Author: kannadanewsnow05

ಕಲಬುರಗಿ : ಚುನಾವಣಾ ಪ್ರಚಾರದ ವೇಳೆ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ ಯತ್ನಾಳ್ ಹುಬ್ಬಳ್ಳಿಯಲ್ಲಿ ನ್ಯಾಯ ಹಿರೇಮಠ ಹತ್ತೆಯ ಆಗಿದೆ ಅಂತ ಸುಮ್ಮನಾದರೆ ನಾಳೆ ಕಲಬುರ್ಗಿಯಲ್ಲೂ ಆಗಬಹುದು ನಿಮ್ಮ ಮನೆಯಲ್ಲಿ ಆಗಬಹುದು ಎಂದು ಚುನಾವಣೆ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದರು. ಕಲ್ಬುರ್ಗಿಯ ಗಂಜ್ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನೇಹ ಹಿರೇಮಠ ಕೊಲೆ ಹುಬ್ಬಳ್ಳಿಯಲ್ಲಿ ಆಗಿದೆ ಅಂತ ಸುಮ್ಮನಾದರೆ ನಾಳೆ ಕಲಬುರ್ಗಿಯಲ್ಲೂ ಆಗಬಹುದು ನಿಮ್ಮ ಮನೆಯಲ್ಲಿಯೂ ಆಗಬಹುದು ಎಂದು ಕಲ್ಬುರ್ಗಿಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಹೇಳಿಕೆ ನೀಡಿದರು. ಗಾಡಿ ತಗೊಂಡು ಕೊರಳಲ್ಲಿ ಚೈನ್ ಹಾಕಿ ನಿಮ್ಮ ಕಾಲೋನಿಗೂ ಬರುತ್ತಾರೆ ರೂ.50 ಹಾಕಿಕೊಂಡು ಬರುತ್ತಾರೆ ಸೂ…ಮಕ್ಕಳು. ಅವರು ಬಂದಾಗ ಮನೆಯ ಮೇಲೆ ಕಲ್ಲು ಸಂಗ್ರಹ ಮಾಡಿಕೊಂಡು ಇರಿ ಎಂದು ಶಾಸಕ ಹೇಳಿದರು. ನೇಹಾ ಕೊಲೆ ಪ್ರಕರಣದಂತಹ ಘಟನೆ ನಡೆಯಬಾರದು ಅಂದರೆ ಜಾಗೃತರಾಗಿ ಮತ ಹಾಕಿ ಆಶೀರ್ವಾದ ಮಾಡಿ. ನಾವು ನೀವು ಸುರಕ್ಷತೆಯಿಂದ ಇರುತ್ತೇವೆ ಎಂದು ಕಲ್ಬುರ್ಗಿ ಗಂಜ್…

Read More

ಬೆಳಗಾವಿ : ಹುಬ್ಬಳ್ಳಿಯಲ್ಲಿ ಬಿಬಿ ಕಾಲೇಜಿನ ಆವರಣದಲ್ಲಿ ನೇಹ ಹಿರೇಮಠ್ ಕೊಲೆ ಇನ್ನು ಹಸಿರಾಗಿರುವಾಗಲೇ ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಸೌದತ್ತಿ ಪೊಲೀಸ್ ಅಣ್ಣ ವ್ಯಾಪ್ತಿಯಲ್ಲಿ ಮುಸ್ಲಿಂ ದಂಪತಿಗಳಿಂದ ಮತಾಂತರಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಸೌದತ್ತಿ ಠಾಣಾ ವ್ಯಾಪ್ತಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ಮತಾಂತರಕ್ಕೆ ಯತ್ನಿಸಿದ ರಫೀಕ್ ಬೇಫಾರಿ ಹಾಗೂ ಪತ್ನಿ ಕೌಸರ್ ಳನ್ನು ಇದೀಗ ಬಂಧಿಸಲಾಗಿದೆ.ಸಂತ್ರಸ್ತ ಮಹಿಳೆ ಮತಾಂತರದ ಆರೋಪ ಮಾಡಿದ್ದಳು ಎಂದು ಹೇಳಲಾಗುತ್ತಿದೆ. ಸೌದತ್ತಿ ಠಾಣೆಯಲ್ಲಿ ಅನ್ಯಾಯ ಕೊಳಗಾಗಿದ್ದ ಮಹಿಳೆ ದೂರನ್ನು ದಾಖಲಿಸಿದ್ದಳು. ಮಹಿಳೆಯ ದೂರಿನ ಅನ್ವಯ ಇದೀಗ ಗಂಡ ಹೆಂಡತಿಯನ್ನು ಅರೆಸ್ಟ್ ಮಾಡಲಾಗಿದೆ.ಖಾಸಗಿ ಕ್ಷಣದ ದೃಶ್ಯ ವೈರಲ್ ಮಾಡುವುದಾಗಿ ಹೇಳಿ ಬೆದರಿಸಿ ಮತಾಂತರಕ್ಕೆ ಗಂಡ ಹೆಂಡತಿ ಯತ್ನಿಸುತ್ತಿದ್ದರು. ಬುರ್ಖಾ ಹಾಕಬೇಕು ನಮಾಜ್ ಮಾಡಬೇಕೆಂದು ಕಂಡೀಶನ್ ಹಾಕಿದ್ದರು.ರಫೀಕ್ ನೀಡಿದ ಕಿರುಕುಳದ ಬಗ್ಗೆ ಮಹಿಳೆ ತನ್ನ ಪತಿಗೆ ಮಾಹಿತಿ ನೀಡಿದಳು ಎಂದು ಹೇಳಲಾಗುತ್ತಿದೆ.

