Subscribe to Updates
Get the latest creative news from FooBar about art, design and business.
Author: kannadanewsnow05
ಇತ್ತೀಚಿನ ಅಧ್ಯಯನಗಳು ಮತ್ತು ತಜ್ಞರು ಫ್ರೆಂಚ್ ಫ್ರೈಗಳನ್ನು ಆಗಾಗ್ಗೆ ತಿನ್ನುವುದರಿಂದ ಗಂಭೀರ ಆರೋಗ್ಯ ಅಪಾಯಗಳು ಉಂಟಾಗುತ್ತವೆ ಎಂದು ಎಚ್ಚರಿಸಿದ್ದಾರೆ. ಇದು ತೂಕ ಹೆಚ್ಚಾಗುವುದು, ಹೃದಯ ಸಮಸ್ಯೆಗಳು ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.ಹುರಿಯುವಾಗ ರೂಪುಗೊಳ್ಳುವ ಟ್ರಾನ್ಸ್ ಕೊಬ್ಬುಗಳು ಮತ್ತು ಕ್ಯಾನ್ಸರ್ ಜನಕ ಸಂಯುಕ್ತಗಳು ಹೃದಯಕ್ಕೆ ಹಾನಿ ಮಾಡುತ್ತವೆ ಎಂದು ತಿಳಿದುಬಂದಿದೆ. ತಜ್ಞರು ಹೇಳುವ ಪ್ರಕಾರ, ಒಂದು ಸರ್ವಿಂಗ್ ಫ್ರೆಂಚ್ ಫ್ರೈಸ್ ತಿಂದರೆ 25 ಸಿಗರೇಟ್ ಸೇದುವುದಕ್ಕೆ ಸಮಾನ. ಪ್ರಪಂಚದಾದ್ಯಂತ ಪ್ರಿಯವಾದ ತಿಂಡಿ ಫ್ರೆಂಚ್ ಫ್ರೈಸ್ ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ತಿಂಡಿಯಾಗಿದೆ. ಇದು ಅನೇಕ ಜನರು ಬರ್ಗರ್ಗಳೊಂದಿಗೆ ತಿನ್ನಲು ಅಥವಾ ಒಂದೇ ಖಾದ್ಯವಾಗಿ ಆರ್ಡರ್ ಮಾಡಲು ಇಷ್ಟಪಡುವ ಖಾದ್ಯವಾಗಿದೆ. ಗರಿಗರಿಯಾದ ರಚನೆ ಮತ್ತು ಖಾರದ ರುಚಿ ಅವುಗಳನ್ನು ಇನ್ನಷ್ಟು ರುಚಿಕರವಾಗಿಸುತ್ತದೆ. ಆದರೆ ಈ ರುಚಿಕರವಾದ ಆಹಾರದ ಹಿಂದೆ ಗಂಭೀರವಾದ ಆರೋಗ್ಯ ಸಮಸ್ಯೆ ಅಡಗಿದೆ. ಆಗಾಗ್ಗೆ ಊಟ ಮಾಡುವುದರಿಂದ ತೂಕ ಹೆಚ್ಚಾಗುವುದು, ಹೃದಯದ ಆರೋಗ್ಯಕ್ಕೆ ಹಾನಿಯಾಗುವುದು ಮತ್ತು ಕ್ಯಾನ್ಸರ್ ಅಪಾಯ ಹೆಚ್ಚಾಗುವುದು…
ನವದೆಹಲಿ : 2025-26 ರ ಮೊದಲ ತ್ರೈಮಾಸಿಕದ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳು 1ನೇ ಏಪ್ರಿಲ್, 2025 ರಿಂದ ಪ್ರಾರಂಭವಾಗಿ ಜೂನ್ 30, 2025 ಕ್ಕೆ ಕೊನೆಗೊಳ್ಳುವ ನಾಲ್ಕನೇ ತ್ರೈಮಾಸಿಕಕ್ಕೆ (1ನೇ ಜನವರಿ, 2025 ರಿಂದ 31ನೇ ಮಾರ್ಚ್, 2025 2025 ರವರೆಗೆ) ಸೂಚಿಸಲಾದ ದರಗಳಿಗಿಂತ ಬದಲಾಗದೆ ಉಳಿಯುತ್ತದೆ. ಸರ್ಕಾರದ ಆದೇಶದ ಪ್ರಕಾರ, ಸಾರ್ವಜನಿಕ ಭವಿಷ್ಯ ನಿಧಿ(PPF) 7.1%, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ 7.7%, ಹಿರಿಯ ನಾಗರಿಕ ಉಳಿತಾಯ ಯೋಜನೆ(SCSS) 8.2%, ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) 8.2% ಬಡ್ಡಿ ದರ ಇದೆ. 