Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 1 ರಂದು ಪ್ರಾರಂಭವಾಗಲಿದೆ ಮತ್ತು ಡಿಸೆಂಬರ್ 19 ರವರೆಗೆ ಮುಂದುವರಿಯುತ್ತದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಅಧ್ಯಕ್ಷ ದ್ರೌಪದಿ ಮುರ್ಮು ಅವರು ಈ ದಿನಾಂಕಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಘೋಷಿಸಿದರು. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಜನರ ಆಕಾಂಕ್ಷೆಗಳನ್ನು ಪರಿಹರಿಸಲು ಕೊಡುಗೆ ನೀಡುವ ಉತ್ಪಾದಕ ಅಧಿವೇಶನದ ಬಗ್ಗೆ ರಿಜಿಜು ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಪ್ರಮುಖ ವಿಷಯಗಳ ಚರ್ಚೆ ಬಿಹಾರ ವಿಧಾನಸಭಾ ಚುನಾವಣೆಗಳ ನಂತರ ಈ ಅಧಿವೇಶನ ನಡೆಯುತ್ತಿದ್ದು, ಇದು ವಿಶೇಷವಾಗಿ ಮಹತ್ವದ್ದಾಗಿದೆ. ಈ ಅವಧಿಯಲ್ಲಿ ವಿರೋಧ ಪಕ್ಷವು ಹಲವಾರು ವಿವಾದಾತ್ಮಕ ವಿಷಯಗಳನ್ನು ಎತ್ತುವ ನಿರೀಕ್ಷೆಯಿದೆ. ಇವುಗಳಲ್ಲಿ ರಾಷ್ಟ್ರವ್ಯಾಪಿ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಮತ ವಂಚನೆಯ ಆರೋಪಗಳು ಸೇರಿವೆ, ಇದು ಬಿಸಿ ಚರ್ಚೆಗಳಿಗೆ ಕಾರಣವಾಗಬಹುದು. ಅಧ್ಯಕ್ಷ ಮುರ್ಮು ಅವರು ಅಧಿವೇಶನದ ವೇಳಾಪಟ್ಟಿಗಾಗಿ ಸರ್ಕಾರದ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ ಎಂದು ಕಿರಣ್ ರಿಜಿಜು X ನಲ್ಲಿ ಹಂಚಿಕೊಂಡರು. ರಚನಾತ್ಮಕ ಮತ್ತು…
ಮಂಡ್ಯ: ಜಿಲ್ಲೆಯಲ್ಲಿ ಡೈರಿಯಲ್ಲೇ ಕಾರ್ಯದರ್ಶಿಯೊಬ್ಬ ಹಾಲಿಗೆ ನೀರು ಬೆರೆಸಿ ಕೃತ್ಯವೆಸಗಿದ್ದಾರೆ. ಹೀಗಾಗಿ ಗ್ರಾಮವೊಂದರಲ್ಲಿನ ಬಿಎಂಸಿ ಕೇಂದ್ರದ ಮಾನ್ಯತೆಯನ್ನೇ ರದ್ದುಗೊಳಿಸಿ ಮನ್ಮುಲ್ ಆದೇಶಿಸಿದೆ. ಹೀಗೆ ನೀರು ಹಾಲಿಗೆ ನೀರು ಬೆರೆಸಿ ಕಳ್ಳಾಟ ಮೆರೆದಿರುವ ಕೃತ್ಯದ ವೀಡಿಯೋ ವೈರಲ್ ಆಗಿದೆ. ಹೌದು.ವಹಾಲಿನ ಡೈರಿಯಲ್ಲಿ ಕಾರ್ಯದರ್ಶಿ ಹಾಲಿಗೆ ನೀರು ಬೆರಸಿ ಕಳ್ಳಾಟ ಬದಲಾಗಿದೆ. ಮನ್ಮುಲ್ ನಿಂದ ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದ ಬಿ.ಎಂ.ಸಿ.