Author: kannadanewsnow09

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರ ಆಟದ ಮೈದಾನದಲ್ಲಿ ನಿನ್ನೆ ಮತ್ತು ಇಂದು 2 ದಿನಗಳ ಕಾಲ ಏರ್ಪಡಿಸಿದ್ದ “ಬೃಹತ್ ಇ-ಖಾತಾ ಮೇಳ” ಕಾರ್ಯಕ್ರಮದಲ್ಲಿ ಸುಮಾರು 4,300 ಜನರು ಪಾಲ್ಗೊಂಡಿದ್ದರು. ಬ್ಯಾಟರಾಯಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 7 ವಾರ್ಡ್ ಗಳ ಜೊತೆಗೆ ಯಲಹಂಕ ವಿಧಾನಸಭಾ ಕ್ಷೇತ್ರ ಹಾಗೂ ಇತರೆ ವಲಯಗಳಿಂದಲೂ ಖಾತಾ ಮೇಳಕ್ಕೆ ಆಗಮಿಸಿ ಇ-ಖಾತಾಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಎರಡು ದಿನ ನಡೆದ ಇ-ಖಾತಾ ಮೇಳದಲ್ಲಿ ಒಟ್ಟು 4,300 ಜನರಿಗೆ ಟೋಕನ್ ನೀಲಡಾಗಿದೆ. ಈ ಪೈಕಿ 1,694 ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗಿದ್ದು, 1,259 ಅರ್ಜಿಗಳನ್ನು ಅನುಮೋದಿಸಿ ಸ್ಥಳದಲ್ಲಿಯೇ ಅಂತಿಮ ಇ-ಖಾತಾ ನೀಡಲಾಗಿದೆ. ಬೃಹತ್ ಇ-ಖಾತಾ ಮೇಳದಲ್ಲಿ ಬಂದಿರುವಂತಹ 1,694 ಅರ್ಜಿಗಳ ಪೈಕಿ 435 ಅರ್ಜಿಗಳು ಬೇರೆ ವಲಯಗಳಿಂದ ಬಂದಿರುವ ಅರ್ಜಿಗಳಾಗಿವೆ. ಸದರಿ ಅರ್ಜಿಗಳನ್ನು ಪರಿಶೀಲಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಂಬಂಧಪಟ್ಟ ಆಯಾ ವಲಗಳಿಗೆ ವರ್ಗಾಯಿಸಲಾಗಿರುತ್ತದೆ. ಯಲಹಂಕ ವಲಯ ವ್ಯಾಪ್ತಿಯಲ್ಲಿ ನಾಗರಿಕರು,…

Read More

ಹಾಸನ: ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ. ಹೃದಯಾಘಾತದಿಂದ ಸತ್ಯನಾರಾಯಣರಾವ್(63) ಎಂಬುವರು ಸಾವನ್ನಪ್ಪಿದ್ದಾರೆ. ಆಟೋ ಚಾಲನೆ ವೇಳೆಯಲ್ಲೇ ಸತ್ಯನಾರಾಯಣರಾವ್ ಗೆ ಹೃದಯಾಘಾತವಾಗಿದ್ದು, ರಸ್ತೆಯ ಪಕ್ಕದಲ್ಲಿ ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಹೀಗಾಗಿ ಇಂದು ಒಂದೇ ದಿನ ನಾಲ್ವರು ಹೃದಯಾಘಾತಕ್ಕೆ ಬಲಿಯಾದಂತೆ ಆಗಿದ್ದು, ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಹಾಸನಾಂಬ ದೇಗುಲದ ಹಿಂಭಾಗದ ರಂಗೋಲಿ ಹಳ್ಳ ಬಡಾವಣೆಯ ನಿವಾಸಿ ಸತ್ಯನಾರಾಯಣರಾವ್ ಎಂಬುವರಿಗೆ ಆಟೋ ಚಲಾಯಿಸುತ್ತಿದ್ದಂತ ವೇಳೆಯಲ್ಲೇ ಹಾರ್ಟ್ ಅಟ್ಯಾಕ್ ಆಗಿದೆ. ಹೀಗಾಗಿ ರಸ್ತೆಯಲ್ಲೇ ಆಟೋ ಚಾಲಕ ಸತ್ಯನಾರಾಯಣರಾವ್ ಬಿದ್ದಿದ್ದಾರೆ. ಅವರನ್ನು ದಾರಿಹೋಕರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತ ವೇಳೆಯಲ್ಲೇ ಕೊನೆಯುಸಿರು ಎಳೆದಿದ್ದಾರೆ. ಹಾಸನದಲ್ಲಿ ಹೃದಯಾಘಾತದಿಂದ ಮರಣ ಮೃದಂಗ ಮುಂದುವರೆದಿದ್ದು ಕಳೆದ 40 ದಿನಗಳಲ್ಲಿ ಇದುವರೆಗೂ 21 ಜನರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಇದೀಗ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮಹಿಳೆ ಒಬ್ಬರು ಮನೆಯಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಹೌದು ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆಪಿ ನಗರದ ಲೇಪಾಕ್ಷಿ (50) ಎನ್ನುವವರು ಬೆಳಿಗ್ಗೆ…

