Author: kannadanewsnow05

ಬೆಂಗಳೂರು : ಬೆಂಗಳೂರಿನ ಶ್ರೀನಿವಾಸಪುರದ ಬಳಿ ಇರುವ ಕೋಗಿಲು ಲೇಔಟ್ ನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಇದೀಗ ರಾಜ್ಯ ಸರ್ಕಾರ ಬೇರೆ ಕಡೆ ವಸತಿ ಕಲ್ಪಿಸಲು ಮುಂದಾಗಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಮನೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಹೌದು, ಕೋಗಿಲು ಲೇಔಟ್ ನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿ ಮನೆ ಸಿಗಲಿದ್ದು, ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಸಂತ್ರಸ್ತರಿಗೆ ವಸತಿ ಕಲ್ಪಿಸಲಾಗಿದೆ. 180 ಮನೆಗಳನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು ಆದರೆ ಹೋರಾಟಗಾರರು 250 ಮನೆಗಳನ್ನು ಕೇಳಿದ್ದರು. ಇದೀಗ ವಸತಿ ಇಲಾಖೆಯಿಂದ 180 ಮನೆ ನೀಡಲು ಒಪ್ಪಿಗೆ ನೀಡಲಾಗಿದೆ. ಅಷ್ಟೆ ಅಲ್ಲದೇ ರಿಜಿಸ್ಟರ್ ಮಾಡಿಕೊಡುವುದಾಗಿಯೂ ಕೂಡ ರಾಜ್ಯ ಸರ್ಕಾರ ಭರವಸೆ ನೀಡಿದೆ. ಶೀಘ್ರದಲ್ಲಿಯೇ ನಿವಾಸಿಗಳನ್ನು ಅಲ್ಲಿಗೆ ಶಿಫ್ಟ್ ಮಾಡಲಿದೆ. ಈ ಕುರಿತು ಸಚಿವ ಜಮೀರ್ ಅಹ್ಮದ್ ಖಾನ್ ಅಧಿಕೃತ ಘೋಷಣೆ ಮಾಡಲಿದ್ದಾರೆ.

Read More

ಕೋಲಾರ : ಆಸ್ತಿಗಾಗಿ ಹೆತ್ತ ತಾಯಿಯ ಮೇಲೆ ಮಗನಿಂದಲೇ ಹಲ್ಲೆ ನಡೆಸಿರುವ ಘಟನೆ ದೇವರ ಸಮುದ್ರ ಗ್ರಾಮದಲ್ಲಿ ಈ ಒಂದು ಅಮಾನವೀಯ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯ ಸಮುದ್ರ ಗ್ರಾಮದಲ್ಲಿ ನಾರಾಯಣಮ್ಮ ಮೇಲೆ ಪಾಪಿ ಮಗ ಸುಬ್ರಮಣ್ಯ ಹಲ್ಲೆ ಮಾಡಿದ್ದಾನೆ. ಫ್ಲೋರ್ ಮಿಲ್ ಹಾಗೂ ಮನೆ ತನಗೆ ಬೇಕು ಎಂದು ಪುತ್ರ ಸುಬ್ರಮಣ್ಯ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಆಸ್ತಿಗೋಸ್ಕರ ನಾರಾಯಣನ ಮೇಲೆ ಸುಬ್ರಮಣ್ಯ ಪದೇ ಪದೇ ಹಲ್ಲೆ ಮಾಡಿದ್ದಾನೆ.ಈ ವಿಚಾರವಾಗಿ ದೂರು ನೀಡಿದ್ದರು ಸಹ ಪೊಲೀಸರು ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು, ಮುಳಬಾಗಿಲು ಗ್ರಾಮಾಂತರ ಪೊಲೀಸರ ವಿರುದ್ಧ ಆರೋಪ ಕೇಳಿ ಬಂದಿದೆ. ನಾರಾಯಣಮಗೆ ನಾಲ್ಕು ಗಂಡು ಓರ್ವ ಪುತ್ರಿ ಇದ್ದು, ಅದರಲ್ಲಿ ಸುಬ್ರಮಣ್ಯ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ.