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ಏಪ್ರಿಲ್ 1, 2025 ರಿಂದ ಪ್ರಾರಂಭವಾಗಿ ಜೂನ್ 30, 2025 ಕ್ಕೆ ಕೊನೆಗೊಳ್ಳುತ್ತವೆ, ಇದು 2024-25ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ (ಜನವರಿ 1, 2025 ರಿಂದ ಮಾರ್ಚ್ 31, 2025) ಅಧಿಸೂಚನೆಯಿಂದ ಬದಲಾಗುವುದಿಲ್ಲ ಎಂದು…
ನವದೆಹಲಿ : ಅನೇಕ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳ ಬೆಲೆಯಲ್ಲಿ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಏಪ್ರಿಲ್ 1 ರಿಂದ ಮಧುಮೇಹ, ಜ್ವರ ಮತ್ತು ಅಲರ್ಜಿಗಳಿಗೆ ಔಷಧಿಗಳು ದುಬಾರಿಯಾಗಲಿವೆ. NLEM ಅಂದರೆ ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯ ಅಡಿಯಲ್ಲಿ ಬರುವ ಈ ಔಷಧಿಗಳ ಬೆಲೆಯಲ್ಲಿ 1.74% ಹೆಚ್ಚಳವನ್ನು ಸರ್ಕಾರ ಅನುಮೋದಿಸಿದೆ. ಮುಂದಿನ ತಿಂಗಳಿನಿಂದ ಬೆಲೆ ಹೆಚ್ಚಾಗಲಿರುವ ಹಲವು ಔಷಧಿಗಳನ್ನು ಮಧುಮೇಹ, ಜ್ವರ ಮತ್ತು ಅಲರ್ಜಿಯಂತಹ ಸಾಮಾನ್ಯ ಕಾಯಿಲೆಗಳಲ್ಲಿ ಬಳಸಲಾಗುತ್ತದೆ. ಕೆಲವನ್ನು ನೋವು ನಿವಾರಕಗಳಾಗಿಯೂ ಬಳಸಲಾಗುತ್ತದೆ. ಈ ಪಟ್ಟಿಯಲ್ಲಿ 800 ಅಂತಹ ಔಷಧಿಗಳ ಹೆಸರುಗಳಿವೆ. ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಅಂದರೆ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ (NLEM) ನಲ್ಲಿ ಸೇರಿಸಲಾದ ಔಷಧಿಗಳ ಬೆಲೆಯಲ್ಲಿ ಶೇ. 1.74 ರಷ್ಟು ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಇವುಗಳಲ್ಲಿ ಪ್ಯಾರಸಿಟಮಾಲ್, ಅಜಿಥ್ರೊಮೈಸಿನ್, ಅಲರ್ಜಿ ವಿರೋಧಿ, ರಕ್ತಹೀನತೆ ವಿರೋಧಿ ಮತ್ತು ಜೀವಸತ್ವಗಳು ಮತ್ತು ಖನಿಜಗಳ ಔಷಧಿಗಳು ಸೇರಿವೆ. ಈ ಔಷಧಿಗಳನ್ನು ಸಾಮಾನ್ಯ ಕಾಯಿಲೆಗಳಿಗೆ ಬಳಸಲಾಗುತ್ತದೆ. ಔಷಧಿಗಳ…
