Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಂದಿ ಗಿರಿಧಾಮ ಬಂದ್ ಮಾಡಲಾಗಿದೆ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮವನ್ನು ಇದೀಗ ಬಂದ್ ಮಾಡಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮ ಬಂದ್ ಮಾಡಲಾಗಿದೆ. ಡಿಸೆಂಬರ್ 31ರ ಮಧ್ಯಾನದಿಂದ ನಂದಿ ಗಿರಿಧಾಮ ಬಂದ್ ಇರಲಿದೆ. ಜನವರಿ 1 ಬೆಳಗ್ಗೆ 10ರವರೆಗೆ ಕ್ಲೋಸ್ ಇರುತ್ತದೆ. ಹೊಸ ವರ್ಷಾಚರಣೆಗೆ ವಾಹನ ಸಂಚಾರದಲ್ಲಿ ಕೂಡ ಬದಲಾವಣೆ ಆಗಿದ್ದು ಡಿಸೆಂಬರ್ 31 ರಿಂದ ರಾತ್ರಿ 9 ರಿಂದ ರಿಂದ ಸಂಚಾರ ಬದಲಾವಣೆ ಆಗಲಿದೆ ಎಮ್ಜಿ ರಸ್ತೆ, ಕ್ವೀನ್ಸ್ ವೃತ್ತದ ಕಡೆಯಿಂದ ಪ್ರಯಾಣಿಸುವವರು ಹಲಸೂರಿನಿಂದ ಮುಂದಕ್ಕೆ ತೆರಳುವ ವಾಹನ ಚಾಲಕರು, ಅನಿಲ್ ಕುಂಬಳೆ ವೃತ್ತದಲ್ಲಿ ಎಡ ರಸ್ತೆ ಮೂಲಕ ತಿರುವು ಪಡೆದುಕೊಳ್ಳಬೇಕು. ಸೆಂಟ್ರಲ್ ಸ್ಟ್ರೈಟ್ ಬಿ ಆರ್ ವಿ ಜಂಕ್ಷನ್ ಬಲ ರಸ್ತೆ ಮೂಲಕ ತಿರುವು ಪಡೆದುಕೊಳ್ಳಬೇಕು ಕಬ್ಬನ ರಸ್ತೆ ಮೂಲಕ ವೆಬ್ಸ್ ಜಂಕ್ಷನ್ ಬಳಿ ಎಂಜಿ ರಸ್ತೆಗೆ ತೆರಳಬಹುದಾಗಿದೆ. ಹಲಸೂರು ಕಡೆಯಿಂದ ಕಂಟ್ರೋಲ್ಮೆಂಟ್ ಕಡೆಗೆ ತೆರಳಲು ಟ್ರಿನಿಟಿ ವೃತ್ತದಲ್ಲಿ ಬಲ…
ನವದೆಹಲಿ : ಉನ್ನವು ಅತ್ಯಾಚಾರ ದೋಷಿಗೆ ಶಿಕ್ಷೆ ಕಡಿತ ಮತ್ತು ಜಾಮೀನು ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಆದೇಶಕ್ಕೆ ಇದೀಗ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅಪರಾಧಿ ಕುಲದೀಪ್ ಸೇಂಗಾರ್ ಬಿಡುಗಡೆ ಮಾಡದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಕುಟುಂಬಕ್ಕೆ ಇದೀಗ ನಿರಾಳ ಆಗಿದ್ದು ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು ಈ ವೇಳೆ ಕುಲದೀಪ್ ಸಿಂಗಾರ್ ನನ್ನು ಬಿಡುಗಡೆ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತು. ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು ಅಪರಾಧಿಗೆ ಜಾಮೀನು ನೀಡಿದ್ದನು ಪ್ರಶ್ನಿಸಿ ಸಿ ಬಿ ಐ ಮೇಲ್ಮನೆ ಅರ್ಜಿ ಸಲ್ಲಿಸಿತ್ತು. ಉತ್ತರಪ್ರದೇಶದ ನಾವು ಅತ್ಯಾಚಾರ ಪ್ರಕರಣ ಗಂಭೀರವಾದದ್ದು ಅಪರಾಧಿ ಕುಲದೀಪ್ ಶಂಕರ್ ಗೆ ಜಾಮೀನು ನೀಡಬಾರದು ಎಂದು ಸಿಬಿಐ ಮನವಿ ಮಾಡಿಕೊಂಡಿತ್ತು. ಸಿಬಿಐ ವಾದವನ್ನು ಇದೀಗ ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ಆರೋಪಿ ಕುಲದೀಪ್ ಸೆಂಗಾರ್ ಬಿಡುಗಡೆ ಮಾಡದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ
ಬಾಗಲಕೋಟೆ : ಕಳೆದ ಕ್ರಿಸ್ಮಸ್ ಹಬ್ಬದಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಳಿ ಖಾಸಗಿ ಬಸ್ ಒಂದು ಹೊತ್ತಿ ಉರಿದು ಏಳು ಜನರು ಸಜೀವವಾಗಿ ದಹನಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಬಾಗಲಕೋಟೆ: ಬೆಂಗಳೂರಿಂದ ರಾಜಸ್ಥಾನದ ಜೋಧಪುರ್ಗೆ ಹೊರಟಿದ್ದ ಖಾಸಗಿ ಬಸ್ಸಿನ ಎಂಜಿನ್ನಲ್ಲಿ ಹೊಗೆ ಕಾಣಿಸಿದೆ. ಇಳಕಲ್ ತಾಲೂಕಿನ ಗೂಡೂರು ಬಳಿ ಬಿಆರ್ ಟ್ರಾವೆಲ್ಸ್ ಬಸ್ ಚಲಿಸುತ್ತಿದ್ದಾಗ ಹೊಗೆ ಕಾಣಿಸಿದೆ. ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಕೂಡಲೇ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದಾನೆ. ಪ್ರಯಾಣಿಕರು ಲಗೇಜ್ನೊದಿಗೆ ಇಳಿದಿದ್ದಾರೆ. ಈಗ ಇಳಕಲ್ನಿಂದ ಮೆಕ್ಯಾನಿಕ್ ಕರೆಸಿ ರಿಪೇರಿ ಕೆಲಸ ಆರಂಭವಾಗಿದೆ. ರಿಪೇರಿ ಯಶಸ್ವಿಯಾದರೆ ಈ ಬಸ್ಸು ರಾಜಸ್ಥಾನಕ್ಕೆ ತೆರಳಲಿದೆ. ರಿಪೇರಿ ಆಗದೇ ಇದ್ದರೆ ಬೇರೊಂದು ಬಸ್ಸಿನ ಮೂಲಕ ಪ್ರಯಾಣಿಕರನ್ನು ಕಳುಹಿಸಲಾಗುವುದು ಎಂದು ಬಿಆರ್ ಟ್ರಾವೆಲ್ಸ್ ಹೇಳಿದೆ.
ಚಾಮರಾಜನಗರ : ಇತ್ತೀಚೆಗೆ ಗೋಕಾಕದಲ್ಲಿ ಲಕ್ಷ್ಮಿ ದೇವಿ ಜಾತ್ರೆಯಲ್ಲಿ ಕರ್ತವ್ಯನಿರತ ಎ ASI ಒಬ್ಬರು ಹೃದಯಘಾತದಿಂದ ಸಾವನ್ನಪ್ಪಿದ್ದರು. ಇದೀಗ ರಾತ್ರಿ ಕರ್ತವ್ಯ ಮುಗಿಸಿ ಬೆಳಗಿನ ಜಾವ ಮನೆಗೆ ಮರಳಿದ್ದ ಎಎಸ್ಐ (ASI) ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಂತೇಮರಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ನಾಗನಾಯಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಾಗನಾಯಕ ರಾತ್ರಿ ಡ್ಯೂಟಿ ಮುಗಿಸಿ ಬೆಳಗ್ಗೆ ಮನೆಗೆ ಬಂದಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ASI ಕೊನೆಯುಸಿರೆಳೆದಿದ್ದಾರೆ. ನಗರದ ಪೊಲೀಸ್ ಗೃಹದಲ್ಲಿ ವಾಸವಿದ್ದ ಮನೆಯಲ್ಲಿ ಕುಸಿದು ಬಿದ್ದು ಎಎಸ್ಐ ನಾಗನಾಯಕ ಮೃತಪಟ್ಟಿದ್ದಾರೆ
ಬೆಂಗಳೂರು : ಬೆಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು ಬಂಡಿಪಾಳ್ಯದ ಮನೆಯಲ್ಲಿದ್ದ 2.5 ಕೋಟಿ ಮೌಲ್ಯದ ಡ್ರಗ್ಸ್ ಇದೀಗ ಜಪ್ತಿ ಮಾಡಿದ್ದಾರೆ. ಓರ್ವ ವಿದೇಶ ಪ್ರಜೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನೈಜೀರಿಯಾ ಮೂಲದ ಒಕೋಕೆ ಕ್ರಿಸ್ತಫಾರ್ ಒಕೆಡೀಲ್, ಹಾಗೂ ತಮಿಳುನಾಡಿನ ನವೀನ್ ರಾಜ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಕಾರ್ಯಾಚರಣೆ ನಡೆಸಿದ್ದು ಬಂಡಿಪಾಳ್ಯದ ನವೀನ್ ರಾಜ್ ಮನೆಯಲ್ಲಿ ಡ್ರಗ್ಸ್ ಜತ್ತಿ ಮಾಡಲಾಗಿದೆ. ಡಾರ್ಕ್ ವೆಬ್ ಮೂಲಕ ಡ್ರಿಕ್ಸ್ ತಂದು ನವೀನ್ ಮಾರಾಟ ಮಾಡುತ್ತಿದ್ದ. ಸ್ನೇಹಿತರಿಂದ ತರಿಸಿಕೊಂಡು ವಿದೇಶಿ ಪ್ರಜೆ ಮಾರಾಟ ಮಾಡುತ್ತಿದ್ದ ಸ್ಥಳೀಯರು ಮತ್ತು ಐಟಿಬಿಟಿ ಉದ್ಯೋಗಗಳು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು.ಈ ಹಿಂದೆಯೂ ಕೂಡ ಎರಡು ಬಾರಿ ಒಕ್ಕೋಕೆ ಕ್ರಿಸ್ಟಾಫರ್ ಅರೆಸ್ಟ್ ಆಗಿದ್ದ ಬೇಲ್ ಮೇಲೆ ಹೊರಗಡೆ ಬಂದು ಮತ್ತೆ ಅದೇ ಕೆಲಸ ಮುಂದುವರಿಸಿದ್ದಾನೆ. ಇದೀಗ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.
ಧಾರವಾಡ : ಧಾರವಾಡದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿ ಚಲಿಸುತ್ತೀದ್ದ ಲಾರಿಯ ಚಕ್ರದ ಅಡಿಗೆ ಸಿಲುಕಿ ಇಬ್ಬರು ಯುವಕರು ಲಾರಿಯ ಚಕ್ರದ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿ ಮಿಶ್ರಾಪೇಡಾ ಮುಂಭಾಗ ನಡೆದಿದೆ. ಮೃತರನ್ನು ಧಾರವಾಡದ ಗೌಳಿ ಗಲ್ಲಿಯ ಕಿಶನ್ ಖಾನವಾಲೆ (30) ಮತ್ತು ಕಿರಣ ಖಡವಾಕರ್ (32) ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿ ಮಿಶ್ರಾಪೇಡಾ ಮುಂಭಾಗ ಸ್ಕೂಟಿ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಕೂಟಿ ಸವಾರರು ಲಾರಿ ಚಕ್ರದಡಿ ಸಿಲುಕಿದ್ದಾರೆ. ಪರಿಣಾಮ ಮೃತದೇಹಗಳು ರಸ್ತೆಯಲ್ಲಿ ಛಿದ್ರಗೊಂಡು ಬಿದ್ದಿದ್ದವು. ಘಟನೆಯ ಬಳಿಕ ಸ್ಥಳೀಯರು ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ತೆರವುಗೊಳಿಸಿ, ಆಸ್ಪತ್ರೆಗೆ ರವಾನಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದ್ದು, ತನ್ನ ಮೂರು ವರ್ಷದ ಮೊಮ್ಮಗನಿಗೆ ಅಜ್ಜನೇ ಸಾರಾಯಿ ಕುಡಿಸಿದ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ಪಟ್ಟಣದ ಬಾರ್ವೊಂದರಲ್ಲಿ ನಡೆದಿದೆ. ಮಗುವಿನ ಎದುರು ತಾನೂ ಸಾರಾಯಿ ಕುಡಿದ ದ್ದಲ್ಲದೆ ಎಳೆ ವಯಸ್ಸಿನ ಮೊಮ್ಮಗನಿಗೂ ಸಾರಾಯಿಯ ರುಚಿ ತೋರಿಸಿದ್ದಕ್ಕೆ ವೃದ್ಧನ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ರಾತ್ರಿ ರಾಯಭಾಗ ಪಟ್ಟಣದ ಬಾರ್ಗೆ ತನ್ನ ಮೂರು ವರ್ಷದ ಮೊಮ್ಮಗ ನೊಂದಿಗೆ ಆಗಮಿಸಿದ ವ್ಯಕ್ತಿ, ಆತನ ಎದುರು ತಾನೂ ಕುಡಿದದ್ದಲ್ಲದೆ, ಮಗುವಿಗೂ ಸಾರಾಯಿ ಕುಡಿಸಿದ್ದಾನೆ. ಆ ವೇಳೆ, ಸ್ಥಳೀಯರು ಕುಡಿಸೋದು ಬೇಡ, ಬೇಡ ಎಂದರೂ ಅವರ ಮಾತಿಗೆ ಬೆಲೆ ಕೊಡದೆ, ತಾನೇ ಗ್ಲಾಸ್ ನಲ್ಲಿ ಸರಾಯಿ ಹಾಕಿಕೊಟ್ಟಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಾರ್ಮತ್ತು ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಬಕಾರಿ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆಯೇ ಎಂದು…
ಬೀದರ್ : ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಇದೀಗ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ. ಬೀದರ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದೆ. ಉದ್ಯಮಿ ಸಂಜು ಕುಮಾರ್ ಸೂಗೂರೆ ದೂರನ್ನು ಆಧರಿಸಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಉದ್ಯಮಿ ಸಂಜುಕುಮಾರ ಸುಗುರೆ 99 ಲಕ್ಷ ಹಣ ಕೊಟ್ಟಿದ್ದರು. ಚುನಾವಣೆ ಸಮಯದಲ್ಲಿ ಶರಣು ಸಲಗರ ಸಂಜು ಕುಮಾರ್ ಸುಗುರೆ ಬಳಿ 99 ಲಕ್ಷ ಹಣ ಪಡೆದಿದ್ದಾರೆ. ಖಾಲಿ ಚಕ್ ಪಡೆದು ಸಂಜು ಕುಮಾರ್ 99 ಲಕ್ಷ ರೂಪಾಯಿ ಹಣ ಕೊಟ್ಟಿದ್ದಾರೆ. ಆದರೆ ಹಣ ವಾಪಸ್ ಕೊಡದ ಹಿನ್ನೆಲೆಯಲ್ಲಿ ಸಂಜು ಕುಮಾರ್ ಶರಣು ಸಲಗರ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ.
