾರಿನ ವಿಮಾ ಪಾಲಸಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಡುವಂತೆ ಕಲಂ 157 ಮೋಟಾರ ವಾಹನ ಕಾಯ್ದೆ ಅಡಿವಿಮಾ ಕಂಪನಿಗೆ ಅರ್ಜಿ ಹಾಕಿದ್ದರು. ವರ್ಗಾವಣೆಗೆ ಅಗತ್ಯವಿರುವ ಶುಲ್ಕ ಕಟ್ಟಿ ಹಲವುಬಾರಿವಿನಂತಿಸಿದರೂ ವಿಮಾ ಕಂಪನಿಯವರು ಅರ್ಜಿದಾರರ ಹೆಸರಿಗೆ ಕಾರಿನ ವಿಮೆಯನ್ನು ವರ್ಗಾವಣೆಮಾಡಲಿಲ್ಲ. ಅವರು ಲೀಗಲ್ ನೋಟಿಸು ಕಳುಹಿಸಿದರೂ ರಿಲೈಯನ್ಸ್ ಜನರಲ್ ವಿಮಾ ಕಂಪನಿಯವರು ಅರ್ಜಿದಾರ ರೇಗೆಯವರ ಹೆಸರಿಗೆ ವರ್ಗಾವಣೆ ಮಾಡಲಿಲ್ಲ. ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಸದರಿ…
ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ತರುವ ಬಗ್ಗೆ ಶೀಘ್ರದಲ್ಲಿಯೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. ಕೋಲಾರದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಈ ಜಿಲ್ಲೆಗಳಿಗೆ ನದಿಯ ನೀರು ಕೊಡುತ್ತೇವೆಂದು ಹೇಳಿ ಎತ್ತಿನಹೊಳೆ ಯೋಜನೆ ಮಾಡಿದರು. ಆದರೆ ಬೆಂಗಳೂರಿನ ರೊಚ್ಚು ನೀರು ಕೊಟ್ಟರು. ಮೂರನೇ ಹಂತದ ಶುದ್ಧೀಕರಣ ಮಾಡಿ ಎಂದರೂ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷ್ಣಾ ನದಿಯ ನೀರು ಬಿಟ್ಟರೆ ನಮಗೆ ಬೇರೆ ದಾರಿ ಇಲ್ಲ ಎಂದು ಎಂದರು. ಈ ಜಿಲ್ಲೆಗೆ ಕೃಷ್ಣಾ ನೀರು ತರುವ ಬಗ್ಗೆ ಸಂಸದರಾದ ಮಲ್ಲೇಶ್ ಬಾಬು ಅವರು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನನ್ನ ಬೆಂಬಲವೂ ಇದೆ. ಕೃಷ್ಣ ನದಿ ನೀರನ್ನು ಹರಿಸುವ ಕುರಿತು ಮಲ್ಲೇಶ್ ಬಾಬು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸ ಸಾಧಿಸಬೇಕಿದೆ.…
ಗುಜರಾತ್ : 12 ನೇ ತರಗತಿಯ ಪರೀಕ್ಷೆಗೆ ತಡವಾಗಿ ಬಂದಿದ್ದಕ್ಕಾಗಿ ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ಕೋಪಗೊಂಡು, ತನ್ನ ನಡವಳಿಕೆಯನ್ನು ಪ್ರಶ್ನಿಸಿದಂತ ಮಹಿಳಾ ಮೇಲ್ವಿಚಾರಕಿಗೆ ಕಪಾಳಮೋಕ್ಷ ಮಾಡಿದಂತ ಘಟನೆ ನಡೆದಿದೆ. ಇದಷ್ಟೇ ಅಲ್ಲದೇ ವಿದ್ಯಾರ್ಥಿಯು ತನ್ನ ತಂದೆ ಹಾಗೂ ಸ್ನೇಹಿತರು, ಕುಟುಂಬಸ್ಥರೊಂದಿಗೆ ಶಾಲೆಗೆ ಮರಳಿ, ನೀವು ಒಬ್ಬಂಟಿಯಾಗಿ ತೆರಳುವಾಗ ನಿಮಗೊಂದು ಗತಿ ಕಾಣಿಸುವುದಾಗಿ ಬೆದರಿಕೆ ಹಾಕಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಜನವರಿ 24 ರಂದು ನಡೆದ ಕಪಾಳಮೋಕ್ಷದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆದ ನಂತರ ಆಕ್ರೋಶದ ನಡುವೆ, ಪೊಲೀಸರು ಆರೋಪಿಯನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಘಟನೆಗಳ ಅನುಕ್ರಮವನ್ನು ಅರ್ಥಮಾಡಿಕೊಳ್ಳಲು ಪೊಲೀಸರು ಅಪರಾಧವನ್ನು “ಪುನರ್ನಿರ್ಮಿಸಿದ್ದಾರೆ” ಎಂದು ಪೊಲೀಸ್ ಇನ್ಸ್ಪೆಕ್ಟರ್ ಅಂಕುರ್ ಚೌಧರಿ ಹೇಳಿದ್ದಾರೆ. ಇದು ಜನವರಿ 24 ರಂದು ಪಂಚಮಹಲ್ ಜಿಲ್ಲೆಯ ಶೆಹ್ರಾ ಪಟ್ಟಣದ ಎಸ್ ಜೆ ಡೇವ್ ಪ್ರೌಢಶಾಲೆಯಲ್ಲಿ ನಡೆದ ಘಟನೆಗೆ ಕಾರಣವಾಯಿತು. ಫೆಬ್ರವರಿ 3 ರಂದು ಎಫ್ಐಆರ್ ದಾಖಲಿಸಲಾಗಿದೆ. ನಂತರ 18 ವರ್ಷದ ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ…
ಫರಿದಾಬಾದ್: ಶನಿವಾರ ಫರಿದಾಬಾದ್ನ ಸೂರಜ್ಕುಂಡ್ ಜಾತ್ರೆಯಲ್ಲಿ ಸುನಾಮಿ ಸ್ವಿಂಗ್ ಕುಸಿದು ಬಿದ್ದ ಪರಿಣಾಮ ಒಬ್ಬ ಪೊಲೀಸ್ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಉಯ್ಯಾಲೆ ಮುರಿದು ಹಲವಾರು ಸಂದರ್ಶಕರು ಗಾಯಗೊಂಡರು. ಗಾಯಾಳುಗಳನ್ನು ರಕ್ಷಿಸಲು ಧಾವಿಸಿದ ಪೊಲೀಸ್ ಇನ್ಸ್ಪೆಕ್ಟರ್ ಗಂಭೀರ ಗಾಯಗೊಂಡರು. ನಂತರ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಪ್ರಸಾದ್ ಸಾವನ್ನಪ್ಪಿದರು. ಅಪಘಾತದಲ್ಲಿ ಒಟ್ಟು 13 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಪ ಆಯುಕ್ತರು, ಪ್ರವಾಸೋದ್ಯಮ ವ್ಯವಸ್ಥಾಪಕ ನಿರ್ದೇಶಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಅಧಿಕಾರಿಗಳು ಘಟನೆಯ ನಂತರ ಸ್ಥಳಕ್ಕೆ ತಲುಪಿದರು. ಹೆಚ್ಚಿನ ಅನಾಹುತಗಳನ್ನು ತಡೆಗಟ್ಟಲು ಆ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಇದಕ್ಕೂ ಮೊದಲು, ಬಲವಾದ ಗಾಳಿಯಿಂದಾಗಿ ಫುಡ್ ಕೋರ್ಟ್ನ ಗೇಟ್ ಬಿದ್ದಿದೆ ಎಂದು ವರದಿಯಾಗಿದೆ. ಅಧಿಕಾರಿಗಳು ಸ್ಥಳದಲ್ಲಿದ್ದು, ಪರಿಸ್ಥಿತಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. https://kannadanewsnow.com/kannada/professor-who-sexually-harassed-student-in-sagar-gets-severe-punishment/ https://kannadanewsnow.com/kannada/good-news-for-b-khata-site-owners-in-bengaluru-a-khata-conversion-is-now-even-easier/
