Author: kannadanewsnow09

ಶಿವಮೊಗ್ಗ: ಅಧಿಕಾರ ಅಂತಸ್ತು ಶಾಶ್ವತವಲ್ಲ. ಆದರೇ ಹೃದಯ ವೈಶಾಲ್ಯತೆ ಮಾತ್ರ ಶಾಶ್ವತ ಅನ್ನೋದಕ್ಕೆ ಸಾಕ್ಷಿಯೇ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಎಂಬುದು ಆ ಭಾಗದ ಜನರ ಮಾತು. ಈಗ ತಾಜಾ ಉದಾಹರಣೆ ಎನ್ನುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅಜ್ಜಿಗೆ ಸಹಾಯ ಮಾಡಿ ಜನ-ಮನ ಗೆದ್ದಿದ್ದಾರೆ. ಶಾಸಕರಂದ್ರೆ ಹೀಗೆ ಇರ್ಬೇಕು ಅಲ್ವ? ಎನ್ನುವಂತ ಹೃದಯ ವೈಶಾಲ್ಯತೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮನ್ನು ಭೇಟಿಯಾಗುವ ಜನರನ್ನು ನಗುಮುಖದಿಂದಲೇ ಸ್ವಾಗತಿಸೋದು ಹುಟ್ಟು ಗುಣವೇ ಆಗಿದೆ. ಯಾರೇ ಕಷ್ಟ ಅಂತ ತಮ್ಮ ಬಳಿ ಬಂದ್ರು ಅವರನ್ನು ಪ್ರೀತಿಯಿಂದ ಮಾತನಾಡಿಸುವಂತ ಶಾಸಕರು, ತಮ್ಮ ಕೈಲಾದ ಸಹಾಯವನ್ನು, ಅವರ ಕೆಲಸವನ್ನು ತಕ್ಷಣ ಮಾಡಿಯೇ ಕಳುಹಿಸೋದು. ಹೀಗಾಗಿ ಕ್ಷೇತ್ರದಲ್ಲಿ ಜನಾನುರಾಗಿ ನಾಯಕರಾಗಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಪ್ರವಾಸದ ನಿಮಿತ್ತ, ಸಾಗರ ವ್ಯಾಪ್ತಿಯಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣ ಸಂತ್ರಸ್ತರ ಜನರನ್ನು ಸಾಂತ್ವಾನಿಸಿ, ಪರಿಹಾರ ದೊರಕಿಸಿಕೊಡುವಂತ ಕಾರ್ಯಕ್ಕಾಗಿ…

Read More

ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಅಡಿಯಲ್ಲಿ ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ (ಬಿಎಲ್‍ಸಿ), ಪಾಲುದಾರಿಕೆಯಲ್ಲಿ ಕೈಗೆಟಕುವ ಬಹುಮಹಡಿ ವಸತಿ ಯೋಜನೆ (ಎಎಚ್‍ಪಿ), ಕೈಗೆಟಕುವ ಬಾಡಿಗೆ ವಸತಿ ಯೋಜನೆ (ಎಆರ್‍ಎಚ್), ಬಡ್ಡಿ ಸಹಾಯಧನ (ಸಬ್ಸಿಡಿ) ವಸತಿ ಯೋಜನೆ (ಐಎಸ್‍ಎಸ್) ಈ 4 ವಸತಿ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಬಡ ಹಾಗೂ ಮಧ್ಯಮ ವರ್ಗದ ವಸತಿ ರಹಿತ (ಖಾಲಿ ನಿವೇಶನ/ಕಚ್ಚಾ ಮನೆ ಹೊಂದಿರುವ) ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ-2.0 (ನಗರ) ದಡಿ ಅರ್ಜಿ ಆಹ್ವಾನಿಸಿದೆ. ಭಾರತದಾದ್ಯಂತ ತಮ್ಮ ಹಾಗೂ ತಮ್ಮ ಕುಟುಂಬದ ಹೆಸರಿನಲ್ಲಿ ಸ್ವಂತ ಪಕ್ಕಾ ಮನೆಯನ್ನು ಹೊಂದಿರದ ಹಾಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದೇ ಯೋಜನೆ / ಇತರೆ ಇಲಾಖೆಯಿಂದ ಕಳೆದ 20 ವರ್ಷಗಳಲ್ಲಿ ಸಹಾಯಧನ ಪಡೆದು ಮನೆ ನಿರ್ಮಿಸದ ಎಲ್ಲಾ ಅರ್ಹ ವಸತಿ ರಹಿತ ಹಾಗೂ ನಿವೇಶನ ರಹಿತರು ವಸತಿ…

