Subscribe to Updates
Get the latest creative news from FooBar about art, design and business.
Author: kannadanewsnow09
ಮಂತ್ರಾಲಯದಲ್ಲಿ ಇರುವಂತಹ ಮೂಲ ರಾಮಾನ ಪುರಾತನ ವಿಗ್ರಹಗಳ ಸಂಪೂರ್ಣ ಇತಿಹಾಸ ವಿವರಣೆ ವಿಗ್ರಹಗಳ ಇತಿಹಾಸ ನರಹರಿತೀರ್ಥರ ಮೂಲಕ ಬಂದು ಆಚಾರ್ಯರು ಪೂಜಿಸಿದ ಈ ವಿಗ್ರಹಗಳು ಬಹಳ ಪ್ರಾಚೀನವಾದವು, ಇವುಗಳನ್ನು “ಚತುರ್ಯುಗಮೂರ್ತಿಗಳು” ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ವಸಿಷ್ಠ ರಾಮಾಯಣ, ಅಧ್ಯಾತ್ಮ ರಾಮಾಯಣ ಮತ್ತು ಮಾರ್ಕಂಡೇಯ ಪುರಾಣಗಳಲ್ಲಿ ಅವುಗಳ ವೈಭವದ ಗತಕಾಲದ ಬಗ್ಗೆ ಉಲ್ಲೇಖಗಳಿವೆ. ಈ ಎರಡೂ ವಿಗ್ರಹಗಳು ಬಹಳ ಸುಂದರವಾಗಿವೆ. ಇವುಗಳ ದರ್ಶನ ಪಡೆದ ಯಾವುದೇ ಧರ್ಮನಿಷ್ಠ ಆತ್ಮವು ಆಳವಾದ ಭಕ್ತಿಯನ್ನು ಹುಟ್ಟುಹಾಕದೆ ಇರಲಾರದು. ಶ್ರೀ ಮೂಲರಾಮನ ವಿಗ್ರಹವನ್ನು ನೋಡಿದ ಪುರಾತತ್ವ ಅಧಿಕಾರಿಯೊಬ್ಬರು ಅದರ ರೂಪ, ಸೌಂದರ್ಯ, ಪ್ರಾಚೀನತೆಯ ಸೂಕ್ಷ್ಮತೆಯ ಬಗ್ಗೆ ತಮ್ಮ ದಿಗ್ಭ್ರಮೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀ ಜಗನಾಥದಾಸರು ತಮ್ಮ ಒಂದು ಕೀರ್ತನೆಯಲ್ಲಿ ಈ ವಿಗ್ರಹಗಳ ಇತಿಹಾಸವನ್ನು ಶ್ರೀ ವದೀಂದ್ರತೀರ್ಥರು ತಾವು ಬರೆದ “ಶ್ರೀ ರಾಘವೇಂದ್ರ-ಮಠ-ಗಥಾರ್ಚಗತಿ-ಕ್ರಮ” ಎಂಬ ಪುಸ್ತಕದಲ್ಲಿ ಮಾಡಿದಂತೆಯೇ ಅದೇ ಕಥಾನಕದಲ್ಲಿ ವಿವರಿಸಿದ್ದಾರೆ. ಶ್ರೀ ವಿಜಯದಾಸರು ಈ ವಿಗ್ರಹಗಳನ್ನು ಹೊಂದಲು ಕಾರಣವಾದ ಘಟನೆಗಳನ್ನು ಚಿತ್ರಿಸುವ ಪ್ರತ್ಯೇಕ ಸುಲಾದಿಯನ್ನು ರಚಿಸಿದ್ದಾರೆ. ಪ್ರಧಾನ ಗುರುಗಳು…
ಶಿವಮೊಗ್ಗ: ರಾಜಕೀಯವಾಗಿ ಸುದ್ದಿಯಲ್ಲಿರುವ ಸೊರಬ ಕ್ಷೇತ್ರವು ಇತರೆ ವಿಷಯದಲ್ಲಿ ಗೌಣವಾಗಿದೆ. ಜನಪ್ರತಿನಿಧಿಗಳಾಗಿ ಬಯಸುವ ವ್ಯಕ್ತಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಬಳಿ ಹೋಗುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಡಾ.ಜ್ಞಾನೇಶ್ ಆರೋಪಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಬಿಜೆಪಿ ವತಿಯಿಂದ 2026ರ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಾಲ್ಲೂಕಿನ ಅಭಿವೃದ್ಧಿಗೆ ಗಮನ ನೀಡುವಲ್ಲಿ ಹಾಗೂ ಸರ್ವತೋಮುಖ ಬೆಳವಣಿಗೆಗೆ ಜನರ ಅಭಿಪ್ರಾಯ ಪಡೆಯುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಮಾಡುತ್ತಿರುವೆ. ನಾವು ಯಾವುದೇ ಕೆಲಸವನ್ನು ಪಕ್ಷದಲ್ಲಿ ಮಾಡಿದರೂ ನಮ್ಮ ಸ್ವಹಿತಾಸಕ್ತಿ ಅಡಗಿದೆ. ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕದಲ್ಲಿ ಸಾಮಾನ್ಯ ರೈತನ ಮಗನಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನನಗೆ ಕ್ಷೇತ್ರದ ಜನರು ಬೆಂಬಲಿಸಿದ್ದಾರೆ.ಇದೇ ರೀತಿ ಮುಂದಿನ ದಿನಗಳಲ್ಲೂ ಕ್ಷೇತ್ರದ ಜನರ ಸಲಹೆ,ಸಹಕಾರ ಬಯಸುವುದಾಗಿ ತಿಳಿಸಿದರು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಮಾತನಾಡಿ, ಪಕ್ಷದ ಪರವಾಗಿ ಡಾ.ಜ್ಞಾನೇಶ್ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಉತ್ಸಾಹಕ್ಕೆ…
ಶಿವಮೊಗ್ಗ: ಡಿಸೆಂಬರ್.29ರಂದು ಸೊರಬದ ರಂಗ ಮಂದಿರದಲ್ಲಿ 9ನೇ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಾನಪದ ಪರಿಷತ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಡಿ.29ರಂದು ಬೆಳಿಗ್ಗೆ 8:30ಕ್ಕೆ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಬಿಒಒ ಪುಷ್ಪಾ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು. ಹರೀಶಿ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಕವಿತಾ ಹರೀಶಿ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದು, ರಾಷ್ಟ್ರಮಟ್ಟದ ಪ್ರತಿನಿಧಿ ಸುಕೃತ್ ಎಸ್.ಕೆ.ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ವಿಶೇಷ ಆಹ್ವಾನಿತರಾಗಿ ಸಾವಿತ್ರೆ ಬಾಪುಲೆ ಪುರಸ್ಕೃತೆ ಅನುಷಾ ಕರಿಬಸಯ್ಯ ಹಿರೇಮಠ್, ಸಾನಿಕಾ ಟಿ.ಆರ್., ಅನುಷಾ ಭಾಗವಹಿಸಲಿದ್ದಾರೆ. ವಿಚಾರಗೋಷ್ಠಿಗೆ ಅಧ್ಯಕ್ಷರಾಗಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ತಪಸ್ವಿನಿ,…
