Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಪಾಕಿಸ್ತಾನದ ಮೇಲೆ ಭಾರತೀಯ ಸೇನೆಯ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಹೆಸರಿಡಲಾಗಿದೆ. ಈ ಟೈಟಲ್ ಗೆ ರಿಲಯನ್ಸ್ ಟ್ರೇಡ್ ಮಾರ್ಕ್ ಬಿಡ್ ಮಾಡೋದಕ್ಕೆ ಮುಂದಾಗಿ ಹಿಂದೆ ಸರಿದಿತ್ತು. ಈ ಬೆನ್ನಲ್ಲೇ ಬಾಲಿವುಡ್ ನಿರ್ಮಾಪಕರು ಆಪರೇಷನ್ ಸಿಂಧೂರ್ ಟೈಟಲ್ ಗಾಗಿ ಮುಗಿಬಿದ್ದಿರುವುದಾಗಿ ತಿಳಿದು ಬಂದಿದೆ. ಹೌದು ಭಾರತೀಯ ಸೇನಾ ಕಾರ್ಯಾಚರಣೆಯ ಆಪರೇಷನ್ ಸಿಂಧೂರ್ ಟೈಟಲ್ ಗೆ ಭಾರೀ ಬೇಡಿಕೆ ಇಂಟಾಗಿದೆ. ಬಾಲಿವುಡ್ ತಾರೆಯರು ಇದನ್ನು ಮೆಚ್ಚಿಕೊಂಡಿದ್ದರೇ, ನಿರ್ಮಾಪಕರು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಸಿನಿಮಾ ಮಾಡೋದಕ್ಕೆ ಟೈಟಲ್ ಗೆ ನಾಮುಂದು, ತಾಮುಂದು ಅಂತ ನೋಂದಣಿಗೆ ಮುಗಿಬಿದ್ದಿದ್ದಾರೆ ಎನ್ನಲಾಗಿದೆ. ಅಂದಹಾಗೇ ಈಗಾಗಲೇ ಉರಿ, ಬಾರ್ಡರ್ ಸೇರಿದಂತೆ ಭಾರತೀಯ ಸೇನೆಗೆ ಸಂಬಂಧಿಸಿದಂತ ಹಲವು ಬಾಲಿವುಡ್ ಸಿನಿಮಾಗಳು ತೆರೆ ಕಂಡಿದ್ದಾವೆ. ಇದೀಗ ಅದೇ ರೀತಿಯ ನೈಜ ಕತೆಯ ಆಪರೇಷನ್ ಸಿಂಧೂರದ ಕುರಿತಂತೆ ಸಿನಿಮಾ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಇದಕ್ಕಾಗಿ 15ಕ್ಕೂ ಹೆಚ್ಚು ಖ್ಯಾತ ನಿರ್ಮಾಣ ಸಂಸ್ಥೆಗಳು ಟೈಟಲ್ ರಿಜಿಸ್ಟರ್ ಮಾಡಲು ಮುಂದಾಗಿದ್ದಾವೆ. https://kannadanewsnow.com/kannada/centre-asks-media-not-to-telecast-indian-armys-operations-live/ https://kannadanewsnow.com/kannada/indo-pak-tensions-indigo-suspends-flights-to-several-cities-till-may-10/
ನವದೆಹಲಿ: ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ನಿನ್ನೆ ಜಮ್ಮು ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ಪಾಕಿಸ್ತಾನ ಡ್ರೋನ್, ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರಸ್ತುತ್ತರವಾಗಿ ಲಾಹೋರ್ ಮೇಲೆ ಭಾರತ ವಾಯು ದಾಳಿ ನಡೆಸಿತ್ತು. ಈ ಉದ್ವಿಗ್ನತೆಯಿಂದಾಗಿ ಭಾರತದಲ್ಲಿ ಪಾಕಿಸ್ತಾನದ ಪ್ರಮುಖ ಪತ್ರಕರ್ತರ ಎಕ್ಸ್ ಖಾತೆಗಳನ್ನು ಭಾರತ ನಿರ್ಬಂಧಿಸಿದೆ. ಪಾಕಿಸ್ತಾನದ ಖ್ಯಾತ ಪತ್ರಕರ್ತರಾದ ಹಮೀದ್ ಮಿರ್ ಮತ್ತು ನಜಾಮ್ ಸೇಥಿ ಅವರ ಎಕ್ಸ್ ಖಾತೆಗಳನ್ನು ಭಾರತ ನಿರ್ಬಂಧಿಸಿದೆ. ಈ ಮೂಲಕ ಭಾರತದ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನೆಯಾಗುವುದನ್ನು ತಪ್ಪಿಸಲಾಗಿದೆ. https://kannadanewsnow.com/kannada/centre-asks-media-not-to-telecast-indian-armys-operations-live/ https://kannadanewsnow.com/kannada/indo-pak-tensions-indigo-suspends-flights-to-several-cities-till-may-10/
