Author: kannadanewsnow09

ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡಗಳು ಕೇವಲ ಮಧ್ಯಪ್ರಾಚ್ಯವನ್ನಷ್ಟೇ ಅಲ್ಲ, ಕರ್ನಾಟಕದ ವಾಹನ ಸವಾರರನ್ನೂ ಬೆಚ್ಚಿಬೀಳಿಸಿವೆ. ಹೌದು, ಯುದ್ಧದ ಕಾರಣದಿಂದಾಗಿ ಭಾರತದಲ್ಲಿ ತೈಲ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಲಿದೆ ಎಂಬ ಬಲವಾದ ವದಂತಿಯೊಂದು ರಾಜ್ಯಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದೆ. ಇದರ ಪರಿಣಾಮವಾಗಿ, ಬೆಲೆ ಏರಿಕೆ ಅಥವಾ ಪೂರೈಕೆ ಸ್ಥಗಿತದ ಭೀತಿಯಿಂದ ರಾಜ್ಯದ ನಾನಾ ಭಾಗಗಳಲ್ಲಿ ಜನತೆ ಪೆಟ್ರೋಲ್ ಬಂಕ್‌ಗಳತ್ತ ದೌಡಾಯಿಸಿದ್ದು, ಭಾರೀ ನೂಕುನುಗ್ಗಲು ಉಂಟಾಗಿದೆ. ಬಂಕ್‌ಗಳ ಮುಂದೆ ವಾಹನಗಳ ಉದ್ದನೆಯ ಸಾಲು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದೇ ಒಂದು ಸುಳ್ಳು ಸಂದೇಶ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು ಮತ್ತು ಗ್ರಾಮೀಣ ಭಾಗಗಳ ಪೆಟ್ರೋಲ್ ಪಂಪ್‌ಗಳಲ್ಲಿ ವಾಹನ ಸವಾರರು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ತಮ್ಮ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ಟ್ಯಾಂಕ್ ಫುಲ್ ಮಾಡಿಸುತ್ತಿರುವುದು ಮಾತ್ರವಲ್ಲದೆ, ಮನೆಗಳಿಂದ ದೊಡ್ಡ ದೊಡ್ಡ ಪ್ಲಾಸ್ಟಿಕ್ ಕ್ಯಾನ್‌ಗಳು, ಬಾಟಲಿಗಳನ್ನು…

Read More

ಬೆಂಗಳೂರು: ರಾಜ್ಯದ 10 ವಿಭಾಗಗಳಿಗೆ ಬಿಜೆಪಿಯಿಂದ ಪ್ರಭಾರಿಗಳು ಹಾಗೂ ಸಹ ಪ್ರಭಾರಿಗಳನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶಿಸಿದ್ದಾರೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಈ ಕೆಳಕಂಡ ಪ್ರಮುಖರನ್ನು ಪಕ್ಷದ 10 ವಿಭಾಗಗಳಿಗೆ ಪ್ರಭಾರಿಗಳು ಹಾಗೂ ಸಹ-ಪ್ರಭಾರಿಗಳನ್ನಾಗಿ ನಿಯುಕ್ತಿ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಹೀಗಿದೆ 10 ವಿಭಾಗಗಳ ಪ್ರಭಾರಿ, ಸಹ ಪ್ರಭಾರಿಗಳ ಪಟ್ಟಿ ಮೈಸೂರು – ಸ್ವಾಮಿ ಮರುಳಾಪುರ ಅವರನ್ನು ಪ್ರಭಾರಿಯಾಗಿ, ಇ.ಸಿ ನಿಂಗರಾಜುಗೌಡ ಅವರನ್ನು ಸಹ-ಪ್ರಭಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಮಂಗಳೂರು- ಬಿ.ಬಿ ಭಾರತೀಶ್ ಅವರನ್ನು ಪ್ರಭಾರಿ, ಜಯಂತ್ ಕೋಟ್ಯಾನ್ ಅವರನ್ನು ಸಹ-ಪ್ರಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಶಿವಮೊಗ್ಗ- ಆರ್.ಕೆ ಸಿದ್ರಾಮಣ್ಣ ಅವರನ್ನು ಪ್ರಭಾರಿ, ಆರ್.ಡಿ ಹೆಗಡೆ ಸಹ ಪ್ರಭಾರಿಯಾಗಿ ನೇಮಿಸಲಾಗಿದೆ. ಧಾರವಾಡ- ಜಯತೀರ್ಥ ಕಟ್ಟಿ ಅವರನ್ನು ಪ್ರಭಾರಿ, ಭೋಜರಾಜ ಕರೂದಿ ಅವರನ್ನು ಸಹ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ. ಬೆಳಗಾವಿ- ಸಂಜಯ್ ಪಾಟೀಲ್ ಅವರನ್ನು ಪ್ರಭಾರಿ, ಬಸವರಾಜ ಯಂಕಂಚಿ ಅವರನ್ನು ಸಹ ಪ್ರಭಾರಿಯಾಗಿ ನೇಮಿಸಲಾಗಿದೆ. ಕಲಬುರ್ಗಿ- ಅರುಣ್ ಶಹಾಪುರ…

Read More

ಶಿವಮೊಗ್ಗ : ಮಾ. 6ರಂದು ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯೋತ್ಸವ ಅಂಗವಾಗಿ ಬೃಹತ್ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭಜರಂಗ ದಳದ ಜಿಲ್ಲಾ ಸಂಯೋಜಕ ಸಂತೋಷ್ ಶಿವಾಜಿ ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳದ ಆಶ್ರಯದಲ್ಲಿ ಸಂಜೆ 5ಕ್ಕೆ ಗಾಂಧಿ ಮೈದಾನದಲ್ಲಿ ಬೃಹತ್ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಹಿಂದೂ ಸಾಮ್ರಾಜ್ಯೋತ್ಸವ ಅಂಗವಾಗಿ ಮಧ್ಯಾಹ್ನ 2-30ಕ್ಕೆ ಮಹಾಗಣಪತಿ ದೇವಸ್ಥಾನದಿಂದ ಸಂಭ್ರಮದ ಶೋಭಾಯಾತ್ರೆ ನಡೆಯಲಿದೆ. ಶೋಭಯಾತ್ರೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿದ್ದು, ಸಹಸ್ರಾರು ಹಿಂದೂ ಬಾಂಧವರು, ಪ್ರಮುಖರು, ಸಂಘಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಇರುವ ಶೋಭಯಾತ್ರೆ ಸಂಚರಿಸಲಿದೆ ಎಂದು ಹೇಳಿದರು. ಸಂಜೆ 5ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ವಹಿಸಲಿದ್ದಾರೆ. ವಿಶ್ವಹಿಂದೂ…

Read More

ಶಿವಮೊಗ್ಗ : ಮಾ. 6ರಿಂದ 8ರವರೆಗೆ ಮೂರು ದಿನಗಳ ಚರಕದ ಕೈಮಗ್ಗ, ಕೈಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಆಹಾರ ಮೇಳವನ್ನು ಬ್ರಾಸಂ ಸಭಾಂಗಣದಲ್ಲಿ ಏರ್ಪಡಿಸಿದೆ ಎಂದು ಚಕರ ಮಹಿಳಾ ವಿವಿದೋದ್ದೇಶ ಕೈಗಾರಿಕಾ ಸಂಘದ ಮಾರಾಟ ವಿಭಾಗದ ಪದ್ಮಶ್ರೀ ತಿಳಿಸಿದರು. ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚರಕ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ಪ್ರದರ್ಶನ ಮತ್ತು ಮಾರಾಟದಲ್ಲಿ ಬೇರೆಬೇರೆ ಭಾಗಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಪ್ರತಿದಿನ ಬೆಳಿಗ್ಗೆ 10-30ರಿಂದ ರಾತ್ರಿ 8-30ರವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದೊಂದಿಗೆ ಪವಿತ್ರ ವಸ್ತç ಯೋಜನೆಯಡಿ ಈ ಮೇಳವನ್ನು ಆಯೋಜಿಸಿದೆ. ಮೇಳದಲ್ಲಿ ಒಟ್ಟು ಎಂಟು ಮಳಿಗೆಗಳಲ್ಲಿ ಚರಕ ಕೈಮಗ್ಗದ ಸಿದ್ದ ಉಡುಪುಗಳು, ಬಟ್ಟೆಗಳು, ನೈಸರ್ಗಿಕ ಬಣ್ಣದ ಬೆಡ್‌ಸ್ಟೈಡ್‌ಗಳು, ಜಮ್ದಾನಿ ಬಟ್ಟೆಯಿಂದ ತಯಾರಿಸಿದ ಸೀರೆ, ಖುರ್ತಾ, ಶರ್ಟ್ ಹಾಗೂ ಗೃಹಾಲಂಕಾರ ಉಡುಪಗಳು ಲಭ್ಯವಿದೆ ಎಂದರು. ಉತ್ತರ ಕರ್ನಾಟಕ ಭಾಗದ ಸೀರೆಗಳು, ಗಜೇಂದ್ರಗಢದ ಸಿದ್ದ ಉಡುಪುಗಳು, ಸಿದ್ದಾಪುರದ…

