Author: kannadanewsnow09

ಬೆಂಗಳೂರು: ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿಗೆ. ಗಾನವಿ ಮತ್ತೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದ ಬಗ್ಗೆ ತಿಳಿದು ಬಂದಿದೆ. ಈ ಹಿನ್ನಲೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಹೇಳಲಾಗುತ್ತಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡ ಗಾನವಿ ಕುಟುಂಬಸ್ಥರ ವಿರುದ್ಧ, ಸೂರಜ್ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ನವ ವಿವಾಹಿತೆ ಗಾನವಿ ಆತ್ಮಹತ್ಯೆ ಬೆನ್ನಲ್ಲೇ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು. ಇದೇ ಸಂದರ್ಭದಲ್ಲಿ ಸೂರಜ್ ಮೇಲೆ ಗಾನವಿ ಕುಟುಂಬದವರು ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದರು. ಅಲ್ಲದೇ ಸೂರಜ್ ಕುಟುಂಬದ ವಿರುದ್ಧ ದೂರು ನೀಡಿದ್ದರಿಂದ ಸೂರಜ್ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆಯ ನಡುವೆ ಗಾನವಿ-ಸೂರಜ್ ಮದುವೆಯ ಬಳಿಕ ಹನಿಮೂನ್ ಗೆ ಶ್ರೀಲಂಕಾಗೆ ತೆರಳಿದ್ದರು. ಆ ವೇಳೆಯಲ್ಲೇ ಗಾನವಿ ತಾನು ಹರ್ಷ ಎಂಬಾತನನ್ನು ಪ್ರೀತಿಸುತ್ತಿದ್ದೇನೆ.ಆತನನ್ನೇ ಮದುವೆಯಾಗೋದಕ್ಕೂ ನಿರ್ಧರಿಸಿದ್ದೆ. ಆದರೇ ಮನೆಯವರ ಒತ್ತಾಯಕ್ಕೆ ಮಣಿದು ನಿಮ್ಮನ್ನು ಮದುವೆಯಾಗಬೇಕಾಯಿತು ಎಂದು ತಿಳಿಸಿದ್ದಳು. ಈ ಎಲ್ಲಾ ವಿಷಯವನ್ನು ಕೇಳಿದಂತ ಸೂರಜ್ ತನ್ನ ಹನಿಮೂನ್ ಟ್ರಿಪ್ ಅರ್ಧಕ್ಕೆ…

Read More

ಶಿವಮೊಗ್ಗ: ಸಾಗರದಲ್ಲಿ ಕೆಲವು ಸೈಬರ್‌ಗಳಲ್ಲಿ ನಕಲಿ ಕಾರ್ಮಿಕರ ಕಾರ್ಡ್ ಮಾಡಿಕೊಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ನಕಲಿ ಕಾರ್ಡ್ ಮಾಡಿಕೊಡುವವರು ಮತ್ತು ನಕಲಿ ಕಾರ್ಡ್ ಮಾಡಿಸಿಕೊಳ್ಳುವವರನ್ನು ಜೈಲಿಗೆ ಕಳಿಸಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆ ರಂಗಮಂದಿರದಲ್ಲಿ ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪದಾಧಿಕಾರಿಗಳ ಪದಗ್ರಹಣ, ಟೀಶರ್ಟ್ ವಿತರಣೆ, ಹಿರಿಯ ಕಾರ್ಮಿಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಸರ್ಕಾರ ಕಾರ್ಮಿಕರಿಗೆ ನೀಡುವ ಸೌಲಭ್ಯ ನೈಜ ಕಾರ್ಮಿಕರಿಗೆ ತಲುಪಬೇಕು. ಕಾರ್ಮಿಕರಿಗೆ ವಂಚನೆಯಾಗುವುದನ್ನು ಸಹಿಸಿಕೊಳ್ಳುವುದಿಲ್ಲ. ತಾಲ್ಲೂಕಿನಲ್ಲಿ ಕಾರ್ಮಿಕ ಸ್ನೇಹಿ ಅಧಿಕಾರಿಗಳಿಗೆ ಮಾತ್ರ ಅವಕಾಶ ಇದ್ದು, ಕಾರ್ಮಿಕರನ್ನು ಶೋಷಣೆ ಮಾಡುವ ಅಧಿಕಾರಿಯನ್ನು ಬೇರೆಡೆ ಕಳಿಸಲಾಗುತ್ತದೆ. ಕಾರ್ಮಿಕರಿಗೆ ಎಂತಹ ಸಮಸ್ಯೆ ಬಂದರೂ ನಿಮ್ಮ ಕುಟುಂಬದವನಾಗಿ ಅದನ್ನು ಬಗೆಹರಿಸಲು ಬೇಳೂರು ನಿಮ್ಮ ಜೊತೆ ಇರುತ್ತಾನೆ. ಗೋಪಾಲಕೃಷ್ಣ ಬೇಳೂರು ಮನೆಗೆ ಬಾಗಿಲು ಇಲ್ಲ. ಬೆಳಿಗ್ಗೆ 7ರಿಂದ 10ರವರೆಗೆ…

