Author: kannadanewsnow09

ಇಂದಿನ ಧಾವಂತದ ಬದುಕಿನಲ್ಲಿ ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ ಅಥವಾ ಮಾನಸಿಕ ಆತಂಕದಿಂದ ಪಾರಾಗಲು ಹಲವರು ಮದ್ಯಪಾನದ ಮೊರೆ ಹೋಗುತ್ತಾರೆ. ‘ಒಂದು ಪೆಗ್ ಹಾಕಿದರೆ ರಿಲ್ಯಾಕ್ಸ್ ಆಗುತ್ತದೆ’ ಎಂಬ ಭ್ರಮೆಯಲ್ಲಿರುವವರಿಗೆ ವೈದ್ಯಕೀಯ ಲೋಕವೊಂದು ಗಂಭೀರ ಎಚ್ಚರಿಕೆ ನೀಡಿದೆ. ಒತ್ತಡದ ಸಮಯದಲ್ಲಿ ಮದ್ಯ ಸೇವಿಸುವುದು ತಾತ್ಕಾಲಿಕವಾಗಿ ಮನಸ್ಸನ್ನು ಶಾಂತಗೊಳಿಸಿದಂತೆ ಕಂಡರೂ, ದೀರ್ಘಕಾಲದಲ್ಲಿ ಇದು ಮೆದುಳಿನ ಕಾರ್ಯಕ್ಷಮತೆಯನ್ನು ಶಾಶ್ವತವಾಗಿ ಕುಂದಿಸಬಹುದು. ಒತ್ತಡ ಮತ್ತು ಮದ್ಯ: ಒಂದು ವಿಷವರ್ತುಲ ಸಾಮಾನ್ಯವಾಗಿ ಒತ್ತಡಕ್ಕೆ ಒಳಗಾದಾಗ ನಮ್ಮ ದೇಹದಲ್ಲಿ ‘ಕಾರ್ಟಿಸೋಲ್’ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಮದ್ಯ ಸೇವಿಸಿದಾಗ ಮೆದುಳಿನಲ್ಲಿ ‘ಡೋಪಮೈನ್’ ಎಂಬ ಹ್ಯಾಪಿ ಹಾರ್ಮೋನ್ ತಾತ್ಕಾಲಿಕವಾಗಿ ಹೆಚ್ಚಾಗಿ ನಮಗೆ ಆರಾಮದ ಅನುಭವ ನೀಡುತ್ತದೆ. ಆದರೆ, ಮದ್ಯದ ಪ್ರಭಾವ ಇಳಿಯುತ್ತಿದ್ದಂತೆ ಮೆದುಳು ಮತ್ತೆ ಮೊದಲಿನ ಸ್ಥಿತಿಗಿಂತ ಹೆಚ್ಚಿನ ಒತ್ತಡವನ್ನು ಅನುಭವಿಸಲು ಶುರು ಮಾಡುತ್ತದೆ. ಇದನ್ನು ಸರಿದೂಗಿಸಲು ವ್ಯಕ್ತಿ ಮತ್ತೆ ಮದ್ಯದ ಮೊರೆ ಹೋಗುತ್ತಾನೆ, ಇದು ಒಂದು ಅಪಾಯಕಾರಿ ಚಕ್ರವಾಗಿ ಬದಲಾಗುತ್ತದೆ. ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ವೈದ್ಯರ ಪ್ರಕಾರ,…

