Author: kannadanewsnow09

ಶಿವಮೊಗ್ಗ: ಸಂತೋಷ್ ಸದ್ಗುರು ಸಾಗರ ಸೇರಿದಂತೆ ಮಲೆನಾಡಿನ ಭಾಗದಲ್ಲಿ ಚಿರಪರಿಚಿತ ಹೆಸರು. ಈ ಹಿಂದೆ ಐಪಿಎಲ್ ಪಂದ್ಯಾವಳಿ ಆರಂಭಗೊಂಡ ಸಂದರ್ಭದಲ್ಲಿ ಆರ್ ಸಿ ಬಿ ಗೆಲುವಿಗಾಗಿ ಅಬಾಸಿಡರ್ ಕಾರಿನಲ್ಲಿ ಸುತ್ತಿ, ಬೆಂಬಲಿಸೋದಕ್ಕೆ ಅಭಿಮಾನಿಗಳಲ್ಲಿ ಹುರುಪು ತುಂಬಿದ್ದರು. ಇದೀಗ ಇಂದು ನಡೆಯುತ್ತಿರುವಂತ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ಹೋಟೆಲ್ ನಲ್ಲಿ ಉಚಿತವಾಗಿ ಟೀ ವಿತರಣೆ ಮಾಡುತ್ತಿದ್ದಾರೆ. ಹೌದು.. ಸಂತೋಷ್ ಸದ್ಗುರು ಅವರು ಸಾಗರ ನಗರದ ಕೃಷಿ ಇಲಾಖೆಯ ಮುಂಭಾಗದ ಅಗ್ರಹಾರ ಸರ್ಕಲ್ ನಲ್ಲಿರುವಂತ ತಮ್ಮ ಸದ್ಗುರು ಹೋಟೆಲ್ ನಲ್ಲಿ ಕಳೆದ ಎರಡು ಮೂರು ದಿನಗಳಿಂದ ಉಚಿತವಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ಟೀ ವಿತರಣೆ ಮಾಡುತ್ತಿದ್ದಾರೆ. ಆರ್ ಸಿ ಬಿ ಅಪ್ಪಟ ಅಭಿಮಾನಿಯಾಗಿರುವಂತ ಸಂತೋಷ್ ಸದ್ಗುರು, ಸಾಹಿತಿ, ನಟನೂ ಕೂಡ. ಕೆಲ ದಿನಗಳ ಹಿಂದಷ್ಟೇ ಮಲ್ನಾಡ್ ಯಾನ ಎನ್ನುವಂತ ಹಾಡೊಂದನ್ನು ಸ್ವತಹ ರಚಿಸಿ, ಚಿತ್ರೀಕರಿಸಿ ಬಿಡುಗಡೆ ಮಾಡಿದ್ದರು. ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಇದರ ಜೊತೆಗೆ…

Read More

ಶಿವಮೊಗ್ಗ: ಜಿಲ್ಲೆಯ ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ಗುಂಡಿನ ಸದ್ದು ಕೇಳಿ ಬಂದಿದೆ. 30 ಪ್ರಕರಣಗಳಲ್ಲಿ ಭಾಗಿಯಾಗಿದ್ದಂತ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಪೊಲೀಸರು 30 ಪ್ರಕರಣದಲ್ಲಿ ಬೇಕಿದ್ದಂತ ಆರೋಪಿಯು ಇರುವಂತ ಖಚಿತ ಸುಳಿವು ಸಿಕ್ಕಿತ್ತು. ಆನಂದಪುರ ಠಾಣೆಯ ಪಿಎಸ್ಐ ಯುವರಾಜ್, ಹೆಡ್ ಕಾನ್ಸ್ ಸ್ಟೇಬಲ್ ಅಶೋಕ್ ಸೇರಿದಂತೆ ತಂಡವು ಆರೋಪಿ ಶ್ಯಾಡೋ ಸಚಿನ್ ಎಂಬಾತನ ಬಂಧನಕ್ಕೆ ತೆರಳಿತ್ತು. ಈ ವೇಳೆಯಲ್ಲಿ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳೋದಕ್ಕೆ ಆರೋಪಿ ಶ್ಯಾಡೋ ಸಚಿನ್ ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ ಆನಂದಪುರ ಪಿಎಸ್ಐ ಯುವರಾಜ್ ಆರೋಪಿಯ ಕಾಲಿಗೆ ಗುಂಡೇಟು ನೀಡಿ, ಬಂಧಿಸಿದ್ದಾರೆ. ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವಂತ ಆರೋಪಿ ಶ್ಯಾಡೋ ಸಚಿನ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಮಚ್ಚಿನಿಂದ ಹಲ್ಲೆಗೊಳಗಾದಂತ ಹೆಡ್ ಕಾನ್ಸ್ ಸ್ಟೇಬಲ್ ಅಶೋಕ್ ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. https://kannadanewsnow.com/kannada/awareness-about-iodine-deficiency-through-the-aashirvaad-smart-india-program/ https://kannadanewsnow.com/kannada/big-news-action-will-be-taken-if-the-public-is-disturbed-during-the-ipl-celebration-in-bangalore-ipl-2025-final/