Read More

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ( PM Kisan Samman Nidhi Yojana ) ಪ್ರಯೋಜನ ಪಡೆಯಲು ರೈತರು ಈ ಕೆಳಗೆ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅವು ಏನು ಅಂತ ಮುಂದೆ ಓದಿ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ 6000 ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ಕೆಲ ನಿಯಮಗಳನ್ನು ರೈತರು ಪಾಲಿಸುವಂತೆ ಕೇಂದ್ರ ಕೃಷಿ ಇಲಾಖೆ ತಿಳಿಸಿದೆ. https://twitter.com/CBC_Bengaluru/status/1942903452931076183 ರೈತರ ಭವಿಷ್ಯದ ಸುರಕ್ಷತೆ, ಭಾರತದ ಕೃಷಿಯ ಸಮೃದ್ಧಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯಲು ರೈತರು ಈ ಕೆಳಗೆ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅದೆಂದರೇ.. ಇ-ಕೆವೈಸಿ ಪೂರ್ಣಗೊಳಿಸಿ. ಬ್ಯಾಂಕ್ ಖಾತೆ ಜೊತೆ ಆಧಾರ್ ಸಂಯೋಜನೆ ಖಾತ್ರಿಪಡಿಸಿಕೊಳ್ಳಿ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿಕೊಳ್ಳಿ. ಬಾಕಿ ಇರುವ ಭೂ ದಾಖಲೆಗಳ ವಿವಾದ ಪರಿಹರಿಸಿಕೊಳ್ಳಿ. pmkisan.gov.in ನಲ್ಲಿ ಫಲಾನುಭವಿ…

Read More

ಗುರುವಿನ ಅನುಗ್ರಹವಿಲ್ಲದಿದ್ದರೆ ಭಗವಂತನ ಅನುಗ್ರಹವಿಲ್ಲ ಎಂದು ಹೇಳುತ್ತಾರೆ. ಗುರುಭಗವಾನ್ ಅವರ ಆಶೀರ್ವಾದವಿದ್ದರೆ ಮಾತ್ರ ಜೀವನದಲ್ಲಿ ಅತ್ಯಂತ ವೇಗವಾಗಿ ಪ್ರಗತಿಯಾಗುತ್ತದೆ. ಗುರುವಿನ ಅನುಗ್ರಹವಿದ್ದರೆ ಮಾತ್ರ ಈ ದೇವರ ಆಶೀರ್ವಾದವಿರುತ್ತದೆ. ಅದೇ ರೀತಿ, ನಮಗೆ ಕಲಿಸಿದ ಗುರುವನ್ನು ನಾವು ಎಂದಿಗೂ ಮರೆಯಬಾರದು. ಆಧ್ಯಾತ್ಮಿಕವಾಗಿ ನಮಗೆ ಮಾರ್ಗದರ್ಶನ ನೀಡುವ ಗುರುವನ್ನು ಸಹ ನಾವು ಮರೆಯಬಾರದು. ಗುರುವಿಗೆ ಧನ್ಯವಾದ ಹೇಳಲು ಒಂದು ದಿನವಿದ್ದರೆ, ಅದು ಈ ಗುರು ಪೂರ್ಣಿಮೆ. ನಮ್ಮ ಜಾತಕದಲ್ಲಿ, ನಮ್ಮ ಜನ್ಮದಲ್ಲಿ ಕೋಟಿ ದೋಷಗಳಿದ್ದರೂ, ಗುರು ಮಾತ್ರ ಅವುಗಳನ್ನು ತೆಗೆದುಹಾಕಲು ಸಾಧ್ಯ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.…