ಬಾಗಲಕೋಟೆ : ರಾಜಕಾರಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಹಜ ಏಕತೆ ಮುಖ್ಯವಾಗಿದೆ. ಬಸನಗೌಡ ಪಾಟೀಲ ಹಾಗೂ ನಾನು ಒಂದೇ ಜಿಲ್ಲೆಯವರು ಎಂದು ಮುರುಗೇಶ್ ನಿರಾಣಿ ಹೇಳಿಕೆ ನೀಡಿದರು. ಬಾಗಲಕೋಟೆ ಜಿಲ್ಲೆಯ ಅರಬಕವಿ ಬನಹಟ್ಟಿ ತಾಲೂಕಿನ ಎಲ್ಲಟ್ಟಿ ಗ್ರಾಮದಲ್ಲಿ ನಿನ್ನೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೇನೆ ಮಾಜಿ ಸಚಿವ ಮುರುಗೇಶ್ ನಿರಾಣಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರನ್ನು ಹಾಡಿ ಹೊಗಳಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಮುರುಗೇಶ್ ನಿರಾಣಿ ಹಾಡಿ ಹೊಗಳಿದ್ದಾರೆ. ಯತ್ನಾಳ ಗುಡ್ ಬ್ಯಾಟ್ಸ್ಮನ್ ಬೌಲರ್ ಮತ್ತು ವಿಕೆಟ್ ಕೀಪರ್ ಆಗಿದ್ದಾರೆ. ಶ್ರೇಷ್ಠ ಬ್ಯಾಟ್ಸಮನ್ ಆಗಿರುವ ನೀವು ಎಲ್ಲ ಬೌಲರ್ ಗಳಿಗೆ ಶಿಕ್ಷೆ ಹೊಡೆಯಬೇಡಿ. ಒಳ್ಳೆಯ ಬೌಲರ್ ಗೆ ಮಾತ್ರ ಸಿಕ್ಸ್ ಹೊಡೆಯಿರಿ. ರಾಜಕಾರಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಹಜ ಏಕತೆ ಮುಖ್ಯ ಬಸನಗೌಡ ಹಾಗೂ ನಾನು ಒಂದೇ ಜಿಲ್ಲೆಯವರು ಎಂದು ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದು ಈ ಒಂದು ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು : ಧರ್ಮಸ್ಥಳದ ವಿರುದ್ಧ ಷಡ್ಯಂತರ ಮತ್ತು ಅಪಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ SIT ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ಮತ್ತಷ್ಟು ಸ್ಪೋಟಕವಾದ ಅಂಶಗಳು ಬಯಲಾಗಿದೆ. ಜಯಂತ್ ರೈಲಿನಲ್ಲಿ ದೆಹಲಿಗೆ ಬುರುಡೆ ತೆಗೆದುಕೊಂಡು ಹೋಗಿದ್ದ ಫ್ಲೈಟ್ ನಲ್ಲಿ ಚಿನ್ನಯ್ಯ, ಗಿರೀಶ್ ಮಟಣ್ಣನವರ್ ಹಾಗು ಸುಜಾತ ಭಟ್ ತೆರಳಿದ್ದಾರೆ ಎಂದು ಕೋರ್ಟಿಗೆ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖವಾಗಿದೆ.. ದೆಹಲಿಯಲ್ಲಿ ರಾತ್ರಿ ಮಲಗಿದ್ದಾಗ ಜಯಂತ್ ಗೆ ಕೆಟ್ಟ ಕನಸು ಬಿದ್ದಿತ್ತು. ಒಂದೇ ರೂಮ್ನಲ್ಲಿ ಚಿನ್ನಯ, ಮಟ್ಟಣ್ಣನವರ್ ಮತ್ತು ಜಯಂತ್ ಮಲಗಿದ್ದಾರೆ. ಕೆಟ್ಟ ಕನಸು ಬಿದ್ದು ಜಯಂತ್ ಕಿರುಚಿಕೊಂಡಿದ್ದಾನೆ. ಹಾಗಾಗಿ ಬುರುಡೆ ತರಲು ಒಪ್ಪದೇ ಆತ ಹೆದರಿ ವಾಪಸ್ ಆಗಿದ್ದಾನೆ. ದೆಹಲಿಯಲ್ಲಿಯೇ ಬುರುಡೆಯನ್ನು ಬಿಟ್ಟು ಬೆಂಗಳೂರಿಗೆ ಜಯಂತ ವಾಪಸ್ ಆಗಿದ್ದಾನೆ. ಬೆಂಗಳೂರಿಗೆ ಜಯಂತ್ ಗಿರೀಶ ಮಟ್ಟಣ್ಣನವರ್ ಹಾಗೂ ಸುಜಾತ ಭಟ್ ವಾಪಸ್ ಆಗಿದ್ದಾರೆ. ಮತ್ತೆ ವಿಮಾನದ ಮೂಲಕ ತೆರಳಿದ್ದಾನೆ. ನಂತರ ರೈಲಿನ ಮೂಲಕ ಬುರುಡೆಯನ್ನು ತಂದಿದ್ದಾನೆ. ದೆಹಲಿಯಿಂದ ನೇರವಾಗಿ ಜಯಂತ್ ಮಂಗಳೂರಿಗೆ ಬಂದಿದ್ದಾನೆ. ಬಳಿಕ…














