Subscribe to Updates
Get the latest creative news from FooBar about art, design and business.
Author: kannadanewsnow05
ಕೊಡಗು : ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಸಮೀಪದ ಮುವತ್ತೊಕ್ಲುವಿನಲ್ಲಿ ನಿನ್ನೆಸಂಜೆ ನಡೆದಿದೆ. https://kannadanewsnow.com/kannada/wear-such-a-powerful-tilak-and-your-words-will-be-valued-and-monetary-gains-will-come-unexpectedly/ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನನ್ನು ಪ್ರವೀಣ್ ಎಂದು ಹೇಳಲಾಗುತ್ತಿದ್ದು, ಸಿಂಗಲ್ ಬ್ಯಾರಲ್ ಗನ್ನಿಂದ ಎದೆಗೆ ಗುಂಡು ಹೊಡೆದುಕೊಂಡ ಪ್ರವೀಣ್ ಆತ್ಮಹತ್ಯೆಗೆ ಶರಣಾಗಿದ್ದಾನೆ. https://kannadanewsnow.com/kannada/breaking-good-news-for-ration-dealers-from-state-government-commission-amount-of-1-kg-rice-increased-to-rs-1-5/ ಪ್ರವೀಣ್ ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದನು ಎಂದು ಹೇಳಲಾಗುತ್ತಿದೆ. ಕೊಡಗು ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನಾ ಸ್ಥಳಕೆ ಮಾದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. https://kannadanewsnow.com/kannada/pm-modi-meets-bill-gates-discuss-ai-for-public-good/
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಗಂಧವನ್ನು ವಶೀಕರಣ, ತಂತ್ರ ಮಂತ್ರ ಪ್ರಯೋಗಕ್ಕೆ ಅಷ್ಟಗಂಧವನ್ನು ಉಪಯೋಗಿಸಲಾಗುತ್ತದೆ. ಅಷ್ಟ ಗಂಧವನ್ನು ಒಂದು ವೇಳೆ 50 ಗ್ರಾಂ ತೆಗೆದುಕೊಂಡರೆ ಶ್ರೀಗಂಧವನ್ನು ಕೂಡ 50 ಗ್ರಾಂ ತೆಗೆದುಕೊಳ್ಳಬೇಕು. ಈ ಉಪಾಯವನ್ನು ಮಾಡುವುದರಿಂದ ಶತ್ರುಗಳು ಸಹ ಆಕರ್ಷಿತರಾಗುತ್ತಾರೆ. ಈ ಉಪಾಯವನ್ನು ಮಾಡುವುದರಿಂದ ಶತ್ರುಗಳಿಂದ ರಕ್ಷಣೆ ಹಾಗೂ ಗಂಧದ ಬಟ್ಟನ್ನು ಧಾರಣೆ ಮಾಡುವುದರಿಂದ ಸಮಾಜದಲ್ಲಿ ಕೀರ್ತಿ, ಗೌರವ ಹೆಚ್ಚಾಗುತ್ತದೆ ಎಂದರೆ ತಪ್ಪಾಗಲಾರದು. ವ್ಯಾಪಾರ , ವ್ಯವಹಾರ, ರಿಯಲ್ ಎಸ್ಟೇಟ್, ಹೆಣ್ಣನ್ನು ಕೇಳಲು ಹೋದಾಗ ಈ ಬೊಟ್ಟನ್ನು ಧಾರಣೆ ಮಾಡಿ ಹೋಗುವುದರಿಂದ ಅಂದು ನೀವು ಮಾಡುವ ಎಲ್ಲಾ ಕೆಲಸ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಮೊದಲಿಗೆ ಅಷ್ಟ ಗಂಧ ಹಾಗು ಶ್ರೀಗಂಧವನ್ನು ಸಮನಾದ ಪ್ರಮಾಣದಲ್ಲಿ ತೆಗೆದುಕೊಂಡು ಒಂದು ಪ್ಲೇಟಿಗೆ ಹಾಕಿಕೊಳ್ಳಬೇಕು ನಂತರ ಎರಡನ್ನು ಮಿಶ್ರಣ ಮಾಡಬೇಕು ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ…
