ಬೆಳಗಾವಿ : ನಿನ್ನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದಲ್ಲಿರುವ ಅಡವಿಸಿದ್ದೇಶ್ವರ ಮಠದಲ್ಲಿ ಸ್ವಾಮೀಜಿಯ ಅನಾಚಾರ ಆರೋಪದ ವಿಚಾರವಾಗಿ, ಅಡವಿ ಸಿದ್ದರಾಮ ಶ್ರೀ ಮೇಲೆ ಹಲ್ಲೆ ಮಾಡಿ ಯುವಕರು ಎಳೆದಾಡಿರುವ ಘಟನೆ ನಡೆದಿದೆ.
ಹೌದು ಮಠಕ್ಕೆ ಬಂದಿದ್ದ ಬಾಗಲಕೋಟೆ ಮೂಲದ ಮಹಿಳೆ ಮತ್ತು ಆಕೆಯ 15 ವರ್ಷದ ಮಗಳು ಮಠದಲ್ಲೇ ರಾತ್ರಿ ಉಳಿದುಕೊಂಡಿದ್ದರು. ಮಹಿಳೆಯರ ಜೊತೆ ಸ್ವಾಮೀಜಿ ಇದ್ದಾರೆಂದು ಯುವಕರು ಮಠಕ್ಕೆ ನುಗ್ಗಿದ್ದಾರೆ. ಈ ವೇಳೆ ಒಂದೇ ರೂಮ್ನಲ್ಲಿ ಸ್ವಾಮೀಜಿ ಮತ್ತು ಮಹಿಳೆ ಮತ್ತು ಆಕೆ ಮಗಳು ಇದ್ದರು. ಸ್ವಾಮೀಜಿಯನ್ನು ತಳ್ಳಿ ಮಹಿಳೆ ಅಪ್ರಾಪ್ತ ಮಗಳ ಜೊತೆಗೆ ಯುವಕರು ಅಸಭ್ಯ ವರ್ತನೆ ತೋರಿದ್ದಾರೆ. ಬಾಲಕಿ ಬಟ್ಟೆಹರಿದು ಯುವಕರು ಎಳೆದಾಡಿದ್ದಾರೆ.
ಈ ವೇಳೆ ರಕ್ಷಣೆಗೆ ನಿಂತ ಸ್ವಾಮೀಜಿಗೆ ಯುವಕರು ಕಪಾಳ ಮೋಕ್ಷ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರು ಈ ವೇಳೆ ಮಹಿಳೆಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಬಳಿಕ ಗ್ರಾಮಸ್ಥರು ರಾತ್ರಿಯ ಅಡವಿಸಿದ್ದರಾಮ ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಿದ್ದಾರೆ.ಸದ್ಯ ಸ್ವಾಮೀಜಿ ಗೋಕಾಕ್ ನಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.