Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಬಳ್ಳಾರಿ: ನಗರದ ಹೊರವಲಯದ ಅಂದ್ರಾಳ ಹಳ್ಳದಲ್ಲಿ ಮಹಿಳೆಯೊಬ್ಬರ ಮೃತದೇಹ ನಿಗೂಢ ರೀತಿಯಲ್ಲಿ ಪತ್ತೆಯಾಗಿದ್ದು, ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಮೃತರನ್ನು ಕೌಲ್ ಬಜಾರ್ ನಿವಾಸಿ, 38 ವರ್ಷದ ಅನಿಷ ಫಾತಿಮಾ ಎಂದು ಗುರುತಿಸಲಾಗಿದೆ. ಹಳ್ಳದ ಪಕ್ಕದಲ್ಲಿರುವ ಜಾಲಿ ಬೇಲಿಯ ಪೊದೆಯೊಂದರಲ್ಲಿ ಇವರ ಶವ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಮೃತ ಅನಿಷ ಫಾತಿಮಾ ಅವರು ಸ್ಥಳೀಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ (ಕರ್ನಾಟಕ ಗ್ರಾಮೀಣ ಬ್ಯಾಂಕ್) ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಪ್ರತಿದಿನದಂತೆ ಕೆಲಸ ಮುಗಿಸಿಕೊಂಡು ಹೋಗಿದ್ದ ಮಹಿಳೆ, ಮರುದಿನವೇ ಈ ರೀತಿ ಶವವಾಗಿ ಪತ್ತೆಯಾಗಿರುವುದು ಕುಟುಂಬಸ್ಥರನ್ನು ಹಾಗೂ ಸಹೋದ್ಯೋಗಿಗಳನ್ನು ತೀವ್ರ ಆಘಾತಕ್ಕೆ ದೂಡಿದೆ. ಪಾರ್ಟಿಗೆ ಹೋಗಿದ್ದ ಮಹಿಳೆ: ಲಭ್ಯವಿರುವ ಮಾಹಿತಿ ಪ್ರಕಾರ, ಮೃತ ಅನಿಷ ಫಾತಿಮಾ ಅವರು ನಿನ್ನೆ ರಾತ್ರಿ ತಮ್ಮ ಬ್ಯಾಂಕ್ ಸಿಬ್ಬಂದಿಗಳ ಜೊತೆಗೆ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಪಾರ್ಟಿ ಮುಗಿದ ನಂತರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಅನಿಷಾ ತಮ್ಮ ಪತಿಗೆ ಫೋನ್ ಕರೆ ಮಾಡಿ ಮಾತನಾಡಿದ್ದರು.…

Read More

ಯಾದಗಿರಿ : ರಾಜ್ಯದಲ್ಲಿ ಫೈನಾನ್ಸಿಬ್ಬಂದಿ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದ್ದು, ಮಹೇಂದ್ರ ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಾಚಾಪುರ ಗ್ರಾಮದಲ್ಲಿ ನಡೆದಿದೆ. ಕಾಚಪುರ ಗ್ರಾಮದ ಮನೆಯಲ್ಲಿ ಸೋಮಪ್ಪ (30) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಮಹೇಂದ್ರ ಫೈನಾನ್ಸ್ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೊಲೆರೋ ಪಿಕಪ್ ವಾಹನದ ಮೇಲೆ ಸೋಮಪ್ಪ ಸಾಲ ಪಡೆದಿದ್ದ ಕಳೆದ ಐದು ತಿಂಗಳಿಂದ ಸೋಮಪ್ಪ ಸಾಲದ ಕಂತನು ಕಟ್ಟಿರಲಿಲ್ಲ ಕಂತು ಕಟ್ಟುವಂತೆ ಮನೆಗೆ ಬಂದು ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದರು ಎಂದು ಸೋಮಪ್ಪ ಹೇಳಿದ್ದ ಕಿರುಕುಳ ಸಹಿಸಲಾಗಿದೆ ಮನೆಯಲ್ಲಿ ಸೋಮಪ್ಪ ನೇಣಿಗೆ ಶರಣಾಗಿದ್ದಾನೆ. ಸುರಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More