Read More

ಬೆಂಗಳೂರು: ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.1ರಂದು ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಆ ಮೂಲಕ ಮೂರು ದಶಕಗಳ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಕನಸು ನನಸಾಗಲಿದೆ. ಗ್ರಾಮೀಣ ಪತ್ರಕರ್ತರಿಗೂ ಉಚಿತವಾಗಿ ಬಸ್ ಪಾಸ್ ನೀಡಬೇಕು ಎನ್ನುವ ನಿಟ್ಟಿನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಸತತ ನಡೆಸಿದ ಹೋರಾಟದ ಲವಾಗಿ ಈ ಯೋಜನೆ ಜಾರಿಗೆ ಬರುತ್ತಿದೆ. ದಾವಣಗೆರೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಬಸ್ ಪಾಸ್ ನೀಡಬೇಕೆಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿಗಳ ಮುಂದೆ ಹಕ್ಕೋತ್ತಾಯ ಮಂಡಿಸಿದ್ದರು. ವೇದಿಕೆಯಲ್ಲಿಯೇ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಸಿಎಂ ಮನವೊಲಿಕೆ ಮಾಡಿದರು. ಕೂಡಲೇ ಅದಕ್ಕೆ ಸ್ಪಂಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಉಚಿತ…

Read More

ಬೆಂಗಳೂರು: ಯುಜಿಸಿಇಟಿ- 25ರ ಅರ್ಜಿಗಳಲ್ಲಿನ ತಪ್ಪುಗಳನ್ನು ಆನ್ ಲೈನ್ ಮೂಲಕ ಸರಿಪಡಿಸಿಕೊಳ್ಳಲು ಜುಲೈ 1ರಿಂದ 4ರವರೆಗೆ ಅವಕಾಶ ನೀಡಿದ್ದು, ಅಗತ್ಯ ಇರುವವರು ಮಾತ್ರ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮನವಿ ಮಾಡಿದ್ದಾರೆ. ಆನ್ ಲೈನ್ ತಿದ್ದುಪಡಿಗೆ ಅವಕಾಶ ನೀಡಿರುವ ಕಾರಣ ಜುಲೈ 2ರಿಂದ 4ರವರೆಗೆ ಕೆಇಎ ಕಚೇರಿಯಲ್ಲಿ ನಡೆಸಲು ಉದ್ದೇಶಿಸಿದ್ದ ಆಫ್ ಲೈನ್ ದಾಖಲೆ ಪರಿಶೀಲನೆಯನ್ನು ರದ್ದುಪಡಿಸಲಾಗಿದೆ. ಹೀಗಾಗಿ ಸ್ಲಾಟ್ ಬುಕ್ ಮಾಡಿಕೊಂಡಿರುವವರು ಕೂಡ ಕೆಇಎ ಕಚೇರಿಗೆ ಬರುವ ಅಗತ್ಯ ಇಲ್ಲ. ಅವರು ಕೂಡ ಆನ್ ಲೈನ್ ನಲ್ಲೇ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವೆರಿಫಿಕೇಷನ್ ಸ್ಲಿಪ್ ನಲ್ಲಿ ತಮ್ಮ ಕ್ಲೇಮ್ ಗಳು ಸರಿಯಾಗಿದ್ದರೆ ಅಂತಹವರು ಪುನಃ ಲಾಗಿನ್ ಆಗುವ ಅಗತ್ಯ ಇರುವುದಿಲ್ಲ. ಯಾರಿಗೆ ತಿದ್ದುಪಡಿ ಅನಿವಾರ್ಯ ಇದೆಯೊ ಅಂತಹವರು ಮಾತ್ರ ಮಾಡಿಕೊಳ್ಳಬೇಕು. ಒಮ್ಮೆ ನೋಡೋಣ ಎಂದು ತೆರೆದು, ನಂತರ ಎಡವಟ್ಟು ಮಾಡಿಕೊಳ್ಳುವುದು ಬೇಡ ಎಂದು ಅವರು ಸಲಹೆ ನೀಡಿದ್ದಾರೆ. ತಿದ್ದುಪಡಿ…

