Author: kannadanewsnow07

ಬೆಂಗಳೂರು: ಬಸವನಗುಡಿಯ ಹೆಸರಾಂತ ‘ಅರುಣಾ ಮ್ಯೂಸಿಕಲ್ಸ್’ ಎಂಬ ಸಂಗೀತ ವಾದ್ಯಗಳ ಸಾಮ್ರಾಜ್ಯದ ಅಧಿಪತಿ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಕಸ್ತೂರಿ ಶಂಕರ್ ಅವರ ಪತಿ ಶಂಕರ್ ಅವರು ಇಂದು ನಿಧನರಾಗಿದ್ದಾರೆ. ಸಂಗೀತ ಲೋಕಕ್ಕೆ ಇವರ ಕೊಡುಗೆ ಅಪಾರ. ದಕ್ಷಿಣ ಭಾರತದ ಖ್ಯಾತ ಹಾರ್ಮೋನಿಯಂ ವಾದಕರಾದ ಹಾರ್ಮೋನಿಯಂ ಅರುಣಾಚಲಪ್ಪ ನವರ ಪುತ್ರರೇ ಈ ಶಂಕರ್. ಗಾಯನ ಲೋಕದಲ್ಲಿ ಶಂಕರ್ ಅವರ ಧರ್ಮಪತ್ನಿ ಕಸ್ತೂರಿ ಶಂಕರ್ ಅವರ ಕೊಡುಗೆ ಪ್ರತೀ ಕನ್ನಡಿಗನಿಗೂ ತಿಳಿದಿರುವಂಥದ್ದೇ. ಬಹಳಷ್ಟು ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಸೇವೆ ಸಲ್ಲಿಸಿರುವ ಕಸ್ತೂರಿ ಶಂಕರ್ ಅವರು ‘ಕಸ್ತೂರಿ ಶಂಕರ್ ಆರ್ಕೆಸ್ಟ್ರಾ’ ಮೂಲಕ 38 ವರ್ಷಗಳ ಕಾಲ ಕನ್ನಡಿಗರನ್ನ ರಂಜಿಸಿರುವುದು ಕಡಿಮೆ ಸೇವೆಯೇ..?! ಖ್ಯಾತ ಸಂಗೀತ ನಿರ್ದೇಶಕ ಹಾಗೂ ನಟ ಸಾಧು ಕೋಕಿಲ ಇವರ ಗರಡಿಯ ಮತ್ತೊಂದು ರತ್ನ. ಹೀಗೆ ಹತ್ತಾರು ಪ್ರತಿಭೆಗಳನ್ನ ಸಂಗೀತ ಲೋಕಕ್ಕೆ ಕೊಡುಗೆಯಾಗಿ ಕೊಟ್ಟಂತಹ ಹಿರಿಮೆ ಗರಿಮೆ ಈ ಕುಟುಂಬದ್ದು. ಮಡದಿಗೆ ತಕ್ಕ ಪತಿಯಾಗಿ ಬದುಕಿನುದ್ದಕ್ಕೂ ಬಹುದೊಡ್ಡ ಶಕ್ತಿಯಾಗಿ ಬೆನ್ನಿಗೆ ನಿಂತ…

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಮನೆಯಲ್ಲಿ ಧನಲಕ್ಷ್ಮೀಯು ಸ್ಥಿರವಾಗಿ ನಿಲ್ಲಬೇಕೆಂದರೆ ಯಾವುದೇ ಕಾರಣಕ್ಕೂ ಈ ಕೆಲವೊಂದು ತಪ್ಪುಗಳನ್ನ ಮಾಡಬಾರದು. ಹಾಗಾದರೆ ಮನೆಯಲ್ಲಿ ಹಣವನ್ನು ಎಣಿಸುವ ಸಮಯದಲ್ಲಿ ಯಾವ ತಪ್ಪನ್ನೂ ಮಾಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಬೀರುವಿನಲ್ಲಿ ಇರುವ ಹಣವನ್ನು ಅಥವಾ ಹೊರಗಡೆಯಿಂದ ತಂದ ಹಣವನ್ನು ಹಾಸಿಗೆ ಮೇಲೆ ಕುಳಿತುಕೊಂಡು ಎನಿಸುತ್ತಿರುತ್ತೇವೆ, ನೆಲದ ಮೇಲೆ ಕುಳಿತುಕೊಂಡು ಹಣವನ್ನು ಎಣಿಕೆ ಮಾಡುವುದು, ಟೇಬಲ್ ಮೇಲೆ ಕುಳಿತುಕೊಂಡು ಎಣಿಕೆ ಮಾಡುತ್ತಿರುತ್ತೇವೆ, ಆದರೆ ಈ ರೀತಿಯ ತಪ್ಪನ್ನು ಎಂದಿಗೂ ಮಾಡಬಾರದು. ಈ ರೀತಿ ತಪ್ಪನ್ನು ಮಾಡಿದರೆ ಧನಲಕ್ಷ್ಮೀಯು ಮನೆಯಲ್ಲಿ ಸ್ಥಿರವಾಗಿ ವಾಸಿಸುವುದಿಲ್ಲ ಹಾಗೂ ಕೋಪಗೊಳ್ಳುತ್ತಾಳೆ. ಸಾಮಾನ್ಯವಾಗಿ ಹಣವು ಲಕ್ಷ್ಮಿಯ ಪ್ರಧಾನವಾಗಿರುತ್ತದೆ. ಹಣವನ್ನು ಲಕ್ಷ್ಮಿಯ ಸ್ವರೂಪ ಎಂದು ಪೂಜೆ ಮಾಡುವುದರಿಂದ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು. ಹಣವನ್ನು ಎಣಿಸುವಾಗ ನೆಲದ ಮೇಲೆ ಒಂದು ಚಾಪೆಯನ್ನು ಹಾಸಿಕೊಂಡು ಅದರ ಮೇಲೆ ಒಂದು…