Read More

ಭಾರತೀಯ ಮನೆಗಳಲ್ಲಿ ಚಪಾತಿ ಪ್ರಮುಖ ಆಹಾರವಾಗಿದೆ. ಆದರೆ ಅನೇಕರಿಗೆ ಚಪಾತಿ ಮೃದುವಾಗಿ ಬರುವುದಿಲ್ಲ ಎಂಬ ದೂರು ಇರುತ್ತದೆ. ಚಪಾತಿ ಮಾಡಿದ ಕೆಲವೇ ಸಮಯದ ನಂತರ ಅದು ರಬ್ಬರ್‌ನಂತೆ ಗಟ್ಟಿಯಾಗುವುದು ಅಥವಾ ಹರಿದು ಹೋಗುವುದು ಸಾಮಾನ್ಯ ಸಮಸ್ಯೆ. ಆದರೆ, ನೀವು ಹಿಟ್ಟು ಕಲಸುವಾಗ ಕೇವಲ ಒಂದು ಚಮಚ ತುಪ್ಪವನ್ನು ಬಳಸಿದರೆ, ಹೋಟೆಲ್ ಶೈಲಿಯ ಅತ್ಯಂತ ಮೃದುವಾದ ಚಪಾತಿಗಳನ್ನು ಮನೆಯಲ್ಲೇ ತಯಾರಿಸಬಹುದು. ಚಪಾತಿ ಮೃದುವಾಗಿ ಬರಲು ಮತ್ತು ದೀರ್ಘಕಾಲದವರೆಗೆ ಫ್ರೆಶ್ ಆಗಿರಲು ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು: 1. ಹಿಟ್ಟು ಕಲಸುವಾಗ ತುಪ್ಪದ ಬಳಕೆ: ಗೋಧಿ ಹಿಟ್ಟನ್ನು ಕಲಸುವ ಮೊದಲು ಅದಕ್ಕೆ ಒಂದು ಅಥವಾ ಎರಡು ಚಮಚ ಶುದ್ಧ ತುಪ್ಪವನ್ನು ಸೇರಿಸಿ. ಇದು ಹಿಟ್ಟಿಗೆ ಉತ್ತಮ ಪಕದ ನೀಡುತ್ತದೆ ಮತ್ತು ಲಟ್ಟಿಸುವಾಗ ಚಪಾತಿ ಸುಲಭವಾಗಿ ವಿಸ್ತರಿಸಲು ಸಹಾಯ ಮಾಡುತ್ತದೆ. ತುಪ್ಪವು ಚಪಾತಿಗಳಿಗೆ ವಿಶಿಷ್ಟವಾದ ರುಚಿ ಮತ್ತು ಸುಗಂಧವನ್ನು ನೀಡುತ್ತದೆ. 2. ಉಗುರು ಬೆಚ್ಚಗಿನ ನೀರು ಅಥವಾ ಹಾಲು: ಹಿಟ್ಟು ಕಲಸಲು ತಣ್ಣೀರಿನ ಬದಲು ಉಗುರು…

Read More

ಅಡುಗೆ ಮನೆಯ ಟಿಪ್ಸ್ ಗಳುಅಡುಗೆ ಮನೆಯಲ್ಲಿ ಹಾಕಬೇಕಾದ ಶ್ರಮವನ್ನು ಕಡಿಮೆ ಮಾಡುತ್ತದೆ ಹಾಗೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಸಾರಿಗೆ ಉಪ್ಪು ಜಾಸ್ತಿ, ಟೊಮೆಟೊ ಸಿಪ್ಪೆ ಬಿಡಿಸಬೇಕು ಇಂಥ ಅಡುಗೆ ಸಮಸ್ಯೆಗಳಿಗೆ ಸೂಪರ್ ಟಿಪ್ಸ್ ಗಳು. ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸಿದರೆ ಕೆಲವು ಖಾದ್ಯ ಇನ್ನಷ್ಟು ರುಚಿಯಾಗುತ್ತದೆ ಹಾಗೂ ಅಡುಗೆ ಕೆಲಸವೂ ಸುಲಭವಾಗುತ್ತದೆ. ಅಡುಗೆ ಮನೆಯಲ್ಲಿ ಯಾವ ಕೆಲವು ಟಿಪ್ಸ್ ಗಳನ್ನು ಯಾವ ಸಮಯದಲ್ಲಿ ಅನುಸರಿಸುವುದರಿಂದ ಆ ಕೆಲಸ ನಮಗೆ ಸುಲಭವಾಗಿ ಯಾವ ಕೆಲಸವನ್ನು ಹೇಗೆ ಕಡಿಮೆ ಸಮಯದಲ್ಲಿ ಬೇಗ ಮಾಡಬಹುದು ಎನ್ನುವ ಮಾಹಿತಿ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ…