Read More

ಮೈಸೂರು: ಜಿಲ್ಲೆಯಲ್ಲಿ ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಹಾಡಹಗಲೇ ಬಂಗಾರದ ಅಂಗಡಿಗೆ ನುಗ್ಗಿ, ದರೋಡೆ ಮಾಡಿರುವಂತ ಘಟನೆ ಹುಣಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಹಾಡಹಗಲೇ ದರೋಡೆ ಮಾಡಲಾಗಿದೆ. ಸ್ಕೈ ಆಭರಣ ಮಳಿಗೆಗೆ ನುಗ್ಗಿ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಲಾಗಿದೆ. ಮೈಸೂರಿನ ಹುಣಸೂರು ಬಸ್ ನಿಲ್ದಾಣದ ಹಿಂಭಾಗದಲ್ಲೇ ಸ್ಕೈ ಆಭರಣ ಮಳಿಗೆ ಇದ್ದು, ಐದಕ್ಕು ಹೆಚ್ಚು ದುಷ್ಕರ್ಮಿಗಳ ಗುಂಪಿನಿಂದ ಈ ಕೃತ್ಯ ಎಸಗಲಾಗಿದೆ. ಆಭರಣ ಮಳಿಗೆಯ ಸಿಬ್ಬಂದಿಗಳಿಗೆ ಗನ್ ತೋರಿಸಿ ಬೆದರಿಸಿ ಹಾಡಹಗಲೇ ಹಣ, ಚಿನ್ನಾಭರಣವನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹುಣಸೂರು ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ.

Read More

ಬೆಂಗಳೂರು : ಮನರೆಗ ಯೋಜನೆ ಹೆಸರು ಬದಲಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಇದೀಗ ಕಿಡಿ ಕಾರಿದ್ದಾರೆ. ಬಿಜೆಪಿ ಅವರಿಗೆ ಕೇಡುಗಾಲ ಬಂದಿದೆ. ಬಿಜೆಪಿಯವರಿಗೆ ಗಾಂಧೀಜಿ ನೆಹರು ರಾಜೀವ್ ಗಾಂಧಿ ಕಂಡರೆ ಆಗಲ್ಲ ನನ್ನನ್ನು ಸಹ ಕಂಡರೂ ಆಗುವುದಿಲ್ಲ ಆದರೆ ಅವರು ನನಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಧಿಕಾರ ಬರುತ್ತೆ ಹೋಗುತ್ತೆ. ಆದರೆ ಗಾಂಧೀಜಿ ಹೆಸರು ಶಾಶ್ವತ ನಮ್ಮ ಕಾಂಗ್ರೆಸ್ ಫೌಂಡೇಶನ್ ಗಟ್ಟಿಯಾಗಿದೆ. ಬಿಜೆಪಿಯವರು ವೋಟ್ ಚೋರಿ ಕೆಲಸವನ್ನು ಮಾಡುತ್ತಾರೆ. ಬಿಜೆಪಿಯವರು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ. ನಿತೀಶ್ ಚಂದ್ರಬಾಬು ನಾಯ್ಡು ಇಲ್ಲದಿದ್ದರೆ ಹೋಗಿ ಬಿಡುತ್ತಿದ್ದರು ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರ್ಯಕರ್ತರು. ಗಾಂಧೀಜಿಯನ್ನು ಕೊಂದ ಮೇಲು ಇವರ ದ್ವೇಷ ಕಡಿಮೆ ಆಗಿಲ್ಲ. ಮಹಾತ್ಮ ಗಾಂಧೀಜಿ ಅವರನ್ನು ಕಂಡರೆ ಬಿಜೆಪಿ ಅವರಿಗೆ ಆಗಲ್ಲ. ಹೀಗಾಗಿ ಮನರೇಗಾ ಹೆಸರನ್ನು ಬದಲಾಯಿಸಿದರು. ಬಿಜೆಪಿಯವರಿಗೆ ನೆಹರು…

