Author: kannadanewsnow05

ಬೆಂಗಳೂರು : ಬೆಂಗಳೂರಲ್ಲಿ ತಡರಾತ್ರಿ ಘೋರ ಘಟನೆ ನಡೆದಿದ್ದು, ರಸ್ತೆಬದಿ ನಿಂತಿದ್ದ ವಾಹನಕ್ಕೆ ತಡರಾತ್ರಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನವೀನ್ (30) ಎಂದು ಗುರುತಿಸಲಾಗಿದೆ. ನವೀನ್ ಮೊದಲಿಗೆ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ರಕ್ತ ಸ್ರಾವವಾಗಿದ್ದರೂ ಸಾವನ್ನಪ್ಪದ ಹಿನ್ನೆಲೆ ರಸ್ತೆಬದಿ ನಿಂತಿದ್ದ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನವೀನ್ ಈ ಹಿಂದೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಪೊಲೀಸರು ಪತ್ತೆಮಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read More

18 ವಾರಗಳಲ್ಲಿ ಸಾಲದ ಹೊರೆಯಿಂದ ಮುಕ್ತಿ ಪಡೆಯಲು ಪರಿಹಾರ ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ನಾವು ಈ ಸಾಲದ ಹೊರೆಯಿಂದ ಹೊರಬರಲು ಸಾಧ್ಯವಾಗಿಲ್ಲ. ನಾವು ಈ ಸಾಲದ ಹೊರೆಯಿಂದ ಹೊರಬಂದರೆ, ನಮಗೆ ಮತ್ತೆ ಜೀವ ಸಿಗುತ್ತದೆ ಎಂದು ಹೇಳುವ ಅನೇಕ ಜನರು ಇನ್ನೂ ಇದ್ದಾರೆ. ಸಮುದ್ರದಲ್ಲಿ ಸಿಕ್ಕಿಹಾಕಿಕೊಂಡು ತುಂಡುಗಳಾಗಿ ಒಡೆಯುವಷ್ಟು ದೊಡ್ಡ ಸಮಸ್ಯೆ ನಿಮ್ಮಲ್ಲಿದ್ದರೆ, ಈ ಆಧ್ಯಾತ್ಮಿಕ ತಾಂತ್ರಿಕ ಪರಿಹಾರವು ನಿಮಗಾಗಿ ಮಾತ್ರ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ…

Read More

ಬೆಂಗಳೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತೆ ಸಿಎಂ ಸಿದ್ದರಾಮಯ್ಯ ಮೈಸೂರಿನ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅಂತ ಹೇಳಿಕೆ ನೀಡಿದ್ದ ವಿಧಾನ ಪರಿಷತ್​ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಅದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅಪಮಾನ ಮಾಡುವ ಉದ್ದೇಶದಿಂದ ನಾನು ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುರಿತು ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾಲ್ವಡಿ ಅವರು ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಧನೆ ಕಡಿಮೆ ಮಾಡಿ ನಮ್ಮ ಸರ್ಕಾರ ಹೆಚ್ಚು ಕೆಲಸ ಮಾಡಿದೆ ಎಂದು ನಾನು ಹೇಳಲು ಹೊರಟಿದ್ದಲ್ಲ. ನಾಲ್ವಡಿ ಅವರನ್ನು ಬಿಟ್ಟರೆ ಮೈಸೂರಿಗೆ ಹೆಚ್ಚು ಅನುದಾನ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದಷ್ಟೇ ತಿಳಿಸುವುದು ನನ್ನ ಉದ್ದೇಶವಾಗಿತ್ತು…

