Author: kannadanewsnow09

ಬೆಂಗಳೂರು: ಬಿಎಂಆರ್‌ಸಿಎಲ್ ವತಿಯಿಂದ ರಾಷ್ಟ್ರೀಯ ವಿದ್ಯಾಲಯ ರಸ್ತೆ–ಬೊಮ್ಮಸಂದ್ರ (ಯೆಲ್ಲೋ ಲೈನ್) ಮಾರ್ಗದಲ್ಲಿ 11ನೇ ಆಗಸ್ಟ್ 2025ರಿಂದ ಮೆಟ್ರೋ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಮಾರ್ಗದಲ್ಲಿ ಕ್ರಮೇಣ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿರುವುದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಮೆಟ್ರೋ ಪ್ರಯಾಣಿಕರಿಗೆ ಸುಗಮವಾದ ಮೊದಲ ಹಾಗೂ ಕೊನೆಯ ಮೈಲು ಸಂಪರ್ಕ (First/Last Mile Connectivity) ಒದಗಿಸುವ ಉದ್ದೇಶದಿಂದ Bangalore Metro Rail Corporation Limited (ಬಿಎಂಆರ್‌ಸಿಎಲ್) ಮತ್ತು Bangalore Metropolitan Transport Corporation (ಬಿಎಂಟಿಸಿ) ಸಂಯುಕ್ತವಾಗಿ ಕ್ರಮ ಕೈಗೊಂಡಿವೆ. ಈ ಫೀಡರ್ ಬಸ್ ಸೇವೆಗಳು ಹೊಸ ರಸ್ತೆ, ಸಿಂಗಸಂದ್ರ ಹಾಗೂ ಕುಡ್ಲು ಗೇಟ್ ಮೆಟ್ರೋ ನಿಲ್ದಾಣಗಳನ್ನು ಸುತ್ತಮುತ್ತಲಿನ ವಸತಿ ಮತ್ತು ವಾಣಿಜ್ಯ ಪ್ರದೇಶಗಳೊಂದಿಗೆ ಸಂಪರ್ಕಿಸಲಿದ್ದು, ಜನಸಂದಣಿಯನ್ನು ಕಡಿಮೆ ಮಾಡಲು ಹಾಗೂ ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಸುಲಭ ಮತ್ತು ಅನುಕೂಲಕರವಾಗಿಸಲು ಸಹಾಯ ಮಾಡಲಿದೆ. ಆರಂಭಿಸಲಾದ ಫೀಡರ್ ಬಸ್ ಸೇವೆಗಳ ವಿವರ:   ಹೊಸ ರಸ್ತೆ ಮೆಟ್ರೋ ನಿಲ್ದಾಣ – ಹೊಸ ರಸ್ತೆ ಮೆಟ್ರೋ ನಿಲ್ದಾಣ (ರಿಂಗ್ ರೂಟ್)…

Read More

ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಏರಿಕೆಯಾಗಿದ್ದು, ಇರಾನ್ ಕಳುಹಿಸಿದ್ದ ಮಾನವರಹಿತ ವಿಮಾನವನ್ನು (UAV) ಇಸ್ರೇಲ್ ಯಶಸ್ವಿಯಾಗಿ ಹೊಡೆದುರುಳಿಸಿದೆ. ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿ ನುಗ್ಗುತ್ತಿದ್ದ ಇರಾನ್‌ನ ಈ ಡ್ರೋನ್ ಅನ್ನು ಆಕಾಶದಲ್ಲೇ ತಡೆಹಿಡಿದ ಇಸ್ರೇಲ್ ರಕ್ಷಣಾ ಪಡೆ, ಕ್ಷಣಾರ್ಧದಲ್ಲಿ ಅದನ್ನು ನಾಶಪಡಿಸಿದೆ. ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್: ಇರಾನ್‌ನ ಯುಎವಿಯನ್ನು ಹೊಡೆದುರುಳಿಸಿದ ರೋಚಕ ದೃಶ್ಯದ ವಿಡಿಯೋವನ್ನು ಇಸ್ರೇಲ್ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಇಸ್ರೇಲಿ ಕ್ಷಿಪಣಿ ಅಥವಾ ಯುದ್ಧವಿಮಾನವು ಇರಾನ್‌ನ ಡ್ರೋನ್ ಅನ್ನು ಗುರಿಯಾಗಿಸಿಕೊಂಡು ಸ್ಫೋಟಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ತನ್ನ ಗಡಿ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶವನ್ನು ಇಸ್ರೇಲ್ ಈ ಮೂಲಕ ಜಗತ್ತಿಗೆ ರವಾನಿಸಿದೆ. https://twitter.com/modgovae/status/2030664175811199400 ಹೆಚ್ಚಿದ ಆತಂಕ: ಇಸ್ರೇಲ್ ಮತ್ತು ಇರಾನ್ ನಡುವೆ ಈಗಾಗಲೇ ಯುದ್ಧದ ಕಾರ್ಮೋಡ ಕವಿದಿದ್ದು, ಈ ವಿದ್ಯಮಾನವು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇರಾನ್‌ನ ಈ ನುಸುಳುವಿಕೆ ಪ್ರಯತ್ನಕ್ಕೆ ಇಸ್ರೇಲ್ ಪ್ರಬಲ ತಿರುಗೇಟು ನೀಡಿದ್ದು, ಈ ಘಟನೆಯ ನಂತರ ಎರಡೂ ರಾಷ್ಟ್ರಗಳ…

