Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಮಕ್ಕಳ ತಜ್ಞವೈದ್ಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಬೆಂಗಳೂರು ನಾರ್ತ್ ಆಸ್ಪತ್ರೆಯಲ್ಲಿ ಅನಂತ ಪ್ರಸಾದ್ ಎನ್ನುವ ವೈದ್ಯರು ಮಕ್ಕಳ ತಜ್ಞರಾಗಿದ್ದರು ಎನ್ನಲಾಗುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಮಕ್ಕಳ ತಜ್ಞ ಅನಂತ್ ಪ್ರಸಾದ್ ಅವರು ವಿವಾಹವಾಗಿದ್ದರು. ಎಂದು ಹೇಳಲಾಗುತ್ತಿದ್ದು ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೊಡಗಿನಲ್ಲಿ ಹುಲಿ ದಾಳಿ : ಕಾರ್ಮಿಕ ಸಾವು ಜಿಲ್ಲೆಯ ಪೊನ್ನಂ ಪೇಟೆ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಹುಲಿ ದಾಳಿಗೆ ಕೂಲಿ ಕಾರ್ಮಿಕನೊಬ್ಬ ಸಾವನಪ್ಪಿದ್ದಾನೆ, ಕೆರೆ ಬಳಿ ದನ ಮೇಯಿಸುತ್ತಿದ್ದ ಅಸ್ಸಾಂ ಮೂಲದ ರಹಮಾನ್ (50) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು : ಬೆಂಗಳೂರಿನ ಸಾರಕ್ಕಿ ಬಳಿ ಇರುವ ಪಾರ್ಕ್ ನಲ್ಲಿ ಜೋಡಿ ಕೊಲೆಯಾಗಿದ್ದು ಕೊಲೆಯಾದವರನ್ನು ಸುರೇಶ ಹಾಗೂ ಅನುಷಾ ಎಂದು ಹೇಳಲಾಗುತ್ತಿದೆ. ಸಂಜೆ 4:15ರ ಸುಮಾರಿಗೆ ಕಲ್ಲು ಎತ್ತಿ ಹಾಕಿ ಜೋಡಿ ಕೊಲೆ ಮಾಡಲಾಗಿದೆ. ಕೊಲೆಯಾದ ಸುರೇಶ್ (46) ಅನುಷಾ (25) ಇಬ್ಬರು ಪರಿಚಿತರು ಎಂದು ಹೇಳಲಾಗುತ್ತಿದೆ. ಸುರೇಶಗೆ ಮದುವೆಯಾಗಿದ್ದರು ಕೂಡ ಅನುಷಾ ಸಂಬಂಧ ಹೊಂದಿದ್ದಳು. ಗುರುಗುಂಟೆಪಾಳ್ಯದ ನಿವಾಸಿ ಸುರೇಶ್ ಹಾಗೂ ಶಾಕಾಂಬರಿ ನಗರದ ನಿವಾಸಿ ಅನುಷ ಎಂದು ಹೇಳಲಾಗುತ್ತಿದೆ. ಆದರೆ ಅನುಷಾಗೆ ಸಂಬಂಧವನ್ನು ಮುಂದುವರಿಸಲು ಇಷ್ಟ ಇರಲಿಲ್ಲ ಇಂದು ಭೇಟಿಯಾಗಿ ಸಂಬಂಧ ಕಡಿತ ಮಾಡುವ ನಿರ್ಧಾರವನ್ನು ಮಾಡಿದ್ದರು. ಆದರೆ ಅನುಷಾ ತನ್ನ ಕೈ ತಪ್ಪಿ ಹೋಗ್ತಾಳೆ ಎಂದು ಸುರೇಶ್ ಕೋಪಗೊಂಡಿದ್ದ. ಕೋಪಗೊಂದು ಆರೋಪಿ ಸುರೇಶ್ ಅನುಷಾಗೆ ಚಾಕುವಿನಿಂದ ಹಿಡಿದಿದ್ದಾನೆ ಅನುಷಾ ತಾಯಿ ಗೀತಾ ಅಡ್ಡಿಪಡಿಸಿದರೂ ಕೂಡ ಸುರೇಶ್ ಚಾಕು ಇರಿದಿದ್ದಾನೆ. ಈ ವೇಳೆ ಸಿಮೆಂಟ್ ಇಟ್ಟಿಗೆಯನ್ನು ಸುರೇಶ್ ತಲೆ ಮೇಲೆ ಗೀತಾ ಎತ್ತಿ ಹಾಕಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಹಾಗೂ…
