Subscribe to Updates
Get the latest creative news from FooBar about art, design and business.
Author: kannadanewsnow09
ಗದಗ: ಮಹಾ ಶಿವರಾತ್ರಿಯ ಈ ದಿನದಂದೇ ಗದಗದಲ್ಲಿ ಕಿಡಿಗೇಡಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಗದಗದಲ್ಲಿ ಶಿವಲಿಂಗ, ನಂದಿ ವಿಗ್ರಹವನ್ನು ಭಗ್ನಗೊಳಿಸಿ, ವಿರೂಪಗೊಳಿಸಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶಿಂಗಟಾಲೂರಲ್ಲಿ ಈ ಘಟನೆ ನಡೆದಿದೆ. ಶಿಂಗಟಾಲೂರು ಗ್ರಾಮದ ಹೊರ ವಲಯದಲ್ಲಿರುವಂತ ಶ್ರೀರಾಮೇಶ್ವರ ಹಾಗೂ ನಂದಿ ವಿಗ್ರಹವನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಭಗ್ನಗೊಳಿಸಿ, ಹೊಡೆದು ಹಾಕಿದ್ದಾರೆ. ಇಂದು ಮಹಾ ಶಿವರಾತ್ರಿಯ ದಿನವಾದ ಕಾರಣ ಪೂಜೆಗೆಂದು ಅರ್ಚಕರು ದೇವಾಲಯಕ್ಕೆ ತೆರಳಿದಂತ ಸಂದರ್ಭದಲ್ಲಿ ಕೃತ್ಯ ಬೆಳಕಿಗೆ ಬಂದಿದೆ. ನಿನ್ನೆಯಷ್ಟೇ ಮಹಾ ಶಿವರಾತ್ರಿ ಪ್ರಯುಕ್ತ ದೇವಾಲಯಕ್ಕೆ ಸುಣ್ಣ-ಬಣ್ಣ ಬಳಿಯಲಾಗಿತ್ತು. ಆದರೇ ಇಂದು ಬೆಳಗ್ಗೆ ಶಿವಲಿಂಗ, ನಂದಿ ವಿಗ್ರಹವನ್ನು ವಿರೂಪಗೊಳಿಸಿದ್ದರಿಂದ ಗ್ರಾಮದಲ್ಲಿ ಉದ್ವಿಗ್ನತೆಯ ವಾತಾವರಣ ಉಂಟಾಗಿದೆ. ಕಿಡಿಗೇಡಿಗಳ ಈ ದುಷ್ ಕೃತ್ಯವನ್ನು ಶಿಂಗಟಾಲೂರು ಗ್ರಾಮಸ್ಥರು ಖಂಡಿಸಿದ್ದಾರೆ. ಅಲ್ಲದೇ ಕಿಡಿಗೇಡಿ ಕೃತ್ಯ ಎಸಗಿದಂತ ದುಷ್ಕರ್ಮಿಗಳನ್ನು ಬಂಧಿಸುವಂತೆಯೂ ಒತ್ತಾಯಿಸಿದ್ದಾರೆ. https://kannadanewsnow.com/kannada/reserved-passengers-must-board-from-designated-station-or-lose-seat-raiways/
ನವದೆಹಲಿ: ಕಾಯ್ದಿರಿಸಿದ ಟಿಕೆಟ್ಗಳೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೆ ಕಠಿಣ ನಿಯಮಗಳನ್ನು ಪರಿಚಯಿಸಿದೆ. ಗೊತ್ತುಪಡಿಸಿದ ಬೋರ್ಡಿಂಗ್ ನಿಲ್ದಾಣದಿಂದ ಪ್ರಯಾಣಿಕರು ಹತ್ತದಿದ್ದರೆ, ಕಾಯ್ದಿರಿಸಿದ ಸೀಟನ್ನು ಕೆಲವೇ ನಿಮಿಷಗಳಲ್ಲಿ ಕಳೆದುಕೊಳ್ಳಬಹುದು. ಕಾಯ್ದಿರಿಸಿದ ಪ್ರಯಾಣಿಕರಿಗೆ ಟಿಕೆಟ್ ಪರೀಕ್ಷಕರು ಇನ್ನು ಮುಂದೆ ಮುಂದಿನ ನಿಲ್ದಾಣದವರೆಗೆ ಕಾಯುವುದಿಲ್ಲ. ಹೀಗಾಗಿ ಕಾಯ್ದಿರಿಸಿದ ಪ್ರಯಾಣಿಕರು ಗೊತ್ತುಪಡಿಸಿದ ನಿಲ್ದಾಣದಲ್ಲೇ ಹತ್ತಿ, ಇಲ್ಲವಾದಲ್ಲಿ ಸೀಟು ಕಳೆದುಕೊಳ್ಳುತ್ತೀರಿ ಎಂಬುದಾಗಿ ರೈಲ್ವೆ ಇಲಾಖೆ ಎಚ್ಚರಿಸಿದೆ. ಈ ಬಗ್ಗೆ ಕಠಿಣ ನಿಯಮ ಪರಿಚಯಿಸಿರುವಂತ ಭಾರತೀಯ ರೈಲ್ವೆ ಇಲಾಖೆಯು, ಈ ಮೊದಲು ಬೋರ್ಡಿಂಗ್ ನಿಲ್ದಾಣದಲ್ಲಿ ಪ್ರಯಾಣಿಕರು ಹತ್ತಲು ವಿಫಲರಾದರೆ, ಟಿಟಿಇ ಮುಂದಿನ ಎರಡು ನಿಲ್ದಾಣಗಳವರೆಗೆ ಸೀಟನ್ನು ಖಾಲಿ ಇಡುತ್ತಿದ್ದರು. ಅದನ್ನು ಬೇರೆಯವರಿಗೆ ನೀಡುತ್ತಿರಲಿಲ್ಲ. ಆದಾಗ್ಯೂ, ಟಿಟಿಇಗಳಿಗಾಗಿ ಹೊಸ ಎಚ್ಎಚ್ಟಿ (ಹ್ಯಾಂಡ್ ಹೆಲ್ಡ್ ಟರ್ಮಿನಲ್ಗಳು) ಟ್ಯಾಬ್ಲೆಟ್ಗಳನ್ನು ಪರಿಚಯಿಸುವುದರೊಂದಿಗೆ ಇದು ಬದಲಾಗಿದೆ. ಕಾಯ್ದಿರಿಸಿದ ಪ್ರಯಾಣಿಕರು ರೈಲನ್ನು ಹತ್ತದಿದ್ದರೆ, ಅದನ್ನು ತಕ್ಷಣವೇ ಟ್ಯಾಬ್ಲೆಟ್ನಲ್ಲಿ ದಾಖಲಿಸಲಾಗುತ್ತದೆ. ನಂತರ ಎಚ್ಎಚ್ಟಿ ವ್ಯವಸ್ಥೆಯು ತಕ್ಷಣವೇ ಕಾಯುವ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ಅಥವಾ ಆರ್ಎಸಿ (ರದ್ದತಿ ವಿರುದ್ಧ ಕಾಯ್ದಿರಿಸುವಿಕೆ) ಸ್ಥಿತಿಯಲ್ಲಿರುವವರಿಗೆ ಸೀಟನ್ನು ಹಂಚಿಕೆ ಮಾಡುತ್ತದೆ…
ಬೆಂಗಳೂರು: ಬಿಕ್ಲು ಶಿವ ಕೊಲೆ ಕೇಸಲ್ಲಿ ಬಂಧನಕ್ಕೆ ಒಳಗಾಗಿ ಸಿಐಟಿ ವಶದಲ್ಲಿರುವಂತ ಬಿಜೆಪಿ ಶಾಸಕ ಭೈರತಿ ಬಸವರಾಜ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ನೀಡಿದರು. ಈ ವೇಳೆ ಭೈರತಿ ಬಸವರಾಜ್ ಕುಟುಂಬಸ್ಥರಿಗೆ ಧೈರ್ಯವನ್ನು ತುಂಬಿದರು. ಇಂದು ಬೆಂಗಳೂರಿನ ಕೆ ಆರ್ ಪುರಂ ಶಾಸಕರು ಹಾಗೂ ಮಾಜಿ ಸಚಿವರಾದ ಬೈರತಿ ಬಸವರಾಜ್ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ್ ಕಾರಜೋಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಮ್ ಗೌಡ, ರಾಜ್ಯ ಕಾರ್ಯದರ್ಶಿಗಳಾದ ಶರಣು ತಲ್ಲಿಕೆರೆ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಎಸ್ ಹರೀಶ್, ಮಾಜಿ ಸಚಿವರಾದ ವರ್ತೂರು ಪ್ರಕಾಶ್, ಕೆ ಆರ್ ಪುರಂ ಅಧ್ಯಕ್ಷರಾದ ಮುನೇಗೌಡ. ಮುಖಂಡರಗಳಾದ ಸಚ್ಚಿದಾನಂದ ಮೂರ್ತಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ನವದೆಹಲಿ: ಕಳೆದ 4-5 ತಿಂಗಳುಗಳಿಂದ 8ನೇ ವೇತನ ಆಯೋಗದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ಸಿಪಿಸಿ ಅನುಷ್ಠಾನ ಮತ್ತು ವೇತನ ಹೆಚ್ಚಳಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಚರ್ಚೆಗಳ ನಡುವೆ, ಒಂದು ಆನ್ ಲೈನ್ ಹಗರಣ ಬೆಳಕಿಗೆ ಬಂದಿದೆ. ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಸೈಬರ್ ಸಂಸ್ಥೆ ಸೈಬರ್ ದೋಸ್ತ್ ಈ ಮಾಹಿತಿಯನ್ನು ಹಂಚಿಕೊಂಡಿದೆ. ಹಾಗಾದ್ರೇ ಏನಿದು ಸ್ಯಾಲರಿ ಕ್ಯಾಲ್ಕುಲೇಟರ್ ವಾಟ್ಸ್ ಆಪ್ ಸ್ಕ್ಯಾಮ್ ಅನ್ನೋ ಬಗ್ಗೆ ಮುಂದೆ ಓದಿ. ‘ಸಂಬಳ ಲೆಕ್ಕಾಚಾರ’ದ ವಂಚನೆ ಸಂಬಳ ಲೆಕ್ಕಾಚಾರವು ದೇಶದಲ್ಲಿ ಹೊರಹೊಮ್ಮಿರುವ ಹೊಸ ಸೈಬರ್ ವಂಚನೆಯಾಗಿದ್ದು, ಈ ಹಗರಣದ ಮೂಲಕ ಜನರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡಲಾಗುತ್ತಿದೆ. ವರದಿಗಳ ಪ್ರಕಾರ, ಈ ಹಗರಣವು ನಿರ್ದಿಷ್ಟವಾಗಿ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡಿದೆ. 8ನೇ ವೇತನ ಆಯೋಗದ ಸುತ್ತಲಿನ ಗದ್ದಲದ ಲಾಭವನ್ನು ಪಡೆದುಕೊಂಡು, ಸೈಬರ್ ಅಪರಾಧಿಗಳು ವೇತನ ಹೆಚ್ಚಳದ ಬಗ್ಗೆ ವಿವರಗಳನ್ನು ನೀಡುವ ಮೂಲಕ ಸರ್ಕಾರಿ ನೌಕರರಿಗೆ ಆಮಿಷ…
ಶಿವಮೊಗ್ಗ: ಆ ಸಾರಿಗೆ ಬಸ್ಸಿಗೆ ಹತ್ತಿದ್ದಂತ ಪ್ರಯಾಣಿಕರೊಬ್ಬರು ಇಳಿಯುವಾಗ ಒಡವೆ, ಹಣವಿದ್ದಂತ ಬ್ಯಾಗ್ ಅನ್ನೇ ಬಿಟ್ಟು ಹೋಗಿದ್ದರು. ಆದರೇ ನಿರ್ವಾಹಕ ಅದನ್ನು ಜೋಪಾನ ಮಾಡಿ, ಬ್ಯಾಗ್ ಬಿಟ್ಟು ಹೋಗಿದ್ದವರಿಗೆ ಮಾಹಿತಿ ನೀಡಿ, ಹಿಂದಿರುಗಿಸಿದ್ದರು. ಅವರ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆಯೇ ವ್ಯಕ್ತವಾಗಿದೆ. ಅವರ ಕಾರ್ಯವನ್ನು ನಿಮಗವು ಮೆಚ್ಚಿ, ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದೆ. ಹೌದು.. ಫೆಬ್ರವರಿ.13, 2026ರ ಶುಕ್ರವಾರದಂದು ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದಂತ ಬಸ್ಸನ್ನು ಚಿಕ್ಕಮಗಳೂರಿನ ಪ್ರದೀಪ್ ಎಂಬುವರು ಏರಿದ್ದರು. ಅವರೊಂದಿಗೆ ಬಂಗಾರ, ನಗದು ಇದ್ದಂತ ಬ್ಯಾಗ್ ಕೂಡ ತಂದಿದ್ದರು. ಆದರೇ ಅವರು ಇಳಿಯುವಂತ ಸ್ಥಳ ಬಂದಾಗ ಬ್ಯಾಗ್ ಬಿಟ್ಟು, ಇಳಿದು ಹೋಗಿದ್ದರು. ತಮ್ಮ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬ್ಯಾಗ್ ಬಿಟ್ಟು ಹೋಗಿದ್ದನ್ನು ಗಮನಿಸಿದಂತ ನಿರ್ವಾಹಕ ಮಂಜುನಾಥ್, ಚಾಲಕ ಮೋಹನ್ ಅವರು ಪರಿಶೀಲಿಸಿದಾಗ, ಅದರಲ್ಲಿ 60 ಗ್ರಾಂ ಬಂಗಾರ ಹಾಗೂ 50,000 ನಗದು ಪತ್ತೆಯಾಗಿತ್ತು. ಅಲ್ಲದೇ ಅದರಲ್ಲಿ ಆಧಾರ್ ಕಾರ್ಡ್ ಕೂಡ ಇತ್ತು. ಅದನ್ನು ಪರಿಶೀಲಿಸಿದಾಗ ಪ್ರದೀಪ್ ಎಂಬುವರದ್ದು ಎಂಬುದಾಗಿ ಮಾಹಿತಿ ಸಿಕ್ಕಿತ್ತು. ಆಧಾರ್…
ನವದೆಹಲಿ: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ 12 ಜಿಲ್ಲೆಗಳಲ್ಲಿ ರೈಲ್ವೆ ಜಾಲ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಕರ್ನಾಟಕ, ಹರಿಯಾಣ, ಮಹಾರಾಷ್ಟ್ರ, ದೆಹಲಿಯಲ್ಲಿ ರೈಲ್ವೆ ಜಾಲ ವಿಸ್ತರಣೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. 18,509 ಕೋಟಿ ವೆಚ್ಚದಲ್ಲಿ ಪೂರ್ಣಗೊಳ್ಳಲಿರುವಂತ ಯೋಜನೆಗಳು ಇವುಗಳಾಗಿವೆ. ಹೊಸದಾಗಿ 389 ಕಿಲೋಮೀಟರ್ ರೈಲ್ವೆ ಹಳಿ ಸೇರ್ಪಡೆಗೊಂಡಿದೆ. ಕಸಾರ-ಮನ್ಮಾಡ್, ದೆಹಲಿ-ಅಬಾಲಾ ಯೋಜನೆ, ಬಳ್ಳಾರಿ-ಹೊಸಪೇಟೆ 3 ಮತ್ತು 4ನೇ ರೈಲ್ವೆ ಲೈನ್ ನಿರ್ಮಾಣ ಯೋಜನೆಗಳು ಸೇರಿದ್ದಾವೆ. https://twitter.com/narendramodi/status/2022714583589249098 ಸಂಪುಟ ನಿರ್ಧಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ವಾಗತ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ-ಹೊಸಪೇಟೆ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ 167ರ ಗುಡೇಬೆಳ್ಳೂರು-ಮಹಬೂಬ್ನಗರ ಮಾರ್ಗವನ್ನು ಮೇಲ್ದರ್ಜೆಗೇರಿಸಿ ಚತುಷ್ಪಥಗೊಳಿಸಲು ಅನುಮೋದನೆ ನೀಡಿರುವುದನ್ನು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ವಾಗತಿಸಿದ್ದಾರೆ. ಈ ಬಗ್ಗೆ…
ಶಿವಮೊಗ್ಗ: ಜಿಲ್ಲೆಯ ವಿಶೇಷ ಭೂಸ್ವಾಧೀನ ಅಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ. ಶಿವಮೊಗ್ಗ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿರುವಂತ ಸಿದ್ದಲಿಂಗರೆಡ್ಡಿ ಅವರು 40 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗದ ನಗರದ ನೆಹರು ಕ್ರೀಡಾಂಗಣದ ಬಳಿಯಲ್ಲಿ 40 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ರೆಡ್ ಹ್ಯಾಂಡ್ ಹಿಡಿದಿದ್ದಾರೆ. ಕಾರಿನ ಬಾಡಿಗೆ ಬಿಲ್ ಬಿಡುಗಡೆ ಮಾಡೋದಕ್ಕೆ ಮಾಲೀಕ ಕೇಶವಮೂರ್ತಿ ಬಳಿ 40 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸಿಬ್ಬಂದಿ ಮೂಲಕ ಲಂಚ ಪಡೆಯುವಾಗ ವಿಶೇಷ ಭೂಸ್ವಾಧೀನ ಅಧಿಕಾರಿ ಸಿದ್ದಲಿಂಗರೆಡ್ಡಿ ಹಾಗೂ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. https://kannadanewsnow.com/kannada/union-cabinet-approves-upgradation-of-bellary-hospet-3rd-4th-railway-line-nh-167-gudebellur-mahbubnagar-route/ https://kannadanewsnow.com/kannada/pay-for-police-barricade-state-government-billed-to-family-of-deceased-p-ramaiah-kuwj-condemns/
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ-ಹೊಸಪೇಟೆ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ 167ರ ಗುಡೇಬೆಳ್ಳೂರು-ಮಹಬೂಬ್ನಗರ ಮಾರ್ಗವನ್ನು ಮೇಲ್ದರ್ಜೆಗೇರಿಸಿ ಚತುಷ್ಪಥಗೊಳಿಸಲು ಅನುಮೋದನೆ ನೀಡಿರುವುದನ್ನು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ವಾಗತಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಕೇಂದ್ರ ಸಚಿವರು, ಇವೆರೆಡೂ ಅನುಮೋದನೆಗಳಿಂದ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಅನುಕೂಲ ಆಗುತ್ತದೆ ಎಂದು ತಿಳಿಸಿದ್ದಾರೆ. ಬಳ್ಳಾರಿ-ಹೊಸಪೇಟೆ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆಯು ಕರ್ನಾಟಕದ ಸರಕು ಸಾಗಣೆ ಮತ್ತು ಜನ ಸಂಚಾರದ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ದೃಢ ನಿರ್ಧಾರವಾಗಿದೆ. ಇದರ ಭಾಗವಾಗಿ 65 ಕಿ.ಮೀ. ಉದ್ದದ ಈ ರೈಲು ಮಾರ್ಗದ ವಿಸ್ತರಣೆಯು ಗಣಿಗಾರಿಕೆ, ಉಕ್ಕು ಉತ್ಪಾದನೆ ಹಾಗೂ ಕೈಗಾರಿಕೆಗಳ ಪೂರಕ ವ್ಯವಸ್ಥೆ ವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಎಂದಿದ್ದಾರೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ…
ಶಿವಮೊಗ್ಗ: ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಂತ ಮಾತುಗಳು ವೈರಲ್ ಆದ ಬೆನ್ನಲ್ಲೇ, ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರು ವಿಷಾದ ವ್ಯಕ್ತ ಪಡಿಸಿದ್ದಾರೆ. ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ದಿನಾಂಕ 31/1/26 ರಂದು ಹೊನ್ನಾವರ ತಾಲೂಕಿನಲ್ಲಿ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ನೆಡದ ನನ್ನ ಮಾತು ಯಾವುದೇ ಸಮುದಾಯವನ್ನು ಅವಹೇಳನ ಮಾಡಲು ಆಡಿದ ಮಾತು ಆಗಿರುವುದಿಲ್ಲ. ಒಂದು ದೇವಸ್ಥಾನದ ಸಭಾ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ ಸಂದರ್ಭದಲ್ಲಿ ನಾನು ಕಟ್ಟಿದ ದೇವಸ್ಥಾನದಲ್ಲಿ ಕೆಲವು ವ್ಯಕ್ತಿಗಳಿಂದ ಆದ ನೋವನ್ನು ನಮ್ಮ ಅಡು ಭಾಷೆಯಲ್ಲಿ ವ್ಯಕ್ತಪಡಿಸಿದೆ ಎಂಬುದಾಗಿ ಹೇಳಿದ್ದಾರೆ. ನಾನು ಆಡಿದಂತ ಮಾತಿನಿಂದ ಯಾವುದೇ ಸಮುದಾಯಕ್ಕೆ ನೋವು ಆಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ವಿಶೇಷವಾಗಿ ಬ್ರಾಹ್ಮಣ ಸಮುದಾಯದ ಮೇಲೆ ನನಗೆ ಮೊದಲಿನಿಂದಲೂ ಅಪಾರವಾದ ಗೌರವ ಇದೆ. ಯಾರು ಸಹ ಅನ್ಯತಾ ಭಾವಿಸಬಾರದು ಎಂಬುದಾಗಿ ವಿನಂತಿಸಿದ್ದಾರೆ. ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸಿಗಂದೂರು ಧರ್ಮದರ್ಶಿ ರಾಮಪ್ಪ ವಿರುದ್ಧ ಪೊಲೀಸರಿಗೆ ದೂರು ಮತ್ತೊಂದೆಡೆ…
ಶಿವಮೊಗ್ಗ: ಬ್ರಾಹ್ಮಣರ ಸಮುದಾಯ ಕುರಿತಂತೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದಂತ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರ ವಿರುದ್ಧ ಸಾಗರದ ಸಹಾಯಕ ಉಪ ಪೊಲೀಸ್ ಅಧೀಕ್ಷಕರಿಗೆ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ ಪರಿಷತ್ ದೂರು ನೀಡಿದೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಸಹಾಯಕ ಉಪ ಪೊಲೀಸ್ ಅಧೀಕ್ಷಕರ ಕಚೇರಿಗೆ ತೆರಳಿದಂತ ಸಾಗರದ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ ಪರಿಷತ್ ನ ಅಧ್ಯಕ್ಷರಾದಂತ ರಾಜೇಂದ್ರ ಪ್ರಸಾದ್ ಹಾಗೂ ಸಮುದಾಯದ ಮುಖಂಡರು ತೆರಳಿ ಸಿಗಂದೂರು ಧರ್ಮದರ್ಶಿ ರಾಮಪ್ಪ ವಿರುದ್ಧ ದೂರು ನೀಡಿದ್ದಾರೆ. ಸಾಗರದ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ ಪರಿಷತ್ ನೀಡಿರುವಂತ ದೂರಿನಲ್ಲಿ, ಹೊನ್ನಾವರ ತಾಲ್ಲೂಕು ಮೋಡದ ಶ್ರೀ ರಾಮ ಮಂದಿರ ಪ್ರತಿಷ್ಠಾಪನಾ ರಜತ ಮಹೋತ್ಸವದ ಕಾರ್ಯಕ್ರಮವನ್ನು ಶ್ರೀ ರಾಮ ಮಂದಿರ ಚಾರಿಟೇಬಲ್ ಟ್ರಸ್ಟ್, ಮೊಳ್ಕೊಡ ಇವರು ದಿನಾಂಕ 29-01-2026 ರಿಂದ 31-01-2026 ರವರೆಗೆ ಆಯೋಜಿಸಿದ್ದು, ಸದರಿ ಕಾರ್ಯಕ್ರಮದ ಭಾಗವಾದ ದಿನಾಂಕ 31-01-2026ರ ಶ್ರೀ ಸೀತಾರಾಮ ಕಲ್ಯಾಣೋತ್ಸವದ ಸಭಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆರೋಪಿಯು…














