Author: kannadanewsnow05

ಛತ್ತೀಸ್ಗಡ : ಛತ್ತೀಸಘಡದಲ್ಲಿ ಬೆಚ್ಚಿಬಿಳಿಸುವ ಘಟನೆ ಒಂದು ನಡೆದಿದ್ದು, ಪಾಪಿ ಪತಿಯೊಬ್ಬ ಪತ್ನಿಯ ತಲೆಕೆಡಿದು ಸಾರ್ವಜನಿಕವಾಗಿ ಉಡಾಡಿರುವ ಘಟನೆ ಇದೀಗ ವರದಿಯಾಗಿದೆ. ಪತ್ನಿಯ ತಲೆಕತರಿಸಿ ಚೀಲದಲ್ಲಿ ಪತಿ ಪತ್ನಿಯ ತಲೆ ತಂದಿದ್ದಾನೆ. ಛತ್ತೀಸ್ಗಡದ ಕೋರ್ಬ ಜಿಲ್ಲೆಯಲ್ಲಿ ಈ ಒಂದು ಘಟನೆ ವರದಿಯಾಗಿದೆ ಮಕ್ಕಳ ಮುಂದೆಯೆ ಪತ್ನಿಯ ಶಿರಶ್ಚೇಧವಾಗಿದೆ. ಈ ಒಂದು ಘಟನೆಯಿಂದ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಪತ್ನಿಯ ಶೀಲವನ್ನು ಶಂಕಿಸಿ ದುಷ್ಟ ಈ ರೀತಿ ಕೃತ್ಯ ಎಸಗಿದ್ದಾನೆ.ಮಕ್ಕಳ ಮುಂದೆ ತನ್ನ ಪತ್ನಿಯ ಕತ್ತರಿಸಿ ಆಕೆಯ ತುಂಡರಿಸಿದ ತಲೆಯೊಂದಿಗೆ ಸಾರ್ವಜನಿಕವಾಗಿ ಓಡಾಡಿ ಪ್ರದರ್ಶನ ಮಾಡಿದ್ದಾನೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಕೇವಲ ಪಾರಿವಾಳ ಕದ್ದ ವಿಚಾರವಾಗಿ ಗಲಾಟೆ ನಡೆದು ಓರ್ವ ಯುವಕನನ್ನು ಐವರು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂದಿನಿ ಲೇಔಟ್‌, ಲಗ್ಗೆರೆ ನಿವಾಸಿಗಳಾದ ದರ್ಶನ್‌(28), ಸುರೇಂದ್ರ(27), ಮಹೇಂದ್ರ(29), ವಿಜಯ್(26) ಹಾಗೂ ದರ್ಶನ್‌(26) ಬಂಧಿತರು. ಇತರೆ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಎ.21 ರಂದು ರಾತ್ರಿ ರಾಜಗೋಪಾಲನಗರದ ವಿಜ್ಞಾನ ಪಬ್ಲಿಕ್‌ ಶಾಲೆ ಬಳಿ ಮಲ್ಲಿಕಾರ್ಜನ್‌ ರಾವ್‌ (24) ಎಂಬಾತನನ್ನು ಹತ್ಯೆಗೈಯಲಾಗಿತ್ತು. ಕೊಲೆಯಾದ ಮಲ್ಲಿಕಾರ್ಜನ್‌ ರಾವ್‌ ಅವರ ಸ್ನೇಹಿತ ಪ್ರಶಾಂತ್‌ ಪಾರಿವಾಳ ಸಾಕುತ್ತಿದ್ದ. ಕೆಲ ದಿನಗಳ ಹಿಂದೆ ಆರೋಪಿಗಳು ಆತನ ಪಾರಿವಾಳಗಳನ್ನು ಕಳವು ಮಾಡಿಕೊಂಡಿದ್ದರು. ಈ ವಿಚಾರ ಸಂಬಂಧ ಎ.21ರಂದು ರಾತ್ರಿ ಲಗ್ಗೆರೆ ಬಳಿ ಆರೋಪಿಗಳನ್ನು ಪ್ರಶ್ನಿಸಲು ಪ್ರಶಾಂತ್‌ ಜೊತೆ ಮಲ್ಲಿಕಾರ್ಜನ್‌ ರಾವ್‌ ಕೂಡ ಹೋಗಿದ್ದಾನೆ. ಈ ವೇಳೆ ನಡೆದ ಹೊಡೆದಾಟದಲ್ಲಿ ಆರೋಪಿಗಳು ಮಲ್ಲಿಕಾರ್ಜನ್‌ಗೆ ಡ್ರ್ಯಾಗರ್‌ನಿಂದ ಹೊಟ್ಟೆಗೆ ಇರಿದು ಹತ್ಯೆಗೈದಿದ್ದಾರೆ ಎಂದು ಪೊಲೀಸರು…

