Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಗೀಗ ಮತ್ತೊಂದು ಬಿಗ್ ಟ್ರಸ್ಟ್ ಸಿಕ್ಕಿದ್ದು 500 ಕೋಟಿ ಹವಾಲ ಅವರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ತನಿಖೆಯಲ್ಲಿ ಇದೀಗ ಸ್ಪೋಟಕ ಅಂಶ ಬಯಲಾಗಿದೆ. ಹೌದು 500 ಕೋಟಿ ಹವಾಲಾ ಹಣದ ಅವ್ಯವಹಾರವೇ ಇದೀಗ ಸಿಜೆ ರಾಯ್ ಗೆ ಮುಳುವಾಗಿದೆ. 500 ಕೋಟಿ ಬಗ್ಗೆ ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಲಾಗಿದೆ ಕಂಗಾಲಾಗಿದ್ದರು. ಲೆಕ್ಕ ನೀಡಲಾಗದೆ ಸಿಜೆ ರಾಯ್ ಮಾನಸಿಕವಾಗಿ ಕುಗ್ಗಿದ್ದರು. ಹೋಟೆಲ್ ಬದಲು ಕಚೇರಿಯಲ್ಲಿಯೇ ಸಿಜೆ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 500 ಕೋಟಿ ಹಣದ ವ್ಯವಹಾರ ಇಕ್ಕಟ್ಟಿಗೆ ರಾಯಿ ಸಿಲುಕಿದ್ದರು. ಆತ್ಮಹತ್ಯೆಯ ದಿನ ಐಟಿಗೆ ಉತ್ತರಿಸುವುದಾಗಿ ರಾಯ್ ಹೇಳಿದ್ದರು. ಆದರೆ ಮಾನಸಿಕ ಖಿನ್ನತೆಯ ಟ್ಯಾಬ್ಲೆಟ್ ಕೂಡ ಸೇವಿಸದೆ ಮತ್ತಷ್ಟು ಟೆನ್ಶನ್ ಹೆಚ್ಚಾಗಿದೆ. ಇನ್ನು 500 ಕೋಟಿ ರಹಸ್ಯ ನಾಲ್ವರಿಗೆ ಮಾತ್ರ ಗೊತ್ತಿತ್ತು ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಸಿಜೆ ರಾಯ್ ಕೇರಳ ಮೂಲದ ಬಿಜಿನೆಸ್ ಪಾರ್ಟ್ನರ್ ಐಟಿ ಅಧಿಕಾರಿಗಳು ಹಾಗೂ…
ಉಡುಪಿ : ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ರೀತಿಯಾದ ಔಷಧಿ ಕೊರತೆ ಇಲ್ಲ ಯಾವುದೇ ಆಸ್ಪತ್ರೆಯಲ್ಲಿ ಸಮಸ್ಯೆ ಇಲ್ಲ ಎಂದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇಲ್ಲ ಎಂಬುದು ಸರ್ಕಾರದ ಅಧಿಕೃತ ನಿಲುವು ಮತ್ತು ಗುರಿಯಾಗಿದ್ದರೂ, ಇತ್ತೀಚಿನ ವರದಿಗಳ ಪ್ರಕಾರ ಕೆಲವು ಕಡೆ ಪ್ರಾಯೋಗಿಕವಾಗಿ ಸವಾಲುಗಳು ಎದುರಾಗಿರುವುದು ಕಂಡುಬಂದಿದೆ. ಫೆಬ್ರವರಿ 2026ರ ಅಂಕಿಅಂಶಗಳು ಮತ್ತು ವಿದ್ಯಮಾನಗಳ ಆಧಾರದ ಮೇಲೆ ಪ್ರಸ್ತುತ ಸ್ಥಿತಿಗತಿ ಇಲ್ಲಿದೆ: 1. ಸರ್ಕಾರದ ಕ್ರಮಗಳು ಮತ್ತು ಇತ್ತೀಚಿನ ಅನುದಾನ ಸರ್ಕಾರವು ಔಷಧಿಗಳ ಕೊರತೆಯನ್ನು ನೀಗಿಸಲು ಹಲವಾರು ತುರ್ತು ಕ್ರಮಗಳನ್ನು ಕೈಗೊಂಡಿದೆ: ರೂ. 30-50 ಕೋಟಿ ಅನುದಾನ: ಔಷಧಿಗಳ ತುರ್ತು ಖರೀದಿಗೆ ಸರ್ಕಾರವು ಹೆಚ್ಚುವರಿಯಾಗಿ ರೂ. 30 ರಿಂದ 50 ಕೋಟಿಗಳಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಇದು ಸ್ಥಳೀಯ ಮಟ್ಟದಲ್ಲಿ (ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ) ಔಷಧಿ ಖರೀದಿಸಲು ಸಹಕಾರಿಯಾಗಿದೆ. 496 ಔಷಧಿಗಳ ಖರೀದಿ: ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು…