Read More

ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವ್ಯಾಪ್ತಿಯ ಮಲ್ಲೇಶ್ವರಂ ವಿಭಾಗದಲ್ಲಿರುವ ಪಿ.ಜಿ. ಹಳ್ಳಿ ಆರೋಗ್ಯ ಕೇಂದ್ರ ಮತ್ತು ನಾಗಪ್ಪ ಬ್ಲಾಕ್ ಆರೋಗ್ಯ ಕೇಂದ್ರಗಳಲ್ಲಿ ಫಿಸಿಯೋಥೆರಪಿಸ್ಟ್ (2) ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯನ್ನು ಇದೇ ಮಾರ್ಚ್ 10ರಂದು ವಾಕ್-ಇನ್ ಪ್ರಕ್ರಿಯೆಯ ಮೂಲಕ ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ನಡೆಸಲಾಗುತ್ತದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು ಖುದ್ದಾಗಿ ಆರೋಗ್ಯಾಧಿಕಾರಿ (ಪಶ್ಚಿಮ) ಅವರ ಕಚೇರಿಗೆ ಸಲ್ಲಿಸಬೇಕು. ಕಚೇರಿ ವಿಳಾಸ: ಪಾಲಿಕೆ ಸೌಧ, 2ನೇ ಮಹಡಿ, ಸಿದ್ದಗಂಗಾ ಸ್ಕೂಲ್ ರಸ್ತೆ, 14ನೇ ಅಡ್ಡರಸ್ತೆ, ಚಂದ್ರಲೇಔಟ್ 1ನೇ ಹಂತ, ಬೆಂಗಳೂರು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 7892158262 https://kannadanewsnow.com/kannada/a-young-man-was-brutally-attacked-in-bengaluru-two-assailants-carried-out-a-deadly-attack/ https://kannadanewsnow.com/kannada/opd-services-to-be-closed-in-karnataka-government-hospitals-from-march-11-patients-fear-hardship/

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ಅಟ್ಟಹಾಸ ಮುಂದುವರಿದಿದ್ದು, ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿ ಬಳಿ ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಲಾದ ಘಟನೆ ನಡೆದಿದೆ. ಇಬ್ಬರು ಯುವಕರು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಹಲ್ಲೆಗೊಳಗಾದ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಹಳೆಯ ದ್ವೇಷ ಅಥವಾ ಕ್ಷುಲ್ಲಕ ಕಾರಣಕ್ಕೆ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಸಾರ್ವಜನಿಕ ಪ್ರದೇಶದಲ್ಲೇ ನಡೆದ ಈ ಡೆಡ್ಲಿ ಅಟ್ಯಾಕ್‌ನಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಕೆಲ ಕಾಲ ಆತಂಕ ಮೂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಮಾಗಡಿ ರಸ್ತೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಹಲ್ಲೆ ನಡೆಸಿ ಪರಾರಿಯಾಗಿರುವ ಇಬ್ಬರು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಈ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. https://kannadanewsnow.com/kannada/government-facility-at-the-doorstep-of-elderly-couple-sagar-mla-belur-gopalakrishna-calls-it-humanity/ https://kannadanewsnow.com/kannada/opd-services-to-be-closed-in-karnataka-government-hospitals-from-march-11-patients-fear-hardship/