Read More

ಉತ್ತರ ಕನ್ನಡ: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೇರಿಕಾ ಯುದ್ಧ ಸಾರಿದ್ದಾವೆ. ಇರಾನ್ ನಲ್ಲಿನ ಹಲವು ಪ್ರದೇಶಗಳನ್ನು ಕ್ಷಿಪಣಿ, ಡ್ರೋನ್ ದಾಳಿ ನಡೆಸಿ ನಾಶಗೊಳಿಸಿದ್ದಾವೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ತೈಲ ದರ ಹೆಚ್ಚಾಗಲಿದೆ ಎನ್ನುವಂತ ವದಂತಿ ಹಬ್ಬಿದೆ. ಹೀಗಾಗಿ ಸುದ್ದಿ ವೈರಲ್ ಆಗುತ್ತಿದ್ದಂತೆ ವಾಹನ ಸವಾರರು ಪೆಟ್ರೋಲ್, ಡೀಸೆಲ್ ಖರೀದಿಗಾಗಿ ಮುಗಿ ಬಿದ್ದಿದ್ದಾರೆ. ಇರಾನ್ ಮೇಲೆ ಇಸ್ರೇಲ್-ಅಮೇರಿಕಾದಿಂದ ದಾಳಿ ನಡೆಸಲಾಗುತ್ತಿದೆ. ಯುದ್ಧದಿಂದ ತೈಲ ದರ ಹೆಚ್ಚಾಗುತ್ತದೆ ಎನ್ನುವಂತ ವದಂತಿ ಹಬ್ಬಿದೆ. ಈ ಸುಳ್ಳು ಸುದ್ದಿಯನ್ನು ನಂಬಿದಂತ ಜನರು, ಪೆಟ್ರೋಲ್, ಡೀಸೆಲ್ ಖರೀದಿಗಾಗಿ ನಾಮುಂದು, ತಾಮುಂದು ಎನ್ನುವಂತೆ ಮುಗಿ ಬಿದ್ದಿರುವಂತ ಘಟನೆ ಭಟ್ಕಳದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪೆಟ್ರೋಲ್ ಖರೀದಿಗಾಗಿ ನೂಕು ನುಗ್ಗಲು ಉಂಟಾಗಿದೆ. ಭಟ್ಕಳದ ಕೆಲ ಬಂಕ್ ಗಳಲ್ಲಿ ಪೆಟ್ರೋಲ್ ಸಂಪೂರ್ಣ ಖಾಲಿಯಾಗಿದೆ. ಭಟ್ಕಳದಲ್ಲಿ ಪೆಟ್ರೋಲ್ ಸಿಗದಿದ್ದಕ್ಕೆ ಹೊನ್ನಾವರ ಹಾಗೂ ಕುಂದಾಪುರಕ್ಕೆ ತೆರಳಿ ಪೆಟ್ರೋಲ್ ಅನ್ನು ಜನರು ಖರೀದಿಸುತ್ತಿದ್ದಾರೆ. https://kannadanewsnow.com/kannada/attention-female-journalists-in-the-state-applications-invited-for-free-digital-media-and-ai-usage-training/ https://kannadanewsnow.com/kannada/shocking-horrific-incident-in-hassan-teacher-dies-of-heart-attack-while-teaching-in-class/

