Author: kannadanewsnow05

ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟಾ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದು ವಿದೇಶಗಳಿಂದ ಚಿನ್ನ ತರುವುದು ಹಾಗೂ ಡ್ರಗ್ಸ್ ತರುವುದು ಹೊಸದೇನಲ್ಲ ಬಿಡಿ. ಈ ಕುರಿತು ಕೇಂದ್ರದ ಇಂಟಲಿಜೆನ್ಸ್ ಸಂಸ್ಥೆ ಇದೆ ತನಿಖೆ ನಡೆಸುತ್ತಿದೆ 15 ದಿನದಲ್ಲಿ ಎಲ್ಲವೂ ಹೊರ ಬರಲಿದೆ ಎಂದು ತಿಳಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ಚಿನ್ನ ತರೋದು ಡ್ರಗ್ಸ್ ತರೋದು ಹೊಸದೇನು ಅಲ್ಲ. ಫೋನ್ ಮಾಡಿ ಬಿಡಿ ಅಂತ ನಾವು ಹೇಳುತ್ತೇವೆ. ಬಿಜೆಪಿಯವರು ಹೇಳುತ್ತಾರೆ. ಇಂತಹ ಪ್ರಕರಣದಲ್ಲಿ ರಾಜಕಾರಣಿ ಅಧಿಕಾರಿಗಳ ಮಕ್ಕಳು ಸಿಕ್ಕಿದ್ದಾರೆ ಎಂದು ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ರಾಜಕಾರಣಿ ಮಕ್ಕಳಿ ಅಧಿಕಾರಿಗಳ ಮಕ್ಕಳು ಇರೋದು ಸಹ ಹೊಸದಲ್ಲ. ಇನ್ನು 15 ದಿನ ಕಾಯಿರಿ ಎಲ್ಲವೂ ಹೊರಗಡೆ ಬರುತ್ತದೆ. ಕಾನೂನಲ್ಲಿ ಏನು ಶಿಕ್ಷೆ…

Read More

ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೊನೆಗೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದೆ. ಪಾಲಿಕೆಯ ನೂತನ ಮೇಯರ್ ಆಗಿ ಮಂಗೇಶ್ ಪವಾರ್ ಹಾಗೂ ಉಪಮೇಯರ್ ಆಗಿ ವಾಣಿವಿಲಾಸ್ ಜೋಶಿ ಅವರು ಆಯ್ಕೆಯಾಗಿದ್ದಾರೆ. ಬೆಳಗಾವಿಯ ನೂತನ ಮೇಯರ್ ಆಗಿ ಮಂಗೇಶ್ ಪವಾರ್, ಉಪ ಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿ ಕೈ ಎತ್ತುವ ಮೂಲಕ ಆಯ್ಕೆಗೆ ಅವಕಾಶ ನೀಡಿದ್ದರು. ಮಂಗೇಶ್ ಪರವಾಗಿ 40 ಮತಗಳು ವಿರುದ್ಧವಾಗಿ 5 ಮತಗಳು ಚಲಾವಣೆ ಆಗಿವೆ. ಅದೇ ರೀತಿ ವೀಣಾ ಪರವಾಗಿ 40 ಹಾಗು ವಿರುದ್ಧವಾಗಿ 19 ಮತಗಳು ಚಲಾವಣೆ ಆಗಿವೆ. ಮೂರನೇ ಅವಧಿಗೆ ಮೇಯರ್ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಇದೀಗ ಬೆಳಗಾವಿಯ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತೀವ್ರ ಮುಖಭಂಗ ಆಗಿದ್ದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಜಯಭೇರಿ ಬಾರಿಸಿದೆ. ಸದಸ್ಯತ್ವ ರದ್ದಾದರು ಬಿಜೆಪಿಗೆ ಗೆಲುವು ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ದಕ್ಕೆ…

