Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : 10 ಗ್ರಾಂ ಚಿನ್ನದ ಬೆಲೆ ದಾಖಲೆಯ 1,37,600 ರೂ.ಗೆ ಏರಿಕೆ |Gold Price Hike

16/12/2025 6:02 AM

BIG NEWS: ಮೊಟ್ಟೆಯಲ್ಲಿ ‘ಕ್ಯಾನ್ಸರ್ ಅಂಶ ಪತ್ತೆ’ಗೆ ಪರೀಕ್ಷೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

16/12/2025 5:58 AM

GOOD NEWS : `KSRTC’ ಬಸ್ ಚಾಲಕರಿಗೆ ಗುಡ್ ನ್ಯೂಸ್ : ಪ್ರೋತ್ಸಾಹ ಧನ ಹೆಚ್ಚಳ

16/12/2025 5:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯದಲ್ಲಿ ಖಾಲಿ ಇರುವ ‘16,267 ಶಿಕ್ಷಕರ ಹುದ್ದೆ’ ನೇಮಕ: ಸಚಿವ ಮಧು ಬಂಗಾರಪ್ಪ
KARNATAKA

GOOD NEWS: ರಾಜ್ಯದಲ್ಲಿ ಖಾಲಿ ಇರುವ ‘16,267 ಶಿಕ್ಷಕರ ಹುದ್ದೆ’ ನೇಮಕ: ಸಚಿವ ಮಧು ಬಂಗಾರಪ್ಪ

By kannadanewsnow0902/11/2025 7:11 AM

ಬೆಂಗಳೂರು: 2024–25ರ ಸಾಲಿನಲ್ಲಿ ಸುಮಾರು 12,392 ಶಿಕ್ಷಕರಿಗೆ ನೇಮಕಾತಿ ಆದೇಶವನ್ನು ನೀಡಲಾಗಿದೆ. 2025–26ರ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಇತರ ಭಾಗಗಳಲ್ಲಿ ಒಟ್ಟು 10,267 ಶಿಕ್ಷಕರ ನೇಮಕಾತಿ ಮಾಡಲು ಪ್ರಕ್ರಿಯೆ ಆರಂಭಿಸಲಾಗಿದೆ. 2016 ರಿಂದ 2020 ರ ವರೆಗಿನ ಅನುದಾನಿತ ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಶಾಲೆಗಳಲ್ಲಿ ಸುಮಾರು 6,000 ಶಿಕ್ಷಕರನ್ನು ನೇಮಕಾತಿ ಮಾಡಲಾಗುವುದು ಎಂಬುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಹೀಗಿದೆ ಇಂದಿನ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಅಂಗವಾಗಿ ಮಾಡಿದ ಭಾಷಣದ ಪ್ರಮುಖ ಹೈಲೈಟ್ಸ್..

ನಮ್ಮ ಇಲಾಖೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಅದರಲ್ಲಿ ಗುಣಾತ್ಮಕ ಕಾರ್ಯಕ್ರಮಗಳು

ಶಿಕ್ಷಕರ ನೇಮಕಾತಿ

2024–25ರ ಸಾಲಿನಲ್ಲಿ ಸುಮಾರು 12,392 ಶಿಕ್ಷಕರಿಗೆ ನೇಮಕಾತಿ ಆದೇಶವನ್ನು ನೀಡಲಾಗಿದೆ. 2025–26ರ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಇತರ ಭಾಗಗಳಲ್ಲಿ ಒಟ್ಟು 10,267 ಶಿಕ್ಷಕರ ನೇಮಕಾತಿ ಮಾಡಲು ಪ್ರಕ್ರಿಯೆ ಆರಂಭಿಸಲಾಗಿದೆ. 2016 ರಿಂದ 2020 ರ ವರೆಗಿನ ಅನುದಾನಿತ ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಶಾಲೆಗಳಲ್ಲಿ ಸುಮಾರು 6,000 ಶಿಕ್ಷಕರನ್ನು ನೇಮಕಾತಿ ಮಾಡಲಾಗುವುದು ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯ ಬೇಡಿಕೆ ಹೆಚ್ಚಿರುವುದರಿಂದ 5,000 ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು.