ಮಹಾಲಕ್ಷ್ಮಿ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲ ದೇವತೆಗಳಲ್ಲಿ ಒಬ್ಬರು. ನಾವು ಮಹಾಲಕ್ಷ್ಮಿಯನ್ನು ಪೂಜಿಸಿದಾಗ, ಆಕೆಯ ಅನುಗ್ರಹದಿಂದ ನಮ್ಮ ಸಂಪತ್ತಿನ ಮಟ್ಟವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಯಾವುದೇ ಸ್ಥಳದಲ್ಲಿ ಸಂಪತ್ತು ಶಾಶ್ವತವಲ್ಲದ ಕಾರಣ, ನಾವು ಕಾಲಕಾಲಕ್ಕೆ ಮಹಾಲಕ್ಷ್ಮಿಯನ್ನು ಪೂಜಿಸಿದರೆ, ಅಶಾಶ್ವತ ಸಂಪತ್ತು ಕೂಡ ನಮ್ಮೊಂದಿಗೆ ಶಾಶ್ವತವಾಗಿ ಉಳಿಯಲು ಪ್ರಾರಂಭಿಸುತ್ತದೆ. ಈ ಆಧ್ಯಾತ್ಮಿಕ ಪೋಸ್ಟ್ನಲ್ಲಿ, ಅಂತಹ ಸಂಪತ್ತನ್ನು ಹೆಚ್ಚಿಸಲು ಮಾಡಬೇಕಾದ ಅರ್ಚನೆಯನ್ನು ನಾವು ನೋಡಲಿದ್ದೇವೆ. ಸಂಪತ್ತು ವೃದ್ಧಿಗೆ ಪೂಜೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಆಗಬಹುದಾದ ದೊಡ್ಡ ಸುಧಾರಣೆ ಎಂದರೆ ಅವರು ಪಡೆಯುವ ಸಂಪತ್ತು. ಅದು ಹಾಗೆಯೇ ಇದ್ದರೆ ಕರಗಿ ಹೋಗುವುದಿಲ್ಲವೇ? ಆ ಸಂಪತ್ತು ಕಾಲಕಾಲಕ್ಕೆ ಹೆಚ್ಚುತ್ತಲೇ ಇದ್ದರೆ ಮಾತ್ರ ನಮ್ಮ ಖರ್ಚು ಮೀರಿದ ಸಂಪತ್ತನ್ನು ಪಡೆಯಬಹುದು. ಈ ರೀತಿಯಾಗಿ ಸಂಪತ್ತನ್ನು ಹೆಚ್ಚಿಸಲು, ನಾವು ಮಹಾಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಮಹಾಲಕ್ಷ್ಮಿ ದೇವಿಯನ್ನು ಹಲವು ವಿಧಗಳಲ್ಲಿ ಪೂಜಿಸಬಹುದಾದರೂ, ಈ ಸೂಕ್ಷ್ಮವಾದ ಪೂಜಾ ವಿಧಾನವನ್ನು ಮಾಡುವ ಮೂಲಕ ಮತ್ತು ಅರ್ಚನೆಯನ್ನು ಮಾಡುವ ಮೂಲಕ, ನಾವು ಮಹಾಲಕ್ಷ್ಮಿ ದೇವಿಯ…
ನವದೆಹಲಿ: ಎರಡು ಹೊಸ ವಿಮಾನಯಾನ ಸಂಸ್ಥೆಗಳು – ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್ಪ್ರೆಸ್ – ಆಕಾಶಯಾನ ಆರಂಭಿಸಲಿದ್ದು, ನಾಗರಿಕ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದಿವೆ. 2026 ರಲ್ಲಿ, ಈ ಎರಡು ವಿಮಾನಯಾನ ಸಂಸ್ಥೆಗಳ ಜೊತೆಗೆ, ಈಗಾಗಲೇ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಹೊಂದಿರುವ ಉತ್ತರ ಪ್ರದೇಶ ಮೂಲದ ಶಂಖ್ ಏರ್ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಕೇರಳ ಮೂಲದ ಅಲ್ಹಿಂದ್ ಗ್ರೂಪ್ ಅಲ್ ಹಿಂದ್ ಏರ್ ಅನ್ನು