Author: kannadanewsnow09

ಮಂಡ್ಯ :- ಸರ್ಕಾರಿ ಶಾಲಾ – ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೇ ಇಂದು ದೇಶ – ವಿದೇಶಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ ಶಾಸಕ ಕೆ.ಎಂ.ಉದಯ್ ತಿಳಿಸಿದರು. ಮದ್ದೂರು ತಾಲೂಕಿನ ಅರುವನಹಳ್ಳಿ ಗ್ರಾಮದಲ್ಲಿ ಶತಮಾನದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಶಾಲೆಯ 2 ನೂತನ ಕಟ್ಟಡಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ವ್ಯಕ್ತಿಗಳು, ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆ ಎಂಬ ಕೀಳಿರಿಮೆ ಬಿಡಬೇಕು. ಮಕ್ಕಳಿಗೆ ವಿದ್ಯಾರ್ಜನೆ ಎಷ್ಟು ಮುಖ್ಯವೋ ಸಂಸ್ಕಾರವೂ ಅಷ್ಟೇ ಮುಖ್ಯ. ಕಲಿತಂತೆಲ್ಲ ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆಯಲ್ಲಿ ತೊಡಗಬೇಕು. ಗುರು, ಹಿರಿಯರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು. ಗ್ರಾಮದಲ್ಲಿ ಶತಮಾನದ ಶಾಲೆ ಎಂಬ ಹೆಗ್ಗಳಿಕೆಗೆ ಪತ್ರವಾಗಿದ್ದ ಶಾಲೆಯ ಕಟ್ಟಡ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ 2 ಶಾಲಾ ಕಟ್ಟಡ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲೆ…

Read More

ಮಂಡ್ಯ : ನಿರೀಕ್ಷೆಗೂ ಮೀರಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡೋದು, ಜನರ ಕಷ್ಟ ಸುಖಗಳಿಗೆ ಸ್ಪಂದಿಸೋದು, ಬಡವರಿಗೆ ಸಹಾಯ ಮಾಡೋದು ಇವೆಲ್ಲ ಸರ್ವಾಧಿಕಾರಿ ಧೋರಣೆಯೇ ಎಂದು ಮಾಜಿ ಸಚಿವ ಡಿ.ಸಿ‌.ತಮ್ಮಣ್ಣ ವಿರುದ್ಧ ಶಾಸಕ ಕೆ.ಎಂ.ಉದಯ್ ತಿರುಗೇಟು ನೀಡಿದರು. ಮದ್ದೂರು ತಾಲೂಕಿನ ಅಗರಲಿಂಗನದೊಡ್ಡಿ, ಡಿ.ಹೊಸೂರು, ಹಳ್ಳಿಕೆರೆ, ಅಂಕೇಗೌಡನದೊಡ್ಡಿ ಹಾಗೂ ಕೆಂಪೇಗೌಡನದೊಡ್ಡಿ ಗ್ರಾಮಗಳಲ್ಲಿ ಅಂದಾಜು 1 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೆ.ಬೆಳ್ಳೂರು ಗ್ರಾಮದ ಶಾಲಾ ಕಟ್ಟಡ ನಿರ್ಮಾಣಕ್ಕೆ ತಡೆ ಮಾಡುವಂತೆ ನಾನು ಯಾವ ಅಧಿಕಾರಿಗೂ ಧಮ್ಕಿ ಹಾಕಿಲ್ಲ. ಪೂಜೆ ಎಲ್ಲಾ ಮುಗಿದ ಮೇಲೆ ನನಗೆ ಗೊತ್ತಾಯಿತು. ನಾನು ಯಾವುದೇ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿಲ್ಲ. ನಿರೀಕ್ಷೆಗೂ ಮೀರಿ ಜಾಸ್ತಿ ಕೆಲಸ ಮಾಡೋದು, ಜನರ ಜೊತೆ ಸದಾ ಕಾಲ ಕಷ್ಟ ಸುಖಗಳಿಗೆ ಸ್ಪಂದಿಸೋದು, ಬಡವರಿಗೆ ಸಹಾಯ ಮಾಡೋದು, ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿಸೋದು, ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಇರೋದು ಇವೆಲ್ಲ ಸರ್ವಾಧಿಕಾರಿ ಧೋರಣೆಯೇ ಎಂದು ಪ್ರಶ್ನಿಸಿದರು.…

