Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ರಸ್ತೆಯಲ್ಲೆಲ್ಲ ಕಲ್ಲು. ಕೆಂಪು ಮಣ್ಣು. ವಾಹನ ಹೋದ್ರೆ ಸಾಕು ಧೂಳೋ, ಧೂಳು. ಹಳ್ಳಿಯ ಕಚ್ಚಾ ರಸ್ತೆಗೂ ಕಡೆಯಾಗಿರೋ ರೋಡಲ್ಲಿ ಕಲ್ಲುಗಳೆದ್ದು ಎಡವಿ ಬೀಳುವಂತಿವೆ. ರಾತ್ರಿ ಹೊತ್ತಲ್ಲಿ ತಲೆ ಬಗ್ಗಿಸಿಯೇ ಆ ರೋಡಲ್ಲಿ ನಡಿಬೇಕು. ಇದರ ಜೊತೆಗೆ ಚರಂಡಿ ತುಂಬಿ ಸೊಳ್ಳೆ ಕಾಟ. ಸರಾಗವಾಗಿ ಚರಂಡಿ ನೀರು ಹರಿಯದೇ ಡೆಂಗ್ಯೂ, ಮಲೇರಿಯಾ ರೋಗ ಬರೋ ಆತಂಕದಲ್ಲಿ ಆ ರಸ್ತೆಯ ಜನರಿದ್ದಾರೆ. ಇದು ಬೇರೆಲ್ಲೂ ಅಲ್ಲ, ಸಾಗರ ನಗರದ ಎಸ್.ಎನ್ ನಗರದ ರಸ್ತೆಯೊಂದರ ದುಸ್ಥಿತಿ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಎಸ್ ಎನ್ ನಗರದ ಹೊಸ ಬಡಾವಣೆ ವಾರ್ಡ್ ನಂ.30ರ ದುಸ್ಥಿತಿಯಿದು. ಇಲ್ಲಿನ ನಿವಾಸಿಗಳು ತಮ್ಮ ಮನೆ ಮುಂದಿರೋ ರೋಡಿಗೆ ಜಲ್ಲಿ ಕಂಡೇ ಅರ್ಧ ಶತಮಾನಗಳೇ ಕಳೆದಿದ್ದರೇ, ಈವರೆಗೂ ಕಿತ್ತೋಗಿರೋ ರಸ್ತೆಗೆ ಮಾತ್ರ ಡಾಂಬಾರೀಕರಣದ ಭಾಗ್ಯವೇ ಒದಗಿ ಬಂದಿಲ್ಲ. ಸುಮಾರು 50 ವರ್ಷಗಳಿಂದ ರಸ್ತೆ ದುರಸ್ತಿ, ಡಾಂಬಾರೀಕರಣಕ್ಕೆ ಇಲ್ಲಿನ ಜನರು ನಗರಸಭೆಗೆ ಅಲೆದಾಡಿಯೇ ಸುಸ್ತಾದ್ರೇ ವಿನಹ, ಅಧಿಕಾರಿಗಳು ಮಾತ್ರ ಡಾಂಬಾರೀಕರಣ ಮಾಡೋ ಗೋಜಿಗೆ…
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಆಗುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪದೋಷ ಸರಿಪಡಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಚುನಾವಣಾಧಿಕಾರಿಗಳಿಗೆ ಮನವಿ ಮಾಡಲಾಯಿತು. ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ಸಚಿವರು, ಶಾಸಕರನ್ನು ಒಳಗೊಂಡ ನಿಯೋಗವು ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ರಾಜ್ಯ ಚುನಾವಣೆ ಆಯುಕ್ತ ಜಿ ಎಸ್ ಸಂಗ್ರೇಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ವೇಳೆ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್, ಶಾಸಕರಾದ ರಿಜ್ವಾನ್ ಅರ್ಷದ್, ಎ.ಸಿ. ಶ್ರೀನಿವಾಸ್, ಎಂ ಎಲ್ಸಿಗಳಾದ ಪುಟ್ಟಣ್ಣ, ಶ್ರೀನಿವಾಸ್ ಮತ್ತಿತರರು ನಿಯೋಗದಲ್ಲಿದ್ದರು.
ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ಸಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದಂತ 2637 ಪ್ರಯಾಣಿಕರಿಗೆ ದಂಡದ ಬಿಸಿ ಮುಟ್ಟಿಸಲಾಗಿದೆ. ಬರೋಬ್ಬರಿ 5.85 ಲಕ್ಷ ದಂಡವನ್ನು ಹಾಕಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ ತನಿಖಾ ತಂಡಗಳು ಜನವರಿ-2026 ಮಾಹೆಯಲ್ಲಿ 18,466 ಟ್ರಿಪ್ಗಳನ್ನು ತಪಾಸಿಸಿ 2637 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು ರೂ.5,85,650/- ದಂಡ ವಸೂಲಿ ಮಾಡಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1679 ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 242 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 24,200/- ಅನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ. ಒಟ್ಟಾರೆಯಾಗಿ ಜನವರಿ-2026ರ ಮಾಹೆಯಲ್ಲಿ 2879 ಪ್ರಯಾಣಿಕರಿಂದ ಮಾಹೆವಾರು ಒಟ್ಟು ರೂ.7,05,630/- ದಂಡವನ್ನು…
ಇಸ್ಲಮಾಬಾದ್: ಅನಾರೋಗ್ಯದಿಂದ ಬಳಲುತ್ತಿರುವಂತ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಕೊಡಿಸುವಂತೆ ಪಾಕಿಸ್ತಾನ್ ಸರ್ಕಾರಕ್ಕೆ ಕ್ರಿಕೆಟಿಗರು ಪತ್ರ ಬರೆದು ಮನವಿ ಮಾಡಿದ್ದಾರೆ. ಪದ್ಮಭೂಷಣ ಸುನಿಲ್ ಗವಾಸ್ಕರ್, ಪದ್ಮಭೂಷಣ ಕಪಿಲ್ ದೇವ್, ಗ್ರೆಗ್ ಚಾಪೆಲ್, ಸ್ಟೀಫನ್ ವಾ ಸೇರಿದಂತೆ 14 ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ನಾಯಕರು, ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರ ವರದಿಯಾದ ಸ್ಥಿತಿಯ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನ್ಯಾಯಯುತ ಆಟ, ಗೌರವ ಮತ್ತು ಗೌರವದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಸಹ ಕ್ರಿಕೆಟಿಗರಾಗಿ, ಇಮ್ರಾನ್ ಖಾನ್ ಅವರ ಸ್ಥಾನಮಾನದ ವ್ಯಕ್ತಿಯನ್ನು ಮಾಜಿ ರಾಷ್ಟ್ರೀಯ ನಾಯಕ ಮತ್ತು ಜಾಗತಿಕ ಕ್ರೀಡಾ ಐಕಾನ್ಗೆ ಸೂಕ್ತವಾದ ಘನತೆ ಮತ್ತು ಮೂಲಭೂತ ಮಾನವೀಯ ಪರಿಗಣನೆಗೆ ಅರ್ಹರು ಎಂದು ನಾವು ನಂಬುತ್ತೇವೆ. ಇಮ್ರಾನ್ ಖಾನ್ ಅವರ ವರದಿಯಾದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಅವರು ಆಯ್ಕೆ ಮಾಡಿದ ಅರ್ಹ ತಜ್ಞರಿಂದ ತಕ್ಷಣದ, ಸಮರ್ಪಕ ಮತ್ತು…
