Subscribe to Updates
Get the latest creative news from FooBar about art, design and business.
Author: kannadanewsnow05
ಮಂಡ್ಯ : ಎಚ್ ಡಿ ದೇವೇಗೌಡ ಸುಧೀರ್ಘ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಸಹವಾಸ ಮಾಡಿದ್ದೆ ತಪ್ಪಾಗಿದೆ. ಕಾಂಗ್ರೆಸ್ ದೇವೇಗೌಡರಿಂದ ಬಿ ಫಾರಂ ಕಿತ್ತುಕೊಂಡಾಗಲೇ ಚೂರಿ ಹಾಕಿದ್ರು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. https://kannadanewsnow.com/kannada/star-chandru-the-richest-candidate-in-the-state-has-assets-worth-rs-600-crore-i-dont-own-a-car-except-3-tractors/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸರಿ ಶಾಲು ಹಾಕಿಕೊಂಡರೆ ತಪ್ಪಾ? ಸಿದ್ದಾಂತ ಇರುವುದು ಕೇಸರಿ ಶಾಲುಗಳನ್ನು ಹಾಕಿಕೊಳ್ಳುವವುದರಲ್ಲಿ ಅಲ್ಲ ನಮ್ಮ ನಡವಳಿಕೆಯಲ್ಲಿ ಹಾಗೂ ನಮ್ಮ ಮನಸ್ಸಿನಲ್ಲಿ ಸಿದ್ದಾಂತವಿದೆ.ಇವರು ಮನಸ್ಸಿನಲ್ಲಿ ಏನು ಇಟ್ಟುಕೊಂಡಿದ್ದಾರೆ ಇವರ ನಡವಳಿಕೆ ಹೇಗೆ ಇದೆ? ಎಂದು ಪ್ರಶ್ನಿಸಿದರು. https://kannadanewsnow.com/kannada/breaking-former-aap-mp-dharamveer-gandhi-joins-congress/ ನಾಳೆ ಬೆಳಗ್ಗೆ ದೇವೇಗೌಡರು ಪ್ರಧಾನ ಮಂತ್ರಿ ಅಥವಾ ರಾಷ್ಟ್ರಪತಿಯು ಆಗುವುದಿಲ್ಲ ನೀವು ಮಾಡಿರುವ ತಪ್ಪುಗಳನ್ನು ಸರಿಪಡಿಸಲು ಬಿಜೆಪಿ ಜೊತೆ ಹೋಗಿರುವುದು ಎಂದು ಎಚ್ ಡಿ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ದೇವೇಗೌಡರು ಈ ಹಿಂದೆ ಆಡಿರುವ ಮಾತುಗಳನ್ನು ಪದೇಪದೇ…
ಮಂಡ್ಯ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಬರೋಬ್ಬರಿ 410 ಕೋಟಿ ರೂ.ಗೂ ಅಧಿಕ ಆಸ್ತಿ ಘೋಷಿಸಿದ್ದಾರೆ.ಸ್ಟಾರ್ ಚಂದ್ರು ಇಷ್ಟೊಂದು ಶ್ರೀಮಂತರಾದರೂ ಅವರ ಬಳಿಯಲ್ಲಿ ಯಾವುದೇ ಕಾರುಗಳಿಲ್ಲ. ಮೂರು ಟ್ರ್ಯಾಕ್ಟರ್ಗಳನ್ನು ಮಾತ್ರ ಅವರು ಹೊಂದಿದ್ದಾರೆ. ಇದರಲ್ಲಿ ಪತ್ನಿ ಆಸ್ತಿ ಹಾಗೂ ಅವಿಭಜಿತ ಹಿಂದೂ ಕುಟುಂಬದ ಆಸ್ತಿಯೂ ಸೇರಿದೆ ಎಂದು ಉಲ್ಲೆಖಿಸಿದ್ದಾರೆ. https://kannadanewsnow.com/kannada/ideology-in-our-mind-and-behaviour-is-not-in-saffron-shawl-hdk-to-dk/ ವೆಂಕಟರಮಣೇಗೌಡ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಅವರ ಕೈಯಲ್ಲಿ 1.8 ಲಕ್ಷ ರೂ., ಪತ್ನಿ ಕೈಯಲ್ಲಿ 1.9 ಲಕ್ಷ ರೂ. ಹಣವಿದೆ. ಅವರ ಬಳಿ 29.94 ಕೋಟಿ ರೂ. ಚರಾಸ್ತಿ ಇದ್ದರೆ, ಪತ್ನಿ ಬಳಿ ಬರೋಬ್ಬರಿ 182.33 ಕೋಟಿ ರೂ. ಮೊತ್ತದ ಚರಾಸ್ತಿ ಇದೆ. ಕುಟುಂಬದ ಹೆಸರಲ್ಲಿ 50.45 ಲಕ್ಷ ರೂ. ಮೌಲ್ಯದ ಆಸ್ತಿಯೂ ಇದೆ. ಸ್ಟಾರ್ ಚಂದ್ರ ಬೆಂಗಳೂರು ಮಹಾಲಕ್ಷ್ಮೀಪುರಂ ನಿವಾಸಿಯಾಗಿದ್ದು, 2022-23ರಲ್ಲಿ ಬರೋಬ್ಬರಿ 16.28 ಕೋಟಿ ರೂ. ವಾರ್ಷಿಕ ಆದಾಯ…