Read More

ಬೆಂಗಳೂರು: ವೈದ್ಯಕೀಯ ಕೋರ್ಸ್ ಹೊರತುಪಡಿಸಿ, ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ, ಬಿಪಿಟಿ, ಎಎಚ್ಎಸ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಂಕ್ ಬಿಟ್ಟಿದ್ದು, ಜುಲೈ 15ರವರೆಗೆ ಅವಕಾಶ ನೀಡಿದೆ. ಈ ಮೂಲಕ ಯುಜಿಸಿಇಟಿಗೆ ಸಂಬಂಧಿಸಿದಂತೆ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಮೊದಲ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ಕೆಇಎ ಪ್ರಕಟಿಸಿದೆ. ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಬಿಎಸ್ ಸಿ ನರ್ಸಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ ಕೋರ್ಸ್ ಗಳಿಗೆ ಸಂಬಂಧಿಸಿದ ಸೀಟ್ ಮ್ಯಾಟ್ರಿಕ್ಸ್ ಸಂಬಂಧಪಟ್ಟ ಇಲಾಖೆಗಳಿಂದ ಇನ್ನೂ ಬಂದಿಲ್ಲ. ಹೀಗಾಗಿ ಮ್ಯಾಟ್ರಿಕ್ಸ್ ಬಂದ ನಂತರ ಈ ಕೋರ್ಸ್ ಗಳ ಪ್ರವೇಶಕ್ಕೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಣಕು ಫಲಿತಾಂಶವನ್ನು ಜುಲೈ 19ರಂದು ಪ್ರಕಟಿಸಲಾಗುವುದು. ಅದರ ಬಳಿಕ ಆದ್ಯತೆಗಳನ್ನು ಅದಲು- ಬದಲು ಮಾಡಿಕೊಳ್ಳಲು ಜು.22ರವರೆಗೆ ಅವಕಾಶ…

Read More

ಹೈದರಾಬಾದ್: ಐಪಿಎಲ್ ಟಿಕೆಟ್ ವಿತರಣೆಯ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​(ಎಚ್‌ಸಿಎ) ಅಧ್ಯಕ್ಷ ಜಗನ್ ಮೋಹನ್ ರಾವ್ ಅವರನ್ನು ಸಿಐಡಿ ಬಂಧಿಸಿದೆ. ಉಪ್ಪಲ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳ ಟಿಕೆಟ್‌ಗಳನ್ನು ಅಕ್ರಮವಾಗಿ ಬ್ಲಾಕ್ ನಲ್ಲಿ ಮಾರಾಟ ಮಾಡಿದಂತ ಆರೋಪದ ಮೇಲೆ ನಲ್ಲಕುಂಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ. ಉಚಿತ ಅಥವಾ ಅಧಿಕೃತ ವಿತರಣೆಗಾಗಿ ಮೀಸಲಾದ ಟಿಕೆಟ್‌ಗಳನ್ನು ಬೇರೆಡೆಗೆ ತಿರುಗಿಸಿ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ ಎಂಬುದಕ್ಕೆ ಪೊಲೀಸ್ ತನಿಖೆಯಲ್ಲಿ ಪುರಾವೆಗಳು ಕಂಡುಬಂದಿವೆ ಎಂದು ವರದಿಯಾಗಿದೆ. ಇದು ಪೂರ್ಣ ಸಾಮರ್ಥ್ಯದ ಹಕ್ಕುಗಳ ಹೊರತಾಗಿಯೂ ಅಭಿಮಾನಿಗಳಿಗೆ ಪ್ರವೇಶವನ್ನು ವಂಚಿತಗೊಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಆಡಳಿತಾತ್ಮಕ ಪ್ರಕ್ಷುಬ್ಧತೆ ಮತ್ತು ಆಡಳಿತ ಸಮಸ್ಯೆಗಳಿಂದ ಹಾನಿಗೊಳಗಾದ ಎಚ್‌ಸಿಎಗೆ ರಾವ್ ಅವರ ಬಂಧನವು ಮತ್ತೊಂದು ಹೊಡೆತವಾಗಿದೆ. ಈ ಘಟನೆಯು ಸಂಘದ ಕಾರ್ಯನಿರ್ವಹಣೆಯ ಬಗ್ಗೆ, ವಿಶೇಷವಾಗಿ ಐಪಿಎಲ್‌ನಂತಹ ಉನ್ನತ ಮಟ್ಟದ ಕಾರ್ಯಕ್ರಮಗಳ ಸಮಯದಲ್ಲಿ ಸಾರ್ವಜನಿಕರ ಪರಿಶೀಲನೆಯನ್ನು ಮತ್ತೆ ಕೆರಳಿಸಿದೆ. 2025 ರ ಇಂಡಿಯನ್…