Read More

ಹುಬ್ಬಳ್ಳಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶನಿ ಎಂದು ಕರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದು, ಇಂದಿರಾ ಗಾಂಧಿ ಅವರ ಜಾಗಕ್ಕೆ ಮೋದಿ ಬಂದು ಕುಳಿತಿದ್ದಾರೆ ಎನ್ನುವುದಕ್ಕೆ ಪ್ರಧಾನ ಮಂತ್ರಿ ಹುದ್ದೆ ಏನು ಗಾಂಧಿ ಕುಟುಂಬದ ಸ್ವತ್ತ ಎಂದು ಆಕ್ರೋಶ ಅವರ ಹಾಕಿದರು. ಹುಬ್ಬಳ್ಳಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ ನಾಯಕ ಮೋದಿ ವಿರುದ್ಧ ನಿಂದನೆಗಳನ್ನು ಮಾಡುತ್ತಿದ್ದಾರೆ ಟೀಕೆಯಲ್ಲ. ಹಿಂದೆ ಸಿದ್ದರಾಮಯ್ಯ ಅವರು 2013ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಆನಂತರ ಮುಖ್ಯಮಂತ್ರಿ ಆದರು ನಂತರ ಒಂದೇ ವರ್ಷದಲ್ಲಿ 2014ರಲ್ಲಿ ಲೋಕಸಭೆ ಚುನಾವಣೆ ಬಂದಾಗ ಮೋದಿ ವಿರುದ್ಧ ಅತ್ಯಂತ ಕೆಟ್ಟದಾಗಿ ನಿಂದನಾತ್ಮಕ ಭಾಷೆಯಲ್ಲಿ ಮಾತನಾಡಿದರು. ಆಗ ಇಡೀ ದೇಶದಲ್ಲಿ ಕಾಂಗ್ರೆಸ್ ಮಣ್ಣುಮುಕ್ಕಿತು. ಮೊದಲ ಬಾರಿಗೆ ಜವರಹಾಲ್ ನೆಹರು ಪ್ರಧಾನಮಂತ್ರಿಯ ಆದರೂ. ಅದರ ನಂತರ ಅವರ ಪುತ್ರಿ ಇಂದಿರಾಗಾಂಧಿ ಅವರು ಪ್ರಧಾನ ಮಂತ್ರಿ ಆದ ಬಳಿಕ…