Read More

ಬೆಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಡೆವಲಪ್‌ಮೆಂಟ್‌ ಸಹಭಾಗಿತ್ವದಲ್ಲಿ ಐಟಿಸಿ ಯಶಸ್ವಿಯಾಗಿ ಆಶೀರ್ವಾದ್ ಸ್ಮಾರ್ಟ್ ಇಂಡಿಯಾ ಪ್ರೋಗ್ರಾಮ್ ಅನ್ನು ಮುಕ್ತಾಯಗೊಳಿಸಿದೆ. ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದ ಈ ಯೋಜನೆಯು ಅಯೋಡಿನ್ ಕೊರತೆ ಅಸ್ವಸ್ಥತೆಗಳ (ಐಡಿಡಿ) ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿನ 30 ಜಿಲ್ಲೆಗಳಲ್ಲಿ ಆರೋಗ್ಯಕರ ಆಹಾರ ಸೇವನೆ ಅಭ್ಯಾಸಗಳನ್ನು ಪ್ರೋತ್ಸಾಹಿಸುತ್ತಿದೆ. ಐಟಿಸಿ ಲಿಮಿಟೆಡ್‌ನ ನ್ಯೂಟ್ರಿಶನ್ ಸೈನ್ಸಸ್‌ ವಿಭಾಗದ ಮುಖ್ಯಸ್ಥೆ ಡಾ. ಅಗಾಥಾ ಬೆಟ್ಸಿ ಮಾತನಾಡಿ, ಕೇವಲ ಏಳು ತಿಂಗಳುಗಳಲ್ಲಿ, ಕಾರ್ಯಕ್ರಮವು ತನ್ನ ಆರಂಭಿಕ ಗುರಿಯನ್ನೂ ತಲುಪಿದ್ದು, 7.5 ಲಕ್ಷ ವ್ಯಕ್ತಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಪ್ರಮುಖವಾಗಿ ಗರ್ಭಿಣಿಯರು, ಹಾಲೂಡಿಸುವ ಮಹಿಳೆಯರು, ಹದಿಹರೆಯದ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳೂ ಸೇರಿದ್ದಾರೆ. ಇದಕ್ಕಾಗಿ ನಾವು ನವೀನ ಮತ್ತು ವಿಶಿಷ್ಟ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೆವು. ಅಯೋಡಿನ್ ಕೊರತೆ ಅಸ್ವಸ್ಥತೆಗಳು, ಅಯೋಡಿನ್‌ನ ಪ್ರಯೋಜನ, ಇತರ ಪ್ರಮುಖ ಸೂಕ್ಷ್ಮಪೋಷಕಾಂಶಗಳು, ಸಮಗ್ರ ಪೌಷ್ಠಿಕಾಂಶ ಹಾಗೂ ಆರೋಗ್ಯಕರ ಆಹಾರ ಸೇವನೆ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡು…