Read More

ಮೈಸೂರು: ಜಿಲ್ಲೆಯಲ್ಲಿ ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಹಾಡಹಗಲೇ ಬಂಗಾರದ ಅಂಗಡಿಗೆ ನುಗ್ಗಿ, ದರೋಡೆ ಮಾಡಿರುವಂತ ಘಟನೆ ಹುಣಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಹಾಡಹಗಲೇ ದರೋಡೆ ಮಾಡಲಾಗಿದೆ. ಸ್ಕೈ ಆಭರಣ ಮಳಿಗೆಗೆ ನುಗ್ಗಿ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಲಾಗಿದೆ. ಮೈಸೂರಿನ ಹುಣಸೂರು ಬಸ್ ನಿಲ್ದಾಣದ ಹಿಂಭಾಗದಲ್ಲೇ ಸ್ಕೈ ಆಭರಣ ಮಳಿಗೆ ಇದ್ದು, ಐದಕ್ಕು ಹೆಚ್ಚು ದುಷ್ಕರ್ಮಿಗಳ ಗುಂಪಿನಿಂದ ಈ ಕೃತ್ಯ ಎಸಗಲಾಗಿದೆ. ಆಭರಣ ಮಳಿಗೆಯ ಸಿಬ್ಬಂದಿಗಳಿಗೆ ಗನ್ ತೋರಿಸಿ ಬೆದರಿಸಿ ಹಾಡಹಗಲೇ ಹಣ, ಚಿನ್ನಾಭರಣವನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹುಣಸೂರು ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ. https://kannadanewsnow.com/kannada/suspicions-are-rising-that-the-state-police-are-involved-in-drug-trafficking-mp-bommai/

Read More

ಗದಗ: ಮಹಾರಾಷ್ಟ್ರ ಪೊಲೀಸರು ಕರ್ನಾಟಕಕ್ಕೆ ಬಂದು ಡ್ರಗ್ ಟ್ರಾಫಿಕಿಂಗ್ ಮಾಡುವವರನ್ನು ಪತ್ತೆ ಹೆಚ್ಚುತ್ತಾರೆ ಎಂದರೆ ಇಲ್ಲಿನ ಪೊಲೀಸರು ಡ್ರಗ್ ಟ್ರಾಫಿಕಿಂಗ್‌ನಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳದಿದ್ದರೆ ಉಡ್ತಾ ಕರ್ನಾಟಕ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಗ್ಸ್ ಬಳಕೆ ಕರ್ನಾಟಕದಲ್ಲಿ ಅತಿ ಹೆಚ್ಚಿದೆ. ಅದನ್ನು ನಿಯಂತ್ರಿಸಲು ಸರ್ಕಾರ ಸ್ಪೆಷಲ್ ಸ್ಮಾಡ್ ಮಾಡಿದ್ದಾರೆ. ಆದರೆ, ಪೊಲೀಸರ ಭಯ ಇಲ್ಲ. ಹಲವಾರು ಪ್ರಸಂಗಗಳಲ್ಲಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಇದಕ್ಕಾಗಿ ವಿಶೇಷ ಕಾನೂನಿದೆ. ಅದನ್ನು ಬಳಕೆ ಮಾಡುತ್ತಿಲ್ಲ. ಮಹಾರಾಷ್ಟ್ರದವರು ಬಂದು ಇಲ್ಲಿ ಡಗ್ಸ್ ಪತ್ತೆ ಹೆಚ್ಚುತ್ತಾರೆ ಎಂದರೆ ಇಲ್ಲಿನ ಪೊಲೀಸರು ಡ್ರಗ್ ಟ್ರಾಫಿಕಿಂಗ್‌ನಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಹಾವೇರಿ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲೂ ಡ್ರಗ್ಸ್ ಮುಕ್ತವಾಗಿ ಮಾರಾಟವಾಗುತ್ತಿದೆ. ಇದೇ ರೀತಿ ಮುಂದುವರೆದರೆ ಪಂಜಾಬ್ ಆದ ಹಾಗೆ ಆಗುತ್ತದೆ. ಉಡ್ತಾ ಪಂಜಾಬ್ ಥರಾ ಉಡ್ತಾ ಕರ್ನಾಟಕ ಆಗುತ್ತದೆ ಎಂದು ಹೇಳಿದರು.…

