Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ತಿಂಗಳ ಕೊನೆಯಲ್ಲಿ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಸಮಸ್ಯೆ ಬಗೆಹರಿಯಲಿದೆ : ಕೆ.ಎಚ್ ಮುನಿಯಪ್ಪ

ಮ್ಯಾಜಿಕ್ ನಂಬರ್ ತಲುಪಿದ ವಿಜಯ್ ನೇತೃತ್ವದ TVK; ತಮಿಳುನಾಡಲ್ಲಿ ಸರ್ಕಾರ ರಚನೆಗೆ VCK ಬೆಂಬಲ! | VCK Extends Support

BIG NEWS: ಪೊಲೀಸರು ‘ವೈಯಕ್ತಿಕ ಮೊಬೈಲ್‌’ನಲ್ಲಿ ಫೋಟೋ ತೆಗೆದು ‘ದಂಡ’ ಹಾಕಿದ್ರೆ ಅಸಿಂಧು: ಕೋರ್ಟ್ ಮಹತ್ವದ ತೀರ್ಪು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗೆ ಎಲ್ಲಾ ಸಹಕಾರ – ಶಾಸಕ ಬೇಳೂರು ಗೋಪಾಲಕೃಷ್ಣ
KARNATAKA

ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗೆ ಎಲ್ಲಾ ಸಹಕಾರ – ಶಾಸಕ ಬೇಳೂರು ಗೋಪಾಲಕೃಷ್ಣ

By kannadanewsnow09

ಶಿವಮೊಗ್ಗ: ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿಯ ಹಣವನ್ನು ಉತ್ತಮ ರೀತಿಯಲ್ಲಿ ಸದ್ವಿನಿಯೋಗ ಮಾಡಿಕೊಳ್ಳಬೇಕು. ಕಾಲೇಜು ಅಭಿವೃದ್ಧಿಗೆ ಬೇಕಿರುವಂತ ಎಲ್ಲಾ ಸಹಕಾರವನ್ನು ನೀಡುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಡಿಸಿ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಪ್ರಾಂಶುಪಾಲರಾದಂತ ಡಾ.ಸಣ್ಣ ಹನುಮಂತಪ್ಪ ಅವರು ಅಜೆಂಡಾ ಮಂಡಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಈ ವರ್ಷ 2 ಕೋಟಿ ಅನುದಾನ ಬಂದಿದೆ. 8-10 ಕೊಠಡಿಗಳ ಅವಶ್ಯಕತೆ ಇದೆ. ಈಗಾಗಲೇ ರಾಜ್ಯ ಸರ್ಕಾರದಿಂದ 5 ಎಕರೆ ಜಮೀನನ್ನು ಕಾಲೇಜಿನ ಪಕ್ಕದಲ್ಲಿ ನೀಡಲಾಗಿದೆ. ಮೂಲ ಸೌಕರ್ಯಾಭಿವೃದ್ಧಿಗೆ ಇನ್ನೂ ಐದು ಎಕರೆ ಹೆಚ್ಚುವರಿಯಾಗಿ ಬೇಕಿದೆ. ವಾಹನ ನಿಲ್ದಾಣ ನಿರ್ಮಾಣ ಮಾಡಿಕೊಡುವಂತೆಯೂ ಸಿಡಿಸಿ ಅಧ್ಯಕ್ಷರಾದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರಲ್ಲಿ ಮನವಿ ಮಾಡಿದರು.

ಸದ್ಯ ಸಿಡಿಸಿ ಖಾತೆಯಲ್ಲಿ 10.20 ಲಕ್ಷ ಇದೆ. ಇದರಲ್ಲಿ ಗುತ್ತಿಗೆ ನೌಕರರ ವೇತನಕ್ಕೆ 1.20 ಲಕ್ಷ ಹೋಗಲಿದೆ. ಕರೆಂಟ್ ಬಿಲ್, ಪೋನ್ ಬಿಲ್, ಸೇರಿದಂತೆ ಇತರೆ ಖರ್ಚುಗಳಿಗೆ 6 ಲಕ್ಷ ವಾರ್ಷಿಕ ಖರ್ಚಾಗಲಿದೆ. ಸಿಡಿಸಿ ಸದಸ್ಯರ ಗೌರವಧನವನ್ನು 2000ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂಬುದಾಗಿ ಪ್ರಾಂಶುಪಾಲ ಡಾ.ಸಣ್ಣ ಹನುಮಂತಪ್ಪ ಅವರು ಸಭೆಗೆ ತಿಳಿಸಿದರು.

ಈ ಮನವಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದಂತ ಶಾಸಕರು, ಸ್ಥಳದಲ್ಲೇ ಇದ್ದಂತ ಪಿಎ ಟಿ.ಪಿ ರಮೇಶ್ ಅವರಿಗೆ ಕಾಲೇಜಿಗೆ ಬೇಕಿರುವಂತ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚಿಸಿದರು. ಅಲ್ಲದೇ ಈ ವರ್ಷ ಅಗತ್ಯವಿರುವಂತ ಸಿಡಿಸಿ ಹಣ ಬಳಕೆಗೂ ಅನುಮತಿಯನ್ನು ನೀಡಿದರು.

