Author: kannadanewsnow05

ಬೆಂಗಳೂರು : ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯನನ್ನು ಸಿಐಡಿ ಹಾಗೂ ಎಸ್ಐಟಿ ಬಂಧಿಸಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಲಕ್ಷ್ಮಿಕಾಂತಯ್ಯ ಬಿಟ್ ಕಾಯಿನ್ ಪ್ರಕರಣದ ತನಿಖಾಧಿಕಾರಿ ಆಗಿದ್ದರು.ಕೆಲ ಹೊತ್ತಿನಲ್ಲಿ ಇನ್ಸ್ಪೆಕ್ಟರ್ ನನ್ನು ಬೆಂಗಳೂರಿನ ಒಂದನೇ ACMM ಕೋರ್ಟಿಗೆ ಎಸ್ಐಟಿ ಆರೋಪಿಯನ್ನು ಹಾಜರುಪಡಿಸಲಿದೆ. ಇನ್ನೂ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವುದಕ್ಕೆ ತೆರಳಿದಾಗ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರ್, ಪೊಲೀಸರ ಕಾರಿಗೆ ಗುದ್ದಿ ಎಸ್ಕೇಪ್ ಆದ ಘಟನೆ ನಿನ್ನೆ ಕಾಫಿ ಬೋರ್ಡ್ ಸಿಗ್ನಲ್ ಬಳಿ ನಡೆದಿದೆ. ಎಸ್ಐಟಿ ತಂಡದ ಇನ್ಸ್​ಪೆಕ್ಟರ್ ಅನಿಲ್ ಮತ್ತು ಅವರ ತಂಡ ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇನ್ನು ಶ್ರೀಧರ್ ಪೂಜಾರ್‌ ವಿರುದ್ಧ 307 ಕೊಲೆ ಯತ್ನ, 353 ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ.

Read More

ಶಿವಮೊಗ್ಗ : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿದ್ದು,ಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳನ್ನು ರಕ್ಷಿಸುವ ‘ಆರನೇ ಗ್ಯಾರಂಟಿ’ ಘೋಷಿಸಿದೆ ಎಂದು ಕಿಡಿ ಕಾರಿದ್ದಾರೆ. https://kannadanewsnow.com/kannada/bjp-workers-write-hundreds-of-letters-to-kpccs-office-in-bengaluru-over-alleged-pro-pakistan-slogans/ ಶಿವಮೊಗ್ಗದ ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ನಿನ್ನೆ ಬಂಧಿಸಬೇಕಿತ್ತು. ಘೋಷಣೆ ಕೂಗಿದ ಜಾಗದಲ್ಲೇ ಒದ್ದು ಆತನನ್ನು ಬಂಧಿಸಬೇಕಿತ್ತು ಎಂದು ಬಿವೈ ವಿಜಯೇಂದ್ರ ಕಿಡಿ ಕಾರಿದ್ದಾರೆ. https://kannadanewsnow.com/kannada/forest-science-graduates-protest-vijaybhaskar-committees-recommendations-will-not-be-implemented-assures-minister-ishwar-khandre/ ದೇಶದ್ರೋಹಿಗಳನ್ನು ಬಂಧಿಸಲು ಯೋಚನೆ ಮಾಡಬೇಕಾ? ದೇಶದ್ರೋಹಿಗಳನ್ನು ರಕ್ಷಿಸುವ ಆರನೇ ಗ್ಯಾರಂಟಿ ಘೋಷಿಸಿದ್ದಾರೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದೇಶದ್ರೋಹಿಗಳಿಗೆ ಬೆಂಬಲ ನೀಡಲಾಗುತ್ತಿದೆ ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು. https://kannadanewsnow.com/kannada/use-kannada-compulsorily-on-signboards-otherwise-licence-will-be-cancelled/ ಬಿಎಸ್ ಯಡಿಯೂರಪ್ಪ ಆಕ್ರೋಶ ಇನ್ನೂ ಇದ್ದೆ ವಿಷಯವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಆರೋಪದ ಹಿನ್ನೆಲೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಅಕ್ಷಮ್ಯ ಅಪರಾಧವಾಗಿದೆ. ಪ್ರಕರಣದ…