Read More

ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ತಾಲೂಕಿನಲ್ಲಿ ದಿನೇ ದಿನೆ ಕಳೆದಂತೆ ವರುಣಾರ್ಭಟ ಮಿತಿ ಮೀರಿದೆ. ಭಾನುವಾರದ ಗಾಳಿ ಮಳೆಗೆ ಮರದ ಗೆಲ್ಲು ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ. ಮೃತರನ್ನು ದಿ. ಗೋಪಾಲ ಭಂಡಾರಿ ಅವರ ಪತ್ನಿ ರುಕ್ಮಿಣಿ (62) ಎಂದು ಗುರುತ್ತಿಸಲಾಗಿದೆ. ರುಕ್ಮಿಣಿ ಅವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಮುಂಜಾನೆ ಮನೆಯ ಹೊರಗಡೆ ಕೆಲಸ ನಿರತರಾಗಿದ್ದಾಗ ಬಲವಾದ ಗಾಳಿ ಮತ್ತು ಮಳೆಯಿಂದಾಗಿ ಮನೆ ಸಮೀಪದ ಮರದ ಒಂದು ಭಾಗ (ಗೆಲ್ಲು) ತುಂಡಾಗಿ ಅವರ ಮೇಲೆ ಬಿದ್ದಿದೆ. ಪರಿಣಾಮವಾಗಿ ರುಕ್ಮಿಣಿಯವರು ಮರದಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳೀಯರು ಘಟನೆಯ ವಿಚಾರ ತಿಳಿದು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Read More

ಚಿತ್ರದುರ್ಗ : ರಾಜ್ಯದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ತಮ್ಮನಿಗೆ ಮಾರಣಾಂತಿಕ ಕಾಯಿಲೆ ಇದ್ದಿದ್ದರಿಂದ ಆಂಬುಲೆನ್ಸ್ ನಲ್ಲೆ ಆತನ ಅಕ್ಕ ಮತ್ತು ಭಾವ ಸೇರಿ ಉಸಿರಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಕಾಯಿಲೆಯಿಂದ ಸ್ವಂತ ಅಕ್ಕನೆ ತಮ್ಮನ ಹತ್ಯೆ ಮಾಡಿರುವುದು ಬೆಚ್ಚಿ ಬೀಳಿಸಿದೆ. ಹೌದು ತಮ್ಮನಿಗೆ ಮಾರಣಾಂತಿಕ ಕಾಯಿಲೆ ಇದ್ದಿದ್ದರಿಂದ ಆಂಬುಲೆನ್ಸ್ ನಲ್ಲೆ ಆತನ ಅಕ್ಕ ಮತ್ತು ಭಾವ ಸೇರಿ ಉಸಿರಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಐಮಂಗಲ ಎಂಬಲ್ಲಿ ನಡೆದಿದೆ. ಚಿತ್ರದುರ್ಗದ ದುಮ್ಮಿ ಗ್ರಾಮದ ಅಕ್ಕ ನಿಶಾ ಹಾಗು ಭಾವ ಮಂಜುನಾಥ್ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.ಜುಲೈ 23 ರಂದು ಮಲ್ಲಿಕಾರ್ಜುನ ಗೆ ಅಪಘಾತವಾಗಿತ್ತು. ಗಾಯಳು ಮಂಜುನಾಥ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಆತನಿಗೆ ರಕ್ತ ಪರೀಕ್ಷೆ ಮಾಡಲಾಗಿತ್ತು. ರಿಪೋರ್ಟ್ ನಲ್ಲಿ ಮಲ್ಲಿಕಾರ್ಜುನ ಗೆ ಮಾರಣಾಂತಿಕ ಕಾಯಿಲೆ ಇರೋದು ಗೊತ್ತಾಗಿದೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಮಣಿಪಾಲ ಗೆ ಶಿಫ್ಟ್ ಮಾಡಲಾಯಿತು.ಈ ವೇಳೆ…

