Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನಲ್ಲಿ ಫ್ರೋರೇಟ್ ಶುಲ್ಕ ಕಟ್ಟಿಸಿಕೊಳ್ಳದೆ ಅನಧಿಕೃತವಾಗಿ ನೀರಿನ ಕನೆಕ್ಷನ್ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಮಂಡಳಿಯಲ್ಲಿನ ಕಳ್ಳಾಟ ಬಟಾ ಬಯಲಾಗಿದ್ದು, ಅಧಿಕಾರಿಗಳ ಈ ಒಂದು ಕಳ್ಳಾಟಕ್ಕೆ ಜಲ ಮಂಡಳಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಹೌದು ಜಲಮಂಡಳಿಯಲ್ಲಿ ಮತ್ತೊಂದು ಕಳ್ಳಾಟ ಬಟಾ ಬಯಲಾಗಿದ್ದು, ಅಧಿಕಾರಿಗಳಿಂದಲೇ ನೀರಿನಲ್ಲೂ ಕೂಡ ಇದೀಗ ಗೋಲ್ಮಾಲ್ ನಡೆಯುತ್ತಿದೆ. ಅನಧಿಕೃತವಾಗಿ ನೀರಿನ ಕನೆಕ್ಷನ್ ನೀಡುತ್ತಿರುವ ಅಧಿಕಾರಿಗಳು, ಪ್ರೊರೇಟ್ ಶುಲ್ಕ ಕಟ್ಟಿಸಿಕೊಳ್ಳದೆ ಅನಧಿಕೃತ ನೀರಿನ ಕನೆಕ್ಷನ್ ನೀಡಿದ್ದಾರೆ. ಇಂಜಿನಿಯರ್ಸ್, ಮೀಟರ್ ರೀಡರ್ ಗಳ ಕಳ್ಳಾಟ ಇದೀಗ ಬಟಾ ಬಯಲಾಗಿದೆ. ಅಂಜನಾಪುರ ಸೇರಿದಂತೆ ಹಲವುಡೆ ಅಕ್ರಮವಾಗಿ ಕನೆಕ್ಷನ್ ನೀಡಲಾಗಿದೆ.ಕಳ್ಳಾಟದಿಂದ ಜಲಮಂಡಳಿಗೆ ಸದ್ಯ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ. ಈ ಬಗ್ಗೆ ಜಲಮಂಡಳಿ ಅಧ್ಯಕ್ಷರಿಗೆ ಹಲವು ಬಾರಿ ದೂಡು ಕೂಡ ನೀಡಲಾಗಿತ್ತು. ರಾಜಾರೋಷವಾಗಿ ಅಧಿಕಾರಿಗಳು ಈ ಒಂದು ಕಳ್ಳಾಟ ನಡೆಸುತ್ತಿದ್ದಾರೆ.ಬೆಂಗಳೂರು ದಕ್ಷಿಣ ವಿಭಾಗದ ಅಧಿಕಾರಿಗಳ ಮೇಲೆ ಈ ಒಂದು ಆರೋಪ ಕೇಳಿ ಬಂದಿದೆ. ನೀರಿನ ಸಂಪರ್ಕ ಪಡಿಯೋಕೆ ಸಾಮಾನ್ಯ ಜನರು…
ಹುಬ್ಬಳ್ಳಿ : ಕಳೆದ ಹಲವು ತಿಂಗಳು ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಕೊಲೆ ಇಡೀ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಗೆ ಪುಂಡರು ಬೈಕ್ ಮೇಲೆ ಬೆನ್ನು ಹತ್ತಿ ಕಿರುಕುಳ ನೀಡಿರುವ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ಹುಬ್ಬಳ್ಳಿ ನಗರದಲ್ಲಿ ಬೀದಿ ಕಾಮಣ್ಣರ ಕಾಟ ಹೆಚ್ಚಾಗಿದ್ದು, ಬಾಲಕಿ ಬೆನ್ನು ಬಿದ್ದು ಪುಂಡರು ಚುಡಾಯಿಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಬೀದಿ ಕಾಮಣ್ಣರ ಕಾಟಕ್ಕೆ ಬಾಲಕಿ ತಪ್ಪಿಸಿಕೊಂಡು ಓಡಿ ಹೋಗಿರುವ ಘಟನೆ ನಡೆದಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು ಟ್ಯೂಷನ್ ಮುಗಿಸಿಕೊಂಡು ಬಾಲಕಿ ಮನೆಗೆ ತೆರಳುತ್ತಿದ್ದ ವೇಳೆ ಪುಂಡರು ಬೈಕ್ ಹತ್ತಿ ಬಾಲಕಿಗೆ ಚುಡಾಯಿಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಈ ಒಂದು ಘಟನೆಯ ದೃಶ್ಯ ಸೆರೆಯಾಗಿದೆ. ಬಾಲಕಿಯನ್ನು ಪುಂಡರು ಬೆನ್ನು ಹತ್ತಿರುವ ದೃಶ್ಯ ಎರಡು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇವಳೆ ಸ್ಥಳೀಯರೊಬ್ಬರು ಬಾಲಕಿಯನ್ನು ಯಾಕೆ ಬೆನ್ನು…
ಕಾರ್ತಿಕ ಮಾಸದ ಹುಣ್ಣಿಮೆಯ ಸ್ವಸ್ತಿಕ್ ಪೂಜೆ ಚಂದ್ರ ಒಂದೊಂದು ದಿನವೂ ಒಂದೊಂದು ದೇವತೆಗಳಿಗೆ ಮತ್ತು ಪ್ರತಿ ಗ್ರಹಗಳಿಗೆ ಶುಭಕರವಾಗಿರುತ್ತದೆ. ಹಾಗೆಯೇ ಒಂದು ತಿಂಗಳಲ್ಲಿ ಬರಬಹುದಾದ 15 ತಿಥಿಗಳನ್ನು ಪ್ರತಿ ಗ್ರಹಕ್ಕೆ ಮತ್ತು ಪ್ರತಿ ದೇವತೆಗೆ ಮಂಗಳಕರ ತಿಥಿಗಳೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಹುಣ್ಣಿಮೆಯ ತಿಥಿಯನ್ನು ಅನೇಕ ದೇವತೆಗಳಿಗೆ ಮಂಗಳಕರ ತಿಥಿ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಶುಕ್ರವಾರದ ಜೊತೆಗೆ ಬರಬಹುದಾದ ಈ ಹುಣ್ಣಿಮೆ ಇನ್ನಷ್ಟು ಅದ್ಭುತ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ…
ಬೆಂಗಳೂರು : ಕಳೆದ ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ಇದೀಗ ಚಾರ್ಜ್ ಶೀಟ್ ನಲ್ಲಿ ಮತ್ತೊಂದು ಸ್ಫೋಟಕ ವಿಷಯ ಬಹಿರಂಗವಾಗಿದ್ದು, ಆರೋಪಿಗಳು ಬಾಂಬ್ ತಯಾರಿಕೆಯ ಕುರಿತು ಐಸಿಸ್ ನಿಂದ ಆನ್ಲೈನ್ ನಲ್ಲಿಯೇ ತರಬೇತಿ ಪಡೆದಿದ್ದರು ಎಂದು ತಿಳಿದುಬಂದಿದೆ. ಪ್ರಕರಣದ ಆರೋಪಿಗಳಾದ ಅಬ್ದುಲ್ ಮತೀನ್ ತಾಹ, ಮುಸಾವೀರ್ ಹುಸೇನ್, ಶಾರಿಕ್, ಅರಾಫತ್ ಅಲಿ, ಮಾಜ್ ಮುನೀರ್ ಹಾಗೂ ಮುಜಾಮಿಲ್ ಷರೀಫ್ ಐಸಿಸ್ ಜೊತೆ ನಂಟು ಇಟ್ಟುಕೊಂಡಿದ್ದರು. ಇವರ ಪೈಕಿ ನಾಲ್ವರಿಗೆ ಐಸಿಸ್ ಬಾಂಬ್ ತಯಾರಿಕೆಯ ತರಬೇತಿ ನೀಡಿದೆ. ಅಬ್ದುಲ್ ಮತೀನ್ ತಾಹ, ಮುಸಾವೀರ್, ಶಾರಿಕ್ ಹಾಗೂ ಮಾಜ್ ಮುನೀರ್ ಬಾಂಬ್ ತಯಾರಿಸುವ ತರಬೇತಿ ಪಡೆದಿದ್ದಾರೆ. ಆನ್ಲೈನ್ ಮೂಲಕ ಐಸಿಸ್ನಿಂದ ತರಬೇತಿ ಪಡೆದಿದ್ದಾರೆ. ಕೇವಲ ಒಂದು ವಾರದಲ್ಲೇ ಸಂಪೂರ್ಣ ತರಬೇತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬಾಂಬ್ ಎಲ್ಲಿ ಇಡಬೇಕು ಅಂತ ಫ್ಲಾನ್ ಫೈನಲ್ ಆದ ಮೇಲೆ, ಬಾಂಬ್ ತಯಾರಿಕೆಗೆ ಮುಂದಾಗುತ್ತಿದ್ದರು.…
ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ‘ವಕ್ಫ್’ ವಿವಾದದಿಂದ ವಿಪಕ್ಷಗಳು ಹಾಗೂ ರೈತರು ಪ್ರತಿಭಟನೆ ಹೋರಾಟ ನಡೆಸುತ್ತಿದ್ದು, ಸಚಿವ ಜಮೀರ್ ಅಹ್ಮದ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರ ಮಧ್ಯ ರಾಜ್ಯ ಸರ್ಕಾರ ಇದೀಗ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದು, ಮುಸ್ಲಿಮರಿಗೆ ಖಬರಸ್ಥಾನಗಳಿಗೆ ಸರ್ಕಾರಿ ಭೂಮಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೌದು ಖಬರಸ್ಥಾನಗಳಿಗೆ ಸರ್ಕಾರಿ ಕಂದಾಯ ಭೂಮಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ವಕ್ಫ್ ವಿವಾದ ಬೆನ್ನಲ್ಲೇ ಇದೀಗ ಈ ಒಂದು ವಿಚಾರ ಮುನ್ನೆಲ್ಲೆಗೆ ಬಂದಿದೆ. ರಾಜ್ಯ ಸರ್ಕಾರದ ಆದೇಶವು ಖಬರಸ್ಥಾನಗಳಿಗೆ ಭೂಮಿ ನೀಡುವ ಯೋಜನೆಗೆ ಇದೀಗ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ರಾಜ್ಯದ 328 ಖಬರಸ್ಥಾನಗಳಿಗೆ ಭೂಮಿ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರಿ ಜಮೀನನ್ನು ಮಂಜೂರಾತಿ ನೀಡಲು ಸರ್ಕಾರ ಮುಂದಾಗಿದೆ. ಸುಮಾರು 2075 ಎಕರೆ ಭೂಮಿಯನ್ನು ಮಂಜೂರಾತಿ ನೀಡಲು ಸರ್ಕಾರಿ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರಿ ಭೂಮಿಯನ್ನು ಖಬರಸ್ಥಾನವಾಗಿ ಪರಿವರ್ತಿಸುವ ಯೋಜನೆ ಇದಾಗಿದೆ. ಬೆಂಗಳೂರು, ರಾಯಚೂರು, ಕಲಬುರ್ಗಿ, ಹಾಸನ, ದಕ್ಷಿಣ ಕನ್ನಡ…
