Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation -EPFO) ತನ್ನ ಲಕ್ಷಾಂತರ ಸದಸ್ಯರಿಗೆ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಹೊಸ ನಿರ್ಧಾರದ ಪ್ರಕಾರ, ಈಗ ಇಪಿಎಫ್ಒ ಸದಸ್ಯರು ತಮ್ಮ ಕೆಲಸವನ್ನು ಬದಲಾಯಿಸಿದರೆ, ಅವರ ಪಿಎಫ್ ಮೊತ್ತವನ್ನು ಸ್ವಯಂಚಾಲಿತವಾಗಿ ಹೊಸ ಕಂಪನಿಗೆ ವರ್ಗಾಯಿಸಲಾಗುತ್ತದೆ. ಹೊಸ ಸೌಲಭ್ಯವನ್ನು ಪರಿಚಯಿಸಿದ ನಂತರ, ಹಳೆಯ ಕಂಪನಿಯಿಂದ ಹೊಸ ಕಂಪನಿಗೆ ಪಿಎಫ್ ಮೊತ್ತವನ್ನು ವರ್ಗಾಯಿಸಲು ನೌಕರರು ಫಾರ್ಮ್ -31 ಅನ್ನು ಭರ್ತಿ ಮಾಡಬೇಕಾಗಿಲ್ಲ. ಈ ಹಿಂದೆ, ಉದ್ಯೋಗ ಬದಲಾವಣೆಯ ಸಮಯದಲ್ಲಿ, ಪಿಎಫ್ ಖಾತೆದಾರರು ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಹೊಂದಿದ್ದರೂ ಅರ್ಜಿಗಳಿಗೆ ಸಂಬಂಧಿಸಿದ ಔಪಚಾರಿಕತೆಗಳನ್ನು ಪೂರ್ಣಗೊಳಿಸಬೇಕಾಗಿತ್ತು. ಇದರ ಅಡಿಯಲ್ಲಿ, ವಿಶೇಷ ಫಾರ್ಮ್ -31 ಅನ್ನು ಭರ್ತಿ ಮಾಡಿ ಸಲ್ಲಿಸಬೇಕಾಗಿತ್ತು. ಕೆಲವೇ ದಿನಗಳಲ್ಲಿ, ಹಣವನ್ನು ಹೊಸ ಕಂಪನಿಗೆ ವರ್ಗಾಯಿಸಲಾಯಿತು. ಹೊಸ ವ್ಯವಸ್ಥೆಯಡಿ, ಅನೇಕ ಔಪಚಾರಿಕತೆಗಳನ್ನು ಪೂರ್ಣಗೊಳಿಸುವುದರಿಂದ ಪರಿಹಾರ ಸಿಗುತ್ತದೆ. ಯಾವುದೇ ದೋಷಗಳಿಲ್ಲ ಉದ್ಯೋಗಿಯು ಉದ್ಯೋಗವನ್ನು ಬದಲಾಯಿಸಿದಾಗ, ಹೊಸ ಕಂಪನಿಯನ್ನು ಅವನ ಯುಎಎನ್ (ಪಿಎಫ್ ಖಾತೆ) ಗೆ…
ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ನಾಮಪತ್ರ ಸಲ್ಲಿಸಿ, ಚುನಾವಣಾ ಪ್ರಚಾರದಲ್ಲೂ ತೊಡಗಿದ್ದಾರೆ. ಈ ವೇಳೆಯಲ್ಲೇ ಮಾಜಿ ಸಂಸದ ವೀರಪ್ಪ ಮೊಯ್ಲಿ ಅವರು ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನನ್ನು ಕಾಂಗ್ರೆಸ್ ಹೈಕಮಾಂಡ್ ಲೋಕಸಭಾ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿತ್ತು. ಹೈಕಮಾಂಡಿಗೆ ಗೌರವ ಕೊಟ್ಟು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂದರು. ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ನನ್ನ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲಿಸುವಂತೆ ಮನವಿ ಮಾಡಿದರು. ನಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯಗೆ ಬೆಂಬಲ ಸೂಚಿಸುತ್ತಿದ್ದೇನೆ ಎಂಬುದಾಗಿ ಹೇಳುವ ಮೂಲಕ ರಾಜಕೀಯ ನಿವೃತ್ತಿಯನ್ನು ಚಿಕ್ಕಬಳ್ಳಾಪುರದ ಮಾಜಿ ಸಂಸದ ವೀರಪ್ಪ ಮೊಯ್ಲಿ ಘೋಷಣೆ ಮಾಡಿದರು. https://kannadanewsnow.com/kannada/breaking-sc-stays-hc-order-for-class-5-8-9-11-board-exams/ https://kannadanewsnow.com/kannada/how-to-change-name-address-date-of-birth-and-mobile-number-in-pan-card-heres-the-information/
ಗದಗ: ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಮಹಿಳೆಯರಿಗೆ, ಬಡವರಿಗೆ ಮನೆ, ಕುಡಿಯಲು ನೀರು, ಶೌಚಾಲಯ, ಉಜ್ವಲ ಗ್ಯಾಸ್, ಅಕ್ಕಿ ಸೇರಿದಂತೆ ಶಾಸ್ವತ ಗ್ಯಾರೆಂಟಿಗಳನ್ನು ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಇಂದು ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಸಾಪುರ, ರಾಮಗಿರಿ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು. ದೇಶ ಕಂಡ ದಿಟ್ಟ ಧಿಮಂತ ನಾಯಕ ನರೇಂದ್ರ ಮೋದಿಯವರು, ಅವರು ದೇಶದ ಎಲ್ಲರಿಗೂ ಶಾಸ್ವತ ಗ್ಯಾರೆಂಟಿಗಳನ್ನು ನೀಡಿದ್ದಾರೆ ಎಂದರು. ರಾಜ್ಯದಲ್ಲಿ ಪಿಎಂ ಅವಾಸ ಯೊಜನೆ ಅಡಿಯಲ್ಲಿ 8 ಲಕ್ಷ ಮನೆ, 12 ಲಕ್ಷ ಶೌಚಾಲಯ ಕೊಟ್ಟಿದ್ದಾರೆ. ಮನೆ ಮನೆಗೆ ನಳದ ಮೂಲಕ ನೀರು ನೀಡುತ್ತಿದ್ದಾರೆ. ಹಾವೆರಿ ಜಿಲ್ಲೆಯಲ್ಲಿ 1300 ಕೊಟಿ ರೂ. ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಜಾರಿಯಾಗುತ್ತಿದೆ. ಶಿರಹಟ್ಟಿ ಭಾಗದಲ್ಲಿಯೂ ಯೋಜನೆ ಅನಷ್ಠಾನವಾಗಲಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಸ್ವಲ್ಪ ವಿಳಂಬವಾಗಿದೆ. ಮಳೆಗಾಲಕ್ಕೆ ಯೋಜನೆ…