ಮಂಡ್ಯ : ಡಿಕೆ ಶಿವಕುಮಾರ್ ಅವರು ಇಂದು ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಕೇಸರಿ ಶಾಲಾ ಹಾಕಿಕೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಸಿದ್ದಾಂತವನ್ನುನೀರಿನಲ್ಲಿ ತೊಳೆದುಕೊಂಡಿದ್ದಾರೆ ಎಂದು ನೀಡಿರುವ ಹೇಳಿಕೆಗೆ ಇದೀಗ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು ಸಿದ್ಧಾಂತ ಎನ್ನುವುದು ನಮ್ಮ ಮನಸ್ಸಿನಲ್ಲಿ ಮತ್ತು ನಡವಳಿಕೆಯಲ್ಲಿ ಇದೆ ಕೇಸರಿ ಶಾಲು ಹಾಕಿಕೊಳ್ಳುವುದರಲ್ಲಿಲ್ಲ ಎಂದು ಹೇಳಿದರು. https://kannadanewsnow.com/kannada/breaking-ussd-based-call-forwarding-services-suspended-in-the-country-from-april-15/ ನಮ್ಮ ಮನಸ್ಸಿನಲ್ಲಿ ಮತ್ತು ನಡವಳಿಕೆಯಲ್ಲಿ ಸಿದ್ದಾಂತ ಇರುವುದು. ಮಂಡ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ವಿಶ್ವಾಸವಿಡಿ ಎಂದು ಮಂಡ್ಯ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.ಜೆಡಿಎಸ್ ಪಕ್ಷ ಮುಗಿದೆ ಹೋಯಿತು ಎಂದು ಕೆಲವರು ಹೇಳುತ್ತಾರೆ ನಮ್ಮ ಕಾರ್ಯಕರ್ತರು ನಮಗೆ ಯಾರು ಅನ್ಯಾಯ ಮಾಡಿಲ್ಲ ಎಂದು ತಿಳಿಸಿದರು. https://kannadanewsnow.com/kannada/beware-the-risk-of-a-smartphone-exploding-in-summer-is-high-dont-make-these-mistakes/ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಗೆಲ್ಲಬೇಕಿತ್ತು. ನಮ್ಮ ಸ್ವಯಂಕೃತ ಅಪರಾಧಗಳಿಂದ ಸೋತಿದ್ದೇವೆ. ನಮ್ಮ ಕನಕಪುರ ಸ್ನೇಹಿತ ನನಗೆ ಅಮೃತ ಕೊಟ್ಟಿದ್ದೇನೆ ಎಂದು ಹೇಳುತ್ತಾನೆ ಯಾವ ಅಮೃತ ಕೊಟ್ಟಿದ್ದಾನೋ…
ಚಾಮರಾಜನಗರ : ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಗೂಂಡಾ ಪದಬಳಕೆ ಮಾಡಿದ್ದರು. ಇದೀಗ ಅವರಿಗೆ ಚುನಾವಣಾ ಆಯೋಗದಿಂದ ನೋಟಿಸ್ ಬಂದಿದೆ ಎಂದು ಪಶು ಸಂಗೋಪಾನ ಸಚಿವ ಕೆ ವೆಂಕಟೇಶ್ ತಿಳಿಸಿದರು. ಯತೀಂದ್ರ ಅವರು ಅಮಿತ್ ಶಾ ವಿರುದ್ಧ ಗುಂಡ ಪದಬಳಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಕೆ ವೆಂಕಟೇಶ್ ಹೇಳಿಕೆ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಟಿ ನರಸೀಪುರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಸಚಿವ ಕೆ ವೆಂಕಟೇಶ್ ಈ ಕುರಿತು