ಬೆಂಗಳೂರು : ಬೆಂಗಳೂರಿನಲ್ಲಿ ಲಾಡ್ಜ್ ಒಂದರಲ್ಲಿ ಮಾಲ್ಡಿವ್ ದೇಶದ ಪ್ರಜೆಯ ಶವ ಪತ್ತೆಯಾಗಿದ್ದು, ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಲಾಡ್ಜ್ ನಲ್ಲಿ ಮಾಲ್ಡಿವ್ಸ್ ದೇಶದ ಪ್ರಜೆ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಹಸನ್ ಸುಹೈಲ್ (43) ಎಂದು ಗುರುತಿಸಲಾಗಿದೆ. ಆದರೆ ಈ ಒಂದು ಸಾವಿಗೆ ಕಾರಣ ಮಾತ್ರ ಇದುವರೆಗೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ನವೆಂಬರ್ 10ರಂದು ಸುಹೈಲ್ ಬೆಂಗಳೂರಿಗೆ ಆಗಮಿಸಿದ್ದರು ಈ ವೇಳೆ ಅವರು ಆರ್ ಟಿ ನಗರದ ಲಾಡ್ಜ್ ಒಂದನ್ನು ಬುಕ್ ಮಾಡಿ ಅಲ್ಲಿ ತಂಗಿದ್ದರು.ಭಾರತದ ಪ್ರವಾಸಕ್ಕೆ ಎಂದು ಸ್ವಹಲ್ ಬೆಂಗಳೂರಿಗೆ ಆಗಮಿಸಿದ್ದರು. ನವೆಂಬರ್ 12 ರಂದು ಲಾಡ್ಜ್ ನ ಸಿಬ್ಬಂದಿ ಸುಹೈಲ್ ಅವರನ್ನು ಕೊನೆಯ ಬಾರಿಗೆ ನೋಡಿದ್ದಾರೆ.ಅದಾದ ಬಳಿಕ ಅವರು ರೂಮಿನಿಂದ ಹೊರಗಡೆ ಬಾರದೇ ಇದ್ದದ್ದನ್ನು ಗಮನಿಸಿದ ಸಿಬ್ಬಂದಿ ಬಾಗಿಲು ಬಡಿದಿದ್ದಾರೆ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ಒಳ ಹೋದಾಗ ರೂಮಿನ ಹಾಲ್ನಲ್ಲಿ ಸುಹೈಲ್…
ಮೈಸೂರು : ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಇದೀಗ ಮೈಸೂರು ಪಾಲಿಕೆಯಲ್ಲಿ ಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಕೆ ಕುಮಾರ್ ನನ್ನು ವಜಾಗೊಳಿಸಿ ಮೈಸೂರು ಪಾಲಿಕೆ ಆಯುಕ್ತ ರೆಹ್ಮಾನ್ ಶರೀಫ್ ಆದೇಶ ಹೊರಡಿಸಿದ್ದಾರೆ. ಮುಡಾದಲ್ಲಿ ಅಕ್ರಮ ಸೈಟ್ ಮಾರಾಟದಲ್ಲಿ ಬಿಕೆ ಕುಮಾರ್ ಸಹ ಭಾಗಿಯಾಗಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಮೈಸೂರು ಪಾಲಿಕೆ ಆಯುಕ್ತರು,ಆತನನ್ನು ಸೇವೆಯಿಂದ ವಜಾಗೊಳಿಸಿದ್ದಾರೆ. ಬಿಕೆ ಕುಮಾರ್ ವಜಾ ಮಾಡಿ ಮೈಸೂರು ಪಾಲಿಕೆ ಆಯುಕ್ತರು