Read More

ಕೆಎನ್ಎನ್ ಸಿನಿಮಾ ಡೆಸ್ಕ್: ‘ಪಡ್ಡೆಹುಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಶ್ರೇಯಸ್ ಮಂಜು ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಅವರು ನಟಿಸಿರುವ ಬಹುನಿರೀಕ್ಷಿತ ‘ದಿಲ್‌ದಾರ್’ ಚಿತ್ರತಂಡವು ವಿಶೇಷ ‘ಬರ್ತ್‌ಡೇ ಟೀಸರ್’ ಬಿಡುಗಡೆ ಮಾಡುವ ಮೂಲಕ ನಟನಿಗೆ ಶುಭಾಶಯ ಕೋರಿದೆ. ಖಡಕ್ ಲುಕ್‌ನಲ್ಲಿ ಶ್ರೇಯಸ್ ಮಿಂಚಿಂಗ್: ಈಗಾಗಲೇ ಆಕ್ಷನ್ ಹೀರೋ ಆಗಿ ಸೈ ಎನಿಸಿಕೊಂಡಿರುವ ಶ್ರೇಯಸ್, ‘ದಿಲ್‌ದಾರ್’ ಟೀಸರ್‌ನಲ್ಲಿ ಮತ್ತೊಂದು ಹಂತದ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿನ ಶ್ರೇಯಸ್ ಅವರ ಆಕ್ಷನ್ ಅವತಾರ ಮತ್ತು ಖಡಕ್ ಮ್ಯಾನರಿಸಂಗೆ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಫಿದಾ ಆಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. https://youtu.be/3LxBvZQsGJ8?si=jQqyGvWkxrtuIZD6 ಹೊಸ ತಲೆಮಾರಿನ ವಿಶಿಷ್ಟ ಕಥೆ: ಯುವ ನಿರ್ದೇಶಕ ಮಧು ಗೌಡ ಗಂಗೂರ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದೆ. “ಇಂದಿನ ಕಾಲಘಟ್ಟದ ಯುವಜನತೆಗೆ ನೇರವಾಗಿ ಕನೆಕ್ಟ್ ಆಗುವಂತಹ ವಿಶಿಷ್ಟ ಮತ್ತು ನವೀನ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ” ಎಂದು ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೀಸರ್ ಮೂಲಕ…

Read More

ಕೊಡಗು: ಜಿಲ್ಲೆಯ ತಡಿಯಾಂಡಮೋಳ್ ಗೆ ಚಾರಣಕ್ಕೆ ಬಂದಿದ್ದ ಕೇರಳದ ಯುವತಿ ಜಿ.ಎಸ್.ಶರಣ್ಯ (36) ನಾಪತ್ತೆಯಾಗಿದ್ದಳು. ಆಕೆಯ ಪತ್ತೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದರು. ಹೀಗಾಗಿ ಇಂದು ಹೆಚ್ಚುವರಿಯಾಗಿ 40 ಸಿಬ್ಬಂದಿಯ 4 ತಂಡ ನಿಯೋಜಿಸಲು ಹಾಗೂ ಡ್ರೋನ್ ಕ್ಯಾಮರಾ ಬಳಸುವಂತೆ ತಿಳಿಸಲಾಗಿದ್ದು, ಒಟ್ಟು 9 ತಂಡದಿಂದ ಶರಣ್ಯ ಪತ್ತೆ ಕಾರ್ಯಾಚರಣೆಗೆ ಇಳಿಯಲಾಗಿತ್ತು. ಅಂತಿಮವಾಗಿ ನಾಪತ್ತೆಯಾಗಿದ್ದಂತ ಶರಣ್ಯ ಪತ್ತೆಯಾಗಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಚಾರಣಕ್ಕಾಗಿ ಕೇರಳದಿಂದ ಒಬ್ಬರೇ ಆಗಮಿಸಿ, ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದ ಶರಣ್ಯ ಅವರು ಗೈಡ್ ಹಾಗೂ ಇನ್ನಿತರ 15 ಚಾರಣಿಗರೊಂದಿಗೆ ಕಳೆದ ಗುರುವಾರ (ಏ.2) ಕೊಡಗಿನ ಎತ್ತರದ ಗಿರಿಶ್ರೇಣಿ ತಡಿಯಂಡಮೋಳ್ ಬೆಟ್ಟಕ್ಕೆ ತೆರಳಿದ್ದರು. ಅಂದು ಮಧ್ಯಾಹ್ನ ಆಕೆ ಕಾಣೆಯಾಗಿದ್ದು, ವಿಷಯ ತಿಳಿದ ಕೂಡಲೇ ಪೊಲೀಸರು, ನಕ್ಸಲ್ ನಿಗ್ರಹದಳ, ಶ್ವಾನದಳ ಮತ್ತು ಅರಣ್ಯ ಸಿಬ್ಬಂದಿ ಸೇರಿ 50 ಜನರ ಐದು ತಂಡಗಳು ಶೋಧ ನಡೆಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಗುರುವಾರ ಕೊನೆಯದಾಗಿ ದೂರವಾಣಿ…

