Author: kannadanewsnow05

ಶಿವಮೊಗ್ಗ : ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ‘ಗೀತಾ ಶಿವ ರಾಜಕುಮಾರ್ ಡಮ್ಮಿ ಕ್ಯಾಂಡಿಡೇಟ್’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಈಶ್ವರಪ್ಪ ಅವರಿಗೆ ಬಸ್ಟ್ಯಾಂಡ್ ನಲ್ಲಿ ಕಣಿ ಹೇಳೋಕೆ ಹೇಳಿ. ಈಶ್ವರಪ್ಪ ಡಬ್ಬ ಸೌಂಡ್ ಮಾಡ್ತದೆ. ಅವರು ಕ್ಯಾಂಡಿಡೇಟ್ ಆಗಲ್ಲ ಎಂದು ತಿರುಗೇಟು ನೀಡಿದರು. https://kannadanewsnow.com/kannada/lok-sabha-elections-rs-15-78-crore-in-cash-liquor-worth-rs-23-37-lakh-seized-in-kerala-so-far/ ಮಾಜಿ ಸಿಎಂ ಯಡಿಯೂರಪ್ಪನವರ ಮಕ್ಕಳು ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ ಎಂದು ಯಡಿಯೂರಪ್ಪ ಮಕ್ಕಳು ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ. ಈಶ್ವರಪ್ಪ ತಟ್ಟೆಯಲ್ಲಿ ಹೆಗಣ ಕೊಳೆತು ನಾರ್ತಿದೆ. ಈಶ್ವರಪ್ಪ ಅವರಿಗೆ ಪೊಲಿಟಿಕಲ್ ಸುಪಾರಿ ಯಡಿಯೂರಪ್ಪ ಕೊಟ್ಟಿದ್ದಾರೆ ಎಂದು ಹೇಳಿದರು. https://kannadanewsnow.com/kannada/why-do-people-trust-modi-who-has-belied-the-promise-of-acche-din-siddaramaiah-question/ ಈಶ್ವರಪ್ಪ ಅವರನ್ನು ಹಿಂದುಳಿದ ವರ್ಗದ ಮತ ಹೊಡಿ ಅಂತಾ ಕಳುಹಿಸಿದ್ದಾರೆ. ಜಾತಿ ರಾಜಕಾರಣ ಮಾಡಿ ಇವರು ಹೊಲಸು ಮಾಡಿದ್ದಾರೆ. ಈಶ್ವರಪ್ಪ ಅವರು ತಮ್ಮ ಮಗನಿಗೆ ಟಿಕೆಟ್ ಕೊಡಿಸುವ ಗಂಡಸುತನ ಇದ್ದರೆ ಅದರ ಬಗ್ಗೆ ಮಾತನಾಡಲಿ. ನಮ್ಮ ಅಕ್ಕ…