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಮುನ್ನೆಚ್ಚರಿಕೆ ಕ್ರಮವಾಗಿ ಇಂಡಿಗೊ ಏರ್ಲೈನ್ಸ್ ಉತ್ತರದ ಹಲವಾರು ನಗರಗಳಿಗೆ ಮತ್ತು ಅಲ್ಲಿಂದ ಬರುವ ವಿಮಾನಗಳ ಸಂಚಾರವನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಮೇ 10, 2025 ರ ರಾತ್ರಿ 11:59 ರವರೆಗೆ ಅಮಾನತು ಜಾರಿಯಲ್ಲಿರುತ್ತದೆ. 10 ನಗರಗಳಿಗೆ ವಿಮಾನ ಹಾರಾಟ ರದ್ದುಗೊಳಿಸಿದ ಇಂಡಿಗೋ ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೊ ಏರ್ಲೈನ್ಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನಿಮ್ಮ ಸುರಕ್ಷತೆಯು ಅತ್ಯುನ್ನತವಾಗಿದೆ. ಮೇ 10 ರಂದು 2359 ಗಂಟೆಯವರೆಗೆ ಈ ಕೆಳಗಿನ ನಗರಗಳಿಗೆ / ಅಲ್ಲಿಂದ ವಿಮಾನಗಳನ್ನು ರದ್ದುಪಡಿಸಲಾಗಿದೆ. ಸುಲಭವಾಗಿ ಪ್ರಯಾಣಿಸಲು ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. http://bit.ly/31paVKQ ವಿಮಾನದ ಸ್ಥಿತಿಯನ್ನು ಇಲ್ಲಿ ಪರಿಶೀಲಿಸಿ. ರೀಬುಕ್ ಮಾಡಲು ಅಥವಾ ಮರುಪಾವತಿ ಪಡೆಯಲು, http://bit.ly/31lwD2y ಭೇಟಿ ನೀಡಿ ಎಂದಿದೆ. https://twitter.com/IndiGo6E/status/1920708503578026337 ಶ್ರೀನಗರ, ಜಮ್ಮು, ಲೇಹ್, ಅಮೃತಸರ, ಚಂಡೀಗಢ, ಧರ್ಮಶಾಲಾ, ಜೋಧಪುರ, ಬಿಕಾನೇರ್, ಕಿಶನ್ಗಡ್ ಮತ್ತು ರಾಜ್ಕೋಟ್ಗೆ ಹೋಗುವ ಮತ್ತು ಹೋಗುವ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.…
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಇಂತಹ ಯುದ್ಧದ ಕಾರ್ಯಾಚರಣೆಯನ್ನು ಲೈವ್ ಕವರೇಜ್ ಮಾಡದಂತೆ ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಸೂಚಿಸಿದೆ. ಈ ಸಂಬಂಧ ಕೇಂದ್ರ ರಕ್ಷಣಾ ಇಲಾಖೆ ಮಾಧ್ಯಮಗಳಿಗೆ ಸೂಚನೆ ಹೊರಡಿಸಿದ್ದು, ಪಾಕಿಸ್ತಾನ ವಿರುದ್ಧದ ಭಾರತೀಯ ಸೇನಾ ಕಾರ್ಯಾಚರಣೆಯ ನೇರ ಪ್ರಸಾರವನ್ನು ಮಾಡದಂತೆ ಸೂಚಿಸಲಾಗಿದೆ. ಭಾರತೀಯ ಸುದ್ದಿ ವಾಹಿನಿಗಳು ಸೇನಾ ಕಾರ್ಯಾಚರಣೆಯನ್ನು ಲೈವ್ ಕರವರೇಜ್ ಮಾಡುವುದನ್ನು ನಿಲ್ಲಿಸಬೇಕು. ಈ ಹಿಂದಿನ ಸೇನಾ ಕಾರ್ಯಾಚರಣೆಯಲ್ಲಿ ಆದಂತ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಸೇನೆಯ ಸಿಬ್ಬಂದಿಯ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಲು ನೇರ ಪ್ರಸಾರ ಮಾಡದಂತೆ ಟಿವಿ ಮಾಧ್ಯಮಗಳಿಗೆ ತಿಳಿಸಲಾಗಿದೆ.
