Subscribe to Updates
Get the latest creative news from FooBar about art, design and business.
Author: kannadanewsnow07
ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಈರೇಗೌಡ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಸಿರಿಧಾನ್ಯ ಹಬ್ಬದ ಅಂಗವಾಗಿ ನಡೆದ ನಾಟಿಕೋಳಿ ಸಾರು–ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಬರೋಬ್ಬರಿ 2.7 ಕೆ.ಜಿ. ತೂಕದ ಮುದ್ದೆ ನುಂಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು, ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ 62 ವರ್ಷದ ಈರೇಗೌಡ 10 ಮುದ್ದೆಗಳನ್ನು (2 ಕೆ.ಜಿ. 716 ಗ್ರಾಂ) ನುಂಗಿ ಪ್ರಥಮ ಸ್ಥಾನ ಪಡೆದರು. ದಿಲೀಪ್ ಎಂಬುವವರು 6 ಮುದ್ದೆ (1 ಕೆಜಿ 682 ಗ್ರಾಂ) ತಿಂದು ದ್ವಿತೀಯ ಸ್ಥಾನ ಪಡೆದರೆ, ರವೀಂದ್ರ ಎಂಬವರು 5.5 ಮುದ್ದೆ ತಿಂದು (1 ಕೆಜಿ 544 ಗ್ರಾಂ) ತೃತೀಯ ಸ್ಥಾನ ಪಡೆದರು. ಈ ಸ್ಪರ್ಧೆಗೆ 30 ನಿಮಿಷಗಳ ಕಾಲಾವಕಾಶ ನಿಗದಿ ಪಡಿಸಲಾಗಿತ್ತು. ಈ ವೇಳೆಯಲ್ಲಿ ಯಾರು ಹೆಚ್ಚು ಮುದ್ದೆ ತಿನ್ನುತ್ತಾರೆಯೋ ಅವರೇ ವಿಜಯಶಾಲಿ ಎಂದಾಗಿತ್ತು. ಇನ್ನು ಸ್ಪರ್ಧಿಗೆ ನೀಡುವ ಪ್ರತಿ ಮುದ್ದೆಯನ್ನೂ ತೂಕ ಹಾಕಿ ಬಡಿಸಲಾಗಿತ್ತು. 20ಕ್ಕೂ ಹೆಚ್ಚು ಮಂದಿ ಸ್ಪರ್ಧೆ ಮಾಡಿದ್ದರು.
ಬೆಳಗಾವಿ: ರಾಜ್ಯದಲ್ಲಿ ಶೇಕಡಾ 70ರಷ್ಟು ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಎಲ್ಲರನ್ನೂ ಖಾಯಂಗೊಳಿಸಲಾಗುವುದು ಎಂದು ಸಚಿವ ರಹೀಂ ಖಾನ್ ಭರವಸೆ ನೀಡಿದ್ದಾರೆ. ಅವರು ಇಂದು ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ 368 ಪೌರಕಾರ್ಮಿಕರ ನೇಮಕಾತಿ ಆದೇಶಪತ್ರಗಳನ್ನು ವಿತರಿಸಿದ ಬಳಿಕ ಅವರು ಮಾತನಾಡಿದರು, ಇದೇ ವೇಳೇ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಹಂತ ಹಂತವಾಗಿ ಎಲ್ಲರನ್ನು ಖಾಯಂಗೊಳಿಸಿ ನೇಮಕಾತಿ ಆದೇಶ ಪತ್ರ ನೀಡಲಾಗುವುದು ಎಂದು ಅಂತ ತಿಳಿಸಿದರು.