ಬೆಂಗಳೂರು : ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಆದರೆ ಇದೀಗ ರಾಜ್ಯ ಸರ್ಕಾರ ಮಹಾ ಎಡವಟ್ಟು ಮಾಡಿದ್ದು ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದುವಿನಲ್ಲು ಆಹ್ವಾನ ಪತ್ರಿಕೆಯನ್ನು ಸರ್ಕಾರ ಪ್ರಕಟಿಸಿದೆ. ಹೌದು ಆಡಳಿತ ಭಾಷೆ ಕನ್ನಡವನ್ನೇ ರಾಜ್ಯ ಸರ್ಕಾರ ಮರೆತುಬಿಟ್ಟಿದೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆ ಉರ್ದುವಿನಲ್ಲೂ ಪ್ರಕಟ ಮಾಡಿದ್ದಾರೆ. ರೋಗ ನಿರೋಧಕ ಕಿಚ್ಚ ಮತ್ತು ಆಂಬುಲೆನ್ಸ್ ಸೇವೆಗೆ ಚಲನೆ ನೀಡುವಂತಹ ಒಂದು ಮಹತ್ವದ ಕಾರ್ಯಕ್ರಮ ನೆಹರುತಾರಾಲಯದಲ್ಲಿ ಆಯೋಜನೆ ಮಾಡಲಾಗಿತ್ತು. ಉರ್ದು ಭಾಷೆಯಲ್ಲಿ ಸರ್ಕಾರದಿಂದ ಆಹ್ವಾನ ಪತ್ರಿಕೆ ಪ್ರಕಟ ಆಗಿದೆ. ಕರ್ನಾಟಕದಲ್ಲಿ ಇದ್ದೀರೋ ಅಥವಾ ಪಾಕಿಸ್ತಾನದಲ್ಲಿ ಇದ್ದೀರೋ ಎಂದು ಸಚಿವ ದಿನೇಶ್ ಗುಂಡೂರಾವ್ಗೆ ಸಾ.ರಾ ಗೋವಿಂದ್ ಪ್ರಶ್ನೆ ಮಾಡಿದ್ದಾರೆ. ಅಂದು ನಿಮ್ಮ ಅಪ್ಪ ಇಂದು ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಸಾ.ರಾಗೋವಿಂದು ಆಕ್ರೋಶ ಹೊರಹಾಕಿದ್ದಾರೆ.ಈ ಕೂಡಲೇ ಸಚಿವ ದಿನೇಶ್ ಗುಂಡೂರಾವ್ ಬೇಷರತ್ತು ಕ್ಷಮೆ ಕೇಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೇರೆ ರೂಪದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು ಸುಮಾರು 175 ಅಂಗಡಿಗಳು ಇರುವ ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಚಿಕ್ಕಪೇಟೆಯ ಕುಂಬಾರಪೇಟೆ ಬಳಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಫ್ಯಾನ್ಸಿ ಸ್ಟೋರ್, ಪ್ಲಾಸ್ಟಿಕ್ ಅಂಗಡಿ ಇವೆಲ್ಲ ಕೂಡ ಹೊತ್ತಿ ಉರಿಯುತ್ತಿವೆ. ವಿನೋದ್ ಎಂಬವರಿಗೆ ಈ ಒಂದು ಕಟ್ಟಡ ಸೇರಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಇಡೀ ಏರಿಯಾದಲ್ಲಿ ದಟ್ಟ ಹೊಗೆ ಆವರಿಸಿದೆ. 