ಹುಬ್ಬಳ್ಳಿ : ಇಂದು ಹುಬ್ಬಳ್ಳಿ ನಗರದಲ್ಲಿ ಹಾಡು ಹಗಲೇ ಕಾರ್ಪೊರೇಟರ್ ಪುತ್ರಿ ಯನ್ನು ಭೀಕರವಾಗಿ ಕೊಲೆ ಮಾಡಿದ್ದು,ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿ ನೇಹ ಹಿರೇಮಠ ಎನ್ನುವ ಯುವತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈಯಲಾಗಿದೆ.ಹುಬ್ಬಳ್ಳಿ ಧಾರವಾಡ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಪುತ್ರಿ ನೇಹ ಎಂದು ಹೇಳಲಾಗುತ್ತಿದೆ.ಇದರಿಂದ ಹುಬ್ಬಳ್ಳಿ ಜನತೆ ಬೆಚ್ಚಿಬಿದ್ದಿದ್ದಾರೆ ಹಾಡು ಹಗಲೇ ಕಾಲೇಜಿನಲ್ಲಿ ಈ ಒಂದು ಭೀಕರ ಹತ್ಯೆ ನಡೆದಿದೆ. ಚಾಕುವಿನಿಂದ ಇರಿದು ನೇಹಾ ಹಿರೇಮಠ ಎನ್ನುವ ಯುವತಿಯನ್ನು ಕೊಲೆ ಮಾಡಲಾಗಿದೆ.ಪಾಲಿಕೆಯ ಸದಸ್ಯರಾಗಿರುವ ನಿರಂಜನ ಹಿರೇಮಠ ಪುತ್ರಿ ನೇಹಾ ಎಂದು ಹೇಳಲಾಗುತ್ತಿದ್ದು ಹಾಡು ಹಗಲೇ ಕಾಲೇಜಿನಲ್ಲಿ ಘೋರ ದುರಂತ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿಕೆಯ ನೀಡಿದರು.
ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಅವಳಿ ಜವಳಿ ಮಕ್ಕಳ ಅನುಮಾನಾಸ್ಪದ ಸಾವಿಗೇ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತಾಯಿ ಮಕ್ಕಳಿಗೆ ವಿಷವುಣಿಸಿ ಕೊಂದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾಳೆ. ಗ್ರಾಮದ ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಮೃತಪಟ್ಟವರು ಎಂದು ಹೇಳಲಾಗಿತ್ತು.ಬೀದಿ ಬದಿ ಮಾರಾಟಕ್ಕಿದ್ದ ಐಸ್ಕ್ರೀಂ ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು ಮೃತಪಟ್ಟಿದ್ದು ತಾಯಿ ಅಸ್ವಸ್ಥಗೊಂಡಿರುವ ಘಟನೆ ನಡೆದಿತ್ತು. ಆದರೆ ಪೊಲೀಸರ ವಿಚಾರಣೆಯ ವೇಳೆ ತಾಯಿ ಪೂಜಾ ನಾನೇ ವಿಷಯವುಣಿಸಿ ಕೊಂದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ತಾಯಿ ಪೂಜಾ ಇದೀಗ ತಪ್ಪು ಒಪ್ಪಿಕೊಂಡಿದ್ದು, ಆಸ್ಪತ್ರೆಯಲ್ಲಿ ಬೆಳಗ್ಗೆ ಒಂದುವರೆ ವರ್ಷದ ತ್ರಿಶೂಲ್ ಹಾಗೂ ತ್ರಿಶಾ ಸಾವನ್ನಪ್ಪಿದ್ದರು.ಐಸ್ ಕ್ರೀಮ್ ತಿಂದ ಬಳಿಕ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ಪೊಲೀಸರ ವಿಚಾರಣೆ ವೇಳೆ ಪೂಜಾ ಮಕ್ಕಳಿಗೆ ವಿಷ ಉಣಿಸಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ತನ್ನ ಮೂರು ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ತಾನು ಸೇವಿಸಿದ್ದಳು.…
ಬೆಂಗಳೂರು : ಅತ್ತಿಗೆಯ ಕಿರುಕುಳಕ್ಕೆ ಬೇಸತ್ತ ಮೈದುನ ಹಬ್ಬ ಕೊಠಡಿಯಲ್ಲಿ ವೆಲ್ ಬಳಸಿ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರಿಶಿಣ ಕುಂಟೆಯಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನಾಗರಾಜು (35) ಎಂದು ಹೇಳಲಾಗುತ್ತಿದ್ದು ಇದೀಗ ಅಮೃತ ನಾಗರಾಜು ಅತ್ತಿಗೆ ಭಾಗ್ಯಮ್ಮ ವಿರುದ್ಧ ನಾಗರಾಜು ತಂದೆ-ತಾಯಿ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಕಿರುಕುಳದ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆ ಹರಿಶಿಣ ಕುಂಟೆಯಲ್ಲಿ ಮನೆ ಕಟ್ಟಿಸುವವಾಗ ಮೇಸ್ತ್ರಿ ಆಗಿ ಬಂದಿದ್ದ ದಿಲೀಪ್ ಎನ್ನುವ ವ್ಯಕ್ತಿಯ ಜೊತೆ ಅತ್ತಿಗೆ ಸಲುಗೆ ಇದುದ್ದನ್ನು ಮೈದುನ ಪ್ರಶಿಸಿದ್ದಾನೆ.ಈ ವಿಷಯವಾಗಿ ಮನೆ ಬಿಟ್ಟು ಹೋಗುವಂತೆ ದಂಡ ಪಿಂಡ ಎಂದು ಭಾಗ್ಯಮ್ಮ ಹೀಯಾಳಿಸಿದ್ದಳು. ಇದರಿಂದ ಮನನೊಂದ ನಾಗರಾಜು, ವೇಲ್ ಬಳಸಿ ರೂಂನ ಪ್ಯಾನ್ಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಕಾರಣರಾದ ಭಾಗ್ಯಮ್ಮ ಹಾಗೂ ದಿಲೀಪ್ ಮೇಲೆ ದೂರು ದಾಖಲು ಮಾಡಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು…
ಮಂಡ್ಯ : ತನ್ನ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಪತ್ನಿ ಜಗಳ ತೆಗೆದಿದ್ದಕ್ಕೆ ಪಾಪಿ ಪತಿ ಕುಡಿಯುವ ನೀರಿನಲ್ಲಿ ವಿಷ ಬೆರೆಸಿ ಪತ್ನಿ ಇಬ್ಬರು ಮಕ್ಕಳನ್ನು ಹತ್ಯೆಗೈದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿರುವ ವರದಿ ಘಟನೆಯಾಗಿದೆ. ಕೀರ್ತನ (23) ಮಕ್ಕಳಾದ ಜಯಸಿಂಹ (4) ರಿಷಿಕ (1) ಸಾವನ್ನಪ್ಪಿದ್ದಾರೆ.ಐದು ವರ್ಷಗಳ ಹಿಂದೆ ನರಸಿಂಹ ಹಾಗೂ ಕೀರ್ತನ ಮದುವೆಯಾಗಿದ್ದರು.ದಂಪತಿಗೆ ಒಂದು ಗುಂಡು ಮಗು ಹಾಗೂ ಒಂದು ಹೆಣ್ಣು ಮಗು ಇತ್ತು. ಕಟಿಂಗ್ ಶಾಪ್ ಇಟ್ಕೊಂಡು ಆರೋಪಿ ನರಸಿಂಹ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ನರಸಿಂಹ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಪತ್ನಿ ಕೀರ್ತನ ಜಗಳ ತೆಗೆಯುತ್ತಿದ್ದಳು. ಇದೇ ವಿಷಯವಾಗಿ ಮನೆಯಲ್ಲಿ ಪರಿ ನರಸಿಂಹ ಜೊತೆಗೆ ಕೀರ್ತನ ಆಗಾಗ ಜಗಳವಾಡುತ್ತಿದ್ದಳು ಇದೇ ಕಾರಣಕ್ಕೆ ವಿಷ ಹಾಕಿ ಪತ್ನಿ ಮಕ್ಕಳನ್ನು ನರಸಿಂಹ ಹತ್ಯೆಗೈದಿದ್ದಾನೆ. ಕುಡಿಯುವ ನೀರಿಗೆ ಕ್ರಿಮಿನಾಶಕ ಹಾಕಿದ್ದ ಆರೋಪಿ ನರಸಿಂಹ ಅದೇ ನೀರನ್ನು ಪತ್ನಿ ಹಾಗೂ ಮಕ್ಕಳಿಗೆ ಕುಡಿಸಿ ಬಳಿಕ ತಾನು ಕುಡಿದಿದ್ದ…
ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆಗೆ ಸರ್ಕಾರದ ಸಮ್ಮತಿ ಪಡೆದಿದ್ದನ್ನು ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಲ್ಲಿಸಿರುವ ಅರ್ಜಿಯನ್ನು ಇದೀಗ ಹೈಕೋರ್ಟ್ ವಿಚಾರಣೆ ನಡೆಸಿದೆ. ಇಂದು ಈ ಪ್ರಕರಣದ ಕುರಿತಂತೆ ಹೈಕೋರ್ಟ್ ನಲ್ಲಿ, ನ್ಯಾ ಕೆ. ಸೋಮಶೇಖರ್ ನ್ಯಾ ಉಮೇಶ್ ಎಂ ಅಡಿಗರಿದ್ದ ಪೀಠದಲ್ಲಿ ವಿಚಾರಣೆ ನಡೆಸಲಾಯಿತು.ಸಿಬಿಐ ಪರ ವಿಶೇಷ ಅಭಿವೊಜಕ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದು, ಒಮ್ಮೆ ಸಿಬಿಐ ತನಿಖೆಗೆ ವಹಿಸಿದ ನಂತರ ಹಿಂಪಡೆಯುವಂತಿಲ್ಲ. ತನಿಖೆಗೆ ಸಮ್ಮತಿ ಪಡೆದ ಸರ್ಕಾರದ ಕ್ರಮ ಕಾನೂನುಬಾಹಿರವೆಂದು ವಾದಿಸಿದರು. ಲೋಕಾಯುಕ್ತ ತನಿಖೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪರ ವಕೀಲ ವೆಂಕಟೇಶ ದಳವಾಯಿ ಆಕ್ಷೇಪ ವ್ಯಕ್ತಪಡಿಸಿದ್ದು, ಡಿಕೆ ಶಿವಕುಮಾರ್ ಗೆ ಅನುಕೂಲವಾಗಲೆಂದೆ ಲೋಕಾಯುಕ್ತ ತನಿಖೆ ನಡೆಸಲಾಗುತ್ತದೆ ಹೀಗಾಗಿ ಸರ್ಕಾರದ ಆದೇಶವನ್ನು ರದ್ದು ಪಡಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪರ ವಕೀಲ ವೆಂಕಟೇಶ್ ದಳವಾಯಿ ಮನವಿ ಮಾಡಿದರು. ಈ ವೇಳೆ…
ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಕ್ಷಾ ರಾಮಯ್ಯ ಪರವಾಗಿ ಚುನಾವಣೆ ಪ್ರಚಾರ ಮಾಡಿದರು ಈ ವೇಳೆ ಮಾತನಾಡಿದ ಅವರು ರಾಜ್ಯದ ಜನರಿಗೆ ಮೋದಿ ಅವರ ಮೇಲೆ ವಿಶ್ವಾಸವಿಲ್ಲ ರಾಜ್ಯದಲ್ಲಿ ಮೋದಿಯಲೇ ಯಾವುದು ಇಲ್ಲ ಎಂದು ವಾಗ್ದಾಳಿ ನಡೆಸಿದರು. ರಾಜ್ಯದ ಜನರಿಗೆ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ರಾಜ್ಯದ ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆ ಹೆಚ್ಚಾಗಿದೆ.ಈ ಬಾರಿ ಭರವಸೆ ಕೊಟ್ಟಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ. ರಾಜ್ಯದ ಜನರು ಮತ್ತೊಮ್ಮೆ ನಮ್ಮ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ.ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಅವರು ಮ್ಯಾಜಿಕ್ ಮಾಡಲು ಆಗಲ್ಲ. ರಾಜ್ಯದ ಜನರಿಗೆ ಪ್ರಧಾನಿ ಮೋದಿ ಅವರ ಮೇಲೆ ವಿಶ್ವಾಸವಿಲ್ಲ ಎಂದರು. ಹೆಣ್ಣು ಮಕ್ಕಳ ಬಗ್ಗೆ ಅವರ ಭಾವನೆ ಏನಿದೆ ಅಂತ ತೋರಿಸುತ್ತದೆ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಅನ್ನೋದು ಕೆಟ್ಟ ಭಾಷೆ ಎಚ್ ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು…