ತಿಳಿಸಿದರು. ಯತೀಂದ್ರ ಅವರು ಅಮಿತ್ ಷಾ ವಿರುದ್ಧ ಗೂಂಡ ಹೇಳಿಕೆ ಹೇಳಿದ್ದಕ್ಕೆ ನೋಟಿಸ್ ಕೊಡಿಸಿದ್ದಾರೆ. ಯತೀಂದ್ರಗೆ ನೋಟಿಸ್ ಕೊಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಸಚಿವ ಕೆ ವೆಂಕಟೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚಿಗೆ ಯತಿಂದ್ರ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರನ್ನು ಗೂಂಡಾ ಅವರ ಮೇಲೆ ಸಾಕಷ್ಟು ಪ್ರಕರಣಗಳಿವೆ. ಅಂತಹವರನ್ನು ಮೋದಿಯವರು ಪಕ್ಕದಲ್ಲಿ…
ಬೆಂಗಳೂರು : ನಗರದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಯುವತಿಯನ್ನು ಬೆನ್ನಟ್ಟಿ ಡೋರ್ ತೆಗೆಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. https://kannadanewsnow.com/kannada/kannada-nameplate-mandatory-shopkeeper-translates-sadhguru-name-as-satta-guru/ ಈ ಒಂದು ಕೃತ್ಯದಲ್ಲಿ ಮತ್ತೋರ್ವ ಆರೋಪಿ ಭಾಗಿಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಸದ್ಯ ಪೊಲೀಸ್ ವಶದಲ್ಲಿರುವ ಜಗನ್ನಾಥ್ ಹಾಗೂ ತೇಜಸ್ ಎಂಬುವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಬೆಂಗಳೂರಿನಲ್ಲಿ ಕಾರ್ಯನಿಮಿತ್ತ ನಿನ್ನೆ ರಾತ್ರಿ ಸೇಂಟ್ ಜಾನ್ ಆಸ್ಪತ್ರೆಗೆ ಬಂದಿದ್ದ ಯುವತಿಯು ಬೇಗೂರಿನಲ್ಲಿರುವ ತಮ್ಮ ಮನೆಗೆ ಹಿಂತಿರುಗುವಾಗ ಕೋರಮಂಗಲ ಬಳಿ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಕಿಡಿಗೇಡಿಗಳು ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಮಡಿವಾಳದವರೆಗೂ ಫಾಲೋ ಮಾಡಿಕೊಂಡು ಬಂದಿದ್ದರಿಂದ ಆತಂಕಗೊಂಡ ಮಹಿಳೆ 112ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. https://kannadanewsnow.com/kannada/uk-woman-gives-birth-to-twins-within-22-days/ ತಕ್ಷಣ ಆತಂಕಗೊಂಡ ಯುವತಿ 112ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ…
ಹಾಸನ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ನಿಂತಿರುವುದು ಶ್ರೇಯಸ್ ಪಟೇಲ್ ಅಲ್ಲ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್. ಹೆದರಿ ಓಡುವ ಮಕ್ಕಳು ನಾನಲ್ಲ ಈ ಬಾರಿ ಹಾಸನ ಕ್ಷೇತ್ರದಲ್ಲಿ ಶ್ರೇಯಸ್ ಪಟೇಲರನ್ನು ಗೆಲ್ಲಿಸಿ ಎಂದು ಡಿಕೆ ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದರು. https://kannadanewsnow.com/kannada/does-the-maharaja-of-mysore-not-have-his-own-house-here-is-the-complete-assets-of-yaduveer/ ಹಾಸನದಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಒಂದೇ ಕುಟುಂಬದಿಂದ 3 ಸ್ಪರ್ಧಿಸಿದ್ದಾರೆ ಯಾರು ಇರಲಿಲ್ಲ. ಹಾಸನದಲ್ಲಿ ದೇವೇಗೌಡರ ಮೊಮ್ಮಗ, ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಅಳಿಯನನ್ನು ನಿಲ್ಲಿಸಿದ್ದಾರೆ.ಜೆಡಿಎಸ್ ಬಲಿಷ್ಠವಾಗಿದ್ದರೆ ದಳದ ಚಿನ್ಹೆ ಮೇಲೆ ಅಳಿಯನ ನಿಲ್ಲಿಸುತ್ತಿದ್ದರು ಈಗ ಜೆಡಿಎಸ್ ಶಕ್ತಿ ಹೊರಟುಹೋಗಿದೆ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. https://kannadanewsnow.com/kannada/arvind-kejriwal-demands-books-on-lord-ram-krishna-pm-modi/ ಸರ್ಕಾರ ಬಿಳಿಸಿದವರ ಜೊತೆ ಎಚ್. ಡಿ ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡಿದ್ದಾರೆ. ಆಗ ನಾವು ಸರ್ಕಾರ ಉಳಿಸಲು ಪ್ರಾಮಾಣಿಕ ಪ್ರಯತ್ನ…
ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಇಂದು ಅವರು ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅವರು ಅಲ್ಲಿ ಜನರಲ್ ಚೆಕ್ ಅಪ್ ಗಾಗಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ನಟ ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಸಂಜೆ ವೇಳೆ ಆಸ್ಪತ್ರೆಯಿಂದ ನಟ ಶಿವರಾಜಕುಮಾರ್ ಡಿಸ್ಚಾರ್ಜ್ ಸಾಧ್ಯತೆ ಇರಲಾಗುತ್ತಿದೆ.
ಮೈಸೂರು : ಲೋಕಸಭಾ ಚುನಾವಣೆಗೆ ಈ ಬಾರಿ ಮೈಸೂರು ಕ್ಷೇತ್ರದಲ್ಲಿ ಮೈಸೂರು ಮಹಾರಾಜರಾಗಿರುವ ಯದುವೀರ ಒಡೆಯರ್ ಅವರು ಸ್ಪರ್ಧಿಸುತ್ತಿದ್ದು ನಾಮಪತ್ರ ಸಲ್ಲಿಸುವ ವೇಳೆದ್ದು ಯಾವುದೇ ಕೃಷಿಭೂಮಿ ಹಾಗೂ ಸ್ವಂತ ಮನೆ ಹೊಂದಿಲ್ಲ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. ಹೌದು ಮೈಸೂರು ಮಹಾರಾಜರ ಬಳಿ ಸ್ವಂತ ಮನೆಯು ಇಲ್ಲ. ಈ ಕುರಿತಂತೆ ಆಸ್ತಿ ಘೋಷಣೆ ಮಾಡಿದ ಬಿಜೆಪಿ ಅಭ್ಯರ್ಥಿ ಯದುವೀರ ಅವರು, ಚುನಾವಣಾ ನಾಮಪತ್ರದ ವೇಳೆ ಆಫೀಡಿವೇಟ್ ಸಲ್ಲಿಸಿದ್ದು, ಒಟ್ಟು 4 ಕೋಟಿ 99 ಲಕ್ಷ 59 ಸಾವಿರ ರೂಪಾಯಿ ಚರಾಸ್ಥಿ ಹೊಂದಿದ್ದಾರೆ. ಸದ್ಯ ಕೈಯಲ್ಲಿ ಒಂದು ಲಕ್ಷ ರುಪಾಯಿ ನಗದು ಇದೆ. ಎರಡು ಬ್ಯಾಂಕಿನ ಖಾತೆಗಳಲ್ಲಿ 23.55 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ 1 ಕೋಟಿ ಮೌಲ್ಯದ ಬಾಂಡ್ ಹಾಗೂ ಶೇರುಗಳನ್ನು ಹೊಂದಿದ್ದಾರೆ.4 ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ಹೊಂದಿದ್ದಾರೆ. ಯಾವುದೇ ಕೃಷಿ ಭೂಮಿ ಹಾಗೂ ಸ್ವಂತ ಮನೆಯನ್ನು ಹೊಂದಿಲ್ಲ. ವಾಣಿಜ್ಯ ಕಟ್ಟಡಗಳು ಇಲ್ಲ. ಬ್ಯಾಂಕ್…
