Subscribe to Updates
Get the latest creative news from FooBar about art, design and business.
Author: kannadanewsnow07
ಬಳ್ಳಾರಿ: ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಶಿಕ್ಷಣದಲ್ಲಿ ಗುಣಾತ್ಮಕ ಪ್ರಗತಿಯನ್ನು ಸಾಧಿಸಲು 2024-2025 ನೇ ಸಾಲಿನಿಂದ ಪ್ರಾಥಮಿಕ ಹಂತದಲ್ಲಿ ಅರ್ಹ ಸರ್ಕಾರಿ ಶಾಲೆಗಳಲ್ಲಿ “ಪೂರ್ವ ಪ್ರಾಥಮಿಕ’’ ಭಾಗವಾಗಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರಾದ ಬಿ.ಉಮಾದೇವಿ ಅವರು ತಿಳಿಸಿದ್ದಾರೆ. ಮಕ್ಕಳಿಗೆ ಆರಂಭಿಕ ಹಂತದಲ್ಲಿ ಭದ್ರ ಬುನಾದಿ ಹಾಕಲು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಆರಂಭಿಕ ಶಿಕ್ಷಣದ ಸೌಲಭ್ಯವನ್ನು ಕಲ್ಪಿಸಿಕೊಡುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯು ಉತ್ತಮ ಹೆಜ್ಜೆಯನ್ನಿಟ್ಟು ‘ಅಕ್ಷರ ಆವಿಷ್ಕಾರ’ ಯೋಜನೆಗೆ ಕೈಜೋಡಿಸಿದೆ.ಜಿಲ್ಲೆಯಲ್ಲಿ ಒಟ್ಟು 119 ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಪ್ರತಿಯೊಬ್ಬರ ಜೀವನದಲ್ಲೂ ಕೂಡ ಮಗು ಎಂಬುದು ತುಂಬಾ ಮುಖ್ಯವಾದದ್ದು ಅದರಲ್ಲೂ ಗಂಡು ಸಂತಾನ ಅಥವಾ ಪುತ್ರ ಸಂತಾನಕ್ಕಾಗಿ ಸಾಕಷ್ಟು ಜನ ಕಾಯುತ್ತಲೇ ಇರುತ್ತಾರೆ. ಈ ಪುತ್ರ ಸಂತಾನಕ್ಕಾಗಿ ಏನೆಲ್ಲ ಸುಲಭ ಕ್ರಮ ಅನುಸರಿಸಬೇಕು ಯಾವ ರೀತಿ ನಾವು ಅದನ್ನ ಅಳವಡಿಸಿಕೊಳ್ಳಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ. ಈ ಯಂತ್ರವನ್ನು ಶುಭದ ದಿನದಲ್ಲಿ ಪುಷ್ಯ ನಕ್ಷತ್ರದ ಬರುವ ಸಂದರ್ಭದಲ್ಲಿ ಈ ಯಂತ್ರವನ್ನು ನೀವು ಬರೆದುಕೊಳ್ಳುವುದರಿಂದ ನೀವು ಏನು ಅಂದುಕೊಂಡಿರುತ್ತೀರೋ ಅವುಗಳು ಸಂಪೂರ್ಣವಾಗಿ ಸಿದ್ಧಿಯಾಗುತ್ತದೆ ಮತ್ತು ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದು. ಯಂತ್ರವನ್ನು ಬರೆಯಬೇಕಾದರೆ ಕೆಲವೊಂದಿಷ್ಟು ಕ್ರಮಗಳನ್ನು ನೀವು ಅನುಸರಿಸಲೇಬೇಕು ಈ ಯಂತ್ರವನ್ನು ನೀವು ಬರೆಯಬೇಕಾದರೆ ತಾಮ್ರದ ತಗಡನ್ನು ಬಳಸಿಕೊಂಡು ಬರೆಯಬೇಕು. ಇಲ್ಲವಾದರೆ ಒಂದು ಬಿಳಿಯ ಹಾಳೆಯ ಮೇಲೆ ಬರೆಯಬೇಕು. ಆ ಯಂತ್ರ ಯಾವುದು ಎಂದರೆ ಮೂರು ಚೌಕವನ್ನು ಹಾಕಿಕೊಂಡು ಅದರಲ್ಲಿ ಮೊದಲ ಚೌಕದಲ್ಲಿ 10,1,12 ಕೆಳಗಡೆ…
ಶುಕ್ರವಾರ ಲಕ್ಷ್ಮಿ ಪೂಜೆಗೆ ಶ್ರೇಷ್ಠವಾದ ದಿನ, ಈ ದಿನ ಲಕ್ಷ್ಮಿಯನ್ನು ಆರಾಧಿಸಿದರೆ ನಮ್ಮೆಲ್ಲಾ ಆರ್ಥಿಕ ಸಂಕಷ್ಟ ದೂರಾಗಿ ಸಂಪತ್ತು ಹೆಚ್ಚಾಗುವುದು, ಶುಕ್ರವಾರದಂದು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ: ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ವಾರದ ಏಳು ದಿನಗಳಲ್ಲಿ ಶುಕ್ರವಾರ ಲಕ್ಷ್ಮಿ ದೇವಿಗೆ ಮೀಸಲಾದ ದಿನ. ಈ ದಿನ ಲಕ್ಷ್ಮಿ ಆರಾಧನೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುವುದು, ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕೆಂದರೆ ಮನೆಯನ್ನು ಶುದ್ಧವಾಗಿ ಇಡಬೇಕು, ಮನೆಯಲ್ಲಿ ಗಲಾಟೆವಿರಬಹುದು, ಮನೆಯಲ್ಲಿ ಪಾಸಿಟಿವಿಟಿ ಹೆಚ್ಚಿರಬೇಕು, ಹೀಗೆ ಮಾಡುವುದರಿಂದ ಆ ಮನೆಯತ್ತ ಲಕ್ಷ್ಮಿ ಆಕರ್ಷಿತಳಾಗುತ್ತಾಳೆ. ತಾವರೆ ಹೂವು ಅರ್ಪಿಸಿ ಲಕ್ಷ್ಮಿ ಪೂಜೆ ಲಕ್ಷ್ಮಿ ಪೂಜೆಯಂದು ನೀವು ಕಮಲದ ಹೂವು ಅರ್ಪಿಸಿ, ತುಪ್ಪದ ದೀಪ ಹಚ್ಚಿ ಪೂಜೆಯನ್ನು ಮಾಡಿ. ಹೀಗೆ ಮಾಡುವುದರಿಂದ ಲಕ್ಷ್ಮಿಗೆ ಹೊಸ ಆದಾಯದ ಅವಕಾಶಗಳು ದೊರೆಯುವುದು. ಶಂಖ ನಾದ ಸಂಜೆ ಹೊತ್ತು ಲಕ್ಷ್ಮಿ ಪೂಜೆ ಸಮಯದಲ್ಲಿ…
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಬರಲಿದೆ ನೂತನ ನಮ್ಮ ಕ್ಲಿನಿಕ್ – 254 ಹೊಸ ನಮ್ಮ ಕ್ಲಿನಿಕ್ ಗಳನ್ನ ಆರಂಭಿಸಲು ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು. ಹೀಗಾಗಿ ಸ್ಥಳ ಗುರುತಿಸಿದ ನಂತ್ರ, ರಾಜ್ಯಾಧ್ಯಂತ ಹೊಸದಾಗಿ ಶೀಘ್ರದಲ್ಲೇ 254 ನಮ್ಮ ಕ್ಲಿನಿಕ್ ಆರಂಭಗೊಳ್ಳಲಿದ್ದಾವೆ. ಈ ಮೂಲಕ ರಾಜ್ಯದ ಜನತೆಗೆ ಗುಡ್ ನ್ಯೂಸ್ ಸಿಗಲಿದೆ. ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಕ್ಲಿನಿಕ್ ಗಳನ್ನ ಪ್ರಾರಂಭಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಇಂದು ವಿವಿಧ ಆರೋಗ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ನೂತನ ನಮ್ಮ ಕ್ಲಿನಿಕ್ ಗಳನ್ನ ಪ್ರಾರಂಭಿಸುವ ನಿಟ್ಟಿನಲ್ಲಿ ಸ್ಥಳ ಗುರುತಿಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 503 ನಮ್ಮ ಕ್ಲಿನಿಕ್ ಗಳನ್ನ ಸದೃಢಗೊಳಿಸುವತ್ತ ಗಮನ ಹರಿಸಬೇಕು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್ ಗಳನ್ನ ಪ್ರಾರಂಭಿಸಲು ಅವಕಾಶವಿದ್ದು, ಸ್ಥಳ…
ಬೆಂಗಳೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯಲ್ಲಿನ ಪಡಿತರ ಚೀಟಿದಾರರಿಗೆ ಜೂನ್ ಮಾಹೆಗೆ ಅನ್ವಯವಾಗುವಂತೆ ಪಡಿತರ ಧಾನ್ಯ ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್ಗೆ 21 ಕೆ.ಜಿ ಅಕ್ಕಿ, ರಾಗಿ ಪ್ರತಿ ಕಾರ್ಡ್ಗೆ 14 ಕೆ.ಜಿ, ಆದ್ಯತಾ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ 3 ಕೆ.ಜಿ ಅಕ್ಕಿ, ರಾಗಿ 2 ಕೆ.ಜಿ ಉಚಿತವಾಗಿ ವಿತರಿಸಲಾಗುತ್ತದೆ. ಸರ್ಕಾರದ ಗ್ಯಾರಂಟಿ ಯೋಜನೆಯಡಿ ಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆ ಮಾಡುತ್ತಿದ್ದು, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದಾಗಿದೆ.
