Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ‘ಉಚಿತ ಚಿಕಿತ್ಸೆ’ ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ | Supreme Court

BIG NEWS : ದುಬಾರೆ ಬೆನ್ನಲ್ಲೆ, ಪನ್ಸೋಲಿ ಆನೆ ಬಿಡಾರಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ!

ರಾಜ್ಯದಲ್ಲಿ ಶಾಲಾ ಮೊದಲ ದಿನವನ್ನು ಸ್ಮರಣೀಯವಾಗಿಸಲು ಶಿಕ್ಷಣ ಇಲಾಖೆ ಸಿದ್ಧತೆ : ವಿಶೇಷ ಮಾರ್ಗಸೂಚಿ ಪ್ರಕಟ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಶಾಲಾ ಮೊದಲ ದಿನವನ್ನು ಸ್ಮರಣೀಯವಾಗಿಸಲು ಶಿಕ್ಷಣ ಇಲಾಖೆ ಸಿದ್ಧತೆ : ವಿಶೇಷ ಮಾರ್ಗಸೂಚಿ ಪ್ರಕಟ!
KARNATAKA

ರಾಜ್ಯದಲ್ಲಿ ಶಾಲಾ ಮೊದಲ ದಿನವನ್ನು ಸ್ಮರಣೀಯವಾಗಿಸಲು ಶಿಕ್ಷಣ ಇಲಾಖೆ ಸಿದ್ಧತೆ : ವಿಶೇಷ ಮಾರ್ಗಸೂಚಿ ಪ್ರಕಟ!

By kannadanewsnow57

ಶಾಲಾ ಪ್ರಾರಂಭೋತ್ಸವವನ್ನು ಕೇವಲ ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಳಿಸದೆ, ಮಕ್ಕಳಿಗೆ ಸದಾ ನೆನಪಿನಲ್ಲಿ ಉಳಿಯುವಂತೆ ಹಾಗೂ ಅವರು ಅತ್ಯಂತ ಸಂತೋಷದಿಂದ ಶಾಲೆಗೆ ಬರುವಂತೆ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಆಯುಕ್ತರ ಕಚೇರಿಯು ಕೆಲವು ವಿನೂತನ ಮತ್ತು ಆಕರ್ಷಕ ಸಲಹಾತ್ಮಕ ಚಟುವಟಿಕೆಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಬದಲಾಗುತ್ತಿರುವ ಶೈಕ್ಷಣಿಕ ವಾತಾವರಣಕ್ಕೆ ತಕ್ಕಂತೆ ಇಂದಿನ ಆಧುನಿಕ ದಿನಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ಐದು ಪ್ರಮುಖ ವಿಭಾಗಗಳ ಅಡಿಯಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲು ಶಾಲೆಗಳಿಗೆ ಸೂಚಿಸಲಾಗಿದೆ.

1. ವಿಶೇಷ ಪ್ರವೇಶ ಮತ್ತು ವಿಶಿಷ್ಟ ಸ್ವಾಗತ (Grand & Creative Welcome)
ಡಿಜಿಟಲ್ ಸೆಲ್ಫಿ ಬೂತ್: ಶಾಲೆಯ ಮುಖ್ಯ ದ್ವಾರದಲ್ಲಿ ಕೆಂಪು ಹಾಸು (Red Carpet) ಹಾಕಿ, ಕಾರ್ಟೂನ್ ಪಾತ್ರಗಳ ವೇಷ ಧರಿಸಿದ ಶಿಕ್ಷಕರಿಂದ ಮಕ್ಕಳನ್ನು ಸ್ವಾಗತಿಸುವುದು. ಜೊತೆಗೆ ‘ನನ್ನ ಮೊದಲ ದಿನ’ ಎಂಬ ಥೀಮ್ ಉಳ್ಳ ಸೆಲ್ಫಿ ಬೂತ್ ನಿರ್ಮಿಸಿ ಪೋಷಕರೊಂದಿಗೆ ಫೋಟೋ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವುದು.