Read More

ಬೆಂಗಳೂರು :ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಇದರ ಮಧ್ಯೆ ಬಿಜೆಪಿ ಹೈಕಮಾಂಡ್, ಕೆಆರ್​ಪಿಪಿ ಸಂಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ. https://kannadanewsnow.com/kannada/there-was-factionalism-in-the-party-during-assembly-elections-dv-sadananda-gowda/ KRPP ಸಂಸ್ಥಾಪಕ ಜನಾರ್ಧನ ರೆಡ್ಡಿ ನಾಳೆ ಬಿಜೆಪಿ ಸೇರ್ಪಡೆ ಹಿನ್ನೆಲೆ, ಬೆಂಗಳೂರಿನಲ್ಲಿ ಇಂದು ತಮ್ಮ ನಿವಾಸದಲ್ಲಿ ಮಹತ್ವದ ಸಭೆ ಕರೆಡಿದ್ದಾರೆ. ಜನಾರ್ಧನ ರೆಡ್ಡಿ ಬೆಂಬಲಿಗರು, ಪದಾಧಿಕಾರಿಗಳು, ಆಪ್ತರ ಜೊತೆ ಜನಾರ್ದನ ರೆಡ್ಡಿ ಸಭೆ ನಡೆಸಲಿದ್ದಾರೆ.ಈ ವೇಳೆ ಜನಾರ್ದನ ರೆಡ್ಡಿ ಬಿಜೆಪಿ ಸೇರುವ ಬಗ್ಗೆ ಬೆಂಬಲಿಗರ ಅಭಿಪ್ರಾಯವನ್ನು ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. https://kannadanewsnow.com/kannada/no-property-tax-hike-bbmp-clarifies-reports-circulating/ ಇತ್ತೀಚೆಗಷ್ಟೇ ಈ ಬಗ್ಗೆ ಚರ್ಚಿಸಲು ಹೈಕಮಾಂಡ್, ಶ್ರೀರಾಮುಲು ಅವರನ್ನು ಕರೆಯಿಸಿಕೊಂಡು ಮಾತುಕತೆ ನಡೆಸಿತ್ತು. ಬಳಿಕ ಖುದ್ದು ಅಮಿತ್ ಶಾ, ಜನಾದರ್ನ ರೆಡ್ಡಿಯನ್ನು ದೆಹಲಿಗೆ ಕರೆಯಿಸಿಕೊಂಡು ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದರು. ಇದೀಗ ರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಮುಹೂರ್ತ ಸಹ ಫಿಕ್ಸ್ ಆಗಿದೆ. ನಾಳೆ ಜನಾರ್ದನ ರೆಡ್ಡಿ ಬಿಜೆಪಿ ಸೇರಲಿದ್ದಾರೆ ಎಂದು…

Read More

ದಕ್ಷಿಣಕನ್ನಡ : ಲೋಕಸಭಾ ಕ್ಷೇತ್ರ ಟಿಕೆಟ್ ವಂಚಿತರಾಗಿರುವಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಒಬ್ಬರು.ಇದೀಗ ಅವರು ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದು ರಾಜ್ಯದಲ್ಲಿ ನಾನು ಎಂದು ಕೂಡ ಗುಂಪುಗಾರಿಕೆ ರಾಜಕಾರಣ ಮಾಡಿಲ್ಲ. ವಿಧಾನಸಭೆ ಚುನಾವಣೆ ವೇಳೆ ಪಕ್ಷದಲ್ಲಿ ಗುಂಪುಗಾರಿಕೆ ಇತ್ತು ಎಂಬ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. https://kannadanewsnow.com/kannada/breaking-fire-breaks-out-at-factory-in-delhis-narela-several-workers-feared-trapped/ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲವೂ ಕೊಟ್ಟಿದೆ.ನಾನು ಪಕ್ಷಕ್ಕೆ ಏನಾದ್ರು ಮಾಡಬೇಕು ಮೋದಿ ಮತ್ತೆ ಪ್ರಧಾನಿ ಮಾಡಬೇಕು ಅನ್ನುವುದು ನನ್ನ ಸಂಕಲ್ಪ. ನಾನು ಎಂದು ಕೂಡ ಗುಂಪುಗಾರಿಕೆ ರಾಜಕಾರಣ ಮಾಡಿಲ್ಲ. ವಿಧಾನಸಭೆ ಚುನಾವಣೆ ವೇಳೆ ಪಕ್ಷದಲ್ಲಿ ಗುಂಪುಗಾರಿಕೆ ಇತ್ತು ಎಂದು ತಿಳಿಸಿದರು. ಒಂದು ಗುಂಪೂ ದೆಹಲಿ ಮತ್ತೊಂದು ಗುಂಪು ಕರ್ನಾಟಕದಲ್ಲಿ ಇತ್ತು.ನಾವೆಲ್ಲ ಬಿಜೆಪಿ ಗುಂಪಿನಲ್ಲಿ ಇದ್ದೇವು. ಬಿಜೆಪಿ ಗುಂಪಿನವರಿಗೆ ದೊಡ್ಡ ಗೌರವ ಸಿಕ್ಕಿಲ್ಲ.ಜನರು ಕೂಡ ಗುಂಪುಗಾರಿಕೆಗೆ ವೋಟ್ ಕೊಡಲ್ಲ ಅಂದ್ರು.ಪಾಪ ಮಾಡಿದವರು ಎಲ್ಲ ಕೊನೆಗೆ ಶುದ್ಧೀಕರಣ ಆಗುತ್ತಾರೆ. ಮುಂದಿನ ದಿನಗಳಲ್ಲಿ ಇದೆಲ್ಲ ಆಗಲಿದೆ ಎಂದರು. https://kannadanewsnow.com/kannada/we-are-sure-of-winning-mysuru-kodagu-chamarajanagar-lok-sabha-seats-cm-siddaramaiah/…