ಒಡಿಶಾ :ಒಡಿಶಾದಲ್ಲಿ ಭ್ರಷ್ಟಾಚಾರದ ಬೃಹತ್‌ ಜಾಲವೊಂದನ್ನು ಜಾಗೃತ ದಳ (ವಿಜಿಲೆನ್ಸ್) ಭೇದಿಸಿದ್ದು, ಕೇವಲ 6,000 ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದ ಜೂನಿಯರ್ ಇಂಜಿನಿಯರ್ ಒಬ್ಬರ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಕಂಡು ಅಧಿಕಾರಿಗಳೇ ಕಣ್ಣುಪಾclone ಮಾಡಿದ್ದಾರೆ. ಕೇವಲ ಕೆಲವೇ ವರ್ಷಗಳಲ್ಲಿ ಈತ ಇಷ್ಟೊಂದು ಪ್ರಮಾಣದ ಸಂಪತ್ತು ಗಳಿಸಿದ್ದು ಹೇಗೆ ಎಂಬುದು ಸಾರ್ವಜನಿಕರಲ್ಲಿ ತೀವ್ರ ಆಶ್ಚರ್ಯ ಮೂಡಿಸಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ, ಒಡಿಶಾ ವಿಜಿಲೆನ್ಸ್ ಅಧಿಕಾರಿಗಳ ತಂಡ ಜೂನಿಯರ್‌ ಎಂಜಿನಿಯರ್ ಬೈಕುಂಠ ನಾಥ್ ಬೆಹೆರಾಗೆ ಸಂಬಂಧಿಸಿದ ಒಟ್ಟು 9 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ಭುವನೇಶ್ವರದ ವಿಶೇಷ ವಿಜಿಲೆನ್ಸ್ ಕೋರ್ಟ್‌ ಜಾರಿಗೊಳಿಸಿದ್ದ ಸರ್ಚ್ ವಾರಂಟ್‌ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆದಿದ್ದು, ಬೆಹೆರಾ ಅವರ ಬ್ಯಾಂಕ್ ಲಾಕರ್‌ಗಳನ್ನು ತಪಾಸಣೆ ನಡೆಸಿದಾಗ ಬರೋಬ್ಬರಿ 2 ಕೋಟಿ ರೂಪಾಯಿ ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಜಿಲೆನ್ಸ್ ತಂಡವು ಬೆಹೆರಾ ಅವರ ಚಂದ್ರಶೇಖರಪುರ, ಶೈಲಶ್ರೀ ವಿಹಾರ್, ಕಾನನ್ ವಿಹಾರ್, ಜಾಜ್‌ಪುರ ಜಿಲ್ಲೆಯ ಧರ್ಮಸಾಲ,…

