Subscribe to Updates
Get the latest creative news from FooBar about art, design and business.
Author: kannadanewsnow07
ಕೆಎನ್ಎನ್ಡಿಜಿಟಲ್ಡೆಸ್ಕ್: ದಿನಕ್ಕೊಂದು ಸೇಬಿನ ಸೇವನೆ ವೈದ್ಯರ ಭೇಟಿಯಿಂದ ದೂರವಿಸುತ್ತದೆ ಎಂಬ ಹೆಳೆಯ ಮಾತಿದೆ. ಅದು ನಿಜ ಕೂಡ ಹೌದು. ಸೇಬು ದೇಹದ ಆರೋಗ್ಯ ಕಾಪಾಡುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ ಸೇಬು ತಿನ್ನುವಾಗ ಅಪ್ಪಿತಪ್ಪಿಯೂ ಅದರ ಬೀಜವನ್ನು ಸೇವಿಸಬಾರದಂತೆ. ಹೌದು. ಸೇಬಿನ ಬೀಜ ಸೇವೆ ಕೆಲವೊಮ್ಮ ಜೀವಕ್ಕೆ ಕುತ್ತು ತರಬಹುದಂತೆ. ಇದರ ಬೀಜದಲ್ಲಿ ವಿಷಕಾರಿ ಅಂಶ ಸೂಸುವ ಶಕ್ತಿ ಇದೆ ಎಂದು ತಜ್ಞರು ಹೇಳುತ್ತಾರೆ. ಸೇಬಿನ ಬೀಜದಲ್ಲಿರುವ ಅಮಿಗ್ ಡಾಲಿನ್ ಎಂಬ ಅಂಶವು ಮಾನವನ ಜೀರ್ಣ ಪ್ರಕ್ರಿಯೆಯೊಂದಿಗೆ ಸೇರಿದಾಗ ಸೈನೈಡ್ ಉತ್ಪತ್ತಿಯಾಗುವ ಸಾಧ್ಯತೆ ಇದೆ ಅಂತೆ. ಸೈನೈಡ್ ಜೀವಕ್ಕೆ ಮಾರಣಾಂತಿಕ ಎಂಬ ಅಂಶ ಎಲ್ಲರಿಗೂ ಗೊತ್ತೇ ಇದೆ. ಸೈನೈಡ್ ಸಾವು ತರಬಲ್ಲದು ಎಂದು ತಜ್ಞರು ಸಂಶೋಧನೆ ಮೂಲಕ ಕಂಡುಕೊಂಡಿದ್ದಾರೆ. ಸೈನೈಡ್ ಎಷ್ಟು ಅಪಾಯಕಾರಿ ಎಂದರೆ ಇದು ದೇಹಕ್ಕೆ ಆಕ್ಸಿಜನ್ ಪೂರೈಕೆಯನ್ನು ನಿಲ್ಲಿಸಿಬಿಡುತ್ತದೆ. ಇದರಿಂದಾಗ ಜೀವಕ್ಕೆ ಅಪಾಯ ಉಂಟಾಗುತ್ತದೆ. ಹೀಗೆ ಸೇಬು ಸೇವನೆ ಮಾಡುವಾಗ ಆದಷ್ಟು ಜಾಗರೂಕರಾಗಿರಿ. ಸೇಬಿನಿಂದ…
JOB ALERT : ಕೆಪಿಎಸ್ಸಿ & ಬಿಎಂಟಿಸಿಯಿಂದ ಒಟ್ಟು 2,884 ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ಸಂಪೂರ್ಣ ಮಾಹಿತಿ!!