Read More

ಧಾರವಾಡ : ಕನ್ನಡಕ್ಕಾಗಿ ಹೋರಾಟ ನಡೆಸಿದವರ ಮೇಲೆ ಪೊಲೀಸ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ಪೊಲೀಸ್ ಮತ್ತು ಜಿಲ್ಲಾಡಳಿತ ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು. ಅವರು ಇಂದು (ಜುಲೈ 9) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು. ಗೋಕಾಕ ಚಳುವಳಿಯ ಸ್ಮರಣೆಗಾಗಿ ಹುಬ್ಬಳ್ಳಿಯ ಗಬ್ಬೂರ ಬೈಪಾಸ್ ಹತ್ತಿರ ಇರುವ ಸರ್ಕಲ್‍ನಲ್ಲಿ ಡಾ. ರಾಜಕುಮಾರ ಅವರ ಸ್ಮಾರಕವನ್ನು ನಿರ್ಮಿಸಬೇಕು ಎಂಬುದು ಕನ್ನಡಪರ ಹೋರಾಟಗಾರರ ಬೇಡಿಕೆಯಾಗಿದೆ. ಈ ಕುರಿತು ಸರ್ಕಾರಕ್ಕೆ ನಿಯಮಾನುಸಾರ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ ಎಂದು ಹೇಳಿದರು. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕನ್ನಡ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವದರಿಂದ ಗ್ರಾಹಕರಿಗೆ ಭಾಷೆ ಸಮಸ್ಯೆ ಉಂಟಾಗುತ್ತಿದೆ. ಕೇಂದ್ರ ಸರ್ಕಾರ ಸ್ಥಳೀಯ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ಬ್ಯಾಂಕ್ ಉದ್ಯೋಗಿಗಳಿಗೆ ಸ್ಥಳೀಯ ಭಾಷೆ, ವಿಶೇಷವಾಗಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ರಾಜ್ಯ ಸರ್ಕಾರ…

Read More

ಧಾರವಾಡ: ಗ್ರಾಹಕನಿಗೆ ಮೋಸ ಮಾಡಿದಂತ ಬೆಂಗಳೂರಿನ ಲೈಫ್ ಸ್ಟೈಲ್ ಹಾಲಿಡೆಸ್ ಪ್ರೈ.ಲಿ ಗೆ ದಂಡ ವಿಧಿಸಿ ಮತ್ತು ಪರಿಹಾರ ಕೊಡಲು ಗ್ರಾಹಕರ ಆಯೋಗ ಆದೇಶಿಸಿದೆ. ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಅನಸುಯಮ್ಮ ವೃತ್ತಿಯಲ್ಲಿ ಖಾಸಗಿ ವ್ಯವಹಾರವನ್ನು ಮಾಡಿಕೊಂಡಿದ್ದಾರೆ. ಎದುರುದಾರರು ಪ್ರವಾಸ ಮತ್ತು ಹೊಟೇಲ ವಾಸ್ತವ್ಯದ ಸೇವೆಗಳನ್ನು ದೇಶ ಮತ್ತು ವಿದೇಶಗಳಲ್ಲಿ ಹೊಂದಿರುತ್ತಾರೆ. ಎದುರುದಾರರು ನೀಡಿದಂತಹ ಜಾಹಿರಾತುಗಳು ಮತ್ತು ಅವರು ಕೊಟ್ಟಂತಹ ಭರವಸೆಗಳನ್ನು ನಂಬಿ ದೂರುದಾರರು ಎದುರುದಾರರ ಕಂಪನಿಯಲ್ಲಿ ರೂ.1,35,000 ಗಳ ಪೈಕಿ ಶೇ.50 ಪಾವತಿಸಿ ಸದಸ್ಯತ್ವವನ್ನು ಪಡೆದಿದ್ದರು. ಮೇ-2024 ರಲ್ಲಿ ದೂರುದಾರರು ತಮ್ಮ 6 ಜನ ಕುಟುಂಬದ ಸದಸ್ಯರೊಂದಿಗೆ ಕೇರಳದ ಅಲ್ಲಾಪುಝಾ ಹೋಗುವ ನಿಮಿತ್ಯ ಎದುರುದಾರರಿಗೆ ಪೋನ್ ಮುಖಾಂತರಕರೆ ಮಾಡಿ ಹೊಟೇಲ್ ಬುಕ್ ಮಾಡಲು ಹೇಳಿದ್ದರು. ಅದರಂತೆ ಎದುರುದಾರರು ರೂ.20,000 ಪಾವತಿಸುವಂತೆ ದೂರುದಾರರಿಗೆ ಕೇಳಿ ಪಡೆದಿರುತ್ತಾರೆ. ದೂರುದಾರರು ಕೇರಳದಲ್ಲಿ ಬೋಟ್ ಹೌಸ್ ಬುಕ್ ಮಾಡಲು ಎದುರುದಾರರಿಗೆ ಕೇಳಿಕೊಂಡಾಗ ಹೆಚ್ಚಿನ ಹಣ ರೂ.9,000 ಪಾವತಿಸುವಂತೆ ದೂರುದಾರರಿಗೆ ಕೇಳಿದಾಗ ದೂರುದಾರರು ಅದನ್ನು ಎದುರುದಾರರ ಏಜೆಂಟ್‍ಗೆ ಪಾವತಿಸಿರುತ್ತಾರೆ.…