ಬೆಂಗಳೂರು: ಸ್ವಾತಂತ್ರ್ಯದ ನಂತರ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ದೇಶದ ಆರ್ಥಿಕತೆಯನ್ನು ಬಲಪಡಿಸಿದೆ. ಪ್ರಸ್ತುತ ನಮ್ಮ ಆರ್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ಬೆಂಗಳೂರಿನ ಸೇಂಟ್ ಫ್ರಾನ್ಸಿಸ್ ಡಿ ಸೇಲ್ಸ್ ಕಾಲೇಜಿನ ಸ್ವಾಯತ್ತ ಸ್ಥಾನಮಾನದ ಘೋಷಣೆ ಮತ್ತು ಪದವಿ ದಿನದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ನಮ್ಮ ದೇಶವನ್ನು ವಿಶ್ವದ ಅತ್ಯುತ್ತಮ ದೇಶಗಳ ವರ್ಗಕ್ಕೆ ತರಲು ಕರ್ತವ್ಯದ ಸಮಯವಾಗಿದೆ. ಭಾರತ ಸರ್ಕಾರ ದೇಶವನ್ನು ಮತ್ತಷ್ಟು ಬಲಪಡಿಸುವ ಮೂಲಕ ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಮಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಯುವಪೀಳಿಗೆ ದೇಶವನ್ನು ಮುಂಚೂಣಿಯಲ್ಲಿ ನಡೆಸಲು ಸಹಕಾರ ನೀಡಬೇಕು ಎಂದು ತಿಳಿಸಿದರು. ಸ್ವಾಯತ್ತ ಸ್ಥಾನಮಾನ ಪಡೆದ ಸೇಂಟ್ ಫ್ರಾನ್ಸಿಸ್ ಡಿ’ಸೇಲ್ಸ್ ಕಾಲೇಜಿನ ಮಹತ್ವದ ಸಾಧನೆಗಾಗಿ ಅಭಿನಂದಿಸಿದ ರಾಜ್ಯಪಾಲರು, “ಕಾಲೇಜಿನ ಸ್ವಾಯತ್ತ ಸ್ಥಾನಮಾನವು ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ, ನವೀನ ಬೋಧನೆ ಮತ್ತು ಸಮಗ್ರ ಅಭಿವೃದ್ಧಿಗೆ ಸಾಕ್ಷಿಯಾಗಿದೆ.…
ನವದೆಹಲಿ: ನಿಮ್ಮ ಮೊಬೈಲ್ ಮತ್ತು ಲ್ಯಾಂಡ್ಲೈನ್ ಸಂಖ್ಯೆಗಳಿಗೆ ನೀವು ಶೀಘ್ರದಲ್ಲೇ ಪಾವತಿಸಬೇಕಾಗಬಹುದು. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಮೊಬೈಲ್ ಮತ್ತು ಲ್ಯಾಂಡ್ಲೈನ್ ಸಂಖ್ಯೆಗಳಿಗೆ ಶುಲ್ಕವನ್ನು ಪರಿಚಯಿಸಲು ಪ್ರಸ್ತಾಪಿಸಿದೆ, ಫೋನ್ ಸಂಖ್ಯೆಗಳು ಅಮೂಲ್ಯವಾದ ಆದರೆ ಸೀಮಿತ ಸಾರ್ವಜನಿಕ ಸಂಪನ್ಮೂಲವನ್ನು ಪ್ರತಿನಿಧಿಸುತ್ತವೆ ಎಂದು ಉಲ್ಲೇಖಿಸಿದೆ. ಜೂನ್ 6, 2024 ರಂದು ಬಿಡುಗಡೆಯಾದ ಸಮಾಲೋಚನಾ ಪತ್ರದಲ್ಲಿ ವಿವರಿಸಲಾದ ಈ ಪ್ರಸ್ತಾಪವು ಮೊಬೈಲ್ ಆಪರೇಟರ್ಗಳು ಈ ಸಂಖ್ಯೆಗಳಿಗೆ ಶುಲ್ಕವನ್ನು ಎದುರಿಸಬಹುದು ಎಂದು