ಕೆಎನ್ಎನ್ಡಿಜಿಟಲ್ ಡೆಸ್ಕ್ : ಹಸಿವಾಗಿದೆ ಎಂದು ತಿಂದರೂ ಮತ್ತೆ ಒಂದು ಗಂಟೆಯಲ್ಲಿ ಹಸಿವಾಗುತ್ತಾ.? ಆದ್ರೆ, ತಕ್ಷಣ ಎಚ್ಚರವಾಗಿರಿ. ತಿಂದ ಸ್ವಲ್ಪ ಸಮಯದ ಬಳಿಕ ನಿಮ್ಗೆ ಮತ್ತೆ ಮತ್ತೆ ಹಸಿವಾದ್ರೆ ನಿಮ್ಮ ದೇಹದಲ್ಲಿ ಏನೋ ತಪ್ಪಾಗಿದೆ ಎಂದು ಅರ್ಥಮಾಡಿಕೊಳ್ಳಿ. ಹೌದು, ಬ್ಲಡ್ ಶುಗರ್ ಇದಕ್ಕೆ ಕಾರಣವಾಗಿರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಅಸಮರ್ಪಕ ಕಾರ್ಯಗಳು ಇದಕ್ಕೆ ಕಾರಣ ಎಂದು ಅರ್ಥಮಾಡಿಕೊಳ್ಳಬೇಕು. ಊಟ ಮಾಡಿದ ಮೂರ್ನಾಲ್ಕು ಗಂಟೆಗಳ ಕಾಲ ಹಸಿದಿರುವುದು ಸಾಮಾನ್ಯ. ಆದ್ರೆ, ಎಷ್ಟೇ ತಿಂದರೂ.. ಇನ್ನೂ ಏನಾದ್ರೂ ತಿನ್ನಬೇಕು ಅಂತ ಅನಿಸಿದರೆ ಇದು ಮಾಮೂಲಿಯಾಗಿ ತೆಗೆದುಕೊಳ್ಳಬೇಕಾದುದಲ್ಲ. ಈ ಅಧ್ಯಯನವನ್ನ ಇತ್ತೀಚೆಗೆ 1,000 ಜನರ ಮೇಲೆ ನಡೆಸಲಾಯಿತು. ಪ್ರತಿ ಮೂವರಲ್ಲಿ ಒಬ್ಬರು ಈ ರೀತಿ ಬಳಲುತ್ತಿರುವುದು ಕಂಡುಬಂದಿದೆ. ಈ ವಿಷಯವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಅಂತಹ ಜನರು ಹೆಚ್ಚುವರಿ ಆಹಾರವನ್ನ ಸೇವಿಸುವ ಮೂಲಕ ತೂಕ ಹೆಚ್ಚಾಗಬಹುದು. ಆದಾಗ್ಯೂ, ಕೆಲವು ಸಲಹೆಗಳನ್ನ ಅನುಸರಿಸುವ ಮೂಲಕ ಈ ಸಮಸ್ಯೆಯನ್ನ…
ಬೆಂಗಳೂರು: ರಾಜ್ಯದ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡುವ ಅಗತ್ಯವಿಲ್ಲ. 60 ವರ್ಷ ಹಾಗೂ ದೀರ್ಘ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬುಧವಾರದಿಂದ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು. 1 ಮತ್ತು 2ನೇ ಕೋವಿಡ್ ಸಂದರ್ಭದಲ್ಲಿ ನೀಡಲಾದ ಲಸಿಕೆಗಳನ್ನೇ ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಇದೇ ವೇಳೆ ಅವರು ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರ ಜೆ.ಎನ್- 1 ಸೋಂಕು ಕಾಣಿಸಿಕೊಂಡಿದ್ದರೂ ಜನತೆ ಅನಗತ್ಯವಾಗಿ ಆತಂಕಕ್ಕೇ ಒಳಪಡದೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸಲಹೆ ನೀಡಿದ್ದಾರೆ.
