Author: kannadanewsnow05

ಬೆಂಗಳೂರು : 13 ವರ್ಷದ ಚಿಕ್ಕ ವಯಸ್ಸಿನ ಬಾಲಕ ಕ್ಯಾನ್ಸರ್ ಎಂಬ ರೋಗದಿಂದ ಬಳಲುತ್ತಿದ್ದಾನೆ. ಆತನಿಗೆ ತಾನು ಭವಿಷ್ಯದಲ್ಲಿ IPS ಅಧಿಕಾರಿಯಾಗಿ ಸೇವೆ ಮಾಡಬೇಕೆಂಬುದು ಮಹತ್ತರ ಕನಸು ಹೊಂದಿದ್ದ. ಇದೀಗ ಕ್ಯಾನ್ಸರ್‌ನಿಂದ ಬಳಲುತ್ತಿರುವ 13 ವರ್ಷದ ಬಾಲಕನ, ಐಪಿಎಸ್ ಅಧಿಕಾರಿಯಾಗುವ ಕನಸನ್ನು ಈಡೇರಿಸುವ ಮೂಲಕ ಬೆಂಗಳೂರು ಪೊಲೀಸರು ಮಾನವೀಯತೆ ಮೆರೆದಿದ್ದಾರೆ. https://kannadanewsnow.com/kannada/breaking-illegal-soil-transported-in-ramanagara-attempt-to-run-over-tahsildar/ ಮೋಸಿನ್ ರಾಜ್‌ ಎಂಬ 13 ವರ್ಷದ ಬಾಲಕ ಐಪಿಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದ. ಆದರೆ, ಚಿಕ್ಕ ವಯಸ್ಸಿನಲ್ಲೇ ಮಾರಕ ಕ್ಯಾನ್ಸರ್‌ಗೆ ತುತ್ತಾಗಿದ್ದರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬಾಲಕನ ಆಸೆ ಬಗ್ಗೆ ತಿಳಿದುಕೊಂಡ ಬೆಂಗಳೂರು ಪೊಲೀಸ್ ಪರಿಹಾರ ಸಂಸ್ಥೆ ಹಾಗೂ ಕಿದ್ವಾಯಿ ಸಂಸ್ಥೆ, ಪೊಲೀಸರೊಂದಿಗೆ ಮಾತನಾಡಿ ಬಾಲಕನ ಆಸೆ ಈಡೇರಲು ಸಹಕರಿಸಿವೆ. https://kannadanewsnow.com/kannada/central-government-introduced-indias-first-helicopter-emergency-medical-service/ ಬಾಲಕನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ದಕ್ಷಿಣ ವಿಭಾಗದ ಪ್ರಭಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರು ಒಂದು ದಿನದ ಮಟ್ಟಿಗೆ ಬಾಲಕನಿಗೆ ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟು, ಮಾನವೀಯತೆ ಮೆರೆದಿದ್ದಾರೆ.…

