ಬೆಂಗಳೂರು : ಅವಾಚ್ಯ ಪದ ಬಳಕೆ ಮಾಡಿದ್ದರೆಂದು ಬಿಗ್ ಬಾಸ್ ಶೋ ನಿಂದ ಲಾಯರ್ ಜಗದೀಶ್ ಅವರನ್ನು ಹೊರಹಾಕಲ್ಪಟ್ಟಿದ್ದಾರೆದೆ. ಹೊರಗಡೆ ಬಂದ ಬಳಿ ಜಗದೀಶ್ ಅವರು ಬಿಗ್ ಬಾಸ್ ಮನೆಯ ಕೆಲವು ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದು ಕಡೆ ಬಿಗ್ ಬಾಸ್ ಮನೆಯಲ್ಲಿ ಚೈತ್ರ ಕುಂದಾಪುರ, ಮಾನಸ ಸೇರಿದಂತೆ ಹಲವರಿಗೆ ನಟ ಕಿಚ್ಚ ಸುದೀಪ್ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಅವಾಚ್ಯ ಪದ ಬಳಕೆ ಮಾಡಿದ್ದರ ಕುರಿತು ಹಾಗೂ ಅವರಿಗೂ ಕೂಡ ಮನೆಯ ಇತರೆ ಮಹಿಳಾ ಸದಸ್ಯರು ಬೈದಿದ್ದರ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಭವ್ಯ ಬಂದು ಪುಷ್ ಮಾಡ್ತಾಳೆ. ಏನ್ ಬೇಕಾದ್ರು ಮಾಡ್ತೀನಿ ಅಂತಾಳೆ. ಆಕೆ ಇನ್ನೂ ಕೂಡ ಟೈಗರ್ ಅನ್ನ ನೋಡಿಲ್ಲ. ಸಿಎಂ ಅವರೇ ಗಂಡಸರಿಗೆ ಒಂದು ಕಮಿಷನ್ ಅನ್ನು ಕ್ರಿಯೇಟ್ ಮಾಡಿ. ಹೆಣ್ಮಕ್ಕಳು ಅಟ್ಯಾಕ್ ಮಾಡಿದರೆ ಕೇಳೋರೇ ಇಲ್ಲ. ಹೆಣ್ಮಕ್ಕಲು ಅಬಲೆ ಅಂತಾರೆ.. ಸಂಘ ಸಂಸ್ಥೆ ಕಟ್ಟಿಕೊಳ್ತಾರೆ. ನಾವೇನು ಮಾಡೋದು. ಗಂಡಸರಿಗೆ ಹೋಗೋ ಬಾರೋ ಅನ್ನುವಾಗ ಹೆಂಗಸರಿಗೆ ಬಾರೇ ಹೋಗೇ ಅನ್ಬಾರ್ದಾ? ಎಂದಿದ್ದಾರೆ.
ರಂಜಿತ್ ತ್ರಿವಿಕ್ರಂಗೆ ಹೊಡಿಬೇಕು ಅನ್ಕೊಂಡಿದ್ದೆ!
ಇನ್ನು ರಂಜಿತ್ ಮತ್ತು ತ್ರಿವಿಕ್ರಂ ಕುರಿತು ಮಾತನಾಡಿದ ಅವರು ಅವರಿಬ್ಬರಿಗೂ ಹೊಡಿಬೇಕು ಅಂತ ಅನ್ಕೊಂಡಿದ್ದೆ. ಆದರೆ ತಾಳ್ಮೆ ಕಳೆದುಕೊಳ್ಳುವ ಸಂದರ್ಭದಲ್ಲಿ ಸುದೀಪ ಹಾಗೂ ಬಿಗ್ ಬಾಸ್ ನೆನಪಾಗುತ್ತಿದ್ದರು.ಹಾಗಾಗಿ ನಾನು ಯಾರ ಮೇಲು ಕೈ ಮಾಡಿಲ್ಲ.ವಿಕ್ರಂ ಜಿಮ್ ಅಲ್ಲಿ ಇರೋ ಇಕ್ಯೂಮೆಂಟ್ಸ್ ಅನ್ನು ಎತ್ತಿಕೊಂಡು ಹೋಗಿಬಿಟ್ಟಿದ್ದ. ಯಾಕೆಂದರೆ ಅವನು ಹೆಣ್ಮಕ್ಕಳು ಇದ್ದಾಗ ಮಾತ್ರ ತಾನೊಬ್ಬ ವೀರ ಶೂರ ಅಂತ ಕಾಣಿಸಿಕೊಳ್ಳುತ್ತಾನೆ. ಅದೇ ನಾನು ಒಬ್ಬನೇ ಇದ್ದಾಗ ರಂಜಿತ್ಗೆ ವಿಕ್ರಂ, ವಿಕ್ರಂಗೆ ರಂಜಿತ್ ಇರಲೇ ಬೇಕು. ಇಬ್ಬರೂ ಕೂಡ ಒಬ್ಬರನ್ನೊಬ್ಬರು ಬಿಟ್ಟು ಇರಲ್ಲ. ಅವರಿಬ್ಬರಿಗೆ ಹೊಡೆಯಬೇಕು ಅಂತ ಪ್ಲ್ಯಾನ್ ಮಾಡಿದ್ದೆ ಬಟ್ ಮಿಸ್ ಆಯ್ತು ನಂಗೆ ಎಂದು ತಿಳಿಸಿದ್ದಾರೆ.