ಬೆಂಗಳೂರು: ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ರೈಲು ಸಂಖ್ಯೆ 06269 ಮೈಸೂರು – ಎಸ್ಎಂವಿಟಿ ಬೆಂಗಳೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲಿನ ಸಮಯವನ್ನು 26.05.2026 ರಿಂದ 15.06.2026 ರವರೆಗೆ ಪರಿಷ್ಕರಿಸಲಾಗಿದೆ. ಅದರಂತೆ, ರೈಲು (06269) ಈಗಿರುವ 00:35/00:45 ಗಂಟೆಗಳ ಸಮಯಕ್ಕೆ ಬದಲಾಗಿ 00:20/00:30 ಗಂಟೆಗೆ ಕೆಎಸ್ಆರ್ ಬೆಂಗಳೂರಿಗೆ ಆಗಮಿಸಿ/ನಿರ್ಗಮಿಸಲಿದೆ.
II. ರೈಲುಗಳ ಮಾರ್ಗ ಬದಲಾವಣೆ ಮತ್ತು ನಿಯಂತ್ರಣ
ಪುಣೆ ವಿಭಾಗದ ದೌಂಡ್-ಮನ್ಮಾಡ್ ರೈಲು ಮಾರ್ಗದ ವಿಸಾಪುರ-ರಂಜನ್ಗಾಂವ್ ರೋಡ್-ಸರೋಲಾ ನಿಲ್ದಾಣಗಳ ನಡುವೆ ಹಳಿ ದ್ವಿಗುಣಗೊಳಿಸುವ (ಡಬ್ಲಿಂಗ್) ಕಾಮಗಾರಿ ಸಲುವಾಗಿ, ಮಧ್ಯ ರೈಲ್ವೆಯು ಈ ಕೆಳಗಿನ ರೈಲು ಸೇವೆಗಳ ಮಾರ್ಗ ಬದಲಾವಣೆ ಮತ್ತು ನಿಯಂತ್ರಿಸಲಾಗುತ್ತಿದೆ ಎಂದು ಸೂಚಿಸಿದೆ. ಅದರ ವಿವರಗಳು ಈ ಕೆಳಗಿನಂತಿವೆ:
ಈ ರೈಲುಗಳ ಮಾರ್ಗ ಬದಲಾವಣೆ:
1. ಮೇ 27 ಮತ್ತು 29, 2026 ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12627 ಕೆಎಸ್ಆರ್ ಬೆಂಗಳೂರು – ನವದೆಹಲಿ ಕರ್ನಾಟಕ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲು ಸೋಲಾಪುರ, ಕುರ್ದುವಾಡಿ, ಲಾತೂರ್ ರೋಡ್, ಪರ್ಭಣಿ, ಅಂಕೈ ಮತ್ತು ಮನ್ಮಾಡ್ ಮಾರ್ಗವಾಗಿ ಸಂಚರಿಸಲಿದೆ.
2. ಮೇ 27, 2026 ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 22685 ಯಶವಂತಪುರ – ಚಂಡೀಗಢ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ಪುಣೆ, ಲೋನಾವಲಾ, ಕರ್ಜತ್, ಪನ್ವೇಲ್, ಕಲ್ಯಾಣ, ನಾಸಿಕ್ ರೋಡ್ ಮತ್ತು ಮನ್ಮಾಡ್ ಮಾರ್ಗವಾಗಿ ಸಂಚರಿಸಲಿದೆ.
3. ಮೇ 29, 2026 ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 20657 ಎಸ್ಎಸ್ಎಸ್ ಹುಬ್ಬಳ್ಳಿ – ಹಜರತ್ ನಿಜಾಮುದ್ದೀನ್ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ಸೋಲಾಪುರ, ಕುರ್ದುವಾಡಿ, ಲಾತೂರ್ ರೋಡ್, ಪರ್ಭಣಿ, ಛತ್ರಪತಿ ಸಂಭಾಜಿನಗರ ಮತ್ತು ಮನ್ಮಾಡ್ ಮಾರ್ಗವಾಗಿ ಸಂಚರಿಸಲಿದೆ.
4. ಮೇ 29, 2026 ರಂದು ಹಜರತ್ ನಿಜಾಮುದ್ದೀನ್ನಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ – ವಾಸ್ಕೋ-ಡ-ಗಾಮಾ ಗೋವಾ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ಮನ್ಮಾಡ್, ನಾಸಿಕ್ ರೋಡ್, ಕಲ್ಯಾಣ, ಪನ್ವೇಲ್, ಕರ್ಜತ್, ಲೋನಾವಲಾ ಮತ್ತು ಪುಣೆ ಮಾರ್ಗವಾಗಿ ಸಂಚರಿಸಲಿದೆ.
ಈ ರೈಲುಗಳ ನಿಯಂತ್ರಣ:
1. ಮೇ 27, 2026 ರಂದು ಹಜರತ್ ನಿಜಾಮುದ್ದೀನ್ನಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ – ವಾಸ್ಕೋ-ಡ-ಗಾಮಾ ಗೋವಾ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲು ಮನ್ಮಾಡ್-ಅಕೋಲ್ನರ್ ಭಾಗದಲ್ಲಿ 2 ಗಂಟೆ 30 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
2. ಮೇ 28, 2026 ರಂದು ಯೋಗ ನಗರಿ ಋಷಿಕೇಶದಿಂದ ಹೊರಡುವ ರೈಲು ಸಂಖ್ಯೆ 07364 ಯೋಗ ನಗರಿ ಋಷಿಕೇಶ – ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್’ಪ್ರೆಸ್ ರೈಲು 2 ಗಂಟೆ 30 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
3. ಮೇ 29, 2026 ರಂದು ನವದೆಹಲಿಯಿಂದ ಹೊರಡುವ ರೈಲು ಸಂಖ್ಯೆ 12628 ನವದೆಹಲಿ – ಕೆಎಸ್ಆರ್ ಬೆಂಗಳೂರು ಕರ್ನಾಟಕ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲು ಸೋಲಾಪುರ-ದೌಂಡ್ ಭಾಗದಲ್ಲಿ 1 ಗಂಟೆ 30 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
4. ಮೇ 29, 2026 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 12781 ಮೈಸೂರು – ಹಜರತ್ ನಿಜಾಮುದ್ದೀನ್ ಸ್ವರ್ಣ ಜಯಂತಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ಪುಣೆ-ದೌಂಡ್ ಭಾಗದಲ್ಲಿ 1 ಗಂಟೆಯ ಕಾಲ ನಿಯಂತ್ರಣವಾಗಲಿದೆ.
ರಾಜ್ಯ ರಾಜಕೀಯದಲ್ಲಿ ಮತ್ತೊಂದು ಬೆಳವಣಿಗೆ: ಇಂದೇ ಜಾತಿಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ಧರಾಮಯ್ಯ








