Subscribe to Updates
Get the latest creative news from FooBar about art, design and business.
Author: kannadanewsnow05
ತುಮಕೂರು : ಕಳೆದ ಜನೆವರಿಯಲ್ಲಿ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿ ಗ್ರಾಮದ ಪರಮೇಶ್ ಎಂಬುವವರ ಸಾವಿನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಪರಮೇಶ್ ಮೃತಪಟ್ಟು ಇನ್ನೂ ತಿಂಗಳು ಕಳೆದಿರಲಿಲ್ಲ, ಅಷ್ಟರಲ್ಲೇ ಆತನ ಪತ್ನಿ ಆಶಾ ಇನ್ನೊಂದು ಮದುವೆಯಾದ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಆಶಾ ಸೇರಿದಂತೆ ಇಬ್ಬರನ್ನು ಪೊಲೀಸರು ಅರೆಸ್ಟ್ ಮಡಿದ್ದಾರೆ. ಪತಿ ಮೃತಪಟ್ಟ 20 ದಿನಕ್ಕೆ ಆತನ ಪತ್ನಿ ಮತ್ತೊಂದು ಮದುವೆಯಾದ ನಂತರ ಪತಿ ಕೊಲೆಯಾಗಿದ್ದಾನೆ ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ. ಆತನ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಹೊರಬಿದ್ದಿದೆ. ಕೊಲೆ ಮಾಡಿದ್ದ ಮೃತನ ಪತ್ನಿ ಮತ್ತು ಮೂರನೇ ಗಂಡ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ. ಪ್ರಕರಣ ಹಿನ್ನೆಲೆ? ಜನವರಿ 30ರಂದು ಹೃದಯಾಘಾತದಿಂದ ಸಾವನಪ್ಪಿದ್ದಾನೆ ಎಂದು ಪರಮೇಶ್ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲಾಗಿತ್ತು. ತುಮಕೂರು ತಾಲೂಕಿನ ಹೆಬ್ಬೂರಿನ ದಾಸರಹಳ್ಳಿ ನಿವಾಸಿ ಮೃತ ಪರಮೇಶ್ ಅವರು ಆಶಾಳನ್ನ ಎರಡನೇ ಮದುವೆ ಆಗಿದ್ದರು. ಮಾಗಡಿ…
ಬೆಂಗಳೂರು : ಟಾಲಿವುಡ್ ಖ್ಯಾತ ನಟ ಜೂನಿಯರ್ NTR ಬೆಂಗಳೂರಿಗೆ ಭೇಟಿ ನೀಡಿದ್ದು, ಬೆಂಗಳೂರಿನ ಮಾದೇವಪುರದಲ್ಲಿರುವ ನೂತನ ಕಿಮ್ಸ್ ಆಸ್ಪತ್ರೆ ಉದ್ಘಾಟನೆ ಮಾಡಿದರು. ಟಾಲಿವುಡ ಜೂನಿಯರ್ NTR ನೋಡಲು ಅಭಿಮಾನಿಗಳು ಇದೇ ವೇಳೆ ಮುಗಿಬಿದ್ದರು. ಪೊಲೀಸರಿಂದ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಈ ವೇಳೆ ಪೊಲೀಸರು ಲಘು ಲಾಟಿಚಾರ್ಜ್ ನಡೆಸಿ ಗುಂಪು ಚದುರಿಸಿದರು.
ಬೆಂಗಳೂರು : ಬೆಂಗಳೂರಿನ ಜಯ್ ಮಹಲ್ ಹಿಟ್ ಅಂಡ್ ರನ್ ಕೇಸ್ ಘಟನೆ ನಡೆದಿದ್ದು, ಬೈಕಿಗೆ ಗುದ್ದಿ ಇನೋವಾ ಚಾಲಕ ಎಳೆದೊಯ್ದಿದ್ದಾನೆ. ಡಿಕ್ಕಿ ರಭಸಕ್ಕೆ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಹಿಟ್ ಅಂಡ್ ರನ್ನಿನ ದೃಶ್ಯ ಸೆರೆಯಾಗಿದೆ. ಕಾರು ಗುದ್ದಿದ ರಭಸಕ್ಕೆ ಬೈಕ್ ನಿಂದ ಪೆಟ್ರೋಲ್ ಲೀಕ್ ಆಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮಹಿಳೆಗೆ ಗಂಭೀರ ಗಾಯವಾಗಿದ್ದು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಾಗಿದೆ. ಅಪಘಾತ ಮಾಡಿದ ನಂತರ ಕಾರು ಚಾಲಕ ಅಲ್ಲಿಂದ ಪರಾರಿ ಆಗಿದ್ದಾನೆ.
