Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಗಾಜಿಯಾಬಾದ್ನ 31 ವರ್ಷದ ಮಹಿಳೆಯೊಬ್ಬರು ತಮ್ಮ ಜೀವನದಲ್ಲಿ ಎಂದಿಗೂ ಧೂಮಪಾನ ಮಾಡಿಲ್ಲ, ಮೊದಲು ರಕ್ತದೊಂದಿಗೆ ಕೆಮ್ಮಿದರು, ಅದು ಅವರ ನೆರೆಹೊರೆಯ ವೈದ್ಯರು ಸೂಚಿಸಿದ ಕೆಲವು ಔಷಧಿಗಳಿಂದ ಕಡಿಮೆಯಾಯಿತು. ಆದರೆ ನಂತರ ಅವರಿಗೆ ಎಡಭಾಗದ ಎದೆ ನೋವು ಅನುಭವಿಸಿತು. ಶ್ವಾಸಕೋಶದ ಸೋಂಕಿಗೆ ಹೆದರಿ, ಅವರು ಹತ್ತಿರದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಗುರುಗ್ರಾಮ್ನ ಮೆಡಾಂತಾದಲ್ಲಿರುವ ಶ್ವಾಸಕೋಶ ಕಸಿ, ಎದೆ ಶಸ್ತ್ರಚಿಕಿತ್ಸೆ/ಆಂಕೊಸರ್ಜರಿಯ ಅಧ್ಯಕ್ಷ ಡಾ. ಅರವಿಂದ್ ಕುಮಾರ್ ಅವರ ಚಿಕಿತ್ಸಾಲಯಕ್ಕೆ ನಡೆದರು. “ಎಕ್ಸ್-ರೇ ಅವರ ಎಡ ಶ್ವಾಸಕೋಶದ ಮೇಲ್ಭಾಗದಲ್ಲಿ ಗೆಡ್ಡೆ ಇರುವುದು ಕಂಡುಬಂದಿದೆ. ಬಯಾಪ್ಸಿ ಹಂತ 2 ಶ್ವಾಸಕೋಶದ ಕ್ಯಾನ್ಸರ್ ಅನ್ನು ದೃಢಪಡಿಸಿತು, ಇದು ಚಿಕಿತ್ಸೆ ನೀಡಬಹುದಾದ ಕಿಟಕಿಯಾಗಿದೆ. ಅವರು ರೋಗ ಮುಕ್ತರಾಗಿದ್ದಾರೆ ಮತ್ತು ಕೆಲಸಕ್ಕೆ ಮರಳಿದ್ದಾರೆ ಆದರೆ ಅವರ ಪ್ರಕರಣವು ಗೊಂದಲದ ಪ್ರವೃತ್ತಿಯನ್ನು ತೋರಿಸುತ್ತದೆ” ಎಂದು ಅವರು ಹೇಳುತ್ತಾರೆ. ಸಾಮಾನ್ಯವಾಗಿ, ಶ್ವಾಸಕೋಶದ ಕ್ಯಾನ್ಸರ್ ಧೂಮಪಾನಿಗಳೊಂದಿಗೆ, ಸಾಮಾನ್ಯವಾಗಿ 50 ವರ್ಷಕ್ಕಿಂತ ಮೇಲ್ಪಟ್ಟವರೊಂದಿಗೆ ಮತ್ತು ಪುರುಷರೊಂದಿಗೆ ಸಂಬಂಧಿಸಿದೆ. ಆದರೆ ಡಾ. ಕುಮಾರ್ ಅವರ OPD…
ಬೆಂಗಳೂರು: ರಾಜ್ಯ ಸರ್ಕಾರವು ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದಿದೆ. ನಿನ್ನೆ ರೂ.3,200 ಪ್ರತಿ ಟನ್ ಗೆ ನೀಡುವುದಾಗಿ ತಿಳಿಸಿದ್ದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಇಂದು ರೂ.3,200 ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಹೆಚ್ಚುವರಿಯಾಗಿ ರೂ.50 ಮತ್ತು ಸರ್ಕಾರದಿಂದ 50 ರೂ ಸೇರಿದಂತೆ ಪ್ರತಿ ಟನ್ ಕಬ್ಬಿಗೆ ರೂ.3,300 ನೀಡುವುದಾಗಿ ಘೋಷಣೆ ಮಾಡಿದರು. ಇಂದು ಸಕ್ಕರೆ ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರ ರೈತರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಾಜ್ಯದಲ್ಲಿ 12 ಕಾರ್ಖಾನೆ ಹೊರತುಪಡಿಸಿದರೇ ಉಳಿದೆಲ್ಲವೂ ಖಾಸಗಿಯವು. ದಿನಾಂಕ 06-05-2025ರಂದು ಎಫ್ ಆರ್ ಸಿ ಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. 