Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಮೈಸೂರು ಜಿಲ್ಲೆಯ ಕೆ ಆರ್ ನಗರ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತು ವಿನಾಯಿತಿ ಕೋರಿ ಭವಾನಿ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಭವಾನಿ ರೇವಣ್ಣ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಪ್ರಕರಣದ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದೆ. ಅರ್ಜಿಯಲ್ಲಿ ಹಾಸನ ಮೈಸೂರಿಗೆ ತೆರಳದಂತೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲು ಮನವಿ ಮಾಡಲಾಯಿತು. ಭವಾನಿ ರೇವಣ್ಣ ಅರ್ಜಿಗೆ ಎಸ್ಪಿಪಿ ಪ್ರೊ. ರವಿವರ್ಮಕುಮಾರ್ ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದರು. ಅತ್ಯಾಚಾರ ಸಂತ್ರಸ್ತೇ ಅಪಹರಣ ಕೇಸ್ನಲ್ಲಿ ಭವಾನಿ ಕಿಂಗ್ ಪಿನ್ ಆಗಿದ್ದಾರೆ. ಪ್ರಜ್ವಲ್ ರೇವಣ್ಣನಿಂದ ನೂರಾರು ಸಂತ್ರಸ್ತ ಮಹಿಳೆಯರು ಇದ್ದಾರೆ. ಅವರಲ್ಲಿ ಕೇವಲ ನಾಲ್ಕು ಮಹಿಳೆಯರು ಮಾತ್ರ ದೂರು ನೀಡಿದ್ದಾರೆ. ಜಾಮೀನು ಷರತ್ತು ಸಡಲಿಸಿದರೆ ಸಾಕ್ಷ್ಯಾಧಾರ ನಾ ಶಕ್ಕೆ ಪ್ರಯತ್ನಿಸಬಹುದು. ಹೀಗಾಗಿ ಜಾಮೀನು ಷರತ್ತು ಸಡಿಲಿಸದಂತೆ ಮನವಿ ಮಾಡಿದರು. ಈ ವೇಳೆ ನ್ಯಾ.ಪ್ರದೀಪ್ ಸಿಂಗ್ ಯೆರೂರು ಅವರಿದ್ದ ಪೀಠ ಆದೇಶ ಕಾಯ್ದಿರಿಸಿದರು.
ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಕಳೆದ ಹಲವು ತಿಂಗಳಿನಿಂದ ಸರಣಿ ಆತ್ಮಾತ್ಯ ಪ್ರಕರಣಗಳು ನಡೆದಿದೆವು ಈ ಒಂದು ಆತ್ಮಹತ್ಯೆ ತಡೆಗೆ ರಜೆ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಇದೀಗ ವಿಧಾನಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ ಗೊಳಿಸಲಾಯಿತು. ಹೌದು ಇಂದು ವಿಧಾನಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರವಾಗಿದ್ದು, ಕಿರು ಮೈಕ್ರೋಸಾಲ, ಸಣ್ಣ ಸಾಲದ ಕಿರುಕುಳ ತಡೆ ಕುರಿತು ವಿಧೇಯಕವನ್ನು ಸ್ಪೀಕರ್ ಯುಟಿ ಖಾದರ್ ಅಂಗೀಕಾರ ಮಾಡಿದರು.ಇತ್ತೀಚಿಗೆ ಸಚಿವ ಪ್ರಿಯಾಂಕ್ ಖರ್ಗೆ ಮೈಕ್ರೋ ಫೈನಾನ್ಸ್ ತಡೆಗೆ ಮಸೂದೆಯನ್ನು ಮಂಡನೆ ಮಾಡಿದ್ದರು. ಇದೀಗ ಮೈಕ್ರೋ ಫೈನಾನ್ಸ್ ವಿದೇಯಕವನ್ನು ಸ್ಪೀಕರ್ ಯುಟಿ ಖಾದರ್ ಅಂಗೀಕರಿಸಿದ್ದಾರೆ.