Read More

ಬೆಂಗಳೂರು : ದರ್ಶನ್ ಅಭಿಮಾನಿಗಳು ನನಗೆ ಡ್ರ್ಯಾಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ. ದರ್ಶನ್ ಫ್ಯಾನ್ಸ್ ನನಗೆ ಬೆದರಿಕೆ ಹಾಕುವ ಸಂದರ್ಭದಲ್ಲಿಯೇ ರಕ್ಷಕ್ ಬುಲೆಟ್ ಸಹ ರೌಡಿಶೀಟರ್ ಗಳ ಪಕ್ಕದಲ್ಲಿ ಇದ್ದ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಟ ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಲವಂತವಾಗಿ ನನ್ನನ್ನು ಕರೆದುಕೊಂಡು ಹೋದರು. ವೇಪನ್ ತೋರಿಸಿ ದರ್ಶನ್ ಫ್ಯಾನ್ಸ್ ನನಗೆ ಧಮ್ಕಿ ಹಾಕಿದ್ದಾರೆ. ಜುಲೈ 22 ರಂದು ದೇಗುಲ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಈ ವೇಳೆ ಯಾರು ಕರೆದಿದ್ದಾರೆ ಅಂತ ಕರೆದರು ಕಾರಿನಲ್ಲಿ ಕೂರಿಸಿಕೊಂಡು ನನಗೆ ಬೆದರಿಕೆ ಹಾಕಿದ್ರು. ನನ್ನ ಪಕ್ಕದಲ್ಲಿ ರಕ್ಷೆ ಬುಲೆಟ್ ಕೂಡ ಕೂತಿದ್ದ ರೌಡಿಶೀಟರ್ ಗಳ ಜೊತೆಗೆ ಆತ ಸಹ ಇದ್ದ ಎಂದು ಪ್ರಥಮ ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.ಚಿತ್ರೀಕರಣಕ್ಕೆ ಹೋಗುವ ಮುನ್ನ ನಟ ಪ್ರಥಮ್ ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ತೆರಳಿದ್ದಾಗ ಘಟನೆ ನಡೆದಿದೆ. ಈ ಬಗ್ಗೆ ಪ್ರಥಮ್ ಲಾಯರ್…

Read More

ದಾವಣಗೆರೆ : ಇತ್ತೀಚಿಗೆ ರಾಜ್ಯ ಕಾರಣದಲ್ಲಿ ಸಿಎಂ ಬದಲಾವಣೆಯ ಕುರಿತು ಹಲವು ವಿಷಯಗಳು ಚರ್ಚೆಯಾದವು. ಇದೀಗ ಸಿಎಂ ಬದಲಾವಣೆ ವಿಚಾರ ತಣ್ಣಗಾಗಿರುವಾಗಲೇ ಮತ್ತೆ ದಲಿತ ಸಿಎಂ ಕೂಗು ಕೇಳಿ ಬಂದಿದ್ದು, ರಾಜ್ಯದಲ್ಲಿ ಬಹುದಿನಗಳಿಂದಲೂ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ. ದಲಿತರು ಸಿಎಂ ಆದರೆ ಗೃಹ ಸಚಿವ ಜಿ ಪರಮೇಶ್ವರ್ ಆಗಲಿ ಎಂದು ಶಾಸಕ ಬಿ ದೇವೇಂದ್ರಪ್ಪ ತಿಳಿಸಿದರು. ದಾವಣಗೆರೆಯ ಜಗಳೂರು ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಅವರು ಛಲವಾದಿ ಮಹಾಸಭಾ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಷಣ ಮಾಡಿ ಡಾ. ಜಿ ಪರಮೇಶ್ವರ್ ಸಮ್ಮುಖದಲ್ಲಿಯೇ ಈ ಒಂದು ಹೇಳಿಕೆ ನೀಡಿದ್ದಾರೆ. ದಲಿತ ಸಿಎಂ ಕೂಗು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ. ಇಷ್ಟು ದಿನಗಳ ಆದರೂ ಕೂಡ ಅದು ಸಾಕಾರವಾಗಿಲ್ಲ. ಹಾಗಾಗಿ ದಲಿತರಲ್ಲಿ ಸಿಎಂ ಆದ್ರೆ ಡಾ.ಜಿ ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದು ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಹೇಳಿಕೆ ನೀಡಿದರು.