Read More

ಬೆಂಗಳೂರು :ಅತಿಥಿ ಉಪನ್ಯಾಸಕರಿಗೆ ಸೇವಾನುಭವದ ಆಧಾರದಲ್ಲಿ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದು ಮಾತ್ರವಲ್ಲದೆ ಇನ್ನಿತರ ಕೆಲವು ಸೌಲಭ್ಯಗಳನ್ನು ವಿಸ್ತರಿಸಿದ್ದಾರೆ. ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು‌ ಮಾಜಿ MLC ಪುಟ್ಟಣ್ಣ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದ ಜತೆ ಅವರ ಬೇಡಿಕೆಗಳ ಕುರಿತು ಚರ್ಚಿಸಿದರು. ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರ್ಕಾರ ಮಾನವೀಯ ಕಾಳಜಿ ಹೊಂದಿದೆ. ಆದರೆ ಸೇವಾ ಭದ್ರತೆ ನೀಡಲು ಕಾನೂನು ತೊಡಕು ಇರುವುದರಿಂದ ಸಾಧ್ಯವಾಗುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ಅತಿಥಿ ಉಪನ್ಯಾಸಕರ ಪರವಾಗಿ ತಾವು ದನಿ ಎತ್ತಿ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದನ್ನು ಸ್ಮರಿಸಿಕೊಂಡ ಮುಖ್ಯಮಂತ್ರಿಗಳು, ಇದೀಗ ಎರಡೇ ವರ್ಷದೊಳಗೆ ನಮ್ಮ ಸರ್ಕಾರ ಮತ್ತೆ ನಿಮ್ಮ ವೇತನ ಹೆಚ್ಚಳಕ್ಕೆ ಮುಂದಾಗಿದೆ. ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿದೆ ಎಂದು ತಿಳಿಸಿದರು. ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿದವರಿಗೆ 5 ಸಾವಿರ ರೂ., 5 ರಿಂದ 10 ವರ್ಷದ…

Read More

ಗಾಜಾ: ಉತ್ತರ ಗಾಜಾದಲ್ಲಿ ಕಳೆದ 3 ತಿಂಗಳಲ್ಲಿ ನಡೆದ ಯುದ್ಧದಿಂದ ಸುಮಾರು 8,000 ಹಮಾಸ್ ಬಂದೂಕುಧಾರಿಗಳು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನೆ ಮಾಹಿತಿ ನೀಡಿದೆ. ನೆರೆಯ ಲೆಬನಾನ್ ಮತ್ತು ಮಧ್ಯಪ್ರಾಚ್ಯದ ಇತರ ದೇಶಗಳಿಗೆ ಇಸ್ರೇಲ್-ಹಮಾಸ್ ಯುದ್ಧದ ಸೋರಿಕೆಯನ್ನು ತಡೆಯುವ ಪ್ರಯತ್ನದಲ್ಲಿ US ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ರಾಜತಾಂತ್ರಿಕರು ಈ ಪ್ರದೇಶಕ್ಕೆ ಪ್ರತ್ಯೇಕ ಭೇಟಿಗಳನ್ನು ನೀಡಿದ್ದರಿಂದ ಈ ಬೆಳವಣಿಗೆಯು ಸಂಭವಿಸಿದೆ. ಕದನ ವಿರಾಮಕ್ಕಾಗಿ ಅಂತರರಾಷ್ಟ್ರೀಯ ಒತ್ತಡ ಮತ್ತು ಗಾಜಾಕ್ಕೆ ಮಾನವೀಯ ನೆರವನ್ನು ತಳ್ಳುವ ಮಧ್ಯೆ, ಇಸ್ರೇಲ್ ರಕ್ಷಣಾ ಪಡೆಗಳ (IDF) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ಗಾಜಾದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಹಮಾಸ್‌ನ ಜಾಲವನ್ನು ಕೆಡವಲು ಇದೇ ರೀತಿಯ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಿದರು. https://kannadanewsnow.com/kannada/4-4-magnitude-quake-jolts-japans-noto-region/ https://kannadanewsnow.com/kannada/aditya-l1-went-as-per-plan-focus-now-on-gaganyaan-isro-chief-somanath-after-solar-mission-success-2/ https://kannadanewsnow.com/kannada/4-4-magnitude-quake-jolts-japans-noto-region/ https://kannadanewsnow.com/kannada/aditya-l1-went-as-per-plan-focus-now-on-gaganyaan-isro-chief-somanath-after-solar-mission-success-2/