ಹೂವಿನ ಮಳೆಯಿಂದ ಸ್ವಾಗತ: ಮಕ್ಕಳು ಗೇಟ್ ಒಳಗಡೆ ಬರುವಾಗ ಅವರ ಮೇಲೆ ಹೂವಿನ ದಳಗಳನ್ನು ಹಾಕುವುದು ಅಥವಾ ಕೈಗೆ ಸುಗಂಧಭರಿತ ರೋಸ್ವಾಟರ್ ಪ್ರೋಕ್ಷಣೆ ಮಾಡುವುದು.

‘ವಿದ್ಯಾ ಜ್ಯೋತಿ’ ನಡಿಗೆ (The Torch of Knowledge): ಒಲಿಂಪಿಕ್ಸ್ ಮಾದರಿಯಲ್ಲಿ, ಗ್ರಾಮದ ಅಥವಾ ವಾರ್ಡ್ನ ಪ್ರಮುಖ ವೃತ್ತದಿಂದ ಶಾಲೆಯವರೆಗೆ ಹಳೆಯ ವಿದ್ಯಾರ್ಥಿಗಳು, ಸಾಧಕರು ಮತ್ತು ಪ್ರಮುಖರು ಜ್ಞಾನದ ಸಂಕೇತವಾಗಿ ‘ಜ್ಯೋತಿ’ಯನ್ನು ಒಬ್ಬರಿಂದೊಬ್ಬರು ಕೈಬದಲಾಯಿಸುತ್ತಾ ಶಾಲೆಗೆ ತರುವುದು.

ಗ್ರಾಮಸ್ಥರಿಂದ ‘ಹರಕೆಯ ಹರಸುವಿಕೆ’ (The Blessing Arch): ಶಾಲೆಯ ಪ್ರವೇಶ ದ್ವಾರದಲ್ಲಿ ಊರಿನ ಹಿರಿಯರು, ನಿವೃತ್ತ ಶಿಕ್ಷಕರು ಅಥವಾ ಸಾಧಕರು ಸಾಲಾಗಿ ನಿಂತು, ಒಳಗೆ ಬರುವ ಪ್ರತಿಯೊಂದು ಮಗುವಿನ ತಲೆಯ ಮೇಲೂ ಅಕ್ಕಿ/ಹೂವು ಹಾಕಿ ಆಶೀರ್ವದಿಸಿ ಕಳುಹಿಸುವುದು.

2. ಪರಿಸರ ಸ್ನೇಹಿ ಆರಂಭ (Eco-Friendly Beginning)
ಹಸಿರು ಹೆಜ್ಜೆ (Green Welcome): ಶಾಲೆಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಸಣ್ಣ ಗಿಡದ ಸಸಿಯನ್ನು ನೀಡಿ ಸ್ವಾಗತಿಸುವುದು. ಆ ಸಸಿಯನ್ನು ಶಾಲಾ ಆವರಣದಲ್ಲೇ ನೆಟ್ಟು, ಅದಕ್ಕೆ ಆಯಾ ಮಗುವಿನ ಹೆಸರನ್ನೇ ಇಟ್ಟು, ವರ್ಷಪೂರ್ತಿ ಅದರ ಪೋಷಣೆ ಮಾಡುವ ಜವಾಬ್ದಾರಿ ನೀಡುವುದು.

ಬೀಜದ ಉಡುಗೊರೆ (Seed Balls): ಮಕ್ಕಳಿಗೆ ಸಿಹಿ ತಿಂಡಿಯ ಬದಲು ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ‘ಬೀಜದ ಉಂಡೆಗಳನ್ನು’ (Seed Balls) ಉಡುಗೊರೆಯಾಗಿ ನೀಡುವುದು.