Read More

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಹಕಾರ ವಿಭಾಗದ ನೂತನ ರಾಜ್ಯಾಧ್ಯಕ್ಷರನ್ನಾಗಿ ಕಾಂಗ್ರೆಸ್ ಮುಖಂಡರಾದ ಧನರಾಜ್ ಎಸ್. ತಾಳಂಪಳ್ಳಿ ಅವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಧನರಾಜ್ ತಾಳಂಪಳ್ಳಿ ಅವರು ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಧನರಾಜ್ ತಾಳಂಪಳ್ಳಿ ಧನ್ಯವಾದ: ಕೆಪಿಸಿಸಿ ಸಹಕಾರ ವಿಭಾಗದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ಧನರಾಜ್ ಎಸ್. ತಾಳಂಪಳ್ಳಿ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಮತ್ತು ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯಾಧ್ಯಕ್ಷನ ಜವಾಬ್ದಾರಿಯನ್ನು ನೀಡಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಗೆ ಧನ್ಯವಾದ ಅರ್ಪಿಸಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದರಾದ…

Read More

ಮಂಡ್ಯ: ಜಿಲ್ಲೆಯಲ್ಲಿ ನಿರ್ಮಾಣ ಹಂತದ ಹೆಬ್ಬಾಗಿಲು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿ, ಮೂವರು ಗಾಯಗೊಂಡಿರುವಂತ ಘಟನೆ ನಡೆದಿದೆ.  ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ತಪಸ್ವೀರಾಯ ದೇಗುಲದ ಮುಂಭಾಗದಲ್ಲಿ ಹೆಬ್ಬಾಗಿಲು ನಿರ್ಮಿಸುವಂತ ಕಾರ್ಯ ನಡೆಯುತ್ತಿತ್ತು. ತಪಸ್ವೀರಾಯ ದೇಗುಲದ ಮುಂಭಾಗದಲ್ಲಿ ನಿರ್ಮಿಸುತ್ತಿದ್ದಂತ ಹೆಬ್ಬಾಗಿಲು ಕಮಾನು ಕಾಮಗಾರಿಯ ವೇಳೆ ದಿಢೀರ್ ಕುಸಿತಗೊಂಡಿದೆ. ಹೆಬ್ಬಾಗಿಲಿಗೆ ಎರಡು ಕಡೆ ನಿರ್ಮಿಸಿದ್ದಂತ ಫಿಲ್ಲರ್ ಮೇಲೆ ಕಬ್ಬಿಣ ಕಟ್ಟಿ ಕಾಂಕ್ರಿಟ್ ಹಾಕಲಾಗುತ್ತಿತ್ತು. ಈ ವೇಳೆ ಭಾರದಿಂದ ಏಕಏಕೆ ಕೆಲಸ ಮಾಡುತ್ತಿದ್ದಂತ ಕಾರ್ಮಿಕರ ಮೇಲೆ ಹೆಬ್ಬಾಗಿಲು ಕಮಾನು ಕುಸಿತಗೊಂಡಿದೆ. ಈ ಘಟನೆಯಲ್ಲಿ ಕಾರ್ಮಿಕ ಶರಣ(35) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ಗಾಯಗೊಂಡಿದ್ದು, ಅವರನ್ನು ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಗಿರೀಶ್ ರಾಜ್, ಮಂಡ್ಯ https://kannadanewsnow.com/kannada/paks-48-hour-attack-plan-ruined-india-in-just-8-hours-cds-anil-chauhan/ https://kannadanewsnow.com/kannada/big-news-action-will-be-taken-if-the-public-is-disturbed-during-the-ipl-celebration-in-bangalore-ipl-2025-final/