Read More

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಶನಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆಗೆ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಬೆಂಗಳೂರಿನಲ್ಲಿ ಚಲವಾದಿ ನಾರಾಯಣ ಸ್ವಾಮಿ ಅವರು ರಮೇಶ್ ಕುಮಾರ್ ಅವರ ನಾಲಿಗೆಯನ್ನು ಗೋಮೂತ್ರದಲ್ಲಿ ತೊಳೆಯಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜನ್ಮಕ್ಕೆ ನಾಚಿಕೆ ಆಗಬೇಕು.ರಮೇಶ್ ಕುಮಾರ್ ನಾಲಿಗೆಯನ್ನು ಯಾವುದರಲ್ಲಿ ತೊಳಿಬೇಕು ಹೇಳಿ? ಗೋಮೂತ್ರ ಹಾಕಿ ರಮೇಶ್ ಕುಮಾರ್ ನಾಲಿಗೆ ತೊಳೆಯಬೇಕಾ? ರಮೇಶ್ ಕುಮಾರ್ ವಯಸ್ಸಿಗೆ ತಕ್ಕ ಹಾಗೆ ಮಾತನಾಡಿದ್ದಾರಾ? ಎಂದು ತಿಳಿಸಿದರು. ಕೋಲಾರದಲ್ಲಿ ರಮೇಶ್ ಕುಮಾರ್ ಗೆ ಸ್ವಾಮಿ ಸ್ವಾಮಿ ಅಂತ ಕರೆಯುತ್ತಾರೆ.ಅದೇ ರೀತಿಯಾಗಿ ಅವರು ವರ್ತಿಸಿದ್ದಾರೆ.ರಮೇಶ್ ಕುಮಾರ್ ಬಹುಶಹ ಕಾಂಗ್ರೆಸ್ಸಿಗೆ ಸಿದ್ದರಾಮಯ್ಯ ಶನಿ ಅಂತಿರಬೇಕು. ನಾವು ಕಟ್ಟಿದ ಮನೆಯಲ್ಲಿ ಬಂದು ಒಕ್ಕರಿಸಿಕೊಂಡಿದ್ದಾನೆಂದು ಹೇಳಿರಬೇಕು. ನರೇಂದ್ರ ಮೋದಿ ಕಾಂಗ್ರೆಸ್ ಗೆ ಶನಿ ಥರಾನೇ ಕಾಣಿಸಿದ್ದರೆ ಸ್ವಾಗತಿಸುತ್ತೇನೆ. ಮೋದಿ ಕಾಂಗ್ರೆಸ್ ಪಾಲಿಗೆ ಶನಿನೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ರಮೇಶ್…

Read More

ಬೀದರ್ : ಹುಬ್ಬಳ್ಳಿಯ ಬಿವಿಬಿ ಕಾಲೇಜುನಲ್ಲಿ ನೇಹಾ ಹತ್ಯೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ರಾಜ್ಯದಲ್ಲಿ ಮತ್ತೊಂದು ಘೋರ ಘಟನೆ ನಡೆದಿದ್ದು, ಬೀದರ್ ನಲ್ಲಿ ಲವ್ ಜಿಹಾದ್ ಹೆಸರಲ್ಲಿ 9ನೇ ತರಗತಿ ಬಾಲಕಿಯ ಮೇಲೆ ಮುಸ್ಲಿಂ ಯುವಕನೊಬ್ಬ ಅತ್ಯಾಚಾರ ನಡೆಸಿರುವ ಘೋರ ದುರಂತ ನಡೆದಿದೆ.ಅನ್ಯಕೋಮಿನ ಯುವಕ ಕಳೆದ ಎರಡು ವರ್ಷಗಳಿಂದ ಹಿಂದೂ ಧರ್ಮದ 9ನೇ ತರಗತಿ ಹುಡುಗಿಯನ್ನು ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಮಾಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಘಟನೆ ಕುರಿತಂತೆ ವಿದ್ಯಾರ್ಥಿನಿ ತಾಯಿ ಬೀದರ್ ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಜ್ಯದ ಗಡಿ ಜಿಲ್ಲೆ ಬೀದರ್‌ನಲ್ಲಿ ಮುಸ್ಲಿಂ ಯುವಕ ಲಾಯಕ್ ಅಲಿ (20) ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹೈಸ್ಕೂಲ್ ಓದುತ್ತಿರುವ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಅಶ್ಲೀಲ ಪೊಟೊಗಳನ್ನ ತೆಗೆದುಕೊಂಡಿದ್ದಾನೆ. ನಂತರ, ಆಕೆಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಅಂತಾ ಬೆದರಿಸಿ, ತಾನು ಹೇಳಿದಲ್ಲಿಗೆ ಬರಬೇಕೆಂದು ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ. ಬಾಲಕಿ ಒಂಬತ್ತನೇ ತರಗತಿಗೆ ಹೋಗುತ್ತಿದ್ದ ವೇಳೆ…

