ಬೆಂಗಳೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರಗಳ ಅಡಿಯಲ್ಲಿ ರೈತರಿಗೆ ಆದಾಯ ಹೆಚ್ಚಿಸಿಕೊಳ್ಳೋದಕ್ಕಾಗಿ ವಿವಿಧ ತರಬೇತಿಗಳನ್ನು ನೀಡಲಾಗುತ್ತದೆ. ಉಚಿತ ತರಬೇತಿಗೆ ರೈತರಾದಂತ ನೀವು ಅರ್ಜಿ ಸಲ್ಲಿಸೋದು ಮರೆಯಬೇಡಿ.
ರೈತ ಮತ್ತು ರೈತ ಮಹಿಳೆಯರಿಗೆ ವೈಜ್ಞಾನಿಕ ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಕುರಿತಂತೆ ತರಬೇತಿಯನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ನೀಡಲಾಗುತ್ತದೆ.
ಶುದ್ಧ ಹಾಲು ಉತ್ಪಾದನೆ, ಮಾಂಸ, ಮೊಟ್ಟೆ ಉತ್ಪಾದನೆ, ಜಾನುವಾರ ಉತ್ಪನ್ನಗಳ ಮೌಲ್ಯವರ್ಧನೆ, ಪ್ರಾಣಿ ಕಲ್ಯಾಣ ಯೋಜನೆಗಳು, ಕೊಟ್ಟಿಗೆಗಳ ನೈರ್ಮಲೀಕರಣ, ಜಾನುವಾರುಗಳಲ್ಲಿ ಬೆದೆ ಗುರುತಿಸುವಿಕೆ, ತಳಿ ಸಂವರ್ಧನಾ ಕ್ರಮಗಳು, ಸುಧಾರಿತ ಮೇವುಗಳ ಮಹತ್ವ ಮತ್ತು ನಿರ್ವಹಣೆ, ಸಮತೋಲನ ಆಹಾರ ತಯಾರಿಕೆ, ಜಾನುವಾರ ರೋಗಗಳ ನಿಯಂತ್ರಣ, ಜಂತುಹುಳು ನಿವಾರಣೆ ಇತ್ಯಾದಿಗಳ ಬಗ್ಗೆ ರೈತರಿಗೆ ತರಬೇತಿಯನ್ನು ಆ ಮೂಲಕ ಅರಿವು ಮೂಡಿಸುವಂತ ಕೆಲಸ ಮಾಡಲಾಗುತ್ತದೆ.
ಯಾರಿಗೆ ತರಬೇತಿ ನೀಡಲಾಗುವುದು?
ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ತರಬೇತಿ ಕೇಂದ್ರಗಳಲ್ಲಿ ರೈತರಿಗೆ, ಜಾನುವಾರು ಮಾಲೀಕರಿಗೆ, ಉದ್ಯಮಿಗಳಿಗೆ, ನಿರುದ್ಯೋಗಿ ಯುವಕ, ಯುವತಿಯರಿಗೆ ಹಾಗೂ ಪಶು ಸಂಗೋಪನಾ ಚಟುವಟಿಕೆಯಲ್ಲಿ ತೊಡಗಿರುವ ಆಸಕ್ತರಿಗೆ ಉಚಿತ ತರಬೇತಿ ನೀಡಲಾಗುತ್ತದೆ.
ತರಬೇತಿ ಅವಧಿ ಎಷ್ಟು ದಿನ?
ರೈತರು, ಜಾನುವಾರ ಮಾಲೀಕರಿಗೆ ಎರಡು ದಿನಗಳ ತರಬೇತಿಯಾಗಿರುತ್ತದೆ.
ತರಬೇತಿ ಪಡೆಯುವುದು ಹೇಗೆ?
ತರಬೇತಿ ದಿನಾಂಕ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತರಬೇತಿ ಕೇಂದ್ರಗಳ ಮುಖ್ಯಸ್ಥರನ್ನು ಸಂಪರ್ಕಿಸುವುದು.
ತರಬೇತಿ ಕೇಂದ್ರಗಳು ಎಲ್ಲೆಲ್ಲಿದ್ದಾವೆ?
- ರಾಜ್ಯಮಟ್ಟದ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಹೆಸರಘಟ್ಟ, ಬೆಂಗಳೂರು.
- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಕಲಬುರ್ಗಿ.
- ಪಶುಪಾಲನಾ ಮತ್ತು ಪಶುವೈದ್ಯಕೀಯ ಕೇಂದ್ರ, ಹಾಸನ.
- ಪಶುಪಾಲನಾ ಮತ್ತು ಪಶುವೈದ್ಯಕೀಯ ಕೇಂದ್ರ, ತುಮಕೂರು.
- ಪಶುಪಾಲನಾ ಮತ್ತು ಪಶುವೈದ್ಯಕೀಯ ಕೇಂದ್ರ, ಧಾರವಾಡ.
- ಪಶುಪಾಲನಾ ಮತ್ತು ಪಶುವೈದ್ಯಕೀಯ ಕೇಂದ್ರ, ದಾವಣಗೆರೆ.
- ಪಶುಪಾಲನಾ ಮತ್ತು ಪಶುವೈದ್ಯಕೀಯ ಕೇಂದ್ರ, ಬೆಳಗಾವಿ.
- ಪಶುಪಾಲನಾ ಮತ್ತು ಪಶುವೈದ್ಯಕೀಯ ಕೇಂದ್ರ, ಮಳವಳ್ಳಿ, ಮಂಡ್ಯ
- ಪಶುಪಾಲನಾ ಮತ್ತು ಪಶುವೈದ್ಯಕೀಯ ಕೇಂದ್ರ, ಬಳ್ಳಾರಿ.
- ಪಶುಪಾಲನಾ ಮತ್ತು ಪಶುವೈದ್ಯಕೀಯ ಕೇಂದ್ರ, ಬೀದರ್.
ಏನೆಲ್ಲಾ ತರಬೇತಿ?
- ರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
- ರೈತರಿಗೆ ಆಧುನಿಕ ಹೈನುಗಾರಿಕೆ ಬಗ್ಗೆ ತರಬೇತಿ
- ರೈತರಿಗೆ ಕೋಳಿ ಸಾಕಾಣಿಕೆ ತರಬೇತಿ
ಐದು ಹುಲಿಗಳ ಸಾವು ಕೇಸ್: ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಗೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ಒತ್ತಾಯ
BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸದೇ ಸಾವು!