5 ಅಗ್ನಿಶಾಮಕ ವಾಹನ ದಳ ಸಿಬ್ಬಂದಿಗಳು ಸಹ ಬೆಂಕಿ ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಸಹ ಭೇಟಿ ನೀಡಿದ್ದಾರೆ. ಇದೇ ವೇಳೆ ಬೆಂಕಿ ನಂದಿಸುವ ಸಂದರ್ಭದಲ್ಲಿ ನಾಲ್ವರು ಅಗ್ನಿಶಾಮಕ ಸಿಬ್ಬಂದಿಗಳು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿಗಳಿಗೆ ಬೆಂಕಿ ತಗುಲಿದೆ. ಸದ್ಯ ಒಟ್ಟು ಆರು ಅಗ್ನಿಶಾಮಕ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಟ್ಟ ಹೊಗೆಯಿಂದ ಅಗ್ನಿಶಾಮಕ ಸಿಬ್ಬಂದಿಗಳಿಗೆ ಉಸಿರಾಟದ…
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಬಿವಿಎಂಪಿ ನಿವೃತ್ತ ನೌಕರ ಪರಮೇಶ್ವರಯ್ಯ (63) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಕೋರಮಂಗಲದ ಮನೆಯಲ್ಲಿ ಈ ಒಂದು ಆತ್ಮಹತ್ಯೆ ಘಟನೆ ನಡೆದಿದೆ. ಬಿಬಿಎಂಪಿ ನಿವೃತ್ತ ನೌಕರ ಪರಮೇಶ್ವರಯ್ಯ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದು ಹಾಗೂ ಚಿಕಿತ್ಸೆ ಸಹ ಪಡೆಯುತ್ತಿದ್ದರು. ಕೋರಮಂಗಲ ಠಾಣೆಯಲ್ಲಿ ಈ ಕುರಿತು ಯುಡಿಆರ್ ಪ್ರಕರಣ ದಾಖಲಾಗಿದೆ.
BREAKING : ರಣಜಿ ಫೈನಲ್ ನಲ್ಲಿ ಕಿರಿಕ್ : ಕರ್ನಾಟಕದ ಆಟಗಾರನಿಗೆ ಡಿಚ್ಚಿ ಹೊಡೆದ ಕಾಶ್ಮೀರ ತಂಡದ ನಾಯಕ | Watch Video
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪದ್ಯದಲ್ಲಿ ಕಿರಿಕ್ ನಡೆದಿದೆ. ಕರ್ನಾಟಕದ ಆಟಗಾರನಿಗೆ ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಡಿಚ್ಚಿ ಹೊಡೆದಿರುವ ಘಟನೆ ವರದಿಯಾಗಿದೆ. ಹುಬ್ಬಳ್ಳಿ ನಗರದ ರಾಜನಗರದಲ್ಲಿ ಕೆಎಸ್ಸಿ ಸ್ಟೇಡಿಯಂ ನಲ್ಲಿ ಇಂದು ರಣಜಿ ಫೈನಲ್ ಪಂದ್ಯ ನಡೆಯುತ್ತಿದೆ. ಕರ್ನಾಟಕದ ಅನೀಶ್ ಗೆ ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಡಿಚ್ಚಿ ಹೊಡೆದಿರುವ ಘಟನೆ ನಡೆದಿದೆ ಹುಬ್ಬಳ್ಳಿಯಲ್ಲಿ ಇಂದು ರಣಜಿ ಫೈನಲ್ ಪದ್ಯ ನಡೆಯುತ್ತಿತ್ತು. ಕರ್ನಾಟಕದ ಅನಿಶ್ ಎಂಬ ಆಟಗಾರರಿಗೆ ಕಾಶ್ಮೀರದ ಪರಸ್ ಡೋಗ್ರಾ ಡಿಚ್ಚಿ ಹೊಡೆಯುವಂತಹ ದೃಶ್ಯ ಇದೀಗ ವೈರಲ್ ಆಗಿದೆ. ಈ ವೇಳೆ ಮಧ್ಯಪ್ರವೇಶದ ಅಂಪೈರ್ ಮತ್ತು ರೆಫ್ರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸುವಂತಹ ಪ್ರಯತ್ನ ಮಾಡಿದ್ದಾರೆ. ಮಧ್ಯಾಹ್ನದ ವಿರಾಮದ ನಂತರ ಕರ್ನಾಟಕದ ಪ್ರಸಿದ್ಧ ಕೃಷ್ಣ ಅವರು ಬಾಡಿ ಮಾಡುತ್ತಿದ್ದರು ಈ ವೇಳೆ ಕಾಶ್ಮೀರದ ನಿರಂತರವಾಗಿ ಎರಡು ಮೂರು ಬೌಂಡರಿ ಹೊಡೆಯುತ್ತಾರೆ ಇವಡೆ ಎರಡು ತಂಡದ ಆಟಗಾರರ ನಡುವೆ ಹೀಟ್ ಮೂಮೆಂಟ್ ನಡೆದಿದ್ದು, ಪರಸ್ ಡವ್ಗ್ರಾ ಟಿಕೆಟ್ ತೆಗೆಯಲು…
ಯಾದಗಿರಿ : ಯಾದಗಿರಿಯ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಷ್ಟ್ರಪಿತ ಗಾಂಧಿ ಹಾಗೂ ಮೊದಲ ಪ್ರಧಾನಿ ನೆಹರು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ವಿವಾದಾತ್ಮಕ ಭಾಷಣದ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಫೆ.21ರಂದು ಯಾದಗಿರಿ ಜಿಲ್ಲೆ ಗುರುಮಠಕಲ್ ಪಟ್ಟಣದಲ್ಲಿ ನಡೆದಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಯತ್ನಾಳ್, ಗಾಂಧಿ ಮತ್ತು ನೆಹರು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ಬಿಜೆಪಿ ಉಚ್ಛಾಟಿತ ಶಾಸಕನ ವಿರುದ್ಧ ಬಿಎನ್ಎಸ್ 196, 299, 302, 352, 353 ಅಡಿ ಪೊಲೀಸರು ಸುಮೋಟೋ ಕೇಸ್ ದಾಖಲು ಮಾಡಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮಹಿಳೆಯರು ಮರಣ ಹೊಂದಿದ್ದರು, ಗೃಹಲಕ್ಷ್ಮಿ ಯೋಜನೆಯ ಹಣ ಪಡೆದಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ, ಇದೀಗ ಮರಣ ಹೊಂದಿದ ಫಲಾನುಭವಿಗಳ ಮನೆಯ ಯಜಮಾನಿಯರು ಗೃಹಲಕ್ಷ್ಮಿ ಯೋಜನೆ ಪಡೆದುಕೊಳ್ಳಲು ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ಶಿವಮೊಗ್ಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಮಧು ಹೆಚ್.ಸಿ ತಿಳಿಸಿದ್ದಾರೆ. ಮರಣ ಹೊಂದಿದ ಫಲಾನುಭವಿಗಳ ಹೆಸರಿಗೆ ಹಣ ವರ್ಗಾವಣೆಯಾಗುವುದನ್ನು ತಡೆದು, ಮನೆಯ ಮುಂದಿನ ಯಜಮಾನಿಯರು ಈ ಬಗ್ಗೆ ಮಾಹಿತಿ ನೀಡಿ ಹೊಸ ಅರ್ಜಿ ಸಲ್ಲಿಸಬೇಕು. ಮರಣ ಹೊಂದಿದ ವ್ಯಕ್ತಿಯ ಜೀವಂತ ಪ್ರಮಾಣ ಪತ್ರದ ಬಗ್ಗೆ ಸದ್ಯಕ್ಕೆ ಆತಂಕ ಬೇಡ; ಸರ್ಕಾರದ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು.2,044 ಫಲಾನುಭವಿಗಳನ್ನು ಐಟಿ/ಜಿಎಸ್ಟಿ ವ್ಯಾಪ್ತಿಯಡಿ ಪರಿಗಣಿಸಲಾಗಿದ್ದು, 42 ಫಲಾನುಭವಿಗಳ ಎನ್ಪಿಸಿಐ (NPCI) ಬಾಕಿ ಇದೆ. ಹೌದು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯು ಮರಣ ಹೊಂದಿದ ಸಂದರ್ಭದಲ್ಲಿ, ಅವರ ಕುಟುಂಬದ ಸದಸ್ಯರು ಯೋಜನೆಯ ಲಾಭವನ್ನು ಮುಂದುವರಿಸಲು ಅವಕಾಶವಿದೆ.