ಮೈಸೂರು : ಆಟವಾಡುತ್ತಿದ್ದ ಮಗು ಕರೆದಾಗ ಬರಲಿಲ್ಲವೆಂಬ ತನ್ನ ಮಾತನ್ನು ಕೇಳಲಿಲ್ಲ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಣಸೂರು ತಾಲೂಕು ಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ. ದೊಣ್ಣೆಯಿಂದ ಹೊಡೆದು ಮಗುವಿನ ಎರಡು ಕೈಗಳನ್ನ ಚಿಕ್ಕಪ್ಪ ಮುರಿದಿದ್ದಾರೆ. ಆನಂದ್ (23) ಎನ್ನುವ ವ್ಯಕ್ತಿ ತನ್ನ ಹೆಂಡತಿಯ ಅಕ್ಕನ ಮಗಳ ಮೇಲೆ ಹಲ್ಲೆ ಮಾಡಿ ಕೈ ಮುರಿದಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲ್ಲೆಗೆ ಒಳಗಾದ ಬಾಲಕಿ ಜಾನ್ವಿ (4) ಎಂದು ತಿಳಿದುಬಂದಿದೆ. ಆಟೋ ಓಡಿಸುತ್ತಿದ್ದ ಆನಂದ್ ನಿನ್ನೆ ಶನಿವಾರ ರಜೆ ಇದ್ದ ಕಾರಣ ಮನೆಯಲ್ಲಿ ಆಟವಾಡುತ್ತಿದ್ದ ಜಾನ್ವಿಯನ್ನ ಕರೆದಿದ್ದಾನೆ. ಆರೋಪಿ ಆನಂದನ ಪತ್ನಿಯ ಅಕ್ಕನ ಮಗಳು ತನ್ನ ಮಾತು ಕೇಳಲಿಲ್ಲವೆಂದು ಕೋಪಗೊಂಡು ಆನಂದ್ ರಿಪೀಸ್ ಪಟ್ಟಿ, ಸ್ಕ್ರೂಡ್ರೈವರ್ ನಿಂದ ಮಗುವಿನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಬಾಲಕಿಯ ಎರಡೂ ಕೈಗಳ ಮೂಳೆ ಮುರಿದಿದೆ. ತಲೆಗೂ ಪೆಟ್ಟಾಗಿ ದ್ದು, ಆಘಾತಕ್ಕೊಳಗಾಗಿರುವ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬೆಂಗಳೂರು : ರಾಜ್ಯದಲ್ಲಿ 20 ಲಕ್ಷ ಜನ ಸಮುದಾಯದವರು ಇದ್ದಾರೆ ಬೆಳಗಾವಿ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಜೈನ ಸಮುದಾಯದವರು ಇದ್ದಾರೆ ಸಿಎಂ ಬಳಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಬೇಡಿಕೆ ಇಡಲಾಗಿದೆ ಆದಷ್ಟು ಬೇಗ ಘೋಷಣೆ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಉಚಿತ ಜಮೀರ್ ಅಹ್ಮದ್ ತಿಳಿಸಿದರು. ವಿಧಾನಸೌಧದಲ್ಲಿ ಅಥಣಿ ಶಾಸಕ ಲಕ್ಷ್ಮಣ ಸೌದಿ ಅವರು, ಜೈನ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ. ಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಗುರುತು ಕೊಟ್ಟಿದ್ದು ಜೈನ ಸಮುದಾಯ. ಆ ಋಣ ಕಾಂಗ್ರೆಸ್ ನವರಾದ ನಮ್ಮ ಮೇಲಿದೆ. ಆದಷ್ಟು ಬೇಗ ಆ ಋಣ ತೀರಿಸೋಣ ರೇಣ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮದ ಅಗತ್ಯ ಇದೆ. ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಹಾಸ್ಟೆಲ್ ಯಾವಾಗ ಘೋಷಣೆ ಮಾಡ್ತೀರಾ ಎಂದು ಲಕ್ಷ್ಮಣ ಸವದಿ ಪ್ರಶ್ನಿಸಿದರು. ಇದಕ್ಕೆ ಸಚಿವ ಜಮೀರ್ ಅಹ್ಮದ್ ಉತ್ತರಿಸಿ ರಾಜ್ಯದಲ್ಲಿ 20 ಲಕ್ಷ ಜನ ಸಮುದಾಯದವರು ಇದ್ದಾರೆ. ಬೆಳಗಾವಿ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಜೈನ ಸಮುದಾಯದವರು…
ಬೆಂಗಳೂರು : ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಬೆಂಗಳೂರಿನ ಗಾಂಧಿನಗರದ ಜಂಕ್ಷನ್ ಬಳಿ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ದಿನೇ ದಿನೇ ಟ್ರಾಫಿಕ್ ಜಾಮ್ ನಿಂದಾಗಿ ಬೆಂಗಳೂರಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಗೆ ಮತ್ತೊಂದು ಬಲಿಯಾಗಿದ್ದು, ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಗಾಂಧಿನಗರ ಜಂಕ್ಷನ್ ನಲ್ಲಿ ಈ ಒಂದು ಘಟನೆ ಸಂಭವಿಸಿದೆ. ಬೊಲೆರೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಬೆಂಗಳೂರು : ದುಬೈ ನಿಂದ ಕೋಟ್ಯಾಂತರ ರೂಪಾಯಿ ಅಕ್ರಮ ಚಿನ್ನ ಸಾಗಾಣಿ ಪ್ರಕರಣದಲ್ಲಿ ಸದ್ಯ ನಟಿ ರಮ್ಯಾ ರಾವ್ ಡಿ ಆರ್ ಐ ಕಸ್ಟಡಿಯಲ್ಲಿ ಇದ್ದಾರೆ. ಇನ್ನು ಈ ಪ್ರಕರಣದ ಕುರಿತು ಬಿಜೆಪಿ ಶಾಸಕ ಭರತ್ ಶೆಟ್ಟಿ ಹೊಸ ಬಾಂಬ್ ಶೆಟ್ಟಿ ಸಿದ್ದು ನಟಿ ರನ್ಯರಾವ್ ರಕ್ಷಣೆಗೆ ಕೆಲ ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದಾರೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ ಬೆಂಗಳೂರಿನ ವಿಧಾನಸೌಧದಲ್ಲಿ ಬಿಜೆಪಿಯ ಶಾಸಕ ಭರತ್ ಶೆಟ್ಟಿ ಹೊಸ ಬಾಂಬ್ ಸಿಡಿಸಿದ್ದಿ, ನಟಿ ರನ್ಯಾ ರಾವ್ ಗೆ ಸಚಿವರ ಸಂಪರ್ಕದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಸಿಬಿಐ ತನಿಖೆ ನಡೆಯುತ್ತಿದೆ ಎಲ್ಲಾ ವಿಚಾರಗಳು ಹೊರಬರುತ್ತದೆ. ರನ್ಯಾಗೆ ಲ್ಯಾಂಡ್ ಕೊಟ್ಟಿರುವ ಆರೋಪ ಕೇಳಿ ಬಂದಿದೆ ಎಂದು ತಿಳಿಸಿದರು. ಈ ಪ್ರಕ್ರಿಯೆ ಬೇಗ ಆಗಿದೆ. ಕೆಐಡಿಬಿ ನಲ್ಲಿ ತಪ್ಪಿದ್ದರೆ ಹೇಳಿ. ಲೀಗಲ್ ಆಗಿ ಅಪ್ಲೈ ಮಾಡಿದರೆ ಅದು ಪ್ರೊಸೆಸ್ ಆಗಿರುತ್ತದೆ. ಇಲ್ಲವಾದರೆ ಅಕ್ರಮದ ಕುರಿತು ತನಿಖೆ ಆಗಲಿ. ಸಚಿವರಿಗೆ ರನ್ಯಾ ಕರೆ ಮಾಡಿದ್ದಾಳೆ ಅನ್ನುವುದು ಗೊತ್ತಾಗಿದೆ. ಅವಳನ್ನು…