ಮೂಲಭೂತ ಸೌಕರ್ಯಗಳು

ಕರ್ನಾಟಕ ಪಬ್ಲಿಕ್ ಶಾಲೆಗಳು. ಇದುವರೆಗೂ 307 ಮಾತ್ರ ಕೆಪಿಎಸ್ ಶಾಲೆಗಳಿದ್ದು, ಈಗ ಮಾನ್ಯ ಮುಖ್ಯಮಂತ್ರಿಗಳ ಸಹಕಾರದಿಂದ ನಮ್ಮ ಸರ್ಕಾರದ ವತಿಯಿಂದ ಒಂದೇ ಬಾರಿಗೆ 800 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲು ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚುವರಿಯಾಗಿ 200 ಹಾಗೂ ಗಣಿಬಾಧಿತ ಪ್ರದೇಶಗಳಿಗೆ ಸುಮಾರು 100 ಕೆಪಿಎಸ್ ಶಾಲೆಗಳನ್ನು ನೀಡಲಾಗಿದೆ ಎಂದರು.

ಹೊಸ ಕೊಠಡಿಗಳು ಮತ್ತು ರಿಪೇರಿ

2024-25ನೇ ಸಾಲಿನಲ್ಲಿ ಶಾಲಾ ಕೊಠಡಿಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ₹ 850 ಕೋಟಿಗಳ ಕಾಮಗಾರಿ ಚಾಲನೆಯಲ್ಲಿದೆ. ಈ ಸಾಲಿನಲ್ಲಿ ಶಾಲಾ ಕಾಲೇಜುಗಳಲ್ಲಿ ಹೊಸ ಕೊಠಡಿ ಮತ್ತು ರಿಪೇರಿಗಾಗಿ ₹ 725 ಕೋಟಿಗಳ ವೆಚ್ಚದಲ್ಲಿ ಅಂದಾಜು 2,500 ಹೊಸ ಕೊಠಡಿಗಳು ಮತ್ತು ರಿಪೇರಿ ಕಾಮಗಾರಿಗಳು ಶೀಘ್ರದಲ್ಲಿ ಶುರುವಾಗುವುದು. ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಒದಗಿಸಲು 50 ಕೋಟಿ ರೂಪಾಯಿ ಅನುದಾನವನ್ನು ಪೀಠೋಪಕರಣ ಖರೀದಿಗೆ ನೀಡಲಾಗಿದೆ. ರಾಜ್ಯದಲ್ಲಿ 16,347 ಶಾಲೆಗಳಿಗೆ ಅಡುಗೆ ಮನೆ, ಆಧುನೀಕರಣ, ಕಾರ್ಯ ಮತ್ತು ಹೊಸ ಪಾತ್ರೆಗಳನ್ನು ಒದಗಿಸಲು ಸುಮಾರು 46 ಕೋಟಿಗಳ ವೆಚ್ಚವನ್ನು ಮಾಡಲಾಗುವುದು ಎಂದರು.

ಇತರ ಕಾರ್ಯಕ್ರಮಗಳು

ಅತಿಥಿ ಶಿಕ್ಷಕರ ನೇಮಕಾತಿ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಥಮ ಬಾರಿಗೆ, 51,000 ಅತಿಥಿ ಶಿಕ್ಷಕರನ್ನು ಒಂದೇ ಬಾರಿಗೆ ನೇಮಕ ಮಾಡಲಾಗಿದೆ. ಅತಿಥಿ ಶಿಕ್ಷಕರಿಗೆ ₹ 2,000 ಗೌರವ ಧನವನ್ನು ಹೆಚ್ಚಿಸಲಾಗಿದೆ. ಪರೀಕ್ಷಾ ಫಲಿತಾಂಶ. ಮೂರು ಪರೀಕ್ಷಾ ಮಾದರಿಯನ್ನು ಪರಿಚಯಿಸಿದ್ದರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 2024-25 ಸಾಲಿನಲ್ಲಿ 7,99,390 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ ಶೇಕಡವಾರು ಸುಮಾರು 79.71 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 2024–25 ಸಾಲಿನಲ್ಲಿ 6,39,800 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ ಶೇಕಡವಾರು 85.19 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ ಎಂದಿದ್ದಾರೆ.

ಹೊಸ ಕಾರ್ಯಕ್ರಮಗಳು

‘ಮೆಗಾ ಪೋಷಕರ ಸಭೆ’. ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ಹಿತದೃಷ್ಟಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ, ಏಕಕಾಲಕ್ಕೆ ಕರ್ನಾಟಕ ಪೋಷಕರ, ಶಿಕ್ಷಕರ ‘ಮೆಗಾ ಪಿಟಿಎಂ’ ಸಭೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