ಕಾಲೇಜು ಅಭಿವೃದ್ಧಿಗೆ ನನ್ನಿಂದ ಎಲ್ಲಾ ಸಹಕಾರ ಸಿಗಲಿದೆ. ಸ್ವಚ್ಛತೆಯ ಬಗ್ಗೆ ಪ್ರಾಮುಖ್ಯತೆ ಕೊಡಬೇಕು. ಸಿಡಿಸಿ ಕಮಿಟಿಯ ಸದಸ್ಯರೊಂದಿಗೆ ಚರ್ಚಿಸಿ ಅನುದಾನ ಬಳಕೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು. ಅಲ್ಲದೇ ಸಿಡಿಸಿ ಸದಸ್ಯರಿಗೆ ಈ ಕಾಲೇಜು ನಿಮ್ಮದು. ನಿಮ್ಮ ಜವಾಬ್ದಾರಿ ಕೂಡ ಇಲ್ಲಿ ಇದೆ. ಬಿಡುವಾದಾಗ ಕಾಲೇಜಿಗೆ ಭೇಟಿ ನೀಡುವಂತೆ ತಿಳಿಸಿದರು.

ಇದೇ ವೇಳೆ ಮಾತನಾಡಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ವರ್ಷ 1050 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ 150 ಬಾಲಕಿಯರು ಸಹ ಸೇರಿದ್ದಾರೆ. ಕಾಲೇಜಿನ ಲೈಬ್ರರಿಗೆ ದೊಡ್ಡದಾದಂತ ಕೊಠಡಿ ನಿರ್ಮಿಸಿಕೊಡಲು ಕೋರಿದ್ದಾರೆ. ಅದರ ಕಾಮಗಾರಿಯು ಪ್ರಗತಿಯಲ್ಲಿದೆ. ಅನುದಾನ ಕೂಡ ಒದಗಿಸಲಾಗಿದೆ ಎಂದರು.

ಕಾಲೇಜಿನ ಸಮೀಪದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವಂತಿಲ್ಲ. ಕಾಲೇಜಿನ ಎದುರಿನ ಅಂಗಡಿಯಲ್ಲಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅದನ್ನು ನಿಲ್ಲಿಸುವಂತೆ ಸಂಬಂಧಿಸಿದಂತ ಇಲಾಖೆಗೆ ಸೂಚಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕಾಲೇಜಿಗೆ ಬರೋದಕ್ಕೆ, ವಾಪಾಸ್ಸು ತೆರಳೋದಕ್ಕೆ ಸಾರಿಗೆ ಸಂಚಾರದ ಸಮಸ್ಯೆ ಆಗುತ್ತಿದೆ ಎಂಬುದಾಗಿ ವಿದ್ಯಾರ್ಥಿನಿಯರು ಸಮಸ್ಯೆ ಸರಿಪಡಿಸಿ, ಮತ್ತಷ್ಟು ಬಸ್ ಸಂಚಾರದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಕಾಲೇಜು ಸಮಯದಲ್ಲಿ ಹೆಚ್ಚುವರಿ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಸಾಗರದ ಇಂದಿರಾ ಗಾಂಧಿ ಮಹಿಳಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜ್ಯೂನಿಯರ್ ಕಾಲೇಜು, ಸರ್ಕಾರಿ ಆಸ್ಪತ್ರೆಯ ಬಳಿಯಲ್ಲಿ ನಂದಿನಿ ಬೂತ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಉತ್ತಮ ಗುಣಮಟ್ಟದ ನಂದಿನಿ ಉತ್ಪನ್ನಗಳು ವಿದ್ಯಾರ್ಥಿಗಳಿಗೆ ಸಿಗುವಂತೆ ಆಗಲಿದೆ ಎಂದು ಹೇಳಿದರು.

ಈ ವೇಳೆ ಕಾಲೇಜು ಕ್ಯಾಂಟೀನ್ ಗೂ ಭೇಟಿ ನೀಡಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿದರು. ಜೊತೆಗೆ ಸ್ಯಾಂಡ್ ವೆಜ್ ಕೂಡ ಮಾಡಿ ವಿದ್ಯಾರ್ಥಿಗಳಿಗೆ ನೀಡಲು ಸಲಹೆ ಮಾಡಿದರು.