ಕೊಪ್ಪಳ : ದೇವಸ್ಥಾನ ಒಂದರಲ್ಲಿ ಏಕಾಏಕಿ ಕರಡಿ ಆಗಮಿಸಿದ್ದು ಈ ವೇಳೆ ವೃದ್ಧನ ಮೇಲೆ ಕರಡಿ ದಾಳಿ ನಡೆಸಿದೆ.ಆದರೆ ಗಾಯಾಳು ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ವೃದ್ಧ ಸಾವನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ್ ದಲ್ಲಿ ನಡೆದಿದೆ. ಹೌದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚೆನ್ನಪ್ಪ ಮಡಿವಾಳರ್ (74) ಸಾವನ್ನಪ್ಪಿದ್ದಾರೆ.ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ್ ದಲ್ಲಿ ದಾಳಿ ನಡೆಸಿತ್ತು ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ನುಗ್ಗಿದ್ದ ಕರಡಿಯನ್ನು ಸೆರೆ ಹಿಡಿದಿದ್ದರು.ದೇವಸ್ಥಾನದಲ್ಲಿ ದೀಪದ ಎಣ್ಣೆ ನೀರು ಕುಡಿಯಲು ಕರಡಿ ಬಂದಿತ್ತು ಎಂದು ಹೇಳಲಾಗುತ್ತಿತ್ತು. ಇದನ್ನು ಗಮನಿಸಿ ಜನರು ಬಾಗಿಲು ಮುಚ್ಚಿದ್ದರು.ದೇವಸ್ಥಾನದ ಎಲ್ಲಾ ಬಾಗಿಲು ಮುಚ್ಚಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕರಡಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇರಿಸಿದ್ದು ಕರಡಿ ಈ ವೇಳೆ ತಪ್ಪಿಸಿಕೊಂಡು ವೃದ್ಧ ಚೆನ್ನಪ್ಪ ಮಡಿವಾಳರ ಎನ್ನುವ ವೃದ್ಧನ ಮೇಲೆ ದಾಳಿ ಮಾಡಿತ್ತು. ಈ ವೇಳೆ ಗಾಯಾಳು ಚೆನ್ನಪ್ಪ ಮಡಿವಾಳರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ…
ಚಿಕ್ಕಬಳ್ಳಾಪುರ : ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರು ಎಷ್ಟೇ ಸಾಲ ಮಾಡಿದ್ದರು ಕೂಡ ಅವರ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ತಿಳಿಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಕ್ಷಾ ರಾಮಯ್ಯ ಪರವಾಗಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ನಿಮ್ಮ ಬಾಯಿಗೆ ಸಕ್ಕರೆ ಹಾಕುತ್ತೇನೆ 40,000 ಮತಗಳ ಲೀಡ್ ಕೊಡಿ ಮತದಾರರ ಬಾಯಿಗೆ ಸಕ್ಕರೆ ಹಾಕುತ್ತೇನೆ ಶಾಸಕ ಸುಬ್ಬ ರೆಡ್ಡಿಗೆ ಶಕ್ತಿ ಬರಬೇಕು ಅಂದರೆ ಕಾಂಗ್ರೆಸ್ ಗೆ ಮತ ಹಾಕಿ ಎಂದು ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ತಿಳಿಸಿದರು. ಜಾತಿಗಣತಿಯಲ್ಲಿ ಏನಿದೆ ಎಂದು ನಾನು ಇನ್ನೂ ನೋಡಿಲ್ಲ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಆಯೋಗ ರಾಜ್ಯ ಸರ್ಕಾರಕ್ಕೆ ಜಾತಿಗಣತಿ ವರದಿಯನ್ನು ಸಲ್ಲಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾತಿಗಣತಿ ಮಾಡಿದೆ ಸಂವಿಧಾನ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.…