Read More

ಶಿವಮೊಗ್ಗ: ಅಧಿಕಾರಿಗಳು ಮನಸ್ಸು ಮಾಡಿದರೆ ಸರ್ಕಾರದ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ತಲುಪುತ್ತವೆ ಎಂಬುದಕ್ಕೆ ಸಾಗರದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಸಾಗರ ಪಟ್ಟಣದ ಭಾರತಿ ಕೋಂ ಗಜಾನನ ಎಂಬ ವೃದ್ಧ ದಂಪತಿಗಳ ಕಷ್ಟಕ್ಕೆ ಸ್ಪಂದಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಅಧಿಕಾರಿಗಳೊಂದಿಗೆ ಇಂದು ಅವರ ಮನೆಗೇ ತೆರಳಿ ವಿವಿಧ ಸೌಲಭ್ಯಗಳನ್ನು ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ. ಆ ಮೂಲಕ ಶಾಸಕ ಗೋಪಾಲಕೃಷ್ಣ ಬೇಳೂರು ಮಾನವೀಯತೆ ಮೆರೆದಿದ್ದಾರೆ. ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ ತಲುಪಿಸಿ, ಮಾನವೀಯತೆ ಮೆರೆದ ಶಾಸಕರು ಕಳೆದ ಹಲವು ದಿನಗಳಿಂದ ಸರಿಯಾದ ದಾಖಲೆಗಳಿಲ್ಲದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದ ಈ ವೃದ್ಧ ದಂಪತಿಗಳ ಬಗ್ಗೆ ಮಾಹಿತಿ ಪಡೆದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ವೃದ್ಧ ದಂಪತಿಗಳಾದಂತ ಭಾರತಿ ಅವರ ಆಧಾರ್ ಕಾರ್ಡ್ ಸಮಸ್ಯೆಯನ್ನು ಸರಿ ಪಡಿಸಿದ್ದರು. ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಸಾಗರ ಎಸಿ ವೀರೇಶ್…

Read More

ಬೆಂಗಳೂರು : ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಬೇಕು ಎಂಬ ಸರ್ಕಾರದ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಗೆಂದು ಕಾನೂನು-ನಿಯಮಗಳನ್ನೂ ಮೀರಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದರು. ಸೋಮವಾರ ವಿಧಾಸಭೆಯಲ್ಲಿ ಸೇಂದಿವನವನ್ನು ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಭೂ ಮಂಜೂರು ಮಾಡುವ ಸಂಬಂಧ ಪ್ರಶ್ನೋತ್ತರ ಕಲಾಪದ ಸಮಯದಲ್ಲಿ ಮಾಜಿ ಸಚಿವರಾದ ಟಿಬಿ ಜಯಚಂದ್ರ ಅವರ ಪ್ರಶ್ನೆಗೆ ಅವರು ಉತ್ತರ ನೀಡಿದರು. “ಹಿಂದೆ ಕರ್ನಾಟಕದಲ್ಲಿ ಹೆಂಡ (ಸೇಂದಿ) ಇಳಿಸುವ ಕುಲಕಸುಬು ಇತ್ತು. ಹೀಗಾಗಿ ಇದೇ ಕಸುಬವನ್ನು ನಂಬಿಕೊಂಡಿದ್ದವರಿಗಾಗಿ ಕೆಲವು ಪ್ರದೇಶಗಳನ್ನು ಈಚಲುವನ ಅಥವಾ ಸೇಂದಿವನ ಎಂದು ಕಾಯ್ದಿರಿಸಲಾಗಿತ್ತು. ಕಾಲಾನಂತರ ಈ ವೃತ್ತಿಯನ್ನು ನಿಷೇಧಿಸಿದ ಮೇಲೆ ಆ ಜಮೀನಿನಲ್ಲಿ ಕೆಲವರು ಕೃಷಿ ಮಾಡಿಕೊಂಡಿದ್ದರೆ, ಕೆಲವು ಪ್ರದೇಶಗಳನ್ನು ಸರ್ಕಾರವೇ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡಿದೆ. ಆದರೆ, ಅದೇ ಪ್ರದೇಶಗಳನ್ನು ಪ್ರಸ್ತುತ ಬಗರ್ ಹುಕುಂ ಯೋಜನೆ ಅಡಿಯಲ್ಲಿ ಮಂಜೂರು ಮಾಡಲು 2003ರ ಸರ್ಕಾರಿ ಆದೇಶದ…