Read More

ನವದೆಹಲಿ: ಕೆಲವು ದಿನಗಳ ಹಿಂದೆ, ಗೂಗಲ್‌ನ ಪೋಷಕ ಕಂಪನಿ ಆಲ್ಫಾಬೆಟ್, 2025 ರಲ್ಲಿ ಇದುವರೆಗಿನ ಅತ್ಯಧಿಕ ಆದಾಯ $400 ಬಿಲಿಯನ್ ಎಂದು ವರದಿ ಮಾಡಿದೆ. ಈಗ, ಕಂಪನಿಯ ವ್ಯವಹಾರ ಘಟಕವು ಕಂಪನಿಯ ಭವಿಷ್ಯದ AI ಯೋಜನೆಗಳನ್ನು ಸ್ವೀಕರಿಸಲು ಸಿದ್ಧರಿಲ್ಲದ ಉದ್ಯೋಗಿಗಳಿಗೆ, ಬೇರ್ಪಡಿಕೆ ಪ್ಯಾಕೇಜ್‌ನೊಂದಿಗೆ ಸ್ವಯಂಪ್ರೇರಿತ ನಿರ್ಗಮನವನ್ನು ತೆಗೆದುಕೊಳ್ಳುವ ಆಯ್ಕೆಯನ್ನು ನೀಡುತ್ತಿದೆ. ಬಿಸಿನೆಸ್ ಇನ್ಸೈಡರ್ ಪ್ರಕಾರ, ಗೂಗಲ್‌ನ ಮುಖ್ಯ ವ್ಯವಹಾರ ಅಧಿಕಾರಿ ಫಿಲಿಪ್ ಷಿಂಡ್ಲರ್, ಜಾಗತಿಕ ವ್ಯಾಪಾರ ಸಂಸ್ಥೆ (GBO) ಘಟಕದೊಳಗಿನ ಕೆಲವು ಉದ್ಯೋಗಿಗಳು ಈ ಸ್ವಯಂಪ್ರೇರಿತ ನಿರ್ಗಮನವನ್ನು ಆಯ್ಕೆ ಮಾಡಬಹುದು ಎಂದು ಆಂತರಿಕ ಜ್ಞಾಪಕ ಪತ್ರದಲ್ಲಿ ತಿಳಿಸಿದ್ದಾರೆ. ಗೂಗಲ್‌ನ GBO ಘಟಕವು ಜಾಹೀರಾತು ಉತ್ಪನ್ನಗಳು ಮತ್ತು ಸೇವೆಗಳು ಮತ್ತು ಜಾಗತಿಕ ಆದಾಯದ ಬೆಳವಣಿಗೆ ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತದೆ. ವರದಿಯ ಪ್ರಕಾರ, ಕಂಪನಿಯು 2026 ರಲ್ಲಿ “ಬಲವಾದ ಸ್ಥಾನದಲ್ಲಿ” ಪ್ರಾರಂಭವಾಯಿತು ಎಂದು ಫಿಲಿಪ್ ಷಿಂಡ್ಲರ್ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, AI ಭೂದೃಶ್ಯವು ಸದಾ ವಿಕಸನಗೊಳ್ಳುತ್ತಿದೆ ಎಂದು ಷಿಂಡ್ಲರ್ ಸುಳಿವು ನೀಡಿದರು. ಅವರು ಹೇಳಿದರು,…