ಇಂದಿನ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯ ವೇಳೆ ಸದಸ್ಯರಾದಂತ ಚೇತನ್ ರಾಜ್ ಕಣ್ಣೂರು, ಚಿದಂಬರ್, ಪ್ರಕಾಶ್, ಶ್ರೀಧರ್ ಈಳಿ, ಗಣಪತಿ ಮಂಡಗಳಲೆ, ಷಣ್ಮುಖ ಸೂರನಗದ್ದೆ, ಹನೀಸ್ ಖಾನ್, ಕೃಷ್ಣ, ಸದ್ಗುರು ಸಂತೋಷ್, ಯಶೋಧಮ್ಮ, ಇಂಜಿನಿಯರ್ ರಕ್ಷಿತ್, ವಿದ್ಯಾರ್ಥಿ ಪ್ರತಿನಿಥಿ ವೈಷ್ಣವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ

BREAKING: ಸಚಿವ ಜಮೀರ್ ಅಹ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಪುನೀತ್ ಕೆರೆಹಳ್ಳಿ ವಿರುದ್ಧ ‘FIR’ ದಾಖಲು

BREAKING: ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆಗೆ ತೆರೆ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ಗೊತ್ತಾ? ಇಲ್ಲಿದೆ ವಿವರ

BIG NEWS: ರಾಜ್ಯ ಸರ್ಕಾರದಿಂದ ಒಳಮೀಸಲಾತಿ ಜಾರಿಗೆ ನಾಗಮೋಹನ್ ನೇತೃತ್ವದಲ್ಲಿ ಆಯೋಗ ರಚಿಸಿ ಅಧಿಕೃತ ಆದೇಶ

Share. Facebook Twitter LinkedIn WhatsApp Email

Related Posts

ಈ ತಿಂಗಳ ಕೊನೆಯಲ್ಲಿ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಸಮಸ್ಯೆ ಬಗೆಹರಿಯಲಿದೆ : ಕೆ.ಎಚ್ ಮುನಿಯಪ್ಪ

1 Min Read

SHOCKING : ಮೈಸೂರಲ್ಲಿ ಹಣಕ್ಕಾಗಿ ವೃದ್ಧೆ ಕೊಲೆ : ಶೌಚಾಲಯದ ಒಳಚರಂಡಿ ಗುಂಡಿಯಲ್ಲಿ ಶವ ಹೂತು ಹಾಕಿದ ಆರೋಪಿ!

1 Min Read

ವರದಕ್ಷಿಣೆ ಪ್ರಕರಣಗಳಲ್ಲಿ ಬೆಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ: ಆತಂಕ ಮೂಡಿಸಿದ NCRB ವರದಿ! | Dowry Cases

2 Mins Read
Recent News

ಈ ತಿಂಗಳ ಕೊನೆಯಲ್ಲಿ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಸಮಸ್ಯೆ ಬಗೆಹರಿಯಲಿದೆ : ಕೆ.ಎಚ್ ಮುನಿಯಪ್ಪ

ಮ್ಯಾಜಿಕ್ ನಂಬರ್ ತಲುಪಿದ ವಿಜಯ್ ನೇತೃತ್ವದ TVK; ತಮಿಳುನಾಡಲ್ಲಿ ಸರ್ಕಾರ ರಚನೆಗೆ VCK ಬೆಂಬಲ! | VCK Extends Support

BIG NEWS: ಪೊಲೀಸರು ‘ವೈಯಕ್ತಿಕ ಮೊಬೈಲ್‌’ನಲ್ಲಿ ಫೋಟೋ ತೆಗೆದು ‘ದಂಡ’ ಹಾಕಿದ್ರೆ ಅಸಿಂಧು: ಕೋರ್ಟ್ ಮಹತ್ವದ ತೀರ್ಪು

ವರದಕ್ಷಿಣೆ ಪ್ರಕರಣಗಳಲ್ಲಿ ದೇಶದ 19 ನಗರಗಳ ಪೈಕಿ ಬೆಂಗಳೂರೇ ನಂಬರ್.1

State News
KARNATAKA

ಈ ತಿಂಗಳ ಕೊನೆಯಲ್ಲಿ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಸಮಸ್ಯೆ ಬಗೆಹರಿಯಲಿದೆ : ಕೆ.ಎಚ್ ಮುನಿಯಪ್ಪ

By kannadanewsnow05 KARNATAKA 1 Min Read

ಬೆಂಗಳೂರು : ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ವಿಚಾರ ತಿಂಗಳಲ್ಲಿ ಬಗೆಹರಿಯುತ್ತದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ನಗರದಲ್ಲಿ…

SHOCKING : ಮೈಸೂರಲ್ಲಿ ಹಣಕ್ಕಾಗಿ ವೃದ್ಧೆ ಕೊಲೆ : ಶೌಚಾಲಯದ ಒಳಚರಂಡಿ ಗುಂಡಿಯಲ್ಲಿ ಶವ ಹೂತು ಹಾಕಿದ ಆರೋಪಿ!

ವರದಕ್ಷಿಣೆ ಪ್ರಕರಣಗಳಲ್ಲಿ ಬೆಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ: ಆತಂಕ ಮೂಡಿಸಿದ NCRB ವರದಿ! | Dowry Cases

BREAKING : ಬೆಂಗಳೂರಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ರೀಲ್ಸ್ ರಾಣಿಯಿಂದ ಕಿರುಕುಳ : ಯುವಕ ಆತ್ಮಹತ್ಯೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.