ಶಿವಮೊಗ್ಗ: ಜಿಲ್ಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದಂತ ಪ್ರಾಧ್ಯಾಪಕನಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿಕೊಂಡು ಮನಬಂದಂತೆ ಥಳಿಸಿರುವಂತ ಘಟನೆ ಸಾಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಕೊಳಗಿಬೀಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದಂತ ಕಾಲೇಜು ಪ್ರಾಧ್ಯಾಪಕ ಎಂ.ಆರ್ ಆದರ್ಶ್ ಎಂಬುವರಿಗೆ ಥಳಿಸಲಾಗಿದೆ. ಈ ಹಿಂದೆಯೂ ಸಹ ಶಿರಸಿಯಲ್ಲೂ ಇದೇ ರೀತಿ ಮಾಡಿ ಪ್ರಾಧ್ಯಾಪಕ ಎಂ.ಆರ್ ಆದರ್ಶ್ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಶಿರಸಿಯಿಂದ ಸಾಗರಕ್ಕೆ ಪ್ರಾಧ್ಯಾಪಕ ಆದರ್ಶ್ ನನ್ನು ವರ್ಗಾವಣೆ ಮಾಡಲಾಗಿತ್ತು. ಆದರೇ ಇಲ್ಲಿಗೆ ಬಂದಲೂ ತನ್ನ ಚಾಳಿಯನ್ನು ಪ್ರಾಧ್ಯಾಪಕ ಎಂ.ಆರ್ ಆದರ್ಶ್ ಬಿಟ್ಟಿರಲಿಲ್ಲ. ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದನಂತೆ. ಈ ವಿಷಯವನ್ನು ವಿದ್ಯಾರ್ಥಿನಿ ತನ್ನ ಪೋಷಕರಿಗೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಕಾಲೇಜು ಬಳಿಗೆ ತೆರಳಿದಂತ ವಿದ್ಯಾರ್ಥಿನಿಯ ಪೋಷಕರು, ವಿದ್ಯಾರ್ಥಿಗಳು ಸೇರಿಕೊಂಡು ಪ್ರಾಥ್ಯಾಪಕ ಎಂ.ಆರ್ ಆದರ್ಶ್ ಅವರನ್ನು ಮನಬಂದಂತೆ ಥಳಿಸಿದ್ದಾರೆ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದಂತ ಪ್ರಾಧ್ಯಾಪಕನಿಗೆ ಸಖತ್ ಗೂಸಾ ನೀಡಿ, ಬಿಸಿ ಮುಟ್ಟಿಸಿದ್ದಾರೆ.
ಹಾವೇರಿ: ಜಿಲ್ಲೆಯಲ್ಲಿ ತಾನು ಮದುವೆಯಾಗಿದ್ದಂತ ಮಾವನ ಊರಲ್ಲಿ ಪೊಲೀಸ್ ಪೇದೆಯೇ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿರುವಂತ ಘಟನೆ ಹಾವೇರಿಯ ಹಿರೇಕೆರೂರಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ಠಾಣೆಯ ಪೊಲೀಸರಿಂದ ಪೇದೆ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮದುವೆಯಾಗಿದ್ದಂತ ಊರಿನಲ್ಲಿ ಕಾನ್ಸ್ ಟೇಬಲ್ ಪ್ರದೀಪ್ ನಾಯಕ್ ಕಳ್ಳತನಕ್ಕೆ ಇಳಿದಿದ್ದರು. ಕಳ್ಳತನ ಹೆಚ್ಚಾದ ಹಿನ್ನಲೆಯಲ್ಲಿ ಊರಿನ ಗ್ರಾಮಸ್ಥರು ಹಿರೇಕೆರೂರು ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿದಂತ ಪೊಲೀಸರು ಕಾನ್ಸ್ ಟೇಬಲ್ ಪ್ರದೀಪ್ ನಾಯಕ್ ಸೇರಿದಂತೆ ಐವರು ಕಳ್ಳರನ್ನು ಬಂಧಿಸಿದ್ದಾರೆ. https://kannadanewsnow.com/kannada/upi-service-to-be-implemented-in-malaysia-soon-pm-modi-announces/ https://kannadanewsnow.com/kannada/bmrcl-gives-another-good-news-to-our-metro-passengers-in-bengaluru/