Read More

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಆರೋಪದ ಹಿನ್ನೆಲೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಅಕ್ಷಮ್ಯ ಅಪರಾಧವಾಗಿದೆ. ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಸೂಕ್ತವಾದಂತಹ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಚಿಕ್ಕಮಂಗಳ ಊರಿನಿಂದ ಬಿಜೆಪಿ ಕಾರ್ಯಕರ್ತರು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಪತ್ರ ಬರೆದು ರವಾನಿಸಿದ್ದಾರೆ. https://kannadanewsnow.com/kannada/breaking-hindus-file-fresh-petition-for-ban-on-namaz-on-gyanvapi-basement-roof/ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ಪಾಕ್ ಪರ ಘೋಷಣೆ ಕೂಗಿದವರನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ಬಿಜೆಪಿ ಕಾರ್ಯಕರ್ತರಿಂದ ಪತ್ರ ಬರೆಯಲಾಗಿದೆ. ಬೆಂಗಳೂರು ಕೆಪಿಸಿಸಿ ಕಚೇರಿಗೆ ನೂರಾರು ಪತ್ರಗಳನ್ನು ಬರೆದು ರವಾನಿಸಲಾಗಿದೆ ಪಾಕಿಸ್ತಾನಕ್ಕೆ ತೆರಳುವ ವಿಮಾನದ ಮಾಹಿತಿಯೊಂದಿಗೆ ಬಿಜೆಪಿ ಕಾರ್ಯಕರ್ತರು ಕೆಪಿಸಿಸಿ ಕಚೇರಿಗೆ ಪತ್ರ ಬರೆದು ರವಾನಿಸಿದ್ದಾರೆ. https://kannadanewsnow.com/kannada/former-ips-officer-actor-k-sivarams-health-condition-critical-undergoing-treatment-in-icu/

Read More

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪ ಆರಂಭವದಂತೆ ಬಿಜೆಪಿ ಪ್ರತಿಭಟನೆ ನಡೆಸಿತು. https://kannadanewsnow.com/kannada/santhan-sri-lankan-national-convicted-in-rajiv-gandhi-assassination-case-dies-in-chennai-hospital/ ಇದೆ ವೇಳೆ ಸದನದ ಬಾವಿಗಳಿಗೆ ವಿಪಕ್ಷ ಬಿಜೆಪಿ ಸದಸ್ಯರಿಂದ ಪ್ರತಿಭಟನೆ ನಡೆಸಲಾಯಿತು. ಸ್ಪೀಕರ್ ಪೀಠದ ಎದುರು ಬಿಜೆಪಿ ಸದಸ್ಯರು ಕಾಗದ ಹರಿದು ಎಸೆದಿರುವ ಘಟನೆ ನಡೆಯಿತು. ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 9 ಗಂಟೆಗೆ ಸ್ಪೀಕರ್ ಯುಟಿ ಖಾದರ್ ಮುಂದುಡಿದರು. ವಿಧಾನಸಭೆ ಕಲಾಪ ಮತ್ತೊಂದು ದಿನಕ್ಕೆ ವಿಸ್ತರಣೆ ಆಯಿತು. ನಿಗದಿಯಂತೆ ಇಂದು ವಿಧಾನಸಭೆ ಕಳಪ ಮುಕ್ತಾಯವಾಗಬೇಕಿತ್ತು. https://kannadanewsnow.com/kannada/good-news-for-school-and-college-students-in-the-state-sanitary-pads-distributed-free-of-cost/ ಆದರೆ ಇಂದು ವಿಪಕ್ಷಗಳು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ನಿಗದಿಯಂತೆ ಇಂದು ಕಲಾಪ ಮುಕ್ತಾಯವಾಗಬೇಕಿತ್ತು ಆದರೆ ಇದೆ ವೇಳೆ ಬಿಜೆಪಿ ಸದಸ್ಯರು ಕಾಗದ ಪತ್ರಗಳನ್ನು ಹರಿದು ಹಸಿದಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ನಾಳೆ ಬೆಳಗ್ಗೆ 9 ಗಂಟೆಗೆ ವಿಧಾನಸಭಾ ಕಲಾಪವನ್ನು ಮುಂದುಡಿದರು. https://kannadanewsnow.com/kannada/sukhvinder-singh-sukhu-says-havent-resigned/