3. ಆಕರ್ಷಕ ಕಾರ್ಯಚಟುವಟಿಕೆಗಳು (Engaging Activities)
‘ನನ್ನ ಕನಸಿನ ಗೋಡೆ’ (Wall of Dreams): ಶಾಲೆಯ ದೊಡ್ಡ ಬೋರ್ಡ್ ಅಥವಾ ಗೋಡೆಗೆ ಬಿಳಿ ಚಾರ್ಟ್ ಹಚ್ಚಿ, ಅದರಲ್ಲಿ ಮಕ್ಕಳು ಈ ಶೈಕ್ಷಣಿಕ ವರ್ಷದಲ್ಲಿ ತಾವು ಏನನ್ನು ಸಾಧಿಸಬೇಕೆಂದುಕೊಂಡಿದ್ದಾರೆ ಅಥವಾ ಅವರ ಕನಸೇನು ಎಂಬುದನ್ನು ಬರೆದು ಅಥವಾ ಚಿತ್ರ ಬಿಡಿಸಿ ಅಂಟಿಸಲು ಉತ್ತೇಜಿಸುವುದು.

ಸಮಯದ ಕ್ಯಾಪ್ಸುಲ್ (Time Capsule): ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ಈ ವರ್ಷ ಏನೇನು ಕಲಿಯಲು ಇಷ್ಟವಿದೆ ಎಂಬ ಪತ್ರವನ್ನು ಬರೆದು ಒಂದು ಡಬ್ಬದಲ್ಲಿ (Capsule) ಹಾಕಿಡುವುದು. ವರ್ಷದ ಕೊನೆಯ ದಿನ ಅದನ್ನು ತೆಗೆದು ಓದಿ, ಅವರ ಪ್ರಗತಿಯನ್ನು ಅವರೇ ಅವಲೋಕಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.

ನನ್ನ ಕನಸಿನ ರೆಕ್ಕೆಗಳು (Wings of my Dreams): ಶಾಲೆಯ ಮುಖ್ಯ ದ್ವಾರ ಅಥವಾ ಪ್ರಾರ್ಥನಾ ಮಂದಿರದ ಬಳಿ ದೊಡ್ಡದಾದ ರೆಕ್ಕೆಗಳ ಚಿತ್ರವಿರುವ ಫೋಟೋ ಶೂಟ್ ಮಾಡಿಸುವುದು.

ವಿಶೇಷ ಬ್ಯಾಡ್ಜ್ ಧರಿಸುವಿಕೆ (Badge of Honor): ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರ ತರಗತಿ ನಮೂದಿಸಿರುವ, ಶಾಲೆಯ ಲೋಗೋ ಇರುವ ಆಕರ್ಷಕ ‘ಸ್ಮಾರ್ಟ್ ಸ್ಟೂಡೆಂಟ್’ ಬ್ಯಾಡ್ಜ್ಗಳನ್ನು ಶಿಕ್ಷಕರೇ ಸ್ವತಃ ಶರ್ಟ್ಗೆ ಚುಚ್ಚಿ ಗೌರವಿಸುವುದು. ಇದು ಮಕ್ಕಳಲ್ಲಿ ಜವಾಬ್ದಾರಿಯ ಭಾವನೆ ಮೂಡಿಸುತ್ತದೆ.

4. ಮೋಜಿನ ಆಟಗಳು ಮತ್ತು ಕನೆಕ್ಟಿವಿಟಿ (Ice-Breaking Games)
ಶಿಕ್ಷಕರ ಪರಿಚಯ (ನಾಟಕದ ಮೂಲಕ): ಶಿಕ್ಷಕರು ಕೇವಲ ವೇದಿಕೆ ಮೇಲೆ ನಿಂತು ಹೆಸರು ಹೇಳುವ ಬದಲು, ಒಂದು ಸಣ್ಣ ಪ್ರಹಸನ (Skit) ಅಥವಾ ಮೈಮ್ (Mime) ಮೂಲಕ ತಮ್ಮನ್ನು ತಾವು ಪರಿಚಯಿಸಿಕೊಂಡರೆ ಮಕ್ಕಳಿಗೆ ಶಿಕ್ಷಕರ ಮೇಲಿರುವ ಭಯ ದೂರವಾಗಿ ಆಪ್ತತೆ ಬೆಳೆಯುತ್ತದೆ.