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ಯಾವುದೇ ಒಂದು ಸಂಬಂಧ ಯಶಸ್ವಿಯಾಗಲು ಕೇವಲ ಪ್ರೀತಿ ಇದ್ದರೆ ಸಾಲದು, ಅಲ್ಲಿ ಸಂಗಾತಿಗಳ ನಡುವೆ ಉತ್ತಮ ತಿಳುವಳಿಕೆ ಮತ್ತು ದೈಹಿಕ ಸಾಮರಸ್ಯವೂ ಇರಬೇಕಾಗುತ್ತದೆ. ಆರೋಗ್ಯಕರ ಲೈಂಗಿಕ ಜೀವನವು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ದಂಪತಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಸಂಗಾತಿಯನ್ನು ಲೈಂಗಿಕವಾಗಿ ಮತ್ತು ಭಾವನಾತ್ಮಕವಾಗಿ ತೃಪ್ತಿಪಡಿಸಲು ತಜ್ಞರು ನೀಡುವ ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ: 1. ಮುಕ್ತ ಸಂವಹನ (Communication is Key) ಲೈಂಗಿಕ ತೃಪ್ತಿಯ ಮೊದಲ ಹೆಜ್ಜೆ ಎಂದರೆ ಪರಸ್ಪರ ಮಾತನಾಡುವುದು. ನಿಮ್ಮ ಇಷ್ಟ-ಕಷ್ಟಗಳ ಬಗ್ಗೆ ಸಂಕೋಚವಿಲ್ಲದೆ ಸಂಗಾತಿಯೊಂದಿಗೆ ಚರ್ಚಿಸಿ. ಅವರಿಗೆ ಏನ ಇಷ್ಟವಾಗುತ್ತದೆ ಮತ್ತು ನಿಮಗೆ ಯಾವುದರಲ್ಲಿ ಆನಂದ ಸಿಗುತ್ತದೆ ಎಂಬುದನ್ನು ಪರಸ್ಪರ ಹಂಚಿಕೊಳ್ಳುವುದರಿಂದ ಆಪ್ತತೆ ಹೆಚ್ಚುತ್ತದೆ. 2. ಮುನ್ನಾಟಕ್ಕೆ ಆದ್ಯತೆ ನೀಡಿ (Foreplay) ಅನೇಕರು ನೇರ ಲೈಂಗಿಕ ಕ್ರಿಯೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಆದರೆ, ಲೈಂಗಿಕ ತೃಪ್ತಿಯಲ್ಲಿ ‘ಫೋರ್‌ಪ್ಲೇ’ ಅಥವಾ ಮುನ್ನಾಟ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಪರಸ್ಪರ ಅಪ್ಪಿಕೊಳ್ಳುವುದು, ಮುತ್ತಿಡುವುದು ಮತ್ತು ಮಧುರವಾದ ಮಾತುಗಳ…

Read More

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು ಇನ್ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ ಸಿ.ಎಸ್.ಆರ್.‌ ಕಾರ್ಯಕ್ರಮದಡಿ ಮಹಿಳಾ ಪತ್ರಕರ್ತೆಯರಿಗಾಗಿಯೇ ವಿಶೇಷ ತರಬೇತಿ ಆಯೋಜಿಸಿದ್ದು, ಪತ್ರಕರ್ತೆಯರಿಂದ ಅರ್ಜಿ ಆಹ್ವಾನಿಸಿದೆ. ಈ ವೇಳೆಯಲ್ಲಿ ಡಿಜಿಟಲ್ ಮಾಧ್ಯಮ, ಎಐ ಬಳಕೆ ಸೇರಿದಂತೆ ಇತರೆ ತರಬೇತಿಯನ್ನು ಉಚಿತವಾಗಿ ವಸತಿ ಸಹಿತ ಮೂರು ದಿನಗಳ ಕಾಲ ನೀಡಲಾಗುತ್ತದೆ. ಈ ತರಬೇತಿಯು ಮಾರ್ಚ್‌ 25 ರಿಂದ 27ರ ವರೆಗೆ ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ 5 ವರ್ಷ ಸೇವಾನುಭವ ಹೊಂದಿರುವ ಪತ್ರಕರ್ತೆಯರು ಅರ್ಜಿ ಸಲ್ಲಿಸಬಹುದು. ಆಸಕ್ತ ಪತ್ರಕರ್ತೆಯರು ಗೂಗಲ್‌ ಫಾರ್ಮ್‌ https://forms.gle/tozr4GxUQibDHBvk9 ನಲ್ಲಿ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಮೂಲಕ ತರಬೇತಿಗೆ ನೋಂದಾಯಿಸಬಹುದಾಗಿದೆ. ಅರ್ಜಿ ನಮೂನೆಯಲ್ಲಿ ಸೂಚಿಸಿರುವಂತೆ ಪತ್ರಕರ್ತೆಯರು ತಮ್ಮ ಭಾವಚಿತ್ರ, ವಯಸ್ಸಿನ ದಾಖಲೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಅಥವಾ ಕಚೇರಿಯ ಅಧಿಕೃತ ಗುರುತಿನ ಚೀಟಿ, ಸದರಿ ಮಾಧ್ಯಮ ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ…