Read More

ಬೆಂಗಳೂರು : ಮನರೆಗ ಯೋಜನೆ ಹೆಸರು ಬದಲಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಇದೀಗ ಕಿಡಿ ಕಾರಿದ್ದಾರೆ. ಬಿಜೆಪಿ ಅವರಿಗೆ ಕೇಡುಗಾಲ ಬಂದಿದೆ. ಬಿಜೆಪಿಯವರಿಗೆ ಗಾಂಧೀಜಿ ನೆಹರು ರಾಜೀವ್ ಗಾಂಧಿ ಕಂಡರೆ ಆಗಲ್ಲ ನನ್ನನ್ನು ಸಹ ಕಂಡರೂ ಆಗುವುದಿಲ್ಲ ಆದರೆ ಅವರು ನನಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಧಿಕಾರ ಬರುತ್ತೆ ಹೋಗುತ್ತೆ. ಆದರೆ ಗಾಂಧೀಜಿ ಹೆಸರು ಶಾಶ್ವತ ನಮ್ಮ ಕಾಂಗ್ರೆಸ್ ಫೌಂಡೇಶನ್ ಗಟ್ಟಿಯಾಗಿದೆ. ಬಿಜೆಪಿಯವರು ವೋಟ್ ಚೋರಿ ಕೆಲಸವನ್ನು ಮಾಡುತ್ತಾರೆ. ಬಿಜೆಪಿಯವರು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ. ನಿತೀಶ್ ಚಂದ್ರಬಾಬು ನಾಯ್ಡು ಇಲ್ಲದಿದ್ದರೆ ಹೋಗಿ ಬಿಡುತ್ತಿದ್ದರು ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರ್ಯಕರ್ತರು. ಗಾಂಧೀಜಿಯನ್ನು ಕೊಂದ ಮೇಲು ಇವರ ದ್ವೇಷ ಕಡಿಮೆ ಆಗಿಲ್ಲ. ಮಹಾತ್ಮ ಗಾಂಧೀಜಿ ಅವರನ್ನು ಕಂಡರೆ ಬಿಜೆಪಿ ಅವರಿಗೆ ಆಗಲ್ಲ. ಹೀಗಾಗಿ ಮನರೇಗಾ ಹೆಸರನ್ನು ಬದಲಾಯಿಸಿದರು. ಬಿಜೆಪಿಯವರಿಗೆ ನೆಹರು…

Read More

ಬೆಂಗಳೂರು : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗುತ್ತೆ. ಕಾನೂನು ಸುವ್ಯವಸ್ಥೆ ಮತ್ತು ಸಾರಿಗೆ ವ್ಯವಸ್ಥೆಯ ಬಗ್ಗೆ ನಿಗಾ ವಹಿಸುವುದಕ್ಕೆ ಈಗಾಗಲೇ ಗೃಹ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಈ ಪರಮೇಶ್ವರ ರವರು ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಜನ ಸೇರಬಹುದು ಎನ್ನುವ ನಿರೀಕ್ಷೆ ಇದೆ ೧೦ ಲಕ್ಷಕ್ಕೂ ಹೆಚ್ಚು ಜನರು ಸೇರಬಹುದು ಎನ್ನುವ ಊಹೆ ಇದೆ ಜನ ವಾಪಸ್ ಹೋಗಲು ವ್ಯವಸ್ಥೆ ಮಾಡಿಕೊಡಬೇಕಿದೆ. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಗಮನಹರಿಸಬೇಕಿದೆ. ಜನಸಂದಣಿ ಜಾಸ್ತಿಯಾಗಿದಂತೆ ನೋಡಿಕೊಳ್ಳಬೇಕು. ಅಕಸ್ಮಾತ್ ಒಂದು ವೇಳೆ ಆದರೂ ಕೂಡ ಅದಕ್ಕೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಮಾಲ್ ಮೆಟ್ರೋ ಹೋಟೆಲ್ಗಳ ಬಳಿ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಅಹಿತಕರ ಘಟನೆ ನಡೆದಂತೆ ಸಿಸಿಟಿವಿ ಕ್ಯಾಮೆರಾ ಹಾಗೂ ಡ್ರೋನ್ ಕ್ಯಾಮೆರಾ ಗಳನ್ನು ಸಹ ಬಳಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್…