Read More

ನವದೆಹಲಿ: ಮಹಾರಾಷ್ಟ್ರದ ಪುಣೆಯಲ್ಲಿರುವ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ‘ಭವಿಷ್ಯದ ಯುದ್ಧಗಳು ಮತ್ತು ಯುದ್ಧ’ ಎಂಬ ಉಪನ್ಯಾಸದ ಸಂದರ್ಭದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ಮಿಲಿಟರಿ ಸಂಘರ್ಷಗಳ ವಿಕಸನಗೊಳ್ಳುತ್ತಿರುವ ಭೂದೃಶ್ಯದ ಕುರಿತು ಭಾಷಣ ಮಾಡಿದರು. ಭಾರತೀಯ ಸಶಸ್ತ್ರ ಪಡೆಗಳ ಇತ್ತೀಚಿನ ಕಾರ್ಯಾಚರಣೆಗಳು ಮತ್ತು ಆಧುನಿಕ ಯುದ್ಧದ ತಾತ್ವಿಕ ಆಧಾರಗಳ ಕುರಿತು ಅವರು ಒಳನೋಟಗಳನ್ನು ನೀಡಿದರು. ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿದ ಸಿಡಿಎಸ್, ಕಾರ್ಯಾಚರಣೆಯ ಸಮಯದಲ್ಲಿ ಉಂಟಾದ ನಷ್ಟಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಸಶಸ್ತ್ರ ಪಡೆಗಳ ನಿಲುವನ್ನು ಸ್ಪಷ್ಟಪಡಿಸಲು ಕ್ರಿಕೆಟ್ ರೂಪಕವನ್ನು ಬಳಸಿ, ಜನರಲ್ ಚೌಹಾಣ್, ‘ನಮ್ಮ ಕಡೆಯ ನಷ್ಟಗಳ ಬಗ್ಗೆ ನನ್ನನ್ನು ಕೇಳಿದಾಗ, ಇವು ಮುಖ್ಯವಲ್ಲ ಎಂದು ನಾನು ಹೇಳಿದೆ. ಫಲಿತಾಂಶಗಳು ನೀವು ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂಬುದು ಮುಖ್ಯ. ನಷ್ಟಗಳ ಬಗ್ಗೆ ಮಾತನಾಡುವುದು ತುಂಬಾ ಸರಿಯಲ್ಲ… ನೀವು ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಹೋಗುತ್ತೀರಿ ಎಂದು ಭಾವಿಸೋಣ, ಮತ್ತು ನೀವು ಇನ್ನಿಂಗ್ಸ್ ಸೋಲಿನಿಂದ ಗೆದ್ದರೆ, ಎಷ್ಟು ವಿಕೆಟ್‌ಗಳು, ಎಷ್ಟು…

Read More

ನವದೆಹಲಿ: ಭಾರತ ನಡೆಸಿದಂತ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಹಲವೆಡೆ ಭಾರೀ ಹಾನಿಯಾಗಿರುವುದು ಅಧಿಕೃತ ದಾಖಲೆಯಲ್ಲಿ ಬಹಿರಂಗಗೊಂಡಿದೆ.   ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಪಾಕಿಸ್ತಾನದಲ್ಲಿ ಹೆಚ್ಚಿನ ಗುರಿಗಳನ್ನು ಹೊಡೆದುರುಳಿಸಿತು. ನಮ್ಮ ಪಡೆಗಳು ಅಧಿಕೃತವಾಗಿ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನ ವಿನಾಶಕಾರಿ ಹೊಡೆತಗಳನ್ನು ನೀಡಿತು ಎಂದು ಪಾಕಿಸ್ತಾನದ ಅಧಿಕೃತ ದಾಖಲೆಯೊಂದು ಬಹಿರಂಗಪಡಿಸಿದೆ. https://twitter.com/AdityaRajKaul/status/1929811820467896641 ಪಾಕಿಸ್ತಾನದ ಆಂತರಿಕ ಮಿಲಿಟರಿ ಕಾರ್ಯಾಚರಣೆ ಬನ್ಯನ್ ಉನ್ ಮಾರ್ಸೂಸ್‌ಗೆ ಸಂಬಂಧಿಸಿದ ವರ್ಗೀಕೃತ ದಾಖಲೆಯು, ಭಾರತೀಯ ವಾಯುಪಡೆಯು ಕನಿಷ್ಠ ಏಳು ಹೆಚ್ಚುವರಿ ಗುರಿಗಳನ್ನು ಹೊಡೆದಿದೆ ಎಂದು ದೃಢಪಡಿಸುತ್ತದೆ, ಈ ಹಿಂದೆ ಭಾರತದ ಸ್ವಂತ ಬ್ರೀಫಿಂಗ್‌ಗಳಿಂದ ಹೊರಗುಳಿದಿತ್ತು. ಪಾಕಿಸ್ತಾನಿ ದಾಖಲೆಯಲ್ಲಿ ಸೇರಿಸಲಾದ ವಿವರವಾದ ನಕ್ಷೆಗಳ ಪ್ರಕಾರ, ಭಾರತೀಯ ದಾಳಿಗಳು ಪಾಕಿಸ್ತಾನದ ಹೃದಯಭಾಗಕ್ಕೆ ವಿಸ್ತರಿಸಿದವು – ಪೇಶಾವರ್, ಜಾಂಗ್, ಸಿಂಧ್‌ನ ಹೈದರಾಬಾದ್, ಪಂಜಾಬ್‌ನ ಗುಜರಾತ್, ಭವಾಲ್‌ನಗರ, ಅಟಾಕ್ ಮತ್ತು ಚೋರ್‌ನಂತಹ ಕಾರ್ಯತಂತ್ರದ ಸ್ಥಳಗಳನ್ನು ಗುರಿಯಾಗಿಸಿಕೊಂಡು. ಕಳೆದ ತಿಂಗಳು ವಾಯುದಾಳಿಯ ನಂತರ ಭಾರತೀಯ ವಾಯುಪಡೆ ಮತ್ತು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮಾಡಿದ ದಾಳಿಯ ನಂತರದ ಬಹಿರಂಗಪಡಿಸುವಿಕೆಗಳಲ್ಲಿ ಈ…