2 ನಿಮಿಷಗಳಲ್ಲಿ ಒಳ್ಳೆಯದನ್ನು ಮಾಡಲು ಏಂಜಲ್ ಸಂಖ್ಯೆ ನಿಮ್ಮ ಜೀವನದ ಸಣ್ಣ ಅಗತ್ಯಗಳನ್ನು ಪೂರೈಸುವುದರಿಂದ ಹಿಡಿದು ದೊಡ್ಡ ಅಗತ್ಯಗಳನ್ನು ಪೂರೈಸುವವರೆಗೆ, ನೀವು ಈ ಹಾಸಿಗೆಯನ್ನು ಪ್ರಯತ್ನಿಸಬಹುದು. ನೀವು ಈ ಪರಿಹಾರವನ್ನು ನಿಮ್ಮ ಜೀವನದ ಒಳಿತಿಗಾಗಿ ಮಾತ್ರ ಬಳಸಬೇಕು. ಇತರರಿಗೆ ಹಾನಿ ಮಾಡುವ ಉದ್ದೇಶದಿಂದ ಅಥವಾ ಅದು ಇತರರಿಗೆ ಹಾನಿ ಮಾಡುತ್ತದೆ ಎಂದು ಅವರು ಭಾವಿಸಿದರೆ ಯಾರೂ ಈ ಪರಿಹಾರವನ್ನು ಪ್ರಯತ್ನಿಸಬಾರದು. ಈ ಪರಿಹಾರವನ್ನು ಒಳ್ಳೆಯದಕ್ಕಾಗಿ ಮಾತ್ರ ಬಳಸಬೇಕು. ನಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಗಳು ಸ್ವಲ್ಪ ಸ್ವಲ್ಪವಾಗಿ ಬರುತ್ತವೆ. ಸಣ್ಣಪುಟ್ಟ ತಪ್ಪುಗಳು ಸಂಭವಿಸುತ್ತವೆ. ಈ ಪರಿಹಾರವು ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು, ತಪ್ಪುಗಳನ್ನು ಸರಿಪಡಿಸಲು ಮತ್ತು ಸಮಸ್ಯೆಗಳನ್ನು ನಿವಾರಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಉದಾಹರಣೆಗೆ, ಅವರು ತಮ್ಮ ಬೈಸಿಕಲ್ ಕೀಲಿಗಳನ್ನು ಆತುರದಲ್ಲಿ ಕಳೆದುಕೊಳ್ಳುತ್ತಾರೆ. ಅವರು ಆತುರದಲ್ಲಿ ತಮ್ಮ ಎಟಿಎಂ ಕಾರ್ಡ್ ಅನ್ನು ಕಳೆದುಕೊಳ್ಳುತ್ತಾರೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು…
ಬೆಂಗಳೂರು : ರಾಜ್ಯದ ಎಲ್ಲಾ ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ ಇನ್ನು ಮುಂದೆ ಸೋಪು ಹಾಗೂ ಶಾಂಪೂ ಮಾರಾಟ ಮಾಡದಂತೆ ನಿಷೇಧಿಸಿ ಅರಣ್ಯ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಹಾಗಾಗಿ ಇನ್ಮುಂದೆ ಪುಣ್ಯಕ್ಷೇತ್ರಗಳ ನದಿ ದಡದಲ್ಲಿ ಭಕ್ತರು ಯಾವುದೇ ರೀತಿಯಾಗಿ ಶಾಂಪು ಸೋಪು ಹಾಗೂ ಇತರೆ ಪರಿಸರ ಮಾಲಿನ್ಯಕಾರಕ ವಸ್ತುಗಳನ್ನು ಬಳಸುವಂತಿಲ್ಲ ಇವುಗಳ ಮಾರಾಟ ನಿಷೇಧ ಮಾಡಿ ಇದೀಗ ಅರಣ್ಯ ಮತ್ತು ಪರಿಸರ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತು ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ಅವರು ಆದೇಶ ಹೊರಡಿಸಿದ್ದು, ನದಿ ದಡಗಳಲ್ಲಿ ಸೋಪು, ಶಾಂಪು ಮಾರಾಟ ಮಾಡದಂತೆ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಅಲ್ಲಸದೆ ಭಕ್ತರಿಗೆ ಮಾಲಿನ್ಯಕಾರಕ ವಸ್ತುಗಳನ್ನು ನದಿಗಳಲ್ಲಿ ವಿಸರ್ಜನೆ ಮಾಡದಂತೆ ಸೂಚನೆ ನೀಡಲಾಗಿದೆ. ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಅರಣ್ಯ ಮತ್ತು ಪರಿಸರ ಇಲಾಖೆ, ಈ ಕುರಿತು ಆದೇಶ ಹೊರಡಿಸಿದ್ದು, ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ…
