Author: kannadanewsnow05

ಬೆಂಗಳೂರು : ನಾಲ್ಕು ವರ್ಷಗಳ ಹಿಂದೆ ಮಂಗಳೂರಿನ ಹೊರವಲಯದಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಕೊಂಡಿದ್ದು, ಈ ಸಂಬಂಧ ಎನ್ಐಎ ವಿಶೇಷ ನ್ಯಾಯಾಲಯ ಇದೀಗ ಮೊಹಮ್ಮದ್ ಶಾಲಿತಿಗೆ 10 ವರ್ಷಗಳ ಕಾಲ ಕಡಿಮೆ ಶಿಕ್ಷೆ ಪ್ರಕಟಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಬಾಂಬ್​ ಸ್ಪೋಟ ಎಸಗಿರುವುದಾಗಿ ಶಾರೀಕ್ ಕಳೆದ ಡಿಸೆಂಬರ್​ನಲ್ಲಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. ಮೂರು ತಿಂಗಳ ಬಳಿಕ ನ್ಯಾಯಾಲಯ ಆರೋಪಿಯ ಅರ್ಜಿಯನ್ನು ಪುರಸ್ಕರಿಸಿತ್ತು. ಬಳಿಕ ವಾದ-ಪ್ರತಿವಾದ ನಡೆದಿತ್ತು. ಗುರುವಾರ ವಿಚಾರಣೆ ನಡೆಸಿದ ಕೋರ್ಟ್​, ತಾಂತ್ರಿಕ ಕಾರಣಗಳಿಂದಾಗಿ ಅಂತಿಮ ತೀರ್ಪನ್ನು ಏ.25ಕ್ಕೆ ಮುಂದೂಡಿತ್ತು. ಇದೀಗ ಎಂದು ಬೆಂಗಳೂರಿನ ವಿಶೇಷ ನ್ಯಾಯಾಲಯ ಮಹಮ್ಮದ್ ಶಾರಿಕ್ ಗೆ 10 ವರ್ಷ ಕಠಿಣ ಶಿಕ್ಷೆ ಪ್ರಕಟಿಸಿದೆ. ಇನ್ನು ಕೋರ್ಟ್ ತೀರ್ಪು ಪ್ರಕಟಿಸುವ ಮುನ್ನ ಆರೋಪಿ ಮೊಹಮ್ಮದ್ ಶಾರಿಕ್ ನನಗೆ ಒಬ್ಬ ಮಗಳಿದ್ದಾಳೆ ಮನೆಯಲ್ಲಿ ದುಡಿಯುವವನು ನಾನೇ. ಹೀಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಶಾರಿಕ್…

Read More

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪ್ರಿಯಕರನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮದುವೆಯಾದರೂ ಬಯಕೆಗೆ ಮಾತ್ರ ಬಳಸಿಕೊಳ್ತೀನಿ ಅಂತ ಸ್ನೇಹಿತರ ಬಳಿ ಹೇಳುತ್ತಿದ್ದ. ಹೀಗಾಗಿ ಅವಮಾನ ಸಹಿಸಲಾಗದೇ ಬೆಂಕಿ ಹಚ್ಚಿದೆ ಎಂದು ಪ್ರೇಯಸಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ. ಕಿರಣ್‌ನನ್ನು ನಾನು ತುಂಬಾ ಇಷ್ಟಪಡುತ್ತಿದೆ. ಆದರೆ ಕಿರಣ್ ಮಾತ್ರ ನನ್ನನ್ನು ಭೋಗದ ವಸ್ತುವನ್ನಾಗಿ ಅಷ್ಟೇ ನೋಡುತ್ತಿದ್ದ. ಸ್ನೇಹಿತರ ಬಳಿ ನನ್ನ ಸೌಂದರ್ಯದ ಬಗ್ಗೆ ನಿತ್ಯ ಅವಮಾನಿಸುತ್ತಿದ್ದ. ಅಲ್ಲದೇ ಮದುವೆಯಾದರೂ ಬಯಕೆಗೆ ಮಾತ್ರ ಬಳಸಿಕೊಳ್ತೀನಿ ಅಂತ ಸ್ನೇಹಿತರ ಬಳಿ ಹೇಳುತ್ತಿದ್ದ. ಇತ್ತೀಚಿಗೆ ಕಂಡ ಕಂಡವರ ಮುಂದೆ ಅವಮಾನಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ. ಮದುವೆ ಅಂತ ಬಂದಾಗ ಜಾತಿಯ ಲೇಪನ ಮಾಡುತ್ತಿದ್ದ. ನೀನು ಬೇರೆ ಜಾತಿಯಾಗಿರುವ ಕಾರಣ ನಮ್ಮ ಮನೆಯಲ್ಲಿ ಮದುವೆಗೆ ಒಪ್ಪಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದ. ನಾನು ಲವ್ ಪ್ರಪೋಸ್ ಮಾಡಿದಾಗ ಒಪ್ಪಿಕೊಂಡು ನನ್ನನ್ನು ಹೇಗೆ ಬೇಕು ಹಾಗೇ ಬಳಿಸಿಕೊಂಡಿದ್ದಾನೆ. ಆಗ ಜಾತಿ ಮಾತು…