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಹಾಲು ಒಕ್ಕೂಟ, ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಲೀಟರ್ ಹಾಲಿಗೆ 50 ಪೈಸೆ ಹೆಚ್ಚಳ ಮಾಡಿ ಚಿಮುಲ್ ನಿರ್ಣಯ ಕೈಗೊಂಡಿದೆ. ಕಳೆದ ಹೊಸ ವರ್ಷಕ್ಕೆ ಜನವರಿ 1 ರಂದು ಲೀಟರ್ಗೆ 1 ರೂಪಾಯಿ ಹೆಚ್ಚಳ ಮಾಡಿದ್ದ ಚಿಮುಲ್ ಈಗ ಮತ್ತೆ 50 ಪೈಸೆ ಏರಿಕೆ ಮಾಡಿದೆ. ಇದರಿಂದ ಹೈನುಗಾರರಿಗೆ ಪ್ರತಿ ಲೀಟರ್ಗೆ 36 ರೂಪಾಯಿ 40 ಪೈಸೆ ಸಿಗಲಿದ್ದು, ಮೇ ಅಂತ್ಯದವರೆಗೂ ಈ 50 ಪೈಸೆ ಹೆಚ್ಚಳ ಇರಲಿದೆ. ಈಗಾಗಲೇ ಹೊಸ ವರ್ಷಕ್ಕೆ ಒಂದು ರೂಪಾಯಿ ಏರಿಕೆ ಮಾಡಿದ್ದು ಅಧಿಕ ಲಾಭ ಬಂದ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಇದೀಗ 50 ಪೈಸೆ ಹೆಚ್ಚಳ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಲಾಭಾಂಶ ಬಂದರೆ ಹಾಲು ಉತ್ಪಾದಕರಿಗೆ ಮತ್ತಷ್ಟು ದರ ಹೆಚ್ಚಳ ಮಾಡುವ ಕುರಿತು ತೀರ್ಮಾನಿಸಲಾಗುತ್ತೆ ಎಂದು ಚಿಮುಲ ಅಧ್ಯಕ್ಷ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು : ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಮುಂದುವರಿದ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24 ವಿಮಾನಗಳ ಹಾರಾಟ ರದ್ದಾಗಿದೆ. ಅರಬ್ ರಾಷ್ಟ್ರಗಳಿಗೆ ತೆರಳಬೇಕಿದ್ದ ಮತ್ತು ಆಗಮಿಸಬೇಕಿದ್ದ 24 ವಿಮಾನಗಳ ಹಾರಾಟ ರದ್ದಾಗಿದೆ. ಕೆಂಪೇಗೌಡ ಏರ್ಪೋರ್ಟ್ ನಿಂದ 12 ವಿಮಾನಗಳು ತಿರುಳಬೇಕಿತ್ತು. ಇನ್ನು ಅರಬ್ ರಾಷ್ಟ್ರಗಳಿಂದ 12 ವಿಮಾನಗಳು ಆಗಮಿಸಬೇಕಿತ್ತು. ಆದರೆ ಯುದ್ಧ ಮುಂದುವರೆದ ಹಿನ್ನೆಲೆಯಲ್ಲಿ ಆಗಮಿಸಬೇಕಿದ್ದ ಮತ್ತು ತೆರಳಬೇಕಿದ್ದ 24 ವಿಮಾನಗಳ ಹಾರಾಟ ರದ್ದಾಗಿದೆ.