Read More

ದೆಹಲಿ : ನರೇಲಾದಲ್ಲಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ: ದೆಹಲಿಯ ನರೇಲಾ ಪ್ರದೇಶದಲ್ಲಿರುವ ಭೋರ್ಗಢ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡದ ಬಗ್ಗೆ ಮಾಹಿತಿ ಪಡೆದ ನಂತರ 20 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಕಾರ್ಖಾನೆಯಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಹಲವು ಕಾರ್ಮಿಕರು ಕಾರ್ಖಾನೆಯೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅವ್ಯವಸ್ಥೆಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಬೆಂಕಿಯ ಜ್ವಾಲೆಗಳು ದೂರದವರೆಗೆ ಸ್ಪಷ್ಟವಾಗಿ ಗೋಚರಿಸುತ್ತವೆ. ಅಗ್ನಿ ಅವಘಡದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡ ಕೂಡ ಸ್ಥಳಕ್ಕೆ ಧಾವಿಸಿದೆ ಎಂದು ಹೇಳಲಾಗುತ್ತಿದೆ. https://twitter.com/ANI/status/1771818564418154722?t=Rgj1LsEEMVJygM1YKD2Pcg&s=19

Read More

ಶಿವಮೊಗ್ಗ : ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಇದೀಗ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರ ಪರವಾಗಿ ನಟ ಶಿವರಾಜ್ ಕುಮಾರ್ ಎಂದು ಚುನಾವಣಾ ಪ್ರಚಾರ ನಡೆಸಿದರು ಈ ವೇಳೆ ಜೋಗಯ್ಯ ಸಿನಿಮಾದ ಡೈಲಾಗ್ ಹೇಳಿದ್ದು ಕಾರ್ಯಕರ್ತರಲ್ಲಿ ಹುಮ್ಮಸ್ಸು ನೀಡಿತು. https://kannadanewsnow.com/kannada/those-who-grew-up-from-our-party-have-stopped-us-on-the-streets-says-former-cm-hdk/ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರದ ವೇಳೆ ಸಭೆ ಒಂದರಲ್ಲಿ ನಟ ಶಿವರಾಜ್ ಕುಮಾರ್ ಅವರು ಜೋಗಯ್ಯ ಸಿನಿಮಾದ ಡೈಲಾಗ್ ಹೊಡೆದಿದ್ದು, ‘ಯೋ ಬರ್ಕೊಳಯ್ಯ ಮುಂದುಗಡೆ ಪೇಪರಲ್ಲಿ ಬರ್ಕೋ ಶಿವಮೊಗ್ಗ ನಂದು’ ಎಂದು ಜೋಗಯ್ಯ ಸಿನಿಮಾದ ಡೈಲಾಗ್ ಹೊಡೆದು ನೆರೆದಿರುವ ಕಾರ್ಯಕರ್ತರನ್ನು ರಂಜಿಸಿದರು. https://kannadanewsnow.com/kannada/beware-of-yaduveer-bjp-is-good-at-turning-emotional-thinking-cm/ ಈ ವೇಳೆ ಗೀತಾ ಪರ ಪ್ರಚಾರದ ವೇಳೆ ಶಿವಣ್ಣ ಹೇಳಿಕೆ ನೀಡಿದ್ದು, ಗೀತಾ ಅವರಲ್ಲಿ ರಕ್ತದಲ್ಲಿ ರಾಜಕೀಯ ಇದೆ. ಆದರೆ ನನಗೆ ಇಲ್ಲ ಬಂಗಾರಪ್ಪ ಅವರ ಮಗಳನ್ನು ಮದುವೆ ಆಗಿದ್ದೇನೆ ನಿಮ್ಮ ಮನೆ ಮಗಳಿಗೆ ಒಂದು…

Read More

ಮೈಸೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಚುನಾವಣಾ ಅಖಾಡ ರಂಗೇರಿದ್ದು, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮಹಾರಾಜ ಯದುವೀರ ಒಡೆಯರ್ ಅವರು ಸ್ಪರ್ಧಿಸಲಿದ್ದು ಅವರ ಕುರಿತಂತೆ ಎಚ್ಚರವಾಗಿ ಮಾತನಾಡಿ ಎಂದು ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದರು. https://kannadanewsnow.com/kannada/evaluation-exam-for-classes-5-8-and-9-from-tomorrow-heres-the-complete-schedule/ ಈ ಕುರಿತಂತೆ ಕಾರ್ಯಕರ್ತರಿಗೆ ಹಾಗೂ ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿರುವ ಸಿದ್ದರಾಮಯ್ಯ, ಎಮೋಷನಲ್ ವಿಚಾರ ತಿರುಗಿಸುವಲ್ಲಿ ಬಿಜೆಪಿಗರು ನಿಸ್ಸಿಮರು ಯದುವೀರ್ ಒಡೆಯರ್ ಬಗ್ಗೆ ಮಾತನಾಡುವಾಗ ಎಚ್ಚರ ಇರಲಿ, ಮೈಸೂರಿನಲ್ಲಿ ಕಾಂಗ್ರೆಸ್ ಗೆಲ್ಲಿಸೋಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಹೆಜ್ಜೆಯನ್ನು ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಒಡೆಯರ್ ಅವರನ್ನು ಟಾರ್ಗೆಟ್ ಮಾಡುವುದು ಬೇಡ ನಮಗೆ ಏನಿದ್ರೂ ಬಿಜೆಪಿ ಟಾರ್ಗೆಟ್ ಅಷ್ಟೇ. ಬಿಜೆಪಿಯನ್ನು ಮಾತ್ರ ಟಾರ್ಗೆಟ್ ಮಾಡೋಕೆ ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.ನಿಮ್ಮ ಮಾತುಗಳಲ್ಲಿ ಮಾಧ್ಯಮಗಳಲ್ಲಿ ಕೊಡುವಂತಹ ಸ್ಟೇಟ್ಮೆಂಟ್ ಗಳಲ್ಲಿ ಸ್ವಲ್ಪ ಯೋಚನೆ ಇರಲಿ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡಿ ಎಂದು ಮೈಸೂರಿನ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ…