ಸೂಚಿಸುತ್ತದೆ, ನಂತರ ಅದನ್ನು ಗ್ರಾಹಕರಿಗೆ ವರ್ಗಾಯಿಸಬಹುದು ಎನ್ನಲಾಗಿದೆ.5 ಜಿ ನೆಟ್ವರ್ಕ್ಗಳು, ಯಂತ್ರದಿಂದ ಯಂತ್ರ ಸಂವಹನ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಸಾಧನಗಳ ವ್ಯಾಪಕ ಅಳವಡಿಕೆ ಸೇರಿದಂತೆ ಸಂವಹನ ತಂತ್ರಜ್ಞಾನಗಳಲ್ಲಿನ ಪ್ರಗತಿಯು ಅಸ್ತಿತ್ವದಲ್ಲಿರುವ ಸಂಖ್ಯೆ ವ್ಯವಸ್ಥೆಯ ಸಮಗ್ರ ಪರಿಶೀಲನೆಯನ್ನು ಅಗತ್ಯಗೊಳಿಸಿದೆ ಎಂದು ಟ್ರಾಯ್ ಹೇಳಿದೆ. ಟ್ರಾಯ್ ಪ್ರಕಾರ, ಶುಲ್ಕದ ಪರಿಚಯವು ಈ ‘ಸೀಮಿತ ಸಂಪನ್ಮೂಲಗಳ’ ಪರಿಣಾಮಕಾರಿ ಹಂಚಿಕೆ ಮತ್ತು ಬಳಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. https://twitter.com/TRAI/status/1798940350704480540
ಕೆಎನ್ಎನ್ಸಿನಿಮಾಡೆಸ್ಕ್: ದರ್ಶನ್ ಸ್ಯಾಂಡಲ್ವುಡ್ನಲ್ಲಿ ಈ ಹೆಸರು ಕೇಳುತ್ತಿದ್ದ ಹಾಗೇ ಈಗ ಅನೇಕ ಮಂದಿ ಬೆಚ್ಚಿ ಬೀಳುತ್ತಿದ್ದಾರೆ. ತೆರೆ ಮೇಲೆ ನಾಯಕನಾಗಿ. ಖಳನಾಯಕನಾಗಿ ಪಾತ್ರನಿರ್ವಹಣೆ ಮಾಡಿದ್ದ ದರ್ಶನ್ ನಿಜ ಜೀವನದಲ್ಲಿ ಈಗ ಖಳನಾಯಕನಾಗಿ ಕೊಲೆ ಆರೋಪದಲ್ಲಿ ಕಂಬಿ ಹಿಂದೆ ಮುಂದಿನ ಜೀವನವನ್ನು ನೆನೆಯುತ್ತ ಅಳುತ್ತಿದ್ದಾರೆ. ಅಪ್ಪ ನಂತೆ ಮಗ ಎನ್ನುವ ಗಾದೆಯನ್ನು ಸಂಪೂರ್ಣ ಸುಳ್ಳು ಮಾಡಿದ ದರ್ಶನ್, ಮೆಜೆಸ್ಟಿಕ್ನಲ್ಲಿ ಇದ್ದ ಹಾಗೇ ಇರಲೇ ಇಲ್ಲ, ಬದಲಿಗೆ ಇನ್ನೋಬ್ಬರ ಹೆಂಡ್ತಿ ಮೇಲೆ ಕಣ್ಣು ಹಾಕಿ ಈಗ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡುತ್ತ ಕುಳಿತುಕೊಂಡಿದ್ದಾರೆ. ಅಸಲಿಗೆ ದರ್ಶನ್ ಹೀಗೆ ಆಗಲು ಕಾರಣ ಪರಸ್ತ್ರೀ ವ್ಯಾಮೋಹ, ಹಣ, ಮದ್ಯವೇ ಕಾರಣ ಎನ್ನಲಾಗುತ್ತಿದೆ. ತನ್ನ ಪಾಡಿಗೆ ತಾನು ಇರುವುದು ಬಿಟ್ಟು ಸ್ಟಾರ್ಡಂ ಅನ್ನು ತಲೆಗೆ ಏರಿಸಿಕೊಂಡಿದ್ದ ದರ್ಶನ್ ತಾನು ನಡೆದು ಹೋಗಿದ್ದೇ ದಾರಿ ಅನ್ನೋ ಹಾಗೇ ಮಾಡಿಕೊಂಡಿದ್ದರು. ಸುತ್ತಲು ಹೊಗಳು ಬಟ್ಟರನ್ನು ತಾನು ಹೇಳಿದಕ್ಕೆ ಹೂ ಎನ್ನುವವರನ್ನು ಇಟ್ಟುಕೊಂಡಿದ್ದ ದರ್ಶನ್ ತನಗೆ ಸರಿ, ತಪ್ಪು ಯಾವುದು ಎನ್ನುವುದನ್ನು…