Read More

ಕಲಬುರ್ಗಿ : ಕಲ್ಬುರ್ಗಿಯ ಪ್ರಾಣಿ ಸಂಗ್ರಹಾಲಯದಲ್ಲಿ ಅಪರೂಪದ ಘಟನೆ ನಡೆದಿದ್ದು, ಪ್ರಾಣಿ ಸಂಗ್ರಹಾಲಯದಿಂದಲೇ ಗೋಡೆಹಾರಿ ಜಿಂಕೆಗಳು ಎಸ್ಕೇಪ್ ಆಗಿವೆ. ಕಲ್ಬುರ್ಗಿ ನಗರದ ಪ್ರಾಣಿ ಸಂಗ್ರಹಾಲಯದಲ್ಲಿ ಈ ಒಂದು ಘಟನೆ ನಡೆದಿದ್ದು, ಗೋಡೆ ಹಾರಿ ಮೂರು ಚುಕ್ಕೆ ಜಿಂಕೆಗಳು ಹೊರಗೆ ಹೋಗಿದ್ದು ಮೂರು ಜಿಂಕೆಗಳ ಪೈಕಿ ಒಂದು ಚುಕ್ಕೆ ಜಿಂಕೆ ಮನೆಗೆ ನುಗ್ಗಿದೆ. ವಿಠಲ ನಗರದ ಮನೆ ಒಳಗೆ ಚುಕ್ಕೆ ಜಿಂಕೆ ನುಗ್ಗಿದೆ. ಬಿಗಿ ಭದ್ರತೆ ನಡುವೆ ಕೂಡ ಚುಕ್ಕೆ ಜಿಂಕೆಗಳು ಗೋಡೆಹಾರಿ ಎಸ್ಕೇಪ್ ಆಗಿವೆ. ಅರಣ್ಯ ಇಲಾಖೆ ಅಧಿಕಾರಿಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಬಲೆ ಮೂಲಕ ಜಿಂಕೆಯನ್ನು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಮತ್ತೆ ಪ್ರಾಣಿ ಸಂಗ್ರಹಾಲಯಕ್ಕೆ ತಂದು ಬಿಟ್ಟಿದ್ದು ಇನ್ನೂ ಉಳಿದ ಎರಡು ಜಿಂಕೆಗಳು ಎಲ್ಲಿವೆ ಎಂದು ಇನ್ನೂ ಮಾಹಿತಿ ತಿಳಿದು ಬಂದಿಲ್ಲ ಇನ್ನು ಎರಡು ಕೆಜಿ ಗಳಿಗಾಗಿ ಅರಣ್ಯ ಸಿಬ್ಬಂದಿಗಳು ಶೋಧಕರೆ ಮುಂದುವರೆಸಿದ್ದಾರೆ.

Read More

ಬಳ್ಳಾರಿ: ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಇದರ ಬೆನ್ನಲ್ಲೇ ನಗರದ ಹೊರವಲಯದಲ್ಲಿ ಶೋಚನೀಯ ಘಟನೆಯೊಂದು ಸಂಭವಿಸಿದೆ. ಇಲ್ಲಿನ ಅಂದ್ರಾಳ್ ಹಳ್ಳದಲ್ಲಿ ಭಾನುವಾರ ಬೆಳಗ್ಗೆ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಜಿಲ್ಲೆಯ ಜನತೆಯಲ್ಲಿ ತೀವ್ರ ಆತಂಕ ಮತ್ತು ವಿಷಾದವನ್ನು ಉಂಟುಮಾಡಿದೆ. ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳದಲ್ಲಿ ಉಂಟಾದ ಭೀಕರ ಪ್ರವಾಹದ ರಭಸಕ್ಕೆ ಮಹಿಳೆ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿಯಿಡೀ ಸುರಿದ ಆರ್ಭಟದ ಮಳೆ ಶನಿವಾರ ರಾತ್ರಿ ಬಳ್ಳಾರಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವಾತಾವರಣ ಸಂಪೂರ್ಣವಾಗಿ ಬದಲಾಗಿ, ಗುಡುಗು ಸಹಿತ ಭಾರಿ ಮಳೆಯಾಗಿತ್ತು. ಗಂಟೆಗಳ ಕಾಲ ಸತತವಾಗಿ ಸುರಿದ ಮಳೆಯ ಆರ್ಭಟಕ್ಕೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಮಳೆಯ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ನಗರದ ಹೊರವಲಯದ ಪ್ರಮುಖ ಜಲಮೂಲವಾದ ಅಂದ್ರಾಳ್ ಹಳ್ಳವು ಮೈದುಂಬಿ, ಅಪಾಯದ ಮಟ್ಟ ಮೀರಿ ತೀವ್ರ ರಭಸದಿಂದ ಹರಿಯುತ್ತಿತ್ತು. ಬೆಳಗ್ಗೆ ಬೆಳಕಿಗೆ ಬಂದ ದುರಂತ ಭಾನುವಾರ ಮುಂಜಾನೆ…

