Author: kannadanewsnow09

ಬೆಂಗಳೂರು: ನಿನ್ನೆ 25 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಅಬಕಾರಿ ಡಿಸಿ ಜಗದೀಶ್ ಬಿದ್ದಿದ್ದರು. ಈ ಪ್ರಕರಣವನ್ನು ರಾಜ್ಯ ಸರ್ಕಾರವು ಆಂತರಿಕ ತನಿಖೆಗೆ ಆದೇಶಿಸಿದೆ. ಹೌದು.. ಅಬಕಾರಿ ಇಲಾಖೆಯ ವೆಂಕಟೇಶ್ ಅವರು ಆಂತರೀಕ ತನಿಖೆಗೆ ಅಬಕಾರಿ ಡಿಸಿ ಜಗದೀಶ್ ಲಂಚ ಸ್ವೀಕಾರದ ವೇಳೆಯಲ್ಲೇ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣವನ್ನು ವಹಿಸಿದ್ದಾರೆ. ತನಿಖೆಯ ನಂತ್ರ ಇಲಾಖೆಗೆ ವರದಿಯನ್ನು ನೀಡಲು ಸೂಚಿಸಿದ್ದಾರೆ. ವಿಪಕ್ಷಗಳು ಅಬಕಾರಿ ಸಚಿವರ ಮೇಲೆ ಮುಗಿಬೀಳುತ್ತಿರುವ ಹಿನ್ನೆಲೆ ಆಂತರಿಕ ತನಿಖೆಗೆ ಸೂಚಿಸಿದ್ದು, ಆಂತರಿಕ ತನಿಖೆ ಮಾಡಿ ಸಚಿವರಿಗೆ ವರದಿ ಸಲ್ಲಿಕೆ ಮಾಡಲಿದ್ದಾರೆ. ಪರವಾನಗಿಯನ್ನ ಆನ್‌ಲೈನಲ್ಲಿ ಅಪ್ಲೈ ಮಾಡೋದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಯಾರನ್ನು ಭೇಟಿ ಮಾಡುವ ಅಗತ್ಯ ಇಲ್ಲ ಅಂತಾ ಅಬಕಾರಿ ಇಲಾಖೆಯ ವಾದವಾಗಿದೆ.. ಹಾಗಾಗಿ ಲೋಕಾಯುಕ್ತ ದಾಳಿ ಪ್ರಕರಣದ ದಾಳಿ ಬಳಿಕ ಸಂಪೂರ್ಣ ಮಾಹಿತಿ ಪಡೆಯಲು ಆಂತರಿಕ ತನಿಖೆ ಮಾಡುತ್ತಿದ್ದಾರೆ. https://kannadanewsnow.com/kannada/i-will-serve-the-state-until-my-last-breath-chief-minister-siddaramaiah/

Read More

ಮೈಸೂರು : ವಿಬಿಜಿ ಗ್ರಾಮ್ ಜಿ ಕಾಯ್ದೆ ರದ್ದಾಗಿ MNREGA ಪುನ: ಸ್ಥಾಪನೆಯಾಗುವವರೆಗೆ ಮಾಡುವ ಹೋರಾಟಕ್ಕೆ ಎಲ್ಲರೂ ಸಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮೈಸೂರು ವತಿಯಿಂದ ಟಿ. ನರಸೀಪುರ ತಾಲೂಕಿನ ಕುಪ್ಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು. 2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಈ ಕಾನೂನು ಜಾರಿ ಮಾಡಿದರು. ಕೆಲಸದ ಹಕ್ಕು ಕೊಟ್ಟರು.ಅದನ್ನು ಕಿತ್ತುಹಾಕುತ್ತಿದ್ದಾರೆ. ಬಿಜೆಪಿಯವರು ಬಡವರು, ಹೆಣ್ಣುಮಕ್ಕಳು, ಕಾರ್ಮಿಕರಿಗೆ ಕೆಲಸ ಕೊಡಲು ಬಿಡುತ್ತಿಲ್ಲ. ನೀವು ಯಾವಾಗ ಕೇಳಿದರೂ ಉದ್ಯೋಗ ಕೊಡುವ ಕಾಯಿದೆಯನ್ನು ಜಾರಿ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರ ಅದನ್ನು ತೀರ್ಮಾನಿಸಲಿ ದೆ. ವಿಬಿಜಿ ಗ್ರಾಮ್ ಜಿ ರದ್ದಾಗಬೇಕು. ಜನರನ್ನು ತಪ್ಪು ದಾರಿ ಎಳೆಯಲು ರಾಮ್ ಜಿ ಸೇರಿಸಿದ್ದಾರೆ. ಎಲ್ಲರೂ ಚಳುವಳಿಗೆ ತಯಾರಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು. MNREGA ಯೋಜನೆಯನ್ನು ಮುಂದುವರೆಸಲು…

Read More

ಬೆಂಗಳೂರು: ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ    ದ್ವಿತೀಯ ಸ್ಥಾನ ದೊರೆತಿದೆ.   ದೊಡ್ಡ  ರಾಜ್ಯಗಳ ಪೈಕಿ ಯೋಜನೆಯ ಅನುಷ್ಠಾನದಲ್ಲಿ  ಒಟ್ಟಾರೆ ಪ್ರಗತಿಯಲ್ಲಿ  ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದ್ದು,  ಕೃಷಿ ಇಲಾಖೆಗೆ  ಪ್ರಶಸ್ತಿ ಸಂದಿದೆ. 2024-25 ನೇ ಸಾಲಿನಲ್ಲಿ 27,04,166  ರೈತರು ನೋಂದಣೆ  ಮಾಡಿಕೊಂಡಿದ್ದು, ಅರ್ಹ 11,85,642 ರೈತರಿಗೆ  ರೂ.2094 ಕೋಟಿ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಲಾಗಿರುತ್ತದೆ. 2024-25 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸರ್ಮಪಕ ಅನುಷ್ಠಾನಕ್ಕಾಗಿ  ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ  ಇವರು  ಪ್ರಶಂಸಾ ಪತ್ರವನ್ನು  ನೀಡಿರುತ್ತಾರೆ. ಕೃಷಿ ಇಲಾಖೆಯ ಕೃಷಿ ಆಯುಕ್ತರು ಹಾಗೂ ಕೃಷಿ ನಿರ್ದೇಶಕರು ಇವರು ದಿ: 18.01.2026 ರಂದು ಬೆಂಗಳೂರಿನಲ್ಲಿ ನಡೆದ   13 ನೇಯ ರಾಷ್ಟ್ರೀಯ ಸಮ್ಮೇಳನದಂದು  ಕಾರ್ಯದರ್ಶಿ, ಸಹಕಾರ ಸಚಿವಾಲಯ, ಭಾರತ ಸರ್ಕಾರ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. https://kannadanewsnow.com/kannada/four-of-a-family-die-after-falling-into-bhadra-canal/

Read More

ಶಿವಮೊಗ್ಗ: ಜಿಲ್ಲೆಯಲ್ಲಿ ಕಾಲುಜಾರಿ ಭದ್ರಾ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವಂತ ಘಟನೆ ಶಿವಮೊಗ್ಗದ ಅರಬಿಳಚಿ ಕ್ಯಾಂಪ್ ನಲ್ಲಿ ನಡೆದಿದೆ. ಶಿವಮೊಗ್ಗದ ಭದ್ರಾವತಿ ತಾಲ್ಲೂಕಿನ ಅರಬಿಳಚೆ ಕ್ಯಾಂಪ್ ನ ಭದ್ರಾ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿದ್ದಾರೆ. ಮೃತರನ್ನು ನೀಲಾ ಬಾಯಿ(50), ಪುತ್ರ ರವಿ(23), ಮಗಳು ಶ್ವೇತಾ(24) ಹಾಗೂ ಅಳಿಯ ಪರಶುರಾಮ(28) ಎಂಬುವರು ಸಾವನ್ನಪ್ಪಿದ್ದಾರೆ. ಬಟ್ಟೆ ತೊಳೆಯೋದಕ್ಕೆ ಭದ್ರಾ ನಾಲೆಗೆ ತೆರಳಿದಂತ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾಲು ಜಾರಿ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

Read More

ಚೆನ್ನೈ: ಕೇಂದ್ರ ತನಿಖಾ ದಳ (ಸಿಬಿಐ) ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ವಿಜಯ್ ಅವರಿಗೆ ಹೊಸ ಸಮನ್ಸ್ ಜಾರಿ ಮಾಡಿದ್ದು, ಕರೂರ್ ಕಾಲ್ತುಳಿತ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸೋಮವಾರ ನವದೆಹಲಿಯಲ್ಲಿ ಸಂಸ್ಥೆಯ ಮುಂದೆ ಮತ್ತೊಮ್ಮೆ ಹಾಜರಾಗುವಂತೆ ನಿರ್ದೇಶಿಸಿದೆ. ಈ ಪ್ರಕರಣವು ಸೆಪ್ಟೆಂಬರ್ 27, 2025 ರಂದು ಕರೂರಿನಲ್ಲಿ ನಡೆದ ರಾಜಕೀಯ ಪ್ರಚಾರ ಕಾರ್ಯಕ್ರಮಕ್ಕೆ ಸಂಬಂಧಿಸಿದೆ, ಆ ಸಂದರ್ಭದಲ್ಲಿ ವಿಜಯ್ ಟಿವಿಕೆ ಪರ ಪ್ರಚಾರ ನಡೆಸುತ್ತಿದ್ದರು. ಸ್ಥಳದಲ್ಲಿ ಭಾರಿ ಜನಸಮೂಹ ಜಮಾಯಿಸಿದ್ದು, 41 ಜೀವಗಳನ್ನು ಬಲಿ ಪಡೆದ ಮಾರಕ ಕಾಲ್ತುಳಿತಕ್ಕೆ ಕಾರಣವಾಯಿತು. ಈ ಘಟನೆ ತಮಿಳುನಾಡಿನಾದ್ಯಂತ ಆಘಾತಕಾರಿ ಅಲೆಗಳನ್ನು ಉಂಟುಮಾಡಿತು ಮತ್ತು ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು, ಇದು ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಲು ಕಾರಣವಾಯಿತು. ಸಿಬಿಐ ನಡೆಸುತ್ತಿರುವ ತನಿಖೆಯು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಸಮಿತಿಯ ಮೇಲ್ವಿಚಾರಣೆಯಲ್ಲಿದೆ. ಇತ್ತೀಚಿನ ವಾರಗಳಲ್ಲಿ, ದುರಂತಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಸಿಬಿಐ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ವಿಚಾರಣೆಯ ಭಾಗವಾಗಿ,…

Read More

ಇರಾನ್: ಆರ್ಥಿಕ ಸಮಸ್ಯೆಗಳ ಕುರಿತು ಆರಂಭದಲ್ಲಿ ಪ್ರಾರಂಭವಾಗಿ ಅಂತಿಮವಾಗಿ ಇರಾನ್ ಆಡಳಿತವನ್ನು ಕೊನೆಗೊಳಿಸುವಂತೆ ಒತ್ತಾಯಿಸಿ ವಾರಗಳ ಕಾಲ ನಡೆದ ಪ್ರತಿಭಟನೆಗಳ ಮೇಲೆ ಇರಾನ್ ನಡೆಸಿದ ದಮನ ಕಾರ್ಯಾಚರಣೆಯಲ್ಲಿ ಕನಿಷ್ಠ 16,500 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಮತ್ತು 3,30,000 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ವೈದ್ಯರನ್ನು ಉಲ್ಲೇಖಿಸಿ ಹೊಸ ವರದಿ ಹೇಳಿದೆ. ಶನಿವಾರ, ದೇಶವನ್ನು ಪ್ರತಿಭಟನೆಗಳು ಬೆಚ್ಚಿಬೀಳಿಸಿದ ನಂತರದ ಮೊದಲ ಸಾರ್ವಜನಿಕ ಸ್ವೀಕಾರದಲ್ಲಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಅಶಾಂತಿ “ಹಲವಾರು ಸಾವಿರ” ಸಾವುಗಳಿಗೆ ಕಾರಣವಾಯಿತು ಎಂದು ಹೇಳಿದರು. ಈ ದಂಗೆಯಲ್ಲಿ, ಅಮೆರಿಕ ಅಧ್ಯಕ್ಷರು ವೈಯಕ್ತಿಕವಾಗಿ ಹೇಳಿಕೆಗಳನ್ನು ನೀಡಿದರು, ದೇಶದ್ರೋಹದ ಜನರನ್ನು ಮುಂದುವರಿಸಲು ಪ್ರೋತ್ಸಾಹಿಸಿದರು ಮತ್ತು ಹೇಳಿದರು: ‘ನಾವು ನಿಮ್ಮನ್ನು ಬೆಂಬಲಿಸುತ್ತೇವೆ, ನಾವು ನಿಮ್ಮನ್ನು ಮಿಲಿಟರಿಯಾಗಿ ಬೆಂಬಲಿಸುತ್ತೇವೆ'” ಎಂದು ಡೊನಾಲ್ಡ್ ಟ್ರಂಪ್ ಅವರನ್ನು “ಅಪರಾಧಿ” ಮತ್ತು ಪ್ರತಿಭಟನಾಕಾರರನ್ನು ಯುನೈಟೆಡ್ ಸ್ಟೇಟ್ಸ್‌ನ “ಕಾಲ್ಪನಿಕ ಸೈನಿಕರು” ಎಂದು ಬಣ್ಣಿಸಿದರು. ಇರಾನ್ ಪ್ರತಿಭಟನೆಗಳಲ್ಲಿ 16,500 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳುತ್ತದೆ ದಿ ಸಂಡೇ…

Read More

ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಹಳದಿ ಮಾರ್ಗದಲ್ಲಿ ಸಂಚರಿಸಲಿರುವಂತ 8ನೇ ರೈಲು ಜನವರಿ.19ರ ನಾಳೆ ಬೆಂಗಳೂರಿಗೆ ತಲುಪಲಿದೆ. ಆ ಬಳಿಕ ಮುಂದಿನ ದಿನಗಳಲ್ಲಿ ಹಳದಿ ಮಾರ್ಗದಲ್ಲಿ 8ನೇ ರೈಲು ಸಂಚಾರ ಆರಂಭಗೊಳ್ಳಲಿದೆ. ಬೆಂಗಳೂರಲ್ಲಿ ಆಗಸ್ಟ್.10ರಂದು ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರವನ್ನು ಉದ್ಘಾಟಿಸಲಾಗಿತ್ತು. ಇದೀಗ ಮತ್ತೊಂದು ಗುಡ್ ನ್ಯೂಸ್ ಎನ್ನುವಂತೆ ನಾಳೆ ರಾತ್ರಿ 8ನೇ ಡ್ರೈವರ್ ಲೆಸ್ ರೈಲು ಬೆಂಗಳೂರಿಗೆ ತಲುಪಲಿದೆ. ಹೀಗಾಗಿ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಹೆಚ್ಚಾಗಲಿದ್ದು, ಇದರಿಂದ ರೈಲುಗಳ ಓಡಾಟದ ಸಮಯ ಕೂಡ ಕಡಿಮೆಯಾಗಲಿದೆ. ಸದ್ಯ ಬೆಂಗಳೂರಿನ ಯೆಲ್ಲೋ ಮಾರ್ಗದಲ್ಲಿ 10 ನಿಮಿಷಗಳಿಗೆ ಒಂದರಂತೆ ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ನಾಳೆ 8ನೇ ರೈಲು ಬೆಂಗಳೂರಿಗೆ ತಲುಪಿ, ಸಂಚಾರ ಆರಂಭದ ಬಳಿಕ ಸಮಯದಲ್ಲಿ ಕಡಿಮೆಯಾಗೋ ಸಾಧಅಯತೆ ಇದೆ. ಅಂದಹಾಗೇ ಜನವರಿ.19ರಂದು ನಾಳೆ ರಾತ್ರಿ ಬೆಂಗಳೂರಿನ ಹೆಬ್ಬಗೋಡಿ ಡಿಪೋವನ್ನು 8ನೇ ರೈಲು ತಲುಪವಿದೆ. ಆ ಬಳಿಕ ರೈಲಿನ ಪರೀಕ್ಷೆ, ತಾಂತ್ರಿಕ ಪರೀಕ್ಷೆಯ ಬಳಿಕ ವಾಣಿಜ್ಯ ಸಂಚಾರದ…

Read More

ಬೆಂಗಳೂರು: ವಾರ್ತಾ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರುವ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ‌ ಸಮಿತಿ ಸಲ್ಲಿಸಿದ ವರದಿ ಜಾರಿ ಮಾಡುವಂತೆ ಆಗ್ರಹಿಸಿ, ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ, ವಿಧಾನ ಪರಿಷತ್ ಶಾಸಕರಾದ ದಿನೇಶ ಗೂಳಿಗೌಡ ಅವರು ಮಾಡಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ತಕ್ಷಣ ಚರ್ಚಿಸುವಂತೆ ವಾರ್ತಾ ಇಲಾಖೆ ಆಯುಕ್ತರಿಗೆ ಸಿಎಂ ನಿರ್ದೇಶನ ನೀಡಿದ್ದಾರೆ. ಮನವಿಯಲ್ಲಿ ಏನಿದೆ..? 1978ರಲ್ಲಿ ವಾರ್ತಾ ಇಲಾಖೆ ಅಳವಡಿಸಿಕೊಂಡಿದ್ದ ಅವೈಜ್ಞಾನಿಕ ವೃಂದ ಮತ್ತು ನೇಮಕಾತಿ ನಿಯಮದ ಪರಿಣಾಮವಾಗಿ ವಾರ್ತಾ ಇಲಾಖೆ . ಇದನ್ನು ಸರಿಪಡಿಸುವ ಕೆಲಸ ಮಾಡಿಲ್ಲ ಅನುಗುಣವಾಗಿ ಹೊಸ ವೃಂದ ಮತ್ತು ನೇಮಕಾತಿ ನಿಯಮ ಅಳವಡಿಸಿಕೊಳ್ಳುವ ಬದಲು ಹಳೆ ಪದ್ದತಿ ಇದೆ . ಈಗಾಗಲೇ 15-20 ವರ್ಷದಿಂದ ಬಡ್ತಿ ಇಲ್ಲದೆ ಸರ್ಕಾರದ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊಸದಾಗಿ ಅಳವಡಿಸಿಕೊಳ್ಳಲು ಉದ್ದೇಶಿಸಿರುವ ವೃಂದ ಮತ್ತು ನೇಮಕಾತಿ ನಿಯಮದ ಕರಡು ಪ್ರಸ್ತಾವನೆಯನ್ನು ಎಲ್ಲ ನೌಕರರಿಗೆ ಅಧಿಕೃತವಾಗಿ…

Read More

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಯುವತಿಗೆ ಕೋಟ್ಯಂತರ ಹಣ ವಂಚನೆ ಮಾಡಿರುವಂತ ಘಟನೆ ನಗರದಲ್ಲಿ ನಡೆದಿದೆ. ಮ್ಯಾಟ್ರಿಮೋನಿಯಲ್ಲಿ ವಿವಾಹಕ್ಕಾಗಿ ಹುಡುಗರನ್ನು ಹುಡುಕೋ ಮುನ್ನಾ ಯುವತಿಯರೇ ಮುಂದೆ ಸುದ್ದಿ ಓದಿ.. ಬೆಂಗಳೂರಿನ ವೈಟ್ ಫೀಲ್ಡ್ ಮೂಲದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಕೋಟ್ಯಂತರ ವಂಚನೆ ಮಾಡಿರೋದಾಗಿ ಹೇಳಲಾಗುತ್ತಿದೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವಂತ ಯುವತಿಯೇ ವಂಚನೆಗೆ ಒಳಗಾಗಿರುವಂತವಳು. ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಆರೋಪಿ ವಿಜಯ್ ರಾಜುಗೌಡನೇ ಈ ರೀತಿಯಾಗಿ ವಂಚನೆ ಮಾಡಿರೋದಾಗಿ ಯುವತಿ ಆರೋಪಿಸಿದ್ದಾರೆ. 2024ರ ಮಾರ್ಚ್ ನಲ್ಲಿ ವಿಜಯ್ ಮ್ಯಾಟ್ರಿಮೋನಿ ಮೂಲಕ ಯುವತಿಗೆ ಪರಿಚಯವಾಗಿದ್ದರು. ಆ ಸಂದರ್ಭದಲ್ಲಿ ತಾನು ಉದ್ಯಮಿ, 715 ಕೋಟಿ ಮೌಲ್ಯದ ಆಸ್ತಿ ಒಡೆಯನೆಂಬುದಾಗಿ ಯುವತಿಗೆ ಪರಿಚಯಿಸಿಕೊಂಡಿದ್ದನು. ಯುವತಿಯನ್ನು ನಿನ್ನನ್ನೇ ಮದುವೆಯಾಗುವುದಾಗಿ ವಿಜಯ್ ಕುಟುಂಬಸ್ಥರಿಗೂ ಪರಿಚಯಿಸಿದ್ದನು. ಕೆಂಗೇರಿ ಬಳಿ ಯುವತಿಗೆ ಕುಟುಂಬದ ಸದಸ್ಯರನ್ನು ಪರಿಚಯಿಸಿದ್ದನು. ತಂದೆ ನಿವೃತ್ತ ತಹಶೀಲ್ದಾರ್ ಎಂಬುದಾಗಿಯೂ ವಿಜಯ್ ಯುವತಿಗೆ ಪರಿಚಯಿಸಿದ್ದನು. ಶಾಕಿಂಗ್ ಎನ್ನುವಂತೆ ವಿಜಯ್ ತನ್ನ ಪತ್ನಿಯನ್ನೂ ಮನೆಯಲ್ಲಿ ಅಕ್ಕ ಎಂಬುದಾಗಿ ಯುವತಿಗೆ ಪರಿಚಯಿಸಿದ್ದನಂತೆ. ನಂತರ…

Read More

ಹಾವೇರಿ: ಬಿಗ್ ಬಾಸ್ ಸೀಸನ್-12ರಲ್ಲಿ ಗಿಲ್ಲಿ ನಟ ಗೆಲ್ಲೋದು ಖಾಯಂ. ಗಿಲ್ಲಿ ಅಣ್ಣ ನನ್ನ ಫೇವರಿಟ್. ಅವರೇ ವಿನ್ನರ್ ಆಗೋದಾಗಿ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಭವಿಷ್ಯ ನುಡಿದಿದ್ದಾರೆ. ಹಾವೇರಿಯ ಸವಣೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯಾರನ್ನು ವಿನ್ನರ್ ಎಂಬುದಾಗಿ ಘೋಷಣೆ ಮಾಡುತ್ತಾರೆ ಅಂತ ಎದೆಯಲ್ಲಿ ಢವಢವ ಶುರುವಾಗಿದೆ. ಈ ಬಾರಿ ಗಿಲ್ಲಿ ಚೆನ್ನಾಗಿ ಆಟವಾಡಿದ್ದಾರೆ. ಅವರು ಗೆಲ್ಲುವ ವಿಶ್ವಾಸ ನನಗಿದೆ ಎಂದರು. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಭೇದಭಾವ ಇರೋದಿಲ್ಲ. ಈ ಬಾರಿ ಅತೀ ಹೆಚ್ಚು ವೋಟಿಂಗ್ ಆಗಿದೆ. ಅತೀ ಹೆಚ್ಚು ವೋಟ್ ಗಿಲ್ಲಿ ನಟ ತೆಗೆದುಕೊಂಡಿದ್ದಾರೆ. ನಾನು ಸಹ ಗಿಲ್ಲಿ ನಟನಿಗೆ ವೋಟಿಂಗ್ ಮಾಡಿರೋದಾಗಿ ತಿಳಿಸಿದರು. ಬಿಗ್ ಬಾಸ್ ಸೀಸನ್ 12ರಲ್ಲಿ ಗಿಲ್ಲಿ ಅಣ್ಣ ಗೆಲ್ಲುತ್ತಾನೆ. ನಾನು ಮತ್ತು ಗಿಲ್ಲಿ ಭರ್ಜರಿ ಬ್ಯಾಚುಲರ್, ಕಾಮಿಡಿ ಕಿಲಾಡಿ ಶೋ ಮಾಡಿದ್ದೀವಿ. ಗಿಲ್ಲಿ ಅಣ್ಣನಿಗೆ ಹೆಚ್ಚು ವೋಟ್ ಬಂದಿರೋದು. ನನ್ನ ಫೇವರಿಟ್ ಗಿಲ್ಲಿ ಅಣ್ಣ. ಎಲ್ಲರಿಗೂ ಆಲ್ ದಿ…

Read More