ಪ್ರಚಾರ ಮಾಡುತ್ತಿದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶೀಯ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾದ ದೇಶದಲ್ಲಿ ಹೆಚ್ಚಿನ ವಿಮಾನಯಾನ ನಿರ್ವಾಹಕರನ್ನು ಹೊಂದಲು ಸಚಿವಾಲಯ ಉತ್ಸುಕವಾಗಿದೆ. ಪ್ರಸ್ತುತ, ದೇಶದಲ್ಲಿ ಒಂಬತ್ತು ಕಾರ್ಯಾಚರಣೆಯ ನಿಗದಿತ ದೇಶೀಯ ವಾಹಕಗಳಿವೆ. ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ ಫ್ಲೈ ಬಿಗ್ ಅಕ್ಟೋಬರ್ನಲ್ಲಿ ನಿಗದಿತ ವಿಮಾನಗಳನ್ನು ಸ್ಥಗಿತಗೊಳಿಸಿತು. ಇಂಡಿಗೋ ಮತ್ತು ಏರ್ ಇಂಡಿಯಾ ಗ್ರೂಪ್ – ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ – ಒಟ್ಟಾಗಿ ದೇಶೀಯ ಮಾರುಕಟ್ಟೆ ಪಾಲಿನ 90…
ಶಿವಮೊಗ್ಗ : ಕುಗ್ರಾಮದಲ್ಲಿರುವ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಿ ಅವರ ಶಿಕ್ಷಣಕ್ಕೆ ಸಹಕಾರಿಯಾಗಿ ನಿಂತಿರುವ ಸಾಗರದ ನಮ್ಮನೆ ಗ್ರಾಮೀಣ ಮಕ್ಕಳ ಅನಾಥಾಶ್ರಮ ಕಾರ್ಯ ಅಭಿನಂದಾರ್ಹವಾದದ್ದು ಎಂದು ಲಯನ್ಸ್ ಅಧ್ಯಕ್ಷ ಡಾ. ಪ್ರಸನ್ನ ಟಿ ಎಂದು ಹೇಳಿದರು. ಮಂಗಳವಾರದಂದು ಶಿವಮೊಗ್ಗದ ಸಾಗರದ ಶಿರವಾಳದಲ್ಲಿರುವ ನಮ್ಮನೆ ಗ್ರಾಮೀಣ ಮಕ್ಕಳ ಅನಾಥಾಶ್ರಮಕ್ಕೆ ಲಯನ್ಸ್ ಸಂಸ್ಥೆ ವತಿಯಿಂದ ಉಚಿತ ಬ್ಲಾಂಕೇಟ್ ವಿತರಣೆ ಮಾಡಿ ಮಾತನಾಡಿದಂತ ಅವರು, ಲಯನ್ಸ್ ಕ್ಲಬ್ ಸಾಗರವನ್ನು ಕೇಂದ್ರವಾಗಿ ಇರಿಸಿಕೊಂಡು ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಮಕ್ಕಳಿಗೆ ಎಲ್ಲ ರೀತಿಯ ಮೂಲಸೌಲಭ್ಯ ಇದ್ದಾಗ ಮಾತ್ರ ಅವರು ಏಕಾಗ್ರತೆಯಿಂದ ಶಿಕ್ಷಣದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಶೈಕ್ಷಣಿಕ ಪರಿಕರ ಪೂರೈಕೆ ಮಾಡುವ ಜೊತೆಗೆ ಚಳಿಯಿಂದ ಮಕ್ಕಳು ಸುರಕ್ಷತೆಯನ್ನು ಕಾಯ್ದುಕೊಳ್ಳಲು ಬ್ಲಾಂಕೇಟ್ ನೀಡುತ್ತಿದೆ. ಅನಾಥಾಶ್ರಮದ ಮಕ್ಕಳಿಗೆ ಮಾತ್ರವಲ್ಲದೆ ಬೇರೆಬೇರೆಯವರಿಗೆ ಸಹ ಬ್ಲಾಂಕೇಟ್ ವಿತರಣೆ ಮಾಡಿದೆ. ಶಿವಮೊಗ್ಗ ಶ್ರೀರಾಮ ರೆಸಿಡೆನ್ಸಿಯ ಜನಾರ್ದನ್ ಮಕ್ಕಳಿಗೆ ಬ್ಲಾಂಕೆಟ್ ಕೊಡುಗೆಯಾಗಿ ನೀಡಿದ್ದಾರೆ ಎಂದರು. ಆಶ್ರಮದ ಸಂಸ್ಥಾಪಕ ಸಂತೋಷ್ ಲಿಂಗನಮಕ್ಕಿ ಮಾತನಾಡಿ ನಮ್ಮನೆ…