Read More

ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟಾ ಮಾಡಿದ ಪ್ರಕರಣದಲ್ಲಿ ಸದ್ಯ ನಟಿ ರನ್ಯ ರಾವ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೀಗ ನಟಿ ರನ್ಯಾರಾವ್ ಕಾರು ಚಾಲಕ ದೀಪಕ ಕೂಡ ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ಕಾರು ಚಾಲಕ ದೀಪಕ್ ನನ್ನು ಅರೆಸ್ಟ್ ಮಾಡಿದ್ದಾರೆ. ನಟಿ ರನ್ಯಾ ರಾವ್ ಕಾರು ಚಾಲಕನಾಗಿದ್ದಂತಹ ದೀಪಕ್, ಹಲವು ಜನರ ಬಳಿ ಶೇರು ಮಾರುಕಟ್ಟೆಯಲ್ಲಿ ಹಣ ಡಬಲ್ ಮಾಡುವುದಾಗಿ ಹೇಳಿ ಅವರಿಂದ ಹಣ ಪಡೆದು ವಂಚನೆ ಎಸಗಿದ್ದ. ಈ ಕುರಿತು ಜನರು ದೂರು ನೀಡಿದ್ದರು. ಜನರಿಂದ ಹಣ ಪಡೆದು ಆರು ತಿಂಗಳಿನಿಂದ ರನ್ಯಾರಾವ್ ಕಾರು ಚಾಲಕ ದೀಪಕ್ ನಾಪತ್ತೆಯಾಗಿದ್ದ. ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರು ದೀಪಕ್ ನಾನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Read More

ಆಂಧ್ರಪ್ರದೇಶ : ಇಬ್ಬರು ಮಕ್ಕಳು ಶಾಲೆಯ ಫೀಸ್ ಕಟ್ಟೋಕೆ ಆಗದೆ ಪಾಪಿ ತಂದೆಯೊಬ್ಬ, ಮಕ್ಕಳಿಬ್ಬರನ್ನು ಕೊಂದು ಬಳಿಕ ಡೆತ್ ನೋಟ್ ಬರೆದಿಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ನಡೆದಿದೆ. ಮಕ್ಕಳದ ಜೋಶಿಲ್ ಹಾಗು ನಿಖಿಲನ್ನು ಪಾಪಿ ತಂದೆ ಚಂದ್ರಕಿಶೋರ್ ಕೊಲೆ ಮಾಡಿದ್ದಾನೆ. ಕಳೆದ ವರ್ಷ ಇಬ್ಬರೂ ಮಕ್ಕಳಿಗೆ ಎರಡು ಲಕ್ಷ ಫೀಸ್ ಕಟ್ಟಿದ್ದರು. ಈ ವರ್ಷ ಫೀಸ್ ಕಟ್ಟಲು ಆಗದೆ ಚಂದ್ರಕಿಶೋರ್ ಒದ್ದಾಡಿದ್ದಾರೆ. ಇದೇ ವಿಚಾರಕ್ಕೆ ಮನೆಯಲ್ಲಿ ದಿನಾಲು ಗಲಾಟೆ ನಡಿತಾ ಇತ್ತು. ಇದೇ ಕೋಪಕ್ಕೆ ಮಕ್ಕಳನ್ನು ತಂದೆ ಚಂದ್ರಕಿಶೋರ್ ಕೊಲೆಗೈದಿದ್ದಾನೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ಡೆತ್ ನೋಟ್ ಬರೆದಿದ್ದಾನೆ. ಮಕ್ಕಳಿಗೆ ಸ್ಕೂಲ್ ಫೀಸ್ ಕಟ್ಟಕ್ಕಾಗದೆ ಹೇಯ ಕೃತ್ಯ ನಡೆದಿದೆ. ಮಕ್ಕಳ ಕೈ ಮತ್ತು ಕಾಲು ಕಟ್ಟಿ ಬಕೆಟ್ ನಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ. ಪತ್ನಿಗೆ ಮಕ್ಕಳಿಗೆ ಸಮವಸ್ತ್ರ ಹೊಲಿಸಲು ಟೇಲರ್ ಬಳಿ ಕರೆದುಕೊಂಡು ಹೋಗುತೇನೆ. ನೀನು ಇಲ್ಲಿಯೇ ಇರು…

