Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಾಳೆ ಬೆಳಗ್ಗೆ 9.50ರ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಅವರ ದೆಹಲಿಯ ಪ್ರಯಾಣವು ತೀವ್ರ ಕುತೂಹಲ ಮೂಡಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಸಿಎಂ ಬದಲಾವಣೆಯ ಚರ್ಚೆ ನಡುವೆ, ಡಿಸಿಎಂ ಡಿ.ಕೆ ಶಿವಕುಮಾರ್ ನಾಳೆ ಬೆಳಗ್ಗೆ 9.50ಕ್ಕೆ ದೆಹಲಿಗೆ ವಿಮಾನದ ಮೂಲಕ ಪ್ರಯಾಣ ಬೆಳಸಲಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣೆ ಸಂಬಂಧ ಪ್ರಿಯಾಂಕ್ ಗಾಂಧಿ ಅವರು ಪ್ರಮುಖರೊಂದಿಗೆ ಚರ್ಚಿಸೋದಕ್ಕೆ ಪೂರ್ವಭಾವಿ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಭಾಗಿಯಾಗೋದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ತೆರಳುತ್ತಿದ್ದಾರೆ ಎನ್ನಲಾಗಿದೆ. ನಾಳೆ ಸಂಜೆ ಅಸ್ಸಾಂ ವಿಧಾನಸಭಾ ಚುನಾವಣೆ ಪೂರ್ವಭಾವಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಭಾಗಿಯಾಗೋದಕ್ಕೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗುತ್ತಿದೆ.
BREAKING: ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು | Sharad Pawar
ಮುಂಬೈ: ಹಿರಿಯ ರಾಜಕಾರಣಿ ಮತ್ತು ಪವಾರ್ ಕುಟುಂಬದ ಪಿತಾಮಹ ಶರದ್ ಪವಾರ್ ಅವರನ್ನು ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಪುಣೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್ಸಿಪಿ (ಎಸ್ಪಿ) ಮುಖ್ಯಸ್ಥರನ್ನು ಅವರ ಮಗಳು ಸುಪ್ರಿಯಾ ಸುಳೆ ಮತ್ತು ಅಳಿಯ ಸದಾನಂದ ಸುಳೆ ಅವರು ಬಾರಾಮತಿಯಿಂದ ಪುಣೆ ನಗರಕ್ಕೆ ಕರೆದೊಯ್ದರು. ಅವರನ್ನು ಪುಣೆಯ ರೂಬಿ ಹಾಲ್ ಚಿಕಿತ್ಸಾಲಯಕ್ಕೆ ದಾಖಲಿಸಲಾಗಿದೆ. 