Read More

ಉಡುಪಿ : ಭಾರತವನ್ನು ವಿಭಜನೆ ಮಾಡುವ ಮಾತನ್ನು ಕಾಂಗ್ರೆಸ್ ಆಡುತ್ತಿದೆ. ಯಾವುದೇ ಸರ್ಕಾರಕ್ಕೆ ಅಧಿಕಾರ ಶಾಶ್ವತವಲ್ಲ. ದೇಶದಲ್ಲಿ ಗೊಂದಲ ನಿರ್ಮಾಣ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಪ್ರಕರಣವನ್ನು ಎನ್​ಐಎ ತನಿಖೆ ಮಾಡಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಗ್ರಹಿಸಿದ್ದಾರೆ. https://kannadanewsnow.com/kannada/lung-damage-risk-for-indians-after-covid-shocking-report/ ಉಡುಪಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮಾನಸಿಕತೆ ಇದ್ದವರನ್ನು ಪೊಲೀಸರು ವಿಧಾನಸೌಧ ಒಳಗೆ ಹೇಗೆ ಬಿಟ್ಟರು?. ರಾಜ್ಯಸಭಾ ಸದಸ್ಯ ಸಯ್ಯದ್ ನಾಸೀರ್ ಹುಸೇನ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. https://kannadanewsnow.com/kannada/if-you-have-constipation-stop-consuming-these-foods-immediately-2/ ಸಯ್ಯದ್ ನಾಸೀರ್ ಹುಸೇನ್ ಬೆಂಬಲಿಗರ ಸಂಪರ್ಕ ಯಾರ ಜೊತೆ ಇದೆ? ಅಲ್ಲಿ ಬಂದಿರುವ ಯುವಕರ ಸಂಪರ್ಕ ಯಾರ ಜೊತೆ ಇದೆ? ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಾನು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೆ ಪತ್ರ ಬರೆಯುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. https://kannadanewsnow.com/kannada/breaking-6-year-old-boy-among-3-killed-in-road-accident-in-haveri-2/

Read More

ಹಾವೇರಿ : ಲಾರಿಯ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಘಟನೆಯಲ್ಲಿ ಓರ್ವ ಬಾಲಕಿಗೆ ಗಂಭೀರವಾದಂತ ಗಾಯಗಳಾಗಿರುವ ಘಟನೆ ಹಾವೇರಿ ತಾಲೂಕಿನ ಮೊಟೇಬೆನ್ನೂರು ಬಳಿಯಿರುವ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಮಂಗಳವಾರ ಸಂಜೆ ನಡೆದಿದೆ. https://kannadanewsnow.com/kannada/if-you-see-god-in-a-dream-this-is-what-instructions-you-may-have-come-to-give-2/ ಈ ಒಂದು ಭೀಕರ ಅಪಘಾತದಲ್ಲಿ ಆಸಿಫ್‌ ಉಲ್ಲಾ (34), ಆತನ ಪತ್ನಿ ಆಫ್ರೀನಾಬಾನು (27), ಪುತ್ರ ಅರ್ಫಾನ್‌ (6) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ರಿ ರುಕ್ಸಾರ (3) ತೀವ್ರ ಗಾಯಗೊಂಡಿದ್ದು, ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. https://kannadanewsnow.com/kannada/no-son-has-ever-been-born-to-scare-me-st-somashekar-on-r-ashok-hdk/ ಸಂಬಂಧಿಕರ ಮನೆಗೆಂದು ಶಿಡೇನೂರ ಗ್ರಾಮಕ್ಕೆ ಬಂದಿದ್ದ ಕುಟುಂಬ ಮರಳಿ ಹಾವೇರಿಗೆ ಹೋಗುವಾಗ ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಸಂಭವಿಸಿದೆ. ಚಾಲಕ ಧೀರೇಂದ್ರ ಯಾದವ್‌ನನ್ನು ಬ್ಯಾಡಗಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಡಗಿ ಫೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/dysp-attacked-during-protest-by-bjp-workers-in-tumkur-over-alleged-pro-pakistan-slogans/