Read More

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅನುಭವಿ ಫ್ರಿಲ್ಯಾನ್ಸರ್ ಕ್ಯಾಮರಾಮನ್‌ಗಳಿಗೆ (Freelancer Cameraman) ಸುವರ್ಣಾವಕಾಶವೊಂದು ಒದಗಿ ಬಂದಿದೆ. ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ವಿವರಗಳು: ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸ ಮಾಡಲು ಪ್ರತಿಭಾವಂತ ಫ್ರಿಲ್ಯಾನ್ಸರ್ ಕ್ಯಾಮರಾಮನ್‌ಗಳ ಅಗತ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳು ನಿಗದಿತ ಪ್ರಾಜೆಕ್ಟ್‌ಗಳ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅರ್ಹತೆ ಮತ್ತು ಶರತ್ತುಗಳು: ಸ್ವಂತ ಕ್ಯಾಮರಾ: ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮದೇ ಆದ ವೃತ್ತಿಪರ ಕ್ಯಾಮರಾವನ್ನು ಹೊಂದಿರಬೇಕು. ಸ್ಥಳ: ಅಭ್ಯರ್ಥಿಗಳು ಬೆಂಗಳೂರಿನ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅನುಭವ: ಕ್ಯಾಮರಾ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ ಮತ್ತು ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸುವುದು ಹೇಗೆ? ಮೇಲೆ ತಿಳಿಸಿದ ಅರ್ಹತೆಗಳನ್ನು ಹೊಂದಿರುವ ಮತ್ತು ಈ ಕೆಲಸದಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಬಯೋಡೇಟಾವನ್ನು (Resume) ಈ ಕೆಳಗಿನ ಇಮೇಲ್ ವಿಳಾಸಕ್ಕೆ ತಕ್ಷಣವೇ ಕಳುಹಿಸಿಕೊಡಲು ಕೋರಲಾಗಿದೆ. ಇಮೇಲ್ ವಿಳಾಸ: kannadanewsnow@gmail.com ನಿಮ್ಮ ಇಮೇಲ್‌ನಲ್ಲಿ ನಿಮ್ಮ ಹತ್ತಿರ…

Read More

ಶಿವಮೊಗ್ಗ: ಬೇಸಿಗೆಯ ತಾಪಮಾನ ದಿನೇ ದಿನೇ ಏರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗದಂತೆ ಅಧಿಕಾರಿಗಳು ಈಗಿನಿಂದಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸೋಮವಾರ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿಗಳು ಮತ್ತು ಪಿಡಿಓಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ತಾಲ್ಲೂಕಿನ ಗೆಣಿಸಿನಕುಣಿ, ಹೆಗ್ಗೋಡು, ಭೀಮನಕೋಣೆ ಸೇರಿದಂತೆ ವಿವಿಧ ಭಾಗಗಳಲ್ಲಿ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಹಕ್ರೆ ಬಳಿ ಶರಾವತಿ ಹಿನ್ನೀರಿನಿಂದ ನೀರು ಪೂರೈಸುವ ಯೋಜನೆ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ಆನಂತರ ಈ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಲಿದೆ. ತುರ್ತು ಅಗತ್ಯವಿರುವ ಕಡೆಗಳಲ್ಲಿ ತಕ್ಷಣವೇ ಕೊಳವೆ ಬಾವಿಗಳನ್ನು ಕೊರೆಸಲು ಶಾಸಕರು ಆದೇಶಿಸಿದರು. ಜಾತ್ರೆಗಳ ಯಶಸ್ವಿಗೆ ಅಧಿಕಾರಿಗಳ ಸಹಕಾರ ಅಗತ್ಯ: ಆನಂದಪುರ ಮತ್ತು…