ಇದೀಗ ಆದೇಶ ಹೊರಡಿಸಿದ್ದಾರೆ. ಕಛೇರಿ ಕೆಲಸಕ್ಕಾಗಿ ಬಿಕೆ ಕುಮಾರ್ ಮುಡಾಗೆ ನೇಮಕವಾಗಿ ಬಂದಿದ್ದ. ಮುಡಾದಲ್ಲಿ ಕೆಲಸ ಮಾಡುತ್ತಾ ಪಾಲಿಕೆಯಿಂದಲೂ ಕೂಡ ಸಂಬಳ ಪಡೆಯುತ್ತಿದ್ದ. ಏಕಕಾಲದಲ್ಲಿ ಎರಡು ಸರಕಾರಿ ಕಚೇರಿಗಳಲ್ಲಿ ಬಿಕೆ ಕುಮಾರ್ ಕೆಲಸ ಮಾಡುತ್ತಿದ್ದ. ನಿಯಮ ಉಲ್ಲಂಘಸಿ ಎರಡು ಕಡೆ ವೇತನ ಪಡೆಯುತ್ತಿದ್ದ. ಈ ಹಿನ್ನೆಲೆಯಲ್ಲಿ ಇದೀಗ ಆತನನ್ನು ವಜಾಗೊಳಿಸಲಾಗಿದೆ ಬಿಕೆ ಕುಮಾರ್ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇವಿನಕೊಪ್ಪ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ. ಮುಡಾದ ಅಕ್ರಮಗಳಲ್ಲಿ ಭಾಗಿಯಾಗಿದ್ದಾನೆ ಎಂದು…
‘ಹಸಿರು ಸೆಸ್’ ಗೆ ಜನರಿಂದ ಆಕ್ಷೇಪಣೆ ವ್ಯಕ್ತವಾದರೆ, ಪ್ರಸ್ತಾವನೆ ಕೈಬಿಡಲಾಗುತ್ತೆ : ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ
ಬೆಂಗಳೂರು : ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಲು ನೀರಿನ ಬಿಲ್ ಮೇಲೆ 2ರಿಂದ 3 ರೂಪಾಯಿ ಹಸಿರು ಸೆಸ್ ವಿಧಿಸುವ ಪ್ರಸ್ತಾ ವನೆ ಸಿದ್ಧಪಡಿಸಲಾಗುತ್ತಿದ್ದು, ಈ ಕ್ರಮದಿಂದ ಜನರಿಗೆ ಯಾವುದೇ ಹೊರೆಯಾಗುವುದಿಲ್ಲ. ಒಂದು ವೇಳೆ ಜನರಿಂದ ಆಕ್ಷೇಪ ವ್ಯಕ್ತವಾದರೆ ಪ್ರಸ್ತಾವನೆ ಕೈಬಿಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಉಗಮವಾಗುವ ನದಿಗಳ ನೀರು ಪೂರೈಕೆಯಾಗುವ ನಗರಗಳ ನಿವಾಸಿ ಗಳು ಬಳಸುವ ನೀರಿಗೆ ಪ್ರತಿ ತಿಂಗಳು 2ರಿಂದ 3 ರು. ಸೆಸ್ ಹಾಕಲಾಗುತ್ತದೆ. ಅದರಿಂದ ಒಂದು ಕುಟುಂಬಕ್ಕೆ ದಿನವೊಂದಕ್ಕೆ ಸರಾಸರಿ ಕೇವಲ 10 ಪೈಸೆ ಬೀಳಲಿದೆ. ಇದರಿಂದ ಯಾರಿಗೂ ಹೊರೆಯಾಗುವು ದಿಲ್ಲ ಎಂದರು. ಸುಸ್ಥಿರ ಶುದ್ಧ ಕುಡಿಯುವ ನೀರಿಗಾಗಿ ಪಶ್ಚಿಮಘಟ್ಟ ಸಂರಕ್ಷಣೆ ಅಗತ್ಯ ವಾಗಿದೆ. ಸೆಸ್ ಕುರಿತಂತೆ ಸಾರ್ವಜನಿಕರಿಗೆ ತಿಳಿದಾಗ ಪಶ್ಚಿಮಘಟ್ಟ ಮತ್ತು ನೀರು ಉಳಿ ತಾಯದ ಬಗ್ಗೆಯೂ ಜಾಗೃತಿ ಮೂಡುತ್ತದೆ ಎಂದು ಹೇಳಿದರು.