Read More

ಹಾಸನ: ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಮುಂದುವರೆದಿದೆ. ಇದೀಗ ಬಂದ ಮಾಹಿತಿಯಂತೆ ಹಾಸನಾಂಬೆ ದೇವಾಲಯದ ಹಿಂಭಾಗದಲ್ಲಿಯೇ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಮುಂದುವರೆದಿವೆ. ಇದೀಗ ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ. ಹೃದಯಾಘಾತದಿಂದ ಸತ್ಯನಾರಾಯಣರಾವ್(63) ಎಂಬುವರು ಸಾವನ್ನಪ್ಪಿದ್ದಾರೆ. ಹಾಸನಾಂಬ ದೇಗುಲದ ಹಿಂಭಾಗದಲ್ಲಿ ಇಂದು ಈ ಘಟನೆ ನಡೆದಿದೆ. ಹಾಸನ ನಗರದ ರಂಗೋಲಿ ಹಳ್ಳ ಬಡಾವಣೆಯ ನಿವಾಸಿ ಸತ್ಯನಾರಾಯಣ ಆಗಿದ್ದಾರೆ. ಇಂದು ಒಂದೇ ದಿನ ಹಾಸನ ಜಿಲ್ಲೆಯಲ್ಲಿ ನಾಲ್ವರು ಹೃದಯಾಘಾತಕ್ಕೆ ಬಲಿಯಾದಂತೆ ಆಗಿದೆ. ಹೀಗಾಗಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. https://kannadanewsnow.com/kannada/big-news-another-victim-of-micro-finance-harassment-in-the-state-a-person-commits-suicide-after-making-a-selfie-video/ https://kannadanewsnow.com/kannada/telangana-factory-blast/

Read More

ಶನಿಯ ಸ್ಥಾನ ಪಲ್ಲಟದಿಂದ ವೃಷಭ, ತುಲಾ ಹಾಗೂ ಮಕರ ರಾಶಿಯವರಿಗೆ ಶುಭ ಫಲ. ಕುಂಭ, ಮೀನ ಹಾಗೂ ಮೇಷ ರಾಶಿಯವರಿಗೆ (ಸಾಡೆ ಸಾತಿ) ಅಶುಭ ಫಲ ಸಿಂಹ ರಾಶಿಯವರಿಗೆ ಅಷ್ಟಮ ಶನಿ ಅಶುಭ ಫಲ ಕನ್ಯಾ ರಾಶಿಯವರಿಗೆ ಸಪ್ತಮ ಶನಿ ಅಶುಭ ಫಲ ವೃಶ್ಚಿಕ ರಾಶಿಯವರಿಗೆ ಪಂಚಮ ಶನಿ ಅಶುಭ ಫಲ ಧನು ರಾಶಿಯವರಿಗೆ ಅರ್ಧಾಷ್ಟಮ ಶನಿ ಅಶುಭ ಫಲ ಮಿಥುನ ಹಾಗೂ ಕರ್ಕ ರಾಶಿಯವರಿಗೆ ದಶಮ ಹಾಗೂ ನವಮ ಶನಿ ಮಿಶ್ರಫಲ. ‎ ಅಶುಭ ಫಲ ಹಾಗೂ ಮಿಶ್ರಫಲ ಹೊಂದಿದ ರಾಶಿಯವರು ಶನಿ ಪೀಡೆ ಪರಿಹಾರಕ್ಕಾಗಿ ವಿಶೇಷವಾಗಿ ಶನಿ ಶಾಂತಿಯನ್ನು ಮಾಡಿಸಬೇಕು, ಶನಿಮಹಾತ್ಮನ ಪೂಜೆ ನರಸಿಂಹ ದೇವರ ಪೂಜೆ ಆಂಜನೇಯ ಸ್ವಾಮಿಯ ಪೂಜೆ ಗಳನ್ನು ಮಾಡುವುದರಿಂದ ಶನಿ ಪ್ರಭಾವವು ತಗ್ಗುವುದು, ಶನಿ ಅಭಿಮಾನಿ ಧಾನ್ಯ ಆದಂತಹ ಕರಿ ಎಳ್ಳಿನ ದಾನ, ನೀಲಿ ಬಣ್ಣದ ಬಟ್ಟೆಯ ದಾನ, ಲೋಹದ ದಾನ, ವೃದ್ಧರ ಸೇವೆ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು…