Read More

ವಿಜಯಪುರ : ಇತ್ತೀಚಿಗೆ ಉಪರಾಷ್ಟ್ರಪತಿ ಸ್ಥಾನಕ್ಕೆ ಧಿಡೀರ್ ಎಂದು ಜಗದೀಪ ಧನ್ಕರ್ ರಾಜೀನಾಮೆ ನೀಡಿದರು. ಈ ವಿಚಾರವಾಗಿ, ಉಪರಾಷ್ಟ್ರಪತಿ ಜಗದೀಪ ಧನ್ಕರ್ ರಾಜಿನಾಮೆ ಬಗ್ಗೆ ಗೊತ್ತಿಲ್ಲ ಎಂದು ವಿಜಯಪುರದಲ್ಲಿ  ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಧನ್ಕರ್ ರಾಜೀನಾಮೆ ನೀಡಿರುವ ಬಗ್ಗೆ ಅವರಿಗೆ ಮಾತ್ರ ಗೊತ್ತಿರುತ್ತದೆ. ಧನಕರ್ ಅವರು ಯಾವಾಗಲೂ ಸರ್ಕಾರದ ಪರವಾಗಿ ಇರುತ್ತಿದ್ದವರು. ಯಾಕೆ ರಾಜೀನಾಮೆ ನೀಡಿದ್ದಾರೆ ಎನ್ನುವುದರ ಬಗ್ಗೆ ಅವರೇ ಹೇಳಬೇಕು. ನಮಗೆ ಮಾತನಾಡಲು ಜಗದೀಪ್ ಧನ್ಕರ್ ಅವಕಾಶ ನೀಡುತ್ತಿರಲಿಲ್ಲ. ರೈತರು ಬಡವರು ಅಂತಾರಾಷ್ಟ್ರೀಯ ಸಮಸ್ಯೆ ಹೇಳಲು ಬಿಡುತ್ತಿರಲಿಲ್ಲ. ರಾಜ್ಯಸಭೆಯಲ್ಲಿ ಮಾತನಾಡಲು ನಮಗೆ ಅವಕಾಶವನ್ನೇ ನೀಡುತ್ತಿರಲಿಲ್ಲ. ಬಡವರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರೆ ಹಿಂದೂ ಮುಸ್ಲಿಂ ಗಲಾಟೆ ಬಗ್ಗೆ ಜಗದೀಪ್ ಧನಕರ್ ಮಾತನಾಡುತ್ತಿದ್ದರು. ಈಗ ಧನಕರ್ ಹೇಳುತ್ತಿದ್ದಾರೆ ಅಂದರೆ ಅವರು ಮೋದಿ ನಡುವೆ ಆಗಿರೋದು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

Read More

ವಿಜಯಪುರ : ಬೀದರ್ ಜಿಲ್ಲೆಯ ವರವಟ್ಟಿ ನನ್ನ ಹುಟ್ಟೂರಾಗಿದ್ದು, ರಜಾಕರು ಆಗಾಗ ಅಲ್ಲಿ ಬಂದು ದಾಳಿ ಮಾಡುತ್ತಿದ್ದರು. ನಾನು ಜಮೀನಿನಲ್ಲಿ ಮರದಡಿ ಆಟವಾಡುತ್ತಿದ್ದಾಗ ರಜಾಕಾರರು ದಾಳಿ ಮಾಡಿ ಮನೆಯಲ್ಲಿದ್ದ ನಮ್ಮ ತಾಯಿ, ಅಕ್ಕ, ಚಿಕ್ಕಪ್ಪ ಎಲ್ಲರನ್ನು ಸುಟ್ಟು ಹಾಕಿದರು ಎಂದು ವಿಜಯಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಬಹಮನಿ ಸಾಮ್ರಾಜ್ಯ 6 ತುಕಾಡಿಗಳಾದವು. ಆರು ರಾಜ್ಯಗಳಾದ ಬಳಿಕ ಜಗಳ ಆರಂಭವಾದವು. ಅದು ಜನರಿಗಾಗಿ ಅಲ್ಲ ತಮ್ಮ ರಾಜ್ಯ ಉಳಿಸಿಕೊಳ್ಳಲು ಜಗಳ ಮಾಡಿದರು.ಜನರಿಗಾಗಿ ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು ಹಾಗು ಡಾ.ಅಂಬೇಡ್ಕರ್ ಹೋರಾಟ ಮಾಡಿದರು. ಬೀದರ್ ಜಿಲ್ಲೆಯ ವರವಟ್ಟಿ ನನ್ನ ಹುಟ್ಟೂರು. ರಜಾಕರು ಅಲ್ಲಿ ದಾಳಿ ಮಾಡುತ್ತಿದ್ದರು. ಗುಂಪಾ ಗ್ರಾಮದಲ್ಲಿ 800 ಜನರನ್ನು ಸಜೀವ ದಹನ ಮಾಡಿ ಹೋದರು. ರಾಜಾಕರು ಹೋಗುವಾಗ ನಾನು ಜಮೀನಿನಲ್ಲಿ ಮರದಡಿ ಆಟ ಆಡುತ್ತಿದೆ. ರಜಾಕರ ಕೃತ್ಯದಿಂದ ವರವಟ್ಟಿಯಲ್ಲಿದ್ದ ನಮ್ಮ ಮನೆ ಸುಟ್ಟು ಹೋಯಿತು. ನಮ್ಮ ಮನೆಯಲ್ಲಿದ್ದ ನನ್ನ ತಾಯಿ ಅಕ್ಕ ಚಿಕ್ಕಪ್ಪ ಸುಟ್ಟು ಹೋದರು. ನಮ್ಮ ತಂದೆ…