Read More

ನವದೆಹಲಿ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆಯ ಕುರಿತು ಆತಂಕ ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅನಿವಾಸಿ ಭಾರತೀಯರನ್ನು ಗುರಿtarget ಮಾಡಿ ನಡೆಯುತ್ತಿರುವ ದಾಳಿಗಳ ಸರಣಿಗೆ ಮತ್ತೊಂದು ದುರಂತ ಸೇರ್ಪಡೆಯಾಗಿದೆ. ಅಮೆರಿಕಾದಲ್ಲಿ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ತೆಲಂಗಾಣ ಮೂಲದ 28 ವರ್ಷದ ಭಾರತೀಯ ಯುವಕನೊಬ್ಬ ಭೀಕರವಾಗಿ ಬಲಿಯಾಗಿದ್ದಾನೆ. ಕೊಲೆಯಾದ ದುರ್ದೈವಿ ಯುವಕನನ್ನು ತೆಲಂಗಾಣ ಮೂಲದ ಅನ್ಶುಲ್ ಕುಂಚಾ (28) ಎಂದು ಗುರುತಿಸಲಾಗಿದೆ. ಅಮೆರಿಕಾದ ಪೆನ್ಸಿಲ್ವೇನಿಯಾ ರಾಜ್ಯದ ಫಿಲಾಡೆಲ್ಫಿಯಾದಲ್ಲಿ ಈ ಘಟನೆ ನಡೆದಿದ್ದು, ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದ ಯುವಕ ಹೀಗೆ ಅಪರಿಚಿತರ ಗುಂಡಿಗೆ ಬಲಿಯಾಗಿರುವುದು ಆತನ ಕುಟುಂಬಸ್ಥರನ್ನು ಹಾಗೂ ಭಾರತೀಯ ಸಮುದಾಯವನ್ನು ತೀವ್ರ ಆಘಾತಕ್ಕೆ ದೂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಅನ್ಶುಲ್ ಕುಂಚಾ ಅವರು ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ (MNC) ಪೂರ್ಣಾವಧಿ ಉದ್ಯೋಗಿಯಾಗಿದ್ದರು. ಆದರೆ, ವಾರಾಂತ್ಯದ ದಿನಗಳಲ್ಲಿ (ವೀಕೆಂಡ್) ಬಿಡುವಿನ ವೇಳೆಯಲ್ಲಿ ಹೆಚ್ಚುವರಿ ಆದಾಯಕ್ಕಾಗಿ ಪಿಜ್ಜಾ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಅವರು ವಾರಾಂತ್ಯದಲ್ಲಿ ಪಿಜ್ಜಾ ತಲುಪಿಸುವ…

Read More

ರಾಯಚೂರು: ರಾಜ್ಯದಲ್ಲಿ ಕಳ್ಳರು ಮತ್ತು ದರೋಡೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮುಗ್ಧ ಜನರನ್ನು ನಂಬಿಸಿ, ವಿಭಿನ್ನ ತಂತ್ರಗಳನ್ನು ಬಳಸಿ ಹಣ ದೋಚುವ ಜಾಲಗಳು ಸಕ್ರಿಯವಾಗಿವೆ. ಇದಕ್ಕೆ ಪುಷ್ಟಿ ನೀಡುವಂತೆ ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಆಘಾತಕಾರಿ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ತರಕಾರಿ ಖರೀದಿಸುವ ನೆಪದಲ್ಲಿ ಬಂದ ಖದೀಮರು ವ್ಯಾಪಾರಿಯೊಬ್ಬರಿಂದ ಬರೋಬ್ಬರಿ ಒಂದು ಲಕ್ಷ ರೂಪಾಯಿಯನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ. ಮಸ್ಕಿ ಪಟ್ಟಣದಲ್ಲಿ ನಡೆದ ಖದೀಮರ ಆಟ: ಈ ದೆವ್ವದಂತಹ ಕೃತ್ಯ ನಡೆದಿರುವುದು ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ. ಮಸ್ಕಿ ಪಟ್ಟಣದ ಪ್ರಮುಖ ರಸ್ತೆಯೊಂದರಲ್ಲಿರುವ ತರಕಾರಿ ಅಂಗಡಿಯೇ ಈ ದರೋಡೆಕೋರರ ಟಾರ್ಗೆಟ್ ಆಗಿತ್ತು. ಎಂದಿನಂತೆ ವ್ಯಾಪಾರದಲ್ಲಿ ತೊಡಗಿದ್ದ ತರಕಾರಿ ಮಾಲೀಕನ ಬಳಿಗೆ ಐದು ಜನರ ಗ್ಯಾಂಗ್‌ ಒಂದು ಗ್ರಾಹಕರ ಸೋಗಿನಲ್ಲಿ ಎಂಟ್ರಿ ಕೊಟ್ಟಿದೆ. ಮೇಲ್ನೋಟಕ್ಕೆ ಭಕ್ತರಂತೆ ನಟಿಸಿದ ಇವರು, ವ್ಯಾಪಾರಿಯನ್ನು ನಂಬಿಸಲು ಒಂದು ಕಥೆಯನ್ನೂ ಕಟ್ಟಿದ್ದಾರೆ. ಮಲ್ಲಯ್ಯನ ದರ್ಶನದ ನೆಪ, ತರಕಾರಿ ಖರೀದಿ: ಅಂಗಡಿಗೆ ಬಂದ ಐದು ಜನ ಅಪರಿಚಿತರು,…