Read More

ಹಾಸನ : ಹಾಸನದಲ್ಲಿ ಹೃದಯವಿದ್ರಾವತ ಘಟನೆ ಒಂದು ನಡೆದಿದ್ದು ಏಕಾಏಕಿ ಕುಸಿದು ಬಿದ್ದು ಕೋಮಾಕ್ಕೆ ಜಾರಿದ್ದ ಟೆಕ್ಕಿ ಒಬ್ಬರು ಇದೀಗ ಸಾವನಪ್ಪಿದ್ದಾರೆ. ಏಪ್ರಿಲ್ 25 ರಂದು ಹಾಸನದ ಮನೆಯಲ್ಲಿ ಶ್ವೇತಾ ಎನ್ನುವ ಯುವತಿ ಕುಸಿದು ಬಿದ್ದಿದ್ದಳು. ಜಿಲ್ಲೆಯ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮ ಸದಾ ನಿವಾಸಿ ಎಂದು ತಿಳಿದುಬಂದಿದ್ದು ಆಸ್ಪತ್ರೆಗೆ ಕರೆದೋಯ್ಯುವಷ್ಟರಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅವರು ಬದುಕುವುದು ಕಷ್ಟ ಎಂದು ವಿಚಾರ ಗೊತ್ತಾದಾಗ ಶ್ವೇತಾ ವೇದ ಪೋಷಕರು ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಏಪ್ರಿಲ್ 25ರಂದು ಹಾಸನ ಮನೆಯಲ್ಲಿ ಶ್ವೇತ ಕುಸಿದು ಬಿದ್ದಿದ್ದಾಳೆ ಬೇಲೂರು ತಾಲೂಕಿನ ಬಂಡಿ ಲಕ್ಕನ ಕೊಪ್ಪಲು ಗ್ರಾಮದ ನಿವಾಸಿಯಾಗಿರುವ ಶ್ವೇತ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದು ಇವಾಗ ಕೋಮಕೆ ಜಾರಿದ್ದಾರೆ ಬಳಿಕ ಬೆಂಗಳೂರಿನ ಖಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ವಿಶ್ವದ ಸಾವನಪ್ಪಿದ್ದಾಳೆ ಮೆದುಳಿನಲ್ಲಿ ರಕ್ತಸ್ರಾವ ಆಗಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿದ್ದು ಅಂಗಾಂಗ ದಾನ ಮಾಡಲಾಗದೆ ಇದೀಗ ಶ್ವೇತಾ…

Read More

ಹಾಸನ : ಇಲ್ಲಿನ ಚಿಕ್ಕಹೊನ್ನೇನಹಳ್ಳಿಯಲ್ಲಿರುವ ಪಶು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ರ‍್ಯಾಗಿಂಗ್‌ ವಿಚಾರಕ್ಕೆ ಸಿನಿಯರ್‌ ಹಾಗೂ ಜ್ಯೂನಿಯರ್‌ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಹಾಸ್ಟೆಲ್‍ನಲ್ಲಿರುವ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಜ್ಯೂನಿಯರ್ ವಿದ್ಯಾರ್ಥಿಗಳ ಮೇಲೆ ಸೀನಿಯರ್ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಗಲಾಟೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆಯ ಹಿನ್ನೆಲೆ: ರ‍್ಯಾಗಿಂಗ್ ವಿಚಾರವಾಗಿ ಆರಂಭವಾದ ಸಣ್ಣ ಕಿರಿಕ್, ಸಿನಿಯರ್ ಮತ್ತು ಜ್ಯೂನಿಯರ್ ವಿದ್ಯಾರ್ಥಿಗಳ ನಡುವೆ ದೊಡ್ಡ ಮಟ್ಟದ ಮಾರಾಮಾರಿಗೆ ಕಾರಣವಾಗಿದೆ ಎನ್ನಲಾಗಿದೆ. ಪರಿಣಾಮ: ಈ ಗಲಾಟೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಪೊಲೀಸ್ ಕ್ರಮ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾನೂನು ಕ್ರಮ: ಭಾರತದಲ್ಲಿ ರ‍್ಯಾಗಿಂಗ್ ಮಾಡುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಸುಪ್ರೀಂ ಕೋರ್ಟ್…

Read More

ರಾಯಚೂರು :ರಾಯಚೂರು ಜಿಲ್ಲೆಯ ರಾಜೇಶ್ ನಾಯಕ್ ಎಂಬ ಯುವಕನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಪತ್ರ ಕಳುಹಿಸಿದ್ದಾರೆ. ಸಾಮಾನ್ಯ ಪ್ರಜೆಯ ಆಹ್ವಾನಕ್ಕೆ ಸ್ಪಂದಿಸಿದ ಪ್ರಧಾನಿಗಳ ನಡೆಗೆ ವಧೂವರರ ಕುಟುಂಬದವರು ಕೃತಜ್ಞತೆ ವ್ಯಕ್ತಪಡಿಸಿದ್ದು, ಜಿಲ್ಲೆಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನವಜೋಡಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಹೌದು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕಾನಿಹಾಳ ಗ್ರಾಮದ ರಾಜೇಶ್ ನಾಯಕ್ ಅವರು ಪ್ರಧಾನಿ ಮೋದಿಗೆ ಮದುವೆ ಆಹ್ವಾನ ಪತ್ರಿಕೆಯನ್ನ ಕಳುಹಿಸಿದ್ದರು. ಈಗ ಪ್ರಧಾನಿ ಕಚೇರಿಯಿಂದ ನವ ದಂಪತಿಗೆ ಶುಭಾಶಯ ಪತ್ರ ಬಂದಿದೆ. ಪ್ರತಿಯಾಗಿ ಶುಭಾಶಯ ಬರಬಹುದು ಎನ್ನುವ ನಿರೀಕ್ಷೆಯಲ್ಲೇ ಲಗ್ನ ಪತ್ರಿಕೆಯನ್ನ ಪೋಸ್ಟ್ ಮಾಡಿ, ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದರು. ಪತ್ರದಲ್ಲಿ ನಿಮ್ಮ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಜೀವನದ ಈ ಶುಭ ಸಂದರ್ಭಕ್ಕೆ ಕಾಲಿಡುತ್ತಿರುವ ನಿಮಗೆ ಮತ್ತು ಸವಿತಾ ಅವರಿಗೆ ಸುಂದರ ಭವಿಷ್ಯಕ್ಕಾಗಿ ಶುಭಾಶೀರ್ವಾದಗಳು. ನಿಮ್ಮಿಬ್ಬರ ಹೃದಯ, ಮನಸ್ಸು ಮತ್ತು ಕ್ರಿಯೆಗಳು ಒಂದಾಗಿರಲಿ. ಜೀವನದ ಏರಿಳಿತಗಳಲ್ಲಿ ಪರಸ್ಪರ…