5. ಡಿಜಿಟಲ್ ಮತ್ತು ಸೃಜನಶೀಲ ಸ್ಪರ್ಶ (Digital & Creative Touch)
ಡಿಜಿಟಲ್ ಕೌಂಟ್ಡೌನ್ ವಿಡಿಯೋ: ಶಾಲೆ ಆರಂಭವಾಗುವ ಮುನ್ನವೇ ಶಿಕ್ಷಕರೆಲ್ಲರೂ ಸೇರಿ ಮಕ್ಕಳಿಗೆ “We Miss You, ಸುಸ್ವಾಗತ” ಎಂದು ಹೇಳುವ 1 ನಿಮಿಷದ ಸಣ್ಣ ವಿಡಿಯೋ ಮಾಡಿ ಪೋಷಕರ ವ್ಯಾಟ್ಸ್ಆಪ್ ಗ್ರೂಪ್ಗೆ ಕಳುಹಿಸುವುದು.

ಫ್ಲ್ಯಾಶ್ ಮಾಬ್ (Flash Mob): ಪ್ರಾರ್ಥನಾ ಸಭೆ (Assembly) ಮುಗಿಯುತ್ತಿದ್ದಂತೆ ಹಠಾತ್ತನೆ ಶಿಕ್ಷಕರೆಲ್ಲರೂ ಸೇರಿ ಮಕ್ಕಳಿಗಾಗಿ ಒಂದು ಉತ್ಸಾಹ ಭರಿತ ಹಾಡಿಗೆ ನೃತ್ಯ (Flash Mob) ಮಾಡಿದರೆ ಮಕ್ಕಳ ಖುಷಿ ದುಪ್ಪಟ್ಟಾಗುತ್ತದೆ.

ಪೋಷಕರಿಗೆ ‘ಕೃತಜ್ಞತಾ ಪತ್ರ’: ಮಕ್ಕಳನ್ನು ಶಾಲೆಗೆ ಬಿಡಲು ಬರುವ ಪೋಷಕರಿಗೆ ಶಾಲೆಯ ವತಿಯಿಂದ ಒಂದು ಸಣ್ಣ ಧನ್ಯವಾದಗಳ ಕಾರ್ಡ್ ನೀಡುವುದು (ಉದಾಹರಣೆಗೆ: “ನಿಮ್ಮ ನಂಬಿಕೆಗೆ ಧನ್ಯವಾದಗಳು, ಇಂದಿನಿಂದ ನಿಮ್ಮ ಮಗುವಿನ ಜವಾಬ್ದಾರಿ ನಮ್ಮದು”). ಇದು ಪೋಷಕರಲ್ಲಿ ಶಾಲೆಯ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ.

ವಿಶೇಷ ಸೂಚನೆ: ಶಾಲೆಯ ಮೊದಲ ದಿನ ಯಾವುದೇ ಕಠಿಣ ನಿಯಮಗಳನ್ನು ಹೇಳದೆ ಕೇವಲ ಪ್ರೀತಿ, ನಗು ಮತ್ತು ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ. ಶಾಲೆಗಳು ತಮ್ಮ ದೀರ್ಘಕಾಲೀನ ಪ್ರಗತಿಯ ಮಾದರಿಗೆ ತಕ್ಕಂತೆ ಈ ಮೇಲಿನ ಚಟುವಟಿಕೆಗಳಲ್ಲಿ ಸೂಕ್ತವಾದವುಗಳನ್ನು ಆಯ್ಕೆ ಮಾಡಿಕೊಂಡು, ಅದನ್ನು ಶಾಲೆಯ ಶಾಶ್ವತ ಬ್ರ್ಯಾಂಡಿಂಗ್ ಕಾರ್ಯಕ್ರಮವನ್ನಾಗಿ ರೂಪಿಸಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.

 

 

Share. Facebook Twitter LinkedIn WhatsApp Email

Related Posts

BIG NEWS : ದುಬಾರೆ ಬೆನ್ನಲ್ಲೆ, ಪನ್ಸೋಲಿ ಆನೆ ಬಿಡಾರಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ!