Read More

ಬೆಂಗಳೂರು: ಆಶೀರ್ವಾದ್‌ ಹ್ಯಾಪಿ ಟಮ್ಮಿ ವೇದಿಕೆಯು ವಿಶ್ವ ಜೀರ್ಣಕ್ರಿಯೆ ದಿನದ ಪ್ರಯುಕ್ತ ಜೀರ್ಣಕ್ರಿಯೆ ಆರೋಗ್ಯದ ಕುರಿತು ಸಮೀಕ್ಷೆ ನಡೆಸಿದ್ದು, ಶೇ.70ರಷ್ಟು ಜನರು ದೈನಂದಿನ ಆಹಾರದಲ್ಲಿ ಫೈಬರ್‌ ಕೊರತೆ ಎದುರಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಐಟಿಸಿ ಫುಡ್ಸ್ – ಸ್ಟೇಪಲ್ಸ್ ಅಂಡ್ ಅಡ್ಜಸೆನ್ಸೀಸ್ ಚೀಫ್ ಆಪರೇಟಿಂಗ್ ಆಫೀಸರ್ ಅನುಜ್ ರುಸ್ತಗಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಸಾಕಷ್ಟು ಜನರು ಸೂಕ್ತ ಆಹಾರವನ್ನೇ ಸೇವಿಸುತ್ತಿಲ್ಲ. ನಾವು ನಡೆಸಿದ ಆಶೀರ್ವಾದ್ ಹ್ಯಾಪಿ ಟಮ್ಮಿ ವೇದಿಕೆಯಡಿ 8 ಲಕ್ಷಕ್ಕಿಂತ ಹೆಚ್ಚಿನ ಜನರ ಸಮೀಕ್ಷೆ ನಡೆಸಿದ್ದೇವೆ. ಈ ವರದಿಯ ಪ್ರಕಾರ 1.27 ಲಕ್ಷಕ್ಕಿಂತ ಹೆಚ್ಚು ಜನರು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು, ಶೇ.70 ರಷ್ಟು ಜನರು ಸೇವಿಸುವ ಆಹಾರದಲ್ಲಿ ನಾರಿನಾಂಶವೇ ಇರುವುದಿಲ್ಲ. ಪ್ರಮುಖವಾಗಿ ಈ ಕೊರತೆಯು ಮಹಿಳೆಯರಲ್ಲಿ ಜಾಸ್ತಿಯಿದೆ ಎಂದಿದ್ದಾರೆ. ಶೇ. 74ರಷ್ಟು ಮಹಿಳೆಯರು ದೇಹಕ್ಕೆ ಬೇಕಾಗುವಷ್ಟು ನಾರಿನಂಶ ಸೇವಿಸುತ್ತಿಲ್ಲ. ಕಡಿಮೆ ನಾರಿನಂಶ ಸೇವಿಸುತ್ತಿರುವುದರಿಂದ ಮಲಬದ್ಧತೆಯಂತಹ ಸಾಮಾನ್ಯ ಜೀರ್ಣಕ್ರಿಯೆ ಸಮಸ್ಯೆ, ಬೊಜ್ಜು, ಟೈಪ್ 2 ಮಧುಮೇಹ ಮತ್ತು ಹೃದಯ…

