Subscribe to Updates
Get the latest creative news from FooBar about art, design and business.
Author: kannadanewsnow09
ಬೆಳಗಾವಿ ಸುವರ್ಣ ವಿಧಾನಸೌಧ : ಮಾನವ-ಆನೆ ಸಂಘರ್ಷವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆನೆ ಧಾಮಕ್ಕೆ ಕೇಂದ್ರ ಸರ್ಕಾರ ಇನ್ನೂ ತನ್ನ ಸಮ್ಮತಿ ನೀಡಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗಿಂದು ತಿಳಿಸಿದ್ದಾರೆ. ನಿಯಮ 73ರಡಿಯಲ್ಲಿ ಶಾಸಕ ಎಚ್.ಕೆ. ಸುರೇಶ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಮೃದು ಧಾಮ ಮಾಡಲು ರಾಷ್ಟ್ರೀಯ ಹುಲಿ ಪ್ರಾಧಿಕಾರದ ಮತ್ತು ಕೇಂದ್ರದ ಅನುಮತಿ ಬೇಕು, ಒಂದೊಮ್ಮೆ ಕೇಂದ್ರ ಅನುಮತಿಸದಿದ್ದರೆ ಪರ್ಯಾಯ ಮಾರ್ಗದ ಚಿಂತನೆಯೂ ಸರ್ಕಾರಕ್ಕಿದೆ ಎಂದರು. ಪ್ರತಿ ವರ್ಷ ರಾಜ್ಯದಲ್ಲಿ 45 ರಿಂದ 50 ಜನರು ಮಾನವ ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗುತ್ತಿದ್ದಾರೆ ಇದು ನೋವಿನ ಸಂಗತಿ. ಈ ಪೈಕಿ ಆನೆ ದಾಳಿಯಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ಅದಕ್ಕಾಗಿಯೇ ಆನೆ ಧಾಮ ಮಾಡಲು ಸಂಪುಟದ ಅನುಮತಿ ಪಡೆದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಆನೆ-ಮಾನವ…
ಬೆಂಗಳೂರು: ಬೆಂಗಳೂರು: ದಶಕದಿಂದ ಜಟಿಲ ಸಮಸ್ಯೆಯಿಂದ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಪಿಡಿಒ ಜೇಷ್ಠತಾ ಪಟ್ಟಿ ಪ್ರಕರಣವು ತಾರ್ಕಿಕವಾಗಿ ನ್ಯಾಯಾಲಯದಲ್ಲಿ ಬಗೆ ಹರಿದು ಸಾವಿರಾರು ಪಿಡಿಒಗಳಿಗೆ ನ್ಯಾಯ ದೊರಕಿದೆ. ಶೀಘ್ರವೇ ಪಿಡಿಒಗಳ ಪದೋನ್ನತಿ ಸರಾಗವಾಗಿ ನಡೆಯಲಿದೆ ಎಂಬುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ಮೂಲಕ ಪದೋನ್ನತಿ ನಿರೀಕ್ಷೆಯಲ್ಲಿದ್ದ ಪಿಡಿಒಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಮಹತ್ವದ ಮತ್ತು ಐತಿಹಾಸಿಕ ನ್ಯಾಯ ದೊರಕಿದೆ. ಇಚ್ಚಾಶಕ್ತಿಯ ಕೊರತೆಯಿಂದಾಗಿ ದಶಕಗಳ ಕಾಲ ಜೇಷ್ಠತಾ ಪಟ್ಟಿಯ ಪ್ರಕರಣವು ಕಗ್ಗಂಟಾಗಿ ನ್ಯಾಯಾಲಯದಲ್ಲಿತ್ತು, ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ ಮತ್ತು ವಿಶೇಷ ಆಸಕ್ತಿಯಿಂದಾಗಿ ಈ ಪ್ರಕರಣವನ್ನು ಸಕಾರಾತ್ಮಕವಾಗಿ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ. ಪಂಚಾಯತ್ ರಾಜ್ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗ ಇಲಾಖೆಯಲ್ಲಿನ ಪಿಡಿಒ ಜೇಷ್ಠತಾ ಪಟ್ಟಿಯ ಪ್ರಕರಣವು ಸವಾಲಿನಂತೆ ಎದುರಿಗಿತ್ತು, ಇದನ್ನು ಬಗೆಹರಿಸಲೇಬೇಕು ಎಂಬ ದೃಷ್ಟಿಯಿಂದ ಸುಮಾರು 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ, ನಿರಂತರವಾಗಿ…
ಬೆಳಗಾವಿ ಸುವರ್ಣ ವಿಧಾನಸೌಧ: – ಇಳಕಲ್ ಮತ್ತು ಹುನಗುಂದ ಎರಡೂ ತಾಲ್ಲೂಕುಗಳಲ್ಲಿ 100 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ನಿವೇಶನ ಮತ್ತು ಅನುದಾನದ ಲಭ್ಯತೆಯನುಸಾರ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳಕರ್ ತಿಳಿಸಿದರು. ಇಂದು ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಹುನುಗುಂದ ಶಾಸಕ ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ ಇವರು ಇಳಕಲ್ ಹಾಗೂ ಹುನಗುಂದ ತಾಲ್ಲೂಕುಗಳಲ್ಲಿ 358 ಅಂಗನವಾಡಿಗಳ ಪೈಕಿ 217 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿದ್ದು, 41 ಅಂಗನವಾಡಿ ಕೇಂದ್ರಗಳು ಸರ್ಕಾರಿ ಕಟ್ಟಡ/ಪರ್ಯಾಯ ವ್ಯವಸ್ಥೆಯಾಗಿ ಇತರೆ ಕಟ್ಟಡದಲ್ಲಿ ನಡೆಯುತ್ತಿವೆ . ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ 100 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಡಬೇಕೆಂದು ಕೇಳಿದ ಪ್ರಶ್ನೆಗೆ ಒಟ್ಟಾರೆ 3500 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಸ್ವಂತ ಕಟ್ಟಡ ನಿರ್ಮಿಸಲು ಅಗತ್ಯ ಕ್ರಮ ವಹಿಸಲಾಗಿದ್ದು, ಸ್ವಂತ ಕಟ್ಟಡ…
ಬೆಳಗಾವಿ ಸುವರ್ಣಸೌಧ : ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಲಾದಂತೆ ಮತ್ತು ಪರಿಶೀಲನಾ ಸಮಿತಿಯು ಶಿಫಾರಸ್ಸು ಮಾಡಿದಂತೆ ಹಾಗೂ ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ಕರ್ನಾಟಕ ಭೂಕಂದಾಯ ಎರಡನೇ ತಿದ್ದುಪಡಿ ವಿಧೇಯಕ 2025ಕ್ಕೆ ಪರಿಷತ್ತಿನಲ್ಲಿ ಡಿ.17ರಂದು ಅಂಗೀಕಾರ ದೊರೆಯಿತು. ಕೊಡಗು ಜಿಲ್ಲೆಯ ಭೂ ದಾಖಲೆಗಳನ್ನು ಕಾನೂನಿಗೆ ಅನುಗುಣವಾಗುವಂತೆ ಮಾಡಲು ಮತ್ತು ರಾಜ್ಯದ ಉಳಿದ ಭಾಗದಲ್ಲಿ ಅದರ ಸಂಗತತೆಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿ ಈ ವಿಧೇಯಕ ತರಲಾಗುತ್ತಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿ ವಿಧೇಯಕವನ್ನು ಅಂಗೀಕರಿಸಲು ಕೋರಿದರು. ಚರ್ಚೆಯ ಬಳಿಕ, ಧ್ವನಿಮತದ ಮೂಲಕ ಪರಿಷತ್ತ್ತಿನಲ್ಲಿ ವಿಧೇಯಕಕ್ಕೆ ಅನುಮೋದನೆ ದೊರೆಯಿತು. https://kannadanewsnow.com/kannada/teaching-the-bhagavad-gita-is-not-meant-to-create-religious-conflict-union-minister-h-d-kumaraswamy/ https://kannadanewsnow.com/kannada/breaking-new-scheme-of-the-centre-1-5-lakh-cashless-treatment-for-road-accident-victims-ambulance-service-within-10-minutes/
ನವದೆಹಲಿ: ಶಾಲಾ ಹಂತದಿಂದಲೇ ಭಗವದ್ಗೀತೆಯನ್ನು ಮಕ್ಕಳಿಗೆ ಬೋಧಿಸಬೇಕು. ಇದು ಅತ್ಯಂತ ಉತ್ತಮ ಶೈಕ್ಷಣಿಕ ಸುಧಾರಣಾ ಕ್ರಮವಾಗುತ್ತದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪುನರುಚ್ಚರಿಸಿದರು. ನವದೆಹಲಿಯಲ್ಲಿ ಮೈಸೂರಿನ ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ದೆಹಲಿ ಕರ್ನಾಟಕ ಸಂಘ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಮತ್ತು ಸಾಧನೆ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ಭಗವದ್ಗೀತೆಯನ್ನು ಬೋಧಿಸಬೇಕು ಎಂದು ಎಂದು ನಾನು ಹೇಳಿದ್ದು ರಾಜಕೀಯ ಉದ್ದೇಶ ಅಥವಾ ಯಾವುದೇ ಧರ್ಮ ಸಂಘರ್ಷ ಉಂಟು ಮಾಡುವುದಕ್ಕಲ್ಲ. ಉತ್ತಮ ಸಮಾಜ ನಿರ್ಮಾಣ ಮಾಡುವ ಅಗತ್ಯದ ದೃಷ್ಟಿಯಿಂದ ಹೇಳಿದ್ದೇನೆ ಎಂದು ಅವರು ಒತ್ತಿ ಹೇಳಿದರು. ಭಗವದ್ಗೀತೆಯ ಉದಾತ್ತ, ಶ್ರೇಷ್ಟ ಮೌಲ್ಯಗಳ ಬಗ್ಗೆ ಹೊಸದಾಗಿ ತಿಳಿಹೇಳುವ ಅಗತ್ಯವಿಲ್ಲ. ಆದರೆ ಷಸಮಾಜದಲ್ಲಿ ನೈತಿಕ ಮೌಲ್ಯಗಳು ಅಧಃಪತನ ಆಗುತ್ತಿರುವ ಸಂದರ್ಭದಲ್ಲಿ ಗೀತೆಯ ಅಗತ್ಯ ಇನ್ನೂ ಹೆಚ್ಚಿದೆ. ಮಾನವ ಕುಲಕ್ಕೆ ಕೃಷ್ಣನ ಉಪದೇಶವು ದಾರಿದೀಪವಾಗಿದೆ. ಹೀಗಾಗಿ ಮಕ್ಕಳಿಗೆ…
