Subscribe to Updates
Get the latest creative news from FooBar about art, design and business.
Author: kannadanewsnow05
ಬೆಳಗಾವಿ : ಬೆಳಗಾವಿಯಲ್ಲಿ PHD ಪದವಿ ನೀಡದ ಆರೋಪ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಯನ್ನು ಸುಜಾತ ಬೆಂಡೆ (32) ಎಂದು ತಿಳಿದುಬಂದಿದೆ. ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಾಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ರಾಣಿ ಚೆನ್ನಮ್ಮ PHD ವಿದ್ಯಾರ್ಥಿನಿ ಸುಜಾತ ಅಸ್ವಸ್ಥ ವಿದ್ಯಾರ್ಥಿನಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಶ್ವ ವಿದ್ಯಾಲಯ ಘಾಟಿಕೋತ್ಸವದಲ್ಲಿ PHD ಪದವಿ ಪ್ರದಾನ ಮಾಡದ ಆರೋಪ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಾಯದ ಕುಲಪತಿ ಸಿಎಂ ತ್ಯಾಗರಾಜ್ ಕುಲಸಚಿವ ಸಂತೋಷ ಕಾಮೇಗೌಡ, ಗೈಡ್, KLN ಮೂರ್ತಿ ವಿರುದ್ಧ ಆರೋಪ ಕೇಳಿಬಂದಿದೆ. ರಾಯಭಾಗ ಪ್ರದೇಶದ ಸಮಗ್ರ ಚಾರಿತ್ರಿಕ ವಿಷಯದಲ್ಲಿ ಸಂಶೋಧನೆ 6 ತಿಂಗಳ ಹಿಂದೆ ಸಲ್ಲಿಕೆ ಮಾಡಿದ್ದ PHD ವಿದ್ಯಾರ್ಥಿನಿ ಸುಜಾತ. ಟಾರ್ಗೆಟ್ ಮಾಡಿ PHD ಪದವಿ ಕೊಡಲು ನಿರಾಕರಣೆ ಆರೋಪ ಕೇಳಿಬಂದಿದೆ. ಗೈಡ್ ಮೂರ್ತಿ ಕಿರುಕುಳ ಬಗ್ಗೆ ವಿಸಿ ಕುಲಸಚಿವರಿಗೆ…
ಹಾಸನ : ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮಚ್ಚಿನಿಂದ ಕೊಚ್ಚಿ ಸಹೋದರನ ಭೀಕರ ಕೊಲೆ ಮಾಡಲಾಗಿದೆ. ಸೋಂಪುರ ಬಳಿ ಜಮೀನಿನಲ್ಲಿ ದಯಾಕರ್ (46) ಎನ್ನುವ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಸೋಂಪುರ ಗ್ರಾಮದಲ್ಲಿ ತಂದೆ ಕಾಲದ ಆಸ್ತಿಯಲ್ಲಿ ಪಾಲು ಸಂಬಂಧ ಸಹೋದರರ ನಡುವೆ ಗಲಾಟೆಯಾಗಿದೆ. ಆಸ್ತಿಯಲ್ಲಿ ಹೆಚ್ಚಿನ ಪಾಲು ಕೇಳಿ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಕೇಸ್ ವಿಚಾರಣೆ ಆಸ್ತಿ ಕೈ ತಪ್ಪುವ ಭೀತಿಯಿಂದ ದಯಾಕರ್ ನನ್ನ ಸಹೋದರ ಸಂಬಂಧಿ ಹಾಗು ಶಿಕ್ಷಕನಾಗಿರುವ ರಾಜಶೇಖರ್ ಕೊಲೆ ಮಾಡಿದ್ದಾನೆ. ತಮ್ಮ ವಶದಲ್ಲಿದ್ದ ಜಮೀನಿನಲ್ಲಿ ಬೆಳೆದಿದ್ದ ಸಿಲ್ವರ್ ಮರ ಕಡಿಸುತ್ತಿದ್ದ. ಕೋರ್ಟ್ನಲ್ಲಿ ಕೇಸ್ ನಡೆಯುತ್ತಿರುವ ಹಿನ್ನೆಲೆ ಮರ ಕಡಿಯದಂತೆ ದಯಾಕರ್ ಒತ್ತಾಯ ಮಾಡಿದ್ದಾರೆ. ಈ ವೇಳೆ ತಡೆಯಲು ಮುಂದಾದ ದಯಾಕರ ಮೇಲೆ ಮಚ್ಚಿನಿಂದ ದಾಳಿ ನಡೆಸಲಾಗಿದೆ. ಜಮೀನಿನಲ್ಲಿಯೇ ದಯಾಕರನನ್ನು ಕೊಚ್ಚಿ ಸಹೋದರ ರಾಜಶೇಖರ್ ಕೊಲೆ ಮಾಡಿದ್ದಾನೆ. ದಯಾಕರ್ ನನ್ನ ಕೊಂದ ಬಳಿಕ ಶಿಕ್ಷಕ ರಾಜಶೇಖರ್ ಪರಾರಿಯಾಗಿದ್ದಾನೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ…