Read More

ಯಾದಗಿರಿ: ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಮಠದ ಸ್ವಯಂಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾಗೆ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ಬಂಧನದ ಭೀತಿಯಲ್ಲಿದ್ದ ಮುತ್ಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ ಹಿನ್ನೆಲೆ: ಕೆಲ ದಿನಗಳ ಹಿಂದೆ ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಅತ್ಯಂತ ಅಸಭ್ಯವಾಗಿ ಮತ್ತು ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ಮಠದ ಹೆಸರಿನಲ್ಲಿ ಇಂತಹ ನೀಚ ಕೃತ್ಯವೆಸಗಿದ ಮುತ್ಯಾನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ವಿಡಿಯೋ ಆಧರಿಸಿ ಪೊಲೀಸರು ಮುತ್ಯಾನ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಕೋರ್ಟ್ ಆದೇಶ: ಪೊಲೀಸರು ಬೆನ್ನುಬೀಳುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಮುತ್ಯಾ, ಬಂಧನದಿಂದ ತಪ್ಪಿಸಿಕೊಳ್ಳಲು ಯಾದಗಿರಿಯ ಜಿಲ್ಲಾ ಪ್ರಧಾನ ಮತ್ತು ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದನು. ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ…

Read More

ಶಿವಮೊಗ್ಗ : ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನಕ್ಕೆ ಭಾನುವಾರ ನಡೆದ ಚುನಾವಣೆ ಭಾರಿ ಕುತೂಹಲ ಮೂಡಿಸಿತು, ಬೆಳಗಿನಿಂದಲೇ ಮತಗಟ್ಟೆಯ ಬಳಿ ಜನರು ಜಮಾಯಿಸಿದ್ದರು ರಕ್ಷಣಾ ಇಲಾಖೆಯ ಬಿಗಿ ಕಾವಲಿನಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಯಿತು. 32 ಜನರು ಆಯ್ಕೆಯಾಗಿದ್ದು, ವಿವಿಧ ಸಮಾಜದಿಂದ ನಾಲ್ಕು ಜನರು ಅವಿರೋಧ ಆಯ್ಕೆಯಾಗಿದ್ದಾರೆ. 481  ಮತದಾರರ ಪೈಕಿ 390 ಜನರು ಮತ ಚಲಾವಣೆ ಮಾಡಿದ್ದು, ಚುನಾವಣೆ ತೀವೃ ಪೈಪೋಟಿಯಿಂದ ಕೂಡಿತ್ತು. ಹೀಗಿದೆ ಸಾಮಾನ್ಯ ವರ್ಗದ ವಿಜೇತರು ಪಟ್ಟಿ ಪುರುಷೋತ್ತಮ, ಸುಂದರ ಸಿಂಗ್, ಎಸ್.ಎಲ್.ಮಂಜುನಾಥ್, ಆರ್.ಶ್ರೀನಿವಾಸ್ ಮೇಸ್ತಿ ಸಂತೋಷ್ ಆರ್. ಶೇಟ್, ವಿ.ಗುರು, ಆನಂದ ಎಂ.ಡಿ., ನಾಗರಾಜ್ ಎನ್., ಚಂದ್ರಕಾoತ್, ದಿನಕರ್, ನಾಗೇಂದ್ರ ಕೆ.ಎನ್., ಸುದರ್ಶನ ಭಂಡಾರಿ, ಅಶೋಕ್, ದಿನೇಶ್ ಡಿ., ಪಾಂಡುರoಗ ಟಿ.ವಿ., ಎನ್.ಶ್ರೀನಾಥ್, ಎನ್.ನಾರಾಯಣ, ಮಾ.ಸ.ನಂಜುoಡಸ್ವಾಮಿ, ನಿತ್ಯಾನಂದ ಶೆಟ್ಟಿ, ನಾಗೇಂದ್ರ ಎಸ್.ಕುಮಟಾ, ಕೆ.ಶ್ರೀಧರ್, ಪ್ರಶಾಂತ ಕುಮಾರ್ ಪಾಟೀಲ್, ಎಸ್.ವಿ.ಕೃಷ್ಣಮೂರ್ತಿ. ಹೀಗಿದೆ ಮಹಿಳಾ ವಿಭಾಗದಲ್ಲಿ ಗೆದ್ದ ಅಭ್ಯರ್ಥಿಗಳ ಪಟ್ಟಿ ಶರಾವತಿ ಸಿ. ರಾವ್, ಜ್ಯೋತಿ ಶಶಿಧರ್,…

Read More