Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನಾಳೆಯಿಂದ ‘ಬೋಯಿಂಗ್ 787 ವಿಮಾನ’ಗಳ ಕಡ್ಡಾಯ ತಪಾಸಣೆ ; ವಿಳಂಬದ ಕುರಿತು ಪ್ರಯಾಣಿಕರಿಗೆ ‘ಏರ್ ಇಂಡಿಯಾ’ ಎಚ್ಚರಿಕೆ

14/06/2025 4:13 PM

BIG NEWS: ‘ಆಶಾ ಮೆಂಟರ್ಸ್’ ಕರ್ತವ್ಯದಿಂದ ಬಿಡುಗಡೆ ಆದೇಶ ಹಿಂಪಡೆಯದಿದ್ದರೇ ಕಾನೂನು ಹೋರಾಟ: ಶ್ರೀಕಾಂತ್ ಸ್ವಾಮಿ ಎಚ್ಚರಿಕೆ

14/06/2025 4:04 PM

‘ಸರಿಯಾಗಿ 1 ನಿಮಿಷದ ನಂತರ…’: ಏರ್ ಇಂಡಿಯಾ ದುರಂತ ಹೇಗಾಯ್ತು ಎಂಬುದರ ಕುರಿತು ‘ವಿಮಾನಯಾನ ಸಚಿವಾಲಯ’ ವಿವರಣೆ

14/06/2025 3:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಹೊಸದಾಗಿ 6,599 ಗ್ರಾಮ ಗ್ರಂಥಾಲಯ ಆರಂಭ
KARNATAKA

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಹೊಸದಾಗಿ 6,599 ಗ್ರಾಮ ಗ್ರಂಥಾಲಯ ಆರಂಭ

By kannadanewsnow0912/08/2024 7:37 PM

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಈಗಾಗಲೇ 5,895 ಗ್ರಂಥಾಲಯಗಳನ್ನು ಸಜ್ಜುಗೊಳಿಸಿದ್ದು, ಇದರೊಂದಿಗೆ ಈ ವರ್ಷ 263.96 ಕೋಟಿ ರೂ. ಅನುದಾನದಲ್ಲಿ ರಾಜ್ಯದಲ್ಲಿ 6599 ಹೊಸ ಗ್ರಾಮ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ. ಭಾರತದ ಗ್ರಂಥಾಲಯ ಚಳವಳಿಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ರವರ ಜನ್ಮದಿನದಂದು ರಾಷ್ಟ್ರಮಟ್ಟದಲ್ಲಿ ಗ್ರಂಥಪಾಲಕರ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಏರ್ಪಡಿಸಿರುವ ಗ್ರಂಥಪಾಲಕರ ದಿನಾಚರಣೆಯಲ್ಲಿ ಹೊಸ ಗ್ರಾಮ ಗ್ರಂಥಾಲಯಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ಘೋಷಣೆ ಮಾಡಿದರು.

ಇದೇ ಸಂದರ್ಭದಲ್ಲಿ ಅರಿವು ಕೇಂದ್ರಗಳ ಮಾದರಿ ಕಟ್ಟಡ ವಿನ್ಯಾಸವನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು. ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಸಂಸ್ಥೆಯಿಂದ ರಾಜ್ಯದಲ್ಲಿ ಹೊಸದಾಗಿ ಆರಂಭಿಸಲಾಗುತ್ತಿರುವ 6599 ಗ್ರಾಮೀಣ ಗ್ರಂಥಾಲಯಗಳಿಗೆ ತಲಾ 2 ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗಿದೆ. ಇದಕ್ಕಾಗಿ 131.98 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರತಿ ಗ್ರಂಥಾಲಯಕ್ಕೆ ಪೀಠೋಪಕರಣಗಳು ಹಾಗೂ ಡಿಜಿಟಲ್ ಪರಿಕರಗಳನ್ನು ನಿಯಮಾನುಸಾರ ಖರೀದಿಸಿ ಪೂರೈಸಲಾಗುವುದು. 6599 ಹೊಸ ಗ್ರಾಮ ಗ್ರಂಥಾಲಯಗಳಿಗೆ ಮಕ್ಕಳ ಪುಸ್ತಕಗಳನ್ನು ಅಜೀಂ ಪ್ರೇಮ್ ಜಿ ಫೌಂಡೇಶನ್ ಕೊಡುಗೆಯಾಗಿ ನೀಡುತ್ತಿದೆ.