Read More

ಬೆಂಗಳೂರು : ನಿನ್ನೆ ತಾನೆ ಚಿಕ್ಕಮಗಳೂರಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯ ಮುಗುತಿಗೆ ಸಿಬ್ಬಂದಿಗಳು ಟೇಪ್ ಮತ್ತು ಗಮ್ ಹಚ್ಚಿದ ಘಟನೆ ನಡೆದಿತ್ತು. ಅಲ್ಲದೆ ಕಳೆದ ವರ್ಷ ಕೂಡ ವಿದ್ಯಾರ್ಥಿಗಳಿಗೆ ಶನಿವಾರ ತಗಿಸಿದ ಪ್ರಕರಣ ಬಾರಿ ಸದ್ದು ಮಾಡಿತ್ತು. ಇದೀಗ ಬೆಂಗಳೂರಲ್ಲಿ ವಿದ್ಯಾರ್ಥಿಗಳಿಗೆ ಜನಿವಾರ ತಗಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಸಿಇಟಿ ಪರೀಕ್ಷೆಯಲ್ಲಿ ಸಿಬ್ಬಂದಿಗಳು ಜನಿವಾರ ತೆಗೆಸಿ ಮತ್ತೆ ಎಡವಟ್ಟು ಮಾಡಿದ್ದಾರೆ. ಶನಿವಾರ ತೆಗೆಸಲು ನಿಯಮ ಇಲ್ಲದಿದ್ದರೂ ಕೂಡ ಸಿಬ್ಬಂದಿಗಳು ಜನಿವಾರ ತೆಗೆಸಿ ಎಡವಟ್ಟು ಮಾಡಿದ್ದಾರೆ. ಬೆಂಗಳೂರಿನ ಮಡಿವಾಳದ ಕೃಪಾ ನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಈ ಒಂದು ಘಟನೆ ನಡೆದಿದೆ. ನೆನ್ನೆ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಜನಿವಾರ ಧರಿಸಿ ಬಂದಿದ್ದರು. ಮೊದಲ ದಿನದ ಸಿಇಟಿ ಪರೀಕ್ಷೆಯಲ್ಲಿ ಸಿಬ್ಬಂದಿಗಳು ಜನಿವಾರ ತೆಗೆಸಿದ್ದಾರೆ. ಜನಿವಾರ ತೆಗಿಯಲ್ಲ ಎಂದಿದಕ್ಕೆ ಮನೆಗೆ ಹೋಗಿ ಅಂತ ಹೇಳಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇಂದು ಪರೀಕ್ಷಾ ಕೇಂದ್ರದ ಮುಂದೆ ಪೋಷಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಶಿಕ್ಷಣ ಇಲಾಖೆ…

