Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ನವದೆಹಲಿ : ಅಬುದಾಭಿಯ ಅಣು ವಿದ್ಯುತ್ ಸ್ಥಾವರದ ಮೇಲೆ ಡ್ರೋನ್ ದಾಳಿ ನಡೆದಿದೆ. ದಾಳಿಯ ಬಳಿಕ ಸ್ಥಾವರದ ಜನರೇಟರ್ ಹೊತ್ತಿ ಉರಿದಿದೆ. ಅಲ್ ದಫ್ರಾ ಪ್ರದೇಶದಲ್ಲಿ ಇರುವ ಅಣು ವಿದ್ಯುತ್ ಸ್ಥಾವರದ ಮೇಲೆ ಡ್ರೋನ್ ದಾಳಿ ನಡೆದಿದ್ದು, ಅಣು ವಿದ್ಯುತ್ ಸ್ಥಾವರದ ಜನರೇಟರ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ನ್ಯೂಕ್ಲಿಯರ್ ಪವರ್ ಜನರೇಟರ್ ಮೇಲೆ ಈ ರೀತಿ ದಾಳಿ ನಡೆದಿದೆ. ಇದರಿಂದ ಏನಾದರೂ ವಿಕಿರಣ ಸೋರಿಕೆ ಏನಾದರೂ ಆಗಿದೆಯ ಅದರ ಬಗ್ಗೆ ಮಾಹಿತಿ ಬಂದಿಲ್ಲ. ಆದರೆ ಜನರೇಟರ್ ಭಾಗದ ಮೇಲೆ ಈ ರೀತಿ ದಾಳಿ ಆಗಿದೆ. ಏನಾದರೂ ಇದೆ ರೀತಿಯಾಗಿ ಇರಾನ್ ಅನ್ನು ಕಟ್ಟಿ ಹಾಕುವಂತಹ ಪ್ರಯತ್ನ ಅಮೆರಿಕ ಏನಾದರೂ ಮುಂದುವರಿಸಿಕೊಂಡು ಹೋದರೆ ಕೊಲ್ಲಿ ರಾಷ್ಟ್ರಗಳ ಮೇಲೆ ತನ್ನ ಅಟ್ಯಾಕ್ ಹೇಗೆ ಇರುತ್ತೆ ಎನ್ನುವಂತಹ ಸೂಚನೆಯನ್ನು ಇರಾನ್ ನೀಡಿದೆ.

Read More

ಮೈಸೂರು : ಕಾಂಗ್ರೆಸ್ ಕುರ್ಚಿ ಆಟ ಕೊನೆ ಹಂತಕ್ಕೆ ಬಂದಿದೆ. ಕುರುಬ ಸಮಾಜದ ಜೊತೆಗೆ ಯಾವತ್ತು ಜೆಡಿಎಸ್ ಪಕ್ಷ ಇದ್ದೇ ಇರುತ್ತದೆ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದರು. ಬೋಗಾದಿ ಭೋಗನಂದೀಶ್ವರ ದೇಗುಲ ಬಳಿ ಈ ಒಂದು ಸಮಾವೇಶ ಆಯೋಜನೆ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿ ಬಿಟ್ಟು ಕುರ್ಚಿ ಆಟ ನಡೆದಿತ್ತು. ಮಳೆಯಿಂದಾದ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆಹರಿಸಿಲ್ಲ. ಬೆಳೆ ನಷ್ಟದ ಬಗ್ಗೆ ರೈತರಿಗೆ ಧೈರ್ಯ ಹೇಳುವ ಕೆಲಸ ಮಾಡಿಲ್ಲ ಮುಂದೆ ಮೈತ್ರಿ ಸರ್ಕಾರ ಬರಲಿದೆ ಬೇಕಾದ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಪಕ್ಷಕ್ಕೆ ಶಕ್ತಿ ತುಂಬಿರುವುದು ಕಾರ್ಯಕರ್ತರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉದ್ಬೂರು ರಮ್ಮನಹಳ್ಳಿ ವಿಶೇಷ. ಕೊನೆಯುಸಿರಿ ಇರುವರೆಗೂ ನಿಮ್ಮ ಪ್ರೀತಿ ಮರೆಯಲ್ಲ ಎಂದರು. ನಮ್ಮವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಈ ರೀತಿ ಬರುತ್ತಿರಲಿಲ್ಲ. ಮುಖಂಡರು ಮೈಮರೆತಿದ್ದಕ್ಕೆ…

