Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

 BREAKING : ರಾಜ್ಯ ಸರ್ಕಾರಿ ಮಹಿಳಾ ನೌಕರರ `ಋತುಚಕ್ರ ರಜೆ’ಗೆ ಪುರುಷ ನೌಕರರು ವಿರೋಧ : ಆರ್ಥಿಕ ಇಲಾಖೆಗೆ ಪತ್ರ.!

23/01/2026 12:32 PM

ಸಾಗರ ನಗರದಲ್ಲೊಂದು ‘ಡಾಂಬಾರ್’ ಕಾಣದ ರಸ್ತೆ; ಕಣ್ಮುಚ್ಚಿ ಕುಳಿತ ‘ನಗರಸಭೆ’

23/01/2026 12:30 PM

BREAKING: ರವಿಶಂಕರ್ ಗುರೂಜಿಗೆ ಬಿಗ್ ರಿಲೀಫ್: ‘ಒತ್ತುವರಿ’ ಪ್ರಕರಣದ ತನಿಖೆಗೆ ಹೈಕೋರ್ಟ್ ಬ್ರೇಕ್

23/01/2026 12:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರ ನಗರದಲ್ಲೊಂದು ‘ಡಾಂಬಾರ್’ ಕಾಣದ ರಸ್ತೆ; ಕಣ್ಮುಚ್ಚಿ ಕುಳಿತ ‘ನಗರಸಭೆ’
KARNATAKA

ಸಾಗರ ನಗರದಲ್ಲೊಂದು ‘ಡಾಂಬಾರ್’ ಕಾಣದ ರಸ್ತೆ; ಕಣ್ಮುಚ್ಚಿ ಕುಳಿತ ‘ನಗರಸಭೆ’

By kannadanewsnow0923/01/2026 12:30 PM

ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ಹೃದಯ ಭಾಗದಲ್ಲೇ ಆ ರಸ್ತೆ ಇದೆ. ಖಾಸಗಿ ಬಸ್ ನಿಲ್ದಾಣದಿಂದ ಕೂಗಳತೆ ದೂರ ಬೇರೆ. ಹೀಗಿದ್ದರೂ ರಸ್ತೆ ಮಾತ್ರ ಡಾಂಬಾರ್ ಕಂಡಿಲ್ಲ. ಚರಂಡಿಗಳು ನಿರ್ಮಾಣವಾಗಿಲ್ಲ. ಹಾಗಾದರೆ ನಗರಸಭೆಯವರಿಗೆ ಇದು ಕಂಡಿಲ್ಲವ ಎಂಬುದು ರಸ್ತೆಯಲ್ಲಿನ ನಿವಾಸಿಗಳ ಪ್ರಶ್ನೆ.

ಹೌದು ಸಾಗರ ಪಟ್ಟಣದ ಹೃದಯ ಭಾಗದಲ್ಲಿ ಡಾಂಬರ್ ಕಾಣದ ರಸ್ತೆಯೊಂದು ಜೋಸೆಫ್ ನಗರದಲ್ಲಿದೆ. ಅಲ್ಲಿನ ಮನೆಗಳು ನಿರ್ಮಾಣಕ್ಕೆ ಮೊದಲೋ ಅಥವಾ ಮನೆಗಳು ನಿರ್ಮಾಣಗೊಂಡ ಕೆಲ ವರ್ಷಗಳ ನಂತರ ರಸ್ತೆಗೆ ಡಾಂಬಾರೀಕರಣ ಮಾಡಿರಬೇಕು. ಅದರ ಹೊರತಾಗಿ ಈವರೆಗೆ ಆಗಿಲ್ಲ. ಜನರು ಓಡಾಡಲು ಸಾಧ್ಯವಾಗದ ರೀತಿಯಲ್ಲಿ ರಸ್ತೆ ಹಾಳಾಗಿದೆ.

ಸಾಗರದ ಬಿಹೆಚ್ ರಸ್ತೆಯ ಆಭರಣ ಜ್ಯೂವೆಲ್ಲರಿ ಎದುರು, ಏಥರ್ ಎಲೆಕ್ಟ್ರಿಕ್ ಬೈಕ್ ಶೋ ರೂಮ್ ಪಕ್ಕದಲ್ಲೇ ಇರೋ ಈ ರಸ್ತೆ ಮಾತ್ರ ಹಲವು ವರ್ಷಗಳೇ ಕಳೆದರೂ ಟಾರ್ ಕಂಡಿಲ್ಲ. ಡಾಂಬಾರೀಕರಣ ಕಾಣದೇ ಜಲ್ಲಿಕಲ್ಲುಗಳ ಎದ್ದು ಓಡಾಟಕ್ಕೂ ಕಷ್ಟವಾಗಿದೆ. ಚರಂಡಿಗಳು ತುಂಬಿ ಹೋಗಿದ್ದರೇ, ಅಲ್ಲಲ್ಲಿ ನೀರು ಹರಿಯದಂತೆ ಚರಂಡಿಗಳೇ ಬಂದ್ ಆಗಿವೆ. ಎಷ್ಟೋ ವರ್ಷಗಳಿಂದ ಚರಂಡಿಯನ್ನು ಕ್ಲೀನ್ ಮಾಡದೇ ನೀರು ನಿಂತು ಸಾಂಕ್ರಾಮಿಕ ರೋಗಕ್ಕೂ ಕಾರಣವಾಗಿದೆ.