Read More

ಬೆಂಗಳೂರು : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಮೂಲಕ ಕಾಂಗ್ರೆಸ್ಗೆ ಮತ ಹಾಕಿರುವುದಕ್ಕೆ ಶಾಸಕರಿಗೆ ಸೋಮಶಕರ್ಮಣಿಯಾದರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೇ ನಡೆಸಿದ್ದಾರೆ. ನಂತರ ಎಸ್ ಟಿ ಸೋಮಶೇಖರ್ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್ ಅಶೋಕ ವಿರುದ್ಧ ಗುಡುಗಿದ್ದಾರೆ. https://kannadanewsnow.com/kannada/dysp-attacked-during-protest-by-bjp-workers-in-tumkur-over-alleged-pro-pakistan-slogans/ ನಾನೇನು ಪಾಕಿಸ್ತಾನದಲ್ಲಿ‌ ಇದ್ದೀನಾ, ಇವರು ಹೆದರಿಸೋದಕ್ಕೆ. ಯಾವ ಮಗನೂ ಹುಟ್ಟಿಲ್ಲ ನನ್ನ ಹೆದರಿಸೋದಕ್ಕೆ. ಇವರಂತೆ ಇಲ್ಲೀಗಲ್ ಇಲ್ಲ ನಾನು, ಸ್ಟ್ರೈಟ್ ಇದ್ದೀನಿ. ಏನ್ ಮಾಡ್ತಾರೆ ನೋಡೋಣ ತಾಕತ್ತು ಇದ್ರೆ ನನ್ನನ್ನು ಹೆದರಿಸಲಿ. ನನ್ನ ವಿರುದ್ದ ಪ್ರತಿಭಟನೆ ಮಾಡ್ತಾರಲ್ಲ ನನ್ನ ಎದುರಿಗೆ ಮಾಡ್ಲೀ ಒಂದೊಂದೆ ಒಂದೊಂದೆ ಹೊರ ತೆಗೆಯುತ್ತೇನೇ ಎಂದು ಗುಡುಗಿದ್ದಾರೆ. https://kannadanewsnow.com/kannada/the-second-schedule-of-shabaash-has-been-wrapped-up-to-hit-the-silver-screen-soon/ ಹೌದು ಅಡ್ಡ ಮತ ಮಾಡಿದ್ದೀನಿ ಏನ್ ಇವಾಗ? ಯಾವುದಕ್ಕೂ‌ ಹೆದುರುವ ಮನುಷ್ಯ ನಾನಲ್ಲ. ಇದೇ ಹಿಮಾಚಲ ಪ್ರದೇಶದಲ್ಲಿ ಎಷ್ಟು ಜನ ಬಿಜೆಪಿಗೆ ವೊಟ್ ಹಾಕಿಲ್ಲ. ಕೋರ್ಟ್ ಆದೇಶ, ಆತ್ಮಸಾಕ್ಷಿ ಮತ ಯಾರಿಗೆ ಹಾಕ ಬೇಕು ಅವರಿಗೆ ಹಾಕಿದ್ದೇನೆ. ಇದು ಅಪವಿತ್ರ ಮೈತ್ರಿ, ಎಂಪಿ…