Read More

ಬೆಂಗಳೂರು : ಹೆಣ್ಣು ಮಕ್ಕಳು ಅಂದರೆ ಕುಟುಂಬದ ಕಣ್ಣು ಇದ್ದಂತೆ. ಹೀಗಾಗಿ ಅವರ ಖಾತೆಗೆ ಹಣ ಹಾಕುತ್ತಿದ್ದೇವೆ.ನಾವು ಗಂಡಸರನ್ನು ಯಾವ ಕಾರಣಕ್ಕೂ ನಂಬಲ್ಲ. ವೈನ್ ಶಾಪ್ ಗೆ ಹೋಗಿ ದುಡ್ಡು ಹಾಳು ಮಾಡಿಕೊಳ್ಳುತ್ತಾರೆ ಹೀಗಾಗಿ ಹೆಣ್ಣು ಮಕ್ಕಳಿಗೆ 2000ಗಳನ್ನು ನೀಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹಾಸ್ಯ ಚಟಾಕಿ ಹರಿಸಿದರು. https://kannadanewsnow.com/kannada/bjp-is-like-nasagunni-nuts-siddaramaiah/ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ಗ್ಯಾರಂಟಿ ಬಿಜೆಪಿ ಅವರಿಂದ ಕಾಪಿ ಮಾಡಲಾಗಿದೆ. ಗ್ಯಾರಂಟಿ ಅನುಷ್ಠಾನ ಆಗಲ್ಲ ಅಂತ ಆರೋಪಿಸಿದರು.ಈಗ ಮೋದಿ ಗ್ಯಾರಂಟಿ ಅಂತ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಜಾರಿಯಾದ ಬಳಿಕ 2 ಸಾವಿರ ತಗೊಂಡು ಜನರು ನೆಮ್ಮದಿಯಾಗಿದ್ದಾರೆ ಎಂದರು. https://kannadanewsnow.com/kannada/are-you-taking-bp-tablets-without-a-doctors-advice-beware-get-infected-with-cancer/ ನಮ್ಮ ಗ್ಯಾರೆಂಟಿ ಬಿಜೆಪಿ ಅವರಿಂದ ಕಾಪಿ ಆಗಿದೆ. ಗ್ಯಾರಂಟಿ ಅನುಷ್ಠಾನ ಆಗಲ್ಲ ಅಂತ ಆರೋಪಿಸಿದರು. ಈಗ ಮೋದಿ ಗ್ಯಾರಂಟಿ ಹಂತ ಮಾಡಿಕೊಂಡಿದ್ದಾರೆ.ಮೋದಿಯವರು ಗ್ಯಾರೆಂಟಿ ಜಾರಿ ಮಾಡಕ್ಕಾಗಲ್ಲ ಸರ್ಕಾರ ಬರಬಾರ್ದಾಗುತ್ತೆ ಎಂದಿದ್ದರು.ಈಗ ನಮ್ಮ ಗ್ಯಾರಂಟಿ ನೋಡಿ ಬಿಟ್ಟು ಮಧ್ಯಪ್ರದೇಶದಲ್ಲಿ ಚುನಾವಣೆ ಮುಂಚೆ ಅದನ್ನು ಕೊಟ್ಟರು. https://kannadanewsnow.com/kannada/breaking-state-govt-files-writ-petition-in-sc-against-centre-for-not-providing-drought-relief/ ನಾವು…

Read More

ಬೆಂಗಳೂರು : ಬಿಜೆಪಿಯವರು ನಾ ನಸಗುನ್ನಿ ಕಾಯಿಗಳು ಇದ್ದ ಹಾಗೆ. ಗ್ಯಾರಂಟಿ ಕೊಟ್ಟರೆ ಬಿಜೆಪಿ ಅವರಿಗೆ ಹೊಟ್ಟೆ ಉರಿ. ಬಿಜೆಪಿಯವರು ಬರಿ ಸುಳ್ಳು ಹೇಳುವುದೇ ಬಿಜೆಪಿಯವರ ಮನೆದೇವರು ಎಂದು ಬೆಂಗಳೂರಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು. https://kannadanewsnow.com/kannada/are-you-taking-bp-tablets-without-a-doctors-advice-beware-get-infected-with-cancer/ ಬೆಂಗಳೂರಿನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದರು ಬಿಜೆಪಿಯವರ ಮನೆ ಹಾಳಾಗ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು ಭಾರತ ಮಾತೆ ಮಕ್ಕಳು ಅಂತಾರೆ ನಾವೇನು ಅಲ್ವಾ? ಎಂದು ಕಿಡಿ ಕಾರಿದರು. https://kannadanewsnow.com/kannada/breaking-state-govt-files-writ-petition-in-sc-against-centre-for-not-providing-drought-relief/ ಸ್ವತಂತ್ರ ತಂದುಕೊಟ್ಟ ನಾವು ನಿಜವಾದ ಭಾರತ ಮಾತೆಯ ಮಕ್ಕಳು. ಬ್ರಿಟಿಷರ ಜೊತೆ ಆರೆಸ್ಸೆಸ್ ನವರು ಇದ್ದಿದ್ದು ಅವರು ಹೇಗೆ ಭಾರತ ಮಾತೆ ಮಕ್ಕಳಾಗುತ್ತಾರೆ? ಆರ್ ಎಸ್ ಎಸ್ ಯಾವಾಗ ಹುಟ್ಟಿದೆ ಹೆಡ್ಗೆ ವಾರ್ ಯಾರು ಅಂತ ಗೊತ್ತಿಲ್ಲ ಎಂದು ಆರ್ ಎಸ್ ಎಸ್ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Read More