Read More

ವಿಜಯಪುರ : ದೇಶದಲ್ಲಿ ವ್ಯಕ್ತಿ ಮುಖ್ಯ ನಂತರ ದೇಶ ಎನ್ನುತ್ತಿರುವುದು ದುರಂತದ ಸಂಗತಿಯಾಗಿದೆ. ದೇಶ ಇದ್ದರೆ ನಾವು ಸಂವಿಧಾನ ಇದ್ದರೆ ದೇಶದಲ್ಲಿ ಐಕ್ಯತೆ ಮುಖ್ಯ ಎಂದು ವಿಜಯಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಬಹಮನಿ ಸಾಮ್ರಾಜ್ಯ 6 ತುಕಾಡಿಗಳಾದವು. ಆರು ರಾಜ್ಯಗಳಾದ ಬಳಿಕ ಜಗಳ ಆರಂಭವಾದವು. ಅದು ಜನರಿಗಾಗಿ ಅಲ್ಲ ತಮ್ಮ ರಾಜ್ಯ ಉಳಿಸಿಕೊಳ್ಳಲು ಜಗಳ ಮಾಡಿದರು.ಜನರಿಗಾಗಿ ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು ಹಾಗು ಡಾ.ಅಂಬೇಡ್ಕರ್ ಹೋರಾಟ ಮಾಡಿದರು. ಬೀದರ್ ಜಿಲ್ಲೆಯ ವರವಟ್ಟಿ ನನ್ನ ಹುಟ್ಟೂರು. ರಜಾಕರು ಅಲ್ಲಿ ದಾಳಿ ಮಾಡುತ್ತಿದ್ದರು. ಗುಂಪಾ ಗ್ರಾಮದಲ್ಲಿ 800 ಜನರನ್ನು ಸಜೀವ ದಹನ ಮಾಡಿ ಹೋದರು. ರಾಜಾಕರು ಹೋಗುವಾಗ ನಾನು ಜಮೀನಿನಲ್ಲಿ ಮರದಡಿ ಆಟ ಆಡುತ್ತಿದೆ. ರಜಾಕರ ಕೃತ್ಯದಿಂದ ವರವಟ್ಟಿಯಲ್ಲಿದ್ದ ನಮ್ಮ ಮನೆ ಸುಟ್ಟು ಹೋಯಿತು. ನಮ್ಮ ಮನೆಯಲ್ಲಿದ್ದ ನನ್ನ ತಾಯಿ ಅಕ್ಕ ಚಿಕ್ಕಪ್ಪ ಸುಟ್ಟು ಹೋದರು. ನಮ್ಮ ತಂದೆ ಮಾಪಣ್ಣಗೆ ನನ್ನ ನಿನ್ನ ಮಗ ಹೊರಗೆ ಅಳುತ್ತಿದ್ದಾನೆ ಎಂದು ಹೇಳಿದರು ನನ್ನನ್ನು ಹುಡುಕಿಕೊಂಡು…

Read More