ಮೈಸೂರು : ನಿನ್ನೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಅಹಂ ಇದೆ ಅವರ ಗರ್ಭಭಂಗ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಅದಕ್ಕೆ ಇಂದುಸಿಎಂ ಸಿದ್ದರಾಮಯ್ಯ ನನಗೆ ಗರ್ವನೇ ಇಲ್ಲ ಅವರೇನು ನನ್ನ ಗರ್ವಭಂಗ ಮಾಡುವುದು ಎಂದು ಎಚ್ ಡಿ ದೇವೇಗೌಡ ಅವರ ಹೇಳಿಕೆಗೆ ತಿರುಗೇಟು ನೀಡಿದರು. https://kannadanewsnow.com/kannada/breaking-gst-collection-swells-to-rs-1-78-lakh-crore-in-march-2nd-highest-so-far/ ಮೈಸೂರಿನ ವರುಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನನ್ನ ಗರ್ವ ಭಂಗ ಮಾಡ್ತೀನಿ ಅಂತ ಎಚ್ ಡಿ ದೇವೇಗೌಡರು ಹೇಳುತ್ತಾರೆ. ಕೋಮುವಾದಿ ಪಕ್ಷ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿ ಕೊಂಡಿದೆ. ಬಿಜೆಪಿ ಕೋಮುವಾದಿ ಪಕ್ಷ ಅಂತ ಹೇಳಿದ್ದು ಯಾರು? ಇದನ್ನು ಹೇಳಿದರೆ ಸಿದ್ದರಾಮಯ್ಯಗೆ ಗರ್ವ ಅಂತ ಹೇಳುತ್ತಾರೆ, ಸಿದ್ದರಾಮಯ್ಯ ಗರ್ವಭಂಗ ಮಾಡುತ್ತೇನೆ ಅಂತಾರೆ ನನಗೆ ಗರ್ವ ಇದ್ದರೆ ಅಲ್ವಾ ಭಂಗ ಮಾಡೋದು ಎಂದು ತಿರುಗೇಟು ನೀಡಿದರು. https://kannadanewsnow.com/kannada/breaking-stock-market-jumps-spectacular-on-the-first-day-of-the-month-rs-6-50-lakh-crore-profit-for-investors/ ಇದೆ HD ದೇವೇಗೌಡರು ಬಿಜೆಪಿ ಒಂದು ಕೋಮುವಾದಿ ಪಕ್ಷ.ಯಾವ ಕಾರಣಕ್ಕೂ ಬಿಜೆಪಿಗೆ ಸೇರುವುದಿಲ್ಲ.…
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಯಾನದ ಪೋಸ್ಟರ್ ತಿರುಚಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬಿಕೆ ನಾಯ್ಡು ವಿರುದ್ಧ ಇದೀಗ FIR ದಾಖಲಾಗಿದೆ. ಬೆಂಗಳೂರಿನ ಹೈ ಗ್ರೌಂಡ್ ಠಾಣೆಯ ಪೊಲೀಸರಿಂದ FIR ದಾಖಳಿಸಿಕೊಳ್ಳಲಾಗಿದೆ.ಬಿಜೆಪಿ ಕಾನೂನು ಪ್ರಕೋಷ್ಟ ಮಾಜಿ ಸಂಚಾಲಕ ಯೋಗೇಂದ್ರ ಹೊಡಗಟ್ಟ ಅವರಿಂದ ದೂರು ಸಲ್ಲಿಸಲಾಗಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟಿಗೆ ಅವರು ಖಾಸಗಿ ದೂರನ್ನು ಸಲ್ಲಿಸಿದ್ದರು. ಬಿಜೆಪಿಯ ನಾನು ಕರಸೇವಕ ನನ್ನನ್ನು ಬಂಧಿಸಿ ಅಭಿಯಾನದ ಕುರಿತಂತೆ ಬಿಜೆಪಿ ಅಭಿಯಾನದ ಪೋಸ್ಟರ್ ತಿರುಚಿ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು.ಈ ವೇಳೆ ಕಾಂಗ್ರೆಸ್ ಪಕ್ಷ ತಿರುಚಿದ ಪೋಸ್ಟ್ ಹಂಚಿಕೊಂಡಿತ್ತು. ಫೋರ್ಜರಿ ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸಿದ ಆರೋಪದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಿತ್ತು.