ಸಾಗರ ಪಟ್ಟಣದ ಜೋಸೆಫ್ ನಗರದ 1ನೇ ಕ್ರಾಸ್ ರಸ್ತೆ ಜನರ ಗೋಳು ಕೇಳುವವರೇ ಇಲ್ವ.? ರಾತ್ರಿ ಆದರೆ ಸಾಕು ಲೈಟ್ ಕಂಬಗಳಲ್ಲಿ ಲೈಟ್ ಇರದ ಕಾರಣ ಅನಧಿಕೃತ ಚಟುವಟಿಕೆಯ ತಾಣವಾಗಿಯೂ ಮಾರ್ಪಟ್ಟಿದೆ ಎಂಬುದು ರಸ್ತೆಯ ನಿವಾಸಿಗಳ ಆಕ್ರೋಶ.

ರಸ್ತೆಯಲ್ಲೇ ವಿದ್ಯುತ್ ಪರಿಕರ ಹಾಕಿ ಕೈ ಬಿಟ್ಟ ಮೆಸ್ಕಾಂ, ಓಡಾಟಕ್ಕೂ ಸಮಸ್ಯೆ

ಸಾಗರದ ಜೋಸೆಫ್ ನಗರದ ಏಥೆರ್ ಎಲೆಕ್ಟ್ರಿಕ್ ಬೈಕ್ ಶೋ ರೂಂ ಪಕ್ಕದ 1ನೇ ಕ್ರಾಸ್ ರಸ್ತೆಯಲ್ಲಿ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ವಯರ್, ಕಂಬ ಹಾಕಿದ್ದಾರೆ. ಹೀಗಾಗಿ ಈ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೂ ಅಡಚಣೆ ಉಂಟಾಗಿದೆ. ಕೂಡಲೇ ಮೆಸ್ಕಾಂ ಸಿಬ್ಬಂದಿ ಇದನ್ನು ಗಮನಿಸಿ, ತೆರವು ಗೊಳಿಸುವಂತೆ ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಮಾರಿ ಜಾತ್ರೆಯ ಈಗಲಾದರೂ ಡಾಂಬಾರೀಕರಣ ಆಗುತ್ತಾ.?

ಸಾಗರದಲ್ಲಿ ಮಾರಿ ಜಾತ್ರೆಯ ತಯಾರಿ ಜೋರಾಗಿದೆ. ಜೊತೆಗೆ ಪ್ರಮುಖ ರಸ್ತೆಗಳ ಡಾಂಬಾರೀಕರಣಕ್ಕೂ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದ್ದಾರೆ. ಹೀಗಾಗಿ ಈಗಾಗಲೇ ಹಲವಾರು ರಸ್ತೆಗಳನ್ನು ಡಾಂಬಾರೀಕರಣ ಮಾಡಲಾಗಿದೆ, ಮಾಡಲಾಗುತ್ತಿದೆ.

ಇದೇ ಮಾರಿಕಾಂಬ ಜಾತ್ರೆಯ ಸುಸಂದರ್ಭದಲ್ಲಿ ಆದರೂ ಸಾಗರದ ಜೋಸೆಫ್ ನಗರದ 1ನೇ ಕ್ರಾಸಿನ ಜಸ್ಟ್ 200 ರಿಂದ 300 ಮೀಟರ್ ಇರುವ, ಡಾಂಬಾರ್ ಕಂಡು ಎಷ್ಟೋ ವರ್ಷಗಳೇ ಕಳೆದಿರುವಂತ ರಸ್ತೆಗೂ ಡಾಂಬಾರೀಕರಣ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ ಅಲ್ಲಿನ ನಿವಾಸಿಗಳು ಇದ್ದಾರೆ. ಕೆಲ ದಿನಗಳ ಹಿಂದೆ ಜೋಸೆಫ್ ನಗರದ 2ನೇ ಕ್ರಾಸ್ ರಸ್ತೆ ಡಾಂಬಾರೀಕರಣಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದ್ದರು. ಇದೇ ಬಡಾವಣೆಯ 1ನೇ ಕ್ರಾಸ್ ರಸ್ತೆಗೂ ಡಾಂಬಾರೀಕರಣ ಭಾಗ್ಯ ಕಲ್ಪಿಸಲಿ. ಆ ಮೂಲಕ ರಸ್ತೆಯಲ್ಲಿ ಇರುವ ನಿವಾಸಿಗಳಿಗೆ, ಆ ರಸ್ತೆಯಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಸಾಗುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು

Share. Facebook Twitter LinkedIn WhatsApp Email

Related Posts

 BREAKING : ರಾಜ್ಯ ಸರ್ಕಾರಿ ಮಹಿಳಾ ನೌಕರರ `ಋತುಚಕ್ರ ರಜೆ’ಗೆ ಪುರುಷ ನೌಕರರು ವಿರೋಧ : ಆರ್ಥಿಕ ಇಲಾಖೆಗೆ ಪತ್ರ.!