Read More

ಉಪ್ಪಿಗೆ ಮಹಾಲಕ್ಷ್ಮಿ ಅಂಶವಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಗೆಯೇ, ಈ ಉಪ್ಪನ್ನು ನಮ್ಮ ಕೈಯಲ್ಲಿ ಇಟ್ಟುಕೊಂಡು, ನಾವು ಏನು ಪ್ರಾರ್ಥಿಸುತ್ತೇವೆ, ಅದು ಕೆಲಸ ಮಾಡುತ್ತದೆ ಎಂದು ನಮಗೆ ತಿಳಿದಿದೆ. ಕಲ್ಲು ಉಪ್ಪು ಕೆಟ್ಟ ಜನರ ಕಣ್ಣಿನ ಆಯಾಸವನ್ನು ಕಡಿಮೆ ಮಾಡುವ ವಸ್ತುವಾಗಿದೆ. ಈ ಪೋಸ್ಟ್ ಮೂಲಕ, ಈ ಕಲ್ಲುಉಪ್ಪಿನ ಬಗ್ಗೆ ನಮಗೆ ತಿಳಿದಿಲ್ಲದ ಕೆಲವು ಹೊಚ್ಚ ಹೊಸ ಆಧ್ಯಾತ್ಮಿಕ ಮಾಹಿತಿಯನ್ನು ನಾವು ತಿಳಿಯಲಿದ್ದೇವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ…

Read More

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, 2025-26ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕಕ್ಕೆ (ಜುಲೈ 1, 2025 ರಿಂದ ಸೆಪ್ಟೆಂಬರ್ 30, 2025 ರವರೆಗೆ) ಪಿಪಿಎಫ್, ಎಸ್‌ಎಸ್‌ವೈ, ಎನ್‌ಎಸ್‌ಸಿ ಮತ್ತು ಅಂಚೆ ಕಚೇರಿ ಠೇವಣಿಗಳು ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ಬದಲಾಗದೆ ಉಳಿಯುತ್ತವೆ ಎಂದು ಸರ್ಕಾರ ಸೋಮವಾರ, ಜೂನ್ 30, 2025 ರಂದು ಘೋಷಿಸಿತು. “ಜುಲೈ 1, 2025 ರಿಂದ ಸೆಪ್ಟೆಂಬರ್ 30, 2025 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದ ಎರಡನೇ ತ್ರೈಮಾಸಿಕಕ್ಕೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ (ಏಪ್ರಿಲ್ 1, 2025 ರಿಂದ ಜೂನ್ 30, 2025) ಅಧಿಸೂಚನೆ ಮಾಡಲಾದ ದರಗಳಿಂದ ಬದಲಾಗದೆ ಉಳಿಯುತ್ತವೆ ಎಂದು ಹಣಕಾಸು ಸಚಿವಾಲಯ ಸೋಮವಾರ ಅಧಿಸೂಚನೆಯಲ್ಲಿ ತಿಳಿಸಿದೆ. ಸಣ್ಣ ಉಳಿತಾಯ ಯೋಜನೆಗಳ ಇತ್ತೀಚಿನ ಬಡ್ಡಿದರಗಳು ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿಗಳು: ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ 8.2% ಬಡ್ಡಿದರವನ್ನು ಆಕರ್ಷಿಸುವುದು ಮುಂದುವರಿಯುತ್ತದೆ.…