ಬೆಂಗಳೂರು : ಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್ ಸಿಪಿಎಲ್) ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ ಸೇರಿದ ಎಫ್ ಎಂಸಿಜಿ ಅಂಗವಾಗಿದೆ. ಮಂಗಳವಾರದಂದು ಘೋಷಣೆ ಮಾಡಿರುವ ಪ್ರಕಾರ, 75 ವರ್ಷಗಳಷ್ಟು ಹಳೆಯದಾದ ಪಾರಂಪರಿಕ ಆಹಾರ ಬ್ರ್ಯಾಂಡ್ ಎಸ್ಐಎಲ್ ಅನ್ನು ಮತ್ತೆ ಪ್ರಾರಂಭ ಮಾಡುವುದರ ಮೂಲಕ ಪ್ಯಾಕೇಜ್ಡ್ ಆಹಾರ ಮಾರುಕಟ್ಟೆಯಲ್ಲಿ ಮಹತ್ತರವಾದ ವಿಸ್ತರಣೆಗೆ ಮುಂದಾಗಿದೆ. ಈ ಸೆಗ್ಮೆಂಟ್ ನಲ್ಲಿ ತನ್ನ ಫ್ಲ್ಯಾಗ್ ಶಿಪ್ ಕೊಡುಗೆಯಾಗಿ ಎಸ್ಐಎಲ್ ಪುನರಾರಂಭ ಮಾಡಿದೆ. ಈ ಮೂಲಕವಾಗಿ ಆರ್ ಸಿಪಿಎಲ್ ಆಹಾರ ವರ್ಗದಲ್ಲಿ ಸಮಗ್ರವಾದ ಉತ್ಪನ್ನಗಳನ್ನು ಒದಗಿಸುವಂತೆ ಆಗಲಿದೆ. ನೂಡಲ್ಸ್, ಜಾಮ್ ಗಳು, ಕೆಚಪ್, ಸಾಸ್ ಗಳು ಸೇರಿದಂತೆ ಇನ್ನೂ ಹಲವು ಎಸ್ಐಎಲ್ ಹೊಸ ಪೋರ್ಟ್ ಫೋಲಿಯೋದ ಜೊತೆಗೆ ಶುರುವಾಗುತ್ತದೆ. ಇಂದಿನ ದಿನಮಾನಕ್ಕೆ ತಕ್ಕಂತೆ ಹೊಸ, ಸಮಕಾಲೀನ ಹಾಗೂ ಹೊಸ ಚೈತನ್ಯದೊಂದಿಗೆ ತಲೆತಲೆಮಾರುಗಳಿಂದ ಪ್ರೀತಿ ಪಡೆದುಕೊಂಡು ಬಂದ ಬ್ರ್ಯಾಂಡ್ ಜನರೆದುರು ಬರಲಿದೆ. ಆಧುನಿಕ ಭಾರತೀಯ ಕುಟುಂಬಗಳು ನಿರೀಕ್ಷೆ ಮಾಡುವ ರುಚಿ, ಗುಣಮಟ್ಟ ಹಾಗೂ ಮೌಲ್ಯದೊಂದಿಗೆ ಸ್ವಾದವು ಮತ್ತೆ…
ಶಿವಮೊಗ್ಗ: ಅಣ್ಣನ ಹೆಂಡತಿಯೊಂದಿಗೆ ತಮ್ಮ ಅನೈತಿಕ ಸಂಬಂಧ ಇಟ್ಟುಕೊಂಡ ವಿಚಾರ ತಿಳಿದಂತ ಸಹೋದರ ಕೆಂಡಾಮಂಡಲವಾಗಿದ್ದರು. ಊರವರನ್ನು ಸೇರಿಸಿ ಪಂಚಾಯ್ತಿ ಮಾಡಿಸಿ ತಮ್ಮನಿಗೆ ಬುದ್ಧಿ ಕೂಡ ಹೇಳಿದ್ದರು. ಆದರೂ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಬಿಟ್ಟಿರಲಿಲ್ಲ. ಮುಂದೆ ಏನಾಯ್ತು ಅಂತ ಮುಂದೆ ಸುದ್ದಿ ಓದಿ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಾನಕೊಪ್ಪ ಗ್ರಾಮದ ಮಾಲತೇಶ್(35) ಮದುವೆಯಾದ ನಂತ್ರ ಪತ್ನಿಯೊಂದಿಗೆ ಕೆಲ ದಿನಗಳ ಕಾಲ ಹಿರೇಕೆರೂರು ತಾಲ್ಲೂಕಿನ ಬೆಟಕೆರೂರಲ್ಲೂ ವಾಸವಿದ್ದರು. ಆ ಬಳಿಕ ತಮ್ಮೂರಿಗೆ ವಾಪಾಸ್ ಮರಳಿದ್ದರು. ಇವರೊಟ್ಟಿಗೆ ಮಾಲತೇಶ್ ತಮ್ಮ ರಾಮಚಂದ್ರ(28) ಕೂಡ ವಾಸವಿದ್ದನು. ಕೂಲಿ ಕೆಲಸಕ್ಕೆ ಹೋದರೇ 15 ದಿನಗಳವರೆಗೆ ಮನೆಗೆ ಮರಳದೇ ಅಲ್ಲಿಯೇ ಇದ್ದು ಬಿಡುತ್ತಿದ್ದ ಆಸಾಮಿ ರಾಮಚಂದ್ರ ಆಗಿದ್ದನು. ಇದರ ನಡುವೆ ಮದುವೆಯಾಗದೇ ಇದ್ದಂತ ರಾಮಚಂದ್ರ ಅಣ್ಣ ಮಾಲತೇಶ್ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಇದೇ ವಿಚಾರ ಮನೆಯವರಿಗೂ ಗೊತ್ತಾಗಿ ರಾಮಚಂದ್ರನಿಗೆ ಬುದ್ಧಿ ಹೇಳಿದ್ದಾರೆ. ದಿನಾಂಕ 08-09-2025ರಂದು ಮನೆಯಿಂದ ಹೋದವನು ಒಂದೂವರೆ ತಿಂಗಳಾದರೂ ವಾಪಾಸ್ಸೇ ಆಗದಿದ್ದಾಗ ದಿಗಿಲಾಗುತ್ತದೆ. ಸಂಬಂಧಿಕರು,…
ಬೆಳಗಾವಿ ಸುವರ್ಣಸೌಧ : ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ಕರ್ನಾಟಕ ಬಾಡಿಗೆ ಅಧಿನಿಯಮ, 1999ನ್ನು ಮತ್ತಷ್ಟು ತಿದ್ದುಪಡಿ ಮಾಡುವ, 2025ನೇ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕವನ್ನು ಮೇಲ್ಮನೆಯಲ್ಲಿ ಡಿ.17ರಂದು ಅಂಗೀಕರಿಸಲಾಯಿತು. ಹೀಗಾಗಿ ಇನ್ಮುಂದೆ ನಿಯಮ ಮೀರಿದಂತ ಮಾಲೀಕರು, ಬ್ರೋಕರ್ ಗಳಿಗೂ ದಂಡ ಫಿಕ್ಸ್ ಆದಂತೆ ಆಗಿದೆ. ಬಾಡಿಗೆ ಹೆಸರಿನಲ್ಲಿ ಕೆಲ ಕಡೆಗಳಲ್ಲಿ ಆಘಾತಕಾರಿ ಪ್ರಕರಣಗಳು ದಾಖಲಾಗುತ್ತಿವೆ. ಆದ್ದರಿಂದ ದುರುಪಯೋಗಕ್ಕೆ ಅವಕಾಶವಿಲ್ಲದ ಹಾಗೆ ಎಚ್ಚರ ವಹಿಸಿ ಈ ಕಾಯಿದೆಯನ್ನು ತಿದ್ದುಪಡಿ ಮಾಡಬೇಕಿದೆ ಎಂದು ಸದಸ್ಯರಾದ ನವೀನ ಕೆ.ಎಸ್., ಐವನ್ ಡಿ’ಸೋಜಾ, ರಮೇಶಬಾಬು ಹಾಗೂ ಇನ್ನೀತರರು ಸಲಹೆ ಮಾಡಿದರು. ತಪ್ಪಿತಸ್ಥರನ್ನು ದಂಡದ ಮೂಲಕ ಶಿಕ್ಷೆಗೆ ಗುರಿಪಡಿಸುವುದು, ದಂಡದ ಮೊತ್ತ ಹೆಚ್ಚಳ ಮಾಡುವುದು ಕಾಯಿದೆಯ ತಿದ್ದುಪಡಿ ಹಿಂದಿನ ಉದ್ದೇಶವಾಗಿದೆ. ಮೂಲ ಕಾಯಿದೆಯಲ್ಲಿನ ಮಹತ್ವದ ಅಂಶಗಳನ್ನು ತಿದ್ದುಪಡಿ ಮಾಡಿಲ್ಲ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿ, ಮಸೂದೆಯ ಅಂಗೀಕಾರಕ್ಕೆ ಕೋರಿದರು. ಸಭಾಪತಿಯವರು, ವಿಧೇಯಕವನ್ನು ಅಂಗೀಕರಿಸಲು ಧ್ವನಿಮತಕ್ಕೆ ಹಾಕಿದರು. ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ…
ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಕೋವಿಡ್ RTPCR ಪ್ರಯೋಗಾಲಯವನ್ನು ಕೆ ಎಫ್ ಡಿ ಪ್ರಯೋಗಲವನ್ನಾಗಿ ಪರಿವರ್ತಿಸಿ. ಕೆಎಫ್ ಡಿ ಪರೀಕ್ಷೆಗೆ ಅಗತ್ಯವಿರುವಂತ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಆರೋಗ್ಯ ಇಲಾಖೆಯ ಆಯುಕ್ತರಿಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ ಬರೆದಿದ್ದಾರೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವಂತ ಅವರು, ಕೋವಿಡ್ ಸಂದರ್ಭದಲ್ಲಿ ಸಾಗರದಲ್ಲಿ ಸುಸಜ್ಜಿತ ಆರ್ ಟಿ ಪಿ ಸಿ ಆರ್ ಪ್ರಯೋಗಾಲಯವನ್ನು ಸ್ಥಾಪಿಸಲಾಗಿತ್ತು. ಕೊರೋನಾ ಸಂದರ್ಭದಲ್ಲಿ ಈ ಪ್ರಯೋಗಾಲಯವು ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದಿದ್ದಾರೆ. ಸಾಗರವು ಕ್ಯಾಸನೂರು ಫಾರೆಸ್ಟ್ ಡಿಸೀಜಸ್( Kyasanur Forest Disease-KFD) ಪೀಡಿತ ಪ್ರದೇಶದ ಅಂಚಿನಲ್ಲಿದೆ. ಈ ರೋಗವನ್ನು ತ್ವರಿತವಾಗಿ ಪತ್ತೆ ಹಚ್ಚಿ ನಿಯಂತ್ರಣಕ್ಕೆ ತರಬೇಕಾದಂತ ತುರ್ತು ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಕೋವಿಡ್ ಪ್ರಯೋಗಾಲಯವನ್ನು ಕೆಎಫ್ ಡಿ ಪರೀಕ್ಷೆಯ ಪ್ರಯೋಗಾಲಯವಾಗಿ ಪರಿವರ್ತಿಸುವಂತೆ ಕೋರಿದ್ದಾರೆ. ಇನ್ನೂ ಕೆಎಫ್ ಡಿ ಪರೀಕ್ಷೆಗಾಗಿ ಸಾಗರದಲ್ಲಿ ಪ್ರಯೋಗಾಲಯ ಸ್ಥಾಪಿಸಿದ ನಂತ್ರ ಅದಕ್ಕೆ…
ಬೆಳಗಾವಿ ಸುವರ್ಣಸೌಧ: ಕುಂದಾಪುರ ತಾಲೂಕಿನ ಇಎಸ್ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಭರವಸೆ ನೀಡಿದರು. ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕುಂದಾಪುರ ತಾಲೂಕಿನ ಇಎಸಐ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ಹುದ್ದೆಯನ್ನು ಮಂಜೂರು ಮಾಡಲಾಗಿತ್ತು. ಆದರೆ 2015 ರಿಂದ ಒಬ್ಬರೇ ಒಬ್ಬರು ಖಾಯಂ ವೈದ್ಯರು ಇಲ್ಲ. ಬೇರೆ ಕಡೆಯಿಂದ ನಿಯೋಜನೆ ಮೇರೆಗೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ಕಾರ್ಮಿಕರಿಗೆ ಸರಿಯಾದ ಚಿಕಿತ್ಸೆ ಸಿಗದೆ ತೊಂದರೆಯಾಗಿದೆ ಎಂದು ಕಿರಣ್ ಕುಮಾರ್ ಅವರು ಹೇಳಿದರು. ಕುಂದಾಪುರದ ಇಎಸ್ಐ ಆಸ್ಪತ್ರೆಯಲ್ಲಿ ನಿಯೋಜನೆ ಮೇಲೆ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಯಂ ವೈದ್ಯರು ಬೇಕು ಎಂಬ ಬೇಡಿಕೆ ಬಗ್ಗೆ ಪರಿಶೀಲನೆ ಮಾಡಲಾಗುವುದು. ಮೂರು ವಾರದಲ್ಲಿ ತಾತ್ಕಾಲಿಕ ವೈದ್ಯರ ನೇಮಕ ಮಾಡಲಾಗುವುದು ಎಂದು ಹೇಳಿದರು. ಆಸ್ಪತ್ರೆ ಹೆಸರು ಬಿಟ್ಟಿದ್ದರೆ ಕ್ರಮ: ಇಎಸ್ಐ ಫಲಾನುಭವಿಗಳಿಗೆ ಚಿಕಿತ್ಸೆ…














