Subscribe to Updates
Get the latest creative news from FooBar about art, design and business.
Author: kannadanewsnow05
ಕೊಡಗು : ಕೊಡಗು ಜಿಲ್ಲೆಯಲ್ಲಿ ಭಾರಿ ಭೂ ಕುಸಿತ ಉಂಟಾಗಿದ್ದು, ಪಾಲಂಗಾಲ ಗ್ರಾಮ ಬಳಿಯ ಅರಣ್ಯ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಲಂಗಾಲ ಗ್ರಾಮದಲ್ಲಿ ಭೂ ಕುಸಿತವಾಗಿದೆ. ಅರಣ್ಯ ಪ್ರದೇಶವಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸದ್ಯ ಸ್ಥಳಕ್ಕೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ
ಬೆಂಗಳೂರು : ರೇಬಿಸ್ ರೋಗದಿಂದ ಬೆಂಗಳೂರಿನಲ್ಲಿ 17 ಜನರ ಸಾವು ಬೆಂಗಳೂರಿನಲ್ಲಿ ರೇಬೀಸ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಕಳೆದ ಆರು ತಿಂಗಳಲ್ಲಿ 17 ಜನರು ರೇಬೀಸ್ನಿಂದ ಮೃತಪಟ್ಟಿದ್ದಾರೆ. ನಾಯಿ ಕಡಿತದ ಪ್ರಕರಣಗಳು ಕೂಡ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿದೆ. ರೇಬೀಸ್ನ ಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯ. ಹೌದು ಬೆಂಗಳೂರಿನಲ್ಲಿ 17 ಜನರು ರೇಬಿಸ್ ರೋಗದಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 23 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ 17 ರೇಬಿಸ್ ಪ್ರಕರಣಗಳು ಧೃಢಪಟ್ಟಿದ್ದರೇ, ಈ ವರ್ಷ 6 ತಿಂಗಳಲ್ಲೇ 17 ಜನರು ರೇಬಿಸ್ಗೆ ಬಲಿಯಾಗಿದ್ದು ಆತಂಕ ಹೆಚ್ಚಿಸಿದೆ. ಕಳೆದ ವರ್ಷಕ್ಕಿಂತ ಈ ವರ್ಷ ರೇಬಿಸ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ನಾಯಿ ಕಡಿತ ಕೇಸ್ಗಳಲ್ಲಿ ತುಮಕೂರೇ ರಾಜ್ಯದಲ್ಲಿ ಮೊದಲಿಗಿದೆ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 10 ಸಾವಿರ ಜನರಿಗೆ ನಾಯಿಗಳು ಕಡಿದಿವೆ. ಇದರಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಇನ್ನು ಶಿರಾ…
ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೈಸೂರಿನ ಕೆ ಆರ್ ನಗರದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದ್ದು, ನ್ಯಾ. ಸಂತೋಷ್ ಗಜಾನನ ಭಟ್ ಕೆ ಆರ್ ನಗರ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ಪ್ರಕಟಿಸಿದೆ. 4 ಕೇಸ್ ಗಳಿಗೆ ಸಂಬಂಧಿಸಿದಂತೆ ಇಂದು ಕೋರ್ಟ್ ಮೊದಲನೇ ಕೇಸಿಗೆ ತೀರ್ಪು ಇಂದು ಪ್ರಕಟಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. ಎರಡು ಕಡೆಯ ವಕೀಲರಿಂದ ವಾದ ಆಲಿಸಿದ ನ್ಯಾಯಾಧೀಶ ಸಂತೋಷದ ಕ್ಷಣ ಭಟ್ ಅವರು ಕೆಆರ್ ನಗರ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ಪ್ರಕಟಿಸಿದರು ನಾಳೆ ಪ್ರಜ್ವಲ್ ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಾಗುತ್ತದೆ. ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜಲ್ವ್ ರೇವಣ್ಣ ಕಳೆದ ಕಳೆದ 14 ತಿಂಗಳಿನಿಂದ ಸೆರೆಮನೆಯಲ್ಲಿ ಬಂಧಿಯಾಗಿದ್ದಾರೆ. ಪ್ರಕರಣ ಹಿನ್ನೆಲೆ?…
ಬೆಂಗಳೂರು : ವರನಟ ಡಾಕ್ಟರ್ ರಾಜಕುಮಾರ್ ಅವರ ಸಹೋದರಿ ನಾಗಮ್ಮ (93) ಇಂದು ನಿಧನರಾಗಿದ್ದಾರೆ. ತಮಿಳುನಾಡಿನ ತಳವಾಡಿ ತಾಲೂಕಿನ ದೊಡ್ಡ ಗಾಜನೂರಲ್ಲಿ ವಾಸಿಸುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. ಗಾಜುನೂರಿನ ಮನೆಯಲ್ಲಿ ಡಾಕ್ಟರ್ ರಾಜ್ ಸಹೋದರಿ ನಾಗಮ್ಮ ವಾಸಿಸುತ್ತಿದ್ದರು ತಮಿಳುನಾಡಿನ ತಳವಾಡಿ ತಾಲೂಕಿನ ದೊಡ್ಡ ಗಾಜನೂರಲ್ಲಿ ನಾಗಮ್ಮ ವಾಸಿಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಾಗಮ್ಮ ಅವರು ವಿಧಿವಶರಾಗಿದ್ದಾರೆ. ಪುನೀತ್ ರಾಜಕುಮಾರ್ ಅಗಲಿದ್ದು ಸಹ ನಾಗಮ್ಮ ಅವರಿಗೆ ಗೊತ್ತಿರಲಿಲ್ಲ ಪ್ರತಿ ವರ್ಷ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಅವರು ಶುಭಾಶಯಗಳು ತಿಳಿಸುತ್ತಲಿ ಇದ್ದರೂ ಇದೀಗ ನಾಗಮ್ಮ ಅವರು ನಿಧನರಾಗಿದ್ದಾರೆ.