Read More

ಬೆಂಗಳೂರು: ರಾಜ್ಯದ ಗ್ರಾಮೀಣ ಪತ್ರಕರ್ತರಿಗೂ ಸಾರಿಗೆ ಬಸ್ ಪಾಸ್ ವಿತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು. ಅದರಂತೆ ಅಧಿಕೃತ ಆದೇಶ ಮಾಡಿದ್ದರು. ಈಗ ಶೀಘ್ರವೇ ಗ್ರಾಮೀಣ ಪತ್ರಕರ್ತರಿಗೆ ಸಾರಿಗೆ ಬಸ್ ಪಾಸ್ ವಿತರಣೆ ಮಾಡಲಿದ್ದಾರೆ. ಅದಕ್ಕೂ ಮುನ್ನಾ ಗ್ರಾಮೀಣ ಪತ್ರಕರ್ತರ ಉಚಿತ ಸಾರಿಗೆ ಬಸ್ ಪಾಸ್ ಮಾದರಿ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗ್ರಾಮೀಣ ಭಾಗದ ಪತ್ರಕರ್ತರಿಗೆ ಅನುಕೂಲವಾಗಲೆಂದು ಬಸ್ ಪಾಸ್ ಜಾರಿ ಸಂಬಂಧ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮನವಿ ಹಿನ್ನೆಲೆಯಲ್ಲಿ, ಹೊಸ ವರ್ಷದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ತಿಳಿಸಿದ್ದರು. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಗ್ರಾಮೀಣ ಬಸ್ ಪಾಸ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸತತ ಸಭೆಗಳು ಆಗಿದ್ದು, ತಾಲೂಕು ಮಟ್ಟದಲ್ಲಿರುವ ಪತ್ರಕರ್ತರಿಗೂ ಈ…

Read More

ನವದೆಹಲಿ : ಭಾರತೀಯ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ, ಚಂದಾದಾರರ ಸಂಖ್ಯೆಯಲ್ಲಿ ವಿಶ್ವದ ಅತಿದೊಡ್ಡ ಸ್ಥಿರ ವೈರ್ ಲೆಸ್ ಪ್ರವೇಶ ಪೂರೈಕೆದಾರನಾಗುವ ಹಾದಿಯಲ್ಲಿದೆ ಎಂದು ವಿಶ್ಲೇಷಕರ ವರದಿಯೊಂದು ತಿಳಿಸಿದೆ. ಟೆಲಿಕಾಂ ನಿಯಂತ್ರಕ ಟ್ರಾಯ್ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ರಿಲಯನ್ಸ್ ಜಿಯೋ ಒಟ್ಟು 5 ಜಿಎಫ್‌ಡಬ್ಲ್ಯೂಎ ಚಂದಾದಾರರ ಸಂಖ್ಯೆ (ಪರವಾನಗಿ ಪಡೆಯದ ಬ್ಯಾಂಡ್ ರೇಡಿಯೋ ಸೇರಿದಂತೆ) ಮೇ ತಿಂಗಳಲ್ಲಿ 6.88 ಮಿಲಿಯನ್ ತಲುಪಿದ್ದರೆ, ಟಿ-ಮೊಬೈಲ್ ಮಾರ್ಚ‌ನಲ್ಲಿ 6.85 ಮಿಲಿಯನ್ ಚಂದಾದಾರರನ್ನು ಹೊಂದಿತ್ತು. ರಿಲಯನ್ಸ್ ಜಿಯೋ ಸುಮಾರು 1 ಮಿಲಿಯನ್ ಫಿಕ್ಸೆಡ್ ವೈರ್ಲೆಸ್ ಆಕ್ಸೆಸ್ (ಎಫ್‌ಡಬ್ಲ್ಯೂಎ) ಪರವಾನಗಿ ಪಡೆಯದ ಬ್ಯಾಂಡ್ ರೇಡಿಯೋ (ಯುಬಿಆರ್) ಚಂದಾದಾರರನ್ನು ಎಫ್ಟಿಟಿಎಕ್ಸ್ ವರ್ಗಕ್ಕೆ ಮರು ವರ್ಗೀಕರಿಸಿದೆ. ಇದರ ನಂತರ ಅದರ ನಿವ್ವಳ ಎಫ್‌ಡಬ್ಲ್ಯೂಎ ಚಂದಾದಾರರ ಸಂಖ್ಯೆ ಮೇ ತಿಂಗಳಲ್ಲಿ 5.9 ಮಿಲಿಯನ್ ಆಗಿದ್ದು, ಮಾಸಿಕ 0.74 ಮಿಲಿಯನ್ ಗ್ರಾಹಕರನ್ನು ಸೇರಿಸಲಾಗಿದೆ. ಟ್ರಾಯ್ ದತ್ತಾಂಶದ ಆಧಾರದ ಮೇಲೆ ವಿಶ್ಲೇಷಕರಾದ ಸಂಜೇಶ್ ಜೈನ್, ಮೋಹಿತ್ ಮಿಶ್ರಾ ಮತ್ತು ಅಪರಾಜಿತಾ ಚಕ್ರವರ್ತಿ…

Read More