ಬೆಂಗಳೂರು : ಬೆಂಗಳೂರು ಚೆನ್ನೈ ಹೆದ್ದಾರಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಲಾರಿ ಹಾಗೂ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಪೆರಾಂಡಪಲ್ಲಿಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದಿರುವ ರಭಸಕ್ಕೆ ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ ಅಪಘಾತದಲ್ಲಿ ಗಾಯಗೊಂಡ ಐವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೆ ಅಪಘಾತದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡುತ್ತಿದ್ದಾರೆ ಮೂಲಕ ಕಾರುಗಳನ್ನು ತೆರವು ಮಾಡಲಾಗುತ್ತಿದೆ
ರಾಯಚೂರು : ಸಾವು ಅನ್ನೋದು ಯಾರಿಗೆ ಯಾವ ಸಮಯದಲ್ಲಿ ಯಾವ ರೂಪದಲ್ಲಾದರೂ ಬರಬಹುದು ಇದೀಗ ರಾಯಚೂರಿನಲ್ಲಿ ಮನಕಲಕುವ ಘಟನೆ ಒಂದು ನಡೆದಿದ್ದು, ಮಾಂಗಲ್ಯ ಧಾರಣೆಗೂ ಮುನ್ನ ಹೃದಯಘಾತದಿಂದ ವರನ ತಂದೆ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಜೈನ ಕಲ್ಯಾಣ ಮಂಟಪದಲ್ಲಿ ಈ ಒಂದು ಘಟನೆ ನಡೆದಿದೆ. ಸಿಂಧನೂರಿನ ಗಂಗಾನಗರದ ಶರಣಯ್ಯ ಸ್ವಾಮಿ (55) ಮೃತ ದುರದೇವಿ ಎಂದು ತಿಳಿದುಬಂದಿದೆ ಬೆಳಿಗ್ಗೆ ಶರಣಯ್ಯ ಸ್ವಾಮಿಪುತ್ರ ತಾಳಿ ಕಟ್ಟಬೇಕಾಗಿತ್ತು. ಬೆಳಗಿನ ಜಾವ ಹೃದಯಾಘಾತದಿಂದ ಶರಣಯ್ಯ ಸ್ವಾಮಿ ಸಾವನಪ್ಪಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಶರಣಯ್ಯ ಸ್ವಾಮಿ, ಮಗನ ಮದುವೆ ಮಾಡಲು ಲವಲವಿಕೆಯಿಂದ ಓಡಾಡಿಕೊಂಡಿದ್ದರು. ವರನ ತಂದೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮದುವೆ ಸಮಾರಂಭವನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಎಂಎಸ್ ಉಮೇಶ್ ಕೊನೆಯುಸಿರೆಳೆದಿದ್ದಾರೆ. ಅವರು ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರು ಕಳೆದ ತಿಂಗಳು ಮನೆಯಲ್ಲಿ ಕಾಲು ಜಾರಿ ಬಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಎಂಆರ್ಐ ಹಾಗೂ ಸಿಟಿ ಸ್ಕ್ಯಾನ್ ಮಾಡಿದ ಬಳಿಕ ಲಿವರ್ನಲ್ಲಿ ದೊಡ್ಡ ಗಾತ್ರದ ಗಡ್ಡೆ ಇರುವುದು ಪತ್ತೆಯಾಗಿತ್ತು. ಲಿವರ್ ಕ್ಯಾನ್ಸರ್ ಆಗಿ ಅದು ಬೇರೆ ಬೇರೆ ಅಂಗಗಳಿಗೆ ಹರಡಿದೆ ಎಂಬುದು ತಿಳಿದುಬಂದಿತ್ತು. ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಕಿದ್ವಾಯಿ ಆಸ್ಪತ್ರೆಯಿಂದ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಜೆಪಿ ನಗರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಕೆಲಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಬಳಿಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಮೇಶ್ ಅವರ ಅಂತಿಮ ದರ್ಶನ ಪಡೆದರು. ಬಳಿಕ ಬನಶಂಕರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಚಿತ್ರರಂಗಕ್ಕೆ ಕಾಲಿಟ್ಟದ್ದೆಗೆ? ಉಮೇಶ್ ಅವರು…
ಬೆಂಗಳೂರು : ಬೆಂಗಳೂರಲ್ಲಿ ಘೋರ ದುರಂತವೊಂದು ನಡೆದಿದ್ದು, ಏರ್ ಗನ್ ಬಾಲ್ಸ್ ತಗುಲಿ ಓರ್ವ ವಿದ್ಯಾರ್ಥಿ ತಲೆಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ನಿನ್ನೆ ನಡೆದ ಕಾಲೇಜು ಬಿಸಿನೆಸ್ ಫೆಸ್ಟ್ ವೇಳೆ ಅಪಘಾತ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿಯ ಶಾಲೆಯಲ್ಲಿ ಘಟನೆ ಸಂಭವಿಸಿದೆ. 8ನೇ ತರಗತಿ ವಿದ್ಯಾರ್ಥಿ ಚರಣ್ ತೇಜ್ (14) ತಲೆಗೆ ಗಾಯ ನಿನ್ನೆ ವಿದ್ಯಾರ್ಥಿ ಚರಣ್ ತೇಜ್ ಭೇಟಿಗೆ ಪೋಷಕರು ಆಗಮಿಸಿದ್ದರು. ಈ ವೇಳೆ ಪೋಷಕರು ಜೊತೆ ಬಿಸಿನೆಸ್ ಫೆಸ್ಟ್ ಗೆ ಚರಣ್ ತೆರಳಿದ್ದ. ಈ ವೇಳೆ ಏರ್ ಗನ್ ಬಲೂನ್ ಶೂಟ್ ವೇಳೆ ಸ್ಟಾಲ್ ಹಿಂದೆ ಚರಣ್ ನಿಂತಿದ್ದ ಸದ್ಯ ಗಾಯಗೊಂದ ವಿದ್ಯಾರ್ಥಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗದಗ : ಬುದ್ಧಿವಾದ ಹೇಳಿದ್ದಕ್ಕೆ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗದಲ್ಲಿ ನಡೆದಿದೆ. ನಗರದ ಭೀಷ್ಮ ಕೆರೆಗೆ ಹಾರಿ ಚಂದ್ರಿಕಾ ನಡುವಿನಮನಿ (21) ಎನ್ನುವ ವಿದ್ಯಾರ್ಥಿನಿ ಆತ್ಮಹತ್ಯೆ ಶರಣಾಗಿದ್ದಾಳೆ. ಚಂದ್ರಿಕಾ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿದ್ದಳು. ಬಾಗಲಕೋಟೆಯ ಶಿರೂರು ಮೂಲದ ಚಂದ್ರಿಕಾ ಗದಗದಲ್ಲೇ ಬಾಡಿಗೆ ಮನೆಯಲ್ಲಿ ರೂಂ ಮಾಡಿ ವಾಸವಿದ್ದಳು. ಗೆಳತಿಯರ ಜೊತೆ ರೂಮ್ನಲ್ಲಿ ವಾಸವಿದ್ದಳು ನೆನ್ನೆ ರಾತ್ರಿ 1:30ಕ್ಕೆ ಚಂದ್ರಿಕಾ ಹೊರಗಡೆ ಹೋಗಿದ್ದಾಳೆ. ಚಂದ್ರಿಕಾ ಶವವಾಗಿ ಪತ್ತೆಯಾಗಿದ್ದಾಳೆ. ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಎಸ್ ಎಸ್ ಎಲ್ ಸಿ ಪಿಯುಸಿಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿದೆ, ಇತ್ತೀಚಿಗೆ ಚಂದ್ರಿಕಾ ಓದುವುದರಲ್ಲಿ ಆಸಕ್ತಿ ಕಡಿಮೆ ಮಾಡಿದ್ದಳು ಹಾಗಾಗಿ ನಾನು ಸ್ವಲ್ಪ ಓದಿನ ಕಡೆಗೆ ಗಮನ ಕೊಡು ಚೆನ್ನಾಗಿ ಓದು ಅಂತ ಹೇಳಿದ್ದಕ್ಕೆ ಚಂದ್ರಿಕಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಚಂದ್ರಿಕಾ ಸಹೋದರ ಆಳಲು ತೋಡಿಕೊಂಡಿದ್ದಾರೆ.
ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವಂತಹ ಮತ್ತೊಂದು ಘಟನೆ ನಡೆದಿದ್ದು, ಚಾಕುವಿನಿಂದ ಇರಿದು ಮಹಿಳೆಯ ಭೀಕರ ಕೊಲೆ ನಡೆದಿದೆ. ಬೆಂಗಳೂರಿನ ಶೇಷಾದ್ರಿಪುರಂನ 1ನೇ ಮುಖ್ಯರಸ್ತೆಯಲ್ಲಿ ನಿನ್ನೆ ಈ ಒಂದು ಘಟನೆ ನಡೆದಿತ್ತು. ಕೊಲೆ ಆರೋಪಿಯನ್ನು ಪೊಲೀಸರು ಇದೀಗ ಪತ್ತೆ ಹಚ್ಚಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಮೂಲದ ನಾಗಪ್ಪ ಎಂಬಾತನಿಂದ ಈ ಒಂದು ಕೊಲೆ ನಡೆದಿದೆ. ಕೊಲೆಯಾದ ಶರಣಮ್ಮಳ ತಂಗಿಯನ್ನು ಆರೋಪಿ ಇಷ್ಟಪಟ್ಟಿದ್ದಾನೆ ಹಾಗೆ ಮದುವೆಯಾಗುವುದಾಗಿ ಆರೋಪಿ ಹೇಳಿಕೊಂಡಿದ್ದ. ಮದುವೆಯಾದ್ರೆ ಆ ಯುವತಿಯನ್ನ ಆಗೋದಾಗಿ ಆರೋಪಿ ನಾಗಪ್ಪ ಹೇಳಿದ್ದ. ಆದರೆ ನಾಗಪ್ಪನನ್ನು ಯುವತಿ ಅವಾಯ್ಡ್ ಮಾಡುತ್ತಿದ್ದಳು ಅದೇ ರೀತಿ ಬೇರೆ ಯುವತಿ ನಡೆಸಿದ್ದಾಳೆ. ಹಾಗೆ ಮಾಹಿತಿ ಕೇಳಿ ನಿನ್ನೆ ಆರೋಪಿ ನಾಗಪ್ಪ ಮನೆಗೆ ಬಂದಿದ್ದಾನೆ. ನಿನ್ನ ತಂಗಿಯಲ್ಲಿ ಅಡ್ರೆಸ್ ಹೇಳುವಂತೆ ಮಹಿಳೆಗೆ ಒತ್ತಾಯಿಸಿದ್ದಾನೆ ಆಕೆ ವಿಳಾಸ ಗೊತ್ತಿಲ್ಲ ಅಂತ ಶರಣಮ್ಮ ಹೇಳಿದ್ದಾಳೆ. ಈ ವೇಳೆ ಮೊದಲೇ ತಂದಿದ್ದ ಚಾಕುವಿನಿಂದ ನಾಗಪ್ಪ ಇರಿದು ಕೊಲೆ ಮಾಡಿದ್ದಾನೆ ದೊಡ್ಡ ಚಾಕು ಖರೀದಿಸಿ ನಾಗಪ್ಪ ಬೆನ್ನ ಹಿಂದೆ…
ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಉಪನ್ಯಾಸಕನಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಬೆಳಗಾವಿಯ ಖಾಸಗಿ ಕಾಲೇಜು ಉಪನ್ಯಾಸಕ ನಾಗೇಶ್ವರ ವಿರುದ್ಧ ಆರೋಪ ಕೇಳಿಬಂದಿದ್ದ. ಬೆಳಗಾವಿ ತಾಲೂಕಿನ ಬಸವನ ಕುಡಚಿ ನಿವಾಸಿ ನಾಗೇಶ್ವರ ಡೆವಿನಕೊಪ್ಪ ಉಪನ್ಯಾಸಕ ಜೀವ ಬೆದರಿಕೆ ಹಾಕಿ ವಿದ್ಯಾರ್ಥಿಯ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.