Read More

ರಾಮನಗರ : ಕೆರೆಯಿಂದ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಮಾಹಿತಿ ತಿಳಿದು ದಾಳಿ ನಡೆಸಿದ ತಹಸೀಲ್ದಾ‌ರ್ ಅವರ ಮೇಲೆಯೇ ಚಾಲಕನೊಬ್ಬ ಲಾರಿ ಹರಿಸಲು ಯತ್ನಿಸಿದ ಪ್ರಸಂಗ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಭೀಮಸಂದ್ರ ಬಳಿ ನಡೆದಿದ್ದು, ಇದೀಗ ಮಾಲೀಕನನ್ನು ವಶಕ್ಕೆ ಪಡೆಯಲಾಗಿದೆ. https://kannadanewsnow.com/kannada/out-of-target-of-111-lakh-tonnes-92-lakh-tonnes-of-foodgrains-have-been-produced-in-the-state-cheluvarayaswamy/ ಹಾರೋಹಳ್ಳಿಯ ಭೀಮಸಂದ್ರ ಬಳಿ ಗುರುವಾರ ಈ ಘಟನೆ ನಡೆದಿದ್ದು, ಶನಿವಾರ ಪ್ರಕರಣ ದಾಖಲಾಗಿದೆ. ತಹಸೀಲ್ದಾ‌ರ್ ವಿಜಿಯಣ್ಣ ಸ್ವಲ್ಪದರಲ್ಲಿಯೇ ಬಚಾವಾಗಿದ್ದಾರೆ. ಸರಕಾರಿ ಕೆಲಸಕ್ಕೆ ತೆರಳುತ್ತಿದ್ದ ಸಮಯದಲ್ಲಿ ಭೀಮಸಂದ್ರ ಬಳಿಯ ಗೋಮಾಳದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಸ್ಥಳಕ್ಕೆ ತಹಸೀಲ್ದಾ‌ರ್ ತೆರಳಿದ್ದಾರೆ. https://kannadanewsnow.com/kannada/are-you-a-second-puc-pass-apply-for-2500-vacancies-in-bmtc-without-fail/ ಈ ವೇಳೆ ಸ್ಥಳದಿಂದ ಹೊರಟಿದ್ದ ಲಾರಿ ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಸೂಚನೆ ಧಿಕ್ಕರಿಸಿ ತಹಸೀಲ್ದಾ‌ರ್ ಇರುವ ಕಡೆಯೇ ನುಗ್ಗಿಸಲು ಯತ್ನಿಸಿದ್ದಾನೆ. ಘಟನೆ ಸಂಬಂಧ ಹಾರೋಹಳ್ಳಿ ಠಾಣೆಯಲ್ಲಿ ತಹಸೀಲ್ದಾ‌ರ್ ವಿಜಿಯಣ್ಣ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. https://kannadanewsnow.com/kannada/%e0%b2%95%e0%b3%8b%e0%b2%b5%e0%b2%bf%e0%b2%a1%e0%b3%8d-%e0%b2%b2%e0%b2%b8%e0%b2%bf%e0%b2%95%e0%b3%86%e0%b2%af%e0%b2%bf%e0%b2%82%e0%b2%a6-%e0%b2%b9%e0%b3%83%e0%b2%a6%e0%b2%af%e0%b2%be%e0%b2%98/

