ಬೆಳಗಾವಿ : ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿದ್ದು ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ವರ್ಣಾರ್ಭಟಕ್ಕೆ ಇಡೀ ಬೆಂಗಳೂರಿನ ಜನತೆ ತತ್ತರಿಸಿ ಹೋಗಿದ್ದರು. ಬೆಂಗಳೂರಿನ ಹಲವು ರಸ್ತೆಗಳಂತೂ ನೀರು ತುಂಬಿ ಸಂಪೂರ್ಣವಾಗಿ ಕೆರೆಗಳಂತಾಗಿದ್ದವು. ಇದೀಗ ಇದೆ ಪರಿಸ್ಥಿತಿ ಬೆಳಗಾವಿಯಲ್ಲೂ ಕೂಡ ನಿರ್ಮಾಣವಾಗಿದೆ.
ಹೌದು ಬೆಳಗಾವಿ ಜಿಲ್ಲೆಯಲ್ಲಿ ಕೂಡ ಭಾರಿ ಮಳೆಯಾಗುತ್ತಿದ್ದೂ, ಹುಕ್ಕೇರಿ ತಾಲೂಕಿನ ಬುಗಟಿ ಆಲೂರು, ಮತ್ತೆವಾಡಿ ಹಾಗೂ ಸಂಕೇಶ್ವರ ಪಟ್ಟಣದಲ್ಲೂ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಸಂಕೇಶ್ವರ ಪಟ್ಟಣದ ತಗ್ಗು ಪ್ರದೇಶದಲ್ಲಿ ಇರುವಂತಹ ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿದೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.