Read More

ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.ಕಾಂಗ್ರೆಸ್ ಸರ್ಕಾರ ಜನರ ಬದುಕಿನ ಗ್ಯಾರಂಟಿಯನ್ನು ಕಸಿದುಕೊಂಡಿದೆ ಎಂದು ಹುಬ್ಬಳ್ಳಿ ನಗರದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ದೃಷ್ಟಿಕರಣ ನೀತಿಯೇ ಇಂತಹ ಕೊಲೆಗೆ ಕಾರಣ. ರಾಜ್ಯ ಸರ್ಕಾರ ಸಾಂತ್ವನ ಹೇಳಿಲ್ಲ. ವಿದ್ಯಾರ್ಥಿನಿ ಕೊಲೆ ಖಂಡಿಸಿಲ್ಲ. ತಮ್ಮದೇ ಪಕ್ಷದ ಪಾಲಿಗೆ ಸದಸ್ಯ ಇದ್ದರೂ ಕೂಡ ಸರ್ಕಾರ ಈ ಘಟನೆಯನ್ನು ಖಂಡನೇ ಮಾಡಿಲ್ಲ ಎಂದು ಕಿಡಿ ಕಾರಿದರು. ಸರ್ಕಾರ ಕೊಲೆಗಾರನ ಮನೆಗೆ ಪೊಲೀಸ್ ಗ್ಯಾರಂಟಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ನಟಿ ಹರ್ಷಿತ ಪೂರ್ಣಚ್ಚ ಮೇಲು ಹಲ್ಲೆಯಾಗಿದೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗೆ ಮಾತ್ರ ಎಲ್ಲಾ ಗ್ಯಾರಂಟಿ ಇದೆ. ನೇಹಾ ಫಯಾಜ್ ಮಧ್ಯೆ ಪ್ರೇಮ ವಿತ್ತು ಅಂತ ಬಿಂಬಿಸಲಾಗುತ್ತಿದೆ. ಪೊಲೀಸರು ಸರ್ಕಾರದ ಅಣತಿಯಂತೆಯೇ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಧಾರವಾಡದಲ್ಲಿ ‘ಜಸ್ಟೀಸ್ ಫಾರ್ ಲವ್’ ಸ್ಟೇಟಸ್ ವಿಚಾರವಾಗಿ ಮಾತನಾಡಿದ ಅವರು ಕೊಲೆಯಾಗಿದ್ದೆ ಸರಿ ಎನ್ನುವಂತೆ ಸ್ಟೇಟಸ್ ಇಟ್ಟುಕೊಂಡಿದ್ದಾರೆ.ಕಠಿಣ…

Read More

ಧಾರವಾಡ : ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ನನ್ನು ಧಾರವಾಡ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ ಈ ವೇಳೆ ಕಾರಾಗೃಹದ ಸಿಬ್ಬಂದಿಯ ಎದುರು ಆರೋಪಿ ಫಯಾಜ್ ಬಾಯ ಬಿಟ್ಟಿದ್ದು ನನ್ನ ಜೊತೆ ಮಾತನಾಡುವುದಿಲ್ಲ ಎಂದು ಹೇಳಿದಳು ಅದಕ್ಕೆ ಚಾಕು ಹಿಡಿದಿದ್ದೇನೆ ಎಂದು ಬಾಯಿಬಿಟ್ಟಿದ್ದಾನೆ. ಕಾರಾಗೃಹದ ಸಿಬ್ಬಂದಿ ಎದುರುಗಡೆ ಅಂದಿನ ಘಟನೆ ಕುರಿತು ಸಂಪೂರ್ಣವಾಗಿ ವಿವರಿಸಿದ ಫಯಾಜ್ ಘಟನೆ ನಡೆಯುವುದಕ್ಕೂ ಮುಂಚೆ ನಾನು ಹರಿಹಾಳನ್ನು ಭೇಟಿಯಾಗಿ ಮಾತನಾಡಿಸಿದ್ದೇನೆ.ಆದರೆ ಅವಳು ನಿನ್ನ ಜೊತೆಗೆ ಮಾತನಾಡಲು ಇಷ್ಟ ಇಲ್ಲ ಎಂದು ನನ್ನನ್ನು ಅವಾಯ್ಡ್ ಮಾಡಿದ್ದಾಳೆ. ಹಾಗಾಗಿ ನಾನು ಒಂದು ವಾರ ಕಾಲೇಜ್ ಬಿಟ್ಟಿದ್ದೆ. ಏಪ್ರಿಲ್ 18ರಂದು ಪರೀಕ್ಷೆ ಇತ್ತು ಸ್ನೇಹ ಆಗ ಪರೀಕ್ಷೆ ಮುಗಿಸಿ ಹೊರಗಡೆ ಬರುವವರೆಗೂ ನಾನು ಕಾಲೇಜು ಆವರಣದಲ್ಲಿ ಅವಳಿಗಾಗಿ ಕಾಯುತ್ತಾ ಕುಳಿತಿದ್ದೆ ನಾನು ಹೋಗಿ ಪುನಃ ನಿಹಾಳನ್ನು ಮಾತನಾಡಿಸಲು ಪ್ರಯತ್ನಿಸಿದಾಗ ನನ್ನ ಜೊತೆ ನನಗೆ ಮಾತನಾಡಲು ಇಷ್ಟವಿಲ್ಲ ಎಂದು ಹೇಳಿದಾಗ ನಾನು ಯಾಕೋ…

Read More

ಬೆಂಗಳೂರು : ಇತ್ತೀಚಿಗೆ ಬೆಂಗಳೂರಿಗೆ ನಲ್ಲಿ ಅಪಘಾತಗಳ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದೀಗ ಬೆಂಗಳೂರಿನ ಕೆಂಗೇರಿ ಬಳಿ ಟಿಪ್ಪರ್ ವಾಹನ  ಒಂದು ಹರಿದು 4 ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು ಬೆಂಗಳೂರಿನಲ್ಲಿ ಟಿಪ್ಪರ್ ವಾಹನ ಹರಿದು ಬಾಲಕ ಸ್ಥಳದಲ್ಲಿ ಸಾವನನಪ್ಪಿದ್ದಾನೆ. ಘಟನೆಯು ಕೆಂಗೇರಿ ಬಳಿಯ ರಾಮೋಹಳ್ಳಿಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಅಮತ್, ಪೂಜಾ ದಂಪತಿಯ ನಾಲ್ಕು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಘಟನೆ ಕುರಿತಂತೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಡ್ಯ : ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಆದರೆ ಮೋದಿ ಆಡಳಿತದಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಯಿತು. ಯುವಕರು ಉದ್ಯೋಗ ಕೊಡಿ ಎಂದು ಕೇಳಿದರೆ ಪಕೋಡ ಮಾರಿ ಅಂದರು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದರು ಮಾಡಿದ್ದಾರಾ? ಎಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಿಎಂ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಬೀದಿಗೆ ನಿಲ್ಲಿಸಿದರು ಹರಿದರು ಜಮೀನು ಮಾಡಿಕೊಂಡು ಬಿಕಾರಿಯಾಗುವಂತೆ ಮಾಡಿದ್ದಾರೆ ದೆಹಲಿ ಗಡಿಯಲ್ಲಿ ರೈತರು ವರ್ಷದವರೆಗೆ ಪ್ರತಿಭಟನೆ ಮಾಡಿದ್ದರು ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಬಡವರ ಬದುಕು ಕಷ್ಟವಾಗಿದೆ ಇದಕ್ಕಾಗಿ ನಾವು ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಜನ ನೀಡುವ ತೀರ್ಪು ಮಹತ್ವದ್ದು 2014ರ ಮೇ 26 ರಿಂದ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ.2004 ರಿಂದ 2014ರ ವರೆಗೆ ಡಾಕ್ಟರ್…

Read More

ಧಾರವಾಡ : ಲೋಕಸಭೆ ಚುನಾವಣೆಗೆ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಉಭಯ ಪಕ್ಷಗಳು ಕೂಡ ರಾಜ್ಯದಲ್ಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭರ್ಜರಿ ಪ್ರಚಾರ ಹಾಗೂ ಸಮಾವೇಶಗಳನ್ನು ನಡೆಸುತ್ತಿವೆ. ಇದಲ್ಲದೆ ಚುನಾವಣಾ ಆಯೋಗ ಕೂಡ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಅಧಿಕಾರಿಗಳನ್ನು ನೇಮಿಸಿದ್ದು, ಈಗಾಗಲೇ ಅಧಿಕಾರಿಗಳು ಕರ್ತವ್ಯನಿರತರಾಗಿದ್ದಾರೆ. ಇದೀಗ ಧಾರವಾಡದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಚುನಾವಣಾ ಅಧಿಕಾರಿಯೊಬ್ಬರು ಹಠಾತ್ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.ಕೃಷ್ಣಮೂರ್ತಿ(52) ಮೃತ ದುರ್ದೈವಿ. ಕೃಷ್ಣಮೂರ್ತಿ ಅವರು ಹೆಸ್ಕಾಂ ಎ ಇ ಇ ಆಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಧಾರವಾಡ ಪಶ್ಚಿಮ ಕ್ಷೇತ್ರದ ಸೆಕ್ಟರ್ ಆಫೀಸರ್ ಆಗಿ ನಿಯೋಜನೆಗೊಂಡಿದ್ದರು. ಇಂದು ಮಧ್ಯಾಹ್ನ 1 ಗಂಟೆಗೆ ಕರ್ತವ್ಯದಲ್ಲಿದ್ದ ವೇಳೆ ಹಠಾತ್ತನೆ ಸಂಭವಿಸಿದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಘಟನೆ ಮಾಹಿತಿ ಪಡೆದ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ದಿವ್ಯ ಪ್ರಭು ಸಂತಾಪ ಸೂಚಿಸಿದರು.

Read More