Read More

ಬೆಂಗಳೂರು : ಕೃಷಿ ಇಲಾಖೆಯ ಸಮರ್ಥ ಕಾರ್ಯ ನಿರ್ವಹಣೆಯಿಂದ ರಾಜ್ಯದ ರೈತರ ಬರಗಾಲದ ಬವಣೆ ತಗ್ಗಿದೆ.ಮುಂಗಾರು ಹಂಗಾಮಿನಲ್ಲಿ ಗೊತ್ತುಪಡಿಸಲಾಗಿದ್ದ111 ಲಕ್ಷಟನ್ ಆಹಾರ ಧಾನ್ಯಗಳ ಉತ್ಪಾದನೆ ಗುರಿ ಪೈಕಿ 92 ಲಕ್ಷಟನ್ ಉತ್ಪಾದನೆಯಾಗಿದೆ. ಶೇಂಗಾ ಹೊರತುಪಡಿಸಿ ಬಹಳಷ್ಟು ಬೆಳೆಗಳ ಉತ್ಪಾದನೆಯಲ್ಲಿ ದೊಡ್ಡ ಕೊರತೆ ಆಗಿಲ್ಲ, ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ತಿಳಿಸಿದರು. https://kannadanewsnow.com/kannada/%e0%b2%95%e0%b3%8b%e0%b2%b5%e0%b2%bf%e0%b2%a1%e0%b3%8d-%e0%b2%b2%e0%b2%b8%e0%b2%bf%e0%b2%95%e0%b3%86%e0%b2%af%e0%b2%bf%e0%b2%82%e0%b2%a6-%e0%b2%b9%e0%b3%83%e0%b2%a6%e0%b2%af%e0%b2%be%e0%b2%98/ ವಿಧಾನಸೌಧದಲ್ಲಿ ಶನಿವಾರ ಇಲಾಖಾ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಹೊಂಡ, ಚೆಕ್ ಡ್ಯಾಂ, ಬೋರ್ ವೆಲ್ ನೀರಿನ ಆಸರೆ ಜತೆಗೆ, ಸರಕಾರದ ಹಲವು ಕಾರ್ಯಕ್ರಮಗಳ ಲಾಭವನ್ನು ಇಲಾಖೆ ಸಕಾಲಿಕವಾಗಿ ತಲುಪಿಸಿದ ಕಾರಣ ಅನಾವೃಷ್ಟಿಯ ತೀವ್ರತೆ ರೈತರನ್ನು ಹೆಚ್ಚು ಬಾಧಿ ಸಲಿಲ್ಲ ಎಂದರು. https://kannadanewsnow.com/kannada/state-govt-to-provide-laptops-to-10000-village-accountants/ 10 ಸಾವಿರ ಕೃಷಿಹೊಂಡಗಳ ನಿರ್ಮಾಣ, ಕೃಷಿ ಯಾಂತ್ರೀಕರಣ ಯೋಜನೆಯಡಿ 284 ಕೋಟಿ ರೂ. ಸಬ್ಸಿಡಿ ವಿತರಣೆ, ರೈತಸಿರಿ ಯೋಜನೆ ಜಾರಿ, ರೈತ ಕರೆ ಕೇಂದ್ರ ಸ್ಥಾಪನೆ, ಸಕಾಲಿಕವಾಗಿ ಬೀಜ ಮತ್ತು ಗೊಬ್ಬರ ಪೂರೈಕೆ ಮತ್ತಿತರ ಇಲಾಖೆಯ ಪರಿಣಾಮಕಾರಿ…

Read More

ಹೊಸದಿಲ್ಲಿ: ಇಡೀ ಜಗತ್ತನ್ನೇ ತಲ್ಲಣ ಗೊಳಿಸಿದ್ದ ಕರೋನ ಮಹಾಮಾರಿಯಿಂದ ಜನತೆ ತತ್ತರಿಸಿ ಹೋಗಿದ್ದರು.ಈಗ ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಘಾತ ಪ್ರಕರಣಗಳು ಹೆಚ್ಚುತ್ತಿವೆ ಎಂಬ ವರದಿಗಳು ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. https://kannadanewsnow.com/kannada/state-govt-to-provide-laptops-to-10000-village-accountants/ ಹೌದು ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ ಎಂಬ ವರದಿಗಳನ್ನು ಅಲ್ಲಗಳೆದಿರುವ ಕೇಂದ್ರ ಸರಕಾರ, ಕೋವಿಡ್ ಲಸಿಕೆಗಳಿಗೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. https://kannadanewsnow.com/kannada/india-has-officially-eradicated-extreme-poverty-report-by-us-economic-thinker/ ಈ ಸಂಬಂಧ ಬಂದಿರುವ ವರದಿಗಳು ಆಧಾರರಹಿತ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಸ್ಪಷ್ಟನೆ ನೀಡಿದ್ದಾರೆ. ಭಾರತೀಯ ವೈದ್ಯಕೀಯ ಸಂಸೋಧನಾ ಮಂಡಳಿಯ (ಐಸಿಎಂಆರ್) ವಿಸ್ತ್ರತ ಸಂಸೋಧನೆಯಿಂದ ಈ ವಿಷಯ ಬಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. https://kannadanewsnow.com/kannada/india-has-officially-eradicated-extreme-poverty-report-by-us-economic-thinker/