Read More

ಮೈಸೂರು :ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ‘ಜನರೊಂದಿಗೆ ಜನತಾದಳ ಸಮಾವೇಶ’ ಇದೀಗ ಬ್ಯಾನರ್ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಜೆಡಿಎಸ್ ಹಮ್ಮಿಕೊಂಡಿರುವ ಈ ಬೃಹತ್ ಸಮಾವೇಶದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳಿಂದ ಪಕ್ಷದ ಹಿರಿಯ ನಾಯಕ, ಶಾಸಕ ಜಿ.ಟಿ. ದೇವೇಗೌಡ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಭಾವಚಿತ್ರಗಳನ್ನು ಕೈಬಿಟ್ಟಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರದಾದ್ಯಂತ ರಾರಾಜಿಸುತ್ತಿರುವ ಈ ಸಮಾವೇಶದ ಫ್ಲೆಕ್ಸ್‌ಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರ ಫೋಟೋಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ, ಇದೇ ಕ್ಷೇತ್ರದ ಹಾಲಿ ಶಾಸಕರಾಗಿದ್ದೂ ಜಿ.ಟಿ. ದೇವೇಗೌಡ ಅವರ ಫೋಟೋ ಮಿಸ್ ಆಗಿರುವುದು ಸಾರ್ವಜನಿಕರಲ್ಲಿ ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಪುತ್ರನಿಗೆ ಮನ್ನಣೆ, ತಂದೆಗೆ ಕೊಕ್! ಇನ್ನು ಈ ಫ್ಲೆಕ್ಸ್ ರಾಜಕೀಯದಲ್ಲಿ ಮತ್ತೊಂದು ರೋಚಕ ತಿರುವು ಎಂದರೆ, ಜಿ.ಟಿ. ದೇವೇಗೌಡರ ಫೋಟೋಗೆ ಕೊಕ್ ನೀಡಲಾಗಿದ್ದರೂ, ಅವರ ಪುತ್ರ ಹಾಗೂ…

Read More

ಬೆಂಗಳೂರು : ಬೆಂಗಳೂರಲ್ಲಿ ಪ್ರೇಯಸಿಯನ್ನ ಕೊಂದು ಶವವನ್ನು ಕೆರೆಗೆ ಎಸೆದು ಪರಾರಿಯಾಗಿದ್ದ ಪ್ರಿಯಕರನನ್ನ ಇದೀಗ ಬೆಂಗಳೂರಿನ ಹೆಬ್ಬಗೋಡಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನ ರತನ್ ದಾಸ್ (37) ಎಂದು ತಿಳಿದುಬಂದಿದೆ.ಅಸ್ಸಾಂ ಮೂಲದ ಅಂಜಲಿ ನಾಥ್ (47) ಎಂಬಾಕೆಯನ್ನ ರತನ್ ದಾಸ್ ಕೊಲೆ ಮಾಡಿದ್ದ. ಮೇ 8 ರಂದು ತಿರುಪಾಳ್ಯ ಕೆರೆಯಲ್ಲಿ ಅಂಜಲಿ ನಾಥ್ ಹತ್ಯೆಯಾಗಿತ್ತು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ತಿರುಪಾಳ್ಯ ಕೆರೆ ಹತ್ಯೆಗು ಮುನ್ನ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿದ್ದ. ಮದುವೆ ಮಾಡಿಕೊಳ್ಳುವಂತೆ ರತನ್ ದಾಸ್ ಗೆ ದುಂಬಾಲು ಬಿದ್ದಿದ್ದ. ಈ ವೇಳೆ ರತನ್ ದಾಸ್, ಅಂಜಲಿ ನಾಥ್ ನಡುವೆ ಜಗಳ ಆಗಿದೆ. ಜಗಳ ವಿಕೋಪಕ್ಕೆ ಹೋಗಿ ಅಂಜಲಿ ನಾಥ್ ಕೊಂದಿದ್ದ ರತನ್ ದಾಸ್. ಉಸಿರುಗಟ್ಟಿಸಿ ಕೊಂದು ಶವ ಕೆರೆಗೆ ಎಸೆದು ಎಸ್ಕೇಪ್ ಆಗಿದ್ದ. ಮರುದಿನ ವಾಕಿಂಗ್ ಹೋಗುವವರು ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅನುಮಾನಸ್ಪದ ಸಾವು ಎಂದು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.…