Read More

ಮೈಸೂರು : ಸಾಮಾನ್ಯವಾಗಿ ಕ್ರಿಕೆಟ್ ಆಡುವಾಗ ಎದುರು ಬದುರು ತಂಡದ ಆಟಗಾರರು ಜಗಳ ಆಡುವುದನ್ನು ನೋಡಿದ್ದೇವೆ. ಇದು ಅಂತರಾಷ್ಟ್ರೀಯ ಕ್ರಿಕೆಟ್ ಗೂ ಹೊರತಾಗಿಲ್ಲ. ಆದರೆ ಇದೀಗ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ವಡ್ಡರಗುಡಿಯಲ್ಲಿ ಯುವಕನೊಬ್ಬ ಸೋಲುವ ಮ್ಯಾಚ್ ಗೆಲ್ಲಿಸಿದ್ದಕ್ಕೆ ಆತನನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹೌದು ಮೈಸೂರು ಜಿಲ್ಲೆಯ ಹೆಚ್ಡಿ ಕೋಟೆ ತಾಲೂಕಿನ ವಡ್ಡರಗುಡಿ ಗ್ರಾಮದ ದಿವ್ಯ ಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕಳೆದ ಫೆಬ್ರವರಿ 24 ರಂದು ಬೀಚನಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆದಿತ್ತು. ನೇರಳೆ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಜೆಪಿ ವಾರಿಯರ್ಸ್ ತಂಡದ ಪರವಾಗಿ ದಿವ್ಯ ಕುಮಾರ್ ಕ್ರಿಕೆಟ್ ಆಡಿದ್ದ. ಅಲ್ಲದೆ ಫೈನಲ್ ಪದ್ಯದಲ್ಲಿ ಕೂಡ ದಿವ್ಯ ಕುಮಾರ್ ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆಲ್ಲಿಸಿದ್ದ. ಡೆವಿಲ್ಸ್ ಸೂಪರ್ ಕಿಂಗ್ ತಂಡದ ವಿರುದ್ಧ ಫೈನಲ್ ಪಂದ್ಯ ನಡೆದಿತ್ತು ಪಾರ್ಟಿ ಮಾಡಿತ್ತು. ಪಾರ್ಟಿ ಮಾಡಿದ ದಿನವೇ ಆತನ ಮೇಲೆ ಹಲ್ಲೆ ನಡೆಸಲಾಗಿತ್ತು.…