Read More

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದುಬಂದಿದೆ.ಅಲ್ಲದೆ ಬಿಜೆಪಿ, ಜೆಡಿಎಸ್‌ನ ಹಲವು ಪ್ರಮುಖರು 2 -3 ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. https://kannadanewsnow.com/kannada/declaration-of-assets-of-all-employees-mandatory-from-now-on-administrative-reforms-commission-to-state-govt/ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗುವ ನಿರೀಕ್ಷೆಯಿದೆ. ಮಂಡ್ಯ ಜಿಲ್ಲೆಯ ಹಲವು ಬಿಜೆಪಿ ಮತ್ತು ಜೆಡಿಎಸ್ ನಾಯಕರೂ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಜಿಲ್ಲೆಯ ಮಾಜಿ ಸಚಿವ, ಮಾಜಿ ಶಾಸಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರೊಬ್ಬರ ಸೇರ್ಪಡೆಗೆ ವೇದಿಕೆ ಸಿದ್ದವಾಗಿದೆ. https://kannadanewsnow.com/kannada/water-shortage-in-bengaluru-govt-mulls-to-seize-private-water-tankers/ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ರಾಜ್ಯದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ.ಮುಂದಿನ 2 -3 ದಿನಗಳಲ್ಲಿ ಒಟ್ಟಿಗೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರಲಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ. https://kannadanewsnow.com/kannada/job-seekers-application-process-for-1000-village-administration-officer-recruitment-begins-today/

Read More

ಬೆಂಗಳೂರು : ಇನ್ನೂ ಮುಂದೆ ರಾಜ್ಯ ಸರ್ಕಾರದ ಎಲ್ಲಾ ನೌಕರರು ತಮ್ಮ ಆಸ್ತಿ- ಹೊಣೆಗಾರಿಕೆ ವಿವರವನ್ನು ವೆಬ್‌ ಸೈಟ್ ಗಳಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಆಡಳಿತ ಸುಧಾರಣ ಆಯೋಗ 7ನೆ ವರದಿಯನ್ನು ಶಿಫಾರಸ್ಸು ಮಾಡಿದೆ . https://kannadanewsnow.com/kannada/job-seekers-application-process-for-1000-village-administration-officer-recruitment-begins-today/ ರಾಜ್ಯ ಸರಕಾರದ ಗ್ರೂಪ್ – ಎ. ಬಿ ಹಾಗೂ ಸಿ ನೌಕರರು ಹಾಗೂ ಸಾರ್ವಜನಿಕ ವಲಯದ ಮಂಡಳಿಗಳು, ನಿಗಮಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರ ಆಸ್ತಿ- ಹೊಣೆಗಾರಿಕೆ ವಿವರವನ್ನು ವೆಬ್‌ ಸೈಟ್ ಗಳಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಆಡಳಿತ ಸುಧಾರಣ ಆಯೋಗ 7ನೆ ವರದಿಯನ್ನು ಶಿಫಾರಸ್ಸು ಮಾಡಿದೆ . https://kannadanewsnow.com/kannada/bjp-first-list-announced-for-lok-sabha-elections-prime-minister-modi-wishes-him-well/ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಆಯೋಗವು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏಳನೇ ವರದಿ ಸಲ್ಲಿಸಿತು. 9 ಇಲಾಖೆಗಳಲ್ಲಿ ಆಡಳಿತ ಸುಧಾರಣೆ ಸಂಬಂಧ 527 ಶಿಫಾರಸು ಸಲ್ಲಿಸಿದೆ. ಆ ಮೂಲಕ ಒಟ್ಟು ಏಳು ವರದಿಗಳಡಿ 39 ಇಲಾಖೆಗಳ ಸಂಬಂಧ 5039 ಶಿಫಾರಸುಗಳನ್ನು ಸಲ್ಲಿಸಿದಂತಾಗಿದೆ. ಪಾಳು…