85 ವರ್ಷದ ಸಾಹೇಬ್, ಪವಾರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು, ಕೆಲವು ದಿನಗಳಿಂದ ಗಂಟಲು ಸೋಂಕು ಮತ್ತು ದಟ್ಟಣೆಯನ್ನು ಎದುರಿಸುತ್ತಿದ್ದಾರೆ. ಪವಾರ್ ಕುಟುಂಬವು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಪ್ರಣಯವನ್ನು ಹೆಚ್ಚಾಗಿ ಮೇಣದಬತ್ತಿಯ ಭೋಜನ, ಹೂವುಗಳು ಅಥವಾ ಭವ್ಯ ಸನ್ನೆಗಳ ರೂಪದಲ್ಲಿ ಕಲ್ಪಿಸಿಕೊಳ್ಳಲಾಗುತ್ತದೆ. ಆದರೆ ಅದರ ಅತ್ಯಂತ ಅರ್ಥಪೂರ್ಣ ರೂಪವು ಸಾಮಾನ್ಯವಾಗಿ ಉಪಸ್ಥಿತಿ, ಪರಿಚಿತತೆ ಮತ್ತು ವಿಶೇಷವಾಗಿ ಸ್ಪರ್ಶದ ಮೂಲಕ ಶಾಂತ, ದೈನಂದಿನ ಕ್ಷಣಗಳಲ್ಲಿ ಅಸ್ತಿತ್ವದಲ್ಲಿರುತ್ತದೆ. ಗುಲಾಬಿಗಳಿಲ್ಲದ ಪ್ರಣಯವನ್ನು ಮೃದುತ್ವ, ಗಮನ ಮತ್ತು ಕಾಳಜಿಯ ಮೂಲಕ ನಿರ್ಮಿಸಲಾಗುತ್ತದೆ. ಅದು ನಮಗೆ ಪರಸ್ಪರ ಭಾವನಾತ್ಮಕವಾಗಿ ಹತ್ತಿರ ಮತ್ತು ಆರಾಮದಾಯಕ ಭಾವನೆಯನ್ನು ನೀಡುತ್ತದೆ. ಅನ್ಯೋನ್ಯತೆಯ ತರಬೇತುದಾರ ಮತ್ತು ಅನ್ಯೋನ್ಯತೆಯ ನಿರ್ದೇಶಕಿ ಆಸ್ತಾ ಖನ್ನಾ ಭಾರದ್ವಾಜ್ ಅವರ ಪ್ರಕಾರ, ಪ್ರಣಯವು ಸಂದರ್ಭಗಳಿಂದಲ್ಲ. ಆದರೆ ಉದ್ದೇಶದಿಂದ ಸೃಷ್ಟಿಸಲ್ಪಡುತ್ತದೆ. “ಭಾವನಾತ್ಮಕ ಮತ್ತು ದೈಹಿಕ ಸಂಪರ್ಕವನ್ನು ಪೋಷಿಸುವ ದೈನಂದಿನ ಆಯ್ಕೆಗಳ ಮೂಲಕ ಪ್ರಣಯವು ಬೆಳೆಯುತ್ತದೆ. ನಾವು ಪರಸ್ಪರ ಹೇಗೆ ಕಾಣಿಸಿಕೊಳ್ಳುತ್ತೇವೆ ಮತ್ತು ಸ್ಪರ್ಶವು ಹೇಗೆ ಸೌಕರ್ಯ ಮತ್ತು ಪ್ರೀತಿಯ ಹಂಚಿಕೆಯ ಭಾಷೆಯಾಗುತ್ತದೆ ಎಂಬುದರಲ್ಲಿ ಅದು ಅವಲಂಬಿತವಾಗಿರುತ್ತದೆ” ಎಂದು ಅವರು ಹೇಳುತ್ತಾರೆ. ಪ್ರೇಮಿಗಳ ದಿನದ ಮುನ್ನಾದಿನದಂದು, ಭಾರದ್ವಾಜ್ ದೈನಂದಿನ ಅಭ್ಯಾಸಗಳ ಮೂಲಕ ಪ್ರಣಯವನ್ನು ನಿರ್ಮಿಸುವ ಸರಳ ಮಾರ್ಗಗಳನ್ನು ಹಂಚಿಕೊಳ್ಳುತ್ತಾರೆ. ದೈನಂದಿನ ಆರೈಕೆಯನ್ನು…
ಬೆಂಗಳೂರು: ಇಂದಿನಿಂದ ಏರಿಕೆಯಾಗಬೇಕಿದ್ದಂತ ನಮ್ಮ ಮೆಟ್ರೋ ಟಿಕೆಟ್ ದರಗಳಿಗೆ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವರೊಂದಿಗೆ ಮಾತನಾಡಿ ಬ್ರೇಕ್ ಹಾಕಿದ್ದರು. ಈ ದರ ಏರಿಕೆಯ ಹಿಂದೆ ರಾಜ್ಯ ಸರ್ಕಾರದ ಕೈವಾಡದ ಬಗ್ಗೆ ಅವರು ಪ್ರತಿಭಟನೆಗೂ ಇಳಿದಿದ್ದರು. ಹೀಗೆ ಪ್ರತಿಭಟನೆಗೆ ಇಳಿದಂತ ಸಂಸದ ತೇಜಸ್ವಿ ಸೂರ್ಯ, ಸಿ.