ನವದೆಹಲಿ: ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ್ಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕೇಂದ್ರ ಮತ್ತು ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದೆ. ಪಹಲ್ಗಾಮ್ನ ಹೇಡಿತನದ ಭಯೋತ್ಪಾದಕ ಘಟನೆಯ ನಂತರ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಮತ್ತು ಅವರ ಬೆಂಬಲಿತ ಪರಿಸರ ವ್ಯವಸ್ಥೆಯ ವಿರುದ್ಧ ತೆಗೆದುಕೊಳ್ಳುತ್ತಿರುವ ನಿರ್ಣಾಯಕ ಕ್ರಮಕ್ಕಾಗಿ ಭಾರತ ಸರ್ಕಾರ ಮತ್ತು ಸಶಸ್ತ್ರ ಪಡೆಗಳ ನಾಯಕತ್ವಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದೆ. ಹಿಂದೂ ಯಾತ್ರಾರ್ಥಿಗಳ ಕ್ರೂರ ಹತ್ಯಾಕಾಂಡದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಮತ್ತು ಇಡೀ ದೇಶಕ್ಕೆ ನ್ಯಾಯ ಒದಗಿಸಲು ತೆಗೆದುಕೊಳ್ಳುತ್ತಿರುವ ಈ ಕ್ರಮವು ಇಡೀ ದೇಶದ ಸ್ವಾಭಿಮಾನ ಮತ್ತು ಧೈರ್ಯವನ್ನು ಹೆಚ್ಚಿಸಿದೆ ಎಂದು ಆರ್ಎಸ್ಎಸ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರು, ಅವರ ಮೂಲಸೌಕರ್ಯ ಮತ್ತು ಬೆಂಬಲ ವ್ಯವಸ್ಥೆಯ ವಿರುದ್ಧ ತೆಗೆದುಕೊಳ್ಳುತ್ತಿರುವ ಮಿಲಿಟರಿ ಕ್ರಮವು ದೇಶದ ಭದ್ರತೆಗೆ ಅಗತ್ಯ ಮತ್ತು ಅನಿವಾರ್ಯ ಹೆಜ್ಜೆಯಾಗಿದೆ ಎಂದು ನಾವು ನಂಬುತ್ತೇವೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಮಯದಲ್ಲಿ, ಇಡೀ ದೇಶವು ದೇಹ, ಮನಸ್ಸು…
ನವದೆಹಲಿ: ಪಾಕಿಸ್ತಾನದ ಡ್ರೋನ್ ದಾಳಿಯ ನಂತರ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಭಾರತೀಯ ಪಡೆಗಳಿಗೆ ಸಹಾಯ ಮಾಡಲು ಪ್ರಾದೇಶಿಕ ಸೇನೆಗೆ ಸೂಚಿಸಲಾಗಿದೆ. ಈ ಮೂಲಕ ಬೆಂಬಲಕ್ಕಾಗಿ ಪ್ರಾದೇಶಿಕ ಸೇನೆಯನ್ನು ಬಳಸಲು ಸೇನಾ ಮುಖ್ಯಸ್ಥರಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ. ಅಗತ್ಯ ಭದ್ರತೆಯನ್ನು ಒದಗಿಸಲು ಅಥವಾ ನಿಯಮಿತ ಸೈನ್ಯವನ್ನು ಬೆಂಬಲಿಸಲು ಪ್ರಾದೇಶಿಕ ಸೈನ್ಯವನ್ನು ಬಳಸಲು ಕೇಂದ್ರ ಸರ್ಕಾರವು ಸೇನಾ ಮುಖ್ಯಸ್ಥರಿಗೆ ಅಧಿಕಾರ ನೀಡಿದೆ. ಈ ಆದೇಶವು ಫೆಬ್ರವರಿ 9, 2028 ರವರೆಗೆ ಜಾರಿಯಲ್ಲಿರುತ್ತದೆ.