1 Min Read

ಅಧಿಕಾರದ ಸೊಕ್ಕು ಮತ್ತು ದುರಹಂಕಾರದ ಮಾತುಗಳು ನಿಮ್ಮ ಸ್ಥಾನಕ್ಕೆ ಕಿಂಚಿತ್ತು ಗೌರವ ತರುವುದಿಲ್ಲ : ಡಿಕೆಶಿ ವಿರುದ್ಧ ಜೆಡಿಎಸ್ ವಾಗ್ದಾಳಿ

1 Min Read

ಬೆಳಗಾವಿಯಲ್ಲಿ ಲಾರಿ, ಕಾರು ನಡುವೆ ಭೀಕರ ಅಪಘಾತ : ಓರ್ವ ಸಾವು, ಮೂವರಿಗೆ ಗಂಭೀರ ಗಾಯ!

1 Min Read
Recent News

BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ‘ಉಚಿತ ಚಿಕಿತ್ಸೆ’ ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ | Supreme Court

BIG NEWS : ದುಬಾರೆ ಬೆನ್ನಲ್ಲೆ, ಪನ್ಸೋಲಿ ಆನೆ ಬಿಡಾರಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ!

ರಾಜ್ಯದಲ್ಲಿ ಶಾಲಾ ಮೊದಲ ದಿನವನ್ನು ಸ್ಮರಣೀಯವಾಗಿಸಲು ಶಿಕ್ಷಣ ಇಲಾಖೆ ಸಿದ್ಧತೆ : ವಿಶೇಷ ಮಾರ್ಗಸೂಚಿ ಪ್ರಕಟ!

ಅಧಿಕಾರದ ಸೊಕ್ಕು ಮತ್ತು ದುರಹಂಕಾರದ ಮಾತುಗಳು ನಿಮ್ಮ ಸ್ಥಾನಕ್ಕೆ ಕಿಂಚಿತ್ತು ಗೌರವ ತರುವುದಿಲ್ಲ : ಡಿಕೆಶಿ ವಿರುದ್ಧ ಜೆಡಿಎಸ್ ವಾಗ್ದಾಳಿ

State News
KARNATAKA

BIG NEWS : ದುಬಾರೆ ಬೆನ್ನಲ್ಲೆ, ಪನ್ಸೋಲಿ ಆನೆ ಬಿಡಾರಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ!

By ಸುರೇಶ್‌ KARNATAKA 1 Min Read

ಉತ್ತರಕನ್ನಡ :ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ನಡೆದ ಆನೆಗಳ ಕಾದಾಟ ಮತ್ತು ಸಾವು-ನೋವಿನ ದುರ್ಘಟನೆಯ ಬೆನ್ನಲ್ಲೇ, ಅರಣ್ಯ ಇಲಾಖೆಯು…

ರಾಜ್ಯದಲ್ಲಿ ಶಾಲಾ ಮೊದಲ ದಿನವನ್ನು ಸ್ಮರಣೀಯವಾಗಿಸಲು ಶಿಕ್ಷಣ ಇಲಾಖೆ ಸಿದ್ಧತೆ : ವಿಶೇಷ ಮಾರ್ಗಸೂಚಿ ಪ್ರಕಟ!

ಅಧಿಕಾರದ ಸೊಕ್ಕು ಮತ್ತು ದುರಹಂಕಾರದ ಮಾತುಗಳು ನಿಮ್ಮ ಸ್ಥಾನಕ್ಕೆ ಕಿಂಚಿತ್ತು ಗೌರವ ತರುವುದಿಲ್ಲ : ಡಿಕೆಶಿ ವಿರುದ್ಧ ಜೆಡಿಎಸ್ ವಾಗ್ದಾಳಿ

ಬೆಳಗಾವಿಯಲ್ಲಿ ಲಾರಿ, ಕಾರು ನಡುವೆ ಭೀಕರ ಅಪಘಾತ : ಓರ್ವ ಸಾವು, ಮೂವರಿಗೆ ಗಂಭೀರ ಗಾಯ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.