ಈ ಬಗ್ಗೆ ಸರ್ಕಾರವು ಈಗಾಗಲೇ ಸ್ಪಷ್ಟ ಮಾರ್ಗಸೂಚಿಗಳನ್ನು…
ಚಿಕ್ಕಮಗಳೂರು : ಜಿಲ್ಲೆಯ ಕಡೂರು ತಾಲೂಕಿನ ತಂಗ್ಲಿ ಗ್ರಾಮ ಪಂಚಾಯತಿಯ ಪಿಡಿಓ ನಂಜುಂಡಮ್ಮ ಅವರು 5 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸರಸ್ವತಿಪುರದ ತಿಮ್ಮಶೆಟ್ಟಿ ಎಂಬುವವರಿಂದ ಸೈಟ್ಗೆ ದೃಢೀಕರಣ ಪತ್ರ ನೀಡಲು ಲಂಚದ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಹಿಡಿದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ಇದೀಗ ಮಹಾ ಎಡವಟ್ಟು ಆಗಿದೆ. ಹೌದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿಯೇ ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ವಿತರಣೆ ಮಾಡಲಾಗುತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ಅಂಗನವಾಡಿಯಲ್ಲಿ ಮಕ್ಕಳಿಗೆ ಅವಧಿ ಮೀರಿದ ಮಿಲ್ಲೆಟ್ ಲಡ್ಡು ಪೂರೈಕೆ ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಧಿಕಾರಿಗಳ ನಿರ್ಲಕ್ಷದಿಂದ ಈ ಒಂದು ಎಡವಟ್ಟು ಆಗಿದೆ. ಮಕ್ಕಳ ಆರೋಗ್ಯದ ಜೊತೆಗೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ ಎಕ್ಸ್ಪೈರ್ ಆದಂತಹ ಫುಡ್ ಸಪ್ಲೈ ಮಾಡಿದ್ದಾರೆ. ಪೌಷ್ಟಿಕಾಂಶ ಉದ್ದೇಶಕ್ಕೆ ಬುಲೆಟ್ ಲಡ್ಡು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಪೌಷ್ಟಿಕಾಂಶವನ್ನು ಒದಗಿರಿಸಬೇಕಾದಂತಹ ಆಹಾರವೇ ಮಕ್ಕಳ ಆರೋಗ್ಯಕ್ಕೆ ಕುತ್ತು ತಂದಿದೆ. ಈ ಒಂದು ಅಕ್ರಮವನ್ನು ಹೋರಾಟಗಾರ್ತಿ ಕಸ್ತೂರಿಬಾವಿ ಬಯಲಿಗೆಳಿದಿದ್ದಾರೆ. ಅಧಿಕಾರಿಗಳ ನಿರ್ಲಕ್ಷದಿಂದ ಈ ಒಂದು ಅಕ್ರಮ ಬಯಲಾಗಿದೆ. ಕಳೆದ 2025 ನವೆಂಬರ್ ನಲ್ಲಿ ಎಕ್ಸ್ಪೈರ್ ಆದಂತಹ ಮಿಲ್ಲೆಟ್ ಲಡ್ಡುವನ್ನು ಇದೀಗ ಅಂಗನವಾಡಿ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ. ಮಕ್ಕಳ…