ಶಿವಮೊಗ್ಗ : ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮೂರಿನ ಆಸ್ತಿ. ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲ ಕಾಲೇಜು ಮಾತ್ರವಲ್ಲದೇ, ಸಮಾಜ ಸಹ ಮಾಡಬೇಕು ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ಮೈದಾನದಲ್ಲಿ ಬುಧವಾರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಸರ್ಕಾರಿ ಶಾಲಾಕಾಲೇಜು ಎಂದರೆ ಅಸಡ್ಡೆಯಿಂದ ನೋಡುವ ದಿನಗಳು ದೂರವಾಗಿದೆ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಸರ್ಕಾರಿ ಪದವಿಪೂರ್ವ ಕಾಲೇಜು ಐದು ದಶಕ ಪೂರೈಸಿರುವ ಹಿನ್ನೆಲೆಯಲ್ಲಿ ಅನೇಕ ಅಭಿವೃದ್ದಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗಿದ್ದು 95 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಐದು ಕೊಠಡಿ ಲೋಕಾರ್ಪಣೆ ಮಾಡಲಾಗಿದೆ. ಸುಣ್ಣಬಣ್ಣಕ್ಕೆ, ರಿಪೇರಿ, ಶೌಚಾಲಯ ನಿರ್ಮಾಣಕ್ಕೆ 50 ಲಕ್ಷ ರೂ. ಖರ್ಚು ಮಾಡಿದೆ. ರಂಗಮಂದಿರದ ಅಗತ್ಯವಿದ್ದು ಅದನ್ನು ಮುಂದಿನ ಬಜೆಟ್ನಲ್ಲಿ ತರಲಾಗುತ್ತದೆ ಎಂದರು. ನೀವು ಓದಿದ ಶಾಲೆ…
ಶಿವಮೊಗ್ಗ : ಸಾಗರ ಉಪವಿಭಾಗೀಯ ಕೇಂದ್ರ ಜಿಲ್ಲೆಯಾದರೆ ಮಾತ್ರ ನಮಗೆ ಆಗುತ್ತಿರುವ ಮಲತಾಯಿಧೋರಣೆಯಿಂದ ಮುಕ್ತಿ ಸಿಗುತ್ತದೆ. ಅಭಿವೃದ್ದಿ ಸೇರಿ ಎಲ್ಲ ಹಂತದಲ್ಲಿಯೂ ಸಾಗರವನ್ನು ತೀರ ನಿರ್ಲಕ್ಷ್ಯ ಮಾಡಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಎಂದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಗರ ಮಲೆನಾಡಿನ ಮಲತಾಯಿ ಮಕ್ಕಳು ಎನ್ನುವಂತೆ ನಡೆಸಿಕೊಳ್ಳುತ್ತಿದ್ದಾರೆ. ಸಾಗರ ಉಪವಿಭಾಗೀಯ ಕೇಂದ್ರ ಜಿಲ್ಲೆಯಾದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಸಾಗರ ಜಿಲ್ಲೆ ಮಾಡಿ ಎನ್ನುವ ಹೋರಾಟ ನಾ.ಡಿಸೋಜ, ಕೆ.ವಿ.ಸುಬ್ಬಣ್ಣ ಅವರಿಂದ ಪ್ರಾರಂಭವಾಗಿ ಈಗಿನ ಜಿಲ್ಲಾ ಹೋರಾಟ ಸಮಿತಿ ಅತ್ಯಂತ ವ್ಯವಸ್ಥಿತ ಹೋರಾಟ ರೂಪಿಸಿದೆ. ಕರೂರು ಭಾರಂಗಿ ಹೋಬಳಿ ಜಿಲ್ಲಾ ಕೇಂದ್ರ ಸಂಪರ್ಕಿಸಲು ನೂರಾರು ಕಿ.