Read More

ವಿಜಯಪುರ: ಜೂನ್‌ನಲ್ಲಿ ಶಾಲೆಗಳು ಆರಂಭವಾದ ಬಳಿಕ ಪ್ರತಿಯೊಬ್ಬರಿಗೂ ಕೇಸರಿ ಶಾಲು ವಿತರಣೆ ಮಾಡುತ್ತೇನೆ. ಇನ್ಮುಂದೆ ಶಾಲೆಯಲ್ಲಿ ಹಾಜರಾತಿ ಹಾಕುವ ವೇಳೆ ‘ಎಸ್ ಸರ್’ ಎನ್ನುವ ಬದಲು ಜೈ ಶ್ರೀರಾಮ್ ಅಂತ ಹೇಳಿ. ಶಿಕ್ಷಕರಿಗೆ ನಮಸ್ಕರಿಸುವಾಗ ಜೈ ಶ್ರೀರಾಮ್ ಎನ್ನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆ ಕೊಟ್ಟಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಪುನಃ ಹಿಜಬ್ ಧರಿಸಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಅವರು ಹರಿಹಾಯ್ದಿದ್ದಾರೆ. ಕೇಸರಿ ಶಾಲು ಧರಿಸುವುದಕ್ಕೆ ನಿಷೇಧ ಹೇರಲು ಕಾಂಗ್ರೆಸ್ಸಿನವರಿಗೆ ಅಧಿಕಾರ ಕೊಟ್ಟವರು ಯಾರು? ಕೇಸರಿ ಶಾಲು ಹಾಕಲು ನಮಗೆ ಹಕ್ಕಿದೆ. ರಾಜ್ಯದ ಎಲ್ಲಾ ಹಿಂದೂಗಳಿಗೆ ಕರೆ ಕೊಡುತ್ತಿದ್ದೇನೆ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ತಿಲಕ ಇಟ್ಟು ಕೇಸರಿ ಶಾಲು ಹಾಕಿ ಶಾಲೆಗೆ ಕಳುಹಿಸಿ. ಇವರು ಹೇಗೆ ವಿರೋಧ ಮಾಡುತ್ತಾರೆ? ಹೇಗೆ ತಡೆಯುತ್ತಾರೆ? ನಾವು ನೋಡುತ್ತೇವೆ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿರುವ ಶೇ.30 ರಷ್ಟು ತೆರಿಗೆಯನ್ನು ಶೇ. 20ಕ್ಕೆ…