Read More

ಬಾಗಲಕೋಟೆ : ಬಾಗಲಕೋಟೆಯಲ್ಲಿ ನಿಂತರವಾದ ಕೊಲೆ ಆಗಿದ್ದು ಮನೆಯ ಅಂಗಳದಲ್ಲಿ ಮಲಗಿಕೊಂಡಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಎಂಬ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜನತಾ ಪ್ಲಾಟ್ ಪ್ರದೇಶದ ಮನೆಯವರ ಅಂಗಳದಲ್ಲಿ ಮಲಗಿದ್ದಲ್ಲಿಯೇ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಮೃತ ವ್ಯಕ್ತಿಯನ್ನು ಗ್ರಾಮದ ಅಶೋಕ ಕೋಳಿ (35) ಎಂದು ಗುರುತಿಸಲಾಗಿದೆ. ಮುಖ ಸಂಪೂರ್ಣ ನಜ್ಜುಗುಜ್ಜಗಿದೆ.ಘಟನೆಯಲ್ಲಿ ಉತ್ತಮ ಶಿಂದೆ (40) ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಅವರನ್ನ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬಾಗಲಕೋಟೆ : ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ಬಣ್ಣ ಬಯಲಾಗಿದೆ. ಇಸ್ಪೀಟ್ ಮತ್ತು ಬಡ್ಡಿ ದಂಧೆಯ ಪ್ರಕರಣದಿಂದ ಹೆಸರು ಕೈಬಿಡಲು ಹಾಗೂ ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಿಎಸ್‌ಐ ಮತ್ತು ಕಾನ್‌ಸ್ಟೇಬಲ್ ಅವರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. PSI ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಸ್ಥಳೀಯ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಹೌದು ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯ ಪಿಎಸ್‌ಐ ಭೀಮಪ್ಪ ರಬಕವಿ ಮತ್ತು ಕಾನ್‌ಸ್ಟೇಬಲ್ ಸಂತೋಷ್ ಬಿರಾದಾರ ಅವರು ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿಗಳು. ಮುತ್ತಪ್ಪ ನಾಯ್ಕರ್ ಎಂಬುವವರ ಮೇಲೆ ಇಸ್ಪೀಟ್ ಆಟ ಮತ್ತು ಕಾನೂನುಬಾಹಿರ ಬಡ್ಡಿ ವ್ಯವಹಾರದ ಕೇಸ್ ಹಾಕುವುದಾಗಿ ಈ ಇಬ್ಬರು ಪೊಲೀಸರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಪ್ರಕರಣದಿಂದ ಹೆಸರನ್ನು ತೆಗೆದುಹಾಕಲು ಮತ್ತು ಅವರ ಬೈಕ್ ಅನ್ನು ಮರಳಿ ನೀಡಲು ಒಟ್ಟು 2 ಲಕ್ಷ ರೂಪಾಯಿ ಹಣಕ್ಕೆ ಪಿಎಸ್‌ಐ ಭೀಮಪ್ಪ ಬೇಡಿಕೆಯಿಟ್ಟಿದ್ದರು ಪೊಲೀಸರ ಈ ಕಿರುಕುಳದಿಂದ ಬೇಸತ್ತ ಮುತ್ತಪ್ಪ ನಾಯ್ಕರ್…

Read More

ಹಾಸನ : ಸಚಿವ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಅಧಿಕಾರಕ್ಕಾಗಿ ಅಂತಹ ಜನರನ್ನು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದೂರು ಹೊಸಳ್ಳಿ ಗ್ರಾಮದಲ್ಲಿ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು. ಯಾವುದೇ ಕಾರಣಕ್ಕೂ ಆ ವಿಷಯವನ್ನು ನನ್ನ ಮುಂದೆ ಹೇಳಬೇಡಿ. ಅವರನ್ನು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ ಈಗಾಗಲೇ ಅನುಭವಿಸಿದ್ದೇನೆ. ರಾಜಕೀಯದಲ್ಲಿ ಶಕ್ತಿ ಬರುತ್ತೆ ಅಂತ ಹೇಳಿ ಈ ಕೆಲಸಕ್ಕೆ ಕೈ ಹಾಕುವುದಿಲ್ಲ. ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ. ಕಾಂಗ್ರೆಸ್ಸಿಗರು ಅನ್ನ ತಿನ್ನುತ್ತಿರುವುದು ಆ ವರ್ಗದವರಿಂದ ಅಂತಿದ್ದಾರೆ. ನಿತ್ಯ ಅಣ್ಣ ತಿನ್ನುತ್ತಿರುವುದೇ ಆ ವರ್ಗದ ಜನರಿಂದ ಅಂತ ಹೇಳುತ್ತಿದ್ದಾರೆ. ಕಾಂಗ್ರೆಸ್ನವರು ಯಾರಾದರೂ ಅದನ್ನು ವಿರೋಧ ಮಾಡಿದ್ದೀರಾ? ಎಲ್ಲೆಲ್ಲಿಗೆ ಹೋಗುತ್ತೋ ನೋಡೋಣ ಎಂದು ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.