Read More

ಬೆಂಗಳೂರು : ತಡರಾತ್ರಿ ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮಗು ಸೇರಿದಂತೆ ಕುಟುಂಬಸ್ಥರೆಲ್ಲರೂ ಅಪಾಯದಿಂದ ಪಾರಾಗಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. https://kannadanewsnow.com/kannada/did-the-bjp-resign-when-the-cooker-bomb-exploded-in-2022-home-minister-g-parameshwara/ ನಡು ರಸ್ತೆಯಲ್ಲಿ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು ನಾಯಂಡನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದೆ. ಫ್ಲೈ ಓವರ್ ಮೇಲೆ ಕಾರು ಚಲಿಸುತ್ತೀದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬೇರೊಂದು ಕಾರಿನವರು ಮಾಹಿತಿ ನೀಡಿದ್ದಾಗ ಗಾಬರಿಗೊಂಡ ಕಾರಿನಲ್ಲಿದ್ದ ಐವರು ಹೊರಗಡೆ ಇಳಿದಿದ್ದರೆ.ಈ ವೇಳೆ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. https://kannadanewsnow.com/kannada/public-should-note-panchamitra-whatsapp-chat-launched-gram-panchayat-can-apply-for-these-services-while-sitting/ ರಾತ್ರಿ 12:30 ಕ್ಕೆ ಚನ್ನಪಟ್ಟಣಕ್ಕೆ ಕುಟುಂಬ ಸಮೇತ ತೆರಳುತ್ತಿತ್ತು .ಕಾರಿನಲ್ಲಿ ಮಗು ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದೆ. ಕಾರಿನ ಹಿಂಬದಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಬೇರೊಂದು ಕಾರಿನಲ್ಲಿ ಸಂಚರಿಸುವವರು ಕಾರಿನಲ್ಲಿ ಇದ್ದವರಿಗೆ ಬೆಂಕಿ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಕಿ ಮೊದಲೆ ಇವರು ಕಾರಿನಿಂದ ಕೆಳಗೆ ಇಳಿದಿದ್ದರು. ಅದೃಷ್ಟವಶಾತ್…

Read More

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದವರು ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ್, ಬಿಜೆಪಿಯವರು ಅಧಿಕಾರದ ಲ್ಲಿದ್ದಾಗ 2022ರಲ್ಲಿ ಕುಕ್ಕರ್‌ಬಾಂಬ್ ಸ್ಪೋಟಿಸಿತ್ತು. ಆಗ ರಾಜೀನಾಮೆ ಕೊಟ್ಟಿದ್ದರಾ? ಎಂದು ಕಿಡಿ ಕಾರಿದರು. https://kannadanewsnow.com/kannada/five-national-public-transport-awards-for-state-transport-national-public-transport-awards/ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಗರದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಬಹಳ ಗಂಭೀರ, ಆಳ ಹಾಗೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು,ಸಾಕಷ್ಟು ಕುರುಹುಳು, ಸಿಸಿಟಿವಿಯಲ್ಲಿ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡುವು ದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. https://kannadanewsnow.com/kannada/bjp-issues-notice-to-st-somashekar-shivaram-hebbar-over-cross-voting-in-rajya-sabha-polls/ ಇದು ರಾಜ್ಯದ,ಬೆಂಗಳೂರಿನ ಸುರಕ್ಷತೆಯ ಪ್ರತಿಷ್ಠೆ. ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ. ದೊಡ್ಡ ತಂಡದಿಂದ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಟೈಮರ್ ಎಷ್ಟು ಕೆಪಾಸಿಟಿ ಇತ್ತು ಎಂಬುದೂ ಸೇರಿ ಎಲ್ಲದರ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಕೆಫೆಯಲ್ಲಿ ಸ್ಫೋಟಕ ಇಟ್ಟು ಹೋದವನು ಬಸ್‌ನಲ್ಲಿ ಬಂದಿರುವ ಸಾಧ್ಯತೆ ಇದೆ. ಹಾಗಾಗಿ ಈ ಮಾರ್ಗದಲ್ಲಿ ಸಂಚರಿಸಿರುವ ಸುಮಾರು 28…