ಕೆ ರಾಮಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪೆಡದಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿರುವಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಕೆ ರಾಮಮೂರ್ತಿ ಅವರನ್ನು ಪೊಲೀಸ್ ವಶಕ್ಕೆ ಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಜಾಪ್ರಭುತ್ವದ ಕರಾಳ ಅಣಕ, ವಾಕ್ ಸ್ವಾತಂತ್ರ್ಯದ ದಮನ ಮಾತ್ರವಲ್ಲ, ಸರ್ವಾಧಿಕಾರಿ ಧೋರಣೆಯ ಪರಮಾವಧಿ! ಇದನ್ನು ನಾನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ. ಮೆಟ್ರೋ ದರ ಏರಿಕೆಯ ಮೂಲಕ ಜನಸಾಮಾನ್ಯರನ್ನು ಲೂಟಿ ಮಾಡಲು ಹುನ್ನಾರ ನಡೆಸಿದ್ದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆ ವಿರೋಧಿಸಿ ಜನರ…
ಕೇರಳ: ರಾಜ್ಯದಲ್ಲಿ ಸಾಕ್ಷರತೆಯ ಸಂಖ್ಯೆ ಅತೀ ಹೆಚ್ಚು. ಜೊತೆ ಜೊತೆಗೆ ಹೆಣ್ಣುಮಕ್ಕಳ ಸಂಖ್ಯೆ ಕೂಡ. ಇದಲ್ಲದೇ ಇಂಟ್ರೆಸ್ಟಿಂಗ್ ಎನ್ನುವಂತೆ ನವಜಾತ ಹೆಣ್ಣುಮಕ್ಕಳಿಗೆ, ಈ ಹಿಂದೆ ಇಟ್ಟಿರುವಂತ ಹೆಣ್ಣುಮಕ್ಕಳ ಹೆಸರಿನ ಹಿಂದೆ ಇಂಟ್ರೆಸ್ಟಿಂಗ್ ಸೀಕ್ರೇಟ್ ಒಂದು ಇದೆಯಂತೆ. ಇದನ್ನು ಬ್ಲಾಗ್ ನಲ್ಲಿ ಒಬ್ಬರು ರಿವೀಲ್ ಮಾಡಿದ್ದಾರೆ. ಆ ಬಗ್ಗೆ ಮುಂದೆ ಓದಿ. ಕೇರಳದಲ್ಲಿ ಹೆಸರುಗಳು ಸುಮ್ಮನೆ ಹುಟ್ಟಿಕೊಳ್ಳುವುದಿಲ್ಲ. ಅವು ಸಂಸ್ಕೃತಿ, ಸಿನಿಮಾ, ಹಾಡುಗಳು ಮತ್ತು ಸಮಯದ ಕ್ಷಣಗಳನ್ನು ಅನುಸರಿಸುತ್ತವೆ. ಸುಬಿನ್ ಅವರ ಬ್ಲಾಗ್ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಬ್ಲಾಗ್ ಮಾಹಿತಿಯಂತೆ 1920 ಮತ್ತು 2007 ರ ನಡುವಿನ ಕೇರಳ ಮತದಾರರ ಪಟ್ಟಿಗಳಿಂದ ವಿಶ್ಲೇಷಿಸಲಾದ ದತ್ತಾಂಶವು, ಕೆಲವು ಹುಡುಗಿಯರ ಹೆಸರುಗಳು ದಶಕಗಳಲ್ಲಿ ಹೇಗೆ ಬದಲಾಗುತ್ತಾ ಬಂದವು. ಅವುಗಳ ಹಿಂದಿನ ಸೀಕ್ರೇಟ್ ಏನು ಎನ್ನುವ ಬಗ್ಗೆ ಆಕರ್ಷಕ ಮಾಹಿತಿಯನ್ನು ನೀಡುತ್ತದೆ. ಇದು ಇಂದಿನ ಊಹೆ ಅಥವಾ ಪ್ರವೃತ್ತಿಯಲ್ಲ. ಇದು ಕೇರಳವು ತನ್ನ ಹೆಣ್ಣುಮಕ್ಕಳಿಗೆ ವಾಸ್ತವವಾಗಿ ಹೇಗೆ ಹೆಸರಿಸಿತು ಎಂಬುದನ್ನು ಪ್ರತಿಬಿಂಬಿಸುವ ನಿಜವಾದ ಐತಿಹಾಸಿಕ ದತ್ತಾಂಶವಾಗಿದೆ.…
ಬೆಂಗಳೂರು: ಕೆಪಿಟಿಸಿಎಲ್ ನಿಂದ ಜಾಲಹಳ್ಳಿ ವಿಭಾಗದ 66/11ಕೆವಿ ಎ೦.ಇ.ಐ ಸಬ್ಸ್ಟೇಷನ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುವುದರಿಂದ 10.02.2026 ರಂದು (ಮಂಗಳವಾರ) ಬೆಳಿಗ್ಗೆ 10:00 ರಿಂದ ಸಂಜೆ 05:00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. “ಎಜಿಬಿಜಿ-ಲೇಔಟ್, ಬೈರವೇಶ್ವರ ಹೋಟೆಲ್, ಶೆಟ್ಟಿಹಳ್ಳಿ ಗ್ರಾಮ, ಶೆಟ್ಟಿಹಳ್ಳಿ, ಮಲ್ಲಸಂದ್ರ ಸನ್ಸಾ ಪ್ರದೇಶಗಳು, ಜುಂಜಪ್ಪ ರ್ಕಲ್, ಲೇಕ್ ವ್ಯೂ, ನನದಾನ ನಗರ, ಕಾವೇರಿ ಲೇಔಟ್, ಬೋನ್ವಿಲ್ ಏರಿಯಾ ಚಿಕ್ಕಸಂದ್ರ ಐರ್ಲೇಔಟ್, ಸಪ್ತಗಿರಿ ಕಾಲೇಜು, ಜಗದೇಸ್ ಲೇಔಟ್, ನಾಗದೇಸ್ ಲೇಔಟ್, ಹೇಶ್ರವಿಶ್ರಾವೃತ ಲೇಔಟ್. ರಸ್ತೆ, 8 ನೇ ಮೈಲ್, ತುಮಕೂರು ಮುಖ್ಯ ರಸ್ತೆ, ಗಣೇಶ ಸಾ ಮಿಲ್, ಮಹೇಶ್ವರಿ ನಗರ ಈಗಲ್ ಬೇಕರಿ ಸುತ್ತಮುತ್ತಲಿನ ಹತ್ತಿರ, ಕೆಂಪೇಗೌಡ ನಗರ, ಕೆಕೆ ರಸ್ತೆ, ಟಿ-ದಾಸರಹಳ್ಳಿ ಮೆಟ್ರೋ ಹಿಂಭಾಗ, ಹಳೆಯ ಮಸಿಡಿ, ಹೊಸ ಮಸಿಡಿ, ಪೈಪ್ ಲೈನ್ ರಸ್ತೆ, ಬೃಂದಾವನ ಲೇಔಟ್, ಮರಿಗ್ಮ್ ಅಪ್ಪರ್ಟ್ನಗರ, ಕಲ್ಯಾಣನಗರ ಬಾಗಲಗುಂಟೆ, ಕರ್ಲೋಸ್ಕರ್ ಲೇಔಟ್, ಎನ್ಎಂಎಚ್ ಲೇಔಟ್, ಸೌರ್ಯ ಲೇಔಟ್, ಮೀನಾಕ್ಷಿ ಲೇಔಟ್ ಸಿದ್ದೇಶ್ವರ…
ಬೆಂಗಳೂರು: ಕೇಂರ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತಂತೆ ಕೆಲ ಪ್ರಶ್ನೆಗಳನ್ನು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಇಟ್ಟಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಎಂಎಲ್ಸಿ ರಮೇಶ್ ಬಾಬು ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸುಳ್ಳು ಪ್ರಚಾರದ ಜೊತೆಗೆ ಸುಳ್ಳು ಹೇಳಿಕೆ ನೀಡಿರುತ್ತಾರೆ. ಕೇಂದ್ರ ಬಿಜೆಪಿ ಕರ್ನಾಟಕದ ಮೇಲೆ ರೈಲ್ವೆ ಯೋಜನೆಗಳಾಗಲಿ, ಕೇಂದ್ರದ ಯೋಜನೆಗಳಾಗಲಿ, ಕೇಂದ್ರದ ಅನುದಾನಗಳಾಗಲಿ ಅಥವಾ ಸಹಾಯಧನವಾಗಲಿ ನೀಡುವ ಕುರಿತು ನಿರಂತರ ಅನ್ಯಾಯ ಮಾಡುತ್ತಿದೆ ಎಂದಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ “ಬುಲೆಟ್ ಟ್ರೈನ್ ಕಾರಿಡಾರ್ಗಳಿಂದ ಕರ್ನಾಟಕಕ್ಕೆ ಲಾಭ” ಎಂದು ಹೇಳಿರುವುದು ಪೂರ್ಣ ಸುಳ್ಳು ಅಸಂಬದ್ಧ ಮತ್ತು ಜನರನ್ನು ದಾರಿ ತಪ್ಪಿಸುವ ಪ್ರಚಾರವಾಗಿದೆ. ಇತರೆ ರಾಜ್ಯಗಳಿಗೆ ನೀಡಿರುವ ಯೋಜನೆಗಳಲ್ಲಿ ಮುಂದುವರೆದ ಭಾಗವಾಗಿ ಕರ್ನಾಟಕವನ್ನು ತಲುಪುತ್ತಿರುವ ರೈಲು…