Read More

ಕೋಲಾರ : ಕೋಲಾರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎನಮರೇಪಲ್ಲಿ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಮುನಿರಾಜು (43) ಷಣಸಮಾಕಲಹಳ್ಳಿಯ ಸತೀಶ್ (38) ಮೃತಪಟ್ಟವರು ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿ ಇದ್ದ ಕೆಲವರಿಗೂ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕುರಿತಂತೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಾಗಲಕೋಟೆ : ಕಾಂಗ್ರೆಸ್ ಪಾರ್ಟಿ ಹ್ಯಾಸ್ ಬಿಕಮ್ ಮುಸ್ಲಿಂ ಲೀಗ್ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟ ಗ್ರಾಮದಲ್ಲಿ ಪ್ರಹ್ಲಾದ್ ಜೋಶಿ ಮಾತನಾಡಿ ಮುಸ್ಲಿಂ ಲೀಗ್ ಅಂದರೆ ಬಹಳ ಜನ ಮುಸ್ಲಿಮರ ಪಕ್ಷ ಅನ್ಕೊಂಡಿದ್ದರು. ಈ ದೇಶ ಇಬ್ಬಾಗಕ್ಕೆ ಕರೆಕೊಟ್ಟ ಮೊದಲ ಪಕ್ಷವೇ ಮುಸ್ಲಿಂ ಲೀಗ್. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಸ್ಲಿಂ ಲೀಗ್ ಮುಖ್ಯಸ್ಥ. ಮುಸ್ಲಿಂ ಲೀಗ್ ಮುಖ್ಯಸ್ಥ ರಾಹುಲ್ ಗಾಂಧಿ ಮೊಹಮ್ಮದ್ ಅಲಿ ಜಿನ್ನಾ ಇದ್ದಂತೆ. ಕೇರಳಂನಲ್ಲಿ ಮುಸ್ಲಿಂ ಲೀಗ್ ಬೆಂಬಲದಿಂದ ಸರ್ಕಾರ ರಚನೆ ಮಾಡುತ್ತಿದ್ದಾರೆ. ಮುಸ್ಲಿಂ ಲೀಗಿನ 18 ಜನರು ಮುಸ್ಲಿಮರು ಅವರಿಗೆ ಸಚಿವ ಸ್ಥಾನ ಕೊಡುತ್ತಾರೆ. ಅಸ್ಸಾಂನಲ್ಲಿ ಕಾಂಗ್ರೆಸ್ಸಿನ 19 ಶಾಸಕರ ಪೈಕಿ 18 ಜನ ಮುಸ್ಲಿಮರಿದ್ದಾರೆ. ಅಬ್ದುಲ್ ಬದ್ರುದ್ದೀನ್ ಕಾಂಗ್ರೆಸ್ ಮುಸ್ಲಿಂ ಲೀಗ್ ಆಗಿದೆ ಅಂದಿದ್ದಾರೆ. ಕೇರಳ ಅಸ್ಸಾಂ ಪಶ್ಚಿಮ ಬಂಗಾಳ ಸೇರಿ 90 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ಸಿನ ಐವರು ಶಾಸಕರ ಪೈಕಿ…

Read More

ಮೈಸೂರು : ಕಾಂಗ್ರೆಸ್ ಕುರ್ಚಿ ಆಟ ಕೊನೆ ಹಂತಕ್ಕೆ ಬಂದಿದೆ. ಕುರುಬ ಸಮಾಜದ ಜೊತೆಗೆ ಯಾವತ್ತು ಜೆಡಿಎಸ್ ಪಕ್ಷ ಇದ್ದೇ ಇರುತ್ತದೆ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಕೇಂದ್ರ ಸಚಿವ HD ಕುಮಾರಸ್ವಾಮಿ ಭಾಷಣ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭಾಷಣ ಮಾಡಿದರು. ಬೋಗಾದಿ ಭೋಗನಂದೀಶ್ವರ ದೇಗುಲ ಬಳಿ ಈ ಒಂದು ಸಮಾವೇಶ ಆಯೋಜನೆ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿ ಬಿಟ್ಟು ಕುರ್ಚಿ ಆಟ ನಡೆದಿತ್ತು. ಮಳೆಯಿಂದಾದ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆಹರಿಸಿಲ್ಲ. ಬೆಳೆ ನಷ್ಟದ ಬಗ್ಗೆ ರೈತರಿಗೆ ಧೈರ್ಯ ಹೇಳುವ ಕೆಲಸ ಮಾಡಿಲ್ಲ ಮುಂದೆ ಮೈತ್ರಿ ಸರ್ಕಾರ ಬರಲಿದೆ ಬೇಕಾದ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಪಕ್ಷಕ್ಕೆ ಶಕ್ತಿ ತುಂಬಿರುವುದು ಕಾರ್ಯಕರ್ತರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉದ್ಬೂರು ರಮ್ಮನಹಳ್ಳಿ ವಿಶೇಷ. ಕೊನೆಯುಸಿರಿ ಇರುವರೆಗೂ ನಿಮ್ಮ ಪ್ರೀತಿ ಮರೆಯಲ್ಲ ಎಂದರು. ನಮ್ಮವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಈ ರೀತಿ ಬರುತ್ತಿರಲಿಲ್ಲ. ಮುಖಂಡರು…