Read More

ಟೆಹ್ರಾನ್/ಜೆರುಸಲೇಂ: ಇರಾನ್‌ನ ಇಸ್ಲಾಮಿಕ್ ಭಯೋತ್ಪಾದನಾ ಆಡಳಿತದ ವಿರುದ್ಧ ಇಸ್ರೇಲ್ ವಾಯುಪಡೆ (IAF) ಬೃಹತ್ ಮಟ್ಟದ ದಾಳಿ ನಡೆಸಿದೆ. ಇರಾನ್‌ನಾದ್ಯಂತ ಇರುವ ಹತ್ತಾರು ಮೂಲಸೌಕರ್ಯ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಈ ದಾಳಿಯಲ್ಲಿ, ಇಸ್ಫಹಾನ್‌ನಲ್ಲಿರುವ ಪ್ರಮುಖ ಕ್ಷಿಪಣಿ ಸಂಗ್ರಹಣೆ ಮತ್ತು ಉತ್ಪಾದನಾ ಘಟಕ ಸಂಪೂರ್ಣವಾಗಿ ನಾಶವಾಗಿದೆ ಎಂದು ವರದಿಯಾಗಿದೆ. ಘದರ್ ಕ್ಷಿಪಣಿ ಕೇಂದ್ರವೇ ಟಾರ್ಗೆಟ್: ಪಶ್ಚಿಮ ಇರಾನ್‌ನ ಇಸ್ಫಹಾನ್ ನಗರದಲ್ಲಿರುವ ಕ್ಷಿಪಣಿ ಸಂಕೀರ್ಣದ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ಬಾಂಬ್‌ಗಳ ಮಳೆಗರೆದಿವೆ. ಈ ಕೇಂದ್ರವನ್ನು ಇರಾನ್ ಆಡಳಿತವು ಅತ್ಯಂತ ಶಕ್ತಿಶಾಲಿ ‘ಘದರ್’ (Ghadr) ಬ್ಯಾಲಿಸ್ಟಿಕ್ ಕ್ಷಿಪಣಿಗಳ ಉತ್ಪಾದನೆ, ಸಂಗ್ರಹಣೆ ಮತ್ತು ಉಡಾವಣೆಗಾಗಿ ಬಳಸುತ್ತಿತ್ತು. ಈ ದಾಳಿಯಿಂದಾಗಿ ಇರಾನ್‌ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಹಿನ್ನಡೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. https://twitter.com/IDF/status/2029129175953482217 ವ್ಯಾಪಕ ವಾಯು ದಾಳಿ: ಇದು ಕೇವಲ ಒಂದು ಕೇಂದ್ರದ ಮೇಲೆ ನಡೆದ ದಾಳಿಯಲ್ಲ, ಬದಲಾಗಿ ಇರಾನ್‌ನಾದ್ಯಂತ ಇರುವ ಭಯೋತ್ಪಾದನಾ ಪೋಷಕ ಮೂಲಸೌಕರ್ಯಗಳ ಮೇಲೆ ನಡೆದ ಸರಣಿ ದಾಳಿಯ ಭಾಗವಾಗಿದೆ. ಇಸ್ರೇಲ್ ರಕ್ಷಣಾ ಪಡೆಗಳು ಇರಾನ್‌ನ…