ನವದೆಹಲಿ: ಬಾಲ್ಯದ ಸ್ಥೂಲಕಾಯತೆಯು ಪ್ರೌಢಾವಸ್ಥೆಯಲ್ಲಿ ಯುವಕರಲ್ಲಿ ಹೆಚ್ಚಿದ ಜಡ ಸಮಯದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ, ಆದರೆ ಹೊಸ ಸಂಶೋಧನೆಯು ಸೌಮ್ಯ ದೈಹಿಕ ಚಟುವಟಿಕೆಯು ನಕಾರಾತ್ಮಕ ಪ್ರವೃತ್ತಿಯನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸುತ್ತದೆ ಎಂದು ಕಂಡುಹಿಡಿದಿದೆ. ನೇಚರ್ ಕಮ್ಯುನಿಕೇಷನ್ಸ್ನಲ್ಲಿ ಪ್ರಕಟವಾದ ಈ ಅಧ್ಯಯನವನ್ನು ಎಕ್ಸೆಟರ್, ಈಸ್ಟರ್ನ್ ಫಿನ್ಲ್ಯಾಂಡ್, ಬ್ರಿಸ್ಟಲ್ ಮತ್ತು ಕೊಲೊರಾಡೊ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ನಡೆಸಲಾಯಿತು ಮತ್ತು 90 ರ ದಶಕದ ಬ್ರಿಸ್ಟಲ್ ವಿಶ್ವವಿದ್ಯಾಲಯದ ಮಕ್ಕಳ ದತ್ತಾಂಶವನ್ನು ಬಳಸಿಕೊಂಡು ದೈಹಿಕ ಚಟುವಟಿಕೆ ಮತ್ತು ಕೊಬ್ಬಿನ ದ್ರವ್ಯರಾಶಿಯನ್ನು ವಸ್ತುನಿಷ್ಠವಾಗಿ ಅಳೆಯುವ ಅತಿದೊಡ್ಡ ಮತ್ತು ಸುದೀರ್ಘ ಅನುಸರಣೆಯಾಗಿದೆ (ಇದನ್ನು ಪೋಷಕರು ಮತ್ತು ಮಕ್ಕಳ ಏವನ್ ಲಾಂಗಿಟ್ಯುಡಿನಲ್ ಅಧ್ಯಯನ ಎಂದೂ ಕರೆಯಲಾಗುತ್ತದೆ). ಈ ಅಧ್ಯಯನವು 11 ವರ್ಷದ 6,059 ಮಕ್ಕಳನ್ನು (ಅವರಲ್ಲಿ 53 ಪ್ರತಿಶತದಷ್ಟು ಮಹಿಳೆಯರು) ಒಳಗೊಂಡಿತ್ತು, ಅವರನ್ನು 24 ವರ್ಷದವರೆಗೆ ಅನುಸರಿಸಲಾಯಿತು ಎನ್ನಲಾಗಿದೆ. ಆದರೂ ಈ ಹೊಸ ಅಧ್ಯಯನದ ಫಲಿತಾಂಶಗಳು ಕೊಬ್ಬಿನ ದ್ರವ್ಯರಾಶಿಯಲ್ಲಿ ಒಟ್ಟಾರೆ ಹೆಚ್ಚಳವನ್ನು ಕಡಿಮೆ ಮಾಡುವಲ್ಲಿ ಲಘು ದೈಹಿಕ ಚಟುವಟಿಕೆಗಿಂತ ಮಧ್ಯಮದಿಂದ ತೀವ್ರವಾದ ದೈಹಿಕ ಚಟುವಟಿಕೆಯು…
ದಾವಣಗೆರೆ: ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲೆಯ ದಿನಪತ್ರಿಕೆ ವಿತರಣಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲಾ ಪತ್ರಿಕಾ ವಿತರಕರು ಇ-ಶ್ರಮ್ ಪೋರ್ಟಲ್ನಲ್ಲಿ ಸ್ವಯಂ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ 155214 (24*7), ಕಾರ್ಮಿಕ ಅಧಿಕಾರಿಗಳು,ಕಾರ್ಮಿಕÀ ಕಛೇರಿಗಳನ್ನು ಸಂಪರ್ಕಿಸಬಹುದು ಎಂದು ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ. *********************************************************** ಶೇ.50% ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟ ಕನ್ನಡ ಪುಸ್ತಕ ಪ್ರಾಧಿಕಾರವು ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ 2024ರ ಜನವರಿ ತಿಂಗಳಲ್ಲಿ ಪ್ರಾಧಿಕಾರ ಮಳಿಗೆ ಶೇ.50%ರ ರಿಯಾಯಿತಿ ದರಗಳಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ (ದೂ.08022107705), ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮತ್ತು ಕನ್ನಡ ಪುಸ್ತಕಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ರಿಯಾಯಿತಿ ಸೌಲಭ್ಯ ಪಡೆಯಬಹುದು. ಪ್ರಾಧಿಕಾರದ…
