Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 5 ವರ್ಷಗಳ ಬಳಿಕ ಭಾರತ-ಚೀನಾ ನಡುವೆ ವಿಮಾನ ಹಾರಾಟ ಶುರು | WATCH VIDEO

10/11/2025 9:14 AM

ಈ ಮಂತ್ರ ಹೇಳಿದರೆ 3 ದಿನದಲ್ಲಿ ನಿಮ್ಮ ಇಷ್ಟಾರ್ಥ ನೆರವೇರುತ್ತದೆ.!

10/11/2025 9:06 AM

ಅಡ್ವಾಣಿ ಬಗ್ಗೆ ತರೂರ್ ಹೇಳಿಕೆ :ಅಂತರ ಕಾಯ್ದುಕೊಂಡ ಕಾಂಗ್ರೆಸ್ | Shashi Taroor

10/11/2025 8:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ‘ಪೋರ್ಟೀಸ್ ಆಸ್ಪತ್ರೆ ವೈದ್ಯ’ರಿಂದ ಮತ್ತೊಂದು ಸಾಧನೆ: ಗರ್ಭಾವಸ್ಥೆ ಸ್ತನಕ್ಯಾನ್ಸರ್‌ ಮಹಿಳೆಗೆ ಯಶಸ್ವಿ ಚಿಕಿತ್ಸೆ
KARNATAKA

ಬೆಂಗಳೂರಿನ ‘ಪೋರ್ಟೀಸ್ ಆಸ್ಪತ್ರೆ ವೈದ್ಯ’ರಿಂದ ಮತ್ತೊಂದು ಸಾಧನೆ: ಗರ್ಭಾವಸ್ಥೆ ಸ್ತನಕ್ಯಾನ್ಸರ್‌ ಮಹಿಳೆಗೆ ಯಶಸ್ವಿ ಚಿಕಿತ್ಸೆ

By kannadanewsnow0923/10/2024 4:46 PM

ಬೆಂಗಳೂರು: ಅವಳಿ ಶಿಶುಗಳ ಗರ್ಭಾವಸ್ಥೆಯಲ್ಲೇ ಸ್ತನ ಕ್ಯಾನ್ಸರ್‌ಗೆ ಒಳಗಾಗಿದ್ದ 37 ವರ್ಷದ ಗರ್ಭಿಣಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ.

ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಆಂಕೊಲಾಜಿ ಸಲಹೆಗಾರರಾದ ಡಾ ಭರತ್ ಜಿ, ಮೆಡಿಕಲ್‌ ಆಂಕೊಲಾಜಿಯ ಹಿರಿಯ ಸಲಹೆಗಾರ ಡಾ ವಿವೇಕ್ ಬೆಳತ್ತೂರ್ ಹಾಗೂ ಸರ್ಜಿಕಲ್ ಆಂಕೊಲಾಜಿ ಮತ್ತು ರೊಬೊಟಿಕ್ ವಿಭಾಗದ ನಿರ್ದೇಶಕ ಡಾ ಸಂದೀಪ್ ನಾಯಕ್ ಪಿ ನೇತೃತ್ವದ ತಂಡ ಈ ಚಿಕಿತ್ಸೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಶಸ್ತ್ರಚಿಕಿತ್ಸಕ ಆಂಕೊಲಾಜಿಯ ಸಲಹೆಗಾರರಾದ ಡಾ ಭರತ್ ಜಿ, 18 ನೇ ವಾರ ತುಂಬಿದ್ದ ಪ್ರಿಯಾ (ಹೆಸರು ಬದಲಿಸಲಾಗಿದೆ) ಎಂಬ ಗರ್ಭಿಣಿಯು ತನ್ನ ಬಲ ಸ್ತನದಲ್ಲಿ ಗಡ್ಡೆ ಇರುವುದನ್ನು ಗಮನಿಸಿ ಆಸ್ಪತ್ರೆಗೆ ಭೇಟಿ ನೀಡಿ ಎಂಆರ್‌ಐ ಸ್ಕ್ಯಾನ್‌ಗೆ ಒಳಗಾದರು. ಈ ವೇಳೆ ಅವರಿಗೆ ಸ್ತನಕ್ಯಾನ್ಸರ್‌ ಇರುವುದು ದೃಢ ಪಟ್ಟಿತು. ಆದರೆ, ಈ ಸೋಂಕು ಸುತ್ತಲಿನ ಸ್ನಾಯುಗಳಿಗೆ ಇನ್ನೂ ಹರಡಿರಲಿಲ್ಲ.