2025-26ನೇ ಸಾಲಿನಲ್ಲಿ 10.25 ರಿಕವರಿ ಇದ್ದರೇ ಟನ್ ಗೆ ರೂ.3,550 ರೂ ನಿಗದಿ ಪಡಿಸಲಾಗಿದೆ. ಇದರಲ್ಲಿ ಕಟಾವು, ಸಾರಿಗೆ ವೆಚ್ಚವೂ ಸೇರಿರುತ್ತದೆ ಎಂಬುದಾಗಿ ತಿಳಿಸಿದರು. 9.5 ರಿಕವರಿಗಿಂತ ಕಡಿಮೆ ಇದ್ದರೇ 3290.50 ರೂಪಾಯಿ ನಿಗದಿ ಪಡಿಸಲಾಗಿದೆ. ಎಫ್ ಆರ್ ಪಿ ಗಿಂತ ಹೆಚ್ಚಿನ ದರವನ್ನು ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.…
ಬೆಂಗಳೂರು: ಕಬ್ಬು ಬೆಳೆಗಾರರು ಬೆಲೆ ನಿಗದಿಗೆ ಒತ್ತಾಯಿಸಿ ನಡೆಸುತ್ತಿರುವಂತ ಪ್ರತಿಭಟನೆ ಸಂಬಂಧ ಇಂದು ಬೆಳಗ್ಗೆಯಿಂದ ಕಾರ್ಖಾನೆ ಮಾಲೀಕರು, ರೈತರೊಂದಿಗೆ ಸಭೆ ನಡೆಸಿದ್ದೇನೆ. ಪ್ರತಿ ಟನ್ ಕಬ್ಬಿಗೆ ರೂ.3,300 ನೀಡಲು ನಿರ್ಧರಿಸಿರುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಿಸಿದರು. ರಾಜ್ಯದಲ್ಲಿ 12 ಕಾರ್ಖಾನೆ ಹೊರತುಪಡಿಸಿದರೇ ಉಳಿದೆಲ್ಲವೂ ಖಾಸಗಿಯವು. ದಿನಾಂಕ 06-05-2025ರಂದು ಎಫ್ ಆರ್ ಸಿ ಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. 2025-26ನೇ ಸಾಲಿನಲ್ಲಿ 10.25 ರಿಕವರಿ ಇದ್ದರೇ ಟನ್ ಗೆ ರೂ.3,550 ರೂ ನಿಗದಿ ಪಡಿಸಲಾಗಿದೆ. ಇದರಲ್ಲಿ ಕಟಾವು, ಸಾರಿಗೆ ವೆಚ್ಚವೂ ಸೇರಿರುತ್ತದೆ ಎಂಬುದಾಗಿ ತಿಳಿಸಿದರು. 9.5 ರಿಕವರಿಗಿಂತ ಕಡಿಮೆ ಇದ್ದರೇ 3290.50 ರೂಪಾಯಿ ನಿಗದಿ ಪಡಿಸಲಾಗಿದೆ. ಎಫ್ ಆರ್ ಪಿ ಗಿಂತ ಹೆಚ್ಚಿನ ದರವನ್ನು ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾನಿರತ ರೈತರ ಜೊತೆಗೆ ಡಿಸಿ, ಎಸ್ ಪಿ ಸಭಎ ವಿಫಲವಾಗಿತ್ತು ಎಂದರು. ಪ್ರತಿ ಟನ್ ಕಬ್ಬಿಗೆ ರೂ.3,500 ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ಈ ವಿಷಯ ಸಂಬಂಧ ಕೇಂದ್ರ ಸರ್ಕಾರಕ್ಕೆ…