ನವದೆಹಲಿ: ನಗರದ ನೀರು ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆಯ (Artificial Intelligence – AI) ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರು ಜಲಮಂಡಳಿಯು ಜಾಗತಿಕ ಮಟ್ಟದಲ್ಲಿ ಮಾದರಿಯಾಗಿ ಹೊರಹೊಮ್ಮಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರು ಹಾಗೂ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ (ಐಎಎಸ್) ಅವರು ತಿಳಿಸಿದರು. ನವದೆಹಲಿಯ ಪ್ರತಿಷ್ಠಿತ ಭಾರತ್ ಮಂಟಪದಲ್ಲಿ ಇಂದು ನಡೆದ ‘ಎಐ ಇಂಪ್ಯಾಕ್ಟ್ ಶೃಂಗಸಭೆ-2026’ ರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. *”ಮಾಡೆಲ್ ಟೂ ಮಾಸಸ್ ಹವಾಮಾನ ವೈಪರೀತ್ಯ ಎದುರಿಸಲು ಎಐ ಬಳಕೆ” (From Models to the Masses: Deploying AI for Climate Resilience)* ಎಂಬ ಸಂವಾದದಲ್ಲಿ ಭಾಗವಹಿಸಿದ ಅವರು, ಬೆಂಗಳೂರು ಜಲಮಂಡಳಿಯು ಸಾಂಪ್ರದಾಯಿಕ ಪದ್ಧತಿಯಿಂದ ಹೊರಬಂದು, ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ಸಂಸ್ಥೆಯಾಗಿ ಹೇಗೆ ಬದಲಾಗಿದೆ ಎಂಬುದನ್ನು ವಿವರಿಸಿದರು. ಇಂಧನ ದಕ್ಷತೆ ಮತ್ತು ಆರ್ಥಿಕ ಉಳಿತಾಯ: ತಮ್ಮ ಭಾಷಣದಲ್ಲಿ ಮಂಡಳಿಯ ‘ಐಪಂಪ್ನೆಟ್’ (IPUMPNET) ವ್ಯವಸ್ಥೆಯ ಯಶಸ್ಸನ್ನು ಪ್ರತಿಪಾದಿಸಿದ ಅವರು, ಪಂಪಿಂಗ್ ಸ್ಟೇಷನ್ಗಳು ಮತ್ತು…
ಹಾವೇರಿ: ರಾಜ್ಯದಲ್ಲಿ 20,000 ಶಿಕ್ಷಕರ ಹುದ್ದೆ ಖಾಲಿ ಇದ್ದಾವೆ. ತರಗತಿಗೊಬ್ಬ ಶಿಕ್ಷಕರನ್ನು ಕೊಡುವ ಕೆಲಸ ಆಗಬೇಕಿತ್ತು. ಹೀಗಿದ್ದರೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಹೇಗೆ ನಿರೀಕ್ಷೆ ಮಾಡ್ತೀರಿ ಎಂಬುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ. ಇಂದು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ತರಗತಿಗೆ ಒಬ್ಬ ಶಿಕ್ಷಕರನ್ನು ಕೊಡುವ ಕೆಲಸ ಆಗಬೇಕು ಈ ವಿಚಾರವಾಗಿ ಶಿಕ್ಷಣ ಇಲಾಖೆಯ ಸಚಿವರಿಗೆ ಕೇಳುತ್ತೇನೆ. ಶಿಕ್ಷಕರ ನೇಮಕ ಮಾಡದಿದ್ದರೆ ಹೇಗೆ ಎಸ್ ಎಸ್ ಎಲ್ ಸಿ ರಿಸಲ್ಟ್ ಕೇಳುತ್ತೀರಿ? ಎಸ್ಎಸ್ಎಲ್ಸಿಯಲ್ಲಿ ಹೇಗೆ ಉತ್ತಮ ಫಲಿತಾಂಶ ನಿರೀಕ್ಷೆ ಮಾಡುತ್ತೀರಿ? ಶಿಕ್ಷಕರ ನೇಮಕಾತಿ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡುತ್ತೇನೆ. ಸರ್ಕಾರ ಎಲ್ಲಾ ನ್ಯೂನ್ಯತೆ ಸರಿಪಡಿಸಲಿ. ಎಮ್ಮಿಯನ್ನು ನೀರಿನಲ್ಲಿ ಮಲಗಿಸಿ ಬೆಲೆ ಕಟ್ಟುವುದು ಬೇಡ ಎಂದು ಅಸಮಾಧಾನ ಹೊರಹಾಕಿದರು. https://kannadanewsnow.com/kannada/if-you-go-abroad-with-your-own-money-there-is-no-need-to-ask-anyone-speaker-basavaraja-horatti/ https://kannadanewsnow.com/kannada/there-are-29000-teacher-vacancies-in-the-state-and-we-will-convene-a-meeting-for-recruitment-chairman-basavaraj-hortis-statement/