ಜೊತೆಗೆ ಎದೆಯ ಜಾಗದಲ್ಲಿ ದುಗ್ಧರಸ ಗ್ರಂಥಿಗಳು (ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಸಣ್ಣ, ಹುರುಳಿ-ಆಕಾರದ ರಚನೆಗಳು) ಕಂಡು ಬಂದಿತ್ತು. ಎಲ್ಲಾ ತಪಾಸಣೆಗಳ ಬಳಿಕ ಆಕೆಯ ಕ್ಯಾನ್ಸರ್ ಹಂತ 3 ತಲುಪಿತ್ತು. ಜೊತೆಗೆ, HER2-ಪಾಸಿಟಿವ್ ಎಂದು ವರ್ಗೀಕರಿಸಲಾಯಿತು. ಅಂದರೆ ಅವರ ಕ್ಯಾನ್ಸರ್ ಕೋಶಗಳು HER2 ಎಂಬ ಪ್ರೋಟೀನ್‌ನನ್ನು ಅಧಿಕವಾಗಿ ಹೊಂದಿದ್ದವು, ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ವರ್ಗೀಕರಣವು ಆಕೆಯ ಕ್ಯಾನ್ಸರ್, ಹಾರ್ಮೋನ್ ಚಿಕಿತ್ಸೆಗಳಿಗೆ ಸ್ಪಂದಿಸುವುದಿಲ್ಲ ಎಂದು ಸೂಚಿಸಿತು, ಇದರಿಂದ ಆಕೆಯ ಚಿಕಿತ್ಸೆ ಇನ್ನಷ್ಟು ಜಟಿಲಗೊಂಡಿತ್ತು.

ಆಂಕೊಲಾಜಿ ತಜ್ಞರು ಮತ್ತು ಪ್ರಸೂತಿ ತಜ್ಞರ ಸಮ್ಮುಖದಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಆರೈಕೆಗೆ ಮುಂದಾದೆವು. ಅವಳಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಆಕೆಗೆ ಕಿಮೋಥೆರಪಿಯನ್ನು ಪ್ರಾರಂಭಿಸಿದೆವು. ಆಕೆಯು ಉತ್ತಮವಾಗಿ ಸ್ಪಂದಿಸಲು ಪ್ರಾರಂಭಿಸಿದರು. 34 ವಾರಗಳಲ್ಲಿ ಆಕೆಗೆ ಸಿಸೇರಿಯನ್‌ ಮೂಲಕ ಅವಳಿ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದು, ಎನ್‌ಐಸಿಯು ಮೂಲಕ ಮಕ್ಕಳ ಆರೈಕೆಯನ್ನು ಮುಂದುವರೆಸಿದೆವು. ಇತ್ತ ತಾಯಿಗೂ ಕಿಮೋಥೆರಪಿ ಮುಂದುವರೆಸಿದೆವು ಎಂದರು.

ವೈದ್ಯಕೀಯ ಆಂಕೊಲಾಜಿಯ ಹಿರಿಯ ಸಲಹೆಗಾರರಾದ ಡಾ ವಿವೇಕ್ ಬೆಳತ್ತೂರ್ ಮಾತನಾಡಿ, ಅವಳಿ ಮಕ್ಕಳ ಹೆರಿಗೆಯ ನಂತರ, ಪೀಡಿತ ಸ್ತನವನ್ನು ತೆಗೆದುಹಾಕಲು ಪ್ರಿಯಾ ಸ್ತನಛೇದನ ಶಸ್ತ್ರಚಿಕಿತ್ಸೆಗೆ ಒಳಗಾದರು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಈ ಹಂತವು ನಿರ್ಣಾಯಕವಾಗಿತ್ತು. ಆಕೆಯ ಮೂಳೆಗಳನ್ನು ಬಲಪಡಿಸಲು ಮತ್ತು ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹರಡುವ ಅಪಾಯವನ್ನು ಕಡಿಮೆ ಮಾಡಲು ಮೂಳೆ ಆರೋಗ್ಯದ ಔಷಧಿಗಳ ಜೊತೆಗೆ, HER2-ಪಾಸಿಟಿವ್ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಟ್ಟುಕೊಂಡು ಅವರಿಗೆ ಚಿಕಿತ್ಸೆ ನೀಡಲಾಯಿತು. ಆಕೆ ಉತ್ತಮವಾಗಿ ಚಿಕಿತ್ಸೆಗೆ ಸ್ಪಂದಿಸಿದ್ದು, ಕ್ಯಾನ್ಸರ್‌ ವಿರುದ್ಧ ಆಕೆ ಗೆಲುವು ಸಾಧಿಸಿದ್ದು, ಚೇತರಿಕೆಯ ಹಾದಿಯಲ್ಲಿದ್ದಾರೆ.ಮುಂದಿನ ದಿನಗಳಲ್ಲಿ ಆಕೆ ಸ್ತನ ಪುನರ್‌ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ ಎಂದು ಮಾಹಿತಿ ನೀಡಿದರು.