ಕೇಂದ್ರ ರದ್ದು ಮಾಡಿ ಆದೇಶ ಮಾಡಿದೆ. ಮನ್ಮುಲ್ ನಿಂದ BMC ಕೇಂದ್ರ ರದ್ದು ಆದೇಶಕ್ಕೆ ಗ್ರಾಮಸ್ಥರ ಆಕ್ರೋಶ ಹೊರ ಹಾಕಿದ್ದಾರೆ. ನೀರು ಬೆರಸಿದ ಕಾರ್ಯದರ್ಶಿ ವಜಾ ಮಾಡಿ BMC ಕೇಂದ್ರ ಉಳಿಸಿ ಕೊಡುವಂತೆ ಗ್ರಾಮದ ಹಾಲು ಉತ್ಪಾದಕರ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ. ಈ ವೇಳೆ ಕಾರ್ಯದರ್ಶಿ ಶಿವರಾಜ್ ಸಂಬಂಧಿಕರಿಂದ ವೆಂಕಟರಾಮು ಎಂಬ ಯುವಕನ ಮೇಲೆ ಹಲ್ಲೆ ಕೂಡ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕಾರ್ಯದರ್ಶಿ ಶಿವರಾಜ್ ಹಾಲಿಗೆ ನೀರು ಬೆರಸ್ತಿರೋ ವಿಡಿಯೋವನ್ನು ವೈರಲ್ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರೋದಾಗಿ ತಿಳಿದು ಬಂದಿದೆ. ಕಳೆದ…
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಾಲ್ಕು ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಈ ನಾಲ್ಕು ರೈಲುಗಳು ಬನಾರಸ್-ಖಜುರಾಹೊ, ಲಕ್ನೋ-ಸಹಾರನ್ಪುರ, ಫಿರೋಜ್ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಲ್ಲಿ ಚಲಿಸಲಿದ್ದು, ಪ್ರಮುಖ ತಾಣಗಳ ನಡುವಿನ ಪ್ರಯಾಣದ ಸಮಯವನ್ನು ಕಡಿತಗೊಳಿಸುವ ಜೊತೆಗೆ ಪ್ರಾದೇಶಿಕ ಚಲನಶೀಲತೆ, ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. https://twitter.com/ANI/status/1986996157508423753?ref_src=twsrc%5Etfw%7Ctwcamp%5Etweetembed%7Ctwterm%5E1986996157508423753%7Ctwgr%5E8cb52064af00024198e500c64134385b5997496a%7Ctwcon%5Es1_&ref_url=https%3A%2F%2Fapi-news.dailyhunt.in%2F ಬನಾರಸ್-ಖಜುರಾಹೊ ವಂದೇ ಭಾರತ್ ಬನಾರಸ್-ಖಜುರಾಹೊ ವಂದೇ ಭಾರತ್ ಎರಡು ಸಾಂಸ್ಕೃತಿಕ ಕೇಂದ್ರಗಳ ನಡುವೆ ನೇರ ಸಂಪರ್ಕವನ್ನು ನೀಡುತ್ತದೆ ಮತ್ತು ಅಸ್ತಿತ್ವದಲ್ಲಿರುವ ವಿಶೇಷ ರೈಲುಗಳಿಗೆ ಹೋಲಿಸಿದರೆ ಕೇವಲ 2 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ಸೇವೆಯು ವಾರಣಾಸಿ, ಪ್ರಯಾಗ್ರಾಜ್, ಚಿತ್ರಕೂಟ ಮತ್ತು ಖಜುರಾಹೊದಂತಹ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸಂಪರ್ಕಿಸುತ್ತದೆ, ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಪ್ರವೇಶವನ್ನು ಸುಧಾರಿಸುತ್ತದೆ ಮತ್ತು ತೀರ್ಥಯಾತ್ರೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಬಲಪಡಿಸುತ್ತದೆ. ಲಕ್ನೋ-ಸಹಾರನ್ಪುರ ವಂದೇ ಭಾರತ್ ಲಕ್ನೋ-ಸಹಾರನ್ಪುರ ವಂದೇ ಭಾರತ್ ಸುಮಾರು 7 ಗಂಟೆ…