23/01/2026 12:32 PM1 Min Read
CM Siddaramaiah launches 'Original Mylari Hotel-1938' in Indiranagar

ಮೈಸೂರಿನ ‘ಮೈಲಾರಿ’ ಘಮ; ಹೋಟೆಲ್ ಉದ್ಘಾಟಿಸಿ, ದೋಸೆ ಸವಿದು ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ

23/01/2026 11:48 AM1 Min Read

ಇದು ಬೆಂಗಳೂರಿಗರ ಫೇವರಿಟ್‌ ‘ಬಿರಿಯಾನಿ’: ಸ್ವಿಗ್ಗಿಯಲ್ಲಿ ಬರೋಬ್ಬರಿ ‘161 ಲಕ್ಷ ಆರ್ಡರ್‌’- ವರದಿ

23/01/2026 11:37 AM5 Mins Read
Recent News

 BREAKING : ರಾಜ್ಯ ಸರ್ಕಾರಿ ಮಹಿಳಾ ನೌಕರರ `ಋತುಚಕ್ರ ರಜೆ’ಗೆ ಪುರುಷ ನೌಕರರು ವಿರೋಧ : ಆರ್ಥಿಕ ಇಲಾಖೆಗೆ ಪತ್ರ.!

23/01/2026 12:32 PM

ಸಾಗರ ನಗರದಲ್ಲೊಂದು ‘ಡಾಂಬಾರ್’ ಕಾಣದ ರಸ್ತೆ; ಕಣ್ಮುಚ್ಚಿ ಕುಳಿತ ‘ನಗರಸಭೆ’

23/01/2026 12:30 PM

BREAKING: ರವಿಶಂಕರ್ ಗುರೂಜಿಗೆ ಬಿಗ್ ರಿಲೀಫ್: ‘ಒತ್ತುವರಿ’ ಪ್ರಕರಣದ ತನಿಖೆಗೆ ಹೈಕೋರ್ಟ್ ಬ್ರೇಕ್

23/01/2026 12:27 PM

ಅಂಬಾನಿ ಪುತ್ರನ ಕೈಯಲ್ಲಿದೆ ₹13.7 ಕೋಟಿಯ ‘ವಂತರಾ’ ವಾಚ್: ಇದರಲ್ಲಿ ಅನಂತ್ ಅಂಬಾನಿ ಪ್ರತಿಮೆಯೇ ಇದೆ!

23/01/2026 12:16 PM
State News
KARNATAKA

 BREAKING : ರಾಜ್ಯ ಸರ್ಕಾರಿ ಮಹಿಳಾ ನೌಕರರ `ಋತುಚಕ್ರ ರಜೆ’ಗೆ ಪುರುಷ ನೌಕರರು ವಿರೋಧ : ಆರ್ಥಿಕ ಇಲಾಖೆಗೆ ಪತ್ರ.!

By kannadanewsnow5723/01/2026 12:32 PM KARNATAKA 1 Min Read

ಬೆಂಗಳೂರು : ರಾಜ್ಯ ಸರ್ಕಾರಿ ಮಹಿಳಾ ನೌಕರರ ಋತುಚಕ್ರ ರಜೆಗೆ ಸರ್ಕಾರಿ ಪುರುಷ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರಿ…

ಸಾಗರ ನಗರದಲ್ಲೊಂದು ‘ಡಾಂಬಾರ್’ ಕಾಣದ ರಸ್ತೆ; ಕಣ್ಮುಚ್ಚಿ ಕುಳಿತ ‘ನಗರಸಭೆ’

23/01/2026 12:30 PM
CM Siddaramaiah launches 'Original Mylari Hotel-1938' in Indiranagar

ಮೈಸೂರಿನ ‘ಮೈಲಾರಿ’ ಘಮ; ಹೋಟೆಲ್ ಉದ್ಘಾಟಿಸಿ, ದೋಸೆ ಸವಿದು ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ

23/01/2026 11:48 AM

ಇದು ಬೆಂಗಳೂರಿಗರ ಫೇವರಿಟ್‌ ‘ಬಿರಿಯಾನಿ’: ಸ್ವಿಗ್ಗಿಯಲ್ಲಿ ಬರೋಬ್ಬರಿ ‘161 ಲಕ್ಷ ಆರ್ಡರ್‌’- ವರದಿ

23/01/2026 11:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.