ಚಿಕ್ಕಮಗಳೂರು : ಕಾರ್ಯಕರ್ತನಿಂದಲೇ ಕಾಂಗ್ರೆಸ್ ನಾಯಕಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜಸ್ಥಾನದ ಅಜ್ಮೀರ್ ನಲ್ಲಿ ಕಾಂಗ್ರೆಸ್ ಮುಖಂಡ ರಾಹಿಲನ್ನು ಅರೆಸ್ಟ್ ಮಾಡಲಾಗಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಳಿ ಈ ಒಂದು ಘಟನೆ ನಡೆದಿತ್ತು. ಚೇತನ ನಿವಾಸದ ಬಳಿ ತೆರಳಿ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಲಾಗಿತ್ತು. ಕಾಂಗ್ರೆಸ್ ನಾಯಕಿ ಚೇತನ ಹತ್ಯೆಗೆ ರಾಹುಲ್ ಶರೀಫ್ ಯತ್ನಿಸಿದ್ದ. ಚೇತನಾ ಪತಿ ಮೇಲು ಲಾಂಗ್ ನಿಂದ ರಾಹಿಲ್ ಹಲ್ಲೆ ಮಾಡಿದ್ದ. ಚೇತನ ಮನೆಯಲ್ಲಿ ಬಾಡಿಗೆಗೆ ಇದ್ದ ಆರೋಪಿ ರಾಹಿಲ್ ಶರೀಫ್, ನಿರಂತರವಾಗಿ ಗಲಾಟೆ ಬೆನ್ನಲ್ಲೇ ದಂಪತಿಗಳು ರಾಹುಲ್ ಅನ್ನು ಮನೆ ಖಾಲಿ ಮಾಡಿಸಿದ್ದರು.ಮನೆ ಖಾಲಿ ಮಾಡಿಸಿದ್ದಕ್ಕಾಗಿ ರಾಹಿಲ್ ಮತ್ತು ಆತನ ತಂಡ ದಂಪತಿ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಹಿಲ್ ಶರೀಫ್ ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಬಳಿಕ ಎಸ್ ಪಿ ಜಿತೇಂದ್ರ ರಾಹಿಲ್ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದರು. ಇದೀಗ ರಾಹಿಲ್ ನನ್ನು ಬಂಧಿಸಿ ಅಭಯ ಪ್ರಕಾಶ್…
ಬೆಂಗಳೂರು : ಬಿಜೆಪಿ ಜೆಡಿಎಸ್ ಮಧ್ಯ ಮೈತ್ರಿ ಕೇವಲ ಹೆಸರಿಗಷ್ಟೇ ಆದಂತಾಗಿದೆ. ಏಕೆಂದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಈ ವಿಚಾರವಾಗಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ನಮ್ಮದು ಒನ್ ಸೈಡ್ ಲವ್ ಆಗಿದೆ. ನಾವು ಬಿಜೆಪಿಯನ್ನು ಪ್ರೀತಿಸುತ್ತೇವೆ, ಆದರೆ ಅವರು ನಮ್ಮನ್ನು ಇಷ್ಟಪಡಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೌದು ಶಾಸಕ ಶರಣಗೌಡ ಕಂದಕೂರು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ರೆ 140-150 ಸ್ಥಾನ ಬರುತ್ತೆ. ಮೈತ್ರಿ ಇದ್ದರೂ ಇಲ್ಲದಿದ್ದರೂ ನಮ್ಮ ಸಿಎಂ ಅಭ್ಯರ್ಥಿ ಕುಮಾರಸ್ವಾಮಿ ಎಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿಯವರು ನಿಮ್ಮ ಪಕ್ಷದ ಸಿಎಂ ಅಭ್ಯರ್ಥಿ ಯಾರು ಎಂದು ಹೇಳಿ. ನಮ್ಮದು ಒಂದು ಸೈಡ್ ಲವ್ ಆಗಿದೆ. ನಾವು BJPಯವರನ್ನು ಪ್ರೀತಿಸುತ್ತೇವೆ, ಆದರೆ ಅವರು ನಮ್ಮನ್ನ ಪ್ರೀತಿಸ್ತಿಲ್ಲ. ಸಮನ್ವಯತೆಯಿಂದ ಹೋಗಿದ್ದಕ್ಕೆ MP ಚುನಾವಣೆಯಲ್ಲಿ 19 ಸ್ಥಾನ ಗೆದ್ವಿ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಲಿ ಎಂದು ರಾಜ್ಯದ…