Read More

ರಾಯಚೂರು : ಮದುವೆಯಾಗುವುದಾಗಿ ನಂಬಿಸಿ ಪ್ರೀತಿ, ಪ್ರೇಮ, ಪ್ರಣಯ ಎಂದು ಅತ್ಯಾಚಾರ ಎಸಗಿ, ಈಗ ವಿವಾಹವಾಗುವುದಕ್ಕೆ ನಿರಾಕರಿಸಿ ಯುವಕ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬರು ಲಿಂಗಸೂಗೂರು ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಲಿಂಗಸೂಗೂರಿನ ಬಸವೇಶ್ವರ ಕಾಲೇಜಿನಲ್ಲಿ ಬಿಎಸ್‌ಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ಯುವತಿ ದೂರು ನೀಡಿದ್ದಾಳೆ. ದೇವದುರ್ಗ ತಾಲೂಕಿನ ಶಾವಂತಗಲ್ ಗ್ರಾಮದ ಶಿವಕುಮಾರ್ (22) ಯುವತಿಗೆ ವಂಚಿಸಿರುವ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ತನ್ನ ತಾಯಿಯ ತವರು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆರೋಪಿಯ ಪರಿಚಯವಾಗಿತ್ತು. ನಂತರ ಪ್ರೀತಿಯ ನೆಪದಲ್ಲಿ ಆಕೆಯನ್ನು ನಂಬಿಸಿ ಪುಸಲಾಯಿಸಿದ್ದಾನೆ. ಈಗ ಮೋಸ ಮಾಡಿರುವುದಾಗಿ ದೂರು ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 2024ರ ಅಕ್ಟೋಬರ್ 1ರಂದು ಮಧ್ಯಾಹ್ನ ಲಿಂಗಸೂಗೂರು ಸಮೀಪದ ಇಟ್ಟಿಗೆ ಕಾರ್ಖಾನೆ ಬಳಿ ಕರೆದುಕೊಂಡು ಹೋಗಿ ಯುವತಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆಯಾಗುವ ಭರವಸೆ ನೀಡಿ ದೌರ್ಜನ್ಯ ಮುಂದುವರಿಸಿದ್ದಾನೆ ಎಂದು…

Read More

ಮೈಸೂರು : ರಾಜ್ಯದಲ್ಲಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರ ಮಧ್ಯ ಮೈಸೂರಿನಲ್ಲಿ ಬಿಸಿಲಿನ ಶಾಖಕ್ಕೆ ಎರಡು ನಾಯಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ಗೋಲ್ಡನ್ ರಿಟೈವರ್ ವರ್ಗಕ್ಕೆ ಸೇರಿದ 7 ವರ್ಷದ ರೋನಿ, ಬಿಗಲ್ ವರ್ಗಕ್ಕೆ ಸೇರಿದ 4 ವರ್ಷದ ಸೋನು ಎಂಬ ಸಾಕು ನಾಯಿ ಬಿಸಿಲಿನ ಹೊಡೆತಕ್ಕೆ ಮೃತಪಟ್ಟಿವೆ. ಮತ್ತೊಂದು ಸಾಕು ನಾಯಿಯ ಸ್ಥಿತಿ ಗಂಭೀರವಾಗಿದ್ದು, ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನ ವಿಜಯ ನಗರದ ಮೂರನೇ ಹಂತದ ನಿವಾಸಿ ತೇಜಸ್ ಅವರು ಸಾಕಿದ್ದ ರೋನಿ ಶನಿವಾರ ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡಿತ್ತು. ಘಟನೆಯ ವಿವರ: ಮೃತಪಟ್ಟ ನಾಯಿಗಳು: * ವಿಜಯನಗರದ ತೇಜಸ್ ಅವರಿಗೆ ಸೇರಿದ ರೋನಿ (7 ವರ್ಷದ ಗೋಲ್ಡನ್ ರಿಟ್ರೈವರ್). ಇದು ಇತ್ತೀಚೆಗೆ ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ…

Read More

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿಯಲ್ಲಿರುವ ಪಂಚಮಸಾಲಿ ಪೀಠದಲ್ಲಿ ಲೆಕ್ಕಕೊಡುವ ಅಭಿಯಾನ ಪ್ರಕ್ರಿಯೆ ಆರಂಭವಾಗಿದ್ದು ಈ ಒಂದು ಪಂಚಮಸಾಲಿ ಪೀಠದ ಟ್ರಸ್ಟ್ ಧರ್ಮದರ್ಶಿ, ಬಿಸಿ ಉಮಾಪತಿ ಅವರು 2008ರಿಂದ 2026 ರ ವರೆಗೆ ಮಠಕ್ಕೆ ಬಂದಿರುವ ಧಣಿಗೆ ಕುರಿತು ಸಂಪೂರ್ಣವಾದ ಮಾಹಿತಿ ನೀಡಿದ್ದಾರೆ. 2008ರಿಂದ 2026ರ ವರೆಗಿನ ಲೆಕ್ಕ ಮಂಡನೆ ಆರಂಭವಾಗಿದ್ದು ಟ್ರಸ್ಟಿನ ಧರ್ಮದರ್ಶಿ ಬಿಸಿ ಉಮಾಪತಿ ಲೆಕ್ಕ ಮಂಡನೆ ಮಾಡಿದ್ದು 27 ಕೋಟಿ 61 ಲಕ್ಷದ 57,518 ರೂಪಾಯಿ ದೇಣಿಗೆ ಬಂದಿದೆ. ಭಕ್ತರ ಮತ್ತು ಸರ್ಕಾರದಿಂದ ಬಂದಿದ್ದ ಒಟ್ಟು ಹಣ ಇದಾಗಿದ್ದು ಕಳೆದ 18 ವರ್ಷಗಳಿಂದ ಮಠಕ್ಕೆ ಬಂದಂತಹ ದೇಣಿಗೆ ಇದಾಗಿದೆ. ಸರ್ಕಾರದಿಂದ, ಭಕ್ತರಿಂದ, ಸಮಾಜ ಬಾಂಧವರಿಂದ ಹಾಗೂ ದಾಸೋಹ ನಿಧಿಗಾಗಿ ಒಟ್ಟು 27 ಕೋಟಿ 61 ಲಕ್ಷದ 57,518 ರೂಪಾಯಿ ಜಮಾ ಆಗಿದೆ. ಇದು ಲೆಕ್ಕ ಕೊಡಬೇಕು ಅಂತ ಏನು ಚಳುವಳಿ ಮಾಡುತ್ತಿದ್ದಾರೋ ಇದು ಲೆಕ್ಕ ಕೊಡುವ ಚಳುವಳಿ ಅಲ್ಲ. ನಾವು ಈಗಾಗಲೇ ಹೇಳಿಕೆ ಸಂಬಂಧ…