Read More

ಶಿವಮೊಗ್ಗ : ಇತ್ತೀಚಿಗೆ ಬೆಂಗಳೂರಲ್ಲಿ ಕುಡಿಯುವ ನೀರು ಹಿಡಿಯುವ ವೇಳೆ ವಿದ್ಯುತ್ ಪ್ರವಹಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ, ಇದೀಗ ಶಿವಮೊಗ್ಗದಲ್ಲಿ ವಿದ್ಯುತ್ ತಗುಲಿ ಯುವತಿಯೊರ್ವಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ನಿಸರ್ಗ (18) ಎಂದು ತಿಳಿದುಬಂದಿದೆ. ನಿಸರ್ಗ ತಮ್ಮ ಮನೆಯಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ಗೆ ನೀರು ಬಿಡುವ ಸಲುವಾಗಿ ಮೋಟಾರ್‌ ಆನ್‌ ಮಾಡಲು ತೆರಳಿದ್ದರು. ಈ ವೇಳೆ ಅವರಿಗೆ ಕರೆಂಟ್‌ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ. ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮೈಸೂರು : ಆತನಿಗೆ ಮದುವೆಯಾಗಿದ್ದರು ಸಹ ಇನ್ಸ್ಟಾಗ್ರಾಮ್ ನಲ್ಲಿ ಮತ್ತೊಬ್ಬ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಬಳಿಕ ಭೀಕರವಾಗಿ ಕೊಲೆಯಾದ ಘಟನೆ ಮೈಸೂರು ತಾಲೂಕಿನ ಅನುಗನಹಳ್ಳಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಸೂರ್ಯ ಎಂದು ತಿಳಿದುಬಂದಿದೆ. ಮದುವೆಯಾಗಿದ್ದರು ಸಹ ಅನೈತಿಕ ಸಂಬಂಧ ಹೊಂದಿದ ಸೂರ್ಯನನ್ನು ಹತ್ಯೆ ಮಾಡಲಾಗಿದೆ ಇನ್ಸ್ಟಾಗ್ರಾಮ್ ನಲ್ಲಿ ಶ್ವೇತಾ ಎಂಬಾಕೆಯನ್ನು ಸೂರ್ಯ ಪರಿಚಯಿಸಿಕೊಂಡಿದ್ದ. ಇದರಿಂದ ಬೇಸತ್ತು ಸೂರ್ಯನ ಪತ್ನಿ ಆಗುತ್ತಾ ತಾಯಿ ಮನೆ ಬಿಟ್ಟು ಹೋಗಿದ್ದರು. ಇಬ್ಬರು ಜೊತೆಗಿರುವ ಖಾಸಗಿ ಫೋಟೋ ಸೂರ್ಯ ಸ್ಟೇಟಸ್ ಗೆ ಹಾಕಿದ್ದ. ಕೆಲ ದಿನಗಳಿಂದ ಹಣ ಹಾಗೂ ಆಸ್ತಿಗಾಗಿ ಶ್ವೇತ ಸೂರ್ಯನನ್ನು ಪೀಡಿಸಿದ್ದಾಳೆ. ಹಣಕ್ಕೆ ಬಿಡಿಸುತ್ತಿರುವ ಕುರಿತು ಸೂರ್ಯ ತನ್ನ ಕುಟುಂಬಸ್ಥರಿಗೂ ತಿಳಿಸಿದ್ದ.ನಿನ್ನೆ ರಾತ್ರಿ ಶ್ವೇತಾ ಜೊತೆ ತೋಟದಲ್ಲಿದ್ದ ಸೂರ್ಯ ಇಂದು ಬೆಳಗಾಗುವಷ್ಟರಲ್ಲಿ ಕೊಲೆಯಾಗಿದ್ದಾನೆ. ಶ್ವೇತಾಳೆ ಕೊಲೆ ಮಾಡಿದ್ದಾಳೆ ಎಂದು ಕುಉಂಬದವರು ಆರೋಪಿಸಿದ್ದಾರೆ. ಮೈಸೂರಿನ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹುಬ್ಬಳ್ಳಿ : ಈ ತಿಂಗಳ ಅಂತ್ಯದಲ್ಲಿ ಇಬ್ಬರು ST ಸೋಮಶೇಖರ್ ಹಾಗು ಶಿವರಾಂ ಹೆಬ್ಬಾರ್ ವಿರುದ್ಧ ಶಿಸ್ತು ಕ್ರಮ ಆಗುತ್ತದೆ. ಪಕ್ಷದ್ರೋಹ ಕೆಲಸ ಮಾಡಿದ ಇಬ್ಬರೂ ಶಾಸಕರು ವಿರುದ್ಧ ಶಿಸ್ತು ಕ್ರಮವಾಗುತ್ತದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿರುವ ಎಲ್ಲಾ ಗೊಂದಲಕ್ಕೆ ಈ ತಿಂಗಳ ಅಂತ್ಯಕ್ಕೆ ತೆರೆ ಬೀಳುತ್ತದೆ ವಿಧಾನಸಭೆ ಚುನಾವಣೆಯ ನಂತರ ಶಾಸಕರಾದ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ನಿರಂತರವಾಗಿ ಪಕ್ಷದ್ರೋಹ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ಸಿನ ಡಿನ್ನರ್ ಪಾರ್ಟಿಗೆ ಹೋಗಿರುವ ವಿಚಾರ ದೊಡ್ಡದೇನು ಅಲ್ಲ. ಅದಕ್ಕಿಂತ ಹೆಚ್ಚಿನ ಪಕ್ಷ ವಿರೋಧಿ ಚಟುವಟಿಕೆ ಅವರಿಬ್ಬರು ಮಾಡಿದ್ದಾರೆ. ಈ ಕುರಿತು ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಟೀಲ್ ಗೆ ಈ ಕುರಿತು ವರದಿ ಸಲ್ಲಿಕೆಯಾಗಿದ್ದು, ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದಂತಹ ವಿಡಿಯೋ ಪೇಪರ್…