ಮಂಡ್ಯ : ಈಗಾಗಲೇ ರಾಜ್ಯದಲ್ಲಿ ಮುಡಾ ಹಗರಣ ಭಾರಿ ಸದ್ದು ಮಾಡುತ್ತಿದ್ದು, ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪುರಸಭೆ ಸೈಟ್ ಮಾರಾಟದಲ್ಲೂ ಕೂಡ ಭಾರೀ ಗೋಲ್ಮಾಲ್ ಆಗಿರುವ ಆರೋಪ ಕೇಳಿ ಬರುತ್ತಿದೆ. ಹೌದು ಮಂಡ್ಯ ಜಿಲ್ಲೆಯ ಪಾಂಡವಪುರ ಪುರಸಭೆ ಸೈಟ್ಗಳ ಮಾರಾಟದಲ್ಲಿ ಭಾರಿ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆಶ್ರಯ ಯೋಜನೆ ಅಡಿ ಸೈಟ್ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ತಿಳಿದುಬಂದಿದೆ. ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿ ಮಾಡಿ ಒಂದೇ ಸೈಟ್ ಹಲವರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹಳ್ಳಿ ಜನರನ್ನು ಗುರಿಯಾಗಿರಿಸಿಕೊಂಡು ಇದೀಗ ಸಾವಿರಾರು ಸೈಟ್ಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪಾಂಡವಪುರ ಪುರಸಭೆಯಿಂದ ಹಲವು ವರ್ಷದಿಂದ ಸೈಟ್ ಹಂಚಿಕೆ ಮಾಡಲಾಗುತ್ತಿದೆ. ಆಶ್ರಯ ಯೋಜನೆ ಸಮಿತಿಯಿಂದ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ. ಒಂದೇ ಸೈಟ್ ಇಬ್ಬರಿಂದ ಮೂವರಿಗೆ ಮಾರಾಟ ಮಾಡಿ ವಂಚನೆ ಎಸಗಲಾಗಿದೆ. ಮೂಲ…
ಚಿತ್ರದುರ್ಗ : ಬಟ್ಟೆ ತೊಳೆಯಲು ಎಂದು ಹಳ್ಳಕ್ಕೆ ತೆರಳಿದ ಮಹಿಳೆಯ ಭೀಕರ ಕೊಲೆಯಾಗಿದ್ದು, ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಒಂದು ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಉಪ್ಪಿರಿಗೇನಹಳ್ಳಿನಡೆದಿದೆ. ಕೊಲೆಯಾದ ಮಹಿಳೆಯನ್ನು ಲತಾ (40) ಎಂದು ತಿಳಿದುಬಂದಿದೆ. ನಿನ್ನೆ ಮದ್ಯಾಹ್ನ ಲತಾ ಬಟ್ಟೆ ತೊಳೆಯಲು ಎಂದು ಗ್ರಾಮದ ಹೊರವಲಯದ ಹಳ್ಳಕ್ಕೆ ತೆರಳಿದ್ದಾರೆ.ಈ ವೇಳೆ ದುಷ್ಕರ್ಮಿಗಳು ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿದ್ದು ಅಲ್ಲದೆ, ಕೊಲೆ ನಂತರ ಆಕೆಯ ಮೈ ಮೇಲಿದ್ದ ಒಡವೆಗಳನ್ನು ಕದ್ದು ಪರಾರಿಯಾಗಿದ್ದಾರೆ. ಮೈ ಮೇಲೆ ಬಟ್ಟೆಗಳು ಹರಿದ ಸ್ಥಿತಿಯಲ್ಲಿದ್ದು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
 
		



 