Read More

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರದ ಹಣಗವಾಡಿ ಪಂಚಮಸಾಲಿ ಪೀಠದಲ್ಲಿ ಇಂದು ಲೆಕ್ಕ ಕೊಡುವ ಪ್ರಕ್ರಿಯೆ ಆರಂಭವಾಗಿದ್ದು ಈ ವೇಳೆ ಭಕ್ತರು ಹಾಗೂ ಟ್ರಸ್ಟ್ ನಡುವೆ ದೊಡ್ಡ ಹೈಡ್ರಮಾವೇ ನಡೆಯಿತು. ಈ ವೇಳೆ ಪರ ವಿರೋಧ ಘೋಷಣೆಗಳು ಕೂಡ ಕೇಳಿ ಬಂದವು. ಲೆಕ್ಕ ಕೊಡುವ ಸಮಾವೇಶಕ್ಕೆ ಶ್ರೀಗಳ ಪರ ಭಕ್ತರು ನುಗ್ಗಿದ್ದಾರೆ. ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಟ್ರಸ್ಟ್ ಬೆಂಬಲಿಗರು ಹಾಗೂ ಸ್ವಾಮೀಜಿ ಬೆಂಬಲಿಗರ ಮಧ್ಯೆ ವಾಕ್ಸ ಮರ ನಡೆದಿದೆ. ಗಲಾಟೆ ಗದ್ದಲದ ಬಳಿಕ ಲೆಕ್ಕ ಕೊಡುವ ಪ್ರಕ್ರಿಯೆ ಆರಂಭವಾಗಿದೆ, ಹರಿಹರದ ಮಠದ ಬಳಿ ಲೆಕ್ಕ ಕೊಡು ಪ್ರಕ್ರಿಯ ಆರಂಭವಾಗಿದ್ದು ಸಮಾವೇಶದ ಮೂಲಕ ವಚನಾನಂದ ಶ್ರೀಗಳಿಗೆ ತಿರುಗೇಟು ಕೊಡುತ್ತಿದ್ದಾರೆ. 2008 ರಿಂದ 2026 ವರೆಗಿನ ಲೆಕ್ಕ ಕೊಡುತ್ತಿದ್ದಾರೆ ಟ್ರಸ್ಟಿಗಳು. ಬಸವರಾಜ ದಿಂಡೂರು, ಜ್ಯೋತಿಪ್ರಕಾಶ್ ಹಾಗೂ ಎಚ್ಎಸ್ ನಾಗರಾಜ್ ಇದೀಗ ಲೆಕ್ಕ ಕೊಡುತ್ತಿದ್ದಾರೆ.

Read More

ಬೆಂಗಳೂರು : ರಾಜ್ಯದ ಕಾರ್ಮಿಕರಿಗೆ ಇದೀಗ ಸಚಿವ ಸಂತೋಷ್ ಲಾಡ್ ಗುಡ್ ನ್ಯೂಸ್ ಒಂದನ್ನು ನೀಡಿದ್ದು, ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಆಹಾರ, ವಸತಿ ಸೇರಿದಂತೆ ಮೂಲಭೂತ ಅಗತ್ಯತೆ ಆಧಾರವಾಗಿ ವೇತನ ನಿಗದಿ ಮಾಡುವ ಯೋಜನೆ ಜಾರಿಗೆ ಚಿಂತನೆ ನಡೆಸುತ್ತಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ಪ್ರಸ್ತುತ ಮಾಸಿಕ ಕನಿಷ್ಠ ವೇತನ ಸರಾಸರಿ 19,000 ರೂಪಾಯಿಗಳಷ್ಟಿದೆ. ಅಸಂಘಟಿತ ವಲಯದ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಬದ್ಧವಾಗಿದ್ದು, ‘ಅಂಬೇಡ್ಕರ್ ಸಹಾಯ ಹಸ್ತ’ ಎಂಬಂತೆಯೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಗಿಗ್ ವರ್ಕರ್ಸ್ (ಡೆಲಿವರಿ ಸಿಬ್ಬಂದಿ) ಹಿತರಕ್ಷಣೆಗಾಗಿ ಮಸೂದೆ ಮಂಡಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ರಾಜ್ಯದ ಕಾರ್ಮಿಕರಿಗೆ ಹೊಸ ಕನಿಷ್ಠ ವೇತನವನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಅಸಂಘಟಿತ ಕಾರ್ಮಿಕರ ಕಲ್ಯಾಣ, ಗಿಗ್ ವರ್ಕರ್ಸ್ ರಕ್ಷಣೆ, ಸ್ಮಾರ್ಟ್ ಕಾರ್ಡ್ ವಿತರಣೆ ಸೇರಿದಂತೆ…

Read More