ಶಿವಮೊಗ್ಗ : ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸಾಗರ ಜಿಲ್ಲೆ ಮಾಡುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೈತಿಕ ಬೆಂಬಲ ವ್ಯಕ್ತಪಡಿಸಲಾಯಿತು. ಈ ವೇಳ ಮಾತನಾಡಿದಂತ ಕೆಯುಡಬ್ಲ್ಯೂಜೆ ಸಂಘದ ಪರವಾಗಿ ಉಪಾಧ್ಯಕ್ಷ ಲೋಕೇಶ್ ಕುಮಾರ್ ಗುಡಿಗಾರ ಮಾತನಾಡಿ, ಸಾಗರ ಜಿಲ್ಲೆಯಾಗಲು ಸಮರ್ಥವಾಗಿದೆ. ರಾಜ್ಯ ಸರ್ಕಾರ ಡಿ.31ರೊಳಗೆ ಕೇಂದ್ರಕ್ಕೆ ಸಾಗರ ಜಿಲ್ಲೆಯಾಗುವ ಪ್ರಸ್ತಾವನೆ ಸಲ್ಲಿಸಬೇಕು. ಸಾಗರ ಉಪವಿಭಾಗೀಯ ಕೇಂದ್ರವಾಗಿದ್ದು ಶಿವಮೊಗ್ಗ ನಂತರ ಅತಿದೊಡ್ಡ ವಿಸ್ತೀರ್ಣ ಹೊಂದಿದೆ ತಾಲ್ಲೂಕು ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ, ಶಿಕಾರಿಪುರ ಸೇರಿಸಿ ಸಾಗರ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ, ಸಾಗರ ಜಿಲ್ಲೆ ಘೋಷಣೆಗೆ ಒತ್ತಾಯಿಸಿ ನಡೆಸುತ್ತಿರುವ ಹಕ್ಕೊತ್ತಾಯದ ಪ್ರತಿಭಟನೆಗೆ ಸಂಘದ ಸಂಪೂರ್ಣ ಬೆಂಬಲ ಇದೆ ಎಂದರು. ಸಂಘದ ಅಧ್ಯಕ್ಷ ಜಿ.ನಾಗೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ, ಖಜಾಂಚಿ ಎಂ.ಜಿ.ರಾಘವನ್, ಪತ್ರಕರ್ತರಾದ ಗಿರೀಶ್ ರಾಯ್ಕರ್, ಸತ್ಯನಾರಾಯಣ, ಇಮ್ರಾನ್ ಸಾಗರ್, ಮಾ.ಸ.ನಂಜುಂಡಸ್ವಾಮಿ, ಶಿವಕುಮಾರ್ ಗೌಡ, ನಾಗರಾಜ್, ಜಮೀಲ್ ಸಾಗರ್,…
ಶಿವಮೊಗ್ಗ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಅಕ್ಕ ಪಡೆ ತಂಡ ರಚನೆ ಮಾಡಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ತಂಡಕ್ಕೆ ಎನ್ ಸಿ ಸಿ ‘ಸಿ’ ಪ್ರಮಾಣ ಪತ್ರ ಹೊಂದಿರುವ 5 ಮಹಿಳಾ ಅಭ್ಯರ್ಥಿಗಳನ್ನು ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು 35 ರಿಂದ 45 ವರ್ಷದೊಳಗಿನವರಾಗಿದ್ದು, ದೈಹಿಕ ಸದೃಢತೆ ಮತ್ತು ಸ್ಥಳೀಯ ನಿವಾಸಿ ಯಾಗಿರಬೇಕು. ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ 2 ಪಾಳಿ ಆಧಾರದಲ್ಲಿ ಕೆಲಸ ನಿರ್ವಹಿಸಲು ಬದ್ಧರಿರಬೇಕು. ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 100 ಅಡಿ ರಸ್ತೆ, ಆಲ್ಕೊಳ ಶಿವಮೊಗ್ಗ ಇವರಿಗೆ ದಿನಾಂಕ:13.11.2025 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08182-295514 ಅಥವಾ ddwcdshimoga@gmail.com ಸಂಪರ್ಕಿಸಬಹುದಾಗಿದೆ ಎಂದು ಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ…
ಶಿವಮೊಗ್ಗ : ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವಂತ ದರ ನಿಗದಿಗೆ ಒತ್ತಾಯಿಸಿದ ಪ್ರತಿಭಟನೆಗೆ ಸಾಗರದಲ್ಲೂ ಬೆಂಬಲ ವ್ಯಕ್ತವಾಗಿದೆ. ಇಂದು ಸಾಗರದಲ್ಲೂ ಕಬ್ಬು ಬೆಳೆಗಾರರ ರೈತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಹೆದ್ದಾರಿ ತಡೆ ನಡೆಸಿ ಆಗ್ರಹಿಸಲಾಯಿತು. ಇಂದು ಕಬ್ಬಿನ ದರ ನಿಗಧಿ ಮಾಡುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್ನಿಂದ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆ ಬೆಂಬಲಸಿ ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ವರದಹಳ್ಳಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ನಲ್ಲಿ ಕಬ್ಬಿಗೆ ದರ ನಿಗಧಿಪಡಿಸಲು ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿರಿಸಿದೆ. ರಾಜ್ಯ ಸರ್ಕಾರ ರೈತರ ಪ್ರತಿಭಟನೆಯನ್ನು ಕೇವಲವಾಗಿ ಪರಿಗಣಿಸಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪ್ರತಿಭಟನೆ ಪ್ರಾರಂಭವಾಗಿ ಐದಾರು ದಿನ ಕಳೆದರೂ ಮುಖ್ಯಮಂತ್ರಿಗಳು ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಳೆದ…
ಬೆಳಗಾವಿ: ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದೆ. ಈ ಪ್ರತಿಭಟನೆಯ ವೇಳೆಯಲ್ಲಿ ಕಿಡಿಗೇಡುಗಳು ಕಲ್ಲು ತೂರಾಟ ನಡೆಸಿದ್ದರಿಂದಾಗಿ ಡಿವೈಎಸ್ಪಿ ಒಬ್ಬರ ಕೈ ಮುರಿತಗೊಂಡಿದ್ದರೇ, ನಾಲ್ಕು ಬಸ್ಸುಗಳ ಗಾಜು ಪುಡಿಪುಡಿಯಾಗಿದೆ. ಬೆಳಗಾವಿ ಜಿಲ್ಲೆಯ ಹುತ್ತರಗಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆಯಲ್ಲಿ ಕಲ್ಲು ತೂರಾಟ ಮಾಡಲಾಗಿದೆ. ಇದರಿಂದಾಗಿ 4 ಬಸ್ ಗಳ ಗಾಜು ಪುಡಿ ಪುಡಿಯಾಗಿದೆ. ಇದಷ್ಟೇ ಅಲ್ಲವೇ ಪೊಲೀಸ್ ವಾಹನಗಳ ಮೇಲೂ ಉದ್ರಿಕ್ತ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದಾಗಿ ಡಿವೈಎಸ್ಪಿ ಸಜ್ಜನ್ ಎಂಬುವರ ಕೈ ಮುರಿತವಾಗಿರೋದಾಗಿ ಹೇಳಲಾಗುತ್ತಿದೆ. ಇನ್ನೂ ಕೆ ಎಸ್ ಆರ್ ಟಿ ಸಿ ಬಸ್ಸುಗಳ ಮೇಲೂ ಹುತ್ತರಗಿಯಲ್ಲಿ ಕಲ್ಲು ತೂರಾಟವನ್ನು ಮಾಡಲಾಗಿದೆ. ಹೀಗಾಗಿ 4 ಕೆ ಎಸ್ ಆರ್ ಟಿಸಿ ಬಸ್ಸುಗಳಿಗೆ ಹಾನಿಯಾಗಿದೆ. ಕೆ ಎಸ್ ಆರ್ ಟಿಸಿ ಬಸ್ಸಿನ ಗಾಜುಗಳು ಪುಡಿ ಪುಡಿಯಾಗಿರುವುದಾಗಿ ತಿಳಿದು ಬಂದಿದೆ. https://kannadanewsnow.com/kannada/your-pan-card-will-be-inactive-from-january-1-2026-heres-why/ https://kannadanewsnow.com/kannada/did-the-authorities-really-give-duty-to-a-bmtc-driver-who-was-drunk-what-is-the-real-truth-read-here/
ಬೆಂಗಳೂರು: ನಗರದಲ್ಲಿ ಕುಡಿದು ಬರುತ್ತಿದ್ದಂತ ಚಾಲಕರಿಂದ ಲಂಚ ಪಡೆದು ಡ್ಯೂಟಿ ನೀಡುತ್ತಿದ್ದರು ಎನ್ನುವ ಕಾರಣಕ್ಕಾಗಿ ಬಿಎಂಟಿಸಿಯ ಅಧಿಕಾರಿಗಳು ಸೇರಿದಂತೆ 9 ಮಂದಿಯನ್ನು ಅಮಾನತುಗೊಳಿಸಲಾಗಿತ್ತು. ಆದರೇ ಈ ಅಮಾನತ್ತಿನ ಹಿಂದೆ ತನಿಖಾಧಿಕಾರಿ ಸರಿಯಾಗಿ ವರದಿ ನೀಡದೇ, ಮಹಾ ಎಡವಟ್ಟು ಮಾಡಿರುವುದೇ ಇದಕ್ಕೆಲ್ಲ ಕಾರಣ ಎಂಬುದಾಗಿ ಬಿಎಂಟಿಸಿ ಬಲ್ಲ ಮೂಲಗಳಿಂದ ಕನ್ನಡ ನ್ಯೂಸ್ ನೌಗೆ ತಿಳಿದು ಬಂದ ಮಾಹಿತಿಯಾಗಿದೆ. ಹಾಗಾದ್ರೆ ವಾಸ್ತವ ಸತ್ಯ ಏನು ಅಂತ ಮುಂದೆ ಓದಿ. ಬಿಎಂಟಿಸಿ ಡಿಪೋದಲ್ಲಿ ಚಾಲಕರಿಗೆ ಡ್ಯೂಟಿಗೆ ಮುನ್ನ ಕುಡಿತ ತಪಾಸಣೆ ಬಿಎಂಟಿಸಿ ಪ್ರತಿ ಡಿಪೋಗಳಲ್ಲಿಯೂ ಡ್ಯೂಟಿಗೆ ಹಾಜರಾಗುವಂತ ಚಾಲಕರನ್ನು ಕುಡಿತದ ತಪಾಸಣೆಗೆ ಒಳಪಡಿಸಿ, ಕುಡಿದ ಪ್ರಮಾಣವನ್ನು ಪತ್ತೆ ಹಚ್ಚುವ ಪರಿಪಾಟವಿದೆ. ಒಂದು ವೇಳೆ ತಪಾಸಣೆಯ ಸಂದರ್ಭದಲ್ಲಿ ಕುಡಿದು ಬಂದಿರೋದು ಪತ್ತೆಯಾದರೇ ಅಂತವರಿಗೆ ಡ್ಯೂಟಿಯನ್ನು ನೀಡೋದಿಲ್ಲ. ಕುಡಿದು ಡ್ಯೂಟಿಗೆ ಹಾಜರಾಗೋದಕ್ಕೆ ಬಂದಂತ ಚಾಲಕರ ಕುಡಿತರ ಪ್ರಮಾಣವನ್ನು ವರದಿ ಮಾಡಿಕೊಳ್ಳುವಂತ ಡಿಪೋದಲ್ಲಿನ ಅಧಿಕಾರಿಗಳು, ಅವರಿಗೆ ದಂಡವನ್ನು ವಿಧಿಸುವ ನಿಯಮವಿದೆ. 10ಎಂಜಿ/100ಎಂಎಲ್ ಪ್ರಮಾಣದಲ್ಲಿ ಕುಡಿದಿದ್ದರೂ ಡ್ಯೂಟಿ ನೀಡಿಲ್ಲ ಈ ನಿಯಮ,…
ನವದೆಹಲಿ: ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಲು ಕೊನೆಯ ದಿನಾಂಕ ಸಮೀಪಿಸುತ್ತಿರುವುದರಿಂದ ಪ್ಯಾನ್ ಕಾರ್ಡ್ ಹೊಂದಿರುವವರು ವೇಗವಾಗಿ ಕಾರ್ಯನಿರ್ವಹಿಸಬೇಕು. ಡಿಸೆಂಬರ್ 31, 2025 ರೊಳಗೆ ನೀವು ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಜನವರಿ 1, 2026 ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಟ್ಯಾಕ್ಸ್ಬಡ್ಡಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಇದನ್ನು