Read More

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿ ಹೊಂದಿರುವವರು ಮತ್ತು ವಾಹನ ಮಾಲೀಕರು ವಾಹನ್ ಮತ್ತು ಸಾರಥಿ ಪೋರ್ಟಲ್‌ಗಳಲ್ಲಿ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳನ್ನು ನವೀಕರಿಸಲು ಕೇಳಿದೆ. ನಿಖರವಾದ ದಾಖಲೆಗಳು, OTP ಆಧಾರಿತ ಪರಿಶೀಲನೆ ಮತ್ತು ಸಾರಿಗೆ ಸಂಬಂಧಿತ ಸೇವೆಗಳಿಗೆ ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಈ ನವೀಕರಣವನ್ನು ಉದ್ದೇಶಿಸಲಾಗಿದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದು ಏಕೆ ಮುಖ್ಯ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು OTP ದೃಢೀಕರಣ, ಸ್ಥಿತಿ ಎಚ್ಚರಿಕೆಗಳು ಮತ್ತು ಚಾಲನಾ ಪರವಾನಗಿಗಳು ಮತ್ತು ವಾಹನ ನೋಂದಣಿಗಳಿಗೆ ಸಂಬಂಧಿಸಿದ ಸೇವಾ ಅಧಿಸೂಚನೆಗಳಿಗಾಗಿ ಬಳಸಲಾಗುತ್ತದೆ. ಹಳೆಯ ಸಂಖ್ಯೆಯು ವಿಫಲವಾದ ಲಾಗಿನ್‌ಗಳು, ತಪ್ಪಿದ ನವೀಕರಣಗಳು ಅಥವಾ ಆನ್‌ಲೈನ್ ಸೇವೆಗಳನ್ನು ಪಡೆಯುವಲ್ಲಿ ವಿಳಂಬಕ್ಕೆ ಕಾರಣವಾಗಬಹುದು. ಈ ವಿವರವನ್ನು ಪ್ರಸ್ತುತವಾಗಿಡುವುದರಿಂದ ಡೇಟಾಬೇಸ್‌ಗಳಲ್ಲಿ ಸುರಕ್ಷಿತ ಮತ್ತು ಸ್ಥಿರವಾದ ದಾಖಲೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಸಚಿವಾಲಯ ಹೇಳುತ್ತದೆ. ವಾಹನ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಹಂತ-ಹಂತದ ಮಾರ್ಗದರ್ಶಿ (ವಾಹನ ಮಾಲೀಕರಿಗೆ) 1. ನಿಮ್ಮ ಬ್ರೌಸರ್‌ನಲ್ಲಿ ಅಧಿಕೃತ ವಾಹನ್ ಮೊಬೈಲ್…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ನಿಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಅನಗತ್ಯ ಸಂವಹನದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು WhatsApp ನಲ್ಲಿ ಅನಗತ್ಯ ಸಂಖ್ಯೆಗಳನ್ನು ನಿರ್ಬಂಧಿಸುವುದು ಒಂದು ಪ್ರಾಯೋಗಿಕ ಪರಿಹಾರವಾಗಿದೆ. ನೀವು ಸ್ಪ್ಯಾಮ್, ಕಿರುಕುಳ ಸಂದೇಶಗಳನ್ನು ಎದುರಿಸುತ್ತಿರಲಿ ಅಥವಾ ಸಂಪರ್ಕವನ್ನು ಕಡಿತಗೊಳಿಸಲು ಬಯಸುತ್ತಿರಲಿ, WhatsApp ಸಂಖ್ಯೆಗಳನ್ನು ನಿರ್ಬಂಧಿಸಲು ಸರಳ ಮಾರ್ಗವನ್ನು ಒದಗಿಸುತ್ತದೆ. ಈ ಹಂತ ಹಂತದ ಮಾರ್ಗದರ್ಶಿಯಲ್ಲಿ, WhatsApp ನಲ್ಲಿ ಅನಗತ್ಯ ಸಂಖ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸುವುದು ಹೇಗೆ ಎಂಬುದನ್ನು ನಾವು ವಿವರಿಸುತ್ತೇವೆ, ಇದು ನಿಮ್ಮ ಸಂದೇಶ ಕಳುಹಿಸುವ ಅನುಭವವನ್ನು ನಿಯಂತ್ರಿಸಲು ಮತ್ತು ವೇದಿಕೆಯಲ್ಲಿ ಹೆಚ್ಚು ಶಾಂತಿಯುತ ಮತ್ತು ಸುರಕ್ಷಿತ ಸಂವಹನವನ್ನು ಆನಂದಿಸಲು ನಿಮಗೆ ಅನುವು ಮಾಡಿಕೊಡುತ್ತದೆ. WhatsApp ನಲ್ಲಿ ನೀವು ಅನಗತ್ಯ ಸಂಖ್ಯೆಗಳನ್ನು ನಿರ್ಬಂಧಿಸಲು ಎರಡು ವಿಧಾನಗಳಿವೆ. WhatsApp ನಲ್ಲಿ ಯಾರ ಸಂಖ್ಯೆಯನ್ನು ನಿರ್ಬಂಧಿಸಲು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ. ವಿಧಾನ 1: ಹಂತ 1: WhatsApp ತೆರೆಯಿರಿ ಮತ್ತು ಅನಗತ್ಯ ಸಂಖ್ಯೆಯೊಂದಿಗೆ ಚಾಟ್‌ಗೆ ಹೋಗಿ. ಹಂತ 2: ಚಾಟ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು…