ಬೆಂಗಳೂರು: ಮಕ್ಕಳ ರಕ್ಷಣಾ ನಿರ್ದೇಶನಾಲಯದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡ ನವೆಂಬರ್-2025ರ ಮಾಹೆಯನ್ನು ಅಂತರಾಷ್ಟ್ರೀಯ ದತ್ತು ಮಾಸಾಚರಣೆಯಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪೋಷಕತ್ವ ಯೋಜನೆ, ಕಾನೂನು ಬದ್ಧ ದತ್ತು ಹಾಗೂ ಕಾನೂನು ಬಾಹಿರ ದತ್ತು ಪ್ರಕ್ರಿಯೆ ಅಪರಾಧ , ಮಕ್ಕಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, “ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ-2015 ಸೆಕ್ಷನ್ 80 ಮತ್ತು 81ರ ಅನ್ವಯ 5 ವರ್ಷಗಳವರೆಗೂ ಸೆರೆಮನೆ ವಾಸದೊಂದಿಗೆ ರೂ.1.00 ಲಕ್ಷಗಳವರೆಗೆ ದಂಡ ವಿಧಿಸಲಾಗುವುದು. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿಯ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ವಿಸ್ತರಿಸಬಹುದು. ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳ ಮಾಹಿತಿಯು ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ಉತ್ತರ , ನಂ.04, 9ನೇ ಕ್ರಾಸ್, ಸಂತೋಷ್ ನಗರ, 4ನೇ ಹಂತ, ಯಲಹಂಕ ನ್ಯೂಟೌನ್, ಬೆಂಗಳೂರು ಉತ್ತರ (ಯಲಹಂಕ) -560 064ಅಥವಾ…
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಸಲುವಾಗಿ ಅಕ್ಕ ಪಡೆಗೆ ತಂಡ ರಚಿಸಲು NCC “C” ಪ್ರಮಾಣ ಪತ್ರ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಯು 35 ರಿಂದ 45 ವಯೋಮಿತಿಯ ಮಹಿಳಾ ಅಭ್ಯರ್ಥಿ ಆಗಿರಬೇಕು. ದೈಹಿಕ ಸಧೃಡತೆ ಮತ್ತು ಸ್ಥಳೀಯ ನಿವಾಸಿ ಆಗಿರಬೇಕು. ಅಭ್ಯರ್ಥಿಗಳು ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಶಿಪ್ಟ್ನ ಲ್ಲಿ ಕೆಲಸ ನಿರ್ವಹಿಸಲು ಬದ್ದರಾಗಿರಬೇಕು. ಆಸಕ್ತರು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ.ಹೆಚ್ ಮರಿಗೌಡ ರಸ್ತೆ, ಬೆಂಗಳೂರು-560029. ಇಲ್ಲಿ ಅರ್ಜಿಗಳನ್ನು ಪಡೆದುಕೊಂಡು, ನವೆಂಬರ್ 13, 2025 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-29578688 ಅಥವಾ ಇ-ಮೇಲ್ dwcd.dd@gmail.com ಗೆ ಭೇಟಿ ನೀಡಬಹುದು ಎಂದು ಬೆಂಗಳೂರು ನಗರ…
ಬೆಂಗಳೂರು: ನಗರದಲ್ಲಿ ಕುಡಿದು ಬರುತ್ತಿದ್ದಂತ ಚಾಲಕರಿಂದ ಲಂಚ ಪಡೆದು ಡ್ಯೂಟಿ ನೀಡುತ್ತಿದ್ದರು ಎನ್ನುವ ಕಾರಣಕ್ಕಾಗಿ ಬಿಎಂಟಿಸಿಯ ಅಧಿಕಾರಿಗಳು ಸೇರಿದಂತೆ 9 ಮಂದಿಯನ್ನು ಅಮಾನತುಗೊಳಿಸಲಾಗಿತ್ತು. ಆದರೇ ತನಿಖಾಧಿಕಾರಿಯ ತಪ್ಪು ವರದಿಯಿಂದ ಬಿಎಂಟಿಸಿ ಚಾಲಕರು, ಈಗ ಕುಡಿದು ಬಸ್ ಚಾಲನೆ ಮಾಡುತ್ತಿದ್ದಾರೆ ಎಂಬ ತಪ್ಪು ಸಂದೇಶ ಸಾರ್ವಜನಿಕರಲ್ಲಿ ಮೂಡುವಂತೆ ಆಗಿದೆ. ಆ ಮೂಲಕ ಬಿಎಂಟಿಸಿ ಸಂಸ್ಥೆಗೂ ಕೆಟ್ಟ ಹೆಸರು ಬಂದಂತೆ ಆಗಿದೆ. ಆ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ಓದಿ… ಬಿಎಂಟಿಸಿ ಡಿಪೋದಲ್ಲಿ ಚಾಲಕರಿಗೆ ಡ್ಯೂಟಿಗೆ ಮುನ್ನ ಕುಡಿತ ತಪಾಸಣೆ ಬಿಎಂಟಿಸಿ ಪ್ರತಿ ಡಿಪೋಗಳಲ್ಲಿಯೂ ಡ್ಯೂಟಿಗೆ ಹಾಜರಾಗುವಂತ ಚಾಲಕರನ್ನು ಕುಡಿತದ ತಪಾಸಣೆಗೆ ಒಳಪಡಿಸಿ, ಕುಡಿದ ಪ್ರಮಾಣವನ್ನು ಪತ್ತೆ ಹಚ್ಚುವ ಪರಿಪಾಟವಿದೆ. ಒಂದು ವೇಳೆ ತಪಾಸಣೆಯ ಸಂದರ್ಭದಲ್ಲಿ ಕುಡಿದು ಬಂದಿರೋದು ಪತ್ತೆಯಾದರೇ ಅಂತವರಿಗೆ ಡ್ಯೂಟಿಯನ್ನು ನೀಡೋದಿಲ್ಲ. ಕುಡಿದು ಡ್ಯೂಟಿಗೆ ಹಾಜರಾಗೋದಕ್ಕೆ ಬಂದಂತ ಚಾಲಕರ ಕುಡಿತರ ಪ್ರಮಾಣವನ್ನು ವರದಿ ಮಾಡಿಕೊಳ್ಳುವಂತ ಡಿಪೋದಲ್ಲಿನ ಅಧಿಕಾರಿಗಳು, ಅವರಿಗೆ ದಂಡವನ್ನು ವಿಧಿಸುವ ನಿಯಮವಿದೆ. 10ಎಂಜಿ/100ಎಂಎಲ್ ಪ್ರಮಾಣದಲ್ಲಿ ಕುಡಿದಿದ್ದರೂ ಡ್ಯೂಟಿ ನೀಡಿಲ್ಲ ಈ…
ಬೆಂಗಳೂರು: ರಾಜ್ಯ ಸರ್ಕಾರದಿಂದ 42 ನಗರಸಭೆ, 53 ಪುರಸಭೆ, 23 ಪಟ್ಟಣ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಕರ್ನಾಟಕ ಪೌರಸಭೆಗಳ ಅಧಿನಿಯಮದ ಕಲಂ 11ರ ಉಪ ಕಲಂ (2) (3) (4) ಹಾಗೂ ಕಲಂ 42 (2ಎ) ರನ್ವಯ ಮತ್ತು ಸರ್ಕಾರದ ಮಾರ್ಗಸೂಚಿ ಸಂಖ್ಯೆ: ನಅಇ 65 ಎಂಎಲ್ಆರ್ 2020, ದಿನಾಂಕ 11-09-2020 ರಲ್ಲಿ ಸ್ಪಷ್ಟಪಡಿಸಿರುವಂತೆ ರಾಜ್ಯದಲ್ಲಿರುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ವಿವಿಧ ಪ್ರವರ್ಗಗಳ ಮೀಸಲಾತಿಯನ್ನು 9ನೇ ಅವಧಿಗೆ ನಿಗದಿಪಡಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 107 ಎಂಎಲ್ಆರ್ 2020 ನ್ನು ದಿನಾಂಕ: 08-10-2020 ರಂದು ಹೊರಡಿಸಲಾಗಿದೆ. ಈ ಆದೇಶವನ್ನು ಪ್ರಶ್ನಿಸಿ ಶ್ರೀ ಅರ್.ಬಸವರಾಜು ಚನ್ನಗಿರಿ ರವರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ: 11566/2020 ನ್ನು ದಾಖಲಿಸಿದ್ದು, ಮಾನ್ಯ ನ್ಯಾಯಾಲಯವು…