ಕಾಬೂಲ್: ಅಫ್ಘಾನಿಸ್ತಾನದ ಫೈಜಾಬಾದ್ನಲ್ಲಿ ಬುಧವಾರ ಎರಡು ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ವರದಿ ಮಾಡಿದೆ. ಮೊದಲ ಭೂಕಂಪವು ಭಾರತೀಯ ಕಾಲಮಾನ 00:28:52 ಕ್ಕೆ ಫಯಾಜಾಬಾದ್ನಿಂದ 126 ಕಿ.ಮೀ ದೂರದಲ್ಲಿ 80 ಕಿ.ಮೀ ಆಳದಲ್ಲಿ ಸಂಭವಿಸಿದೆ. ಆದರೆ, ಎರಡನೆಯದು ಫಯಾಜಾಬಾದ್ನಿಂದ 100 ಕಿ.ಮೀ ದೂರದಲ್ಲಿ 00:55:55 ಕ್ಕೆ ಸಂಭವಿಸಿದೆ. ಆಳವನ್ನು 100 ಕಿ.ಮೀ ಎಂದು ದಾಖಲಿಸಲಾಗಿದೆ. “ತೀವ್ರತೆಯ ಭೂಕಂಪ: 4.4, 03-01-2024, 00:28:52 ಭಾರತೀಯ ಕಾಲಮಾನ, ಲಾಟ್: 36.90 ಮತ್ತು ಉದ್ದ: 71.95, ಆಳ: 80 ಕಿ.ಮೀ, ಸ್ಥಳ: 126 ಕಿ.ಮೀ ಇ, ಅಫ್ಘಾನಿಸ್ತಾನದ ಫಯಾಜಾಬಾದ್” ಎಂದು ಎನ್ಸಿಎಸ್ ಪೋಸ್ಟ್ನಲ್ಲಿ ತಿಳಿಸಿದೆ. ಯಾವುದೇ ಆಸ್ತಿಪಾಸ್ತಿ ನಷ್ಟದ ಬಗ್ಗೆ ಇನ್ನೂ ವರದಿಯಾಗಿಲ್ಲ. “ತೀವ್ರತೆಯ ಭೂಕಂಪ: 4.8, 03-01-2024, 00:55:55 ಭಾರತೀಯ ಕಾಲಮಾನ, ಲಾಟ್: 36.90 ಮತ್ತು ಉದ್ದ: 71.65, ಆಳ: 140 ಕಿ.ಮೀ, ಸ್ಥಳ: ಅಫ್ಘಾನಿಸ್ತಾನದ ಫಯಾಜಾಬಾದ್ನ 100 ಕಿ.ಮೀ” ಎಂದು ಎನ್ಸಿಎಸ್ ವರದಿ ಮಾಡಿದೆ
ಬೆಂಗಳೂರು: ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್ ಸಿ) ವಿದ್ಯುತ್ ಶುಲ್ಕ ಇಳಿಕೆ ಮಾಡಿದ್ದು, ಈ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ಇಳಿಸಲು ಮುಂದಾಗಿದೆ. ಅಂದ ಹಾಗೇ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೆಇಆರ್ಸಿ ವಿದ್ಯುತ್ ದರ ಇಳಿಕೆ ಮಾಡಿದೆ ಎನ್ನಲಾಗಿದ್ದು, ಇಳಿಕೆ ದರದ ಪ್ರಕಾರ ಪ್ರಸಕ್ತ ಜನವರಿ ತಿಂಗಳಲ್ಲಿ ವಿದ್ಯುತ್ ಬಿಲ್ ಕಡಿಮೆಯಾಗಲಿದೆ ಎನ್ನಲಾಗಿದೆ. ಕೆಇಆರ್ ಸಿ ಸೂಚನೆ ಅನ್ವಯ ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 37 ಪೈಸೆ, ಮೆಸ್ಕಾಂ ವ್ಯಾಪ್ತಿಯಲ್ಲಿ 31 ಪೈಸೆ, ಹೆಸ್ಕಾಂ ವ್ಯಾಪ್ತಿಯಲ್ಲಿ 3 ಪೈಸೆ, ಜೆಸ್ಕಾಂ ವ್ಯಾಪ್ತಿಯಲ್ಲಿ 51 ಪೈಸೆ ಮತ್ತು ಸೆಸ್ಕ್ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 39 ಪೈಸೆ ಕಡಿಮೆಯಾಗಲಿದೆ. ಜನವರಿ ತಿಂಗಳ ವಿದ್ಯುತ್ ಬಿಲ್ನಲ್ಲಿ ಸರಿದೂಗಿಸುವಂತೆ ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ.