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನೀಟ್-ಯುಜಿ 2024 ರ 1,563 ಅಭ್ಯರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡುವ ನಿರ್ಧಾರವನ್ನು ರದ್ದುಗೊಳಿಸಲಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಜೂನ್ 23 ರಂದು ಮರು ಪರೀಕ್ಷೆಗೆ ಅರ್ಜಿ ಸಲ್ಲಿಸುವ ಆಯ್ಕೆಯನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್ಗಳ ಪ್ರವೇಶಕ್ಕಾಗಿ ನೀಟ್-ಯುಜಿ, 2024 ಪರೀಕ್ಷೆಯ ಸುತ್ತಲಿನ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ನೀಟ್-ಯುಜಿ ಪರೀಕ್ಷೆಗೆ ಹಾಜರಾಗುವಾಗ ಅನುಭವಿಸಿದ ಸಮಯದ ನಷ್ಟವನ್ನು ಸರಿದೂಗಿಸಲು ‘ಗ್ರೇಸ್ ಅಂಕ’ ಪಡೆದ 1,563 ಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. “ಗ್ರೇಸ್ ಅಂಕಗಳನ್ನು ನೀಡಿದ 1,563 ನೀಟ್-ಯುಜಿ 2024 ಅಭ್ಯರ್ಥಿಗಳ ಸ್ಕೋರ್ ಕಾರ್ಡ್ಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಸಮಿತಿ ತೆಗೆದುಕೊಂಡಿದೆ ಮತ್ತು ಈ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ತೆಗೆದುಕೊಳ್ಳುವ ಆಯ್ಕೆಯನ್ನು ನೀಡಲಾಗುವುದು” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಪರೀಕ್ಷೆಗಳನ್ನು ಜೂನ್ 23…
ಬೆಂಗಳೂರು: ಕೊಲೆ ಆರೋಪದ ಮೇರೆಗೆ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ನನ್ನು ಸ್ಯಾಂಡಲ್ವುಡ್ನಿಂದ ಬ್ಯಾನ್ ಮಾಡುವುದಕ್ಕೆ ಒತ್ತಡ ಕೇಳಿ ಬಂದಿದೆ. ಈ ನಡುವೆ ಇಂದು ದರ್ಶನ್ ಸಿನಿಮಾ ರಂಗದಲ್ಲಿ ಸಂಪೂರ್ಣವಾಗಿ ಬ್ಯಾನ್ ಮಾಡುವುದರ ಬಗ್ಗೆ ಇಂದು ವಾಣಿಜ್ಯ ಮಂಡಳಿ ಸಭೆ ನಡೆಸಲಿದೆ. ಸಭೆಯಲ್ಲಿ ಈ ಬಗ್ಗೆ ಅಧಿಕೃತ ತೀರ್ಮಾನವನ್ನು ತೆಗೆದುಕೊಳ್ಳುವುದರ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಸಭೆ ಬಳಿಕ ಈ ಬಗ್ಗೆ ಇಂದು ಸಂಜೆ ಅಧಿಕೃತ ಮಾಹಿತಿ ಹೊರ ಬೀಳಲಿದೆ.