Read More

ಬೆಂಗಳೂರು 29: 66/11 kV ಮತ್ತಿಕೆರೆ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ವಿಭಾಗದ ಸಿ-6 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 29.12.2025 ರಂದು ಬೆಳಗ್ಗೆ 10:00 ರಿ೦ದ ಸಂಜೆ 5 :00 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. “ಲೊಟ್ಟೆಗೊಲ್ಲಹಳ್ಳಿ, ಮುನಿಹನುಮಯ್ಯ ಕಾಲೋನಿ, ಆರ್.ಕೆ. ಉದ್ಯಾನ, ಸಂಜೀವಪ್ಪ ಕಾಲೋನಿ, ಎಂಎಲ್ಎ ಲೇಔಟ್, ನೇತಾಜಿ ನಗರ, ಪೈಪ್ ಲೈನ್ ರಸ್ತೆ, ಮತ್ತಿಕೆರೆ, ಮೋಹನ್ ಕುಮಾರ್ ನಗರ, ಜೆಪಿ ಪಾರ್ಕ್, ಅಕ್ಕಿಯಪ್ಪ ಉದ್ಯಾನ, ಬಿಕೆ ನಗರ, ಎಲ್ಐಸಿ ಕಾಲೋನಿ, ಪಂಪ ನಗರ, ಮತ್ತಿಕೆರೆ, 1ನೇ ಮುಖ್ಯ ರಸ್ತೆ ಯಶವಂತಪುರ, ಎಚ್ಎಂಟಿ ಲೇಔಟ್, ಎಲ್ಸಿಆರ್ ಶಾಲಾ ರಸ್ತೆ, ಗೋಕುಲ 1ನೇ ಹಂತ, ಗುರುಮೂರ್ತಿ ರೆಡ್ಡಿ ಕಾಲೋನಿ, ಕೆಎನ್ ವಿಸ್ತರಣೆ, ಮತ್ತಿಕೆರೆ, ಎಸ್ಬಿಎಂ ಕಾಲೋನಿ, ಬೃಂದಾವನ ನಗರ, ಎಚ್ಎಂಟಿ ಮುಖ್ಯ ರಸ್ತೆ, ಎಂಆರ್ಜೆ ಕಾಲೋನಿ, ಸಂಜೀವಪ್ಪ ಕಾಲೋನಿ, 3ನೇ ಮುಖ್ಯ ರಸ್ತೆ, ಮತ್ತಿಕೆರೆ 2ನೇ ಮುಖ್ಯ ರಸ್ತೆಯಿಂದ 10ನೇ…