Read More

ದಾವಣಗೆರೆ : ವಚನಾನಂದ ಸ್ವಾಮೀಜಿಯನ್ನು ಉಚ್ಛಾಟಿಸಿದ್ದೇವೆ. ಆಡಳಿತಾಧಿಕಾರಿ ರಾಜಕುಮಾರ್, ದಾಸೋಹ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ಅವರನ್ನು ಅಮಾನತು ಮಾಡಿದ್ದೇವೆ. ಅವರಾಗಿಯೇ ಗೌರವದಿಂದ ಮಠ ತೊರೆಯಲಿ. ಇಲ್ಲದಿದ್ದರೆ ಟ್ರಸ್ಟ್ ಮುಂದಿನ ತೀರ್ಮಾನ ಕೈಗೊಳ್ಳಲಿದೆ” ಎಂದು ಹರಿಹರದ ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ 27ರಂದು ಹರಿಹರ ಮಠದಲ್ಲೇ ಲೆಕ್ಕ ಕೊಡಲು ಮುಂದಾಗಿದ್ದೇವೆ. 2008ರಿಂದ 2026ರವರೆಗೆ ಲೆಕ್ಕ ಕೊಡ್ತೀವಿ. ಸಂಘ ಬೇರೆ, ಟ್ರಸ್ಟ್ ಬೇರೆ ಇದೆ. ನಾವು ಬ್ಯಾಲೆನ್ಸ್ ಶೀಟ್ ಕೊಡ್ತಾ ಬರ್ತಿದ್ದೇವೆ. ಆದರೆ, ದಿಕ್ಕು ತಪ್ಪಿಸುವ ಸಲುವಾಗಿ ಲೆಕ್ಕ ಕೊಡಿ ಎಂಬ ಅಭಿಯಾನ ನಡೆಸಿದ್ದಾರೆ. ಯಾವುದೇ ಟ್ರಸ್ಟ್​​ನಲ್ಲಿ ಲೆಕ್ಕ ಕೊಡುವ ಪದ್ಧತಿ ಇಲ್ಲ. ಆದರೂ ಸಹ ಪೈಸೆ ಪೈಸೆ ಲೆಕ್ಕ ಕೊಡಲು ಮುಂದಾಗಿದ್ದೇವೆ. ಲೆಕ್ಕದ ವಿಚಾರವಾಗಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಹೀಗಾಗಿ ಪೀಠದ ಹುಟ್ಟಿನಿಂದ ಇಲ್ಲಿಯವರೆಗೆ ಲೆಕ್ಕ ಕೊಡುತ್ತೇವೆ ಎಂದರು. ಸ್ವಾಮೀಜಿ ಮಠದಲ್ಲೇ ಇದ್ದು, ಸುದ್ದಿಗೋಷ್ಠಿಯಲ್ಲಿ ‌ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಇದೇ 24ರಂದು ಮಠದಲ್ಲಿ ಬಸವ ಜಯಂತಿ ಆಚರಿಸಲು…