‘ಮಾಜಿ MLC ರಮೇಶ್ ಗೌಡ’ಗೆ ಹೈಕೋರ್ಟ್ ನಿಂದ ರಿಲೀಫ್: ಅ.29ಕ್ಕೆ ಬೆದರಿಕೆ ಕೇಸ್ ವಿಚಾರಣೆ ಮುಂದೂಡಿಕೆ

ಅಕ್ರಮ ಕಟ್ಟಡ ಕುಸಿತಕ್ಕೆ ‘ತುಷಾರ್ ಗಿರಿನಾಥ್’ ಹೊಣೆ ಹೊರಬೇಕು, ಕೂಡಲೇ ರಾಜೀನಾಮೆ ನೀಡುವಂತೆ ‘AAP’ ಆಗ್ರಹ

Share. Facebook Twitter LinkedIn WhatsApp Email

Related Posts

ಈ ಮಂತ್ರ ಹೇಳಿದರೆ 3 ದಿನದಲ್ಲಿ ನಿಮ್ಮ ಇಷ್ಟಾರ್ಥ ನೆರವೇರುತ್ತದೆ.!

10/11/2025 9:06 AM3 Mins Read

ಮದುವೆ ಆಗೋರಿಗೆ ಗುಡ್ ನ್ಯೂಸ್ : `ಸರಳ ಸಾಮೂಹಿಕ ವಿವಾಹ ಯೋಜನೆ’ಯಡಿ ಸಿಗಲಿದೆ 50 ಸಾವಿರ ರೂ. ಆರ್ಥಿಕ ನೆರವು.!

10/11/2025 8:54 AM1 Min Read

BREAKING : ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್’ನಲ್ಲಿ ‘ಸಾಮೂಹಿಕ ನಮಾಜ್’ : ವೀಡಿಯೋ ವೈರಲ್ |WATCH VIDEO

10/11/2025 8:17 AM1 Min Read
Recent News

BREAKING : 5 ವರ್ಷಗಳ ಬಳಿಕ ಭಾರತ-ಚೀನಾ ನಡುವೆ ವಿಮಾನ ಹಾರಾಟ ಶುರು | WATCH VIDEO

10/11/2025 9:14 AM

ಈ ಮಂತ್ರ ಹೇಳಿದರೆ 3 ದಿನದಲ್ಲಿ ನಿಮ್ಮ ಇಷ್ಟಾರ್ಥ ನೆರವೇರುತ್ತದೆ.!

10/11/2025 9:06 AM

ಅಡ್ವಾಣಿ ಬಗ್ಗೆ ತರೂರ್ ಹೇಳಿಕೆ :ಅಂತರ ಕಾಯ್ದುಕೊಂಡ ಕಾಂಗ್ರೆಸ್ | Shashi Taroor

10/11/2025 8:58 AM

ಮದುವೆ ಆಗೋರಿಗೆ ಗುಡ್ ನ್ಯೂಸ್ : `ಸರಳ ಸಾಮೂಹಿಕ ವಿವಾಹ ಯೋಜನೆ’ಯಡಿ ಸಿಗಲಿದೆ 50 ಸಾವಿರ ರೂ. ಆರ್ಥಿಕ ನೆರವು.!

10/11/2025 8:54 AM
State News
KARNATAKA

ಈ ಮಂತ್ರ ಹೇಳಿದರೆ 3 ದಿನದಲ್ಲಿ ನಿಮ್ಮ ಇಷ್ಟಾರ್ಥ ನೆರವೇರುತ್ತದೆ.!

By kannadanewsnow5710/11/2025 9:06 AM KARNATAKA 3 Mins Read

ನಿಮಗೆ ಬೇಕಾದುದನ್ನು ತರುವ ಕಲಿಕಿಯಾರ್ (ಕೇಳಯ್ಯರ್) ಮಂತ್ರ ಬಹುಶಃ ಇಂದು ಅತ್ಯಂತ ಜನಪ್ರಿಯವಾದ ಸಿದ್ಧ ಈ ಕಲ್ಯಕ್ಯ ಸಿದ್ಧವಾಗಿದೆ. ಗೂಗಲ್ನಲ್ಲಿ…

ಮದುವೆ ಆಗೋರಿಗೆ ಗುಡ್ ನ್ಯೂಸ್ : `ಸರಳ ಸಾಮೂಹಿಕ ವಿವಾಹ ಯೋಜನೆ’ಯಡಿ ಸಿಗಲಿದೆ 50 ಸಾವಿರ ರೂ. ಆರ್ಥಿಕ ನೆರವು.!

10/11/2025 8:54 AM

BREAKING : ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್’ನಲ್ಲಿ ‘ಸಾಮೂಹಿಕ ನಮಾಜ್’ : ವೀಡಿಯೋ ವೈರಲ್ |WATCH VIDEO

10/11/2025 8:17 AM

BREAKING : ಮೈಸೂರಿನ ಶಾಲೆಯಲ್ಲಿ `ರ‍್ಯಾಗಿಂಗ್’ ಕೇಸ್ : ಶಾಲಾ ಆಡಳಿತ ಮಂಡಳಿ, ಬಾಲಕರ ವಿರುದ್ಧ `FIR’ ದಾಖಲು

10/11/2025 8:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.