Read More

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ ಪ್ರವೇಶಕ್ಕೆ ಬಾಕಿ ಇರುವ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡಿ.29 ಮತ್ತು 31ರಂದು ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಮೂಲಕ ಸೀಟು ಹಂಚಿಕೆ ಮಾಡಲು ತೀರ್ಮಾನಿಸಿದೆ. ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಎರಡನೇ ಸ್ಟ್ರೇ ವೇಕೆನ್ಸಿ ಸುತ್ತಿನ ನಂತರ ಉಳಿದಿರುವ 7 ಹಾಗೂ ರದ್ದುಪಡಿಸಿಕೊಂಡಿರುವ ಒಂದು, ಒಟ್ಟು 8 ಸೀಟುಗಳಿಗೆ ಡಿ.29ರಂದು ಸೀಟು ಹಂಚಿಕೆ ನಡೆಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ 5 ಹಾಗೂ ಕಲ್ಬುರ್ಗಿಯ ಎಂಆರ್ ಎಂಸಿ ವೈದ್ಯಕೀಯ ಕಾಲೇಜಿನಲ್ಲಿ 2 ಸೀಟು ಉಳಿದಿವೆ. ಇದರ ಜತೆಗೆ ಧಾರವಾಡದ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನಲ್ಲಿ ಒಬ್ಬ ಅಭ್ಯರ್ಥಿ ಅನಾರೋಗ್ಯದ ಕಾರಣಕ್ಕೆ ಪ್ರವೇಶ ರದ್ದುಪಡಿಸಿಕೊಂಡಿದ್ದು, ಆ ಸೀಟ ಅನ್ನೂ ಈ ಸುತ್ತಿನಲ್ಲಿ ಹಂಚಿಕೆಗೆ ಪರಿಗಣಿಸಲಾಗಿದೆ. ಮೂರೂ ಕಾಲೇಜುಗಳಲ್ಲಿ ಅದರ್ಸ್ ಕೋಟಾದಲ್ಲಿ ಸೀಟುಗಳು ಲಭ್ಯ ಇದ್ದು, ಆಸಕ್ತರು ನಿಗದಿತ ಶುಲ್ಕದ ಡಿ.ಡಿ…