ಬೆಂಗಳೂರು : ಪಿ ಡಿ ಎಸ್ ಪಡಿತರ ವಿತರಕರ ಬಹುಕಾಲದ ಬೇಡಿಕೆಯನ್ನು ಇದೀಗ ರಾಜ್ಯ ಸರ್ಕಾರ ಈಡೇರಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ,ಫಲಾನುಭವಿಗಳಿಗೆ ನೀಡುವ ಒಂದು ಕೆಜಿ ಅಕ್ಕಿಯ ಪಿಡಿಎಸ್ ವಿತರಕರ ಕಮಿಷನ್ ಮೊತ್ತವನ್ನು 1.24 ರೂಪಾಯಿಯಿಂದ 1.5 ರೂಪಾಯಿಗೆ ಹೆಚ್ಚಿಸುವುದಾಗಿ ಗುರುವಾರ ಘೋಷಿಸಿದ್ದಾರೆ. https://kannadanewsnow.com/kannada/if-janardhan-reddy-returns-to-bjp-we-will-fight-lok-sabha-elections-unitedly-sri-ramulu/ ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನಭಾಗ್ಯ ಯೋಜನೆಯ 10 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ವಿತರಕರ ಬಹುಕಾಲದ ಬೇಡಿಕೆಯಾಗಿರುವ ಈ ಘೋಷಣೆಯನ್ನು ಮಾಡಿದರು. https://kannadanewsnow.com/kannada/breaking-%e0%b2%89%e0%b2%a4%e0%b3%8d%e0%b2%a4%e0%b2%b0%e0%b2%aa%e0%b3%8d%e0%b2%b0%e0%b2%a6%e0%b3%87%e0%b2%b6-%e0%b2%b5%e0%b2%be%e0%b2%9f%e0%b3%8d%e0%b2%b8%e0%b2%aa%e0%b3%8d-%e0%b2%a8%e0%b2%b2/ ಬಸವೇಶ್ವರರು ಪ್ರಚಾರ ಮಾಡಿದ ಅನ್ನ ದಾಸೋಹದ ಪರಿಕಲ್ಪನೆಯಿಂದ ಈ ಯೋಜನೆಯು ಪ್ರೇರಿತವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಹೀಗಾಗಿ ನಾವು ಫಲಾನುಭವಿಗಳಿಗೆ ಐದು ಕೆಜಿ ಹೆಚ್ಚುವರಿ ಅಕ್ಕಿಯ ಹಣ ನೀಡುತ್ತಿದ್ದೇವೆ. ನೀವು ಮತ ಹಾಕಿದಾಗ ಬಡವರ ಪರವಾಗಿ ಯಾರು ಇದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದರು. https://kannadanewsnow.com/kannada/pm-modi-meets-bill-gates-discuss-ai-for-public-good/
ಉತ್ತರಪ್ರದೇಶ : ಉತ್ತರ ಪ್ರದೇಶದ ಲಕ್ನೊದಲ್ಲಿ 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ವಾಟ್ಸ್ ಅಪ್ ನಲ್ಲಿ ಲೀಕ್ ಆಗಿವೆ ಎಂಬ ಮಾಹಿತಿ ತಿಳಿದುಬಂದಿದೆ.ಪ್ರಾಂಶುಪಾಲ ಮಗನಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಗುರುವಾರ ಸೆಕೆಂಡ್ ಶಿಫ್ಟ್ ನಲ್ಲಿ ಪರೀಕ್ಷೆಗಳು ಆರಂಭವಾದ ಒಂದು ಗಂಟೆಯ ನಂತರ ಆಗ್ರಾದ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. https://kannadanewsnow.com/kannada/if-janardhan-reddy-returns-to-bjp-we-will-fight-lok-sabha-elections-unitedly-sri-ramulu/ ಪ್ರೌಢ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಮತ್ತು ಪರೀಕ್ಷೆಗಳ ವೀಕ್ಷಕ ಮುಖೇಶ್ ಅಗರ್ವಾಲ್ ಪ್ರತಿಕ್ರಿಯಿಸಿ, ಶಿಕ್ಷಣ ಇಲಾಖೆಯು ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿದೆ.ಘಟನೆಯ ನಂತರ ನಾವು ಸಮಿತಿಯನ್ನು ರಚಿಸಿದ್ದೇವೆ ಮತ್ತು ಅದರ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಈ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಗರ್ವಾಲ್ ಹೇಳಿದರು. https://kannadanewsnow.com/kannada/us-moon-lander-odysseus-inactive-a-week-after-landing/ ಈ ಪ್ರಶ್ನೆ ಪತ್ರಿಕೆಗಳನ್ನು ಕಾಲೇಜು ಪ್ರಾಂಶುಪಾಲರೊಬ್ಬರ ಮಗ “ಆಲ್ ಪ್ರಿನ್ಸಿಪಲ್ಸ್ ಆಗ್ರಾ” ಎಂಬ ವಾಟ್ಸಾಪ್…
ಬಳ್ಳಾರಿ : ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟು ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರ್ಪಡೆಯಾಗಿದ್ದಾರೆ. ಇದೀಗ ಇದರ ಬೆನ್ನಲ್ಲೇ ಗಂಗಾವತಿ ಕ್ಷೇತ್ರದ ಕೆ ಆರ್ ಪಿ ಪಿ ಶಾಸಕ ಜನಾರ್ದನ ರೆಡ್ಡಿ ಕೂಡ ಬಿಜೆಪಿಗೆ ಮರಳುವ ಕುರಿತು ಮಾಜಿ ಸಚಿವ ಶ್ರೀರಾಮುಲು ಸುಳಿವು ನೀಡಿದ್ದಾರೆ ಎಂದು ತಿಳಿದುಬಂದಿದೆ. https://kannadanewsnow.com/kannada/karnatakas-share-of-soil-officials-sitting-blindly-were-illegal/ ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೆಡ್ಡಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಅಮಿತ್ ಶಾ ನನ್ನ ಅಭಿಪ್ರಾಯ ಕೇಳಿದ್ದರು. ರೆಡ್ಡಿ ಅವರಿಗೆ ಕ್ಷೇತ್ರದಲ್ಲಿ ವರ್ಚಸ್ಸು ಇದೆ, ಅವರನ್ನು ಪಕ್ಷಕ್ಕೆ ಮರಳಿ ಕರೆತಂದರೆ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಲಾಭವಾಗಲಿದೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು. https://kannadanewsnow.com/kannada/caste-census-no-one-has-come-and-asked-me-what-caste-i-am-siddalinga-swamiji-of-siddaganga-math/ ಜನಾರ್ದನ ರೆಡ್ಡಿ ಮತ್ತು ನನ್ನ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವರು ಪಕ್ಷಕ್ಕೆ ಬಂದರೆ ನಾವು ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ.ಜನಾರ್ದನ ರೆಡ್ಡಿ ಅವರೊಂದಿಗೆ ವೈಯಕ್ತಿಕವಾಗಿ ಸಮಸ್ಯೆ ಇರಲಿಲ್ಲ. ಆದರೆ, ಅವರು ಹೊಸ ಪಕ್ಷ…
ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಜಿಲ್ಲಾದ್ಯಂತ ಇಟ್ಟಿಗೆ ತಯಾರಿಸಲು ಅಕ್ರಮ ಮಣ್ಣು ಸಾಗಾಣಿಕೆ ನಡೆಯುತ್ತಲೇ ಇದೇ. ಜೊತೆಗೆ ಇಲ್ಲಿ ತಯರಾದ ಇಟ್ಟಿಗೆಗಳಿಗೆ ತಮಿಳುನಾಡು,ಕೇರಳ ರಾಜ್ಯದಲ್ಲಿ ವ್ಯಾಪಕ ಬೇಡಿಕೆ ಇದ್ದು.. ಇದಕ್ಕಾಗಿ ಫಲವತ್ತತೆಯ ಮಣ್ಣು ಅನ್ಯ ರಾಜ್ಯದ ಪಾಲಾಗುತ್ತಿದೆ. ಆದರೆ ಈ ಬಗ್ಗೆ ಯಾರು ಕಾನೂನು ಕ್ರಮ ಕೈಗೊಳ್ಳದೆ ಕಂದಾಯ ಅದಿಕಾರಿಗಳು ಮೌನವಹಿಸಿದ್ದಾರೆ. https://kannadanewsnow.com/kannada/pro-pakistan-sloganeering-case-police-send-voice-samples-of-three-to-fsl/ ಕೈಗಾರಿಕಾ ಪ್ರದೇಶದಿಂದ ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ಜಮೀನಿನಿಂದ ಮಣ್ಣು ತೆಗೆದು ರಾಜಾರೋಷವಾಗಿ ಸಾಗಾಟ ಮಾಡಲಾಗುತ್ತಿದೆ. ಬದನಗುಪ್ಪೆ ಕೈಗಾರಿಕಾ ಪ್ರದೇಶದಿಂದ ವಿವಿದ ಗ್ರಾಮದಲ್ಲಿ ನಡೆಸೊ ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣು ರವಾನಿಸಲಾಗುತ್ತದೆ. ಅನ್ಯರಾಜ್ಯವಾದ ಕೇರಳ ತಮಿಳುನಾಡಿನಲ್ಲಿ ಕೆಂಪು ಮಣ್ಣು ತೆಗೆಯಲು ಅವಕಾಶವಿಲ್ಲದರಿಂದ ಇಲ್ಲಿ ತೆಗೆದು ಇಟ್ಟಿಗೆ ಸಿಧ್ದಪಡಿಸಿ ಪಕ್ಕದ ರಾಜ್ಯಗಳಿಗೆ ರವಾನೆ ಮಾಡಲಾಗುತ್ತಿದೆ. ಅನುಮತಿ ನೀಡದೆ ಇರೊ ಜಾಗದಲ್ಲಿ ಸರ್ಕಾರ ಕೂಡ ಯಾವ್ದೆ ಕಂದಾಯ ಪಾವತಿ ಮಾಡದೆ ಸಾಗಾಣಿಕೆ ಮಾಡುತ್ತಾ ಇದ್ದರೂ ನಾಡು ನುಡಿ ಜಲ ಎಂದು ಹೋರಾಟ ಮಾಡುವ ಕೆಲ ಸಂಘಟನೆ ಮುಖಂಡರು ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.…
ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪದ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ರು ಇದುವರೆಗೂ ಏಳು ಜನರನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆಗೆ ಒಳಪಟ್ಟ ಎಲ್ಲರೂ ಘೋಷಣೆ ಕೂಗಿಲ್ಲವೆಂದು ಹೇಳಿಕೆ ನೀಡಿದ್ದಾರೆ. https://kannadanewsnow.com/kannada/if-you-have-cold-cough-or-fever-dont-worry-about-corona-it-could-be-viral-fever-there-is-an-easy-home-remedy-for-this/ ಒಟ್ಟು 26 ಜನರ ಪಟ್ಟಿ ಮಾಡಿರುವ ವಿಧಾನಸೌಧದ ಠಾಣೆಯ ಪೊಲೀಸರು ಈ ವರೆಗೆ 7 ಜನರ ವಿಚಾರಣೆಯಾಗಿದ್ದು, 19 ಮಂದಿ ವಿಚಾರಣೆ ಬಾಕಿ ಇದೆ ಈ ವೇಳೆ ಜನರ ಪೈಕಿ 3 ವಾಯ್ಸ್ ಸ್ಯಾಂಪಲ್ ಅನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಸಂಗ್ರಹಿಸಿದ ಮೂವರ ವಾಯ್ಸ್ ಸ್ಯಾಂಪಲ್ ಗಳನ್ನು ಮಾತ್ರ ಎಫ್ಎಸ್ಎಲ್ ಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. https://kannadanewsnow.com/kannada/worlds-first-vedic-clock-today-inaugurated-by-prime-minister-modi-know-its-features/ ಅಲ್ಲದೆ ಅದರ ಜೊತೆಗೆ ವಿಡಿಯೋ ರವಾನೆ ಮಾಡಲಾಗಿದೆ. ಅಗತ್ಯವಿದ್ದರೆ ಬೇರೆ ತುಣುಕುಗಳನ್ನು ಮತ್ತೆ ಎಫ್ ಎಸ್ ಎಲ್ ಗೆ ಪೊಲೀಸರು ನೀಡಲಿದ್ದಾರೆ. ಸದ್ಯ ಎಸ್ ಎಲ್ ವರದಿಗಾಗಿ ವಿಧಾನಸೌಧದ ಪೊಲೀಸರು ಕಾಯುತ್ತಿದ್ದಾರೆ.