*ಅವಿನಾಶ್ ಆರ್ ಭೀಮಸಂದ್ರ ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್ಸಿ) 2023-245 ಸಾಲಿನ `ಗೆಜೆಟೆಡ್ ಪ್ರೊಬೇಷನರಿ’ 384 (ಕೆಎಎಸ್) ಹುದ್ದೆಗಳಿಗೆ ಆಯೋಗ ಅಧಿಸೂಚನೆ ಹೊರಡಿಸಿದೆ. ಮಾರ್ಚ್ 4 ರಿಂದ ಆನ್ಲೈನ್ ಅರ್ಜಿ ಸಲ್ಲಿಕೆಗೆ ಪ್ರಕ್ರಿಯೆ ಪ್ರಾರಂಭವಾಗಲಿದೆ. https://kannadanewsnow.com/kannada/gaganyaan-these-are-the-indigenous-astronauts-who-will-fly-from-india/ ಏಪ್ರಿಲ್ 3 ರಂದು ಅರ್ಜಿ ಸಲ್ಲಿಕೆ ಕೊನೆ ದಿನವಾಗಿದೆ. ಅರ್ಜಿ ಸಲ್ಲಿಸಲು ಶುಲ್ಕ ಸಾಮಾನ್ಯ ವರ್ಗದವರಿಗೆ 600 ರೂ.: ಪ್ರವರ್ಗ 2ಎ, 2ಬಿ, 3ಎ, 3ಬಿಗಳಿಗೆ 300 ರೂ.; ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ.; ಎಸ್ಸಿ, ಎಸ್ಟಿ, ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಮೇ 5 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳೂ (ಹೈ.ಕ) ಸೇರಿದಂತೆ ಒಟ್ಟು 384 ಹುದ್ದೆಗಳಲ್ಲಿ ಗ್ರೂಪ್-ಎ’ 159, ಗ್ರೂಪ್-‘ಬಿ’ 225 ಹುದ್ದೆಗಳಿವೆ. ಕಲ್ಯಾಣ ಕರ್ನಾಟಕ ವೃಂದದ ಒಟ್ಟು 77 ಹುದ್ದೆಗಳಿವೆ. ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಕನಿಷ್ಠ 21 ವರ್ಷ…
ಚಿಕ್ಕಮಗಳೂರು : ಲಾರಿ ಮತ್ತು ಖಾಸಗಿ ಬಸ್ ನಡುವೆ ಮುಖಾ ಮುಖಿಯಾದ ಪರಿಣಾಮ ಘಟನೆಯಲ್ಲಿ ಬಸ್ಸಿನಲ್ಲಿದ್ದ 20 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎನ್ನಲಾಗಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಮಾತೊಳ್ಳಿ ಬಳಿ ಘಟನೆ ನಡೆದಿದೆ. ಅಂದ ಹಾಗೇ ಎರಡು ಗಂಟೆ ಕಾದರೂಆಂಬುಲೆನ್ಸ್ ಬಾರದ ಗಾಯಾಳುಗಳು ಪರದಾಟ ಮಾಡಿದ ಸನ್ನಿವೇಶ ಕಂಡು ಬಂದಿದೆ. ಇನ್ನೂ ಘಟನೆ ಸಂಬಂಧ ಹಲವು ತಾಸುಗಳ ಕಾಲ ಸಂಚಾರ ವ್ಯವಸ್ಥೆಯಲ್ಲಿ ಕೂಡ ವ್ಯತ್ಯಯ ಉಂಟಾಗಿತ್ತು. https://kannadanewsnow.com/kannada/nasa-shares-amazing-image-of-earth-taken-from-space-from-himalayas-to-bahamas/ https://kannadanewsnow.com/kannada/cm-siddaramaiah-gives-important-information-about-the-implementation-of-old-pension-ops/ https://kannadanewsnow.com/kannada/breaking-govt-is-sitting-with-its-eyes-closed-sc-pulls-up-centre-over-patanjali-fake-advertisement-case/ ///////////////////////////////////////////////////////////////////////////////////////////////////////// ಫೆ.28 ರಂದು ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ಮಡಿಕೇರಿ: ತಲಕಾವೇರಿಯ ಶ್ರೀ ತಲಕಾವೇರಿ ದೇವಾಲಯಲ್ಲಿ ಫೆಬ್ರವರಿ, 28 ರಂದು ಮಧ್ಯಾಹ್ನ 2 ಗಂಟೆಯ ನಂತರ ಸ್ವಚ್ಛತಾ ಕಾರ್ಯದ ಪ್ರಯುಕ್ತ ಶ್ರೀ ತಲಕಾವೇರಿ ದೇವಾಲಯದ ಪ್ರವೇಶ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಎನ್.ಜಿ ಅವರು ಕೋರಿದ್ದಾರೆ.
