ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಸಾವಿರ ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ಇಂದು ಹಾವೇರಿಯಲ್ಲಿ ಬೃಹತ್ ಸಾಧನಾ ಸಮಾವೇಶ ಹಮ್ಮಿಕೊಂಡಿದೆ. ಈ ಒಂದು ಸಾಧನ ಸಮಾವೇಶದ ಕುರಿತು ಜೆಡಿಎಸ್ ಕಿಡಿ ಕಾರಿದ್ದು, ಟ್ವೀಟ್ ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ ಎಂದು ವಾಗ್ದಾಳಿ ನಡೆಸಿದೆ.
ಜನ ವಿರೋಧಿ ಕಾಂಗ್ರೆಸ್ ಸರ್ಕಾರದ “ನಿರರ್ಥಕ 1000 ದಿನಗಳ” ಪಟ್ಟಿ.
👉 ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್- 1
👉 ರಾಜ್ಯದಲ್ಲಿ 2800ಕ್ಕೂ ಹೆಚ್ಚು
ರೈತರ ಆತ್ಮಹತ್ಯೆ
👉 2.80 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರು ನೇಮಕಾತಿ ಇಲ್ಲ
👉 ಬಾಕಿ ಹಣ ನೀಡದೆ ಗುತ್ತಿಗೆದಾರರಿಗೆ ಆತ್ಮಹತ್ಯೆ ಭಾಗ್ಯ
👉 ಸರ್ಕಾರದ ಕಿರುಕುಳಕ್ಕೆ ಅಧಿಕಾರಿಗಳ ಸರಣಿ ಆತ್ಮಹತ್ಯೆ
👉 ರಸ್ತೆ ಗುಂಡಿ ಅಪಘಾತಕ್ಕೆ ಅಮಾಯಕರು ಬಲಿ
👉 ದಲಿತರ 25,000 ಸಾವಿರ ಕೋಟಿ ದುರ್ಬಳಕೆ
👉 ಅಬಕಾರಿ ಇಲಾಖೆಯಲ್ಲಿ6000 ಕೋಟಿ ಹಗರಣ
👉 ಗೃಹಲಕ್ಷ್ಮಿ ಹಣ 5 ಸಾವಿರ ಕೋಟಿ ಗುಳುಂ
👉 ಅನ್ನಭಾಗ್ಯ ಅಕ್ಕಿ ಹಣ 657 ಕೋಟಿ ಲೂಟಿ
👉 ಕಾರ್ಮಿಕ ಇಲಾಖೆ ಕಿಟ್ ಹಗರಣ
👉 ವಾಲ್ಮೀಕಿ ನಿಗಮದಲ್ಲಿ 187
ಕೋಟಿ ಲೂಟಿ
👉 ಬಹುಕೋಟಿ ಮುಡಾ ಹಗರಣ
👉 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ
👉 ಪೆಟ್ರೋಲ್, ಡಿಸೇಲ್ ದರ ಹೆಚ್ಚಳ
👉 ಮೆಟ್ರೋ, ಬಸ್ ದರ ಏರಿಕೆ
👉 ಕಸಕ್ಕೂ ತೆರಿಗೆ ,ನೀರು, ಹಾಲು ಸ್ಟ್ಯಾಂಪ್ ಶುಲ್ಕ ಹೆಚ್ಚಳ
👉 ರೈತರಿಗೆ ಗೊಬ್ಬರವಿಲ್ಲ , ನೆರೆ- ಬೆಳೆ ನಷ್ಟ ಪರಿಹಾರವಿಲ್ಲ
👉 1.6 ಲಕ್ಷ ಒಬಿಸಿ, ಅಲ್ಪಸಂಖ್ಯಾತ
ವಿದ್ಯಾರ್ಥಿಗಳ ಸ್ಕಾಲರ್ಶಿಪ್’ಗೆ ಕೊಕ್ಕೆ
👉 ಯುವಕರಿಗೆ ಯುವನಿಧಿ
ನೀಡದೆ ಮೋಸ
👉 ಇ-ಖಾತಾ, ಪೋಡಿ, ಪೋತಿ ಅಭಿಯಾನ ವಿಫಲ
👉 ಬಡವರ ಜನೌಷಧ ಕೇಂದ್ರ ಸ್ಥಗಿತ
👉 ಇಲಾಖಾವಾರು ವರ್ಗಾವಣೆ ದಂಧೆ
👉 ರಾಜ್ಯದಲ್ಲಿ ಗಾಂಜಾ, ಡ್ರಗ್ಸ್ ದಂಧೆ ಹೆಚ್ಚಳ
👉 ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ
👉 ಹದಗೆಟ್ಟ ಕಾನೂನು ಸುವ್ಯವಸ್ಥೆ
👉 ಸರ್ಕಾರಿ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಂಥಪಾಲಕರಿಗೆ ಸಂಬಳ ಇಲ್ಲ.
ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿದರಷ್ಟೇ ಕರ್ನಾಟಕಕ್ಕೆ ಬರುವುದು ಒಳ್ಳೆಯ ದಿನ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಸರ್ಕಾರದ 1000 ದಿನಗಳಲ್ಲಿ ಭ್ರಷ್ಟಾಚಾರ ಎಂದು ಟ್ಯಾಗ್ ಲೈನ್ ನೀಡಿದೆ.
ಕರ್ನಾಟಕದ ಜನರ “ಪ್ರತಿನಿತ್ಯದ ಸಾವಿರಾರು ಸಮಸ್ಯೆ”ಗಳ ಮಧ್ಯೆ @INCKarnataka ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ.
ಜನ ವಿರೋಧಿ ಕಾಂಗ್ರೆಸ್ ಸರ್ಕಾರದ “ನಿರರ್ಥಕ 1000 ದಿನಗಳ” ಪಟ್ಟಿ.
👉 ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್- 1
👉 ರಾಜ್ಯದಲ್ಲಿ 2800ಕ್ಕೂ ಹೆಚ್ಚು
ರೈತರ ಆತ್ಮಹತ್ಯೆ👉 2.80 ಲಕ್ಷ ಸರ್ಕಾರಿ…
— Janata Dal Secular (@JanataDal_S) February 14, 2026