Read More

ತುಮಕೂರು : ನಿನ್ನೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಜಯಗಳಿಸಿದ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ ಘೋಷಣೆ ಹಾಕಿದ್ದಾರೆ. ಇದನ್ನು ವಿರೋಧಿಸಿ ಇಂದು ತುಮಕೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ತುಮಕೂರು ಡಿ ವೈ ಎಸ್ ಪಿ ಮೇಲೆ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. https://kannadanewsnow.com/kannada/national-indian-military-college-dehradun-invites-applications-for-entrance-test-for-class-8-admissions/ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆಯ ವೇಳೆ ಡಿವೈಎಸ್ಪಿ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಗುತ್ತಿದೆ.ತುಮಕೂರು ನಗರ ಡಿವೈಎಸ್ಪಿ ಚಂದ್ರಶೇಖರ್ ಮೇಲೆ ಹಳೆ ನಡೆಸಿದಲ್ಲದೆ ನೂಕಾಟ ತಳ್ಳಟ ನಡೆಸಿದ್ದು, ಇದೆ ವೇಳೆ ಡಿವೈಎಸ್ಪಿ ಚಂದ್ರಶೇಖರ್ ಮೂಗಿಗೆ ಗಾಯವಾಗಿದೆ. https://kannadanewsnow.com/kannada/himachal-pradesh-speaker-suspends-15-bjp-mlas/ ಮುಗಿಗೆ ರಕ್ತ ಬರುವಂತೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ತೀವ್ರವಾದ ದೇವರೇ ಪ್ರತಿಭಟನೆಯನ್ನು ಹತ್ತಿಕ್ಕಲು ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಮುಂದಾದಾಗ ಈ ವೇಳೆ ಕಾರ್ಯಕರ್ತರು ಡಿವೈಎಸ್ಪಿ ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ. https://kannadanewsnow.com/kannada/%e0%b2%aa%e0%b2%be%e0%b2%95%e0%b2%bf%e0%b2%b8%e0%b3%8d%e0%b2%a4%e0%b2%be%e0%b2%a8-%e0%b2%9c%e0%b2%bf%e0%b2%82%e0%b2%a6%e0%b2%be%e0%b2%ac%e0%b2%be%e0%b2%a6%e0%b3%8d-%e0%b2%98%e0%b3%8b%e0%b2%b7%e0%b2%a3/

Read More

ಬೆಂಗಳೂರು : ವಿಧಾನಸೌಧದಲ್ಲಿ ನಿನ್ನೆ ಪಾಕಿಸ್ತಾನ ಪ್ರಜೆಯ ಘೋಷಿಸಿದ ಘಟನೆಗೆ ಸಂಬಂಧಿಸಿದಂತೆ ಈ ವಿಷಯ ಪರಿಷತ್ತಿನಲ್ಲೂ ದೊಡ್ಡ ಸದ್ದು ಮಾಡುತ್ತಿದ್ದು ಈಗ ಸಭಾಪತಿ ಕುರ್ಚೆ ಎದುರುಗಡೆನೇ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಘಟನೆ ನಡೆದಿದೆ. https://kannadanewsnow.com/kannada/breaking-nita-ambani-likely-to-chair-reliance-disney-merged-media-business-report/ ಈ ಘಟನೆ ಕುರಿತಂತೆ ಕಾಂಗ್ರೆಸ್ ಸದಸ್ಯರಾದ ಬಿಹಾರಿ ಪ್ರಸಾದ್ ಮಾತನಾಡುತ್ತಿದ್ದ ವೇಳೆ, ರಾಜ ಕಾಂಗ್ರೆಸ್ ಸರ್ಕಾರ ದೇಶದ್ರೋಹ ಸರ್ಕಾರ ಎಂದು ರವಿಕುಮಾರ್ ಅವರು ಗಂಭೀರವಾದ ಆರೋಪ ಮಾಡಿದ್ದು ಈಗಿರುವ ಸರ್ಕಾರ ದೇಶದ್ರೋಹಿ ಸರಕಾರ ಎಂದಿದ್ದಾರೆ. ಇವರಿಗೆ ಏನಾದರೂ ತಾಕತ್ತು ಇದ್ದರೆ ಪ್ರಧಾನಿ ಮೋದಿ ಬಳಿಗೆ ಹೋಗಿ ಸರ್ಕಾರದ ಮೇಲೆ ದೇಶದ್ರೋಹದ ಕೇಸ್ ಬುಕ್ ಮಾಡಲಿಕ್ಕೆ ಹೇಳಿ, ಬಾಯಿಗೆ ಬಂದಂತೆ ಹೇಳಕಾಗುತ್ತ ಇವರಿಂದ ನಾವು ಸರ್ಟಿಫಿಕೇಟ್ ತಗೋ ಬೇಕೇನೋ? ಎಂದು ಕೇಳಿದ್ದಾರೆ. https://kannadanewsnow.com/kannada/davanagere-father-sexually-assaulted-women-coming-to-church-alleges-own-daughter/ ಈ ವೇಳೆ ಎನ್ ರವಿ ಕುಮಾರ್ ಅವರು ಮಧ್ಯಪ್ರವೇಶಿಸಿದಾಗ, ಅಬ್ದುಲ್ ಜಬ್ಬಾರ್ ಅವರು ಅವನ ಬಾಯಿಯನ್ನು ಮುಚ್ಚಿಸಿ ಎಂದು ಏಕವಚನದಲ್ಲಿ ಹೇಳಿದಾಗ ಇದರಿಂದ ಆಕ್ರೋಶಗೊಂಡ…

Read More

ದಾವಣಗೆರೆ : ನನ್ನ ತಂದೆ ಚರ್ಚ್​ಗೆ ಬರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಹಾಗೂ ನನಗಿಂತ ಚಿಕ್ಕ ಮಯಸ್ಸಿನ ಯುವತಿ ಜೊತೆ ಮದುವೆಯಾಗಲು ಹೊರಟಿದ್ದಾರೆ ಎಂದು ಮಗಳೋಬ್ಬಳು ಚರ್ಚ್ ಪಾದ್ರಿಯಾಗಿರುವ ತಂದೆಯ ವಿರುದ್ಧವೆ ಗಂಭೀರ ಆರೋಪ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. https://kannadanewsnow.com/kannada/breaking-manipur-police-officer-kidnapped-by-200-gunmen/ ಹೌದು ದಾವಣಗೆರೆ ಜಯನಗರ ಚರ್ಚ್​ನ ಪಾದ್ರಿ ಪಿ ರಾಜಶೇಖರ್ (58) ವಿರುದ್ಧ ಇದೀಗ ಇಂತಹ ಆರೋಪ ಕೇಳಿ ಬಂದಿದೆ. ಅಲ್ಲದೆ ಪಾದ್ರಿ ಪುತ್ರಿ ಡೈಸಿ ಪ್ರಿಯಾ ತನ್ನ ತಂದೆ ವಿರುದ್ಧವೇ ಇಂತಹ ಅರೋಪ ಮಾಡಿದ್ದಾರೆ. ನನ್ನ ತಂದೆ ಈಗ ನನಗಿಂತ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾರೆ. ಚರ್ಚ್​ಗೆ ಬರುವ ಆರೇಳು ಜನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಡೈಸಿ ಪ್ರಿಯಾ ಆರೋಪ ಮಾಡಿದ್ದಾರೆ. https://kannadanewsnow.com/kannada/health-tips-have-these-necklaces-regularly-to-relieve-stress/ 6 ಜನ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಸ್ವತಃ ಅವರ ಮಗಳೇ ಹೇಳಿಕೊಂಡಿದ್ದಾಳೆ. ಪಾದ್ರಿ ರಾಜಶೇಖರ್ ವರ್ತನೆ ಬಗ್ಗೆ ನನ್ನ ಬಳಿ ಮಹಿಳೆಯರು ಸಂಕಟ ತೋಡಿಕೊಂಡಿದ್ದರು.…

Read More