2026-27 ಶೈಕ್ಷಣಿಕ ಸಾಲಿನಿಂದ ಬೆಳಗಾವಿ ಜಿಲ್ಲೆಯ ಗಡಿಭಾಗದ ಗ್ರಾಮಗಳಲ್ಲಿ 7 ಸರ್ಕಾರಿ ಶಾಲೆಗಳ ಆವರಣದಲ್ಲಿ ಹೆಚ್ಚುವರಿ ಕನ್ನಡ ಮಾಧ್ಯಮ ವಿಭಾಗಗಳನ್ನು ಪ್ರಾರಂಭಿಸಲು ಹಾಗೂ 2 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲು ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಗಡಿ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸಂಪೂರ್ಣ ಆದ್ಯತೆ ನೀಡಲಾಗುವುದು ಎಂದಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS: ಮೊಟ್ಟೆಯಲ್ಲಿ ‘ಕ್ಯಾನ್ಸರ್ ಅಂಶ ಪತ್ತೆ’ಗೆ ಪರೀಕ್ಷೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

16/12/2025 5:58 AM1 Min Read

GOOD NEWS : `KSRTC’ ಬಸ್ ಚಾಲಕರಿಗೆ ಗುಡ್ ನ್ಯೂಸ್ : ಪ್ರೋತ್ಸಾಹ ಧನ ಹೆಚ್ಚಳ

16/12/2025 5:55 AM2 Mins Read

BIG NEWS : ರಾಜ್ಯದ ಜನತೆ ಗಮನಕ್ಕೆ : `ತಾಲೂಕು, ಗ್ರಾಮ ಪಂಚಾಯಿತಿ’ ಗಳಲ್ಲಿ ನೀವು ಈ ಮಾಹಿತಿಗಳನ್ನ ಕೇಳಿ ಪಡೆಯಬಹುದು.!

16/12/2025 5:50 AM3 Mins Read
Recent News

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : 10 ಗ್ರಾಂ ಚಿನ್ನದ ಬೆಲೆ ದಾಖಲೆಯ 1,37,600 ರೂ.ಗೆ ಏರಿಕೆ |Gold Price Hike

16/12/2025 6:02 AM

BIG NEWS: ಮೊಟ್ಟೆಯಲ್ಲಿ ‘ಕ್ಯಾನ್ಸರ್ ಅಂಶ ಪತ್ತೆ’ಗೆ ಪರೀಕ್ಷೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

16/12/2025 5:58 AM

GOOD NEWS : `KSRTC’ ಬಸ್ ಚಾಲಕರಿಗೆ ಗುಡ್ ನ್ಯೂಸ್ : ಪ್ರೋತ್ಸಾಹ ಧನ ಹೆಚ್ಚಳ

16/12/2025 5:55 AM

BIG NEWS : ರಾಜ್ಯದ ಜನತೆ ಗಮನಕ್ಕೆ : `ತಾಲೂಕು, ಗ್ರಾಮ ಪಂಚಾಯಿತಿ’ ಗಳಲ್ಲಿ ನೀವು ಈ ಮಾಹಿತಿಗಳನ್ನ ಕೇಳಿ ಪಡೆಯಬಹುದು.!

16/12/2025 5:50 AM
State News
KARNATAKA

BIG NEWS: ಮೊಟ್ಟೆಯಲ್ಲಿ ‘ಕ್ಯಾನ್ಸರ್ ಅಂಶ ಪತ್ತೆ’ಗೆ ಪರೀಕ್ಷೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

By kannadanewsnow0916/12/2025 5:58 AM KARNATAKA 1 Min Read

ಬೆಂಗಳೂರು; ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶ ಪತ್ತೆಯ ಬಗ್ಗೆ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತ್ರ ಸೂಕ್ತ ಕ್ರಮ…

GOOD NEWS : `KSRTC’ ಬಸ್ ಚಾಲಕರಿಗೆ ಗುಡ್ ನ್ಯೂಸ್ : ಪ್ರೋತ್ಸಾಹ ಧನ ಹೆಚ್ಚಳ

16/12/2025 5:55 AM

BIG NEWS : ರಾಜ್ಯದ ಜನತೆ ಗಮನಕ್ಕೆ : `ತಾಲೂಕು, ಗ್ರಾಮ ಪಂಚಾಯಿತಿ’ ಗಳಲ್ಲಿ ನೀವು ಈ ಮಾಹಿತಿಗಳನ್ನ ಕೇಳಿ ಪಡೆಯಬಹುದು.!

16/12/2025 5:50 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಈ ನಿಯಮಗಳನ್ನು ಉಲ್ಲಂಘಿಸಿದ್ರೆ `ದಂಡ’ ಫಿಕ್ಸ್.!

16/12/2025 5:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.