ನವದೆಹಲಿ: ಎಲೋನ್ ಮಸ್ಕ್ ಒಡೆತನದ ಎಕ್ಸ್ (ಹಿಂದೆ ಟ್ವಿಟರ್) ಗುರುವಾರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ 8,000 ಖಾತೆಗಳನ್ನು ನಿರ್ಬಂಧಿಸಲು ಭಾರತ ಕೇಳಿದೆ ಎಂದು ಹೇಳಿದೆ. 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ಪ್ರಕಟಣೆ ಬಂದಿದೆ. ವಿವಿಧ ಕಾರಣಗಳಿಗೆ ಒಳಪಟ್ಟು ಭಾರತದಲ್ಲಿ 8,000 ಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸಲು ಎಕ್ಸ್ ಗೆ ಭಾರತ ಸರ್ಕಾರದಿಂದ ಕಾರ್ಯನಿರ್ವಾಹಕ ಆದೇಶಗಳು ಬಂದಿವೆ. ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಮತ್ತು ಪ್ರಮುಖ ಎಕ್ಸ್ ಬಳಕೆದಾರರಿಗೆ ಸೇರಿದ ಖಾತೆಗಳಿಗೆ ಭಾರತದಲ್ಲಿ ಪ್ರವೇಶವನ್ನು ನಿರ್ಬಂಧಿಸುವ ಬೇಡಿಕೆಗಳನ್ನು ಈ ಆದೇಶಗಳು ಒಳಗೊಂಡಿವೆ ಎಂದು ಎಕ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಮೈಕ್ರೋ ಬ್ಲಾಗಿಂಗ್ ಸೈಟ್ ಭಾರತದಲ್ಲಿ ಪಟ್ಟಿ ಮಾಡಲಾದ ಖಾತೆಗಳಿಗೆ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಅನುಸರಿಸುವುದಾಗಿ ದೃಢಪಡಿಸಿದರೆ, ‘ಎಕ್ಸ್’ ಇದು “ಸುಲಭದ ನಿರ್ಧಾರವಲ್ಲ” ಎಂದು ಹೇಳಿದೆ. ಈ ವೇದಿಕೆಯು ಭಾರತದಲ್ಲಿ ತನ್ನ ಸೇವೆಗಳನ್ನು ನಿರ್ವಹಿಸುವ ಅಗತ್ಯವನ್ನು ಎತ್ತಿ ತೋರಿಸಿತು. “ಭಾರತದಲ್ಲಿ…
ಹಾಸನ: ಭಾರತ ಮತ್ತು ಪಾಕ್ ನಡುವೆ ಯುದ್ಧದ ಭೀತಿ ಎದುರಾಗಿದೆ. ಆಪರೇಷನ್ ಸಿಂಧೂರ್ ಗೆ ಪ್ರತಿಯಾಗಿ ನಿನ್ನೆಯಿಂದ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಇಂತಹ ದಾಳಿಯನ್ನು ಭಾರತೀಯ ಸೇನೆ ಅಷ್ಟೇ ತೀವ್ರವಾಗಿ ಪ್ರತ್ಯುತ್ತರ ನೀಡಿ ವಿಫಲಗೊಳಿಸುತ್ತಿದೆ. ಇದರ ನಡುವೆ ಭಾರತೀಯ ಸೇನೆಗೆ ಬಲ ತುಂಬಲು ನಾವು ಸಿದ್ಧ ಎಂಬುದಾಗಿ ನಿವೃತ್ತ ಯೋಧರು ಬೆಂಬಲ ಸೂಚಸಿಸಿದ್ದಾರೆ. ಈ ಸಂಬಂಧ ಹಾಸನದ ಉದಯಗಿರಿ ಬಡಾವಣೆಯಲ್ಲಿನ ಸೈನಿಕರ ಭವನದಲ್ಲಿ ತುರ್ತು ಸಭೆಯನ್ನು ನಿವೃತ್ತ ಯೋಧರು ನಡೆಸಿದರು. ಈ ಸಭೆಯಲ್ಲಿ ಕರೆ ಬಂದರೇ ಸೇವೆ ಸಲ್ಲಿಸಲು ಸಿದ್ಧರಾಗುವಂತ ನಿರ್ಧಾರವನ್ನು ಕೈಗೊಳ್ಳಲಾಯಿತು. ಈ ಮೂಲಕ ಭಾರತೀಯ ಸೇನೆಗೆ ಬಲ ತುಂಬಲು ಮಾಜಿ ಸೈನಿಕರು ನಿರ್ಧರಿಸಿದ್ದಾರೆ.