Read More

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಸಕ್ತಿದಾಯಕ ವಿದ್ಯಮಾನ ಜರುಗಿದ್ದು, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ಕಾರ್ಯಕರ್ತರಿಗೆ ಬಹಿರಂಗವಾಗಿಯೇ ಮುಕ್ತ ಆಹ್ವಾನ ನೀಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ಕಾರ್ಯಕರ್ತರನ್ನು ಸೆಳೆಯುವ ನಿಟ್ಟಿನಲ್ಲಿ ಅತ್ಯಂತ ಚಾಣಾಕ್ಷ ನಡೆ ಇಟ್ಟಿದ್ದಾರೆ. ಬರೀ ಕಾಂಗ್ರೆಸ್ ಮಾತ್ರವಲ್ಲ, ನಿಮಗೂ ನಾನಿದ್ದೇನೆ: ಕಾರ್ಯಕ್ರಮದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, “ನಾನು ಜೆಡಿಎಸ್ ಕಾರ್ಯಕರ್ತರಿಗೆ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಈ ಡಿ.ಕೆ. ಶಿವಕುಮಾರ್ ಬರೀ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತನಲ್ಲ. ನಿಮಗೂ ಕೂಡ ಈ ಡಿ.ಕೆ. ಶಿವಕುಮಾರ್ ಇದ್ದಾನೆ ಎನ್ನುವುದನ್ನು ಮರೆಯಬೇಡಿ” ಎಂದು ಭರವಸೆ ನೀಡಿದರು. ಈ ಮೂಲಕ ತಾವು ಕೇವಲ ಒಂದು ಪಕ್ಷದ ನಾಯಕನಲ್ಲ, ಇಡೀ ಪ್ರಾಂತದ ಜನರ ನಾಯಕ ಎಂಬ ಸಂದೇಶವನ್ನು ರವಾನಿಸಿದರು. ಸಹಾಯ ಮಾಡಲು ಸಿದ್ಧ, ಸರ್ಕಾರದ ಸೌಲಭ್ಯ ಕೊಡಿಸುವೆ: ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಮುಂದುವರಿಸುತ್ತಾ, “ನನ್ನ ಮನೆಯ ಬಾಗಿಲು…