Read More

ದಾವಣಗೆರೆ : ಕೊಡಗಿನ ತಡಿಯಾಂಡಮೋಳ್ ಗೆ ಚಾರಣಕ್ಕೆ ಬಂದಿದ್ದ ಕೇರಳದ ಯುವತಿ ಜಿ.ಎಸ್.ಶರಣ್ಯ (36) ಪತ್ತೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದು, ಇಂದು ಹೆಚ್ಚುವರಿಯಾಗಿ 40 ಸಿಬ್ಬಂದಿಯ 4 ತಂಡ ನಿಯೋಜಿಸಲು ಹಾಗೂ ಡ್ರೋನ್ ಕ್ಯಾಮರಾ ಬಳಸುವಂತೆ ತಿಳಿಸಲಾಗಿದ್ದು, ಒಟ್ಟು 9 ತಂಡದಿಂದ ಕಾರ್ಯಾಚರಣೆ ನಡೆಯುತ್ತಿದೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಚಾರಣಕ್ಕಾಗಿ ಕೇರಳದಿಂದ ಒಬ್ಬರೇ ಆಗಮಿಸಿ, ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದ ಶರಣ್ಯ ಅವರು ಗೈಡ್ ಹಾಗೂ ಇನ್ನಿತರ 15 ಚಾರಣಿಗರೊಂದಿಗೆ ಕಳೆದ ಗುರುವಾರ (ಏ.2) ಕೊಡಗಿನ ಎತ್ತರದ ಗಿರಿಶ್ರೇಣಿ ತಡಿಯಂಡಮೋಳ್ ಬೆಟ್ಟಕ್ಕೆ ತೆರಳಿದ್ದರು. ಅಂದು ಮಧ್ಯಾಹ್ನ ಆಕೆ ಕಾಣೆಯಾಗಿದ್ದು, ವಿಷಯ ತಿಳಿದ ಕೂಡಲೇ ಪೊಲೀಸರು, ನಕ್ಸಲ್ ನಿಗ್ರಹದಳ, ಶ್ವಾನದಳ ಮತ್ತು ಅರಣ್ಯ ಸಿಬ್ಬಂದಿ ಸೇರಿ 50 ಜನರ ಐದು ತಂಡಗಳು ಶೋಧ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ. ಗುರುವಾರ ಕೊನೆಯದಾಗಿ ದೂರವಾಣಿ ಮೂಲಕ ಹೋಂಸ್ಟೇ ಸಂಪರ್ಕಿಸಿರುವ ಯುವತಿ, ತಾವು ದಾರಿತಪ್ಪಿದ್ದಾಗಿ ತಿಳಿಸಿದ್ದಾರೆ ಎಂಬ…