Read More

ಹಾವೇರಿ : ಹಾವೇರಿಯಲ್ಲಿ ಸ್ವಾತಿ ಬ್ಯಾಡಗಿ ಎನ್ನುವ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಗೇರಿ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಹಾಗಾಗಿ ಬಂಧಿತರ ಸಂಖ್ಯೆ ಇದೀಗ 3ಕ್ಕೆ ಏರಿಕೆಯಾಗಿದೆ. ಕೊಲೆಯಾದ ಯುವತಿಯನ್ನು ಸ್ವಾತಿ ರಮೇಶ್ ಬ್ಯಾಡಗಿ (22) ಎಂದು ತಿಳಿಬಂದಿದೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಆರೋಪಿ ನಯಾಜ್ ನನ್ನು ಅರೆಸ್ಟ್ ಮಾಡಲಾಗಿದೆ. ಹತ್ಯೆ ಪ್ರಕರಣದಲ್ಲಿ ನಯಾಜ್ ಇರುವ ಅನುಮಾನ ವ್ಯಕ್ತವಾಗಿದೆ. ಮೃತ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ನಿವಾಸಿಯಾಗಿದ್ದು, ಆರೋಪಿ ನಯಾಜ್ ನನ್ನು ಹಲಗೇರಿ ಠಾಣೆ ಪೋಲಿಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಗಣಾಚಾರಿ ಹಾಗು ಮತ್ತೊರ್ವನನ್ನು ಅರೆಸ್ಟ್ ಮಾಡಿದ್ದಾರೆ. ಸ್ವಾತಿ ಮಾರ್ಚ್ 3ರಂದು ಇವರನ್ನು ಭೇಟಿಯಾಗಿದ್ದಳು. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕು ಬಳಿ ಮೂವರನ್ನು ಭೇಟಿಯಾಗಿದ್ದಾಗ ಇವರ ಮಧ್ಯ ಜಗಳ ಆಗಿದೆ. ಈ ವೇಳೆ ಮೂವರು ಸ್ವಾತಿಯನ್ನು ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಬಿಸಾಡಿರುವ ಅನುಮಾನ…

Read More

ಕೋಲ್ಹಪುರ : ಇತ್ತೀಚಿಗೆ ಬೆಳಗಾವಿಯಲ್ಲಿ ಕರ್ನಾಟಕದ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದ ಘಟನೆ ಎರಡು ರಾಜ್ಯಗಳ ಬಸ್ ಸ್ಥಗಿತವಾಗುವ ಮಟ್ಟಿಗೆ ಈ ಒಂದು ಘಟನೆ ದೊಡ್ಡದಾಗಿತ್ತು ಇದೀಗ ಮಹಾರಾಷ್ಟ್ರದಲ್ಲಿ ಮತ್ತೆ ಪುಂಡರು ಬಾಲ ಬಿತ್ತಿದ್ದು, ಕೆ ಎಸ್ ಆರ್ ಟಿ ಸಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿಯಲ್ಲಿ ನಡೆದಿದೆ. ಹೌದು ಕರ್ನಾಟಕ ಬಸ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆಸಿದ್ದು, ಮಹಾರಾಷ್ಟ್ರದ ಇಂಚಲಕರಂಜಿ ಬಳಿ ಈ ಒಂದು ಘಟನೆ ನಡೆದಿದೆ. ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿಯಲ್ಲಿ ಕಲ್ಲು ತೂರಾಟ ನಡೆಸುತ್ತಿದ್ದಂತೆ ಬಸ್ ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಕಲ್ಲುತೂರಾಟಕ್ಕೆ ನಿಖರವಾದ ಅಂತಹ ಕಾರಣ ತಿಳಿದು ಬಂದಿಲ್ಲ. ಕಲ್ಲುತೂರಾಟದಿಂದ ಬಸ್ ಹಿಂದಿನ ಗಾಜು ಪುಡಿಪುಡಿ ಆಗಿದೆ.

Read More