Read More

ರಾಯಚೂರು : ತಾಯಿಗೆ ಬಾಯಿಗೆ ಬಂದಂತೆ ನಿಂದನೆ ಮಾಡಿದ ಅಣ್ಣನನ್ನು ತಮ್ಮನೇ ಕೊಲೆ ಮಾಡಿರುವ ದುರ್ಘಟನೆ ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬಸವಸಾಗರ ಕ್ರಾಸ್ ಬಳಿ ನಡೆದಿದೆ. ಅಣ್ಣ ಬಸವರಾಜ(37) ಕೊಲೆಯಾದ ವ್ಯಕ್ತಿ. ತಮ್ಮ ಶ್ರೀಧರ ಕೊಲೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಈ ಒಂದು ಕೊಲೆ ನಡೆದಿದ್ದು, ಶ್ರೀಧರ್ ಎಂಬುವರು ತನ್ನ ಅಣ್ಣ ಬಸವರಾಜ ಅವರನ್ನು ಕೊಲೆ ಮಾಡಿದ್ದಾರೆ. ಬಸವರಾಜ ಅವರು ಕುಡಿದು ಬಂದು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ಶ್ರೀಧರ್ ಅವರು ಕೋಪಿತರಾಗಿ ಅಣ್ಣ ನಿದ್ರೆಗೆ ಹೋಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೇ ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಬೆಳಗಾವಿ : 4,500 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಐಡಿ ಅಧಿಕಾರಿಗಳು 4500 ಕೋಟಿ ಪ್ರಕರಣದ ಬೆನ್ನತ್ತಿದ್ದಾರೆ. ನಿನ್ನೆಯವರೆಗೂ ಪೊಲೀಸರು ತನಿಖೆ ನಡೆಸಿದ್ದು ಇದೀಗ ಅದರ ವರದಿಯನ್ನು ಪೊಲೀಸರು ಸಿಐಡಿ ಗೆ ಹಸ್ತಾಂತರಿಸಿದ್ದಾರೆ. ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಸಿಐಡಿ ಅಧಿಕಾರಿಗಳಿಗೆ ವರದಿ ಹಸ್ತಾಂತರಿಸಿದ್ದಾರೆ. ಸುಧೀರ್ಘವಾಗಿ ಮಾಹಿತಿ ಕಲೆಯ ಹಾಕಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದು CID ಡಿಐಜಿ ಭೀಮಶಂಕರ್ ಗುಳೇದ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ಕೇಸ್ ಬಗ್ಗೆ ಪೊಲೀಸ್ ಆಯುಕ್ತರ ಜೊತೆ ಸಿಐಡಿ ತಂಡ ಸಭೆ ನಡೆಸಿದ್ದು, ಜಪ್ತಿ ಮಾಡಿದಂತಹ ದಾಖಲೆಗಳು ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಸುಮಾರು 35 ಸಾವಿರ ಜನರಿಂದ ಶಿವಾನಂದ್ ಹೂಡಿಕೆ ಮಾಡಿಕೊಂಡಿದ್ದು, ಆನ್ಲೈನ್ 2500 ಕೋಟಿಗೂ ಅಧಿಕಾರ ಹೂಡಿಕೆ ಮಾಡಿಕೊಂಡಿದ್ದ. ಈಗ ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ ನಾಲ್ಕು ಅಕೌಂಟ್ ಗಳನ್ನು ಅಧಿಕಾರಿಗಳು ಪ್ರೀಜ್ ಮಾಡಿದ್ದಾರೆ. ಒಂದೊಂದು ಅಕೌಂಟ್ನಲ್ಲಿ ನೂರಾರು ಕೋಟಿ ರೂಪಾಯಿ ಆಗಿದೆ ಹೂಡಿಕೆ ಮಾಡಿದ್ದು ಪ್ರತಿದಿನ ಶಿವಾನಂದ್ ಅಕೌಂಟಿಗೆ ಲಕ್ಷಾಂತರ ರೂಪಾಯಿ…

Read More