Read More

ಬಳ್ಳಾರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2025-26 ನೇ ಸಾಲಿಗೆ ವಿವಿಧ ಕಾರ್ಯಕ್ರಮಗಳಡಿ ಮಂಜೂರಾಗಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 11 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ. ಹುದ್ದೆಗಳ ವಿವರ: ಮಕ್ಕಳ ಆರೋಗ್ಯ ವಿಭಾಗ-01(ಎಂಬಿಬಿಎಸ್), ಇ-ಆಸ್ಪತ್ರೆ ವಿಭಾಗ-02(ಎಂಬಿಬಿಎಸ್), ಎಸ್‌ಎನ್‌ಸಿಯು ವಿಭಾಗ-06(ಎಂಬಿಬಿಎಸ್), ತಾಯಿ ಆರೋಗ್ಯ ವಿಭಾಗ-02(ಎಂಬಿಬಿಎಸ್), ಎನ್‌ಸಿಡಿ ವಿಭಾಗ-05(ಎಂಬಿಬಿಎಸ್), ಎನ್‌ಯುಹೆಚ್‌ಎಂ ವಿಭಾಗ-02(ಎಂಬಿಬಿಎಸ್), ನಮ್ಮ ಕ್ಲಿನಿಕ್-03(ಎಂಬಿಬಿಎಸ್) ಸೇರಿ ಒಟ್ಟು 21 ಮತ್ತು ಮಕ್ಕಳ ತಜ್ಞ ವೈದ್ಯರು-01, ಇತರೆ ತಜ್ಞ ವೈದ್ಯರು-01. ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಜುಲೈ 11 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ. ಗುತ್ತಿಗೆ ಆಧಾರದ ನೇಮಕಾತಿಯನ್ನು ರಾಷ್ಟಿçÃಯ ಆರೋಗ್ಯ ಅಭಿಯಾನದ ನಿಯಮಾನುಸಾರ ಗುತ್ತಿಗೆ ಆಧಾರದ ಮೇಲೆ ಮೇರಿಟ್ ಕಮ್ ರೋಷ್ಟರ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಗುತ್ತಿಗೆ ಆಧಾರದ…

Read More

ಬೆಂಗಳೂರು: ಎರಡನೇ ವರ್ಷದ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ Options ದಾಖಲಿಸಲು ಮತ್ತೆ ದಿನಾಂಕ ವಿಸ್ತರಿಸಲಾಗಿದೆ. ಜುಲೈ 10ರಂದು ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳ ಕೋರಿಕೆ ಮೇರೆಗೆ ದಿನಾಂಕ ವಿಸ್ತರಿಸಿದ್ದು, ಇದು ಕೊನೆ ಅವಕಾಶ ಎಂದು KEA ED ಪ್ರಸನ್ನ ಅವರು ತಿಳಿಸಿದ್ದಾರೆ. https://twitter.com/KEA_karnataka/status/1942958252863721503 ವೈದ್ಯಕೀಯ ಕೋರ್ಸ್ ಹೊರತುಪಡಿಸಿ, ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ, ಬಿಪಿಟಿ, ಎಎಚ್ಎಸ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಂಕ್ ಬಿಟ್ಟಿದ್ದು, ಜುಲೈ 15ರವರೆಗೆ ಅವಕಾಶ ನೀಡಿದೆ. ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಬಿಎಸ್ ಸಿ ನರ್ಸಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ ಕೋರ್ಸ್ ಗಳಿಗೆ ಸಂಬಂಧಿಸಿದ ಸೀಟ್ ಮ್ಯಾಟ್ರಿಕ್ಸ್ ಸಂಬಂಧಪಟ್ಟ ಇಲಾಖೆಗಳಿಂದ ಇನ್ನೂ ಬಂದಿಲ್ಲ. ಹೀಗಾಗಿ ಮ್ಯಾಟ್ರಿಕ್ಸ್ ಬಂದ ನಂತರ ಈ ಕೋರ್ಸ್ ಗಳ ಪ್ರವೇಶಕ್ಕೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ…

Read More