Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವಂತಹ ಮತ್ತೊಂದು ಘಟನೆ ನಡೆದಿದ್ದು, ಚಾಕುವಿನಿಂದ ಇರಿದು ಮಹಿಳೆಯ ಭೀಕರ ಕೊಲೆ ನಡೆದಿದೆ. ಬೆಂಗಳೂರಿನ ಶೇಷಾದ್ರಿಪುರಂನ 1ನೇ ಮುಖ್ಯರಸ್ತೆಯಲ್ಲಿ ನಿನ್ನೆ ಈ ಒಂದು ಘಟನೆ ನಡೆದಿತ್ತು. ಕೊಲೆ ಆರೋಪಿಯನ್ನು ಪೊಲೀಸರು ಇದೀಗ ಪತ್ತೆ ಹಚ್ಚಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಮೂಲದ ನಾಗಪ್ಪ ಎಂಬಾತನಿಂದ ಈ ಒಂದು ಕೊಲೆ ನಡೆದಿದೆ. ಕೊಲೆಯಾದ ಶರಣಮ್ಮಳ ತಂಗಿಯನ್ನು ಆರೋಪಿ ಇಷ್ಟಪಟ್ಟಿದ್ದಾನೆ ಹಾಗೆ ಮದುವೆಯಾಗುವುದಾಗಿ ಆರೋಪಿ ಹೇಳಿಕೊಂಡಿದ್ದ. ಮದುವೆಯಾದ್ರೆ ಆ ಯುವತಿಯನ್ನ ಆಗೋದಾಗಿ ಆರೋಪಿ ನಾಗಪ್ಪ ಹೇಳಿದ್ದ. ಆದರೆ ನಾಗಪ್ಪನನ್ನು ಯುವತಿ ಅವಾಯ್ಡ್ ಮಾಡುತ್ತಿದ್ದಳು ಅದೇ ರೀತಿ ಬೇರೆ ಯುವತಿ ನಡೆಸಿದ್ದಾಳೆ. ಹಾಗೆ ಮಾಹಿತಿ ಕೇಳಿ ನಿನ್ನೆ ಆರೋಪಿ ನಾಗಪ್ಪ ಮನೆಗೆ ಬಂದಿದ್ದಾನೆ. ನಿನ್ನ ತಂಗಿಯಲ್ಲಿ ಅಡ್ರೆಸ್ ಹೇಳುವಂತೆ ಮಹಿಳೆಗೆ ಒತ್ತಾಯಿಸಿದ್ದಾನೆ ಆಕೆ ವಿಳಾಸ ಗೊತ್ತಿಲ್ಲ ಅಂತ ಶರಣಮ್ಮ ಹೇಳಿದ್ದಾಳೆ. ಈ ವೇಳೆ ಮೊದಲೇ ತಂದಿದ್ದ ಚಾಕುವಿನಿಂದ ನಾಗಪ್ಪ ಇರಿದು ಕೊಲೆ ಮಾಡಿದ್ದಾನೆ ದೊಡ್ಡ ಚಾಕು ಖರೀದಿಸಿ ನಾಗಪ್ಪ ಬೆನ್ನ ಹಿಂದೆ…
ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಉಪನ್ಯಾಸಕನಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಬೆಳಗಾವಿಯ ಖಾಸಗಿ ಕಾಲೇಜು ಉಪನ್ಯಾಸಕ ನಾಗೇಶ್ವರ ವಿರುದ್ಧ ಆರೋಪ ಕೇಳಿಬಂದಿದ್ದ. ಬೆಳಗಾವಿ ತಾಲೂಕಿನ ಬಸವನ ಕುಡಚಿ ನಿವಾಸಿ ನಾಗೇಶ್ವರ ಡೆವಿನಕೊಪ್ಪ ಉಪನ್ಯಾಸಕ ಜೀವ ಬೆದರಿಕೆ ಹಾಕಿ ವಿದ್ಯಾರ್ಥಿಯ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.ಲಿವ್ ಇನ್ ರಿಲೇಶನ್ ಶಿಪ್ ಇಟ್ಟುಕೊಳ್ಳಬೇಕು, ಕರೆದ ಕಡೆ ಬರಬೇಕು, ಇಬ್ಬರ ಮಧ್ಯ ಇರುವ ಸಂಬಂಧ ಯಾರ ಬಳಿಯೂ ಹೇಳಬಾರದು . ವಿಷಯ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಉಪನ್ಯಾಸಕ ಬೆದರಿಕೆ ಹಾಕಿದ್ದಾನೆ. ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ, ವಿಭಾಗದ ಅಥಿತಿ ಉಪನ್ಯಾಸಕನಾಗಿದ್ದ ನಾಗೇಶ್ ಯುವತಿಯ ಮೇಲೆ ಅತ್ಯಾಚಾರ ಎಸೆಗಲೆಂದೇ ಗಣೇಶಪುರದಲ್ಲಿ ಬಾಡಿಗೆ ಮನೆ ಮಾಡಿದ್ದಾನೆ. ಬಾಡಿಗೆ ಮನೆಯಲ್ಲಿ ನಿರಂತರವಾಗಿ ಎರಡು ವರ್ಷಗಳಿಂದ ಅತ್ಯಾಚಾರ ಎಸಿಗುತ್ತಿದ್ದಾನೆ. ಪೋಷಕರ ಬಳಿ ಅತ್ಯಾಚಾರ ಎಸಗುತ್ತಿರುವ ಸಂಗತಿಯನ್ನು ಸಂತ್ರಸ್ತ ಯುವತಿ…
ಮಂಡ್ಯ : ಮಂಡ್ಯದಲ್ಲಿ ಕೊಲೆ ನಡೆದಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅಮೃತ ಬಳಿ ಈ ಒಂದು ಭೀಕರ ಕೊಲೆ ನಡೆದಿದೆ. ಹತ್ಯೆಯಾದ ರೌಡಿಶೀಟರ್ ನನ್ನು ಲಕ್ಷ್ಮಿಸಾಗರ ಗ್ರಾಮದ ಮಹೇಶ್ (4 ಎಂದು ತಿಳಿದುಬಂದಿದೆ. ಹಲವು ಅಪರಾಧಿ ಕೃತ್ಯಗಳಲ್ಲಿ ಮಹೇಶ್ ಬಾಗಿಯಾಗಿದ್ದ. ಮಹೇಶನನ್ನು ಪೊಲೀಸರು ಗಡಿಪಾರು ಮಾಡಲು ನಿರ್ಧರಿಸಿದ್ದರು.ಬೆಂಗಳೂರಿನಲ್ಲಿ ಮಹೇಶ್ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಮಹೇಶ್ ಕ್ರಮಕ್ಕೆ ಬಂದಿದ್ದ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಹೋಗುವಾಗ ಮಹೇಶ್ ನನ್ನು ಬೀಕರವಾಗಿ ಕೊಲೆ ಮಾಡಲಾಗಿದೆ. ಮಹೇಶಣ್ಣ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಕೊಲೆ ಕುರಿತು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ಹೊಸ ಎಫ್ಐಆರ್ ದಾಖಲಿಸಿದೆ. ದೂರಿನ ಪ್ರಕಾರ, ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಎಂಬ ಕಂಪನಿಯನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಳ್ಳಲು ಕ್ರಿಮಿನಲ್ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್ 3 ರಂದು ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್ಐಆರ್ನಲ್ಲಿ ಇತರ ಆರು ವ್ಯಕ್ತಿಗಳು ಮತ್ತು ಮೂರು ಕಂಪನಿಗಳನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಜಾರಿ ನಿರ್ದೇಶನಾಲಯ ತನ್ನ ತನಿಖಾ ಸಂಶೋಧನೆಗಳನ್ನು ದೆಹಲಿ ಪೊಲೀಸರೊಂದಿಗೆ ಹಂಚಿಕೊಂಡಿತ್ತು ಮತ್ತು ಪಿಎಂಎಲ್ಎಯ ಸೆಕ್ಷನ್ 66 (2) ರ ಅಡಿಯಲ್ಲಿ, ನಿಗದಿತ ಅಪರಾಧವನ್ನು ದಾಖಲಿಸಲು ಮತ್ತೊಂದು ಏಜೆನ್ಸಿಗೆ ನಿರ್ದೇಶನ ನೀಡಬಹುದು. ಎಫ್ಐಆರ್ ನಲ್ಲಿ ಆರೋಪಿಗಳ ಪಟ್ಟಿ ಎಫ್ಐಆರ್ನಲ್ಲಿ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಮತ್ತು ಇತರ ಮೂವರು ವ್ಯಕ್ತಿಗಳು, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್), ಯಂಗ್…