ಬೆಂಗಳೂರು: ಮೋಜಿಣಿ ವ್ಯವಸ್ಥೆ ಅಡಿ ಸಾರ್ವಜನಿಕರು ಅಳತೆ ಕೋರಿ ಸಲ್ಲಿಸುವ ಅರ್ಜಿಗಳ ಅಳತೆ ಶುಲ್ಕವನ್ನು ಮೇಲೆ ಓದಲಾದ ಕ್ರ.ಸಂ. (1) ಮತ್ತು (3) ರ ಆದೇಶಗಳಲ್ಲಿ ಈ ಕೆಳಕಂಡಂತ ನಿಗಧಿಪಡಿಸಲಾಗಿತ್ತು. ಹಾಗೆಯೇ, ಮೇಲೆ ಓದಲಾದ ಕ್ರಸಂ. (2) ರ ಸರ್ಕಾರದ ಆದೇಶದಲ್ಲಿ, ಪರವಾನಗಿ ಭೂಮಾಪಕರಿಗೆ ಪ್ರತಿ ಅರ್ಜಿಗೆ ಪಾವತಿಸುತ್ತಿರುವ ಸೇವಾ ಶುಲ್ಕವನ್ನು 800/- ರಿಂದ 1200/- ಗಳಿಗೆ ಹಾಗೂ ಬಹುಮಾಲೀಕತ್ವದ ಪ್ರತಿ ಹೆಚ್ಚುವರಿ ಬ್ಲಾಕಿಗೆ ರೂ 150/- ರಿಂದ 200/- ಗಳಿಗೆ ಪರಿಷ್ಕರಿಸಿ ಆದೇಶಿಸಲಾಗಿದೆ. ತದನಂತರ, ಮೇಲೆ ಓದಲಾದ ಕ್ರ.ಸಂ. (4) ಹಾಗೂ (5) ರ ಅದೇಶದಲ್ಲಿ ಮೋಜಣಿ ವ್ಯವಸ್ಥೆಯಡಿ ಸಲ್ಲಿಸುವ ಅರ್ಜಿಗಳ ಅಳತೆ ಶುಲ್ಕವನ್ನು ಪುನರ್ ಪರಿಷ್ಕರಿಸಿ, ಅರ್ಜಿ ಶುಲ್ಕವನ್ನು ಕಡಿಮೆಗೊಳಿಸಿ ಈ ಕೆಳಕಂಡಂತೆ ನಿಗಧಿಪಡಿಸಲಾಗಿದೆ. 11ಇ ಸ್ಕೆಚ್, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ ಪ್ರಕರಣಗಳಲ್ಲಿ ಗ್ರಾಮೀಣ ಭಾಗದ ಅರ್ಜಿದಾರರಿಗೆ ನಿಗದಿಯಾಗಿದ್ದ 2,000 ರೂ. ಸೇವಾ ಶುಲ್ಕವನ್ನು 1,500 ರೂ.ಗೆ ಇಳಿಸಲಾಗಿದೆ. ನಗರ ಪ್ರದೇಶದ ಅರ್ಜಿದಾರರಿಗೆ 2,500…
ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಜನವರಿ 5 ರಿಂದ 7 ರವರೆಗೆ ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2024 ನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವರು ಹಾಗೂ ಮೇಳದ ಅಧ್ಯಕ್ಷರಾದ ಎನ್.ಚಲುವರಾಯಸ್ವಾಮಿ ತಿಳಿಸಿದರು. ಇಂದು ಕೃಷಿ ಇಲಾಖೆ ಹಾಗೂ ಕೆಪೆಕ್ ಸಂಸ್ಥೆಯ ವತಿಯಿಂದ ಹೋಟೆಲ್ ಶಾಂಗ್ರಿಲಾದಲ್ಲಿ “ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳ – 2024” ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗುತ್ತಿರುವ ರಫ್ತುದಾರರ ಸಭೆಯ ಕುರಿತು ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಾವಯವ ಕೃಷಿಯನ್ನು ರಾಜ್ಯದಲ್ಲಿ ಸುಮಾರು 2 ದಶಕಗಳಿಂದ ಉತ್ತಮ ಪರ್ಯಾಯ ಪದ್ಧತಿಯಾಗಿ ಉತ್ತೇಜಿಸಲಾಗುತ್ತಿದೆ. ಸ್ವಾವಲಂಬನೆ ಗ್ರಾಮೀಣಾಭಿವೃದ್ಧಿ ಮತ್ತು ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡಲು 2004 ರಲ್ಲಿಯೇ ಪ್ರತ್ಯೇಕ ಸಾವಯವ ಕೃಷಿ ನೀತಿಯನ್ನು ಹೊರತಂದು ನೀತಿಯಡಿಯಲ್ಲಿ ರಾಜ್ಯಾದ್ಯಂತ ಹಲವಾರು ಸಾವಯವ ಕೃಷಿ ಉತ್ತೇಜನಾ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿರುತ್ತದೆ ಎಂದು ತಿಳಿಸಿದರು. ಸಿರಿಧಾನ್ಯಗಳು ಬಹು ಉಪಯೋಗಗಳನ್ನು (ಆಹಾರ, ಮೇವು. ಇಂಧನ) ಹೊಂದಿದ್ದು, ಸಾಮಾನ್ಯವಾಗಿ ಬರಗಾಲದ ಸಮಯದಲ್ಲಿ ಕೊನೆಯ ಬೆಳೆಯಾಗಿ ಸಹ…