ಲಿವ್ ಇನ್ ರಿಲೇಶನ್ ಶಿಪ್ ಇಟ್ಟುಕೊಳ್ಳಬೇಕು, ಕರೆದ ಕಡೆ ಬರಬೇಕು, ಇಬ್ಬರ ಮಧ್ಯ ಇರುವ ಸಂಬಂಧ ಯಾರ ಬಳಿಯೂ ಹೇಳಬಾರದು . ವಿಷಯ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಉಪನ್ಯಾಸಕ ಬೆದರಿಕೆ ಹಾಕಿದ್ದಾನೆ. ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ, ವಿಭಾಗದ ಅಥಿತಿ ಉಪನ್ಯಾಸಕನಾಗಿದ್ದ ನಾಗೇಶ್ ಯುವತಿಯ ಮೇಲೆ ಅತ್ಯಾಚಾರ ಎಸೆಗಲೆಂದೇ ಗಣೇಶಪುರದಲ್ಲಿ ಬಾಡಿಗೆ ಮನೆ ಮಾಡಿದ್ದಾನೆ. ಬಾಡಿಗೆ ಮನೆಯಲ್ಲಿ ನಿರಂತರವಾಗಿ ಎರಡು ವರ್ಷಗಳಿಂದ ಅತ್ಯಾಚಾರ ಎಸಿಗುತ್ತಿದ್ದಾನೆ. ಪೋಷಕರ ಬಳಿ ಅತ್ಯಾಚಾರ ಎಸಗುತ್ತಿರುವ ಸಂಗತಿಯನ್ನು ಸಂತ್ರಸ್ತ ಯುವತಿ…
ಮಂಡ್ಯ : ಮಂಡ್ಯದಲ್ಲಿ ಕೊಲೆ ನಡೆದಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅಮೃತ ಬಳಿ ಈ ಒಂದು ಭೀಕರ ಕೊಲೆ ನಡೆದಿದೆ. ಹತ್ಯೆಯಾದ ರೌಡಿಶೀಟರ್ ನನ್ನು ಲಕ್ಷ್ಮಿಸಾಗರ ಗ್ರಾಮದ ಮಹೇಶ್ (4 ಎಂದು ತಿಳಿದುಬಂದಿದೆ. ಹಲವು ಅಪರಾಧಿ ಕೃತ್ಯಗಳಲ್ಲಿ ಮಹೇಶ್ ಬಾಗಿಯಾಗಿದ್ದ. ಮಹೇಶನನ್ನು ಪೊಲೀಸರು ಗಡಿಪಾರು ಮಾಡಲು ನಿರ್ಧರಿಸಿದ್ದರು.ಬೆಂಗಳೂರಿನಲ್ಲಿ ಮಹೇಶ್ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಮಹೇಶ್ ಕ್ರಮಕ್ಕೆ ಬಂದಿದ್ದ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಹೋಗುವಾಗ ಮಹೇಶ್ ನನ್ನು ಬೀಕರವಾಗಿ ಕೊಲೆ ಮಾಡಲಾಗಿದೆ. ಮಹೇಶಣ್ಣ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಕೊಲೆ ಕುರಿತು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