ಮಂಗಳೂರು: ನಗರದಲ್ಲಿ ವಿದ್ಯಾರ್ಥಿನಿಯೊಬ್ಬಳು ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸುತ್ತಿರುವಂತ ಆಪರೇಷನ್ ಸಿಂಧೂರ್ ಕುರಿತಂತೆ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ಧಿಕ್ಕಾರ ಆಪರೇಷನ್ ಸಿಂಧೂರ್ ಎಂಬುದಾಗಿ ದೇಶ ವಿರೋಧಿ ಪೋಸ್ಟ್ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವಂತ ರೇಷ್ಮಾ ಎಂಬ ವಿದ್ಯಾರ್ಥಿನಿಯೇ ಹೀಗೊಂದು ದೇಶ ವಿರೋಧಿ ಪೋಸ್ಟ್ ನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಾಕಿರೋದು. ನನ್ನ ಮನೆಯ ದೀಪಕ್ಕೆ ಅವನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ. ಅಲ್ಲಿ ನಂದಿ ಹೋಯಿತು ಬೆಳಕು. ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ ಬೆಳಕಿನ ವಿಜೃಂಭಣೆಗಾಗಿ ಹೋರಾಟ. ಜಯಸಿದ್ದು ಕತ್ತಲು, ಎಲ್ಲೆಲ್ಲೂ ಕತ್ತಲು ಎಂಬುದಾಗಿ ಹೇಳಿದ್ದಾರೆ. ಕೊನೆಗೆ #dikkaraoperationsindurua ಎಂಬುದಾಗಿ ಹ್ಯಾಷ್ ಟ್ಯಾಗ್ ಹಾಕಿದ್ದಾರೋ. ಇದೀಗ ವಿದ್ಯಾರ್ಥಿನಿ ರೇಷ್ಮಾ ಪೋಸ್ಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ದೇಶ ವಿರೋಧಿ ಪೋಸ್ಟ್ ಹಾಕಿದಂತ ರೇಷ್ಮಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಒತ್ತಾಯ ಕೇಳಿ ಬಂದಿದೆ.…
ನವದೆಹಲಿ: ಮೇ 8 ರ ಗುರುವಾರ ಸಂಜೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ಸೇರಿದಂತೆ ಪಾಕಿಸ್ತಾನದ ಭಾರತದ ಮೇಲೆ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡ ನಂತರ, ಭಾರತೀಯ ನೌಕಾಪಡೆಯೂ ಕ್ರಮ ಕೈಗೊಂಡಿದೆ. ಈಗ ಐಎನ್ಎಸ್ ವಿಕ್ರಾಂತ್ ಕರಾಚಿ ಬಂದರಿ ಮೇಲೆ ದಾಳಿ ಮಾಡಿದೆ. ಅರೇಬಿಯನ್ ಸಮುದ್ರದಲ್ಲಿ ನೆಲೆಗೊಂಡಿರುವ ಐಎನ್ಎಸ್ ವಿಕ್ರಾಂತ್ ಕರಾಚಿಯನ್ನು ಗುರಿಯಾಗಿಸಿಕೊಂಡು ಭಾರಿ ವಿನಾಶವನ್ನು ಉಂಟುಮಾಡಲು ಪ್ರಾರಂಭಿಸಿದೆ. ನೌಕಾ ದಾಳಿಯು ಕರಾಚಿ ಬಂದರು ಸೇರಿದಂತೆ ನಗರದಾದ್ಯಂತ ದೊಡ್ಡ ಬೆಂಕಿಗೆ ಕಾರಣವಾಗಿದೆ ಎಂದು ರಾಷ್ಟ್ರೀಯ ಟಿವಿ ವರದಿ ತಿಳಿಸಿದೆ.