ಬೆಳಗಾವಿ : ಬೆಳಗಾವಿಯಲ್ಲಿ ಇಂದು ಭೀಕರವಾದಂತಹ ಅಪಘಾತ ಸಂಭವಿಸಿದ್ದು ಸಕ್ಕರೆ ಸಾಗಿಸುತ್ತಿದ್ದ ಲಾರಿ ಒಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದರೆ ಇಬ್ಬರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗುತ್ತಿ ಎಂಬಲ್ಲಿ ನಡೆದಿದೆ. ಹೌದು ಸಕ್ಕರೆ ಸಾಗಿಸುತ್ತಿದ್ದ ಲಾರಿ ಪಾಲ್ಟಿಯಾಗಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಬಳಿ ಈ ಒಂದು ಘಟನೆ ನಡೆದಿದೆ. ಮೃತರು ಬಾಲಪ್ಪ ಮುದಕವಿ (28) ಮತ್ತು ಯಲ್ಲವ್ವ ಚೆನ್ನವವರ್ (35) ಎಂದು ತಿಳಿದುಬಂದಿದೆ. ಇನ್ನು ಲಾರಿ ಚಾಲಕ ಸೇರಿ ಇಬ್ಬರಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳಕ್ಕೆ ಇಡೀ ದೇಶದ ಹಲವಾರು ಭಾಗಗಳಿಂದ ಭಕ್ತರು ಭೇಟಿ ನೀಡಿದ್ದರು. ಇದೀಗ ಕುಂಭಮೇಳದ ಹೆಸರಿನಲ್ಲಿ ಅನೇಕ ಅಮಾಯಕ ಜನರಿಗೆ ಸುಮಾರು 70 ಲಕ್ಷ ರೂಪಾಯಿ ಪಡೆದು ವಂಚನೆ ಎಸೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಆರೋಪಿ ರಾಘವೇಂದ್ರ ರಾವ್ ನನ್ನು ಇದೀಗ ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಆರೋಪಿ ರಾಘವೇಂದ್ರ ರಾವ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಜನರಿಗೆ ಆರೋಪಿ ರಾಘವೇಂದ್ರರಾವ್ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಫೇಸ್ಬುಕ್ ನಲ್ಲಿ ಜಾಹಿರಾತು ಮೂಲಕ ಅಮಾಯಕರನ್ನು ಸಂಪರ್ಕ ಮಾಡುತ್ತಿದ್ದ. ಪಾಂಚಜನ್ಯ ಟೂಲ್ಸ್ ಅಂಡ್ ಟ್ರಾವೆಲ್ಸ್ ಹೆಸರಿನಲ್ಲಿ ಜಾಹೀರಾತು ಪ್ರಕಟಿಸಿ ಅಯೋಧ್ಯೇ, ಕಾಶಿ ಮತ್ತು ಪ್ರಯಾಗ್ ರಾಜ್ ಪ್ರವಾಸದ ಪ್ಯಾಕೇಜ್ ಬಗ್ಗೆ ತಿಳಿಸುತ್ತಿದ್ದ. ಏಳು ದಿನಗಳ ಪ್ಯಾಕೇಜ್ ಗೆ ತಲಾ 49 ಸಾವಿರ ರೂಪಾಯಿಯನ್ನು ರಾಘವೇಂದ್ರ ರಾವ್ ಪಡೆಯುತ್ತಿದ್ದ ಎನ್ನಲಾಗಿದೆ.ಆದರೆ ಪ್ರವಾಸದ ಹೆಸರಿನಲ್ಲಿ ಸುಮಾರು 70ಲಕ್ಷ…