*ಅವಿನಾಶ್ ಆರ್ ಭೀಮಸಂದ್ರ ಬೆಂಗಳೂರು: ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ( ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳು) ವತಿಯಿಂದ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಆಯೋಜಿಸಿರುವ “ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ”ವನ್ನು ಉದ್ಘಾಟಿಸಿ ಮಾತನಾಡಿದರು. https://kannadanewsnow.com/kannada/rbi-imposes-rs-3-crore-penalty-on-sbi-canara-bank-city-union-bank-for-violating-norms/ ಇದೇ ವೇಳೆ ಅವರು ಮಾತನಾಡಿ, ರಾಜ್ಯದ ಜನತೆಯ ಪರವಾಗಿ ನಾವು ನೀವು ಕೆಲಸ ಮಾಡಬೇಕಾಗಿದೆ, ನನಗೆ ಎರಡನೇ ಬಾರಿ ಅಧಿಕಾರ ನಡೆಸಲು ನೀವು ಮತ್ತು ನಿಮ್ಮ ಕುಟುಂಬದವರು ಸಹಕಾರ ನೀಡಿದ್ದೀರಾ ಅಂತ ತಿಳಿಸಿದರು. ಇನ್ನೂ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖ ಮಾಡಿದ ಸಿಎಂ ಈ ದೇಶಕ್ಕೆ ಹೊಸ ಸಂವಿಧಾನ ಜಾರಿಗೆ ಬಂದಿದ್ದು, ಅವರು ಹೇಳಿರುವ ಪ್ರಕಾರ ವೈವಿದ್ಯತೆಯ ಸಮಾಜಕ್ಕೆ ಕಾಲಿಡುತ್ತಿದ್ದು, ನಮ್ಮ ಸಮಾಜದಲ್ಲಿ ಸಾಮಾಜಿಕ ಅಸಮಾನತೆ ಇದೇ, ಆರ್ಥಿಕ ಅಸಮಾನತೆ ಇದೇ, ರಾಜಕೀಯ ಸ್ವಾತಂತ್ರ್ಯದ ಅಡಿಯಲ್ಲಿ ಒಂದು ಓಟು ಒಂದು ಮೌಲ್ಯ, ಇದು ಎಲ್ಲರಿಗೂ ಅನ್ವಯ ಆಗುತ್ತದೆ ಅಂತ ಹೇಳಿದರು. ಇನ್ನೂ ಇದು…
ಕೆಎನ್ಎನ್ಡಿಜಿಟಲ್ಡೆಸ್ಕ್: ನಿಮ್ಮ ಮೊಬೈಲ್ ಅಪ್ಪಿತಪ್ಪಿ, ಕೈಜಾರಿ ನೀರನಲ್ಲಿ ಬಿದ್ದರೆ ಅಥವಾ ಬಾತ್ರೂಮ್ನಲ್ಲಿ ಬಿದ್ದರೆ ಮೊಬೈಲ್ ಹಾಳಾಗಿಹೋಯಿತು ಎಂದು ನೀವೇ ನಿರ್ಧಾರ ಮಾಡಬೇಡಿ. ಬದಲಾಗಿ ನಾವು ಹೇಳು ಈ ಒಂದು ಟಿಪ್ಸ್ ಫಾಲೋ ಮಾಡಿ ನೋಡಿ, ನಿಮ್ಮ ಮೊಬೈಲ್ ಮತ್ತೆ ಮೊದಲಿನಂತೆ ರೆಡಿಯಾಗಿಬಿಡುತ್ತದೆ. ಅಂದಹಾಗೆ ನಾವು ಹೇಳುವ ಈ ಕೆಲಸ ಮೊಬೈಲ್ ನೀರಿಗೆ ಬಿದ್ದ ತಕ್ಷಣವೇ ಮಾಡಬೇಕು. ತಡಮಾದೇ ಹೀಗೆ ಮಾಡಿದರೆ ಮತ್ತೆ ಎಂದಿನಂತೆ ಬಳಸಬಹುದು. ಮೊಬೈಲ್ ನೀರಿಗೆ ಬಿದ್ದ ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ. ಮೊಬೈಲ್ನ ಬ್ಯಾಟರಿ, ಬ್ಯಾಕ್ ಕ್ಯಾಪ್ ಹೀಗೆ ಎಲ್ಲ ಬಿಡಿಭಾಗಗಳನ್ನು ಬೇರ್ಪಡಿಸಿ. ನಂತರ ಒಂದು ತೆಳುವಾದ ಒಣಗಿದ ಬಟ್ಟೆಯಿಂದ ಎಷ್ಟು ಸಾಧ್ಯವೋ ಅಷ್ಟು ಒಣಗುವಂತೆ ಮೊಬೈಲ್ ಅನ್ನು ಒರೆಸಿ, ನೀರು ಹೋಗುವವರೆಗೂ ಒರೆಸಿ. ಮೊಬೈಲ್ನ ಹೆಡ್ ಫೋನ್ ರಂದ್ರ ಹಾಗು ಸ್ಪೀಕರ್, ಚಾರ್ಜಿಂಗ್ ರಂದ್ರದಲ್ಲಿ ನೀರು ಸೇರಿದ್ದರೂ ಊದಿ ಊದಿ ಒರೆಸಿಕೊಳ್ಳಿ. ಇಷ್ಟೆಲ್ಲ ಮಾಡಿದ ನಂತರ ಅಡುಗೆಮನೆಯಲ್ಲಿರುವ ಅಕ್ಕಿಡಬ್ಬದಲ್ಲಿ ಮೊಬೈಲ್ಅನ್ನು ಎರಡು ದಿನಗಳ ಕಾಲ ಇಟ್ಟುಬಿಡಿ.…