Read More

ಶಿವಮೊಗ್ಗ: ಇಂದು ಐಪಿಎಲ್ ಫೈನಲ್ ಪಂದ್ಯಾವಳಿ ನಡೆಯುತ್ತಿದೆ. ಐಪಿಎಲ್ ಫೈನಲ್ ಗೆ ಲಗ್ಗೆಯಿಟ್ಟಿರುವಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕಪ್ ಗೆದ್ದು ಬರಲಿ ಎಂಬುದು ಎಲ್ಲರ ಕೋರಿಕೆ. ಇತ್ತ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಆರ್ ಸಿ ಬಿ ಪ್ರೇಮವನ್ನು ಹೊರ ಹಾಕಿದ್ದಾರೆ. ಸಾಗರದ ಗಾಂಧಿ ಮೈದಾನದಲ್ಲಿ RCB vs PBKS ನಡುವಿನ ಫೈನಲ್ ಪಂದ್ಯವನ್ನು ಅಭಿಮಾನಿಗಳು ಬೃಹತ್ ಸ್ಕ್ರೀನ್ ನಲ್ಲಿ ವೀಕ್ಷಿಸೋದಕ್ಕೆ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಇಂದು IPL-2025ರ ಫೈನಲ್ ಪಂದ್ಯ ನಡೆಯುತ್ತಿದೆ. ಆರ್ ಸಿ ಬಿ ವರ್ಸರ್ ಪಿಬಿಕೆಎಸ್ ನಡುವೆ ಕಪ್ ಗಾಗಿ ಹಾಣಾಹಣಿ ನಡೆಯಲಿದೆ. ಇಂತಹ ಪಂದ್ಯವನ್ನು ಇಂದು ಸಂಜೆ ಸಾಗರದ ಗಾಂಧಿ ಮೈದಾನ ದಲ್ಲಿ ಬೃಹತ್ ಎಲ್.ಇ.ಡಿ ವಾಲ್ ನಲ್ಲಿ ನೆರಪ್ರಸಾರದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ. ಇಂದು ಸಂಜೆ 7:00 ಗಂಟೆಗೆ ಸಾಗರದ ಗಾಂಧಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು…

Read More

ಬೆಂಗಳೂರು: ಕನ್ನಡ-ತಮಿಳು ಹೇಳಿಕೆಗಳ ವಿವಾದದ ನಡುವೆ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವಂತ ನಟ ಕಮಲ್ ಹಾಸನ್, ಹೈಕೋರ್ಟ್ ಮೂಲಕ ಕರ್ನಾಟಕದಲ್ಲಿ ತಮ್ಮ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಮನವಿ ಮಾಡಿದ್ದರು. ಇಂದು ಹೈಕೋರ್ಟ್ ನ್ಯಾಯಪೀಠವು ಅವರನ್ನು ತರಾಟೆಗೆ ತೆಗೆದುಕೊಂಡು ಮೊದಲು ಕನ್ನಡಿಗರ ಕ್ಷಮೆ ಕೇಳುವಂತೆ ಹೇಳಿತ್ತು. ಅಲ್ಲದೇ ನೀವೇನು ಇತಿಹಾಸಜ್ಞರಲ್ಲ ಭಾಷೆಯ ಬಗ್ಗೆ ಹೇಳುವುದಕ್ಕೆ ಎಂಬುದಾಗಿಯೂ ಚಾಟಿ ಬೀಸಿತ್ತು. ಈ ಎಲ್ಲಾ ಬೆಳವಣಿಗೆಯ ನಡುವೆ ಕರ್ನಾಟಕ ಹೈಕೋರ್ಟ್ ಗೆ ನಟ ಕಮಲ್ ಹಾಸನ್ ಪರ ವಕೀಲರು ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರವನ್ನು ಬಿಡುಗಡೆ ಮಾಡುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಕನ್ನಡಿಗರ ತೀವ್ರ ವಿರೋಧದ ಕಾರಣ ನಟ ಕಮಲ್ ಹಾಸನ್ ನಟಿಸಿದ್ದಂತ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗುವುದಕ್ಕೆ ಬ್ರೇಕ್ ಬಿದ್ದಂತೆ ಆಗಿದೆ.

Read More