Read More

ಬೆಂಗಳೂರು : ಕೇವಲ 58 ದಿನಗಳ ಹಿಂದೆ ವಿವಾಹವಾಗಿದ್ದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹನಿಮೂನ್‌ ವೇಳೆ ಜಗಳ ಶುರುವಾಗಿದ್ದು, ಪೋಷಕರ ಮನೆಗೆ ಮರಳಿದ್ದ ಗಾನವಿ, ಬ್ರೈನ್ ಡೆಡ್ ಆಗಿ ಕೊನೆಯುಸಿರೆಳೆದಿದ್ದಾರೆ. ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪತಿ ಸೂರಜ್ ಹಾಗೂ ಕುಟುಂಬಸ್ಥರ ವಿರುದ್ಧ ರಾಮಮೂರ್ತಿನಗರ ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಗಾನವಿ ಪೋಷಕರು ವಿರುದ್ಧ ದೂರು ದಾಖಲಾಗಿದೆ. ಗಾನವಿ ಆತ್ಮಹತ್ಯೆ ಬೆನ್ನಲ್ಲೆ ಪತಿ ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದ. ಗಾನವಿ ಪೋಷಕರು ಕೇಸ್ ದಾಖಲಿಸುತ್ತೀದ್ದಂತೆ ಸೂರಜ್ ಹಾಗು ತಾಯಿ ಜಯಂತಿ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. ಕಿರುಕುಳ ಆರೋಪದಿಂದ ಮನನೊಂದು ಲಾರ್ಡ್ಸ್ ನಲ್ಲಿ ಆತ್ಮಹತ್ಯೆಗೆ ಸೂರಜ್ ಶರಣಾಗಿದ್ದಾನೆ ಸದ್ಯ ಶಿವರಾಜ್ ಭಾವ ಗಾನವಿ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಸೂರಜ್ ಭಾವ ರಾಜ್ ಕುಮಾರ್ ದೂರು ನೀಡಿದ್ದಾರೆ ಸೂರಜ್ ಸಾವಿಗೆ ರುಕ್ಮಿಣಿ…

Read More

ಬೆಂಗಳೂರು : ತಿಪ್ಪರಲಾಗ ಹಾಕಿದ್ರು ಗ್ಯಾರಂಟಿಗಳನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಯಾವುದೇ ಸರ್ಕಾರ ಬಂದರು ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲು ಆಗಲ್ಲ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ಹಾಗು ಆದಾಯ ಪಾತಾಳಕ್ಕೆ ಹೋಗ್ತಿತ್ತು. ಹೀಗಾಗಿ ಮಾದರಿ ಕಾರ್ಯಕ್ರಮ ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಹಳ್ಳಿ ಹಳ್ಳಿಗಳಲ್ಲಿ ಗ್ಯಾರಂಟಿ ಸಂಭ್ರಮ ಆಚರಿಸಬೇಕು ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Read More