ಕೆಎನ್ಎನ್ಡಿಜಿಟಲ್ಡೆಸ್ಕ್: ಅರಿಶಿನ ಅದೆಷ್ಟೋ ರೋಗಗಳಿಗೆ ಔಷಧಿ. ಇದರಲ್ಲಿ ಅನೇಕ ವಿಟಮಿನ್ ಹಾಗು ಪೋಷಕಾಂಶಗಳಿವೆ. ಅರಿಶಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನಿಜ. ಇನ್ನು ಕೊರೊನಾ ಸಮಯದಲ್ಲಿ ಅರಿಶಿನ ಸೇವನೆ ಆರೋಗ್ಯಕ್ಕೆ ರಕ್ಷಾಕವಚವಾಗಿದೆ. ಆದರೆ ಇದೇ ಅರಿಶಿನ ಕೆಲ ರೋಗ ಲಕ್ಷಣಗಳಿಗೆ ಒಗ್ಗುವುದಿಲ್ಲ. ಯಾರೆಲ್ಲಾ ಅರಿಶಿನ ಸೇವನೆ ಮಾಡಬಾರದು ಎಂದು ಮುಂದೆ ತಿಳಿದುಕೊಳ್ಳೋಣ. ಕಾಮಾಲೆ: ಕಾಮಾಲೆ ಇರುವವರು ಅರಿಶಿನವನ್ನು ಸೇವಿಸಬಾರದು. ಈ ರೋಗದಿಂದ ಬಳಲುತ್ತಿರುವವರು ಅರಿಶಿನ ಇಲ್ಲದ ಊಟ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಈ ಕಾಯಿಲೆಯಿಂದ ಸುಧಾರಿಸಿಕೊಂಡ ನಂತರವೂ ಅರಿಶನ ಸೇವನೆಯನ್ನು ವೈದ್ಯರ ಸಲಹೆ ಮೇರೆಗೆ ಸೇವಿಸಿ. ರಕ್ತಸ್ರಾವ: ಯಾವುದೋ ಕಾರಣದಿಂದ ಮೂಗಿನಿಂದ ಅಥವಾ ದೇಹದ ಇತರ ಭಾಗದಿಂದ ರಕ್ತಸ್ರಾವ ಆಗುತ್ತಿದ್ದರೆ ಇಂತವರು ಆದಷ್ಟು ಅರಿಶಿನ ಸೇವನೆಯನ್ನು ಕಡಿಮೆ ಮಾಡಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯವು ದೇಹಕ್ಕೆ ಹಾನಿಯುಂಟು ಮಾಡಬಹುದು. ಹಾಗು ಅರಿಶಿನವು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮಧುಮೇಹ: ಮಧುಮೇಹ ಇರುವವರು ಅರಿಶಿನ ಸೇವನೆಯನ್ನು ಸೀಮಿತಗೊಳಿಸಬೇಕು. ಕಾರಣ ಏನೆಂದರೆ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ…
ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದರು, ಅಲ್ಲಿ ಗಗನಯಾನ ಮಿಷನ್ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಹೋಗಲಿರುವ ನಾಲ್ವರು ಗಗನಯಾತ್ರಿಗಳೊಂದಿಗೆ ಸಂವಾದ ನಡೆಸಿದರು. https://kannadanewsnow.com/kannada/st-somashekar-shivaram-hebbar-resign-as-mlas-ahead-of-lok-sabha-polls/ https://kannadanewsnow.com/kannada/all-three-congress-candidates-will-win-rajya-sabha-polls-siddaramaiah/ https://kannadanewsnow.com/kannada/st-somashekar-cross-voting-bjp-yuva-morcha-to-gherao-mlas-house/ ಚಂದ್ರನ ದಕ್ಷಿಣ ಧ್ರುವದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ನಾವು ಇತಿಹಾಸವನ್ನು ರಚಿಸಿದ್ದೇವೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು. ಈಗ, ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ, ನಾವು ಮತ್ತೊಂದು ಐತಿಹಾಸಿಕ ಪ್ರಯಾಣಕ್ಕೆ ಸಾಕ್ಷಿಯಾಗುತ್ತಿದ್ದೇವೆ. ಸ್ವಲ್ಪ ಸಮಯದ ಮೊದಲು, ದೇಶವು ತನ್ನ ನಾಲ್ಕು ಗಗನಯಾನ ಪ್ರಯಾಣಿಕರೊಂದಿಗೆ ಮೊದಲ ಬಾರಿಗೆ ಪರಿಚಯವಾಯಿತು. 2035 ರ ವೇಳೆಗೆ ಭಾರತವು ಬಾಹ್ಯಾಕಾಶದಲ್ಲಿ ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಹೊಂದಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. https://kannadanewsnow.com/kannada/breaking-ccb-raids-hookah-bars-open-despite-ban-in-bengaluru-7-arrested/ ಇದು ಕೇವಲ ನಾಲ್ಕು ಹೆಸರುಗಳು ಮತ್ತು ನಾಲ್ಕು ಮನುಷ್ಯರಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಈ ನಾಲ್ಕು ಶಕ್ತಿಗಳು 140 ಕೋಟಿ ಅಭಿವ್ಯಕ್ತಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುತ್ತವೆ. 40…
ಬೆಂಗಳೂರು: ಕಾಂಗ್ರೆಸ್ ನ ಅಜಯ ಮಾಕನ್, ಚಂದ್ರಶೇಖರ್ ಹಾಗೂ ಸೈಯ್ಯದ್ ನಾಸಿರ್ ಹುಸೇನ್, ಮೂರೂ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. https://kannadanewsnow.com/kannada/rrb-rpf-notification-for-si-constable-posts-fake-pib-fact-check-clarification/ https://kannadanewsnow.com/kannada/st-somashekar-shivaram-hebbar-resign-as-mlas-ahead-of-lok-sabha-polls/ ಆಮಿಷಗಳು ಹಾಗೂ ಬೆದರಿಕೆ ಹಾಕಿದ್ದರಿಂದ ಒಟ್ಟಿಗಿದ್ದು ಮತ ಚಲಾವಣೆ : ಚುನಾವಣೆಗೆ ನಿಲ್ಲುವವರೆಲ್ಲಾ ಗೆಲ್ಲುತ್ತೇವೆ ಎಂದೇ ಹೇಳುವುದು. ಸೋಲುತ್ತೇವೆ ಎಂದು ಯಾರೂ ನಿಲ್ಲುವುದಿಲ್ಲ. ಆದರೆ ಅವರಿಗೆ ಎಷ್ಟು ಮತಗಳು ಬೇಕೋ ಅಷ್ಟು ಮತಗಳಿಲ್ಲ. ಅವರಿಗಿರುವುದೇ ಇರುವುದೇ 19 ಮತಗಳು. ಅದರಿಂದ ಅವರು ಅಭ್ಯರ್ಥಿಯನ್ನು ನಿಲ್ಲಿಸಬೇಕಿರಲಿಲ್ಲ. ಆದರೂ ನಿಲ್ಲಿಸಿದ್ದಾರೆ. ನಮ್ಮ ಎಲ್ಲಾ ಶಾಸಕರು ನಿಷ್ಠೆಯಿಂದ ಕಾಂಗ್ರೆಸ್ ಪರವಾಗಿ ಮತ ಹಾಕಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲುವುದು. ಜೆಡಿಎಸ್ ಐದನೇ ಅಭ್ಯರ್ಥಿಯನ್ನು ನಿಲ್ಲಿಸಿದ್ದರಿಂದ ನಾವೆಲ್ಲ ಒಟ್ಟಿಗೆ ಇದ್ದು ಮತ ಹಾಕಬೇಕಾಯಿತು. ನಮ್ಮ ಶಾಸಕರಿಗೆ ಆಸೆ ಆಮಿಷಗಳನ್ನು ಒಡ್ಡುವುದು ಬೆದರಿಕೆ ಹಾಕುವುದನ್ನು ಮಾಡುತ್ತಿದ್ದರು. ಅದಕ್ಕೆ ಎಲ್ಲರೂ ಒಟ್ಟಿಗಿದ್ದು ಮತ ಚಲಾಯಿಸಿದ್ದೇವೆ ಎಂದರು. https://kannadanewsnow.com/kannada/kpsc-and-bmtc-invites-applications-for-2884-vacancies-heres-the-complete-information/ ಆತ್ಮ ಎಲ್ಲಿದೆ? : ಜೆಡಿಎಸ್ ಗೆ ಆತ್ಮಸಾಕ್ಷಿ…
ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ನಲ್ಲಿ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್ (ಎಸ್ಐ) ಮತ್ತು ಕಾನ್ಸ್ಟೇಬಲ್ ಹುದ್ದೆಗಳಿಗೆ ಯಾವುದೇ ನೇಮಕಾತಿ ಪ್ರಕ್ರಿಯೆಯನ್ನು ಘೋಷಿಸಿಲ್ಲ ಎಂದು ಕೇಂದ್ರ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸೋಮವಾರ ಸಂಜೆ ತಿಳಿಸಿದೆ ಮತ್ತು ವಿವಿಧ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಪ್ರಸಾರವಾಗುತ್ತಿರುವ ಅಧಿಸೂಚನೆ ನಕಲಿ ಎಂದು ದೃಢಪಡಿಸಿದೆ. https://kannadanewsnow.com/kannada/kpsc-and-bmtc-invites-applications-for-2884-vacancies-heres-the-complete-information/ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ನಲ್ಲಿ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯದ ಹೆಸರಿನಲ್ಲಿ ಹೊರಡಿಸಲಾದ #Fake ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಂತಹ ಯಾವುದೇ ನೋಟಿಸ್ ಅನ್ನು @RailMinIndia ನೀಡಿಲ್ಲ… ನಿಮ್ಮ ವೈಯಕ್ತಿಕ / ಆರ್ಥಿಕ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ” ಎಂದು ಪಿಐಬಿ ಫ್ಯಾಕ್ಟ್ ಚೆಕ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. https://kannadanewsnow.com/kannada/state-govt-gives-important-information-to-yuvanidhi-scheme-beneficiaries-instructions-to-do-this-immediately/ ಆರ್ಪಿಎಫ್ನಲ್ಲಿ ಖಾಲಿ ಇರುವ 4660 ಹುದ್ದೆಗಳಿಗೆ ಆರ್ಆರ್ಬಿಗಳು ನೇಮಕಾತಿ ಮಾಡಿಕೊಳ್ಳಲಿವೆ – 452 ಸಬ್ ಇನ್ಸ್ಪೆಕ್ಟರ್ ಮತ್ತು 4208 ಕಾನ್ಸ್ಟೇಬಲ್ಗಳು – ಮತ್ತು ಅರ್ಜಿ ವಿಂಡೋ ಏಪ್ರಿಲ್…
ಬೆಂಗಳೂರು : ರಾಜ್ಯ ಸರ್ಕಾರವು ಯುವನಿಧಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯನ್ನು ನೀಡಿದ್ದು, ಒಂದು ವೇಳೆ ಅವರು ಈ ಕೆಲಸವನ್ನು ಮಾಡದೇ ಹೋದರೆ ಹಣವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಅಂತ ತಿಳಿಸಿದೆ. “ಯುವನಿಧಿ ಯೋಜನೆ ಅಡಿಯಲ್ಲಿ ಈಗಾಗಲೇ ಸೇವಾಸಿಂಧು ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡ ಪದವೀಧರರು/ ಸ್ನಾತಕೋತ್ತರ ಪದವೀಧರರು ಮತ್ತು ಡಿಪ್ಲೋಮಾದಾರರು ಅವರ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿನಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ 2024 ರಲ್ಲಿ ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ. ಫೆಬ್ರವರಿ 2024 ರಲ್ಲಿ ಪ್ರಯೋಜನ ಪಡೆಯಲು ಅಭ್ಯರ್ಥಿಗಳು 29-02-2024 ರೊಳಗೆ ತಾನು ನಿರುದ್ಯೋಗಿ ಎಂದು ಕೆಳಗಿನ ಲಿಂಕ್ ಮೂಲಕ ಕಡ್ಡಾಯವಾಗಿ ಸ್ವಯಂ ಘೋಷಣೆ ಮಾಡಬೇಕು. https://kannadanewsnow.com/kannada/watch-video-uks-first-lady-akshata-murti-buys-a-book-on-the-street-video-goes-viral/ https://kannadanewsnow.com/kannada/gaganyaan-these-are-the-indigenous-astronauts-who-will-fly-from-india/ https://kannadanewsnow.com/kannada/rbi-approves-amazon-pay-payments-aggregator/ ಸೂಚನೆ : ಸೂಚಿತ ಸಮಯದೊಳಗೆ ಮಾಸಿಕ ಸ್ವಯಂ ಘೋಷಣೆ ಮಾಡದೇ ಹೋದಲ್ಲಿ ‘ಯುವನಿಧಿ’ ನೇರ ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹಗೊಳಿಸಲಾಗುವುದು ಅಂತ ತಿಳಿಸಿದೆ.