ಗ್ರಾಮೀಣ ಗ್ರಂಥಾಲಯಗಳನ್ನು 2019 ರಲ್ಲಿ ಶಿಕ್ಷಣ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹಸ್ತಾಂತರಿಸಲಾಗಿರುತ್ತದೆ. ಪ್ರಸ್ತುತ, ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ಅರಿವು ಕೇಂದ್ರ’ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ.

‘ಅರಿವು ಕೇಂದ್ರ’ಗಳಲ್ಲಿ ಸಮುದಾಯದ ಪ್ರತಿಯೊಬ್ಬರನ್ನು ಒಳಗೊಳಿಸಲಾಗಿದ್ದು, ಮಕ್ಕಳ ಬೌದ್ಧಿಕ ಬೆಳವಣಿಗೆ, ಸಾಕ್ಷರತೆಯ ಸಾಕಾರ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕ್ರಮ, ಶಾಲೆ ಬಿಟ್ಟ ವಯಸ್ಕರಿಗೂ ಶಿಕ್ಷಣದ ಅರಿವು, ವಿಶೇಷ ಚೇತನರ ಶೈಕ್ಷಣಿಕ ಅಭ್ಯುದಯ, ಹಿರಿಯ ನಾಗರಿಕರಿಗೆ ಜೀವನಸಂಜೆಯಲ್ಲಿ ಓದು, ಮನರಂಜನೀಯ ಚಟುವಟಿಕೆಗಳು, ಮಕ್ಕಳಿಗೆ ಬೌದ್ಧಿಕ ಹಾಗೂ ದೈಹಿಕ ಆಟಗಳ ಆಯೋಜನೆ ಮುಂತಾದ ಚಟುವಟಿಕೆಗಳಿಗಾಗಿ ಇಲಾಖೆಗೆ ಯಾವುದೇ ಹಣಕಾಸಿನ ಹೊರೆಯುಂಟಾಗದಂತೆ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಡಿಜಿಟಲ್ ಗ್ರಂಥಾಲಯ

5,895 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಪೈಕಿ 5,691 ಗ್ರಂಥಾಲಯಗಳಿಗೆ ತಲಾ 2 ಗಣಕಯಂತ್ರಗಳು ಹಾಗೂ ಪೂರಕ ಸಾಧನಗಳನ್ನು ಒದಗಿಸಿ, ಅಂತರ್ಜಾಲ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಡಿಜಿಟಲೀಕರಣಗೊಳಿಸಲಾಗಿದೆ. ವಿಶೇಷ ಚೇತನರಿಗೆ ಅನುಕೂಲ ಮಾಡಿಕೊಡಲು ರಾಜ್ಯಾದ್ಯಂತ 814 ಬೀಕನ್ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗಿದೆ.

BIG NEWS: ರಾಜ್ಯದ ಗ್ರಾಮ ಪಂಚಾಯ್ತಿ ‘ಗ್ರಂಥಾಲಯ ಮೇಲ್ವಿಚಾರಕ’ರಿಗೆ ಸಿಹಿಸುದ್ದಿ: ‘ಕನಿಷ್ಠ ವೇತನ’ ನಿಗದಿ

ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಬಿಗ್ ಶಾಕ್: ‘ಸೆಪ್ಟೆಂಬರ್’ನಿಂದ ‘ಲ್ಯಾಂಡ್ ಬೀಟ್ ಆ್ಯಪ್’ ಆಧರಿಸಿ ತೆರವು ಆರಂಭ

Share. Facebook Twitter LinkedIn WhatsApp Email

Related Posts

BIG NEWS: ‘ಆಶಾ ಮೆಂಟರ್ಸ್’ ಕರ್ತವ್ಯದಿಂದ ಬಿಡುಗಡೆ ಆದೇಶ ಹಿಂಪಡೆಯದಿದ್ದರೇ ಕಾನೂನು ಹೋರಾಟ: ಶ್ರೀಕಾಂತ್ ಸ್ವಾಮಿ ಎಚ್ಚರಿಕೆ

14/06/2025 4:04 PM2 Mins Read

BREAKING : ಒಂದು ವರ್ಷದಲ್ಲಿ ‘ಅನುಭವ ಮಂಟಪ’ ನಿರ್ಮಿಸುತ್ತೇವೆ : CM ಸಿದ್ದರಾಮಯ್ಯ ಘೋಷಣೆ

14/06/2025 3:46 PM1 Min Read

BIG NEWS : ಕಳೆದ 3 ವರ್ಷದಲ್ಲಿ ‘KKRDB’ ಗೆ 13 ಸಾವಿರ ಕೋಟಿ ರೂ.ಕೊಟ್ಟಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

14/06/2025 3:38 PM1 Min Read
Recent News

BREAKING : ನಾಳೆಯಿಂದ ‘ಬೋಯಿಂಗ್ 787 ವಿಮಾನ’ಗಳ ಕಡ್ಡಾಯ ತಪಾಸಣೆ ; ವಿಳಂಬದ ಕುರಿತು ಪ್ರಯಾಣಿಕರಿಗೆ ‘ಏರ್ ಇಂಡಿಯಾ’ ಎಚ್ಚರಿಕೆ

14/06/2025 4:13 PM

BIG NEWS: ‘ಆಶಾ ಮೆಂಟರ್ಸ್’ ಕರ್ತವ್ಯದಿಂದ ಬಿಡುಗಡೆ ಆದೇಶ ಹಿಂಪಡೆಯದಿದ್ದರೇ ಕಾನೂನು ಹೋರಾಟ: ಶ್ರೀಕಾಂತ್ ಸ್ವಾಮಿ ಎಚ್ಚರಿಕೆ

14/06/2025 4:04 PM

‘ಸರಿಯಾಗಿ 1 ನಿಮಿಷದ ನಂತರ…’: ಏರ್ ಇಂಡಿಯಾ ದುರಂತ ಹೇಗಾಯ್ತು ಎಂಬುದರ ಕುರಿತು ‘ವಿಮಾನಯಾನ ಸಚಿವಾಲಯ’ ವಿವರಣೆ

14/06/2025 3:54 PM

BREAKING : ಒಂದು ವರ್ಷದಲ್ಲಿ ‘ಅನುಭವ ಮಂಟಪ’ ನಿರ್ಮಿಸುತ್ತೇವೆ : CM ಸಿದ್ದರಾಮಯ್ಯ ಘೋಷಣೆ

14/06/2025 3:46 PM
State News
KARNATAKA

BIG NEWS: ‘ಆಶಾ ಮೆಂಟರ್ಸ್’ ಕರ್ತವ್ಯದಿಂದ ಬಿಡುಗಡೆ ಆದೇಶ ಹಿಂಪಡೆಯದಿದ್ದರೇ ಕಾನೂನು ಹೋರಾಟ: ಶ್ರೀಕಾಂತ್ ಸ್ವಾಮಿ ಎಚ್ಚರಿಕೆ

By kannadanewsnow0914/06/2025 4:04 PM KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಶಾ ಮೆಂಟರ್ ಗಳನ್ನ ಕರ್ತವ್ಯದಿಂದ ಬಿಡುಗಡೆ ಮಾಡಿದ್ದು ಖಂಡನೀಯವೇ ಸರಿ. ಈ ಆದೇಶ ಹಿಪಡೆಯದಿದ್ದರೆ ಕಾನೂನು…

BREAKING : ಒಂದು ವರ್ಷದಲ್ಲಿ ‘ಅನುಭವ ಮಂಟಪ’ ನಿರ್ಮಿಸುತ್ತೇವೆ : CM ಸಿದ್ದರಾಮಯ್ಯ ಘೋಷಣೆ

14/06/2025 3:46 PM

BIG NEWS : ಕಳೆದ 3 ವರ್ಷದಲ್ಲಿ ‘KKRDB’ ಗೆ 13 ಸಾವಿರ ಕೋಟಿ ರೂ.ಕೊಟ್ಟಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

14/06/2025 3:38 PM

BIG NEWS : ನವೆಂಬರ್ ನಲ್ಲಿ ‘CM’ ಬದಲಾವಣೆ : ಡಿಸೆಂಬರ್ ನಲ್ಲಿ ಈ ಇಬ್ಬರಲ್ಲಿ ಒಬ್ಬರು ಸಿಎಂ ಆಗೋದು ಪಕ್ಕಾ : ಹೆಚ್ ವಿಶ್ವನಾಥ್

14/06/2025 3:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.