ಬೆಂಗಳೂರು : ಕೆಲ ದಿನಗಳ ಹಿಂದೆ ಕೋಠಿಮಠದ ಶ್ರೀಗಳು ಪ್ರಪಂಚದಲ್ಲಿ ಭೂಕಂಪನ ಉಂಟಾಗಲಿದೆ. ಸಾವು ನೋವು ಹೆಚ್ಚಾಗಲಿದೆ ಎಂಬುದಾಗಿ ಹೇಳಿದ್ದರು. ಈ ಭವಿಷ್ಯ ಇಂದು ನಿಜವಾಗಿದೆ. ಮ್ಯಾನ್ಮಾರ್ ಹಾಗೂ ಬ್ಯಾಂಕಾಕ್ ನಲ್ಲಿ 7.7 ತೀವ್ರತೆಯಲ್ಲಿ ಪ್ರಬಲ ಭೂಕಂಪನ ಉಂಟಾಗಿದೆ. ಇದರಿಂದಾಗಿ ಹಲವರು ಸಾವನ್ನುಪ್ಪಿದ್ದಾರೆ. ಮಾರ್ಚ್.2, 2025ರಂದು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದರು. ಮುಂದಿನ ಸಿಎಂ ಯಾರಾಗ್ತಾರೆ, ಡಿಕೆ ಶಿವಕುಮಾರ್ ಜೊತೆ ಅಧಿಕಾರ ಹಂಚಿಕೆ ಯಾವಾಗ ಎಂಬ ಚರ್ಚೆಯ ನಡುವೆ, ಈ ಭವಿಷ್ಯವಾಣಿ ಹೊರಬಿದ್ದಿದೆ. ಅಲ್ಲದೇ ಕೋಡಿಮಠ ಶ್ರೀ ಭವಿಷ್ಯವಾಣಿಯಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನ ಭದ್ರ ಎಂಬುದಾಗಿಯೇ ತಿಳಿಸಿದ್ದರು. ಹಾಲು ಮತ ಸಮಾಜವು ಪ್ರಾಚೀನ ಕಾಲದಿಂದ ದೈವಾರಾಧನೆ ಮಾಡುವ ಸಮಾಜವಾಗಿದೆ. ಹಾಲು ಕೆಟ್ಟರೂ ಹಾಲು ಸಮಾಜ ಕೆಡದು. ಹಕ್ಕ ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು. ಹಾಲು ಮತ ಸಮಾಜದವರಲ್ಲಿ ರಾಜ್ಯದ ಅಧಿಕಾರವಿದೆ. ಸಿಎಂ ಕುರ್ಚಿಯಿಂದ ಬಿಡಿಸುವುದು ಕಷ್ಟ. ಅದು ಸುಲಭವೂ ಅಲ್ಲ. ಸಿಎಂ ಸಿದ್ಧರಾಮಯ್ಯ ಅವರು ಅವರಾಗೇ…
ಬೆಂಗಳೂರು : ಬೆಂಗಳೂರಲ್ಲಿ ಕಸ ಸಂಗ್ರಹ ಇದೀಗ ಸ್ಥಗಿತವಾಗಿದೆ. ಇದಕ್ಕೆ ಕಾರಣ ಬಿಬಿಎಂಪಿ ಚಾಲಕರು ಹಾಗೂ ಕ್ಲೀನರ್ಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರಿಂದ ಸಿಲಿಕಾನ್ ಸಿಟಿಯಲ್ಲಿ ಕಸ ಸಂಗ್ರಹ ಸಮಸ್ಯೆ ಎದುರಾಗಿದೆ. ಹೌದು ಬಿಬಿಎಂಪಿ ವಿರುದ್ಧ ಘನತ್ಯಾಜ್ಯ ನಿರ್ವಹಣಾ ಘಟಕದ ವಿರುದ್ಧ ಚಾಲಕರು ಮತ್ತು ಕ್ಲೀನರ್ಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಪರಿಣಾಮವಾಗಿ 5,300 ಆಟೋ ಟಿಪ್ಪರ್ಗಳು ಮತ್ತು 700 ಕಸದ ಲಾರಿಗಳ ಸಂಚಾರ ಸ್ಥಗಿತಗೊಂಡು, ನರದಾದ್ಯಂತ ಕಸ ಸಂಗ್ರಹಣೆಗೆ ಅಡಚಣೆ ಉಂಟಾಗಿದೆ. ಬಿಬಿಎಂಪಿ ಪ್ರಧಾನ ಕಚೇರಿ ಬಳಿ 500ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆ ಮಾಡಿದರು. ಈ ವೇಳೆ ಕಚೇರಿ ಪ್ರವೇಶಿಸಲು ಪೊಲೀಸರು ಅವಕಾಶ ನೀಡದೇ ಹಲವರನ್ನು ವಶಕ್ಕೆ ಪಡೆದರು ಎಂದು ಮುಷ್ಕರದ ನೇತೃತ್ವ ವಹಿಸಿರುವ ಕಾರ್ಮಿಕ ಸಂರಕ್ಷಣೆ ಸಂಘಟನೆಯ ಅಧ್ಯಕ್ಷ ತ್ಯಾಗರಾಜ್ ತಿಳಿಸಿದ್ದಾರೆ. ಚಾಲಕರು ಮತ್ತು ಕ್ಲೀನರ್ಗಳನ್ನು ಬಿಬಿಎಂಪಿ ಬಹಳ ವರ್ಷಗಳಿಂದ ನಿರ್ಲಕ್ಷಿಸುತ್ತಿದೆ. ನಮ್ಮ ಬೇಡಿಕೆ ನ್ಯಾಯಬದ್ಧವಾಗಿದೆ. ಗುತ್ತಿಗೆದಾರರನಿಂದ ನಮ್ಮನ್ನು ನೇಮಿಸಿಕೊಳ್ಳುವ ಬದಲು ನೇರ ಪಾವತಿ ಯೋಜನೆ ಅಡಿ ನೇಮಿಸಿಕೊಳ್ಳಬೇಕು. ಕಡಿಮೆ ಸಂಖ್ಯೆಯಿಂದ…
ನವದೆಹಲಿ : ಇಂದು ಮ್ಯಾನ್ಮಾರ್, ಬ್ಯಾಂಕಾಕ್ ನಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 11.50 ರ ಸುಮಾರಿಗೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆಘಟನೆಯಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಈ ವೇಳೆ ಕೆಲವೇ ಕ್ಷಣಗಳಲ್ಲಿ ಬಹುಮಡಿ ಬಹು ಮಹಡಿ ಕನ್ನಡ ಕುಸಿದಿದೆ. ಕುಸಿಯುತ್ತಿರುವ ಮನೆಗಳು, ಮುರಿದುಬಿದ್ದ ಬ್ರಿಡ್ಜ್, ಮಯನ್ಮಾರ್ ಮತ್ತು ಬ್ಯಾಂಕಾಕ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಬಹು ಮಹಡಿ ಕಟ್ಟಡದ ಮೇಲೆ ಇರುವ ಸ್ವಿಮ್ಮಿಂಗ್ ಪೂಲ್ ನಿಂದ ನೀರು ಹೊರಕ್ಕೆ ಹೋಗುತ್ತಿರುವ ದೃಶ್ಯ ನೋಡಿದ್ರೆ ಎದೆ ಝಲ್ಲೆನಿಸುತ್ತೆ ರಿಕ್ಟರ್ ಮಾಪಕದಲ್ಲಿ 7.7 ರಷ್ಟು ತೀವ್ರತೆ ದಾಖಲಾಗಿದೆ. https://twitter.com/ANI/status/1905509227399184657?t=NPLaXB0gFw5vnd6Y6ZCKew&s=19