ಬೆಂಗಳೂರು : ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸಿಎಂ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಆದರೆ ನಿನ್ನೆ ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿದರು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಹೈಕಮಾಂಡ್ ಹೇಳಿದ್ದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು. ಇದೀಗ ಇಂದು ಸಿಎಂ ಸಿದ್ದರಾಮಯ್ಯ ಸಿಎಂ ಕಾರ್ಯಕ್ರಮದಲ್ಲಿ ಸಿಎಂ ಕುರ್ಚಿ ಬಿಟ್ಟು ಸಾಮಾನ್ಯ ಕುರ್ಚಿಯಲ್ಲಿ ಕುಳಿತಿರುವ ಪ್ರಸಂಗ ನಡೆಯಿತು. ಹೌದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅರೆಭಾಷೆಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಏಕಾಏಕಿ ಕುರ್ಚಿ ಬದಲಿಸಿದರು. ಹಿಂಬದಿಯ ಆಹ್ವಾನಿದರಿಗೆ ಮೀಸಲಿಟ್ಟ ಕುರ್ಚಿಯನ್ನು ಸಿಎಂ ಸಿದ್ದರಾಮಯ್ಯ ಹಾಕಿಸಿಕೊಂಡ ಪ್ರಸಂಗ ನಡೆಯಿತು. ಸಿಎಂ ಸಿದ್ದರಾಮಯ್ಯಗೆ ಹಾಕಲಾಗಿದ್ದ ಕುರ್ಚಿ ಆರಾಮದಾಯಕ ಆಗಿರಲಿಲ್ಲ. ಹಾಗಾಗಿ ದೊಡ್ಡ ವಿನ್ಯಾಸದ ಕುರ್ಚಿ ಬಿಟ್ಟು ಸಿಎಂ…
ಬೆಳಗಾವಿ : ಕೇದಾರ ಪೀಠದ ಶಾಖ ಮಠದ ಶಿವಾನಂದ ಶಿವಾಚಾರ್ಯ ಶ್ರೀಗಳು ಇಂದು ನಿಧನರಾಗಿದ್ದಾರೆ ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದಲ್ಲಿರುವ ಕೇದಾರಪೀಠದ ಶಾಖಾಮಠದ ಶಿವಾನಂದ ಶಿವಾಚಾರ್ಯ ಶ್ರೀಗಳು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶಿವಾನಂದ ಶಿವಾಚಾರ್ಯ ಶ್ರೀಗಳು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸ್ವಾಮೀಜಿ ನಿಧನಕ್ಕೆ ಹಲವು ಮಠಾಧೀಶರು ಹಾಗೂ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಎಂಎಲ್ಸಿ ಚೆನ್ನರಾಜ ಹಟ್ಟಿಹೋಳಿ ಚಂದ್ರಶೇಖರ ಸ್ವಾಮೀಜಿ ಸ್ವಾಮೀಜಿಯವರ ಅಂತಿಮ ದರ್ಶನವನ್ನು ಪಡೆದರು.
ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದು ದುರಂತ ನಡೆದಿತ್ತು. ಇದೀಗ ಮನೆಯ ಬಳಿ ಆಟವಾಡುತ್ತಿದ್ದ ಬಾಲಕನ ಮೇಲೆ ಕಾರು ಹರಿದ ಪರಿಣಾಮ ಬಾಲಕ ತೀವ್ರ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ನಗರದಲ್ಲಿ ನಡೆದಿದೆ. ಎರ್ಟಿಗಾ ಕಾರು ಚಾಲಕನ ಬೇಜವಾಬ್ದಾರಿತನದ ರೀತಿಯಲ್ಲಿ ಕಾರು ಚಾಲನೆ ಮಾಡಿ ಬಾಲಕನ ಮೇಲೆ ಕಾರನ್ನು ಚಲಾಯಿಸಿದ್ದಾನೆ. ಇನ್ನೂ ಅದೃಷ್ಟವಶಾತ್ ಬಾಲಕ ಪವಾಡ ಸದೃಶ್ಯದಂತೆ ಪಾರಾಗಿದ್ದಾನೆ. ಇನ್ನೂ ಆಟವಾಡುತ್ತಿದ್ದ ಬಾಲಕನ ಮೇಲೆ ಕಾರು ಹರಿಯುತ್ತಿದ್ದಂತೆ ಬಾಲಕನ ಚೀರಾಟ ಕಂಡು ಮನೆಯಿಂದ ಜನರು ಓಡಿ ಬಂದಿದ್ದಾರೆ. ಬಾಲಕನ ಮೇಲೆ ಕಾರು ಹರಿಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಮೂರು ವರ್ಷದ ದಕ್ಷಿತ್ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಲಕನ ತಲೆ, ಮುಖ, ಬೆನ್ನಿನ ಮೇಲೆ ಕಾರು ಹರಿದಿದೆ. ಮಾರುತಿ ಎರ್ಟಿಗಾ ಕಾರು ತಿರುವಿನಲ್ಲಿ ವೇಗವಾಗಿ ಬಂದು ಮಗುವಿನ ಮೇಲೆ ಹರಿದಿದ್ದು, ಗಂಭೀರವಾಗಿ ಗಾಯಗೊಂಡ…
ಬೆಂಗಳೂರು : ನಟಿ ಆಶಿಕ ಮಾವನ ಮಗಳಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಪ್ರಿಯತಮನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಇದೀಗ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಹಾಸನದ ಅಚಲ (22) ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ನವೆಂಬರ್ 22ರಂದು ಅಚಲ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಪಾಂಡುರಂಗ ನಗರದಲ್ಲಿ ಅಚಲ ಆತ್ಮಹತ್ಯೆಗೆ ಶರಣಾಗಿದ್ದಾಳೆ ತಮ್ಮ ಸಂಬಂಧಿಕರ ಮನೆಯಲ್ಲಿ ಅಚಲ ನೇಣಿಗೆ ಶರಣಾಗಿದ್ದಾಳೆ, ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು ಎಂಟು ದಿನವಾದರೂ ಆರೋಪಿಯ ಬಂಧನ ಆಗಿಲ್ಲ ಅಂತ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಮೃತ ಅಚಲ ಇಂಜಿನಿಯರಿಂಗ್ ಮುಗಿಸಿ ಕೆಲಸ ಹುಡುಕುತ್ತಿದ್ದರು. ತನ್ನ ಸಂಬಂಧಿ ಆರೋಪಿ ಮಾಯಾಂಕ್ ಜೊತೆಗೆ ಆಚಲ ಸ್ನೇಹ ಹೊಂದಿದಳು. ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಬಂಧಕ್ಕೆ ಪೀಡಿಸಿದ ಆರೋಪ ಕೇಳಿ ಬಂದಿದೆ. ಈಕೆ ಒಪ್ಪದಿದ್ದಾಗ ದೈಹಿಕವಾಗಿ ಹಲ್ಲೆ ಮಾಡಿದ್ದು ಅಲ್ಲದೆ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಆತನ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ…