Read More

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕಾ ನಡುವಿನ ಸಂಘರ್ಷ ಈಗ ತುದಿಗೇರಿದೆ. ಹಾರ್ಮುಜ್ ಜಲಸಂಧಿಯನ್ನು (Strait of Hormuz) ಬಂದ್ ಮಾಡಿರುವ ಇರಾನ್ ಕ್ರಮಕ್ಕೆ ಪ್ರತಿಯಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದು, ಇರಾನ್‌ನ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿ ಗುಡುಗಿದ್ದಾರೆ. ‘ಪವರ್ ಪ್ಲಾಂಟ್ ಡೇ’ ಎಚ್ಚರಿಕೆ: ಏಪ್ರಿಲ್ 6ರ ಗಡುವು ಮುಗಿಯಲು ಕೇವಲ ಒಂದು ದಿನ ಬಾಕಿ ಇರುವಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಮಂಗಳವಾರ ಇರಾನ್ ಪಾಲಿಗೆ ಪವರ್ ಪ್ಲಾಂಟ್ ಡೇ ಮತ್ತು ಬ್ರಿಡ್ಜ್ ಡೇ ಆಗಲಿದೆ” ಎಂದು ಹೇಳಿದ್ದಾರೆ. ಅಂದರೆ, ಅಂದು ಇರಾನ್‌ನ ಪ್ರಮುಖ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ಅಮೆರಿಕಾ ಭೀಕರ ದಾಳಿ ನಡೆಸುವ ಮುನ್ಸೂಚನೆಯನ್ನು ಅವರು ನೀಡಿದ್ದಾರೆ. ಟ್ರಂಪ್ ನೀಡಿದ ಪ್ರಮುಖ ಎಚ್ಚರಿಕೆಗಳು: ನರಕ ಸದೃಶ ಜೀವನ: “ನೀವು ನರಕದಲ್ಲಿ ಬದುಕಬೇಕಾಗುತ್ತದೆ” ಎಂದು ಎಚ್ಚರಿಸಿರುವ ಟ್ರಂಪ್, ಈ ಕೂಡಲೇ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಹಿಂದೆಂದೂ ಕಾಣದ ರೀತಿಯ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು…

Read More

ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಶಾಪಿಂಗ್ ಕ್ರೇಜ್ ಎಷ್ಟಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಫ್ಲಿಪ್‌ಕಾರ್ಟ್ (Flipkart) ಮತ್ತು ಮಿಂತ್ರಾ (Myntra) ಅಂತಹ ದೈತ್ಯ ಕಂಪನಿಗಳ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವುದು ‘ಇ-ಕಾರ್ಟ್ ಲಾಜಿಸ್ಟಿಕ್ಸ್’ (Ekart Logistics). ಈಗ ನೀವು ಕೂಡ ಈ ಕಂಪನಿಯ ಜೊತೆ ಕೈಜೋಡಿಸಿ, ನಿಮ್ಮದೇ ಆದ ಸಣ್ಣ ಉದ್ಯಮ ಆರಂಭಿಸಿ ಉತ್ತಮ ಲಾಭ ಗಳಿಸಬಹುದು. ಇ-ಕಾರ್ಟ್ ಫ್ರಾಂಚೈಸಿ ಎಂದರೆ ಏನು? ಇದು ಸರಳವಾಗಿ ಹೇಳುವುದಾದರೆ ಒಂದು ಡೆಲಿವರಿ ಹಬ್. ನಿಮ್ಮ ಪ್ರದೇಶದಲ್ಲಿ ಬರುವ ಆರ್ಡರ್‌ಗಳನ್ನು ಸ್ಟಾಕ್ ಮಾಡಿಕೊಂಡು, ಅವುಗಳನ್ನು ಗ್ರಾಹಕರಿಗೆ ವಿತರಿಸುವುದು ನಿಮ್ಮ ಕೆಲಸವಾಗಿರುತ್ತದೆ. ಹೂಡಿಕೆ ಮತ್ತು ಆದಾಯ ಎಷ್ಟು? ಹೂಡಿಕೆ: ಈ ಉದ್ಯಮ ಆರಂಭಿಸಲು ಅಂದಾಜು ₹1 ಲಕ್ಷದಿಂದ ₹3 ಲಕ್ಷದವರೆಗೆ ಹೂಡಿಕೆ ಬೇಕಾಗಬಹುದು. ಇದು ನಿಮ್ಮ ಜಾಗದ ಬಾಡಿಗೆ ಮತ್ತು ವಾಹನಗಳ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುತ್ತದೆ. ಗಳಿಕೆ: ಪ್ರತಿ ಪಾರ್ಸೆಲ್ ಡೆಲಿವರಿ ಮೇಲೆ ನಿಮಗೆ ಕಮಿಷನ್ ಸಿಗುತ್ತದೆ. ವ್ಯವಹಾರ ಚೆನ್ನಾಗಿದ್ದರೆ ತಿಂಗಳಿಗೆ…

Read More

ಗ್ರೇಟರ್ ನೋಯ್ಡಾ: “ದುಬಾರಿ ಬೆಲೆ ತೆತ್ತು ಪೆಟ್ರೋಲ್ ಹಾಕಿಸಿದರೆ ಸಿಕ್ಕಿದ್ದು ಮಾತ್ರ ನೀರು!” – ಇದು ಗ್ರೇಟರ್ ನೋಯ್ಡಾದ ಸೆಕ್ಟರ್ Pi-1 ರಲ್ಲಿರುವ ಪೆಟ್ರೋಲ್ ಬಂಕ್‌ವೊಂದಕ್ಕೆ ಹೋದ ವಾಹನ ಸವಾರರ ಅಳಲು. ಪೆಟ್ರೋಲ್ ಬದಲಿಗೆ ನೀರು ಮಿಶ್ರಿತ ಇಂಧನ ಪೂರೈಕೆಯಾದ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಘಟನೆಯ ಹಿನ್ನೆಲೆ: ಶನಿವಾರ ಸಂಜೆ ಸೆಕ್ಟರ್ Pi-1 ರ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿಕೊಂಡ ಸುಮಾರು 25ಕ್ಕೂ ಹೆಚ್ಚು ವಾಹನಗಳು (ಕಾರು, ಬೈಕ್ ಮತ್ತು ಸ್ಕೂಟರ್‌ಗಳು) ಬಂಕ್‌ನಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಅರ್ಧ ಹಾದಿಯಲ್ಲೇ ಕೆಟ್ಟು ನಿಂತಿವೆ. ಹರಿದ್ವಾರ, ದೆಹಲಿ ಮತ್ತು ಗುರುಗ್ರಾಮಕ್ಕೆ ತೆರಳುತ್ತಿದ್ದ ಪ್ರಯಾಣಿಕರು ಇದರಿಂದ ತೀವ್ರ ಸಂಕಷ್ಟಕ್ಕೀಡಾದರು. ಬಯಲಾದ ಅಸಲಿಯತ್ತು: ವಾಹನಗಳು ಕೆಟ್ಟು ನಿಂತಾಗ ಸಂಶಯಗೊಂಡ ಮಾಲೀಕರು ಮೆಕ್ಯಾನಿಕ್‌ಗಳನ್ನು ಕರೆಸಿ ತಪಾಸಣೆ ನಡೆಸಿದಾಗ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಇಂಧನ ಟ್ಯಾಂಕ್‌ನಲ್ಲಿದ್ದದ್ದು ಪೆಟ್ರೋಲ್ ಅಲ್ಲ, ಬದಲಾಗಿ ಹೆಚ್ಚಿನ ಪ್ರಮಾಣದ ನೀರು! ಸವಾರರು ಪೆಟ್ರೋಲ್ ಮಾದರಿಯನ್ನು ಬಾಟಲಿ ಮತ್ತು ಬಕೆಟ್‌ಗಳಲ್ಲಿ…

Read More

ನವದೆಹಲಿ: ದೇಶದ ಕೋಟ್ಯಂತರ ಅನ್ನದಾತರಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲು ಸಜ್ಜಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯಡಿ ರೈತರು ಬಹುನಿರೀಕ್ಷಿತ 23ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಹೊಸ ಅಪ್‌ಡೇಟ್ ಹೊರಬಿದ್ದಿದೆ. ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂಪಾಯಿಗಳನ್ನು ತಲಾ 2,000 ರೂಪಾಯಿಯಂತೆ ಮೂರು ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. 1. 23ನೇ ಕಂತಿನ ಹಣ ಯಾವಾಗ ಬರಬಹುದು? ಸಾಮಾನ್ಯವಾಗಿ ಸರ್ಕಾರವು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಂತಿನ ಹಣವನ್ನು ಬಿಡುಗಡೆ ಮಾಡುತ್ತದೆ. ಮೂಲಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣವು ಏಪ್ರಿಲ್ ಅಥವಾ ಮೇ 2026 ರ ವೇಳೆಗೆ ರೈತರ ಖಾತೆ ಸೇರುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರದಿಂದ ಇನ್ನೂ ಅಧಿಕೃತ ದಿನಾಂಕ ಘೋಷಣೆಯಾಗಬೇಕಿದೆ. 2. ಇ-ಕೆವೈಸಿ (e-KYC) ಕಡ್ಡಾಯ ಯೋಜನೆಯ ಲಾಭ ಪಡೆಯಲು ರೈತರು ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು…

Read More