ಬೆಂಗಳೂರು : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಶೋಕಾಸ್ ನೋಟಿಸ್ ಗೆ ಉತ್ತರಿಸದ ಹಿನ್ನೆಲೆ ಹಾಗೂ ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ಮಾಡಿದ್ದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಗೆ ಆಕ್ಷೇಪಿಸಿ, ಬೆಂಗಳೂರಿನಲ್ಲಿ ಯತ್ನಾಳ ಬಣದ ಟೀಂ ಇದೀಗ ಸಭೆ ಸೇರಿದೆ. ಬೆಂಗಳೂರಿನ ಯುಬಿ ಸಿಟಿಯಲ್ಲಿರುವ ಸಿದ್ದೇಶ್ವರ ನಿವಾಸದಲ್ಲಿ ಸಭೆ ಸೇರಿದ್ದಾರೆ.ಉಚ್ಚಾಟನೆ ಆದೇಶ ಪಡೆಯಲು ಒತ್ತಾಯ ಕುರಿತು ಸಭೆ ನಡೆಸುತ್ತಿದ್ದು, ಯತ್ನಾಳ್ ಉಚ್ಚಾಟನೆಗೆ ಆಕ್ಷೇಪ ವ್ಯಕ್ತಪಡಿಸಿ ಇದೀಗ ರೆಬೆಲ್ಸ್ ಟೀಂ ಸಭೆ ನಡೆಸುತ್ತಿದೆ. ರಮೇಶ್ ಜಾರಕಿಹೊಳಿ, ಬಿಪಿ ಹರೀಶ್, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಮುಂತಾದವರು ಈಗಾಗಲೇ ಸಿದ್ದೇಶ್ವರ ನಿವಾಸಕ್ಕೆ ಆಗಮಿಸಿದ್ದಾರೆ. ಹಾಗಾಗಿ ಈ ಒಂದು ಸಭೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದ್ದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…
ಚಿಕ್ಕಮಗಳೂರು : ಚಿಕ್ಕಮಂಗಳೂರು ಜಿಲ್ಲೆಯ ಬಾಳೆಹೊನ್ನೂರು ನಲ್ಲಿ ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಸಾವನಪ್ಪಿದ್ದು, ಈ ಒಂದು ಘಟನೆಗೆ ಸಂಬಂಧಿಸಿದಂತೆ ಗ್ರಹಿಣಿಯ ಪತಿಯನ್ನು ಈಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಾಳೆಹೊನ್ನೂರು ಸಮೀಪ ಹಲಸೂರು ಗ್ರಾಮದ ಗುಬ್ಬುಗೊಡಿಗೆಯಲ್ಲಿ ಮಮತಾ (31) ಮೃತಪಟ್ಟಿದ್ದು ವರದಕ್ಷಿಣೆ ಕಿರುಕುಳ ಆರೋಪದ ಅಡಿ ಪತಿ ಅವಿನಾಶ್ನನ್ನು ಬಂಧಿಸಲಾಗಿದೆ. ಮಾವ ನಾರಾಯಣಗೌಡ, ಅತ್ತೆ ಅನಸೂಯ ಹಾಗೂ ನಾದಿನಿ ಅಮಿತ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಮತಾ ಅವರನ್ನು 2020ರ ಮೇ 27ರಂದು ಅವಿನಾಶ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ಸಮಯಲ್ಲಿ 110 ಗ್ರಾಂ ಚಿನ್ನಾಭರಣ ನೀಡಿದ್ದರೂ ಪತಿ, ಅತ್ತೆ ಮತ್ತು ಮಾವ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದರು ಎಂದು ದೂರಲಾಗಿದೆ. ಅವಿನಾಶ್ಗೆ 50 ಸಾವಿರ ಮೊತ್ತವನ್ನು ಗೂಗಲ್ ಪೇ ಮೂಲಕ ನೀಡಿದ್ದರೂ ಹಿಂಸೆ ನೀಡುವುದು ನಿಂತಿರಲಿಲ್ಲ ಎನ್ನಲಾಗಿದೆ.