ನವದೆಹಲಿ: ವಿಶ್ವದ ಒಂದು ಭಾಗದಲ್ಲಿ ಸೋಮವಾರ (ಏಪ್ರಿಲ್ 8) ಸೂರ್ಯಗ್ರಹಣ ಸಂಭವಿಸಲಿದೆ. ಈ ಬಾರಿ ಗ್ರಹಣವು ಸಂಪೂರ್ಣ ಸೂರ್ಯಗ್ರಹಣವಾಗಿದೆ. ವಿಶ್ವಾದ್ಯಂತ ಸೂರ್ಯಗ್ರಹಣದ ಬಗ್ಗೆ ಸಾಕಷ್ಟು ಉತ್ಸಾಹವಿದೆ. ಸೂರ್ಯನೊಂದಿಗಿನ ಈ ಘಟನೆಯ ಬಗ್ಗೆ ಭಾರತದ ಜನರು ಸಹ ಉತ್ಸುಕರಾಗಿದ್ದಾರೆ. ಭಾರತ ಸೇರಿದಂತೆ ಏಷ್ಯಾದ ಜನರಿಗೆ ಸೂರ್ಯಗ್ರಹಣವನ್ನು ನೋಡಲು ಸಾಧ್ಯವಾಗದಿದ್ದರೂ, ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಖಗೋಳ ಘಟನೆಯನ್ನು ನೇರ ಪ್ರಸಾರ ಮಾಡಲಿದೆ, ಅಲ್ಲಿ ಸೂರ್ಯ ಕಣ್ಮರೆಯಾಗುವುದನ್ನು ಕಾಣಬಹುದು. ಉತ್ತರ ಅಮೆರಿಕಾದ ದೇಶಗಳಾದ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ. ಇದಲ್ಲದೆ, ಪೆಸಿಫಿಕ್ ಮಹಾಸಾಗರದಲ್ಲಿರುವ ಕೆಲವು ದ್ವೀಪ ರಾಷ್ಟ್ರಗಳ ಜನರು ಸಹ ಈ ಖಗೋಳ ಘಟನೆಗೆ ಸಾಕ್ಷಿಯಾಗಲಿದ್ದಾರೆ. imeanddate.com ಪ್ರಕಾರ, ಸೂರ್ಯಗ್ರಹಣವು ಏಪ್ರಿಲ್ 8 ರಂದು ರಾತ್ರಿ 9:13 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮುಂಜಾನೆ 2:23 ಕ್ಕೆ ಕೊನೆಗೊಳ್ಳುತ್ತದೆ. ಯುಎಸ್ನಲ್ಲಿ, ಈ ಕಾರ್ಯಕ್ರಮವು ಸ್ಥಳೀಯ ಸಮಯ ಮಧ್ಯಾಹ್ನ 2.15 ಕ್ಕೆ ಪ್ರಾರಂಭವಾಗಲಿದೆ. ಸಂಪೂರ್ಣ ಸೂರ್ಯಗ್ರಹಣದ ಅವಧಿ 5 ಗಂಟೆ 10 ನಿಮಿಷಗಳು.…
ಬೆಂಗಳೂರು: ನಗರದಲ್ಲಿ ನಕಲಿ ನೋಟು ನೀಡಿ ವಿನೂತನ ರೀತಿಯಲ್ಲಿ ವಂಚಿಸುತ್ತಿದ್ದಂತ ಐವರು ವಂಚಕರನ್ನು ಪೊಲೀಸರು ಎಡೆಮುರಿ ಕಟ್ಟಿ ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ನಗರದಲ್ಲಿ ವಿನೂತನ ರೀತಿಯಲ್ಲಿ ನಕಲಿ ನೋಟು ನೀಡಿ ಜನರನ್ನು ವಂಚಿಸುತ್ತಿದ್ದಂತ ಐವರನ್ನು ಬಂಧಿಸಿರುವುದಾಗಿ ತಿಳಿಸಿದರು. ಮಹಿಳಾ ಸಂರಕ್ಷಣಾಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 30 ಕೋಟಿ 9 ಲಕ್ಷದ 60 ಸಾವಿರ ಮೌಲ್ಯದ ನಕಲಿ ನೋಟುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದರು. ವಂಚಕರು ಟ್ರಸ್ಟ್ ಗಳನ್ನು ಸಂಪರ್ಕಿಸುತ್ತಿದ್ದರು. ಕಮೀಷನ್ ಆಸೆ ತೋರಿಸುತ್ತಿದ್ದರು. ಕಂಪನಿ ಪ್ರತಿನಿಧಿಗಳು ಎಂಬುದಾಗಿ ಹೇಳಿಕೊಂಡು ಪರಿಚಯ ಮಾಡಿಕೊಳ್ಳುತ್ತಿದ್ದರು. ಅಸಲಿ ನೋಟು ಪಡೆದು, ನಕಲಿ ನೋಟು ನೀಡಿ ವಂಚಿಸುತ್ತಿದ್ದರು ಎಂದು ಹೇಳಿದರು. ಸಿಎಸ್ಆರ್ ಮೂಲಕ ಹಣ ನೀಡುವುದಾಗಿ ಹೇಳುತ್ತಿದ್ದರು. ಇವರನ್ನು ನಂಬಿದಂತ ಕೆಲವರಿಗೆ ನಕಲಿ ನೋಟು ನೀಡಿ ವಂಚಿಸಿದ್ದಾರೆ. ಜನರು ಹೀಗೆ ಹೊಸ ರೀತಿಯಲ್ಲಿ ವಂಚಿಸುತ್ತಿರೋ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು. https://kannadanewsnow.com/kannada/breaking-sc-stays-hc-order-for-class-5-8-9-11-board-exams/ https://kannadanewsnow.com/kannada/how-to-change-name-address-date-of-birth-and-mobile-number-in-pan-card-heres-the-information/
ಕೆಎನ್ಎನ್ ಡಿಜಿಟಲ್ ಡೆಸ್ಕ್: ಯುಗಾದಿ ತೆಲುಗು ಕ್ಯಾಲೆಂಡರ್ ನಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಇದನ್ನು ಈ ವರ್ಷ ಏಪ್ರಿಲ್ 9 ರಂದು ಆಚರಿಸಲಾಗುತ್ತದೆ. ಇದು ಹಿಂದೂಗಳಲ್ಲಿ ಬಹಳ ಆಡಂಬರ ಮತ್ತು ಸಂಭ್ರಮದಿಂದ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಸ್ಥಳೀಯರ ಪ್ರಕಾರ, ಯುಗಾದಿ ಹಬ್ಬವು ಹಿಂದೂ ಸಂಪ್ರದಾಯದ ಪ್ರಕಾರ ಹೊಸ ಯುಗ, ವರ್ಷ ಮತ್ತು ಭವಿಷ್ಯದ ಪ್ರಾರಂಭವಾಗಿದೆ ಎಂದು ನಂಬಲಾಗಿದೆ. ವೈಜ್ಞಾನಿಕ ನಂಬಿಕೆಗಳ ಪ್ರಕಾರ, ವ್ಯಕ್ತಿಯ ಭವಿಷ್ಯವೂ ಈ ದಿನದಿಂದ ಬದಲಾಗುತ್ತದೆ. ಈ ದಿನ, ಜ್ಯೋತಿಷಿಗಳು ಯುಗಾದಿ ಹಬ್ಬ ಮುಗಿದ ನಂತರ ಸಂಜೆ ಹೊಸ ಪಂಚಾಂಗವನ್ನು ನೋಡುವ ಮೂಲಕ ಜನರ ಭವಿಷ್ಯ ನುಡಿಯುತ್ತಾರೆ. ಪಂಚಾಂಗವು ಖಗೋಳ ಅಥವಾ ಹವಾಮಾನ ಮಾಹಿತಿಯನ್ನು ಒಳಗೊಂಡಿರುವ ಪ್ರಕಟಣೆಯಾಗಿದ್ದು, ಸಾಮಾನ್ಯವಾಗಿ ಆಕಾಶ ವಸ್ತುಗಳ ಭವಿಷ್ಯದ ಸ್ಥಾನಗಳು, ನಕ್ಷತ್ರ ಪರಿಮಾಣಗಳು ಮತ್ತು ನಕ್ಷತ್ರಪುಂಜಗಳ ಪರಾಕಾಷ್ಠೆಯ ದಿನಾಂಕಗಳನ್ನು ಒಳಗೊಂಡಿದೆ. ಕರ್ನಾಟಕದಲ್ಲಿ ಯುಗಾದಿಯ ಸಂದರ್ಭದಲ್ಲಿ ಬೇವಿನ ಬೆಲ್ಲವನ್ನು ತಿನ್ನುವುದು ಒಂದು ಸಂಪ್ರದಾಯವಾಗಿದೆ. ಬೇವು ಜೀವನದ ಹಾದಿಯಲ್ಲಿ ಅನೇಕ ತೊಡಕುಗಳು ಮತ್ತು ದುಃಖಗಳನ್ನು…
ಇಂದು ಚೈತ್ರ ಮಾಸದ ಅಮಾವಾಸ್ಯೆ ಬರಲಿದೆ. ಸೋಮವಾರ 8-4-2024 ರಂದು ಅಮಾವಾಸ್ಯೆ. ಈ ದಿನ ನಮ್ಮ ಪೂರ್ವಜರು ಪೂಜೆ ಮಾಡುವುದನ್ನು ಬಿಟ್ಟು ಹೊರಡಬಾರದು. ಅದನ್ನು ಸರಿಯಾಗಿ ಅನುಸರಿಸಿ. ಪಂಗುನಿ ಮಾಸದ ಅಮಾವಾಸ್ಯೆ ಸೋಮವಾರ ಬರುತ್ತದೆ. ಶನಿವಾರ ಪ್ರದೋಷ ಬಂದರೆ ಆ ಶನಿ ಪ್ರದೋಷ ಎಷ್ಟು ಶ್ರೇಷ್ಠ. ಅದೇ ರೀತಿ ಸೋಮವಾರದಂದು ಅಮಾವಾಸ್ಯೆ ಬಂದರೆ ಅಮಾವಾಸ್ಯೆಗೂ ಹಲವು ಪಟ್ಟು ಶಕ್ತಿಯಿದೆ ಎಂದು ಅಧ್ಯಾತ್ಮದಲ್ಲಿ ಹೇಳಲಾಗಿದೆ. ನಾಳೆ ನಿಮ್ಮ ಮನೆಯಲ್ಲಿ ಶಿವನನ್ನು ಪ್ರಾರ್ಥಿಸಿ ಈ ಪರಿಹಾರವನ್ನು ಮಾಡಿದರೆ, ವರ್ಷವಿಡೀ ನೀವು ಮಾಡಿದ ಎಲ್ಲಾ ಸಾಲವನ್ನು ಮರುಪಾವತಿಸಲು ಅವಕಾಶಗಳಿವೆ. ಸಾಲದ ಪರಿಹಾರಕ್ಕೆ ಅಮಾವಾಸ್ಯೆಯ ಪರಿಹಾರ ಏನು ಎಂದು ತಿಳಿಯಲು ಈ ಲೇಖನವನ್ನು ಓದುವುದನ್ನು ಮುಂದುವರಿಸೋಣ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ…
ಬೆಂಗಳೂರು: ನಮ್ಮ ರಾಷ್ಟ್ರವನ್ನು ಮುನ್ನೆಡಸಲು ಎಲ್ಲರೂ ಒಂದಾಗಿ ತಪ್ಪದೆ ಮತ ಚಲಾಯಿಸೋಣವೆಂದು ಚುನಾವಣಾ ರಾಯಭಾರಿ, ಚಿತ್ರನಟ ಹಾಗೂ ನಿರ್ದೇಶಕರಾದ ರಮೇಶ್ ಅರವಿಂದ್ ರವರು ವಿಧ್ಯಾರ್ಥಿಗಳನ್ನು ಪ್ರೇರೇಪಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲರೂ ಒಟ್ಟಾಗಿ ಪ್ರಜಾಪ್ರಭುತ್ವಕ್ಕೆ ಹಲೋ(Say Hello to Democracy) ಎಂದಾಗ ಮಾತ್ರ ನಾವು ಪ್ರಜಾಪ್ರಭುತ್ವಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು. ಶೇ. 20 ರಷ್ಟು ಮಂದಿ ಒಂದಾಗಿ ಕೂಗಿದಾಗ ಹೆಚ್ಚು ಶಬ್ದ ಬರಲು ಸಾಧ್ಯವಿಲ್ಲ. ಅದೇ ಶೇ. 100 ರಷ್ಟು ಮಂದಿ ಒಟ್ಟಾಗಿ ಕೂಗಿದಾಗ ಶಬ್ದ ಜೊರಾಗಿ ಬರಲಿದೆ. ಅದೇ ರೀತಿ ಚುನಾವಣೆಯಲ್ಲಿಯೂ ಶೇ. 20 ರಷ್ಟು ಮತದಾನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಎಲ್ಲರೂ ಒಟ್ಟಾಗಿ ಶೇ. 100 ರಷ್ಟು ಮತ ಚಲಾಯಿಸಿದಾಗ ಮಾತ್ರ ನಾವು ಉತ್ತಮ ಪ್ರಜಾಪ್ರಭುತ್ವವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು. ಗೂಗಲ್ ನಲ್ಲಿ ನಿಮ್ಮ ಕ್ಷೇತ್ರದ ಆಭ್ಯರ್ಥಿ ಯಾರು,…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಟ್ಟವನ್ನು ಪ್ರಶ್ನಿಸಿದ್ದಕ್ಕಾಗಿ ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧ ಹೊರಡಿಸಲಾದ ಮಾನನಷ್ಟ ಸಮನ್ಸ್ ಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಗುಜರಾತ್ ವಿಶ್ವವಿದ್ಯಾಲಯ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯ ನೀಡಿದ್ದ ಸಮನ್ಸ್ ಅನ್ನು ಸಂಜಯ್ ಸಿಂಗ್ ಪ್ರಶ್ನಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಮಟ್ಟವನ್ನು ಪ್ರಶ್ನಿಸಿದ್ದಕ್ಕಾಗಿ ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧ ಹೊರಡಿಸಲಾದ ಮಾನನಷ್ಟ ಸಮನ್ಸ್ ಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. https://kannadanewsnow.com/kannada/allu-arjun-drapes-a-saree-beats-up-goons-in-a-mass-first-clip-watch/ https://kannadanewsnow.com/kannada/breaking-sc-stays-hc-order-for-class-5-8-9-11-board-exams/
ಬೆಂಗಳೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಸ್ಪರ್ಧಿ ಸೌಮ್ಯ ಬೇರೆಯಲ್ಲ. ನನ್ನ ಮಗಳು ಐಶ್ವರ್ಯ ಬೇರೆಯಲ್ಲ ಎಂಬುದಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾ Rallyಯಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರವಾಗಿ ಮತ ಯಾಚಿಸಿದರು. ಸೌಮ್ಯ ರೆಡ್ಡಿ ನಾಮ ಪತ್ರಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಸೌಮ್ಯ ರೆಡ್ಡಿ ಅವರು ಒಂದು ಲಕ್ಷಕ್ಕೂ ಹೆಚ್ಚಿನ ಅಂತರದ ಮತಗಳಿಂದ ಗೆಲ್ಲಲಿದ್ದಾರೆ ಎಂಬ ವಿಶ್ವಾಸವಿದೆ. ಸೌಮ್ಯ ನಮ್ಮ ಮನೆ ಮಗಳು ಅವರನ್ನು ಗೆಲ್ಲಿಸಿ ಎಂದು ಪ್ರಾರ್ಥನೆ ಮಾಡುತ್ತಿದ್ದೇನೆ ಎಂದರು. ಸೌಮ್ಯ ಬೇರೆಯಲ್ಲ ನನ್ನ ಮಗಳು ಐಶ್ವರ್ಯ ಬೇರೆಯಲ್ಲ ಸೌಮ್ಯ ರೆಡ್ಡಿಯನ್ನು ಗೆಲ್ಲಿಸಿದರೆ ನನ್ನ ಮಗಳನ್ನು ಗೆಲ್ಲಿಸಿದಂತೆ, ಈ ದೇವರ ಸನ್ನಿಧಿಯಲ್ಲಿ ನಾನು ಈ ಮಾತು ಹೇಳುತ್ತಿದ್ದೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. https://kannadanewsnow.com/kannada/allu-arjun-drapes-a-saree-beats-up-goons-in-a-mass-first-clip-watch/ https://kannadanewsnow.com/kannada/breaking-sc-stays-hc-order-for-class-5-8-9-11-board-exams/