Read More

ದಕ್ಷಿಣ ಕನ್ನಡ: ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ನಡುವೆ ಗಲಾಟೆಯುಂಟಾಗಿದೆ. ಈ ವೇಳೆ ಇಬ್ಬರು ಸಹಪಾಠಿಗಳಿಗೆ ಪೆನ್, ಚಾಕುವಿನಿಂದ ವಿದ್ಯಾರ್ಥಿ ಇರಿದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲದ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಚೂರಿಯಿಂದ ಇರಿದು ಅಪ್ರಾಪ್ತನ ಮೇಲೆ ಹೇಮಂತ್ ಎಂಬಾತ ಹಲ್ಲೆಗೈದಿದ್ದಾನೆ. ಜಗಳ ಬಿಡಿಸಲು ಬಂದ ಮತ್ತೊಬ್ಬ ವಿದ್ಯಾರ್ಥಿಯ ಮೇಲೂ ಹಲ್ಲೆ ಮಾಡಲಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಲಾಟೆ ವಿಚಾರ ತಿಳಿದು ಆರೋಗ್ಯ ಕೇಂದ್ರದ ಬಳಿ ಜನರು ಸೇರಿದ್ದಾರೆ. ಜನರನ್ನು ಚದುರಿಸಲು ಆಸ್ಪತ್ರೆಯ ಬಳಿಯಲ್ಲಿ ವಿಟ್ಲ ಪೊಲೀಸರು ಲಾಠಿ ಬೀಸಿದ್ದಾರೆ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂಟ್ವಾಳ ಡಿವೈಎಸ್ಪಿ ಭೇಟಿ ನೀಡಿದ್ದಾರೆ. ಹಲ್ಲೆಗೈದಿದ್ದ ವಿದ್ಯಾರ್ಥಿ ಹೇಮಂತ್ ನನ್ನು ವಶಕ್ಕೆ ಪೊಲೀಸರು ಪಡೆದಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/sslc-student-commits-suicide-by-writing-death-note-due-to-exam-fear/

Read More

ಬೆಂಗಳೂರು: ಕಮಲಾಕರ ಭಟ್ ಗ್ಯಾಂಗ್ ನಿಂದ ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಕಮಲಾಕರ್ ಭಟ್ ಗೆ ಭಿಗ್ ಶಾಕ್ ನೀಡಲಾಗಿದೆ. ಫೆಬ್ರವರಿ.21ರವರೆಗೆ ಕಮಲಾಕರ್ ಭಟ್, ಸುಚಿತ್ರಾಗೆ ಫೆಬ್ರವರಿ.21ರವರೆಗೆ ಜೈಲೇ ಗತಿಯಾಗಿದೆ. ಇಂದು ಈ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಜೆಎಂಎಫ್ ಸಿ ಕೋರ್ಟ್ ವಿಚಾರಣೆ ನಡೆಸಿ, ಫೆಬ್ರವರಿ.21ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದೆ. ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ, ಇಂದು ಪೊಲೀಸರು ವೀಡಿಯೋ ಕಾನ್ಫೆರೆನ್ಸ್ ಮೂಲಕ ಐವರು ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು. ವೀಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆಗೆ ಐವರು ಆರೋಪಿಗಳು ಹಾಜರಾಗಿದ್ದರು. ಎ1 ಸುಚಿತ್ರಾ ನಾಯ್ಕ್, ಎ2 ಲೋಕನಾಥ್, ಎ3 ಕಮಲಾಕರ ಭಟ್, ಎ4 ಆಕಾಶ್, ಎ5 ವಿನಯ್ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. 8 ಆರೋಪಿಗಳ ಪೈಕಿ ಮೂವರು ಪೊಲೀಸರ ವಶದಲ್ಲಿದ್ದರು. ಫೆಬ್ರವರಿ.13ರಂದು ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದರು. https://kannadanewsnow.com/kannada/government-withdraws-minister-of-state-post-given-to-bjp-worker/ https://kannadanewsnow.com/kannada/sslc-student-commits-suicide-by-writing-death-note-due-to-exam-fear/

Read More

ಬೆಂಗಳೂರು : ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್.ಎಂ.ಡಿ.ಸಿ.ಯಿಂದ ಅಕ್ರಮ ಅದಿರು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆದೇಶ ನೀಡಿದ್ದಾರೆ. ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿರುವ ಅವರು, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತ್ರಿಸದಸ್ಯ ತಂಡ ರಚಿಸಿ ತನಿಖೆ ನಡೆಸಿ 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ಸದರಿ ಪ್ರಕರಣದಲ್ಲಿ ಅರಣ್ಯ ಪ್ರದೇಶದಿಂದ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಾಟವಾಗಿದೆಯೇ, ನಿಯಮಗಳ ಉಲ್ಲಂಘನೆ ಆಗಿದೆಯೇ ಎಂಬ ತನಿಖೆ ನಡೆಸುವಂತೆ ಸ್ಪಷ್ಟಪಡಿಸಿರುವ ಅರಣ್ಯ ಸಚಿವರು, ಆರೋಪಿ ಲಾರಿ ಚಾಲಕ ನೀಡಿದ ಮಾಹಿತಿ ಆಧರಿಸಿ ಎರಡೂವರೆ ಸಾವಿರ ಟನ್ ಕಬ್ಬಿಣದ ಅದಿರನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನೂ ಪ್ರಸ್ತಾಪಿಸಿದ್ದಾರೆ. https://kannadanewsnow.com/kannada/government-withdraws-minister-of-state-post-given-to-bjp-worker/ https://kannadanewsnow.com/kannada/sslc-student-commits-suicide-by-writing-death-note-due-to-exam-fear/