ಬೆಂಗಳೂರು : ಕೇಂದ್ರದ ಹುದ್ದೆಗೆ ಪ್ರಣವ್ ಮೋಹಂತಿ ನೇಮಕ ಆಗಿದ್ದಾರೆ ನಿಜಕ್ಕೂ ನಮ್ಮ ಕರ್ನಾಟಕಕ್ಕೆ ದೊಡ್ಡ ಕ್ರೆಡಿಟ್ ತಕ್ಷಣವೇ ಯಾವುದೇ ಹುದ್ದೆ ಕೊಡುತ್ತಾರೆ ಎಂಬುದು ಇಲ್ಲ ಕೇಂದ್ರಕ್ಕೆ ನೇಮಕವಾಗಿರುವ ಬಗ್ಗೆ ನನಗೆ ತಿಳಿಸಲು ಪ್ರಣವ್ ಮೋಹಂತಿ ನನ್ನನ್ನು ಭೇಟಿಯಾಗಲು ಬಂದಿದ್ದರು ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು. ಇಂದು ಎಸ್ಐಟಿ ಮುಖ್ಯಸ್ಥರು ಬೆಂಗಳೂರಿನ ಸದಾಶಿವನ ನಗರದಲ್ಲಿರುವ ಗ್ರೂಜ ಸಚಿವ ಜಿ ಪರಮೇಶ್ವರ್ ಅವರನ್ನು ಭೇಟಿ ಆದರೂ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಬಿಟ್ಟು ಬೇರೆ ಯಾವುದೇ ಚರ್ಚೆ ನಡೆದಿಲ್ಲ ಎಸ್ ಐ ಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ವರದಿ ಕೊಡುವವರೆಗೂ ಆ ಬಗ್ಗೆ ಮಾತನಾಡಲು ಹೋಗಲ್ಲ ತನಿಖೆಯ ವೇಳೆ ನಾವ್ಯಾರು ಪ್ರಕರಣದ ಕುರಿತು ಮಾತನಾಡಲ್ಲ. ಪ್ರಣವ್ ಮೋಹಂತಿ ಹೊರಗಡೆ ಹೋಗುವ ಪ್ರಶ್ನೆ ಎಲ್ಲಿ ಬಂದಿದೆ? ಅವರು ಕರೆದಾಗ ನಾವು ಕಳುಹಿಸುತ್ತೇವೆ ಎಂಬುದೇನು ಇಲ್ಲ ಇಂತಹ ಜಾಗಕ್ಕೆ ನೇಮಕ ಮಾಡುತ್ತಿದ್ದೇವೆ ಎಂದು ಕೇಂದ್ರ ಹೇಳಬೇಕು ಮೋಹಂತಿ ಸೆಲೆಕ್ಟ್…
ಉಡುಪಿ : ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವುಗಳು ಮುಂದುವರೆದಿದ್ದು ಇದೀಗ ಶಾಲಾ ವಾಹನ ಚಲಾಯಿಸುತ್ತಿರುವಾಗಲೇ ಚಾಲಕರೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಶಾಲಾ ವಾಹನ ಚಾಲಕ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಅದೃಷ್ಟವಶಾತ್ ಶಾಲಾ ವಾಹನದಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಕಳ ನೀರೇ ಬೈಲೂರು ನಿವಾಸಿ ಮೋಹಿನಿದ್ದೀನ್ ಬಾವಾ (65) ಸಾವನಪ್ಪಿದ್ದಾರೆ. ಉಡುಪಿ ನಗರದ ಮಾರುತಿ ವಿಥಿಕ ಬಳಿ ಈ ಒಂದು ಘಟನೆ ನಡೆದಿದ್ದು ಚಾಲಕನ ಸಮಯಪ್ರಜ್ಞೆಯಿಂದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ವಾಹನ ಚಾಲನೆ ವೇಳೆಯೇ ಮೊಯಿದ್ದೀನ್ ಗೆ ಎದೆನೋವು ಕಾಣಿಸಿಕೊಂಡಿತ್ತು. ಸಮಾಜ ಸೇವಕ ನಿತ್ಯಾನಂದರನ್ನು ಕಂಡು ಚಾಲಕ ವಾಹನ ನಿಲ್ಲಿಸಿದ್ದಾನೆ. ಎದೆ ನೋವಿನ ಬಗ್ಗೆ ನಿತ್ಯಾನಂದ ಒಳಕಾಡು ಬಳಿ ಚಾಲಕ ಹೇಳಿಕೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ನಿತ್ಯಾನಂದ ಒಳಕಾಡು ಸಾಗಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಚಾಲಕ ಮೃತಪಟ್ಟಿದ್ದಾನೆ.
ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನಿನ್ನೆ ಆರನೇ ಪಾಯಿಂಟ್ ನಲ್ಲಿ ನೆಲ ಅಗೆಯುವಾಗ ಪುರುಷನ ಅಸ್ತಿಪಂಜರದ ಪಳಿಯುಳಿಕೆಗಳು ದೊರೆತಿದ್ದವು. ಇಂದು ಸಹ ಎಸ್ಐಟಿ ಅಧಿಕಾರಿಗಳು 6ನೇ ಪಾಯಿಂಟ್ ನಲ್ಲಿ ಮತ್ತಷ್ಟು ಎಲ್ಲ ಶೋಧ ಕಾರ್ಯ ಮುಂದುವರಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಎಸ್ಐಟಿ ಪಾಯಿಂಟ್ ಆರನ್ನು ಕೈಬಿಟ್ಟು ಇಂದು 7ನೇ ಪಾಯಿಂಟ್ ನಲ್ಲಿ ನೆಲ ಅಗೆಯುವ ಕಾರ್ಯ ಆರಂಭಿಸಿದೆ. ಆರನೇ ಪಾಯಿಂಟ್ ನಲ್ಲಿ ನಿನ್ನೆ ಹನ್ನೆರಡು ಮೂಳೆಗಳು ಸಿಕ್ಕಿದ್ದವು. ಮಾನವನ ದೇಹದ 12 ಮೂಳೆಗಳು ಪತ್ತೆಯಾಗಿವೆ. ಕಾಲಿನ ಭಾಗದ ಮೂಳೆ ತಲೆ ಬುರುಡೆ ಹಾಗೂ ಚೂರುಗಳನ್ನು ಸಂಗ್ರಹಿಸಲಾಗಿದೆ. ಪಾಯಿಂಟ್ ನಂಬರ್ ಆರು ನೇತ್ರಾವತಿ ನದಿ ತೀರದಲ್ಲಿ ಬರುತ್ತದೆ. ಇದೀಗ 6ನೇ ಪಾಯಿಂಟ್ ಕೈ ಬಿಟ್ಟ ಎಸ್ಐಟಿ ಅಧಿಕಾರಿಗಳು 7ನೇ ಪಾಯಿಂಟ್ ನಲ್ಲಿ ಶೋಧಕಾರ್ಯ ಆರಂಭಿಸಿದ್ದು, ಮತ್ತೆ ಏನಾದರೂ ಮನುಷ್ಯನ ಅಸ್ತಿಪಂಜರಗಳು ದೊರೆಯುತ್ತಾ ಎನ್ನುವುದು ಕಾದು ನೋಡಬೇಕಾಗಿದೆ
ಬೆಂಗಳೂರು : ಬೆಂಗಳೂರು ಮಹಾನಗರಕ್ಕೆ ಕಾವೇರಿ ನೀರು ಪೂರೈಕೆಯಾಗುವ ತಾತಗುಣಿ ಜಲಚೇರಕ ಯಂತ್ರಗಾರ(ಪಂಪಿಂಗ್ ಹೌಸ್)ದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದಿಂದ ಆ.1ರಂದು(ಇಂದು) ಕಾವೇರಿ 5ನೇ ಹಂತದ ಯೋಜನೆ ಅಡಿ ನೀರು ಸರಬರಾಗುವ ಪ್ರದೇಶಗಳಲ್ಲಿ ನೀರು ವ್ಯತ್ಯಯ ಉಂಟಾಗಲಿದೆ. ಮಂಡಳಿಯ ತಂಡದಿಂದ ತಾಂತ್ರಿಕ ದೋಷ ಸರಿಪಡಿಸುವ ಕೆಲಸ ನಡೆಯುತ್ತಿದೆ. ಬೆಂಗಳೂರು ದಕ್ಷಿಣ,ಬೆಂಗಳೂರು ಪೂರ್ವ ಸೇರಿದಂತೆ ಕಾವೇರಿ 5ನೇ ಹಂತದ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದ್ದು,ಇದಕ್ಕೆ ಜಲಮಂಡಳಿ ವಿಷಾದ ವ್ಯಕ್ತಪಡಿಸಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬೆಂಗಳೂರು : ಧರ್ಮಸ್ಥಳದಲ್ಲಿ ಪಾನ್ ಕಾರ್ಡ್ ಹಾಗೂ ಎಟಿಎಂ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಬಸ್ ಪೇಟೆಯಲ್ಲಿ ಪಾನ್ ಕಾರ್ಡ್ ಹಾಗು ಎಟಿಎಂ ಕಾರ್ಡ್ ಓನರ್ ಗಳಾದ ಸುರೇಶ್ ತಾಯಿ ಸಿದ್ದಲಕ್ಷ್ಯಮ್ಮ ಹೇಳಿಕೆ ನೀಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆಯಲ್ಲಿ ಪುತ್ರ ಸುರೇಶ್ ಐದು ತಿಂಗಳ ಹಿಂದೆ ಜಾಂಡಿಸ್ ನಿಂದ ಮೃತಪಟ್ಟಿದ್ದ. ನನಗೆ ಎಟಿಎಂ ಬಳಸಲು ಬರುತ್ತಿರಲಿಲ್ಲ. ಹಾಗಾಗಿ ನಾನು ಆತನಿಗೆ ಎಟಿಎಂ ಕೊಟ್ಟಿದ್ದೆ. ಹೀಗಾಗಿ ನನ್ನ ಪುತ್ರ ಸುರೇಶನೇ ಎಟಿಎಂ ಕಾರ್ಡ್ ಬಳಸುತ್ತಿದ್ದ. ಈ ಹಿಂದೆ ನನ್ನ ಮಗ ಧರ್ಮಸ್ಥಳಕ್ಕೆ ಹೋಗಿ ಬರುತ್ತಿದ್ದ. ಮೊನ್ನೆ ಪೊಲೀಸರು ಬಂದು ನನ್ನ ಬಗ್ಗೆ ಕೇಳಿದರು ನಾನು ಇರಲಿಲ್ಲ. ನಿನ್ನೆ ಮತ್ತೆ ಪೊಲೀಸರು ಬಂದು ಫೋಟೋ ತೆಗೆದುಕೊಂಡು ಹೋಗಿದ್ದಾರೆ. ನನ್ನ ಮಗ ಮೂರು ವರ್ಷ ಮನೆಯಲ್ಲಿ ಇರಲಿಲ್ಲ ಕುಡಿದ ಜಾಸ್ತಿ ಆಗಿತ್ತು. ಪೊಲೀಸರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ನಾವು ಬರೀ ಪರ್ಸ್ ಕಳೆದುಕೊಂಡಿದ್ದೆವು ಆದರೆ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು…
ಬೆಂಗಳೂರು : ಬೆಂಗಳೂರಲ್ಲಿ ರೇಲ್ವೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 70ಲಕ್ಷ ಮೂಲದ ಹ್ಯಾಶಿಶ್ ಆಯಿಲ್ ಜಪ್ತಿ ಮಾಡಿದ್ದಾರೆ. ಬೆಂಗಳೂರು ರೈಲು ನಿಲ್ದಾಣದಲ್ಲಿ ಪೊಲೀಸರು ಓರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಆಂಧ್ರ ಮೂಲದ ಆರೋಪಿ ಅಪಲರಾಜು (34) ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ. ಈತ ಆಂಧ್ರಪ್ರದೇಶದಲ್ಲಿ ಭರತ್ ಎಂಬಾತನಿಂದ ಆಯಿಲ್ ಖರೀದಿ ಮಾಡಿದ್ದ.ಆಂಧ್ರಪ್ರದೇಶದಿಂದ ಬೆಂಗಳೂರಲ್ಲಿ ಈತ ಮಾರಾಟ ಮಾಡುತ್ತಿದ್ದ ಯಲಹಂಕ ಬಳಿ ಓರ್ವನಿಗೆ ಹ್ಯಾಶೀಶ್ ಆಯಿಲ್ ಮಾರುತಿದ್ದ. ರೈಲ್ವೆ ಪೊಲೀಸರಿಂದ ಆರೋಪಿ ಅಪಲರಾಜು ಬಂಧನವಾಗಿದೆ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.