Read More

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಇಂದು ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಸಿಎಂ ಆಗಿ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಹಾಗೂ ಮತದಾರರು ಸಂಭ್ರಮಾಚರಣೆಯಲ್ಲಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಹಿಂಭಾಗದಲ್ಲಿ ದುಷ್ಕರ್ಮಿಗಳು ಮಾಟ-ಮಂತ್ರ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಭಾರಿ ಸಂಚಲನ ಮೂಡಿಸಿದೆ. ಸದಾಶಿವನಗರದ ಜಿಬಿಎ (GBA) ಮೈದಾನದ ಮುಂಭಾಗದ ರಸ್ತೆಯಲ್ಲಿ ಈ ಅಘೋರ ಕೃತ್ಯ ನಡೆದಿದೆ. ತಡರಾತ್ರಿ ಅಥವಾ ಮುಂಜಾನೆಯ ವೇಳೆಯಲ್ಲಿ ಸ್ಥಳಕ್ಕೆ ಬಂದಿರುವ ಅಪರಿಚಿತ ಕಿಡಿಗೇಡಿಗಳು, ರಸ್ತೆಯ ಮಧ್ಯದಲ್ಲೇ ವಿಚಿತ್ರವಾದ ವೃತ್ತಾಕಾರದ ರಂಗೋಲಿ ಮಾದರಿಯನ್ನು ಬಿಡಿಸಿದ್ದಾರೆ. ನೂತನ ಸಿಎಂ ನಿವಾಸಕ್ಕೆ ತೀರಾ ಹತ್ತಿರದಲ್ಲೇ ಈ ರೀತಿಯ ಅನುಮಾನಾಸ್ಪದ ಚಟುವಟಿಕೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೋಳಿ ಬಲಿ, ನಿಂಬೆಹಣ್ಣು ಪೂಜೆ ಮಾಟ-ಮಂತ್ರ ಮಾಡಿರುವ ಜಾಗದಲ್ಲಿ ರಕ್ತಸಿಕ್ತ ದೃಶ್ಯಗಳು ಕಂಡುಬಂದಿವೆ. ದುಷ್ಕರ್ಮಿಗಳು ವೃತ್ತಾಕಾರದ ಕೃತ್ಯ ನಡೆಸಿ,…

Read More

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಡಿ.ಕೆ. ಶಿವಕುಮಾರ್ ಅವರು ಇಂದು ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರವಾದ ಕನಕಪುರಕ್ಕೆ ಭೇಟಿ ನೀಡಿದರು. ಮುಖ್ಯಮಂತ್ರಿಯಾದ ನಂತರ ತಮ್ಮ ನೆಚ್ಚಿನ ನಾಯಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಹರ್ಷ ಮುಗಿಲುಮುಟ್ಟಿತ್ತು. ಇಡೀ ನಗರಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ನೆರೆದಿದ್ದ ಸಹಸ್ರಾರು ಜನಸ್ತೋಮ ಡಿ.ಕೆ. ಶಿವಕುಮಾರ್ ಅವರ ಮೇಲೆ ಹೂವಿನ ಮಳೆಗರೆಯುವ ಮೂಲಕ ಅತ್ಯಂತ ಅದ್ದೂರಿಯಾಗಿ ಮತ್ತು ಭವ್ಯವಾಗಿ ಸ್ವಾಗತಿಸಿತು. ನಾನು ಮುಖ್ಯಮಂತ್ರಿಯಾಗಿದ್ದರೂ ನಿಮ್ಮ ಸೇವಕ: ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾವುಕರಾಗಿ ತಮ್ಮ ಕೃತಜ್ಞತೆಗಳನ್ನು ಸಮರ್ಪಿಸಿದರು. “ನಾನು ಇಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಸಹ, ನಿಮ್ಮ ಪಾಲಿಗೆ ಎಂದೆಂದಿಗೂ ನಿಮ್ಮ ಸೇವಕನೇ ಆಗಿರುತ್ತೇನೆ. ನಿಮ್ಮೆಲ್ಲರ ನಿರಂತರ ಪ್ರೀತಿ, ಬೆಂಬಲ ಹಾಗೂ ಆಶೀರ್ವಾದದ ಬಲದಿಂದಲೇ ನಾನು ಇಂದು ಈ ಉನ್ನತ ಸ್ಥಾನಕ್ಕೇರಲು ಮತ್ತು ಸಫಲನಾಗಲು ಸಾಧ್ಯವಾಗಿದೆ” ಎಂದು ಮತದಾರರನ್ನು ಸ್ಮರಿಸಿದರು. ಸಮಸ್ಯೆಗಳ ಪರಿಹಾರಕ್ಕೆ…

Read More