Read More

ಟೋಕಿಯೊ: ಜಪಾನ್‌ನ ನೋಟೊ ಪೆನಿನ್ಸುಲಾದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ. ಜಪಾನ್‌ನ ನೋಟೊ ಪೆನಿನ್ಸುಲಾದಲ್ಲಿ ಶನಿವಾರ ರಾತ್ರಿ 11:20ಕ್ಕೆ ಭೂಮೇಲ್ಮೈಯಿಂದ 10 ಕಿಮೀ ಆಳದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಸಂಸ್ಥೆ ಮಾಹಿತಿ ನೀಡಿದೆ. ಭೂಕಂಪದಿಂದಾಗಿ ಇಲ್ಲಿ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ. https://kannadanewsnow.com/kannada/aditya-l1-went-as-per-plan-focus-now-on-gaganyaan-isro-chief-somanath-after-solar-mission-success/

Read More

ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ನಡೆದ ಪ್ರಮುಖ ನಿರ್ಧಾರಗಳ ಹೈಲೆಟ್ಸ್‌ ಪಾಯಿಂಟ್ಸ್‌ ಇಲ್ಲಿದೆ. 1) ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ – 2023ಕ್ಕೆ ಘಟನೋತ್ತರ ಅನುಮೋದನೆ. 2) ಬಿಬಿಎಂಪಿ ವ್ಯಾಪ್ತಿಯಲ್ಲಿ ರೂ.800 ಕೋಟಿ ಅನುದಾನದಲ್ಲಿ 43 ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೊಳ್ಳುವ ಕ್ರಿಯಾಯೋಜನೆಗೆ ಅನುಮೋದನೆ. 3) 6 ಜಿಲ್ಲೆಗಳಲ್ಲಿ 6 ಬಹುಉತ್ಪನ್ನ ಶೀಥಲ ಗೃಹಗಳನ್ನು ರೂ.65.97 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ. 4) ASCAD ಯೋಜನೆಯಡಿ ರಾಜ್ಯದ ಜಾನುವಾರುಗಳಿಗೆ ಜಂತುನಾಶಕ ಔಷಧಿಗಳನ್ನು ರೂ.31 ಕೋಟಿಗಳ ವೆಚ್ಚದಲ್ಲಿ ವಿತರಿಸುವ ಕಾರ್ಯಕ್ರಮಕ್ಕೆ ನಿರ್ಧಾರ. 5) 16ನೇ ಹಣಕಾಸು ಆಯೋಗಕ್ಕೆ ಜ್ಞಾಪನಾ ಪತ್ರವನ್ನು ತಯಾರಿಸಲು ಮೂವರು ಸದಸ್ಯರನ್ನು ಒಳಗೊಂಡ ತಾಂತ್ರಿಕ ಕೋಶ ರಚನೆಗೆ ನಿರ್ಧಾರ. 6) ಹುಲಿಯುಗುರು, ಆನೆ ದಂತ, ಜಿಂಕೆ ಕೊಂಬು ಸೇರಿದಂತೆ ಅಕ್ರಮವಾಗಿಟ್ಟುಕೊಂಡ ಯಾವುದೇ…

Read More

ಸುದ್ದಿ ಕೃಪೆ: ಪ್ರಜಾಕಹಳೆ, ಕನ್ನಡ ದಿನ ಪತ್ರಿಕೆ, ತುಮಕೂರು. ಸಂಪಾದಕರು : ರಘು ಎ.ಎನ್‌ ತುಮಕೂರು: ಮದುವೆಯಾಗದ ಯುವತಿ ಗರ್ಭಿಣಿ ಯಾಗಿರುವ ವಿಚಾರ ಮುಚ್ಚಿಟ್ಟು ಸಮಾಜಕ್ಕೆ ಹೆದರಿ ಸ್ವಯಂ ಹೆರಿಗೆ ಮಾಡಿಕೊಂಡು ಹಸುಗೂಸನ್ನು ಬಯ ಲಲ್ಲಿ ಎಸೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೂಲತಃ ತುಮಕೂರು ತಾಲ್ಲೂಕಿನ ಗೌರೀಪುರ ಗ್ರಾಮದ 25 ವರ್ಷದ ಯುವತಿ, ಅರೇಗುಜ್ಜನಹಳ್ಳಿಯ ಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದಳು ಎನ್ನಲಾಗಿದ್ದು, ಆಕೆ ಗರ್ಭೀಣಿಯಾಗಿರುವ ವಿಚಾರ ಪ್ರಾಥಮಿಕ ಆ ರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆ ಸೇರಿದಂತೆ ಮನೆಯಲ್ಲಿದ್ದವರಿಗೂ ಗೊತ್ತಿಲ್ಲ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಪೋಷಕರು ಇಲ್ಲದ ಯುವತಿ ಅರೇಗುಜ್ಜನಹಳ್ಳಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದು, ಯಾ ವಾಗಲೂ ದೊಗಲೆ ಬಟ್ಟೆ ಧರಿಸುವ ಮೂಲಕ ಹೊಟ್ಟೆ ಬಂದಿರುವುದನ್ನು ಕಾಣಿಸದಂತೆ ಮರೆ ಮಾಚುತ್ತಿದ್ದಳು ಎನ್ನಲಾಗಿದ್ದು, ಮಂಗಳವಾರ ರಾತ್ರಿ 10 ಗಂಟೆ ಮನೆ ಯಿಂದ ಹೊರಗೆ ಬಂದು ಸ್ವಯಂ ಹೆರಿಗೆ ಮಾಡಿ ಕೊಂಡು ನಂತರ ಮಗುವನ್ನು ಎಸೆದು ಮನೆಗೆ ತೆರಳಿ ಸ್ನಾನ ಮಾಡಿಕೊಂಡಿದ್ದಾಳೆ.…

Read More

ರಾಮಮಂದಿರ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಗಂಭೀರ ಆರೋಪ ಬೆಂಗಳೂರು: ರಾಮಮಂದಿರ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ ಮಾಡಲಿದೆ ಅಂಥ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಗಂಭೀರ ಆರೋಪವನ್ನು ಮಾಡಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ ಪ್ರಭು ಶ್ರೀರಾಮ ಮಂದಿರದ ಉದ್ಘಾಟನೆ ಜನವರಿ 22 ರಂದು ಅದ್ಧೂರಿಯಾಗಿ ಆಗುತ್ತಿದೆ. ಇಡೀ ದೇಶವೇ ಸಂಭ್ರಮದಲ್ಲಿರುವಾಗ, ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಂಭ್ರಮವನ್ನು ಕೆಡಿಸಲು ಹೆಣಿಯುತ್ತಿರುವ ಕುತಂತ್ರಗಳು: ▪️ಅಯೋಧ್ಯಗೆ ಹೋಗುವವರಿಗೆ ಗೋಧ್ರಾ ಬೆದರಿಕೆ ▪️ಶುಭ ಘಳಿಗೆ ವೇಳೆ ಸುಳ್ಳು ಸುದ್ಧಿ ಹಬ್ಬಿಸುವುದು ▪️ರಾಮ ಭಕ್ತರು ಸಂಭ್ರಮಿಸದಂತೆ 144 ಸೆಕ್ಷನ್‌ ಜಾರಿ ▪️ರಾಜ್ಯಾದ್ಯಂತ 22 ರಂದು ವಿದ್ಯುತ್‌ ಸ್ಥಗಿತ ▪️ಮನೆ ಮನೆಯ ಟಿವಿ ಕೇಬಲ್‌ ಸಂಪರ್ಕ ತಪ್ಪಿಸುವುದು ರಾಮ ಬಂಟ ಹನುಮನ ನಾಡಿನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ದುರಾಡಳಿತಕ್ಕೆ, ಕುತಂತ್ರಕ್ಕೆ, ರಾಜ್ಯದ ಜನರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠಕಲಿಸಲಿರುವುದು ಅಷ್ಟೇ ಸತ್ಯ! ಅಂಥ…

