Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಗೆ ಹಳೆಯ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್ ನಾಗೇಂದ್ರ ಅವರು ಹೊಸ ಸಮಿತಿಯ ಅಧ್ಯಕ್ಷರಾದಂತ ಪವಿತ್ರಾ ನಾಗರಾಜ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದೆ. ಇಂದು ಸಾಗರದ ಮಾರಿಕಾಂಬ ದೇವಸ್ಥಾನದಲ್ಲಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರದ ಕಾರ್ಯಕ್ರಮ ನಡೆಯಿತು. ಹಳೆಯ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರ್ ಜೊತೆಗೂಡಿ ನೂತನ ಸಮಿತಿಯ ಅಧ್ಯಕ್ಷ ಪವಿತ್ರಾ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ.ಡಿ ಆನಂದ್ ಅವರಿಗೆ ಸಮಿತಿಯ ಲೆಕ್ಕದ ಪುಸ್ತಕಗಳನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ನೂತನ ಸಮಿತಿಯ ಅಧ್ಯಕ್ಷರಿಗೆ ಮಾಜಿ ಪ್ರಧಾನ ಕಾರ್ಯದರ್ಶಿ ಗಿರಿಧರ ಭಟ್ ಅವರು ಲೆಕ್ಕ ಪತ್ರ, ಮಾರಿಕಾಂಬೆಗೆ ಬಂದಂತ ಬಂಗಾರ, ಬೆಳ್ಳಿಯ ವಸ್ತುಗಳು ಸೇರಿದಂತೆ ಹಣಕಾಸಿನ ಮಾಹಿತಿಯನ್ನು ಸಭೆಯಲ್ಲಿಯೇ ಸಮಿತಿಯ ಎಲ್ಲರ ಮುಂದೆ ಮಾಹಿತಿ ನೀಡಿದರು. ಜೊತೆಗೆ ಮಾರಿಕಾಂಬ ದೇವಿಯ ಲೆಕ್ಕ ಪತ್ರವನ್ನು ಆಡಿಟ್ ಮಾಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಮೇ, ಜೂನ್ ಒಳಗಾಗಿ ಮಾರಿಕಾಂಬ…
BIG NEWS: ರಾಜ್ಯದಲ್ಲಿ PUCವರೆಗೆ ಗಂಡು ಮಕ್ಕಳಿಗೆ ಉಚಿತ ಪ್ರಯಾಣದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ: KSRTC ಸ್ಪಷ್ಟನೆ
ಬೆಂಗಳೂರು: ಪಿಯುಸಿವರೆಗಿನ ಗಂಡು ಮಕ್ಕಳಿಗೂ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಸ್ಪಷ್ಟನೆಯ ವಿವರ ಇಲ್ಲಿದೆ: ಇತ್ತೀಚೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಶಾಲಾ-ಕಾಲೇಜಿಗೆ ಹೋಗುವ ಪಿಯುಸಿವರೆಗಿನ ಗಂಡು ಮಕ್ಕಳಿಗೂ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡುವಂತೆ ರಸ್ತೆ ಸಾರಿಗೆ ನಿಗಮಗಳಿಗೆ ಶಿಫಾರಸ್ಸು ಮಾಡಿದೆ ಎಂಬುದು ನಿಜ. ಆದರೆ, ಈ ಶಿಫಾರಸ್ಸಿನ ಕುರಿತು ಸರ್ಕಾರವಾಗಲಿ ಅಥವಾ ಸಾರಿಗೆ ನಿಗಮಗಳಾಗಲಿ ಇದುವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಮುಖ್ಯ ಅಂಶಗಳು: ಕೇವಲ ಶಿಫಾರಸ್ಸು: ಮಕ್ಕಳ ಹಕ್ಕುಗಳ ಆಯೋಗವು ಸಾರಿಗೆ ನಿಗಮಗಳಿಗೆ ಪತ್ರ ಬರೆದು ಸಲಹೆ ನೀಡಿದೆಯೇ ಹೊರತು, ಅದು ಜಾರಿಯಾಗಿಲ್ಲ. ನಿರ್ಧಾರವಾಗಿಲ್ಲ: ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು (KSRTC/BMTC/NWKRTC/KKRTC) ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಗೊಂದಲ ಬೇಡ: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇಂತಹ ಅನಧಿಕೃತ ಸುದ್ದಿಗಳ…
ದಾವಣಗೆರೆ: ನಾವು ಮಾಡಿದ ಜನಪರ ಕೆಲಸಗಳ, ಅಭಿವೃದ್ದಿ ಕೆಲಸಗಳ ಆಧಾರದಲ್ಲಿ ಮತ ಕೇಳುತ್ತಿದ್ದೇವೆ. ಆದರೆ, ನನಗೆ ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ, ಎರಡೂ ಕ್ಷೇತ್ರದಲ್ಲೂ ಗೆದ್ದು ತೋರಿಸ್ತೀವಿ ಎಂದು ಭರವಸೆ ವ್ಯಕ್ತಪಡಿಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಭಾರೀ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆರು ಬಾರಿ ಶಾದಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದು ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳು ಸರಾಗವಾಗಿ ಮುಂದುವರೆಯಲು ಸಮರ್ಥ್ ಶಾಮನೂರು ಅವರನ್ನು ಸಮರ್ಥವಾಗಿ ಗೆಲ್ಲಿಸಿ ಮುನ್ನಡೆಸಿ ಎಂದು ಮನವಿ ಮಾಡಿದರು. ಒಂಬತ್ತು ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಅಭಿವೃದ್ಧಿ ಮಾಡಲಿಲ್ಲ. ಹೀಗಾಗಿ ತಾವು ಮಾಡಿದ ಕೆಲಸಗಳ ಆಧಾರದಲ್ಲಿ ಮತ ಕೇಳಲು ಸಾಧ್ಯವಾಗದೆ ನನಗೆ ಬಯ್ಯುತ್ತಾ ಮತ ಕೇಳುತ್ತಿದ್ದಾರೆ. ನಾನು ದುರ್ಬಲರ, ಬಡವರ ಪರವಾಗಿ ಕಾರ್ಯಕ್ರಮ…
ಬೆಂಗಳೂರು: ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು (Sales Tax) ಹೆಚ್ಚಳ ಮಾಡಿದ್ದು, ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಇಂಧನ ದರಗಳು ಗಣನೀಯವಾಗಿ ಏರಿಕೆಯಾಗಿವೆ. ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದರ ಏರಿಕೆಯ ವಿವರ: ಸರ್ಕಾರದ ಇತ್ತೀಚಿನ ಅಧಿಸೂಚನೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಈ ಕೆಳಗಿನಂತೆ ಬದಲಾವಣೆಯಾಗಿದೆ: ಪೆಟ್ರೋಲ್: ಪ್ರತಿ ಲೀಟರ್ಗೆ ಸರಿಸುಮಾರು ₹3.00 ಹೆಚ್ಚಳವಾಗಿದೆ. ಡೀಸೆಲ್: ಪ್ರತಿ ಲೀಟರ್ಗೆ ಸರಿಸುಮಾರು ₹3.02 ರಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದಿನ ದರಗಳು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಿಷ್ಕೃತ ದರಗಳು ಈ ಕೆಳಗಿನಂತಿವೆ: ಪೆಟ್ರೋಲ್: ₹102.84 (ಹಳೆಯ ದರ ₹99.84) ಡೀಸೆಲ್: ₹88.95 (ಹಳೆಯ ದರ ₹85.93) ಏರಿಕೆ ಯಾಕೆ? ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಕ್ರೋಢೀಕರಿಸುವ ಉದ್ದೇಶದಿಂದ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ. 25.92 ರಿಂದ ಶೇ. 29.84 ಕ್ಕೆ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇ.…
ಬೆಂಗಳೂರು: ಬೇಸಿಗೆಯ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ಕಲಬುರಗಿ ಮತ್ತು ಬೀದರ್ ನಗರಗಳಿಗೆ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಪ್ರಸ್ತುತ ಇರುವ ಸಮಯ ಮತ್ತು ನಿಲ್ದಾಣಗಳೊಂದಿಗೆ ಮುಂದುವರಿಸಲು ನಿರ್ಧರಿಸಿದೆ. ಬೆಂಗಳೂರಿನ ಕಂಟೋನ್ಮೆಂಟ್’ನಿಂದ ಕಲಬುರಗಿಗೆ ಪ್ರತಿ ಶನಿವಾರ ಹೊರಡುವ ರೈಲು ಸಂಖ್ಯೆ 06207 ವೀಕ್ಲಿ ಎಕ್ಸ್ ಪ್ರೆಸ್ ಏಪ್ರಿಲ್ 11 ರಿಂದ ಏಪ್ರಿಲ್ 25, 2026 ರವರೆಗೆ ಸಂಚರಿಸಲಿದೆ. ಹಾಗೆಯೇ, ಕಲಬುರಗಿಯಿಂದ ಬೆಂಗಳೂರಿನ ಕಂಟೋನ್ಮೆಂಟ್’ಗೆ ಪ್ರತಿ ಭಾನುವಾರ ಹೊರಡುವ ರೈಲು ಸಂಖ್ಯೆ 06208 ಏಪ್ರಿಲ್ 12 ರಿಂದ ಏಪ್ರಿಲ್ 26, 2026 ರವರೆಗೆ ಕಾರ್ಯನಿರ್ವಹಿಸಲಿದೆ. ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಒಟ್ಟು ಮೂರು ಟ್ರಿಪ್’ಗಳನ್ನು ಪೂರ್ಣಗೊಳಿಸಲಿವೆ. ಎಸ್ಎಂವಿಟಿ ಬೆಂಗಳೂರಿನಿಂದ ಬೀದರ್’ಗೆ ಪ್ರತಿ ಶುಕ್ರವಾರ ಮತ್ತು ಭಾನುವಾರ ಸಂಚರಿಸುವ ರೈಲು ಸಂಖ್ಯೆ 06539 ಏಪ್ರಿಲ್ 10 ರಿಂದ ಏಪ್ರಿಲ್ 26, 2026 ರವರೆಗೆ ಸಂಚರಿಸಲಿದೆ. ಮರು ಪ್ರಯಾಣದಲ್ಲಿ ಬೀದರ್’ನಿಂದ ಎಸ್ಎಂವಿಟಿ ಬೆಂಗಳೂರಿಗೆ ಪ್ರತಿ ಶನಿವಾರ ಮತ್ತು…
ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಜನಸಾಮಾನ್ಯರನ್ನು ಬೆಲೆ ಏರಿಕೆಯ ಸುಳಿಗೆ ತಳ್ಳಿದೆ ಹಾಗೂ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ನೀಡದೆ ‘ಬಾಕಿ ಸರ್ಕಾರ’ವಾಗಿ ಮಾರ್ಪಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿB ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಅವರು ಕರೆ ನೀಡಿದ್ದಾರೆ. ಬೆಲೆ ಏರಿಕೆಯಿಂದ ಜನಜೀವನ ಅಸ್ತವ್ಯಸ್ತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, “2014ರಲ್ಲಿ 400 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಇಂದು 950 ರೂಪಾಯಿ ದಾಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಇದರಿಂದ ಹೋಟೆಲ್ ಉದ್ಯಮ ಮತ್ತು ಆಟೋ ಚಾಲಕರು ಬೀದಿಗೆ ಬೀಳುವಂತಾಗಿದೆ. ಈ ಬೆಲೆ ಏರಿಕೆಯಿಂದ ಬಿಜೆಪಿ ಕಾರ್ಯಕರ್ತರು ಕೂಡ ಬಸವಳಿದಿದ್ದಾರೆ. ಹೀಗಾಗಿ, ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿಗೆ ಅವರದ್ದೇ ಪಕ್ಷದ ಕಾರ್ಯಕರ್ತರು ಉಪಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಬೇಕು” ಎಂದು ಆಗ್ರಹಿಸಿದರು. ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಕೊಡಿಸಿ…
ನವದೆಹಲಿ: ಹೊಸ ಹಣಕಾಸು ವರ್ಷದ ಆರಂಭದೊಂದಿಗೆ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಕೇಂದ್ರ ನೇರ ತೆರಿಗೆ ಮಂಡಳಿಯು (CBDT) ಈಗಾಗಲೇ ಹೊಸ ಐಟಿಆರ್ ಫಾರ್ಮ್ಗಳನ್ನು ಬಿಡುಗಡೆ ಮಾಡಿದ್ದು, ತೆರಿಗೆದಾರರು ಗಮನಿಸಬೇಕಾದ ಕೆಲವು ಪ್ರಮುಖ ಬದಲಾವಣೆಗಳನ್ನು ಈ ಬಾರಿ ತರಲಾಗಿದೆ. ತೆರಿಗೆ ಸಲ್ಲಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಪಾರದರ್ಶಕತೆ ಹೆಚ್ಚಿಸಲು ಈ ಕೆಳಗಿನ ಮಾರ್ಪಾಡುಗಳನ್ನು ಮಾಡಲಾಗಿದೆ: ೧. ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ವಿವರ: ಹಳೆಯ ತೆರಿಗೆ ವ್ಯವಸ್ಥೆಯಲ್ಲಿ (Old Tax Regime) ಸೆಕ್ಷನ್ 80ಜಿ ಅಡಿಯಲ್ಲಿ ರಾಜಕೀಯ ಪಕ್ಷಗಳು ಅಥವಾ ಚಾರಿಟಬಲ್ ಸಂಸ್ಥೆಗಳಿಗೆ ನೀಡುವ ದೇಣಿಗೆಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಆದರೆ ಇನ್ನು ಮುಂದೆ ಇಂತಹ ದೇಣಿಗೆ ನೀಡುವಾಗ ಆ ಸಂಸ್ಥೆಯ ಹೆಸರು, ಪ್ಯಾನ್ (PAN) ಸಂಖ್ಯೆ ಮತ್ತು ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ಹಣವನ್ನು ನಗದು ರೂಪದಲ್ಲಿ ನೀಡಲಾಗಿದೆಯೇ ಅಥವಾ ಆನ್ಲೈನ್ ಮೂಲಕವೇ ಎಂಬ ವಿವರವನ್ನೂ ನೀಡಬೇಕು. ಆನ್ಲೈನ್ ಪಾವತಿಯಾಗಿದ್ದರೆ ರೆಫರೆನ್ಸ್ ನಂಬರ್ ಮತ್ತು ಬ್ಯಾಂಕ್…
ಬೆಂಗಳೂರು: ಯುವಜನತೆಯ ಅಚ್ಚುಮೆಚ್ಚಿನ ಟೆಕ್ ಬ್ರ್ಯಾಂಡ್ ರಿಯಲ್ಮಿ, ತನ್ನ ‘ನಂಬರ್ ಸೀರೀಸ್’ ಅಡಿಯಲ್ಲಿ ಬಹುನಿರೀಕ್ಷಿತ ರಿಯಲ್ಮಿ 16 5G ಸ್ಮಾರ್ಟ್ಫೋನ್ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಯುವ ಸಮುದಾಯದ ಫೋಟೋಗ್ರಫಿ ಆಸಕ್ತಿ, ಗೇಮಿಂಗ್ ಮತ್ತು ದೈನಂದಿನ ದೀರ್ಘಾವಧಿ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಈ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ. ‘ರಿಯರ್ ಸೆಲ್ಫಿ ಮಿರರ್’ ವಿಶೇಷತೆ ಈ ಫೋನ್ನ ಕ್ಯಾಮೆರಾ ವಿಭಾಗ ಸಾಕಷ್ಟು ಕುತೂಹಲ ಕೆರಳಿಸಿದೆ. ಇದರಲ್ಲಿ AI ಬೆಂಬಲಿತ ಡ್ಯುಯಲ್ 50MP ಪೋರ್ಟ್ರೇಟ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಹಿಂಭಾಗದಲ್ಲಿ 50MP Sony IMX852 ಸೆನ್ಸಾರ್ ಹಾಗೂ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಇದೆ. ವಿಶೇಷವೆಂದರೆ, ಈ ಫೋನ್ನ ಹಿಂಬದಿಯಲ್ಲಿ ‘ಸೆಲ್ಫಿ ಮಿರರ್’ ಹಾಗೂ ಆರಾ ರಿಂಗ್ ಫ್ಲ್ಯಾಶ್ ಅಳವಡಿಸಲಾಗಿದೆ. ಇದರಿಂದ ಬಳಕೆದಾರರು ಹಿಂಬದಿ ಕ್ಯಾಮೆರಾದಿಂದಲೇ ಉತ್ತಮ ಗುಣಮಟ್ಟದ ಅತ್ಯದ್ಭುತ ಸೆಲ್ಫಿಗಳನ್ನು ತೆಗೆಯಬಹುದಾಗಿದೆ. “Say Hi” ಸನ್ನೆ ಮೂಲಕ ವಾಯ್ಸ್ ಕೌಂಟ್ಡೌನ್ ಬಳಸಿ ಸುಲಭವಾಗಿ ಫೋಟೋ ಕ್ಲಿಕ್ಕಿಸಬಹುದು. AI ಎಡಿಟ್ ಜೀನಿ, ವೈಬ್ ಮಾಸ್ಟರ್ ಮೋಡ್…
ಶಿವಮೊಗ್ಗ: ಇಂದಿನ ಜೇನುಗೂಡಿನಂತಹ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ. ಆದರೆ, ಶಿವಮೊಗ್ಗದ ಜನತೆ ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸಲು ‘ರಾಯಲ್ ಫಿಟ್ನೆಸ್ ಸ್ಟುಡಿಯೋ’ (Royal Fitness Studio) ಈಗ ಸಜ್ಜಾಗಿದೆ. “ಫಿಟ್ ಆಗಿರಿ, ಸೋಲೊಪ್ಪಬೇಡಿ” (Be Fit, Don’t Quit) ಎಂಬ ಸ್ಪೂರ್ತಿದಾಯಕ ಘೋಷವಾಕ್ಯದೊಂದಿಗೆ ಈ ಸ್ಟುಡಿಯೋ ಕಾರ್ಯನಿರ್ವಹಿಸುತ್ತಿದೆ. ಏನಿದು ವಿಶೇಷ ತರಬೇತಿ? ರಾಯಲ್ ಫಿಟ್ನೆಸ್ ಸ್ಟುಡಿಯೋ ಕೇವಲ ಜಿಮ್ ಅಲ್ಲ, ಇದೊಂದು ಪರಿಪೂರ್ಣ ತರಬೇತಿ ಕೇಂದ್ರ. ಇಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮಲ್ಲಿ ಲಭ್ಯವಿರುವ ಪ್ರಮುಖ ಸೇವೆಗಳು: ವೈಯಕ್ತಿಕ ತರಬೇತಿ (PT): ಪ್ರತಿಯೊಬ್ಬರ ದೇಹದ ಅಗತ್ಯಕ್ಕೆ ತಕ್ಕಂತೆ ವೈಯಕ್ತಿಕ ಗಮನ ಮತ್ತು ತರಬೇತಿ. ಫಂಕ್ಷನಲ್ ಟ್ರೈನಿಂಗ್: ದೈನಂದಿನ ಚಟುವಟಿಕೆಗಳನ್ನು ಸುಲಭಗೊಳಿಸುವ ದೈಹಿಕ ವ್ಯಾಯಾಮ. ಕೋರ್ ಸ್ಟ್ರೆಂಥನಿಂಗ್: ಕಿಬ್ಬೊಟ್ಟೆ ಮತ್ತು ಬೆನ್ನಿನ ಸ್ನಾಯುಗಳ ಬಲವರ್ಧನೆಗೆ ವಿಶೇಷ ಒತ್ತು. ಫ್ಲೆಕ್ಸಿಬಿಲಿಟಿ ಮತ್ತು ಕಾರ್ಡಿಯೋ: ದೇಹದ ಚಲನಶೀಲತೆ ಹೆಚ್ಚಿಸಲು ಮತ್ತು ಹೃದಯದ ಆರೋಗ್ಯಕ್ಕಾಗಿ…
ನವದೆಹಲಿ: ಐಟಿ ದೈತ್ಯ ಸಂಸ್ಥೆ ಒರಾಕಲ್ (Oracle) ಭಾರತದಲ್ಲಿ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ಬೆನ್ನಲ್ಲೇ, ಅವರಿಗೆ ನೀಡಲಾಗುವ ಪರಿಹಾರ ಪ್ಯಾಕೇಜ್ನ ವಿವರಗಳು ಈಗ ಅಂತರ್ಜಾಲದಲ್ಲಿ ಸೋರಿಕೆಯಾಗಿವೆ. ಯಾವುದೇ ಮುನ್ಸೂಚನೆ ಇಲ್ಲದೆ ಬೆಳಿಗ್ಗೆ 6 ಗಂಟೆಗೆ ಇಮೇಲ್ ಮೂಲಕ ಉದ್ಯೋಗ ಕಳೆದುಕೊಂಡ ಸಿಬ್ಬಂದಿಗೆ ಕಂಪನಿಯು ಕೆಲವು ಆರ್ಥಿಕ ಸವಲತ್ತುಗಳನ್ನು ಘೋಷಿಸಿದೆ ಎಂದು ವರದಿಯಾಗಿದೆ. ಸೋರಿಕೆಯಾದ ಪರಿಹಾರ ಪ್ಯಾಕೇಜ್ನ ಪ್ರಮುಖಾಂಶಗಳು: ಸಾಮಾಜಿಕ ಜಾಲತಾಣಗಳು ಮತ್ತು ಆಂತರಿಕ ಮೂಲಗಳ ಪ್ರಕಾರ, ಭಾರತೀಯ ಉದ್ಯೋಗಿಗಳಿಗೆ ಈ ಕೆಳಗಿನಂತೆ ಪರಿಹಾರ ನೀಡಲಾಗುತ್ತಿದೆ: ಸೇವಾವಧಿಯ ಆಧಾರಿತ ವೇತನ: ಕೆಲಸ ಮಾಡಿದ ಪ್ರತಿ ವರ್ಷಕ್ಕೆ 15 ದಿನಗಳ ಮೂಲ ವೇತನ (Base Salary). ನೋಟಿಸ್ ಪೀರಿಯಡ್ ವೇತನ: ಒಂದು ತಿಂಗಳ ನೋಟಿಸ್ ಅವಧಿಯ ಬದಲು ಒಂದು ತಿಂಗಳ ಪೂರ್ಣ ವೇತನ ನೀಡಲಾಗುತ್ತದೆ. ಎಕ್ಸ್ ಗ್ರೇಷಿಯಾ (Ex-gratia): ಹೆಚ್ಚುವರಿಯಾಗಿ 2 ತಿಂಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗುತ್ತಿದೆ. ಗಾರ್ಡನಿಂಗ್ ಲೀವ್ (Gardening Leave): ಒಂದು ತಿಂಗಳ ಕಾಲ ಕೆಲಸಕ್ಕೆ ಬರದೆಯೇ…














