ಬೆಂಗಳೂರು: ಕಾರ್ಯಾಚರಣೆಯ ಕಾರಣಗಳಿಂದಾಗಿ ಚಿಕ್ಕಮಗಳೂರು ಮತ್ತು ಯಶವಂತಪುರ ನಡುವೆ ಸಂಚರಿಸುವ ದೈನಂದಿನ ಎಕ್ಸ್ಪ್ರೆಸ್ ಹಾಗೂ ಶಿವಮೊಗ್ಗ-ಚಿಕ್ಕಮಗಳೂರು ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆಯು ಪರಿಷ್ಕರಿಸಿದೆ. ಈ ಹೊಸ ವೇಳಾಪಟ್ಟಿಯು 2026ರ ಏಪ್ರಿಲ್ 24 ರಿಂದ ಜಾರಿಗೆ ಬರಲಿದೆ.
1. ರೈಲು ಸಂಖ್ಯೆ 16239 (ಚಿಕ್ಕಮಗಳೂರು – ಯಶವಂತಪುರ ಎಕ್ಸ್ಪ್ರೆಸ್):
ಈ ರೈಲು ಇನ್ನು ಮುಂದೆ ಚಿಕ್ಕಮಗಳೂರು ನಿಲ್ದಾಣದಿಂದ ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ಅಂದರೆ ಬೆಳಿಗ್ಗೆ 08:15ರ ಬದಲಿಗೆ 08:00 ಗಂಟೆಗೆ ಹೊರಡಲಿದೆ. ಇದರೊಂದಿಗೆ ಮಧ್ಯಂತರ ನಿಲ್ದಾಣಗಳ ಸಮಯದಲ್ಲೂ ಬದಲಾವಣೆಯಾಗಿದೆ.
ಪರಿಷ್ಕೃತ ಸಮಯದ ವಿವರ:
-
ಕಣಿವೆಹಳ್ಳಿ: ಆಗಮನ 08:18 / ನಿರ್ಗಮನ 08:19
-
ಸಖರಾಯಪಟ್ಟಣ: ಆಗಮನ 08:31 / ನಿರ್ಗಮನ 08:32
-
ಬಿಸಲೇಹಳ್ಳಿ: ಆಗಮನ 08:43 / ನಿರ್ಗಮನ 08:44
-
ಕಡೂರು: ಆಗಮನ 09:05 / ನಿರ್ಗಮನ 09:25
ಗಮನಿಸಿ: ದೇವನೂರು ಮತ್ತು ಯಶವಂತಪುರ ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
2. ರೈಲು ಸಂಖ್ಯೆ 16240 (ಯಶವಂತಪುರ – ಚಿಕ್ಕಮಗಳೂರು ಎಕ್ಸ್ಪ್ರೆಸ್):
ಯಶವಂತಪುರದಿಂದ ಹೊರಡುವ ಈ ರೈಲು ಚಿಕ್ಕಮಗಳೂರು ನಿಲ್ದಾಣಕ್ಕೆ ರಾತ್ರಿ 08:55ರ ಬದಲಿಗೆ 09:05 ಗಂಟೆಗೆ ತಲುಪಲಿದೆ.
3. ರೈಲು ಸಂಖ್ಯೆ 56271 (ಶಿವಮೊಗ್ಗ ಟೌನ್ – ಚಿಕ್ಕಮಗಳೂರು ಪ್ಯಾಸೆಂಜರ್):
ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಬರುವ ದೈನಂದಿನ ಪ್ಯಾಸೆಂಜರ್ ರೈಲು ಇನ್ನು ಮುಂದೆ ರಾತ್ರಿ 09:30ರ ಬದಲಿಗೆ 09:40 ಗಂಟೆಗೆ ತಲುಪಲಿದೆ.
ರೈಲು ಪ್ರಯಾಣಿಕರು ಈ ಬದಲಾದ ವೇಳಾಪಟ್ಟಿಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಬೇಕೆಂದು ರೈಲ್ವೆ ಇಲಾಖೆ ತಿಳಿಸಿದೆ.
ಭಾರತಕ್ಕೆ ಕಾದಿದೆ ಬೆಂಕಿಯ ಮಳೆ: ಮುಂದಿನ ಎರಡು ವಾರ ವಿಶ್ವದ ‘ಅತ್ಯಂತ ಬಿಸಿಲು’ ಪೀಡಿತ ಪ್ರದೇಶವಾಗಲಿದೆ ಇಂಡಿಯಾ!