Read More

ಬೆಂಗಳೂರು:  ತೀವ್ರ ವಿರೋಧದಿಂದಾಗಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳಿ ಅಧ್ಯಕ್ಷ ಹಾಗೂ ಬಿಜೆಪಿ ಕಾರ್ಯಕರ್ತ ಡಾ.ಬಿ.ಡಿ ಭೂಕಾಂತ್ ಅವರಿಗೆ ನೀಡಿದ್ದಂತ ರಾಜ್ಯ ಸಚಿವ ಸಂಪುಟ ಸ್ಥಾನವನ್ನ ಸರ್ಕಾರ ಹಿಂಪಡೆದು ಆದೇಶಿಸಿದೆ. ರಾಜ್ಯ ಸರ್ಕಾರದಿಂದ ಕೆಲ ದಿನಗಳ ಹಿಂದಷ್ಟೇ ನಿಗಮ, ಮಂಡಳಿಗಳ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ಆದೇಶಿಸಿತ್ತು. ಇದರಲ್ಲಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಂಡಳಿ ಅಧ್ಯಕ್ಷ ಡಾ.ಬಿ.ಡಿ ಭೂಕಾಂತ್ ಕೂಡ ಸೇರಿದ್ದರು. ಅವರು ಬಿಜೆಪಿ ಕಾರ್ಯಕರ್ತರಾಗಿದ್ದರಿಂದ ಇದಕ್ಕೆ ತೀವ್ರ ವಿರೋಧವೇ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಇಂದು ರಾಜ್ಯ ಸರ್ಕಾರವು ಬಿ.ಡಿ.ಭೂಕಾಂತ್ ಅವರಿಗೆ ನೀಡಿದ್ದ ರಾಜ್ಯ ಸಂಪುಟ ಸ್ಥಾನವನ್ನ ಸರ್ಕಾರ ಹಿಂಪಡೆದಿರುವುದಾಗಿ ಆದೇಶ ಹೊರಡಿಸಿದೆ. ಆ ಮೂಲಕ ತೀವ್ರ ವಿರೋಧದ ಕಾರಣದಿಂದಾಗಿ ಬಿಜೆಪಿ ಕಾರ್ಯಕರ್ತನಿಗೆ ನೀಡಿದ್ದಂತ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ಹಿಂಪಡೆದಿದೆ. https://kannadanewsnow.com/kannada/can-eating-butter-before-bed-actually-help-you-sleep-better/ https://kannadanewsnow.com/kannada/sslc-student-commits-suicide-by-writing-death-note-due-to-exam-fear/

Read More

ಮೊದಲು, ನೀವು ನಿರಂತರ ಆನ್‌ಲೈನ್ ಸ್ಕ್ರೋಲಿಂಗ್ ಅನ್ನು ದೂಷಿಸುತ್ತೀರಿ. ನಂತರ, ನೀವು ಅತಿಯಾಗಿ ಯೋಚಿಸುವುದರ ಮೇಲೆ ಬೆರಳು ತೋರಿಸುತ್ತೀರಿ. ಆದರೆ ಸತ್ಯವೆಂದರೆ, ನಿದ್ರಿಸುವುದು ಮತ್ತು ನಿದ್ರಿಸುವುದು ಈಗ ತುಂಬಾ ಸವಾಲಿನ ಸಂಗತಿಯಾಗಿದೆ. ನಾವು ನಿರಂತರವಾಗಿ ನಮ್ಮ ಅತ್ಯುತ್ತಮ ಆವೃತ್ತಿಗಳಾಗಿರಲು ಪ್ರಯತ್ನಿಸುತ್ತಿರುವ ಜಗತ್ತಿನಲ್ಲಿ – ಆರೋಗ್ಯಕರವಾಗಿ ತಿನ್ನುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಚರ್ಮದ ಆರೈಕೆಯ ದಿನಚರಿಗಳನ್ನು ಅನುಸರಿಸುವುದು ಮತ್ತು ಆರೋಗ್ಯದ ಗುರಿಗಳನ್ನು ಪೂರೈಸುವುದು – ನಿದ್ರೆ ಹೇಗೋ ಜಾರಿಕೊಳ್ಳುತ್ತಲೇ ಇರುತ್ತದೆ. ನಾವು ಅಂತಿಮವಾಗಿ ಹಾಸಿಗೆಗೆ ಹೋಗುವ ಹೊತ್ತಿಗೆ, ನಮ್ಮ ರಾತ್ರಿಗಳು ಹೆಚ್ಚಾಗಿ ಕಾರ್ಯಕ್ರಮಗಳನ್ನು ವೀಕ್ಷಿಸುವುದು, ತಡರಾತ್ರಿ ಸ್ಕ್ರೋಲಿಂಗ್ ಮಾಡುವುದು ಅಥವಾ ಬುದ್ದಿಹೀನ ತಿಂಡಿಗಳನ್ನು ತಿನ್ನುವುದರಲ್ಲಿ ಕಳೆಯುತ್ತವೆ. ಮತ್ತು ಇದೆಲ್ಲವೂ ನಾವು ಎಷ್ಟು ಚೆನ್ನಾಗಿ ನಿದ್ರಿಸುತ್ತೇವೆ ಎಂಬುದರ ಮೇಲೆ ಸದ್ದಿಲ್ಲದೆ ಪರಿಣಾಮ ಬೀರುತ್ತದೆ. ಹಾಗಾದರೆ, ನಿದ್ರೆಯನ್ನು ಉತ್ತಮಗೊಳಿಸಲು ನಿಜವಾಗಿಯೂ ಏನು ಮಾಡಬಹುದು? ಯಾವಾಗಲೂ ಹಾಗೆ, ಇಂಟರ್ನೆಟ್ ಉತ್ತರವನ್ನು ಹೊಂದಿದೆ. ಸಾಮಾಜಿಕ ಮಾಧ್ಯಮವು ತ್ವರಿತ ಪರಿಹಾರವನ್ನು ಇಷ್ಟಪಡುತ್ತದೆ ಮತ್ತು ಸುತ್ತುವರೆದಿರುವ ಇತ್ತೀಚಿನದು ಮಲಗುವ ಮೊದಲು ಬೆಣ್ಣೆಯನ್ನು…

Read More

ನವದೆಹಲಿ: ಮಂಗಳವಾರ ಮಧ್ಯಾಹ್ನ ಮುಂಬೈನ ಶಿವಾಜಿ ನಗರ ಪ್ರದೇಶದಲ್ಲಿ ಶಿಫಾ ಎಂದು ಗುರುತಿಸಲ್ಪಟ್ಟ 19 ವರ್ಷದ ಮಹಿಳೆಯನ್ನು ಹಾಡಹಗಲೇ ಗುಂಡಿಕ್ಕಿ ಕೊಲ್ಲಲಾಯಿತು. ಘಟನೆ ನಡೆದ 12 ಗಂಟೆಗಳಲ್ಲಿ ಪೊಲೀಸರು ಯುವ ದಂಪತಿಯನ್ನು ಬಂಧಿಸಿದರು. ಫರ್ಕಾನಿಯಾ ಪ್ರದೇಶದಲ್ಲಿ ಈ ಕೊಲೆ ನಡೆದಿದ್ದು, ಹಗಲಿನಲ್ಲಿ ಗುಂಡೇಟಿನಿಂದ ನಿವಾಸಿಗಳು ಬೆಚ್ಚಿಬಿದ್ದರು. ಶಿಫಾ ಮೇಲೆ ಹತ್ತಿರದಿಂದಲೇ ಗುಂಡು ಹಾರಿಸಲಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಅವರು ಸಾವನ್ನಪ್ಪಿದರು. ರಕ್ತಸಿಕ್ತ ರಸ್ತೆ ಮತ್ತು ಹಗಲಿನ ವೇಳೆ ನಡೆದ ಈ ನಿರ್ಭೀತ ಹತ್ಯೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಶೀಘ್ರವಾಗಿ ಕಾರ್ಯಪ್ರವೃತ್ತರಾದ ಶಿವಾಜಿ ನಗರ ಪೊಲೀಸ್ ಠಾಣೆಯ ತಂಡವು ತನಿಖೆಯನ್ನು ಆರಂಭಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ, ಮಾಹಿತಿದಾರರೊಂದಿಗೆ ಕೆಲಸ ಮಾಡಿತು. ಶೀಘ್ರದಲ್ಲೇ ಇಬ್ಬರು ಶಂಕಿತರನ್ನು ಬಂಧಿಸಲಾಯಿತು. ಪ್ರಮುಖ ಆರೋಪಿ ಎಂದು ನಂಬಲಾದ 25 ವರ್ಷದ ಮಹಿಳೆ ಮತ್ತು ಆಕೆಯ 23 ವರ್ಷದ ಪುರುಷ ಸಂಗಾತಿ. ಆರಂಭಿಕ ವಿಚಾರಣೆಯ ಸಮಯದಲ್ಲಿ, ಅಪರಾಧವು ತ್ರಿಕೋನ ಪ್ರೇಮ ಮತ್ತು ನಡೆಯುತ್ತಿರುವ ವೈಯಕ್ತಿಕ ವಿವಾದಗಳಿಗೆ ಸಂಬಂಧಿಸಿದೆ ಎಂದು ಪೊಲೀಸರು…