ಹಾವೇರಿ: ಸರ್ಕಾರದ ಹಣದಲ್ಲಿ ಶಾಸಕರು ವಿದೇಶಕ್ಕೆ ಹೋದರೆ ಅನುಮತಿ ಕೇಳಬೇಕು. ಸ್ವಂತ ಹಣದಲ್ಲಿ ವಿದೇಶಕ್ಕೆ ಹೋದರೆ ಯಾರನ್ನೂ ಕೇಳಬೇಕಾದ ಅಗತ್ಯವಿಲ್ಲ ಎಂಬುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಹಾವೇರಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಷತ್ ನ ಜೆಡಿಎಸ್ ಸದಸ್ಯ ಭೋಜೇಗೌಡ ದಕ್ಷಿಣ ಆಫ್ರಿಕಾಗೆ ಹೊರಟಿದ್ದಾರೆ. ವಿಧಾನಸಭೆಯ 22 ಸದಸ್ಯರು ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ ಎಂದರು. ಎಸ್ ಎಲ್ ಭೋಜೇಗೌಡ ವಿದೇಶ ಪ್ರವಾಸಕ್ಕೆ ಅನುಮತಿ ಕೇಳಿದ್ದಾರೆ. ಉಳಿದವರು ಅನುಮತಿ ಕೇಳಿದರೇ ಫೈಲ್ ಬರಲಿ ಪರಿಶೀಲನೆ ಮಾಡುವೆ. ಅವರು ವೈಯಕ್ತಿಕವಾಗಿ ಹೋಗುವುದಾದರೇ ಅನುಮತಿ ಕೇಳುವ ಅಗತ್ಯವಿಲ್ಲ. ಸರ್ಕಾರದ ಹಣದಲ್ಲಿ ವಿದೇಶಕ್ಕೆ ಹೋದರೇ ಅನುಮತಿ ಪಡೆಯಬೇಕು ಎಂದು ತಿಳಿಸಿದರು. https://kannadanewsnow.com/kannada/tarique-rahman-sworn-in-as-prime-minister-of-bangladesh/
ಬಾಂಗ್ಲಾದೇಶ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತದಿಂದ ಸಂಸತ್ ಸ್ಪೀಕರ್ ಓಂ ಬಿರ್ಲಾ ಭಾಗಿಯಾಗಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಐದು ದಿನಗಳ ನಂತರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್ಪಿ) ಅಧ್ಯಕ್ಷ ತಾರಿಕ್ ರೆಹಮಾನ್ ಅವರನ್ನು ಬಾಂಗ್ಲಾದೇಶದ ಹೊಸ ಪ್ರಧಾನಿಯಾಗಿ ಅಧಿಕೃತವಾಗಿ ನೇಮಿಸಲಾಗಿದೆ. ಅಧ್ಯಕ್ಷ ಮೊಹಮ್ಮದ್ ಶಹಬುದ್ದೀನ್ ಅವರು ರೆಹಮಾನ್ ಮತ್ತು ಅವರ ಪಕ್ಷದ ಸದಸ್ಯರಿಗೆ ಸಂಪುಟ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಿಎನ್ಪಿ ಸದಸ್ಯರು ಅವರನ್ನು ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದರಿಂದ ಇದು ಬಂದಿದೆ. ಪ್ರಮಾಣವಚನ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಅವರು ಮಂಗಳವಾರ ಢಾಕಾಗೆ ಬಂದಿಳಿದರು. ಸಮಾರಂಭವು ಮೊದಲ ಬಾರಿಗೆ ಬಂಗಭಬನ್ ಬದಲಿಗೆ ಸಂಸತ್ತಿನ ಸಂಕೀರ್ಣದ ದಕ್ಷಿಣ ಪ್ಲಾಜಾದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ದಶಕಗಳ ಕಾಲ ದೇಶಭ್ರಷ್ಟರಾಗಿದ್ದ ರೆಹಮಾನ್, 2025 ರಲ್ಲಿ ತೀವ್ರ ಪ್ರತಿಭಟನೆಗಳ ನಂತರ ಭಾರತಕ್ಕೆ ಪಲಾಯನ ಮಾಡಿದ ಮಾಜಿ ಪ್ರಧಾನಿ ಶೇಖ್ ಹಸೀನಾ…
ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದಂತ ಮನೆಯಲ್ಲೇ 200 ಗ್ರಾಂ ಚಿನ್ನಾಭರಣ ಕದ್ದು ಸೈಟ್ ಖರೀದಿಸಿದಂತ ಚಾಲಾಕಿ ಕಳ್ಳಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕೊಣನಕುಂಟೆ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚಿನ್ನಾಭರಣ ಕದ್ದ ಕಳ್ಳಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಂತ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದಂತ ದೀಪ ಎಂಬಾಕೆ, ಅದೇ ಚಿನ್ನಾಭರಣ ಮಾರಾಟ ಮಾಡಿ, ತಮಿಳಉನಾಡಿನಲ್ಲಿ ಸೈಟ್ ಖರೀದಿಸಿದ್ದಳು. ಮನೆಯಲ್ಲಿ ಚಿನ್ನಾಭರಣ ಕಳ್ಳತನವಾದ ಬಗ್ಗೆ ಕೋಣನಕುಂಟೆ ಠಾಣೆಯ ಪೊಲೀಸರಿಗೆ ಮನೆ ಮಾಲೀಕ ಜಗದೀಶ್ ದೂರು ನೀಡಿದ್ದರು. ಈ ದೂರು ಆಧರಿಸಿ ಮನೆಯ ಕೆಲಸದಾಕೆ ದೀಪ ಬಂಧಿಸಿ, ವಿಚಾರಣೆ ನಡೆಸಿದಾಗ ಕಳ್ಳತನ, ಸೈಟ್ ಖರೀದಿ ವಿಷಯ ಬೆಳಕಿಗೆ ಬಂದಿದೆ. ಅಂದಗಾಗೇ ಜಗದೀಶ್ ಎಂಬುವರ ಮನೆಯಲ್ಲಿ ದೀಪ ಮನೆ ಕೆಲಸ ಮಾಡುತ್ತಿದ್ದರು. ಅವರ ಮನೆಯಲ್ಲಿದ್ದ ಚಿನ್ನಾಭರಣದ ಮೇಲೆ ದೀಪ ಕಣ್ಣಿಟ್ಟಿದ್ದರು. ಒಂದೇ ಬಾರಿಗೆ ಕದ್ದರೇ ಅನುಮಾನ ಬರುತ್ತದೆ ಎಂಬುದಾಗಿ ಪ್ಲಾನ್ ಮಾಡಿ, ಕೆಲ ದಿನಗಳಿಂದ ಒಂದೊಂದೇ ಚಿನ್ನಾಭರಣ ಕದ್ದಿದ್ದರು. ಬರೋಬ್ಬರಿ…
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಈ ಬಾರಿ ಬೀದರನಲ್ಲಿ ಮಾರ್ಚ್ ಅಂತ್ಯದಲ್ಲಿ ಆಯೋಜಿಸಲಾಗುತ್ತಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದ ಕೆಯುಡಬ್ಲ್ಯೂಜೆ ನಿಯೋಗವು ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಮನವಿ ಮಾಡಿ ಆಹ್ವಾನಿಸಿತು. ಸಂಘದ ಮನವಿಗೆ ಪ್ರತಿಕ್ರಿಯಿಸಿದ ರಾಜ್ಯಪಾಲರು, ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತನಾಗಿದ್ದೇನೆ ಎಂದರು. ರಾಜ್ಯಸಂಘದ ಇತಿಹಾಸವನ್ನು ಕೇಳಿಕೊಂಡ ಅವರು ಡಿವಿಜಿ ಸಂಸ್ಥಾಪಿಸಿದ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇಣಿಗೆ ನೀಡಿದ ಸಂಘಕ್ಕೆ ತೊಂಬತ್ತೈದು ವಸಂತ ತುಂಬುತ್ತಿರುವ ಬಗ್ಗೆ ಮೆಚ್ಚುಗೆ ಮತ್ತು ಅಭಿಮಾನ ವ್ಯಕ್ತಪಡಿಸಿದರು. ಇದೇ ಸಂಧರ್ಭದಲ್ಲಿ ಅವರಿಗೆ ಕೆಯುಡಬ್ಲ್ಯೂಜೆ ನೆನಪಿನ ಸಂಚಿಕೆ, ಕೋವಿಡ್ ಕಥೆಗಳು ಮತ್ತು ಅಮೃತ ಬೀಜ ಪುಸ್ತಕವನ್ನು ನೀಡಲಾಯಿತು. ಕೆಯುಡಬ್ಲ್ಯೂಜೆ ಲೋಗೋ ಜೊತೆಗೆ ಅವರದೇ ಭಾವಚಿತ್ರವಿರುವ ಕಾಫಿ ಕಪ್ ಮತ್ತು ಕೆಯುಡಬ್ಲ್ಯೂಜೆ ಕ್ಯಾಲೆಂಡರ್ ನೀಡಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿ ಸೋಮಶೇಖರ ಕೆರಗೋಡು,…