ಬೆಂಗಳೂರು : ಕಾಂಗ್ರೆಸ್ ಬಣದಾಟಕ್ಕೆ ಬ್ರೇಕ್ಫಾಸ್ಟ್ ಮೂಲಕ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಜೊತೆಯಾಗಿ ಉಪಾಹಾರ ಸೇವಿಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ನಿನ್ನೆ ಬೆಳಗ್ಗೆಯೇ ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್, ಸಿಎಂ ಜೊತೆ ಉಪಾಹಾರಕ್ಕೆ ಜೊತೆಯಾದರು.ಇದೀಗ ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯತನ್ನು ಡಿನ್ನರ್ ಪಾರ್ಟಿಗೆ ಕರೆಯುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ನನ್ನ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ನಾನಂತು ಗುಂಪುಗಾರಿಕೆ ಮಾಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಶಾಸಕರ ಜೊತೆ ದೆಹಲಿಗೆ ಹೋಗೋದು ದೊಡ್ಡ ಕೆಲಸ ಅಲ್ಲ. 7, 9.ಶಾಸಕರನ್ನು ಕರೆದುಕೊಂಡು ಹೋಗೋದು ದೊಡ್ಡ ಕೆಲಸವಲ್ಲ. ಅದರಿಂದ ಯಾವುದೇ ಪ್ರಯೋಜನ ಇಲ್ಲ. ಪಾರ್ಟಿ ಪ್ರೆಸಿಡೆಂಟ್ ಅಂದರೆ ಫಾದರ್ ಇದ್ದಂತೆ. ನಾನು 140 ಶಾಸಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವನು. ನನ್ನ ಸಿಎಂ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಷ್ಟು ನಿಷ್ಠೆಯಿಂದ…
ವಿದೇಶದಲ್ಲಿ ಕೆಲಸ ಮಾಡುವ ನಿಮ್ಮ ಕನಸನ್ನು ನನಸಾಗಿಸಲು ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳು ಮತ್ತು ಪರಿಹಾರಗಳಿವೆ. ಇವು ನಿಮ್ಮ ಮನೆಯಲ್ಲಿ ಶಕ್ತಿಯ ಹರಿವನ್ನು ಸುಧಾರಿಸುತ್ತದೆ, ಸಕಾರಾತ್ಮಕ ಕಂಪನಗಳನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ವಿದೇಶ ಪ್ರಯಾಣದ ಪ್ರಯತ್ನಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ. ನಿಮ್ಮ ವಿದೇಶಿ ಕನಸು ಏನೇ ಇರಲಿ, ಅದು ವಿದೇಶಿ ಉದ್ಯೋಗ, ಶಿಕ್ಷಣ ಅಥವಾ ವಲಸೆಯಾಗಿರಬಹುದು, ಈ ಲೇಖನದಲ್ಲಿ ಒದಗಿಸಲಾದ ವಾಸ್ತು ಸಲಹೆಗಳು ನಿಮಗೆ ಸಹಾಯ ಮಾಡಬಹುದು. ವಿದೇಶ ಪ್ರಯಾಣಕ್ಕಾಗಿ ಪಾಸ್ಪೋರ್ಟ್ಗಳು, ವೀಸಾ ದಾಖಲೆಗಳು, ಶೈಕ್ಷಣಿಕ ಪ್ರಮಾಣಪತ್ರಗಳು ಇತ್ಯಾದಿಗಳನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು. ಇದು ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಅಡೆತಡೆಗಳನ್ನು ತೆಗೆದುಹಾಕುತ್ತದೆ. ನಿಮ್ಮ ವಿದೇಶ ಪ್ರವಾಸಕ್ಕಾಗಿ ಎಲ್ಲಾ ಪ್ರಮುಖ ದಾಖಲೆಗಳನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ (ಗಾಳಿಯ ಮೂಲೆಯಲ್ಲಿ) ಇಡಬೇಕು. ಈ ದಿಕ್ಕು ಗಾಳಿ ಮತ್ತು ಚಲನೆಗೆ ಸಂಬಂಧಿಸಿದೆ ಮತ್ತು ಪ್ರಯಾಣ ಮತ್ತು ಹೊಸ ಅವಕಾಶಗಳಿಗೆ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್…