Read More

ಶಿವಮೊಗ್ಗ: ಮಾರಿಕಾಂಬ ಜಾತ್ರೆ ಪ್ರಯುಕ್ತ ಸಾಗರದ ಗೋಪಾಲಗೌಡ ಕ್ರೀಢಾಂಗಣದಲ್ಲಿ ಹೆಲಿ ಟೂರಿಸಂ ಆಯೋಜಿಸಲಾಗಿತ್ತು. ಇದರಿಂದ ಅನೇಕರು ಮೈದಾನ ಹಾಳಾಗಲಿದೆ ಎಂಬುದಾಗಿ ಆರೋಪಿಸಿದ್ದರು. ಆದರೇ ಹೆಲಿಕ್ಯಾಪ್ಟರ್ ಹಾರಾಟದಿಂದ ಸ್ಟೇಡಿಂನಲ್ಲಿದ್ದಂತ ಧೂಳು ಸಂಪೂರ್ಣವಾಗಿ ಹೋಗಿದೆ. ಈಗ ಪಿಚ್ ಪುಲ್ ಕ್ಲೀನ್ ಆಗಿದೆ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೋಪಾಲಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಂತ ರಾಣಾ ಟ್ರೋಫಿ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾರಿಕಾಂಬ ಜಾತ್ರೆಯ ಪ್ರಯುಕ್ತವಾಗಿ ಹೆಲಿ ಟೂರಿಸಂ ಆಯೋಜಿಸಲಾಗಿತ್ತು. ಗೋಪಾಲಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಕ್ಕೆ ಅನೇಕರು ಆಕ್ಷೇಪಿಸಿದ್ದರು. ಆದರೇ ಅವರು ಆಕ್ಷೇಪಿಸಿದಂತೆ ಯಾವುದೇ ಹಾಳು ಕ್ರೀಡಾಂಗಣದಲ್ಲಿ ಆಗಿಲ್ಲ. ಸುಖಾ ಸುಮ್ಮನೆ ಗೊಂದಲ ಮಾಡುವುದು ಬೇಡ. ಹೆಲಿಕ್ಯಾಪ್ಟರ್ ಹಾರಾಟದಿಂದ ಕ್ರೀಡಾಂಗಣದ ಧೂಳು ಸಂಪೂರ್ಣ ಕ್ಲೀನ್ ಆಗಿದೆ. ಒಂದು ವೇಳೆ ಪಿಚ್ ಹಾಳಾಗಿದ್ದರೇ ಕ್ರೀಢಾಂಗಣ ಕಾಮಗಾರಿಯ ವೇಳೆಯಲ್ಲಿ ಸರಿ ಪಡಿಸಿಕೊಡುವುದಾಗಿ ತಿಳಿಸಿದರು. ಇಲ್ಲಿ ಕ್ರೀಢಾ ಪಟುಗಳೇ ಇದ್ದಾರೆ. ಆಟ ಆಡೋರಿಗೆ ಹೆಲಿಕ್ಯಾಪ್ಟರ್ ಹಾರಾಟದ ಬಳಿಕ…

Read More