ಪ್ರಾಚೀನ ಕಾಲದಲ್ಲಿ ಹಣವನ್ನು ಭದ್ರವಾಗಿಡಳು ಯಾವುದೇ ರೀತಿಯ ಬ್ಯಾಂಕುಗಳು ಇರಲಿಲ್ಲ, ಆದ್ದರಿಂದ ಪ್ರಾಚೀನ ಕಾಲದಲ್ಲಿ ಚಿನ್ನಾಭರಣವನ್ನು ಒಂದು ಪಾತ್ರೆಯಲ್ಲಿ ಅಥವಾ ಮಡಿಕೆಯಲ್ಲಿ ಹಾಕಿ ನೆಲದಲ್ಲಿ ಹೂತು ಹಾಕುತ್ತಿದ್ದರು, ಈ ರೀತಿ ಮಾಡುವುದರಿಂದ ಹೂತುಹಾಕಿದ ಹಣ ಕಳ್ಳರಿಂದ ರಕ್ಷಣೆ ಗೊಳ್ಳುವುದರ ಜೊತೆಗೆ ತಮಗೆ ಬೇಕಾದಾಗ ಅದನ್ನು ತೆಗೆದು ಉಪಯೋಗಿಸಿಕೊಳ್ಳುತ್ತಿದ್ದರು. ಒಂದು ವೇಳೆ ಹೂತು ಹಾಕಿದ ಹಣವನ್ನು ಮರೆತುಹೋದರೆ ಅದು ಅಲ್ಲಿಯೇ ಯಾರಿಗೂ ತಿಳಿಯದೆ ಹಾಗೆ ಉಳಿಯುತ್ತಿತ್ತು . ಈ ಸಸ್ಯವನ್ನು ಮಂಗನ ಬಳ್ಳಿ ಎಂದು ಕರೆಯಲಾಗುತ್ತದೆ, ಈ ಸಸ್ಯವು ಯಾವ ಸಸ್ಯದ ಮೇಲೆ ಬೆಳೆಯುತ್ತದೆಯೋ ಆ ಸಸ್ಯದ ಪೋಷಕಾಂಶವನ್ನು ಇದು ತೆಗೆದುಕೊಳ್ಳುತ್ತದೆ. ಮೊದಲಿಗೆ ಶನಿವಾರ ದಿನ ನಿಮಂತ್ರಣವನ್ನು ಕೊಟ್ಟು ಬರಬೇಕು ತದನಂತರ ಭಾನುವಾರದ ದಿನ ಸಸ್ಯದ ಬಳಿ ಹೋಗಿ ನಮ್ಮ ಬಡತನವನ್ನು ನಿರ್ಮೂಲನೆ ಮಾಡಲು ಹಾಗೂ ನಮ್ಮ ಹಿರಿಯರು ಬಿಟ್ಟುಹೋಗಿದ್ದ ನಿಧಿಯನ್ನು ಹುಡುಕಲು ನಿನ್ನನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಪ್ರಾರ್ಥನೆಯನ್ನು ಮಾಡಿ ನಮಸ್ಕರಿಸಿ ಸಸ್ಯದ ಬೇರನ್ನು ಮನೆಗೆ ತೆಗೆದುಕೊಂಡು ಬರಬೇಕು. ಶ್ರೀ ಸಿಗಂಧೂರು…
ಕಲಬುರ್ಗಿ : ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಆಂದೋಲಾ ಗ್ರಾಮದ ಮಠದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನ ಹೊಲಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಸ್ಥಳೀಯ ಯುವಕರು ಈ ಕೃತ್ಯದ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟ ಬೆನ್ನಲ್ಲೇ ಆರೋಪಿ ಮಸ್ತಾಕ್ ಹುಸೇನ್ ಎಂಬಾತ ಗ್ರಾಮದಿಂದ ಪರಾರಿಯಾಗಿದ್ದು, ಜೇವರ್ಗಿ ಸಿಡಿಪಿಓ ನೀಡಿದ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಬೆಂಗಳೂರು : ಬೆಂಗಳೂರಲ್ಲಿ ಹೈಕೋರ್ಟ್ ಜಡ್ಜ್ ಜಿ.ಬಸವರಾಜ್ ಅವರ ಕಾರು ಅಪಘಾತವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಜಿ.ಬಸವರಾಜ್ ಕಾರು ಅಪಘಾತ ಸಂಭವಿಸಿದೆ. ನೆಲಮಂಗಲ ತಾಲೂಕಿನ ರಾಯರ ಪಾಳ್ಯ ಬಳಿ ಈ ಒಂದು ಘಟನೆ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ, ಕಾರಿನಲ್ಲಿದ್ದ ಹೈಕೋರ್ಟ್ ನ್ಯಾಯಮೂರ್ತಿ ಜಿ.ಬಸವರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವ್ಯಕ್ತಿ ಅಡ್ಡ ಬಂದ ಹಿನ್ನೆಲೆ ಅವೈಡ್ ಮಾಡಲು ಹೋಗಿ ಪೊಲೀಸ್ ವಾಹನ ಡಿಕ್ಕಿ ಹೊಡೆದಿದೆ. ಸಿಮೆಂಟ್ ಸ್ಲಾಬ್ ಗೆ ಪೊಲೀಸ್ ಎಸ್ಕಾರ್ಟ್ ವಾಹನ ಡಿಕೆ ಹೊಡೆದಿದೆ. ಈ ವೇಳೆ ಎಸ್ಕಾರ್ಟ್ ವಾಹನಕ್ಕೆ ಜಡ್ಜ್ ಇದ್ದ ಕಾರು ಡಿಕ್ಕಿ ಹೊಡೆದಿದೆ. ಪೊಲೀಸ್ ಚಾಲಕನಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾರಿನಲ್ಲಿ ಇದ್ದಂತಹ ನ್ಯಾಯಮೂರ್ತಿಗಳು ಮತ್ತು ಇತರರು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ














