ನವದೆಹಲಿ: ದೇಶದ ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ (Cockroaches) ಹೋಲಿಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ (CJI) ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಚಳವಳಿಗೆ ದೊಡ್ಡ ಹಿನ್ನಡೆಯಾಗಿದೆ. ಭಾರತದಲ್ಲಿ ಈ ಡಿಜಿಟಲ್ ಪಾರ್ಟಿಯ ಅಧಿಕೃತ X (ಟ್ವಿಟರ್) ಖಾತೆಯನ್ನು (@CJP_2029) ಕಾನೂನು ಬೇಡಿಕೆಯ ಮೇರೆಗೆ ಅಮಾನತುಗೊಳಿಸಲಾಗಿದೆ (Withheld).
ಇನ್ಸ್ಟಾಗ್ರಾಮ್ನಲ್ಲಿ ಈ ಖಾತೆಯು ಆಡಳಿತಾರೂಢ ಬಿಜೆಪಿಯ ಅಧಿಕೃತ ಹ್ಯಾಂಡಲ್ಗಿಂತಲೂ ಹೆಚ್ಚಿನ ಫಾಲೋವರ್ಸ್ (11 ಮಿಲಿಯನ್ಗೂ ಹೆಚ್ಚು) ಗಳಿಸಿ ದಾಖಲೆ ಬರೆದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.
सभी कॉकरोच जनता पार्टी के साथियों को सुचित किया जाता है कि सरकार हमारे सबसे बड़े अकाउंट को बैन कर चुकी है !
वह इस अकाउंट को भी बैन कर सकती हैं कृपया नीचे दिए गए लिंक पर जाकर बैकअप अकाउंट को फॉलो करें।
उम्मीद हैं माननीय प्रधानमंत्री नरेन्द्र मोदी ने कहा था कि उन्हें आलोचना पसंद…
— Cockroach Janta Party (@shah34516) May 21, 2026
ಹಿನ್ನೆಲೆ ಏನು?
ಇತ್ತೀಚೆಗೆ ಸುಪ್ರೀಂ ಕೋರ್ಟ್ ವಿಚಾರಣೆಯೊಂದರ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು (CJI ಸೂರ್ಯ ಕಾಂತ್), “ಕೆಲವು ಯುವಕರು ಜಿರಳೆಗಳಂತೆ ಇದ್ದಾರೆ. ಅವರಿಗೆ ಯಾವುದೇ ಉದ್ಯೋಗ ಸಿಗದಿದ್ದಾಗ ಸಾಮಾಜಿಕ ಜಾಲತಾಣ, ಆರ್ಟಿಐ (RTI) ಕಾರ್ಯಕರ್ತರು ಅಥವಾ ಮಾಧ್ಯಮಗಳ ಹೆಸರಿನಲ್ಲಿ ಎಲ್ಲರ ಮೇಲೂ ದಾಳಿ ಮಾಡಲು ಪ್ರಾರಂಭಿಸುತ್ತಾರೆ” ಎಂದು ಹೇಳಿಕೆ ನೀಡಿದ್ದರು ಎನ್ನಲಾದ ವರದಿಗಳು ವೈರಲ್ ಆಗಿದ್ದವು. (ನಂತರ ಸಿಜೆಐ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ತಾವು ನಕಲಿ ಪದವಿ ಪಡೆದವರ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದರು).
ಆದರೆ, ಈ ಹೇಳಿಕೆಯಿಂದ ಆಕ್ರೋಶಗೊಂಡ ಯುವಕರು ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಅಭಿಜೀತ್ ದಿಪ್ಕೆ ಎಂಬುವವರು ಸೇರಿ ಮೇ 16 ರಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ವಿಡಂಬನಾತ್ಮಕ (Satirical) ಆನ್ಲೈನ್ ರಾಜಕೀಯ ಚಳವಳಿಯನ್ನು ಆರಂಭಿಸಿದ್ದರು.
ಇಂಟರ್ನೆಟ್ನಲ್ಲಿ ಸೃಷ್ಟಿಸಿದ್ದ ಬಿರುಗಾಳಿ
“ನಿರುದ್ಯೋಗಿ, ಸೋಮಾರಿ ಹಾಗೂ ಸದಾ ಆನ್ಲೈನ್ನಲ್ಲಿರುವ ಯುವಕರ ಧ್ವನಿ” ಎಂಬ ಟ್ಯಾಗ್ಲೈನ್ನೊಂದಿಗೆ ಆರಂಭವಾದ ಈ ಪಾರ್ಟಿ ಕೇವಲ 4 ದಿನಗಳಲ್ಲಿ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಕೇವಲ 48 ಗಂಟೆಗಳಲ್ಲಿ 40,000 ಕ್ಕೂ ಹೆಚ್ಚು ಯುವಕರು ಇದರ ಸದಸ್ಯರಾಗಿದ್ದರು. ಅಲ್ಲದೆ ಇನ್ಸ್ಟಾಗ್ರಾಮ್ನಲ್ಲಿ ಕೋಟಿಗೂ ಅಧಿಕ ಫಾಲೋವರ್ಸ್ ಪಡೆಯುವ ಮೂಲಕ ದೇಶದ ದೊಡ್ಡ ರಾಜಕೀಯ ಪಕ್ಷಗಳಿಗೂ ಡಿಜಿಟಲ್ ಪೈಪೋಟಿ ನೀಡಿತ್ತು.
ಸಂಸ್ಥಾಪಕರ ಪ್ರತಿಕ್ರಿಯೆ: ಎಕ್ಸ್ ಖಾತೆ ಬ್ಯಾನ್ ಆದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಂಸ್ಥಾಪಕ ಅಭಿಜೀತ್ ದಿಪ್ಕೆ, “ನಾವು ನಿರೀಕ್ಷಿಸಿದಂತೆಯೇ ಭಾರತದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಯನ್ನು ತಡೆಹಿಡಿಯಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಭಾರತ ಸರ್ಕಾರದ ಕಾನೂನು ಇಲಾಖೆಯ ಆದೇಶದ ಮೇರೆಗೆ ಈ ಖಾತೆಯನ್ನು ನಿರ್ಬಂಧಿಸಲಾಗಿದ್ದು, ಡಿಜಿಟಲ್ ಜಗತ್ತಿನಲ್ಲಿ ಸರ್ಕಾರದ ಈ ಕ್ರಮದ ವಿರುದ್ಧ ಪರ-ವಿರೋಧ ಚರ್ಚೆಗಳು ತೀವ್ರಗೊಂಡಿವೆ.