Read More

ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮತ್ತು ಮತದಾನಕ್ಕೆ ಗೈರು ಹಾಜರಾಗಿದ್ದ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರಿಗೆ ಬಿಜೆಪಿ ನೋಟಿಸ್‌ ಜಾರಿ ಮಾಡಿದೆ ಎಂದು ತಿಳಿದುಬಂದಿದೆ. https://kannadanewsnow.com/kannada/breaking-big-blow-to-congress-former-minister-manohar-tehsildar-quits-hand-joins-bjp/ ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ಇಬ್ಬರಿಗೂ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ. ಅದರಲ್ಲಿ, ಮಾರ್ಚ್ 5ರೊಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. https://kannadanewsnow.com/kannada/do-you-have-any-intention-of-protecting-the-lake-in-bengaluru-heres-a-golden-opportunity/ ಫೆ.27ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾ‌ರ್ ಅವರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ. ಸೋಮಶೇಖ‌ರ್ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದರು. ಶಾಸಕ ಶಿವರಾಂ ಹೆಬ್ಬಾರ್ ಮತದಾನ ದಿಂದ ದೂರ ಉಳಿದಿದ್ದರು. ಆದರೆ ಶಿವರಾಂ ಹೆಬ್ಬಾ‌ರ್ ಅನಾರೋಗ್ಯದ ಕಾರಣ ಮತದಾನಕ್ಕೆ ಗೈರು ಹಾಜರಾಗಿದ್ದೆ, ಯಾವುದೇ ದುರುದ್ದೇಶ ಇರಲಿಲ್ಲ ಎಂದು ತಿಳಿಸಿದ್ದರು. https://kannadanewsnow.com/kannada/good-news-for-minority-students-deadline-for-applying-for-scholarships-extended/

Read More

ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇಂಡಿಯಾ ಮೈತ್ರಿಕೂಟಕ್ಕೆ ಭಾರಿ ಹೊಡೆತ ಆಗುತ್ತಿದ್ದು ಅದಲ್ಲದೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್ ಮಾಜಿ ಸಚಿವ, ಹಾನಗಲ್ ಕ್ಷೇತ್ರದ ಮಾಜಿ ಶಾಸಕ ಮನೋಹರ್‌ ತಹಸೀಲ್ದಾರ್‌ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. https://kannadanewsnow.com/kannada/do-you-have-any-intention-of-protecting-the-lake-in-bengaluru-heres-a-golden-opportunity/ ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಹಸೀಲ್ದಾರ್‌ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು.ಈ ವೇಳೆ ಮಾತನಾಡಿದ ಬಿ. ವೈ.ವಿಜಯೇಂದ್ರ, ಹಿಂದುಳಿದ ವರ್ಗದ ಧುರೀಣರು ಬಿಜೆಪಿ ಸೇರಿದ್ದರಿಂದ ಹಾವೇರಿ ಜಿಲ್ಲೆಗೆ ಒಂದು ದೊಡ್ಡ ಶಕ್ತಿ ಲಭಿಸಿದೆ. https://kannadanewsnow.com/kannada/good-news-for-minority-students-deadline-for-applying-for-scholarships-extended/ ಇದು ಬಹಳ ಸಂತೋಷ ತಂದುಕೊಟ್ಟಿದೆ. ಕೇಂದ್ರ ದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರ ಬೇಕು. ನರೇಂದ್ರ ಮೋದಿ ಅವರು ಮಗದೊಮ್ಮೆ ಪ್ರಧಾನಿ ಆಗಬೇಕೆಂಬ ಇಚ್ಛೆ ದೇಶ- ರಾಜ್ಯದ ಜನರಲ್ಲಿದೆ ಎಂದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮನೋಹ‌ರ್ ತಹಸೀಲ್ದಾ‌ರ್ ಸೇರ್ಪಡೆಯಿಂದ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬಿಜೆ ಪಿಗೆ ದೊಡ್ಡ ಶಕ್ತಿ ಲಭಿಸಿದೆ ಎಂದು…

Read More