ಬೆಂಗಳೂರು : ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್​ ಸರ್ಕಾರ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮುಂದೆ ಹಲವು ಬಾರಿ ಮನವಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಇನ್ನೂವರೆಗೂ ಅನುದಾನ ಜಾರಿ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ. https://kannadanewsnow.com/kannada/pm-modi-has-not-fulfilled-any-of-his-promises-of-achhe-din-and-put-rs-15-lakh-in-peoples-accounts-siddaramaiah/ ಇಂದು ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ 5 ತಿಂಗಳಗಳ ಕಾಲ ಕಾದಿದೆ. ಇದೀಗ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಆರ್ಟಿಕಲ್ 32ರ ಅಡಿ ಕೇಂದ್ರದ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದೇವೆ ಬರ ಪರಿಹಾರ ಕೊಡಿಸುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ರಾಜ್ಯದಲ್ಲಿ 223 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದ್ದೇವೆ. ಹಾಗಾಗಿ ಬರ ಪರಿಹಾರಕ್ಕಾಗಿ ಆರ್ಟಿಕಲ್ 32ರ ಅಡಿ ಕೇಂದ್ರದ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದೇವೆ. ಸುಪ್ರೀಂ ಕೋರ್ಟ್…

Read More

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು ದೇಶದಲ್ಲಿ ಅಚ್ಛೇದಿನ್ ಬರುತ್ತದೆ, ಅಲ್ಲದೆ ವಿದೇಶದಿಂದ ಕಪ್ಪು ಹಣ ತಂದು ಜನರ ಖಾತೆಗಳಿಗೆ 15 ಲಕ್ಷ ಹಾಕಲಾಗುತ್ತದೆ ಎಂದು ಹೇಳಿದ್ದರು ಆದರೆ ಯಾವ ಭರವಸೆ ಕೂಡ ಅವರು ಇದುವರೆಗೂ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾವು ಬಿಜೆಪಿಯಂತೆ ಮೋಸ ಸುಳ್ಳು ಭರವಸೆ ನೀಡುವುದಿಲ್ಲ. ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಲ್ಲ ಎಂದು ಬಾಯಿ ಬಡಿದುಕೊಂಡರು. ಗ್ಯಾರೆಂಟಿ ಯೋಜನೆಗಳಿಂದ ಖಜಾನೆ ಖಾಲಿ ಆಗುತ್ತೆ ಅಂತ ಹೇಳಿದ್ರು. ಪ್ರಧಾನಿ ಮೋದಿಯವರೇ ಗ್ಯಾರಂಟಿ ಯೋಜನೆ ಜಾರಿ ಅಸಾಧ್ಯ ಅಂತ ಹೇಳಿದ್ದರು. ಗ್ಯಾರಂಟಿ ಯೋಜನೆ ಜಾರಿಯಾದರೆ ಆರ್ಥಿಕವಾಗಿ ರಾಜ್ಯ ದಿವಾಳಿ ಆಗುತ್ತೆ ಅಂತ ಹೇಳಿದ್ರು ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪ್ರಧಾನಿ ಮೋದಿ ಕೊಟ್ಟ ಮಾತನ್ನು ಇದುವರೆಗೂ ಈಡೇರಿಸಿಲ್ಲ.ಅಚ್ಚೆ ದಿನ್ ಬರುತ್ತೆ ಅಂದ್ರು ಖಾತೆಗಳಿಗೆ 15 ಲಕ್ಷ ಹಣ ಹಾಕುತ್ತೇವೆ ಅಂದರು. ಅಲ್ಲದೆ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು…

Read More