Read More

ಬೆಂಗಳೂರು: ದಶಕಗಳ ಕಾಲ ಜಾತ್ಯತೀತತೆ ಕಿರೀಟ ಹೊತ್ತಿದ್ದ ಗೌಡರು ಇಳಿ ವಯಸ್ಸಿನಲ್ಲಿ ಕೋಮುವಾದ ಕಿರೀಟ ಧರಿಸಿರುವುದು ಸಂಘ ದೋಷದ ಫಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಅವರು ಈ ಬಗ್ಗೆ ಟ್ವಿಟ್‌ ಮಾಡಿದ್ದು, ಅದರಲ್ಲಿ ಅವರ ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ. ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನುಸರಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು . ನನ್ನ ಮತ್ತು ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಯಾವ ರಾಜಕೀಯ ಪಕ್ಷ ಕೂಡಾ ಮತ್ತೊಂದು ರಾಜಕೀಯ ಪಕ್ಷದ ಅಂತ್ಯವನ್ನು ಬಯಸಬಾರದು. “ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ” ಎಂಬ ಸೊಕ್ಕಿನ ಮಾತುಗಳನ್ನು ಆಡುತ್ತಿರುವ ಬಿಜೆಪಿಯ…

Read More

ಜುಂಟಾ ಪಡೆಗಳೊಂದಿಗೆ ವಾರಗಳ ತೀವ್ರ ಹೋರಾಟದ ನಂತರ ಮ್ಯಾನ್ಮಾರ್ ಬಂಡುಕೋರ ಮೈತ್ರಿ ಗುಂಪು ಚೀನಾದೊಂದಿಗಿನ ದೇಶದ ಬಾಷ್ಪಶೀಲ ಉತ್ತರದ ಗಡಿಯುದ್ದಕ್ಕೂ ಪ್ರಮುಖ ಪಟ್ಟಣದ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಶುಕ್ರವಾರ ತಡವಾಗಿ ಹೇಳಿಕೆಯಲ್ಲಿ ತಿಳಿಸಿದೆ. “ಮೂರು ಬ್ರದರ್‌ಹುಡ್ ಅಲೈಯನ್ಸ್” ಗುಂಪು ತಿಳಿದಿರುವಂತೆ, ಅಲ್ಲಿ ನೆಲೆಗೊಂಡಿರುವ ಮಿಲಿಟರಿಯ ಪ್ರಾದೇಶಿಕ ಪ್ರಧಾನ ಕಛೇರಿಯು ಶರಣಾದ ನಂತರ ಲೌಕೈ ಪಟ್ಟಣವನ್ನು ವಶಪಡಿಸಿಕೊಂಡಿದೆ ಎಂದು ಹೇಳಿದರು. ಲೌಕೈ ಪತನವು ಅಕ್ಟೋಬರ್‌ನಲ್ಲಿ ಪ್ರಾರಂಭವಾದ ಬಂಡಾಯ ಗುಂಪುಗಳ ಮೈತ್ರಿಯಿಂದ ವ್ಯಾಪಕವಾದ ಆಕ್ರಮಣದಲ್ಲಿ ಇತ್ತೀಚಿನ ವಿಜಯವಾಗಿದೆ ಮತ್ತು 2021 ರ ದಂಗೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರಕ್ಕೆ ಅತ್ಯಂತ ಮಹತ್ವದ ಬೆದರಿಕೆಯಾಗಿದೆ. “ಎಲ್ಲಾ ಕೊಕಾಂಗ್ (ಲೌಕ್ಕೈ) ಪ್ರದೇಶವು ಮ್ಯಾನ್ಮಾರ್ ಮಿಲಿಟರಿ ಕೌನ್ಸಿಲ್ ಇಲ್ಲದ ಭೂಮಿಯಾಗಿ ಮಾರ್ಪಟ್ಟಿದೆ” ಎಂದು ಹೇಳಿಕೆ ತಿಳಿಸಿದೆ. ಈ ಮೈತ್ರಿಯು ಮ್ಯಾನ್ಮಾರ್ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ ಆರ್ಮಿ (ಎಂಎನ್‌ಡಿಎಎ), ತಾಂಗ್ ನ್ಯಾಶನಲ್ ಲಿಬರೇಶನ್ ಆರ್ಮಿ (ಟಿಎನ್‌ಎಲ್‌ಎ) ಮತ್ತು ಅರಾಕನ್ ಆರ್ಮಿ (ಎಎ) ವ್ಯಾಪಕ ಹೋರಾಟದ ಅನುಭವದೊಂದಿಗೆ ಮೂರು…

Read More