Read More

ಬೆಂಗಳೂರು : ಕಬ್ಬಡಿ ಪಂದ್ಯ ಒಂದರಲ್ಲಿ 500 ರೂಪಾಯಿ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಅವರ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೌದು ಪರಮೇಶ್ವರ ಅವರ ವಿರುದ್ಧದ ಕೇಸ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಸುನಿಲ್ ಯಾದವ್ ಅವರಿದ್ದ ಪೀಠ ಆದೇಶ ನೀಡಿದೆ. ಈ ಕೇಸ್ ಗೆ ಸಬಂಧಿಸಿದಂತೆ ವಕೀಲ ಫಣಿಂದ್ರ ಅವರು ವಾದ ಮಂಡಿಸಿದರು. ಸಚಿವರು ಕಬ್ಬಡಿ ಟೂರ್ನಿ ಮುಖ್ಯ ಅತಿಥಿಯಾಗಿ ಹೋಗಿದ್ದರು. ವಿಜಯಪುರ ತಂಡ ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಕಟ್ಟಿದ್ರು. ಸೋತ ತಂಡಕ್ಕೆ ಬೇಸರವಾಗಬಾರದೆಂದು ಹೀಗೆ ಹೇಳಿದ್ದಾರೆ ಇದನ್ನೇ ಅಪರಾಧವೆಂಬಂತೆ ಖಾಸಗಿ ದೂರು ದಾಖಲಿಸಿದ್ದಾರೆ. ಕೋರ್ಟ್ fir ಗೆ ಆದೇಶಿಸುವ ಮುನ್ನ ಪ್ರಕ್ರಿಯೆ ಪಾಲಿಸಿಲ್ಲ ಎಂದು ವಾದಿಸಿದರು. ಇದೇ ವೇಳೆ ಹೈಕೋರ್ಟ್ ಜಡ್ಜ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ತಮಾಷೆಗೆ ಮಾತನಾಡಿದರು ಕೂಡ ಕೇಸ್ ದಾಖಲಿಸಬಹುದಾ?ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿದಂತೆ ಕಾಣುತ್ತಿಲ್ಲ ತನಿಖೆಗೆ ಆದೇಶಿಸುವ ಮುನ್ನ ಪೊಲೀಸರ ವಿವರಣೆ ಪಡೆಯಬೇಕಿತ್ತು…

Read More

ಕಲಬುರಗಿ : ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮ ಪಂಚಾಯತ್ ನ ಲಂಚಕೋರ ಕಂಪ್ಯೂಟರ್ ಆಪರೇಟರ್ ಬಂದೇನವಾಜ್ ಎಂಬಾತ ಬಸವ ವಸತಿ ಯೋಜನೆಯ ಹಣ ಮಂಜೂರು ಮಾಡಲು ಲಂಚ ಪಡೆದು, ಲೋಕಾಯುಕ್ತ ಬಲೆಗೆ ಸಾಕ್ಷಿ ಸಮೇತ ಬಿದ್ದಿದ್ದಾನೆ. ಮಳ್ಳಿ ಗ್ರಾಮದ ಮಲ್ಲಿಕಾರ್ಜುನ ಅವರ ಸಹೋದರನ ಮನೆ ಬಿಲ್ ಮಾಡಲು 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, 5 ಸಾವಿರ ರೂ. ಕೈಯಲ್ಲಿ ಪಡೆದಿದ್ದು, ಮೂರು ಸಾವಿರ ರೂಪಾಯಿ ಫೋನ್ ಫೇ ಮಾಡಿಕೊಂಡಿದ್ದ. ಲೋಕಾಯುಕ್ತ ತನಿಖಾಧಿಕಾರಿ ಮುರುಗುಂಡಿ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ಸದ್ಯ ಕಂಪ್ಯೂಟರ್ ಆಪರೇಟರ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ.

Read More

ತುಮಕೂರು : ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ತಾಪಮಾನ ಏರಿಕೆಯಿಂದ ಜನರು ಹೈರಾಣಾಗಿದ್ದಾರೆ ಇನ್ನು ಕೆಲವು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದ್ದು ಜನರು ದುಡ್ಡು ಉಸಿರು ಬಿಟ್ಟಿದ್ದಾರೆ ಈಗ ತುಮಕೂರಿನಲ್ಲಿ ಇದೆ ಬಿಸಿಲಿನ ತಾಪಮಾನದಿಂದ 32 ನವಿಲುಗಳು ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದೆ. ಹೌದು ತುಮಕೂರಿನ ವಿವಿಧ ಭಾಗದಲ್ಲಿ 32 ನವಿಲುಗಳ ಸಾವನ್ನಪ್ಪಿದ್ದು, ಹೀಟ್‌ಸ್ಟ್ರೋಕ್‌ನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತುಮಕೂರು ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ, ಹುಲ್ಲೆನಹಳ್ಳಿ ಗ್ರಾಮದಲ್ಲಿ ಏ.16ರಿಂದ 21ರವರೆಗೆ ಒಟ್ಟು 32 ನವಿಲುಗಳ ಸಾವನ್ನಪ್ಪಿವೆ. ಹೀಟ್‌ಸ್ಟ್ರೋಕ್‌ನಿಂದ ಸಾವನ್ನಪ್ಪಿರಬಹುದು ಎನ್ನಲಾಗಿದೆ.

Read More