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಗ್ಗೆ ಅವಹೇಳನಕಾರಿ, ಅಸಭ್ಯವಾದಂತ ವೀಡಿಯೋ ಹರಿಬಿಟ್ಟವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ವಕೀಲರಾದಂತ ದೀಪು ಸಿ.ಆರ್ ಎಂಬುವರು ಸದಾಶಿವನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರಿನಲ್ಲಿ ದಿನಾಂಕ 07-11-2025ರಂದು ಬೆಳಗ್ಗೆ 9 ಗಂಟೆಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮನೆ ಹತ್ತಿರ ಇದ್ದಾಗ ನನ್ನ ಇನ್ ಸ್ಟಾಗ್ರಾಂ ನಲ್ಲಿ ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಗಳ ಬಗ್ಗೆ ಅವಹೇಳನಕಾರಿ ಮತ್ತು ಅಸಭ್ಯವಾಗಿ ವೀಡಿಯೋ ಭಿತ್ತರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಂತ ವೀಡಿಯೋದಲ್ಲಿ ಟಿವಿ9 ಬ್ರೇಕಿಂಗ್ ನ್ಯೂಸ್ ಪ್ರಸಾರವಾಗುತ್ತಿದೆ ಎನ್ನುವ ರೀತಿಯಲ್ಲಿ ಎ1 ಟೆಕ್ನಾಲಜಿ ಬಳಸಿ ಎಡಿಟ್ ಮಾಡಿ ಸುಳ್ಳು ವೀಡಿಯೋ ಸೃಷ್ಠಿಸಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಭಿತ್ತರಿಸಲಾಗಿದೆ ಎಂದಿದ್ದಾರೆ. ಈ ವೀಡಿಯೋ ಪೋಸ್ಟ್ ಗಳನ್ನು ಹಾಕಿರುವುದರಿಂದ ಸಮಾಜದಲ್ಲಿ ಅವರಿಬ್ಬರ ಬಗ್ಗೆ ಕೆಟ್ಟ ಅಭಿಪ್ರಾಯ ಬರುವ ದುರುದ್ದೇಶದಿಂದ, ಡಿಸಿಎಂ ಡಿ.ಕೆ ಶಿವಕುಮಾರ್…
ಶಿವಮೊಗ್ಗ: ಸಾಗರ ತಾಲ್ಲೂಕಿನ ಜನತೆಯ ಸಮಸ್ಯೆ ನಿವಾರಿಸಲು ಶಾಸಕ ಗೋಪಾಲಕೃಷ್ಣ ಬೇಳೂರು ಮಹತ್ವದ ಹೆಜ್ಜೆ ಇರಿಸಿದ್ದಾರೆ. ಇದೇ ನವೆಂಬರ್.12ರಂದು ಬೆಳಗ್ಗೆ 11 ಗಂಟೆಯಿಂದ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರು ಜನಸಂಪರ್ಕ ಸಭೆಯನ್ನು ನಡೆಸಲಿದ್ದಾರೆ. ಈ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ: 12-11-2025 ಬುಧವಾರದಂದು ಬೆಳಿಗ್ಗೆ 11-00 ಗಂಟೆಗೆ ಕಲ್ಮನೆ ಗ್ರಾಮ ಪಾಂಚಾಯಿತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎದುರು ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದು ತಿಳಿಸಿದೆ. ಕಂದಾಯ ಇಲಾಖೆಯಿಂದ ಪೌತಿ ಖಾತೆ ಆಂದೋಲನ ಮಾಡಿ, ಪೌತಿ ಖಾತೆ ಅರ್ಜಿ ಸ್ವೀಕೃತಿ ಹಾಗೂ ಕಡತಗಳ ತಯಾರಿಕೆ ಕಾರ್ಯ ಮಾಡಲಾಗುತ್ತದೆ. 94ಸಿ ಮನೆ ಹಕ್ಕುಪತ್ರ ಅರ್ಜಿಗಳ ಪರಿಶೀಲನೆ ಮಾಡಲಾಗುವುದು. ಸಾಗರ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಹಾಗೂ ಕಂದಾಯ ಇಲಾಖಾ ಸಿಬ್ಬಂದಿಗಳು ಹಾಜರಿರಲಿದ್ದಾರೆ ಎಂದಿದೆ. ತಾಲ್ಲೂಕು ಪಂಚಾಯಿತಿ ಇಲಾಖೆಯಡಿಯಲ್ಲಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿ ಪರಿಹಾರವನ್ನು ಕೈಗೊಳ್ಳಲಾಗುವುದು. ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಯವರು…
ಬೆಂಗಳೂರು: ಸೊರಬ ಪುರಸಭೆಯ ಸದಸ್ಯರ ಅವಧಿಯು ಮುಕ್ತಾಯಗೊಂಡ ಹಿನ್ನಲೆಯಲ್ಲಿ ದಿನಾಂಕ 24-10-2025ರಿಂದ ಜಾರಿಗೆ ಬರುವಂತೆ ಸಾಗರದ ಉಪ ವಿಭಾಗಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಶೇಷ ರಾಜ್ಯ ಪತ್ರ ಪ್ರಕಟಿಸಿದ್ದು, ದಿನಾಂಕ 24-10-2025ರಿಂದ ಜಾರಿಗೆ ಬರುವಂತೆ ಸೊರಬ ಪುರಸಭೆಗೆ ಅಡಳಿತಾಧಿಕಾರಿಯನ್ನಾಗಿ ಸಾಗರದ ಉಪ ವಿಭಾಗಾಧಿಕಾರಿಯನ್ನು ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ. ಇದಲ್ಲದೇ ಸಾಗರ ನಗರಸಭೆಗೂ ದಿನಾಂಕ 30-10-2025ರಿಂದ ಜಾರಿಗೆ ಬರುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಅಲ್ಲದೇ ಹೊಸನಗರ ಪಟ್ಟಣ ಪಂಚಾಯ್ತಿಗೆ ದಿನಾಂಕ 04-11-2025ರಿಂದ ಜಾರಿಗೆ ಬರುವಂತೆ ಹೊಸನಗರ ತಹಶೀಲ್ದಾರ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿಗೆ ದಿನಾಂಕ 05-11-2025ರಿಂದ ಜಾರಿಗೆ ಬರುವಂತೆ ಸಾಗರ ತಹಶೀಲ್ದಾರ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು https://kannadanewsnow.com/kannada/government-orders-appointment-of-administrative-officers-for-42-municipal-councils-53-municipalities-and-23-town-panchayats-in-the-state/ https://kannadanewsnow.com/kannada/cm-siddaramaiah-is-shirking-responsibility-for-not-resolving-the-problems-of-sugarcane-farmers-hdk/