ನವದೆಹಲಿ : ರಾಜ್ಯ ಸರ್ಕಾರ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂ. ಏರಿಕೆ ಮಾಡಿದೆ. ಅಲ್ಲದೆ 4 ರೂಪಾಯಿ ಸರ್ಕಾರಕ್ಕೆ ಬರಲ್ಲ ರೈತರಿಗೆ ಹೋಗುತ್ತದೆ ಹಾಗಾಗಿ ರೈತರಿಗೋಸ್ಕರ ಹಾಲಿನದ ಏರಿಕೆ ಮಾಡಲಾಗಿದೆ ಎಂದು ನಿನ್ನೆ ಕಾಂಗ್ರೆಸ್ ಹಲವು ನಾಯಕರು ಸ್ಪಷ್ಟನೆ ನೀಡಿದ್ದರು. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಕೂಡ ನಂದಿನಿ ಹಾಲಿನ ದರ ಏರಿಕೆ ಮಾಡಿದ್ದು ಈ ಒಂದು ಹಣ ಸರ್ಕಾರಕ್ಕೆ ಬರಲ್ಲ ನೇರವಾಗಿ ರೈತರಿಗೆ ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂದಿನಿ ಹಾಲಿನ ದರ ಏರಿಕೆ ಕುರಿತು ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಏನಾದರೂ ಹೇಳಲಿ ರೈತರು ಬದುಕಬೇಕಲ್ವಾ? ಅವರಿಗೆ ಜಿಎಸ್ಟಿ ಮೇವಿನ ಬೆಲೆ ಇಳಿಕೆ ಮಾಡಲು ಹೇಳಿ ಪೆಟ್ರೋಲ್ ಡೀಸೆಲ್ ಇದರ ಇಳಿಕೆ ಮಾಡಲು ಹೇಳಿ ಬೆಲೆ ಏರಿಕೆ ಹಣ ಸರ್ಕಾರಕ್ಕೆ ಬರಲ್ಲ ರೈತರಿಗೆ ಹೋಗುತ್ತದೆ. ಹಾಲಿನ ಸಹಕಾರ ವ್ಯವಸ್ಥೆ ಬಗ್ಗೆ ಅವರ ಅಣ್ಣನ…
ತುಮಕೂರು : ಕಳೆದ 2024 ನವೆಂಬರ್ ತಿಂಗಳಿನಲ್ಲಿ ನನ್ನ ಕೊಲೆಗೆ ಯತ್ನಿಸಿ ಸುಪಾರಿ ನೀಡಲಾಗಿತ್ತು ಎಂದು ಆರೋಪಿಸಿ ಇದೀಗ ತುಮಕೂರಿನ ಎಸ್ ಪಿ ಕಚೇರಿಗೆ ಭೇಟಿ ನೀಡಿ ಎಂಎಲ್ಸಿ ರಾಜೇಂದ್ರ ರಾಜಣ್ಣ ಅವರು ದೂರು ನೀಡಿದ್ದಾರೆ. ಕಾಂಗ್ರೆಸ್ ಎಂಎಲ್ಸಿ ಹಾಗೂ ಸಚಿವ ಕೆ.ಎನ್ ರಾಜಣ್ಣ ಪುತ್ರ ರಾಜೇಂದ್ರ ಅವರು ತುಮಕೂರು ಎಸ್ಪಿ ಅಶೋಕ್ ವೆಂಕಟ್ ಅವರಿಗೆ ದೂರು ನೀಡಿದ್ದಾರೆ. ತುಮಕೂರಿನ ಎಸ್ಪಿ ಕಚೇರಿಗೆ ಭೇಟಿ ನೀಡಿ ರಾಜೇಂದ್ರ ದೂರು ಸಲ್ಲಿಸಿದ್ದಾರೆ. ಮಾಧ್ಯಮಗಳನ್ನು ದೂರ ಇಟ್ಟು ಎಸ್ಪಿಗೆ ರಾಜೇಂದ್ರ ಅವರು ದೂರು ನೀಡಿದ್ದಾರೆ 2024ರ ನವೆಂಬರ್ ನಲ್ಲಿ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿದ್ದಾರೆ. ತುಮಕೂರಿನ ಕ್ಯಾತಸಂದ್ರ ಬಳಿಯ ರಜತಾದ್ರಿ ಮನೆಯಲ್ಲಿ ಈ ಒಂದು ಪ್ರಕರಣ ನಡೆದಿತ್ತು. ಇನ್ನು ಇದೆ ವಿಚಾರವಾಗಿ ತಮ್ಮ ಮೇಲೆ ಹನಿಟ್ರ್ಯಾಪ್ ಆಗಿಲ್ಲ. ನಾಲ್ಕು ತಿಂಗಳ ಹಿಂದೆ 5 ಲಕ್ಷ ರು.ಗೆ ಸುಪಾರಿ ಪಡೆದು ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ಗುರುವಾರ ರಾಜ್ಯ ಪೊಲೀಸ್…