ಬಳ್ಳಾರಿ : ಗಣಿ ಹಗರಣದಲ್ಲಿ ಈ ಹಿಂದೆ ಶಾಸಕ ಜನಾರ್ದನ ರೆಡ್ಡಿ ಅವರು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಇದೀಗ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಮತ್ತೆ ಗಣಿ ಲೂಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಸುದಾಂಶ ದುಲಿಯಾ ಸಮಿತಿಯಿಂದ ವರದಿ ಸಲ್ಲಿಕೆ ಮಾಡಲಾಗಿದ್ದು, ಕರ್ನಾಟಕ ಗಡಿ ಒತ್ತುವರಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ದುಲಿಯ ಸಮಿತಿ ವರದಿ ಸಲ್ಲಿಕೆಯಾಗಿದೆ. ಒಂದು ತಿಂಗಳ ಹಿಂದೆ ಬಳ್ಳಾರಿಯಲಿ ಕಮಿಟಿ ಸರ್ವೇ ಮಾಡಲು ಬಂದಿತ್ತು. ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿಯಲ್ಲಿ ಈ ಒಂದು ಸರ್ವೆ ನಡೆದಿತ್ತು ಜನಾರ್ದನ ರೆಡ್ಡಿ ಒಡೆತನದ ಓ ಎಂ ಸಿ 2 ಹೆಸರಿನಲ್ಲಿ 39.50 ಹೆಕ್ಟರ್, ಅಂತರಗಂಗಮ್ಮ ಹೆಸರಿನ 68.50 ಪ್ರದೇಶದಲ್ಲಿ ಹೊಂದಾಣಿಕೆ ಆಗಿಲ್ಲ. ಗಣಿ ಗುತ್ತಿಗೆ ಮತ್ತು ಗಡಿಗಳ ಹೊಂದಾಣಿಕೆ ಆಗಿಲ್ಲವೆಂದು ವರದಿ ಸಲ್ಲಿಕೆ ಮಾಡಲಾಗಿದೆ. ಈ ಕಂಪನಿಗಳು ಕರ್ನಾಟಕದಲ್ಲಿ ಅತಿಕ್ರಮಣ ಮಾಡಿವೆ ಎಂದು ವರದಿ ಸಲ್ಲಿಸಲಾಗಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವಿನ ಗಡಿ ನಾಶಪಡಿಸಿದ ಆರೋಪ ಕೇಳಿ ಬಂದಿದೆ.…

Read More

ಮೈಸೂರು : ಡಿಸಿಎಂ ಡಿಕೆ ಶಿವಕುಮಾರ್ CM ಆಗೋ ವಿಚಾರವಾಗಿ, ಅಂತೂ ಇಂತೂ ಕುಂತಿ ಮಕ್ಕಳಿಗೆ ಅಧಿಕಾರ ಇಲ್ಲ ಅಂತಾಗಿದೆ ಎಂದು ಮೈಸೂರಿನಲ್ಲಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ವ್ಯಂಗ್ಯವಾಡಿದರು. ಮೈಸೂರಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ದುಡಿದಿದ್ದಾರೆ. ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಈ ಹಿಂದೆ ಪತ್ರ ಬರೆದಿದ್ದೆ, ಈಗ ಬರೆದ್ರೆ ಓಡುವವರು ಯಾರಿದ್ದಾರೆ? ಪತ್ರ ಓದುವುದಕ್ಕೆ ರಾಹುಲ್ ಗಾಂಧಿಗೆ ಪುರುಸೊತ್ತು ಎಲ್ಲಿದೆ? ಸಿಎಂ ಸಿದ್ದರಾಮಯ್ಯ ಪತ್ರ ಓದುವುದಿಲ್ಲ ಎಂದು ತಿಳಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿದರೆ ಅವರು ಹೈಕಮಾಂಡ್ ಅವರನ್ನು ಕೇಳಿದ್ದಾರೆ. ನಾನೇ ಹೈಕಮಾಂಡ್ ಅಂತ ಹೇಳಿಕೊಳ್ಳುವ ಧೈರ್ಯ ಸಹ ಇಲ್ಲ. ಇದೆ ಖರ್ಗೆ ಅವರನ್ನು ಸಿಎಂ ಮಾಡಬೇಕು ಅನ್ನೋ ವಿಚಾರ ಬಂದಾಗ ಮಲ್ಲಿಕಾರ್ಜುನ ಖರ್ಗೆಗೆ ಡಿಕೆ ಶಿವಕುಮಾರ್ ಬೆಂಬಲ ಕೊಟ್ಟರು. ಸಿದ್ದರಾಮಯ್ಯರಾಗಲಿ ಅಥವಾ ಖರ್ಗೆಗಾಗಲಿ ಆ ಉದಾರತೆ ಇಲ್ಲ. ಇದೆಲ್ಲ ನೋಡಿದ್ರೆ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಅನ್ನುವ ಹಾಗೆ ಆಗಿದೆ ಎಂದು ಹೆಚ್. ವಿಶ್ವನಾಥ್…

Read More