ಮೈಸೂರು: ತೊಳಹುಣಸೆ – ದಾವಣಗೆರೆ ವಿಭಾಗದ ಎಲ್ ಸಿ ಸಂಖ್ಯೆ 196 ರಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಹಾಗೂ ತೆಗೆದುಹಾಕಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ, ಕೆಳಕಂಡ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ಕೆಲವು ರೈಲು ಸೇವೆಗಳು ಭಾಗಶಃ ರದ್ದು ಹಾಗೂ ಕೆಲವು ರೈಲುಗಳನ್ನು ಮಾರ್ಗ ಬದಲಾವಣೆಗೊಳಿಸಗುತ್ತದೆ. ವಿವರಗಳು ಹೀಗಿವೆ: I. ರೈಲುಗಳ ರದ್ದುಪಡಿಕೆ ಕೆಳಕಂಡ ರೈಲುಗಳನ್ನು 17.02.2026ರಂದು ಸಂಪೂರ್ಣವಾಗಿ ರದ್ದುಪಡಿಸಲಾಗುತ್ತದೆ: ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು – ಸಿಂಧನೂರು ಎಕ್ಸ್ ಪ್ರೆಸ್, ರೈಲು ಸಂಖ್ಯೆ 56928 ಸಿಂಧನೂರು – ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್, ರೈಲು ಸಂಖ್ಯೆ 07396 ದಾವಣಗೆರೆ – ಬಳ್ಳಾರಿ ಜಂಕ್ಷನ್ ಡೆಮು, ರೈಲು ಸಂಖ್ಯೆ 07395 ಬಳ್ಳಾರಿ ಜಂಕ್ಷನ್ – ದಾವಣಗೆರೆ ಡೆಮು II. ರೈಲಿನ ಭಾಗಶಃ ರದ್ದುಪಡಿಕೆ ರೈಲು ಸಂಖ್ಯೆ 12726 ಧಾರವಾಡ – ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ 17.02.2026ರಂದು ಧಾರವಾಡ ಮತ್ತು ಚಿಕ್ಕಜಾಜೂರು ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಧಾರವಾಡದ…
ಒಂದೊಂದು ದೇವತೆಗಳೂ ಒಂದೊಂದು ರೀತಿಯಲ್ಲಿ ಪೂಜೆ ಮಾಡುತ್ತಾರೆ. ನಾವು ಯಾವುದನ್ನು ಬಯಸುತ್ತೇವೆಯೋ ಅದನ್ನು ಯಾವುದೇ ದೇವರನ್ನು ಪ್ರಾರ್ಥಿಸಿದರೆ, ನಮಗೆ ತಕ್ಷಣದ ಫಲಿತಾಂಶಗಳು ಸಿಗುತ್ತವೆ. ಆದರೆ ಒಬ್ಬ ದೇವರಿಗೆ ಐದು ಗುಣಗಳಿದ್ದರೆ ಆ ದೇವರನ್ನು ಪೂಜಿಸಿದಾಗ ಐದು ದೇವತೆಗಳನ್ನು ಪೂಜಿಸಿದ ಲಾಭವನ್ನು ಪಡೆಯಬಹುದು. ಈ ರೀತಿಯಾಗಿ, ಈ ಮಂತ್ರದ ಬಗ್ಗೆ ನಾವು ಪೋಸ್ಟ್ನಲ್ಲಿ ನೋಡಲಿದ್ದೇವೆ , ಇಂದು ಪಂಚಮುಖ ಆಂಜನೇಯರನ್ನು ಯಾವ ಮಂತ್ರವನ್ನು ಪೂಜಿಸಿದರೆ ಪ್ರಯೋಜನಗಳು ಸಿಗುತ್ತವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ಸಾಮಾನ್ಯವಾಗಿ ದೇವರ ಪೂಜೆಗೂ ಮಂತ್ರ ಪಠಣಕ್ಕೂ ವ್ಯತ್ಯಾಸವಿದೆ. ಮಂತ್ರವನ್ನು ಸರಿಯಾಗಿ ಪಠಿಸಿ ಪೂಜಿಸಿದರೆ ಆ ಮಂತ್ರದ ಲಾಭವನ್ನು ಬಹುಬೇಗ ಪಡೆಯಬಹುದು. ಅದರ ಆಧಾರದಲ್ಲಿ ಈ ಪೋಸ್ಟ್ ನಲ್ಲಿ ಪಂಚಮುಖ ಆಂಜನೇಯನ ಮಂತ್ರದ ಬಗ್ಗೆ…
ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಸಭೆ ಮತ್ತು ಸಮಾರಂಭಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುವ ಬಗ್ಗೆ ಅನುಸರಿಸಬೇಕಾದಂತ ಶಿಷ್ಟಾಚಾರದ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದೆ. ಆ ನಿಯಮಗಳ ಅನುಸಾರವಾಗಿಯೇ ಜನಪ್ರತಿನಿಧಿಗಳನ್ನು ಸರ್ಕಾರದ ಸಭೆ, ಸಮಾರಂಭಗಳಿಗೆ ಆಹ್ವಾನಿಸುವಂತೆ ಖಡಕ್ ಸೂಚನೆ ನೀಡಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದು, ಸರ್ಕಾರದ ಸಭೆ ಮತ್ತು ಸಮಾರಂಭಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುವ ಬಗ್ಗೆ ಅನುಸರಿಸಬೇಕಾದ ಶಿಷ್ಟಾಚಾರದ ಕುರಿತು ಸಮಗ್ರವಾದ ಸೂಚನೆಗಳನ್ನು ಈಗಾಗಲೇ ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 34 ಹೆಚ್ ಪಿಎ 2018, ದಿನಾಂಕ:16.04.2019ರಲ್ಲಿ ಸುತ್ತೋಲೆಯನ್ನು ಹೊರಡಿಸಲಾಗಿರುತ್ತದೆ ಎಂದಿದ್ದಾರೆ. ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಆಹಾನಿತರ ಹಾಜರಾಗುವಿಕೆಯನ್ನು ಖಚಿತಪಡಿಸಿಕೊಳ್ಳದೇ ಮುದ್ರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಆಹ್ವಾನಿತರ ಸಂಖ್ಯೆಯು ಹೆಚ್ಚಾಗುತ್ತಿದ್ದು ಶಿಷ್ಟಾಚಾರದನ್ವಯ ಆಸನ ವ್ಯವಸ್ಥೆಯನ್ನು ಏರ್ಪಡಿಸುವಲ್ಲಿ ಗೊಂದಲವಾಗುತ್ತಿರುವುದರಿಂದ ಸರ್ಕಾರಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಹಾಗೂ ಸರ್ಕಾರಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಸುಗಮವಾಗಿ ಮತ್ತು ಘನತೆಯಿಂದ ನಡೆಸಲು ಅನುವಾಗುವಂತೆ ದಿನಾಂಕ:16.04.2019ರ ಸುತ್ತೋಲೆಯನ್ನು ಸಮಗ್ರವಾಗಿ ಮಾರ್ಪಡಿಸಿ ದಿನಾಂಕ: 15.10.2025 ರಂದು ಸುತ್ತೋಲೆ ಸಂಖ್ಯೆ: ಸಿಆಸುಇ 39 ಹೆಚ್ಪಿಎ 2025…