ವರದಿ ಬಂದ ಮೇಲೆ ಮತ್ತಷ್ಟು ಮಾಹಿತಿಯನ್ನು ಪೊಲೀಸರು ಸಂಗ್ರಹಿಸಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಬಳ್ಳಾರಿ: ನಟ ಯಶ್ ಬೆಂಗಾವಲು ಪಡೆ ವಾಹನವೊಂದು ಯುವಕನ ಕಾಲಿನ ಮೇಲೆ ಹರಿದು ಗಾಯವಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ನಟ ಯಶ್ ಬಳ್ಳಾರಿಯಲ್ಲಿ ಅಮೃತೇಶ್ವರ ದೇವಸ್ಥಾನ ಉದ್ಘಾಟನೆ ವೇಳೆ ಆಗಮಿಸಿದ್ದರು. ಈ ವೇಳೆ, ನೂಕು-ನುಗ್ಗಲು ಉಂಟಾಗಿ ಯಶ್ ಬೆಂಗಾವಲು ಪಡೆಯ ಕಾರು ಹರಿದು ಅಭಿಮಾನಿಯೊಬ್ಬ ಗಾಯಗೊಂಡಿದ್ದಾನೆ. https://kannadanewsnow.com/kannada/jai-sitaram-siddaramaiah-hits-back-at-bjp-for-jai-shri-ram-remark/ ನಗರ ಹೊರವಲಯದ ಬಾಲಾಜಿ ನಗರ ಕ್ಯಾಂಪ್ ಬಳಿ ನೂತನವಾಗಿ ಕೃಷ್ಣ ಶಿಲೆಯಿಂದ ನಿರ್ಮಿಸಲಾಗಿರುವ ಅಮೃತೇಶ್ವರ ದೇವಸ್ಥಾನದಲ್ಲಿ ಸ್ಪಟಿಕ ಲಿಂಗ ಪ್ರತಿಷ್ಠಾಪನೆ ಮತ್ತು ಕುಂಭಾಭೀಷೇಕ ಕಾರ್ಯಕ್ರಮಕ್ಕೆ ಚಿತ್ರನಟ ರಾಕಿಂಗ್ ಸ್ಟಾರ್ಯಶ್ ಆಗಮಿಸಿ, ಪೂಜೆ ಸಲ್ಲಿಸಿದರು. https://kannadanewsnow.com/kannada/indian-nurse-retorts-to-african-patient-saying-india-is-not-good-for-sleeping-watch-video/ ತೆಲುಗಿನ ಚಿತ್ರ ನಿರ್ಮಾಪಕ ಹಾಗೂ ವಿತರಕ ಕೊರ್ರಪಾಟಿ ರಂಗನಾಥ ಸಾಯಿ ಅವರು ಯಶ್ ಅವರನ್ನು ದೇವಸ್ಥಾನ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿದ್ದರು. ಈ ವೇಳೆ, ನೂಕು-ನುಗ್ಗಲು ಉಂಟಾಗಿ ಯಶ್ ಬೆಂಗಾವಲು ಪಡೆಯ ಕಾರು ಹರಿದು ಅಭಿಮಾನಿಯೊಬ್ಬ ಗಾಯಗೊಂಡಿದ್ದಾನೆ.ಸಿರುಗುಪ್ಪದ ಪಿಯುಸಿ ವಿದ್ಯಾರ್ಥಿ ಉಮೇಶ್ ಎಂಬ ಯುವಕನ ಪಾದದ ಮೇಲೆ ಕಾಲಿನ ಗಾಲಿ ಹರಿದಿದ್ದರಿಂದ ತೀವ್ರ ಗಾಯವಾಗಿದ್ದು, ವಿಮ್ಸ್ ಟ್ರಾಮಾಕೇರ್ಸೆಂಟರ್ನಲ್ಲಿ ದಾಖಲು…
ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪ ಖಂಡಿಸಿ ಬಾವಿಗಿಳಿದು ಧರಣಿ ನಡೆಸಿ ಜೈ ಶ್ರೀರಾಮ್ , ಮೋದಿ, ಎಂದು ಜೈಕಾರ ಕೂಗಿದ ಪ್ರತಿಪಕ್ಷ ಬಿಜೆಪಿ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಜೈ ಸೀತಾರಾಮ್’ ಎಂದು ಘೋಷಣೆ ಕೂಗಿ ಟಾಂಗ್ ಕೊಟ್ಟ ಪ್ರಸಂಗ ನಡೆಯಿತು. https://kannadanewsnow.com/kannada/indian-nurse-retorts-to-african-patient-saying-india-is-not-good-for-sleeping-watch-video/ ಮಾತೆತ್ತಿದರೆ ಜೈಶ್ರೀರಾಮ್ ಎನ್ನುತ್ತಾರೆ. ನಾವೇನು ರಾಮನ ಭಕ್ತರಲ್ಲವೆ? ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ? ಇವರು ರಾಮ- ಸೀತೆಯರನ್ನು ಬೇರೆ ಮಾಡಿದ್ದಾರೆ. ಮಹಾತ್ಮಾಗಾಂಧೀಜಿ ಹೇಳಿದ ಸೀತಾರಾಮನಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು. https://kannadanewsnow.com/kannada/bjp-rss-talks-fail-puttil-to-contest-lok-sabha-polls-as-rebel-candidate/ ಗುರುವಾರ ಬಜೆಟ್ ಮೇಲಿನ ಚರ್ಚೆ ವೇಳೆ ಸಿಎಂಸಿದ್ದರಾಮಯ್ಯ ಉತ್ತರ ನೀಡಲು ಆರಂಭಿಸಿದ ವೇಳೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಅಡ್ಡಿಪಡಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ‘ಜೈ ಸೀತಾರಾಮ್’ ಎಂದರು. ಈ ಮೂಲಕ ಕೇಂದ್ರ, ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ರಾಜ್ಯದಿಂದ ರಾಜ್ಯ ಸಭೆಗೆ…
ಪುತ್ತೂರು : ಬಿಜೆಪಿ ಹಾಗೂ ಆರ್ ಎಸ್ ಎಸ್ ನಡುವೆ ಸಂಧಾನ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧವೇ ಬಂಡಾಯವಾಗಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. https://kannadanewsnow.com/kannada/breaking-massive-fire-breaks-out-in-dhakas-bailey-road-building-44-people-burned-alive/ ಈ ಕುರಿತಂತೆ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ ಮಾಹಿತಿ ನೀಡಿದ್ದು, ಸಂಘಟನೆಯ ಕಾರ್ಯಕರ್ತರ ನಿರ್ಧಾರದಂತೆ ಮುಂಬರುವ ಲೋಕಸಭಾಚುನಾವಣೆ ಸಹಿತ ಜಿಲ್ಲೆಯಲ್ಲಿ ನಡೆಯಲಿರುವ ಮುಂದಿನ ಎಲ್ಲ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ನಡೆಸಲಿದೆ ಎಂದು ಘೋಷಿಸಿದ್ದಾರೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯವಾಗಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. https://kannadanewsnow.com/kannada/cabinet-approves-construction-of-50-bed-critical-care-in-these-five-district-hospitals/ ಪುತ್ತಿಲ ಪರಿವಾರ ಈತನಕ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯಾಚರಿಸುತ್ತಿತ್ತು. ಮುಂದಿನ ದಿನಗಳಲ್ಲಿ ಪುತ್ತಿಲ ಪರಿವಾರ ಸಂಘಟನೆ ಜಿಲ್ಲೆ ಮತ್ತು ರಾಜ್ಯಮಟ್ಟಕ್ಕೆ ವಿಸ್ತಾರಗೊಳ್ಳಲಿದೆ.ಸೇವಾ ಕಾರ್ಯ ನಡೆಸಲಿದೆ. ಜತೆಗೆ ಮುಂದೆ ಜಿಲ್ಲೆಯಲ್ಲಿ ನಡೆಯುವ ಎಲ್ಲ ಚುನಾವಣೆಯಲ್ಲಿ ಪುತ್ತಿಲ…