Read More

ಕೊಲಂಬೊ: ಶ್ರೀಲಂಕಾದ ದಕ್ಷಿಣ ಕರಾವಳಿಯ ಹಿಂದೂ ಮಹಾಸಾಗರದಲ್ಲಿ ಬುಧವಾರ ಭೀಕರ ಜಲಗಂಡಾಂತರ ಸಂಭವಿಸಿದೆ. ಇರಾನ್ ದೇಶಕ್ಕೆ ಸೇರಿದ ಹಡಗಿನ ಮೇಲೆ ಜಲಾಂತರ್ಗಾಮಿ (Submarine) ದಾಳಿ ನಡೆದಿದ್ದು, ಕನಿಷ್ಠ 101 ಜನರು ನಾಪತ್ತೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ ಎಂದು ಶ್ರೀಲಂಕಾ ನೌಕಾಪಡೆ ಹಾಗೂ ರಕ್ಷಣಾ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ‘ರಾಯಿಟರ್ಸ್’ ವರದಿ ಮಾಡಿದೆ. ನಡುಸಮುದ್ರದಲ್ಲಿ ಸಂಭವಿಸಿದ ದುರಂತ ಬುಧವಾರ ಶ್ರೀಲಂಕಾ ಕರಾವಳಿಯಿಂದ ಸ್ವಲ್ಪ ದೂರದಲ್ಲಿ ಈ ಘಟನೆ ನಡೆದಿದೆ. ಹಡಗಿನಿಂದ ತುರ್ತು ಸಂದೇಶ (Distress Call) ಬಂದ ತಕ್ಷಣ ಕಾರ್ಯಪ್ರವೃತ್ತವಾಗಿರುವ ಶ್ರೀಲಂಕಾ ಮಿಲಿಟರಿ, ಬೃಹತ್ ಮಟ್ಟದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ದಾಳಿಯ ತೀವ್ರತೆಗೆ ಹಡಗು ಮುಳುಗುತ್ತಿದ್ದು, ಅದರಲ್ಲಿದ್ದ ನೂರಾರು ಮಂದಿ ಸಮುದ್ರ ಪಾಲಾಗಿದ್ದಾರೆ ಎಂದು ನೌಕಾಪಡೆ ದೃಢಪಡಿಸಿದೆ. ಚುರುಕುಗೊಂಡ ರಕ್ಷಣಾ ಕಾರ್ಯಾಚರಣೆ ರಕ್ಷಣಾ ಸಚಿವಾಲಯದ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿ, “ಇರಾನ್ ಹಡಗಿನಿಂದ ತುರ್ತು ಸಂಕೇತ ಲಭ್ಯವಾದ ತಕ್ಷಣ ಶ್ರೀಲಂಕಾ ನೌಕಾಪಡೆಯು ರಕ್ಷಣಾ ನೌಕೆಗಳನ್ನು ಸ್ಥಳಕ್ಕೆ ರವಾನಿಸಿದೆ,”…

Read More

ಬೆಂಗಳೂರು: ಹೊರವಲಯದ ಪ್ರಯಾಣಿಕರಿಗೆ ಸುಸಜ್ಜಿತ ಹಾಗೂ ಆರಾಮದಾಯಕ ಪ್ರಯಾಣದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಹತ್ವದ ಹೆಜ್ಜೆ ಇಟ್ಟಿದೆ. ದಿನಾಂಕ 04 ಮಾರ್ಚ್ 2026 ರಂದು ಕೆಂಪುಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಹಾಗೂ ಬನಶಂಕರಿಯಿಂದ ಕನಕಪುರಕ್ಕೆ ನೂತನ “ವಜ್ರ ವಿಸ್ತಾರ” ಹವಾನಿಯಂತ್ರಿತ (AC) ಬಸ್ ಸೇವೆಗಳನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು. ಇಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ನೂತನ ಸಾರಿಗೆ ಸೇವೆಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಹೊರವಲಯದ ಜನರಿಗೆ ಬೆಂಗಳೂರಿನ ಸಂಪರ್ಕವನ್ನು ಸುಲಭಗೊಳಿಸಲು ಮತ್ತು ಹವಾನಿಯಂತ್ರಿತ ಸೇವೆಯನ್ನು ಕೈಗೆಟುಕುವಂತೆ ಮಾಡಲು ‘ವಜ್ರ ವಿಸ್ತಾರ’ ಯೋಜನೆಯನ್ನು ಜಾರಿಗೆ ತರಲಾಗಿದೆ,” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಿ.ಎಸ್. ಆರಾಧ್ಯ, ಹೆಚ್.ಎ.ಇಕ್ಬಾಲ್ ಹುಸೇನ್, ಮಾನ್ಯ ಶಾಸಕರು, ರಾಮನಗರ ವಿಧಾನಸಭಾ ಕ್ಷೇತ್ರ, ಸಂಸ್ಥೆಯ ಉಪಾಧ್ಯಕ್ಷರಾದ ನಿಕೇತ್ ರಾಜ್ ಎಂ. ಅವರೊಂದಿಗೆ ಕೆ.ಬಿ. ಶಿವಕುಮಾರ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು; ಕೆ.ರಾಜು,…

Read More