Read More

ಅಮೇರಿಕಾ: ಪಶ್ಚಿಮ ಗ್ವಾಟೆಮಾಲಾದ ಇಂಟರ್-ಅಮೆರಿಕನ್ ಹೆದ್ದಾರಿಯಲ್ಲಿ ಪ್ರಯಾಣಿಕರ ಬಸ್ ಕಣಿವೆಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದು, 19 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. “ಈ ಅಪಘಾತದಲ್ಲಿ ಹದಿನೈದು ಜನರು ಸಾವನ್ನಪ್ಪಿದ್ದಾರೆ – 11 ಪುರುಷರು, ಮೂವರು ಮಹಿಳೆಯರು ಮತ್ತು ಒಬ್ಬ ಅಪ್ರಾಪ್ತ ವಯಸ್ಕ” ಎಂದು ಸ್ಥಳೀಯ ಅಗ್ನಿಶಾಮಕ ದಳದ ವಕ್ತಾರ ಲಿಯಾಂಡ್ರೊ ಅಮಡೊ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸುಮಾರು 19 ಗಾಯಾಳುಗಳನ್ನು ಘಟನಾ ಸ್ಥಳಕ್ಕೆ ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು. https://twitter.com/Ejercito_GT/status/2004785823330320814 ಈ ಘಟನೆ 172 ಮತ್ತು 174 ಕಿಲೋಮೀಟರ್‌ಗಳ ನಡುವಿನ ಸೊಲೊಲಾ ಇಲಾಖೆಯಲ್ಲಿ ನಡೆದಿದ್ದು, ಈ ಪ್ರದೇಶವು ದಟ್ಟವಾದ ಮಂಜಿನಿಂದ ಕೂಡಿದ್ದು, ಚಾಲಕರಿಗೆ ಗೋಚರತೆಯನ್ನು ಕಡಿಮೆ ಮಾಡುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ತುರ್ತು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವಾಗ ನಜ್ಜುಗುಜ್ಜಾದ ಬಸ್ ಕಂದರದಲ್ಲಿ ಆಳವಾಗಿ ಬಿದ್ದಿರುವುದನ್ನು ತೋರಿಸುವ ಫೋಟೋಗಳನ್ನು ಅಗ್ನಿಶಾಮಕ ಇಲಾಖೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. https://kannadanewsnow.com/kannada/powerful-7-0-magnitude-earthquake-hits-taiwan/…

Read More

ಬೆಂಗಳೂರು: “ಬೆಂಗಳೂರು ಹಾಗೂ ಸುತ್ತಮುತ್ತಲ ಅವರೆಕಾಯಿ ಸೊಗಡು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಕರ್ಷಣೆಯಾಗಬೇಕು. ಅದಕ್ಕೆ ಇಂತಹ ಮೇಳಗಳು ನೆರವಾಗಲಿ. ಇದಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಾಸವಿ ಸಂಸ್ಥೆಯವರು ಆಯೋಜಿಸಿರುವ ಅವರೆಬೇಳೆ ಮೇಳ ಕಾರ್ಯಕ್ರಮದಲ್ಲಿ ಹಾಗೂ ಅದಕ್ಕೆ ಮೊದಲು ಮಾಧ್ಯಮದವರ ಜತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಮಾತನಾಡಿದರು. “ಇಂದು ಬೆಳಗ್ಗೆ ರೈತ ಸಂತೆಗೆ ಹೋಗಿ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿ ರೈತರು ತಮ್ಮ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರು. ಅದನ್ನು ನೋಡಿ ಬಹಳ ಸಂತೋಷವಾಯಿತು. ವಾಸವಿ ಸಂಸ್ಥೆಯವರು ಬಸವನಗುಡಿಯಲ್ಲಿ ಅವರೆಕಾಳು ಮೇಳವನ್ನು ಆಯೋಜಿಸಿ ಅವರೇ ಕಾಳಿನಿಂದ ನೂರಾರು ಪದಾರ್ಥ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಹಣ್ಣುಗಳ ರಾಜ ಮಾವು, ಕಾಳುಗಳ ರಾಜ ಅವರೆಕಾಯಿ. ಮಾಗಡಿ ಅವರೆಕಾಯಿ ತನ್ನ ಸೊಗಡಿಗೆ ಬಹಳ ಪ್ರಸಿದ್ಧಿ. ನಾನು ಜಿಕೆವಿಕೆಯಲ್ಲಿ ನೋಡಿದೆ. ಅಲ್ಲಿ ಅವರೆಕಾಯಿ ಬಿಡಿಸುವ ಯಂತ್ರವನ್ನು ಕೃಷಿ ವಿವಿಯವರು ಕಂಡು ಹಿಡಿದಿದ್ದಾರೆ”…

Read More