ಹೈಲೈಟ್ ಮಾಡಿದ್ದು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ, ಮರುಪಾವತಿಗಳನ್ನು ಸ್ವೀಕರಿಸುವಲ್ಲಿ ಅಥವಾ ಇತರ ಹಣಕಾಸು ವಹಿವಾಟುಗಳನ್ನು ನಡೆಸುವಲ್ಲಿ ಸಂಭಾವ್ಯ ಅಡಚಣೆಗಳ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಪ್ಯಾನ್ ಅನ್ನು ಸಕ್ರಿಯವಾಗಿಡಲು ಆಧಾರ್ನೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಅತ್ಯಗತ್ಯ ಎಂದು ಸರ್ಕಾರ ಒತ್ತಿ ಹೇಳಿದೆ. ಹಾಗೆ ಮಾಡಲು ವಿಫಲವಾದರೆ ನಿಮ್ಮ ಸಂಬಳ ಕ್ರೆಡಿಟ್ಗಳು, SIP ಗಳಂತಹ ಹೂಡಿಕೆಗಳು ಮತ್ತು ಹಣಕಾಸಿನ ಅನುಸರಣೆಯ ಮೇಲೆ ಪರಿಣಾಮ ಬೀರಬಹುದು, ಇದು ಎಲ್ಲಾ ಅರ್ಹ ಬಳಕೆದಾರರು ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿರ್ಣಾಯಕವಾಗಿಸುತ್ತದೆ. ಆಧಾರ್ನೊಂದಿಗೆ ಪ್ಯಾನ್ ಅನ್ನು ಯಾರು ಲಿಂಕ್ ಮಾಡಬೇಕು? ಏಪ್ರಿಲ್ 3, 2025…
ಬೆಂಗಳೂರು: ಒಂದೆಡೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದೆ. ಮತ್ತೊಂದೆಡೆ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಸಿಎಂ ಸಿದ್ಧರಾಮಯ್ಯ ಮಹತ್ವದ ಸಭೆಯನ್ನು ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಂದಿನ ಸಿಎಂ ಸಿದ್ಧರಾಮಯ್ಯ ಅವರ ತುಮಕೂರು ಪ್ರವಾಸ ರದ್ದುಗೊಂಡಿರುವುದಾಗಿ ಸಿಎಂ ಕಚೇರಿಯಿಂದ ತಿಳಿಸಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 07-11-2025ರಂದು ಶುಕ್ರವಾರ ಕೈಗೊಳ್ಳಲು ಉದ್ದೇಶಿಸಲಾಗಿದ್ದಂತ ತುಮಕೂರು ಜಿಲ್ಲಾ ಪ್ರವಾಸವನ್ನು ಅನಿವಾರ್ಯ ಕಾರಣಗಳಿಂದ ರದ್ದುಪಡಿಸಲಾಗಿದೆ ಎಂಬುದಾಗಿ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಕೆ.ಚಿರಂಜೀವಿ ಮಾಹಿತಿ ನೀಡಿದ್ದಾರೆ. https://kannadanewsnow.com/kannada/farmers-anger-flares-up-in-belgaum-stones-thrown-at-police-and-police-vehicles/ https://kannadanewsnow.com/kannada/sugarcane-growers-demands-impossible-to-meet-sugar-factory-owners-plead-with-cm/