ಮೀ. ಕ್ರಮಿಸಬೇಕಾಗಿದೆ. ಇದರ ಜೊತೆಗೆ ಮಂಗನಕಾಯಿಲೆಯಂತಹ ಮಾರಕ ರೋಗಬಾಧೆ ನಮ್ಮ ತಾಲ್ಲೂಕನ್ನು ಹೈರಾಣಾಗಿಸಿದೆ. ಸುಸಜ್ಜಿತ ಜಿಲ್ಲಾಸ್ಪತ್ರೆ ಇದ್ದರೆ ಇಂತಹ ಕಾಯಿಲೆಗಳಿಗೆ ಸಂಶೋಧನೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ…
ಶಿವಮೊಗ್ಗ : ಫೆಬ್ರವರಿ 3ರಿಂದ ನಡೆಯಲಿರುವ ಮಾರಿಕಾಂಬಾ ದೇವಿಯ ಜಾತ್ರೆಯ ಆರಂಭಿಕ ಹಂತವಾದ ಮರ ಕಡಿಯುವ ಶಾಸ್ತ್ರ ಮಂಗಳವರ ವಿದ್ಯುಕ್ತವಾಗಿ ನಡೆಯಿತು. ಉಪ್ಪಾರ ಕೇರಿಯ ಚಿಕ್ಕಮ್ಮನ ಮನೆಯಲ್ಲಿ ಪೋತರಾಜನಿಗೆ ವಿಶೇಷ ಪೂಜೆ ಸಲ್ಲಿಸಿ, ಅರಿಶಿನ ಶಾಸ್ತ್ರ ಮುಗಿಸಿ ಅಲ್ಲಿಂದ ಮಾರಿಕಾಂಬಾ ದೇವಸ್ಥಾನಕ್ಕೆ ಕರೆದು ಕೊಂಡು ಬರಲಾಯಿತು. ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೋತರಾಜ ಮರ ಹುಡುಕುವ ಕಾರ್ಯಕ್ಕೆ ಮುಂದಾದನು. ಅತ್ಯಂತ ಆವೇಶಭರಿತನಾಗಿ ಚಾಟಿಸೇವೆ ಮೂಲಕ ಪೋತರಾಜ ಮರ ಹುಡುಕಲು ಪ್ರಾರಂಭ ಮಾಡಿದನು. ಸಾಗರ ಹೋಟೆಲ್ ಸರ್ಕಲ್ ಮೂಲಕ ಮರ ಹುಡುಕುತ್ತಾ ಹೊರಟ ಪೋತರಾಜನ ಹಿಂದೆ ಸಾವಿರಾರು ಭಕ್ತರು ಹಿಂಬಾಲಿಸಿದರು. ನಂತರ ಜೋಗ ರಸ್ತೆಯ ರಾಮ ದೇವಸ್ಥಾನದ ಸಮೀಪ ಹಲಸಿನ ಮರ ಗುರುತಿಸಿದ ಪೋತರಾಜ ಚಾಟಿಯಿಂದ ಹೊಡೆಯುವ ಮೂಲಕ ಮರ ಕಡಿಯುವ ಶಾಸ್ತ್ರವನ್ನು ಮುಗಿಸಿದರು. https://youtu.be/sJ-lYWv_7tM?si=bJrec0s_mJZ2vbPq ಇದಕ್ಕೂ ಮೊದಲು ಉಪ್ಪಾರ ಕೇರಿಯಲ್ಲಿರುವ ಪೋತರಾಜನ ಮನೆಯಲ್ಲಿ ಮರ ಕಡಿಯುವ ಶಾಸ್ತ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನ ನಡೆಯಿತು. ಸಂಸದ ಬಿ.ವೈ.ರಾಘವೇಂದ್ರ,…
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ. 26 ರಂದು ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಸೋಮಿನಕೊಪ್ಪ, ಹೊಂಗಿರಣ ಲೇಔಟ್, ಗೋಕುಲ್ ಲೇಔಟ್, ಸಹ್ಯಾದ್ರಿನಗರ, ಮುನಿಯಪ್ಪ ಲೇಔಟ್, ಸಂಗೊಳ್ಳಿ ರಾಯಣ್ಣ ಲೇಔಟ್, ವೆಟರ್ನರಿ ಕಾಲೇಜು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.














